ನಮ್ಮೂರ್ ಎಕ್ಸ್ ಪ್ರೆಸ್ ಕರ್ನಾಟಕದ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ತನ್ನ ಕ್ರಿಯಾಶೀಲತೆ ಮೂಲಕವೇ ಓದುಗರ ಮನ ಗೆದ್ದ ಮೀಡಿಯಾ ಸಂಸ್ಥೆ.

ರಾಜ್ಯದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವದ ಹಿನ್ನೆಲೆ ಸುದ್ದಿ ಮಾಧ್ಯಮದಿಂದ ಹೊರಬಂದು ಬಹು ದೊಡ್ಡ ಕನಸಿನೊಂದಿಗೆ ಸಮಾಜಿಕ ನ್ಯಾಯ ಕಟ್ಟುವ ಹೊಣೆಗಾರಿಕೆಯೊಂದಿಗೆ ಸದಾ ಸುದ್ದಿಯಲ್ಲಿ ವಿಭಿನ್ನತೆ ತೋರುವ ಸಂಸ್ಥೆ. ರಾಜ್ಯದ 31 ಜಿಲ್ಲೆಯಲ್ಲೂ ಸದ್ದಿಲ್ಲದೇ ಓದುಗರ ಅಭಿರುಚಿಗೆ ತಕ್ಕಂತೆ ಕ್ರಿಯಾತ್ಮಕವಾಗಿ ಸಮಾಜ ಕಟ್ಟುವ ಕೆಲಸ ಸಂಸ್ಥೆ ಮಾಡುತ್ತಿದೆ.

ಬ್ರೇಕಿಂಗ್ ಸುದ್ದಿ, ಅತೀ ರಂಜಿತ ಸುದ್ದಿ ಬಿಟ್ಟು ಜನರ ಸುದ್ದಿಯ ಜೊತೆಗಾರನಾಗಿ 8 ವರ್ಷ ಕಳೆದು ಇದೀಗ 9ನೇ ವರ್ಷಕ್ಕೆ ಸಂಸ್ಥೆ ಕಾಲಿಟ್ಟಿದೆ.
ಯಾವುದೇ ಮುಲಾಜು, ಇಲ್ಲದೆ ಸಮಾಜ ಕಟ್ಟುವ ಕಾಯಕದಲ್ಲಿ ನಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ.

ಓದುಗರ ಪ್ರೀತಿ, ವಿಶ್ವಾಸ, ಹಾರೈಕೆಯೊಂದಿಗೆ ಸಾವಿರಾರು ಪ್ರತಿಭೆಗಳಿಗೆ ನಾವು ವೇದಿಕೆಯಾಗಿದ್ದೇವೆ. ಕಷ್ಟ ಸುಖದಲ್ಲೂ ಜನರ ಜತೆ ಇದ್ದೇವೆ. ಇದೀಗ ಮತ್ತಷ್ಟು ಹೆಜ್ಜೆ ಇಟ್ಟಿದ್ದು ರಾಜ್ಯದ ಎಲ್ಲಾ ಪ್ರಾದೇಶಿಕ ವಲಯದಲ್ಲೂ ನಮ್ಮ ತಂಡ ಕೆಲಸ ಮಾಡುತ್ತಿದೆ.

ಧನ್ಯವಾದಗಳು