ತುಳುನಾಡಿನ ದೈವ ಸ್ವಾಮಿ ಕೊರಗಜ್ಜನ ಬಗ್ಗೆ ನಿಮಗೇನಾದರೂ ಗೊತ್ತೇ..? ಕೊರಗಜ್ಜ ಮತ್ತು ಕೊರಗಜ್ಜನ ದೇವಸ್ಥಾನವು ತುಳುನಾಡು ಪ್ರದೇಶದಲ್ಲಿ ಅತ್ಯಂತ ಪವಿತ್ರವಾದ ಮತ್ತು ಬೇಡಿಕೆಯಿರುವ ಸ್ಥಳಗಳಲ್ಲಿ ಒಂದಾಗಿದೆ. ನಾವು ದಕ್ಷಿಣದಿಂದ ಉತ್ತರದ ಕಡೆಗೆ ಗಮನಿಸುತ್ತಾ ಬಂದರೆ ಕೊರಗಜ್ಜನನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಮಂಗಳೂರು ಸೇರಿದಂತೆ ದಕ್ಷಿಣದ ಹಲವು ಭಾಗಗಳಲ್ಲಿ ಇವರನ್ನು ಕೊರಗಜ್ಜ ಎಂದೇ ಕರೆಯುತ್ತಾರೆ. ಒಂದು ಕಾಲದಲ್ಲಿ ಭೂಮಿಯ ಮೇಲೆ ಜೀವಂತ ಮಾನವನಾಗಿದ್ದ ಕೊರಗಜ್ಜನ ಬಗ್ಗೆ, ಆತನ ಮಹಿಮೆಯ ಬಗ್ಗೆ ನಿಮಗೇನಾದರೂ ಗೊತ್ತೇ..?
ತುಳುನಾಡಿನಾದ್ಯಂತ ಹೆಚ್ಚು ಪೂಜಿಸುವ ದೈವವೆಂದರೆ ಕೊರಗಜ್ಜ. ಕಳೆದುಹೋದ ಯಾವುದನ್ನಾದರೂ ಮರಳಿ ಪಡೆಯಲು, ಮಾಡಬೇಕಾದ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಥವಾ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳು ಮೊದಲ ಮತ್ತು ಅಗ್ರಗಣ್ಯವಾಗಿ, ಜನರು ಈ ದೈವವನ್ನು ನೆನಪಿಸಿಕೊಳ್ಳುತ್ತಾರೆ. ಕೊರಗ ತನಿಯು ಐತಿಹಾಸಿಕ ವ್ಯಕ್ತಿಯೇ ಹೊರತು ಪೌರಾಣಿಕ ಸೃಷ್ಟಿಯಲ್ಲ. ಭಾರತೀಯ ದ್ರಾವಿಡರು ತಮ್ಮ ಪೂರ್ವಜರನ್ನು ಆರಾಧಿಸುತ್ತಾರೆ, ಅವರು ತಮ್ಮ ಸಮುದಾಯಕ್ಕೆ ಹೆಚ್ಚಿನ ಒಳಿತಿಗಾಗಿ ಅಸಾಮಾನ್ಯ ಕೆಲಸಗಳನ್ನು ಮಾಡಿದ್ದಾರೆ. ಈ ಕಾರಣದಿಂದಾಗಿ ಅವರನ್ನು ಅವರ ನಂತರದ ವಂಶಸ್ಥರು ಗುರುತಿಸಿ ಪೂಜಿಸುತ್ತಿದ್ದರು.
ಕೊರಗಜ್ಜ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೊರಗ ತನಿಯ. ಇಲ್ಲಿ "ಕೊರಗ" ಎಂಬುದು ಸಮುದಾಯದ ಹೆಸರು ಮತ್ತು "ಅಜ್ಜ" ಎಂಬುದು ತುಳು ಭಾಷೆಯಲ್ಲಿ ಸಾಮಾನ್ಯವಾಗಿ ಹಳೆಯ ಪುರುಷ ನಾಗರಿಕರಿಗೆ ಬಳಸುವ ಪದವಾಗಿದೆ. ತನ್ನ ಮಧ್ಯವಯಸ್ಸಿನಲ್ಲಿ ದೈವತ್ವವನ್ನು ಪಡೆದುಕೊಂಡಿದ್ದರೂ. ಮತ್ತು ಅವನ ಮೇಲಿನ ಪ್ರೀತಿ ಮತ್ತು ವಾತ್ಸಲ್ಯದಿಂದಾಗಿ ಜನರು ಅವನನ್ನು "ಅಜ್ಜ" ಎಂದು ಕರೆಯಲು ಪ್ರಾರಂಭಿಸಿದರು.
ಕೊರಗ ತನಿಯ ದೈವವಾದ ಬಗ್ಗೆ ಸಾಕಷ್ಟು ನಂಬಿಕೆಗಳಿವೆ ಮತ್ತು ಈ ನಂಬಿಕೆಗಳು ಪ್ರದೇಶಕ್ಕೆ ತಕ್ಕಂತೆ ಒಂದಿಷ್ಟು ವ್ಯತ್ಯಾಸವನ್ನು ಪಡೆದುಕೊಂಡಿದೆ. ಕೆಲವು ಕಥೆಗಳ ಪ್ರಕಾರ, ಕೊರಗ ತನಿಯನು 30 ದಿನಗಳ ಶಿಶುವಿದ್ದಾಗ ತಾಯಿ ಮೈರೆಯನ್ನು ಕಳೆದುಕೊಳ್ಳುತ್ತಾನೆ. ಹಾಗೂ ತನ್ನ ತಂದೆಯನ್ನೂ ಬಾಲ್ಯದಲ್ಲೇ ಕಳೆದುಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಆತನನ್ನು ನೋಡಿಕೊಳ್ಳಲು ಯಾರು ಕೂಡ ಇರುವುದಿಲ್ಲ.
ಕೊರಗ ತನಿಯ ಒಂಟಿಯಾದಾಗ ಮೈರಕ್ಕ ಎಂಬಾಕೆ ಆತನನ್ನು ದತ್ತು ಪಡೆದು ತನ್ನ ಇಬ್ಬರು ಮಕ್ಕಳೊಂದಿಗೆ ಅವನನ್ನು ತನ್ನ ಸ್ವಂತ ಮಗನಂತೆ ನೋಡಿಕೊಳ್ಳುತ್ತಾಳೆ. ಕೊರಗ ತನಿಯ ಆಗಮನದಿಂದ ಕುಟುಂಬಕ್ಕೆ ಸಮೃದ್ಧಿ ಮತ್ತು ಕುಟುಂಬ ವ್ಯಾಪಾರವು ಅಭಿವೃದ್ಧಿ ಹೊಂದಿತು. ತನಿಯ ಕೂಡ ಕುಟುಂಬದ ಇತರೆ ಸದಸ್ಯರೊಂದಿಗೆ ಸೇರಿಕೊಂಡು ಮನೆಯ ಕೆಲಸವನ್ನು ಮಾಡಿ ಮುಗಿಸುತ್ತಿದ್ದನು, ಅಲ್ಲಿ ಅವರು ಬುಟ್ಟಿ ತಯಾರಿಕೆ ಮತ್ತು ಕೈಯಿಂದ ಮಾಡಿದ ಬಿದಿರಿನ ವಸ್ತುಗಳನ್ನು ಕಲಿತರು.
ಒಂದು ದಿನ ಗ್ರಾಮದಲ್ಲಿ ದೈವಗಳಿಗೆ ನೇಮವನ್ನು ಆಯೋಜಿಸಲಾಯಿತು ಮತ್ತು ಮೈರಕ್ಕ ಅವರ ಕುಟುಂಬವು ದೇವಸ್ಥಾನಕ್ಕೆ ತೆಂಗಿನಕಾಯಿ, ಬಾಳೆ ಗಿಡಗಳು, ತೆಂಗಿನ ಎಲೆಗಳು ಇತ್ಯಾದಿಗಳನ್ನು ನೀಡಬೇಕಾಗಿತ್ತು. ಈ ಎಲ್ಲಾ ಸಾಮಗ್ರಿಗಳನ್ನು ಸಾಗಿಸಲು ಕನಿಷ್ಠ ಏಳು ಮಂದಿ ಸಾಮರ್ಥ್ಯವುಳ್ಳ ಪುರುಷರು ಬೇಕಾಗಿದ್ದರು. ಆ ಸಮಯದಲ್ಲಿ ಯಾರೂ ಲಭ್ಯವಿಲ್ಲದ ಕಾರಣ, ಮೈರಕ್ಕ ಇದು ದೇವಾಲಯಕ್ಕೆ ಸಂಬಂಧಿಸಿದ ಪ್ರಮುಖ ಕೆಲಸವಾದ್ದರಿಂದ ತನಿಯನಿಗೆ ಇದನ್ನು ದೇವಸ್ಥಾನಕ್ಕೆ ಸಾಗಿಸುವಂತೆ ಮನವಿ ಮಾಡಿದರು. ಏಳು ಜನರಿಗೆ ನೀಡುವ ಅಹಾರವನ್ನು ತನಗೆ ನೀಡಬೇಕು ಆಗ ಮಾತ್ರ ನಾನು ಈ ಹೊರೆಯನ್ನು ಹೊತ್ತು ಹೋಗುತ್ತೇನೆಂಬ ಷರತ್ತಿನ ಮೇಲೆ ತನಿಯನು ಎಲ್ಲಾ ಸಾಮಾಗ್ರಿಗಳನ್ನು ದೇವಸ್ಥಾನಕ್ಕೆ ಒಬ್ಬನೇ ತಲುಪಿಸಲು ಮುಂದಾಗುತ್ತಾನೆ.
ತನಿಯ ನೇಮಕ್ಕಾಗಿ ದೇವಾಲಯದ ಸಾಮಗ್ರಿಗಳನ್ನು ಒಯ್ಯುತ್ತಿದ್ದರೂ, ಅವನ ಕೆಳಜಾತಿಯ ಕಾರಣದಿಂದ ಮುಖ್ಯ ದೇವಾಲಯದ ಪ್ರದೇಶಕ್ಕೆ ಪ್ರವೇಶವನ್ನು ನಿರಾಕರಿಸಲಾಯಿತು. ಇದರಿಂದ ಕೋಪಗೊಂಡ ತನಿಯನು ನಿಮ್ಮ ದೇವರಿಗೆ ನಾವು ನೀಡುವ ವಸ್ತುಗಳು ಬೇಕು ಆದರೆ ನಾವು ಬೇಡ. ಇದ್ಯಾವ ನ್ಯಾಯವೆಂದು ಪ್ರಶ್ನಿಸಲು ಪ್ರಾರಂಭಿಸುತ್ತಾನೆ. ಆದರೆ, ತನಿಯನ ಮಾತಿಗೆ ಯಾರೂ ಹೂಂ, ಹಾಂ ಅನ್ನದೇ ಅವನ ಮಾತನ್ನು ಅಲ್ಲಗಳೆಯುತ್ತಾರೆ. ತನ್ನ ಪ್ರಶ್ನೆಗೆ ಉತ್ತರ ಸಿಗದೇ ಮೌನವಾಗಿ ದೇವಸ್ಥಾನದ ಮೆಟ್ಟಿಲುಗಳ ಬಳಿ ನಿಂತ ತನಿಯ ಕಣ್ಣು ಅಲ್ಲೇ ಪಕ್ಕದಲ್ಲಿದ್ದ ಉಪ್ಪಿನಕಾಯಿ ಮಾಡಲು ಬಳಸುವ ಒಂದು ಹಣ್ಣಿನ ಮರದ ಮೇಲೆ ಬಿದ್ದಿತು.
ಮೈರಕ್ಕೆ ಈ ಹಿಂದೆ ಉಪ್ಪಿನಕಾಯಿ ಖಾಲಿಯಾಗಿದೆ ಎಂದು ಹೇಳಿದ ಮಾತನ್ನು ನೆನಪಿಸಿಕೊಂಡು ತನಿಯನು ಆ ಹಣ್ಣುಗಳನ್ನು ಕೊಯ್ಯಲು ಮುಂದಾಗುತ್ತಾನೆ. ಹಣ್ಣುಗಳು ಅವನಿಗೆ ಎಟುಕಾದ ಕಾರಣ ತನ್ನ ಒಂದು ಕಾಲನ್ನು ದೇವಸ್ಥಾನದ ಮೆಟ್ಟಿಲುಗಳ ಮೇಲೆ ಇಡುತ್ತಾನೆ. ಆಗಲೂ ಅವನಿಗೆ ಮರದ ಕೊಂಬೆಗಳು ಎಟಕುವುದಿಲ್ಲ. ಆದ್ದರಿಂದ ತನ್ನ ಮತ್ಯೊಂದು ಕಾಲನ್ನು ದೇವಾಲಯದ ಕಲಶದ ಮೇಲೆ ಇಡುತ್ತಾನೆ. ದೇವಾಲಯದೊಳಗಿದ್ದ ದೈವವು ಕೋಪದಿಂದ ಮಾಯವಾಯಿತು. ಅಂದಿನಿಂದ ತನಿಯ ದೈವತ್ವವನ್ನು ಪಡೆದನು ಎಂದು ಕೆಲವು ಕಥೆಗಳು ಹೇಳಿದರೆ, ಇನ್ನು ಕೆಲವು ಕಥೆಗಳ ಪ್ರಕಾರ, ದೇವಸ್ಥಾನದ ಮೆಟ್ಟಿಲುಗಳ ಮೇಲೆ ತನಿಯನು ಕಾಲಿಟ್ಟ ಕಾರಣ ಕೋಪಗೊಂಡ ಕೆಲವು ಗ್ರಾಮಸ್ಥರು ಕೊಂದಿರಬಹುದೆಂದು ಹೇಳಲಾಗುತ್ತದೆ. ಆದರೆ, ಇಂದಿಗೂ ಕೊರಗಜ್ಜ ಎಂದು ಕರೆಯಲ್ಪಡುವ ಕೊರಗ ತನಿಯನ ಮರಣದ ಕುರಿತು ಯಾವುದೇ ಸ್ಪಷ್ಟವಾದ ಮಾಹಿತಿಯಿಲ್ಲ.
ಕೊರಗಜ್ಜನಿಗೆ ಮದ್ಯ ನೈವೇದ್ಯ ಏಕೆ..? ಕೊರಗಜ್ಜ ಬೆಳೆದಿದ್ದು ಕಳ್ಳು ವ್ಯಾಪಾರ ಮಾಡುವ ಮೈರಕ್ಕನ ಕುಟುಂಬದಲ್ಲಿ. ಕಳ್ಳನ್ನು ಸೇವಿಸುವುದು ಆ ಕುಟುಂಬದ ಕಾರ್ಯಕ್ರಮದ ಭಾಗವಾಗಿತ್ತು ಮತ್ತು ಮೈರಕ್ಕ ಕಳ್ಳನ್ನು ತಯಾರಿಸುವಾಗ ಕೊರಗ ತನಿಯನಿಗೆ ಒಂದಿಷ್ಟು ಕುಡಿಯಲು ನೀಡುತ್ತಿದ್ದಳು ಈ ಕಾರಣದಿಂದ ತನಿಯನಿಗೆ ಮದ್ಯವನ್ನು ಅರ್ಪಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಕೊರಗ ತನಿಯನಿಗೆ ಸಾಂಪ್ರದಾಯಿಕ ಮದ್ಯವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತಿತ್ತು. ಆದರೆ, ಆಧುನಿಕ ಕಾಲದಲ್ಲಿ ಸಾಂಪ್ರದಾಯಿಕ ಮದ್ಯದ ಅನಾನುಕೂಲತೆಯಿಂದ ಪ್ಯಾಕ್ ಮಾಡಿದ ಮದ್ಯವನ್ನು, ಚಕ್ಕುಲಿಯನ್ನು, ಎಲೆ - ಅಡಿಕೆಯನ್ನು ಮತ್ತು ಬೀಡಿ ಪ್ಯಾಕೆಟ್ನ್ನು ಅರ್ಪಿಸಲಾಗುತ್ತದೆ.
ಕೊರಗಜ್ಜನ ದರ್ಶನ ಪಡೆಯುವುದಕ್ಕಾಗಿ ಇಂದಿಗೂ ಜನರು ದೂರದ ಊರುಗಳಿಂದ ಬರುತ್ತಾರೆ. ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೊರಗಜ್ಜನನ್ನು ಪ್ರಾರ್ಥಿಸಿ, ಹರಕೆಯನ್ನು ಕಟ್ಟಿಕೊಳ್ಳುವ ಸಂಪ್ರದಾಯವಿದೆ. ಕೊರಗಜ್ಜನ ಮಹಿಮೆ ಕೇವಲ ದಕ್ಷಿಣ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲೂ ಈತನನ್ನು ನಂಬುವವರಿದ್ದಾರೆ.
Mr.Manipal
Join me on minepi.com/sudhirmanipal
10 months ago | [YT] | 2
View 0 replies
Mr.Manipal
ಯಾರಿಗಾದರೂ ಅಗತ್ಯ ಇದ್ದಲ್ಲಿ ಸಂಪರ್ಕಿಸಬಹುದು…ಇಲ್ಲದಿದ್ದಲ್ಲಿ ನಿರ್ಲಕ್ಷಿಸಬಹುದು…
1 year ago | [YT] | 1
View 0 replies
Mr.Manipal
Mera Bharath Mahan ❤️
1 year ago | [YT] | 5
View 0 replies
Mr.Manipal
Tulu Kannada Rap song !
1 year ago | [YT] | 0
View 0 replies
Mr.Manipal
ತುಳುನಾಡಿನ ದೈವ ಸ್ವಾಮಿ ಕೊರಗಜ್ಜನ ಬಗ್ಗೆ ನಿಮಗೇನಾದರೂ ಗೊತ್ತೇ..?
ಕೊರಗಜ್ಜ ಮತ್ತು ಕೊರಗಜ್ಜನ ದೇವಸ್ಥಾನವು ತುಳುನಾಡು ಪ್ರದೇಶದಲ್ಲಿ ಅತ್ಯಂತ ಪವಿತ್ರವಾದ ಮತ್ತು ಬೇಡಿಕೆಯಿರುವ ಸ್ಥಳಗಳಲ್ಲಿ ಒಂದಾಗಿದೆ. ನಾವು ದಕ್ಷಿಣದಿಂದ ಉತ್ತರದ ಕಡೆಗೆ ಗಮನಿಸುತ್ತಾ ಬಂದರೆ ಕೊರಗಜ್ಜನನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಮಂಗಳೂರು ಸೇರಿದಂತೆ ದಕ್ಷಿಣದ ಹಲವು ಭಾಗಗಳಲ್ಲಿ ಇವರನ್ನು ಕೊರಗಜ್ಜ ಎಂದೇ ಕರೆಯುತ್ತಾರೆ. ಒಂದು ಕಾಲದಲ್ಲಿ ಭೂಮಿಯ ಮೇಲೆ ಜೀವಂತ ಮಾನವನಾಗಿದ್ದ ಕೊರಗಜ್ಜನ ಬಗ್ಗೆ, ಆತನ ಮಹಿಮೆಯ ಬಗ್ಗೆ ನಿಮಗೇನಾದರೂ ಗೊತ್ತೇ..?
ತುಳುನಾಡಿನಾದ್ಯಂತ ಹೆಚ್ಚು ಪೂಜಿಸುವ ದೈವವೆಂದರೆ ಕೊರಗಜ್ಜ. ಕಳೆದುಹೋದ ಯಾವುದನ್ನಾದರೂ ಮರಳಿ ಪಡೆಯಲು, ಮಾಡಬೇಕಾದ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಥವಾ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳು ಮೊದಲ ಮತ್ತು ಅಗ್ರಗಣ್ಯವಾಗಿ, ಜನರು ಈ ದೈವವನ್ನು ನೆನಪಿಸಿಕೊಳ್ಳುತ್ತಾರೆ. ಕೊರಗ ತನಿಯು ಐತಿಹಾಸಿಕ ವ್ಯಕ್ತಿಯೇ ಹೊರತು ಪೌರಾಣಿಕ ಸೃಷ್ಟಿಯಲ್ಲ. ಭಾರತೀಯ ದ್ರಾವಿಡರು ತಮ್ಮ ಪೂರ್ವಜರನ್ನು ಆರಾಧಿಸುತ್ತಾರೆ, ಅವರು ತಮ್ಮ ಸಮುದಾಯಕ್ಕೆ ಹೆಚ್ಚಿನ ಒಳಿತಿಗಾಗಿ ಅಸಾಮಾನ್ಯ ಕೆಲಸಗಳನ್ನು ಮಾಡಿದ್ದಾರೆ. ಈ ಕಾರಣದಿಂದಾಗಿ ಅವರನ್ನು ಅವರ ನಂತರದ ವಂಶಸ್ಥರು ಗುರುತಿಸಿ ಪೂಜಿಸುತ್ತಿದ್ದರು.
ಕೊರಗಜ್ಜ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೊರಗ ತನಿಯ. ಇಲ್ಲಿ "ಕೊರಗ" ಎಂಬುದು ಸಮುದಾಯದ ಹೆಸರು ಮತ್ತು "ಅಜ್ಜ" ಎಂಬುದು ತುಳು ಭಾಷೆಯಲ್ಲಿ ಸಾಮಾನ್ಯವಾಗಿ ಹಳೆಯ ಪುರುಷ ನಾಗರಿಕರಿಗೆ ಬಳಸುವ ಪದವಾಗಿದೆ. ತನ್ನ ಮಧ್ಯವಯಸ್ಸಿನಲ್ಲಿ ದೈವತ್ವವನ್ನು ಪಡೆದುಕೊಂಡಿದ್ದರೂ. ಮತ್ತು ಅವನ ಮೇಲಿನ ಪ್ರೀತಿ ಮತ್ತು ವಾತ್ಸಲ್ಯದಿಂದಾಗಿ ಜನರು ಅವನನ್ನು "ಅಜ್ಜ" ಎಂದು ಕರೆಯಲು ಪ್ರಾರಂಭಿಸಿದರು.
ಕೊರಗ ತನಿಯ ದೈವವಾದ ಬಗ್ಗೆ ಸಾಕಷ್ಟು ನಂಬಿಕೆಗಳಿವೆ ಮತ್ತು ಈ ನಂಬಿಕೆಗಳು ಪ್ರದೇಶಕ್ಕೆ ತಕ್ಕಂತೆ ಒಂದಿಷ್ಟು ವ್ಯತ್ಯಾಸವನ್ನು ಪಡೆದುಕೊಂಡಿದೆ. ಕೆಲವು ಕಥೆಗಳ ಪ್ರಕಾರ, ಕೊರಗ ತನಿಯನು 30 ದಿನಗಳ ಶಿಶುವಿದ್ದಾಗ ತಾಯಿ ಮೈರೆಯನ್ನು ಕಳೆದುಕೊಳ್ಳುತ್ತಾನೆ. ಹಾಗೂ ತನ್ನ ತಂದೆಯನ್ನೂ ಬಾಲ್ಯದಲ್ಲೇ ಕಳೆದುಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಆತನನ್ನು ನೋಡಿಕೊಳ್ಳಲು ಯಾರು ಕೂಡ ಇರುವುದಿಲ್ಲ.
ಕೊರಗ ತನಿಯ ಒಂಟಿಯಾದಾಗ ಮೈರಕ್ಕ ಎಂಬಾಕೆ ಆತನನ್ನು ದತ್ತು ಪಡೆದು ತನ್ನ ಇಬ್ಬರು ಮಕ್ಕಳೊಂದಿಗೆ ಅವನನ್ನು ತನ್ನ ಸ್ವಂತ ಮಗನಂತೆ ನೋಡಿಕೊಳ್ಳುತ್ತಾಳೆ. ಕೊರಗ ತನಿಯ ಆಗಮನದಿಂದ ಕುಟುಂಬಕ್ಕೆ ಸಮೃದ್ಧಿ ಮತ್ತು ಕುಟುಂಬ ವ್ಯಾಪಾರವು ಅಭಿವೃದ್ಧಿ ಹೊಂದಿತು. ತನಿಯ ಕೂಡ ಕುಟುಂಬದ ಇತರೆ ಸದಸ್ಯರೊಂದಿಗೆ ಸೇರಿಕೊಂಡು ಮನೆಯ ಕೆಲಸವನ್ನು ಮಾಡಿ ಮುಗಿಸುತ್ತಿದ್ದನು, ಅಲ್ಲಿ ಅವರು ಬುಟ್ಟಿ ತಯಾರಿಕೆ ಮತ್ತು ಕೈಯಿಂದ ಮಾಡಿದ ಬಿದಿರಿನ ವಸ್ತುಗಳನ್ನು ಕಲಿತರು.
ಒಂದು ದಿನ ಗ್ರಾಮದಲ್ಲಿ ದೈವಗಳಿಗೆ ನೇಮವನ್ನು ಆಯೋಜಿಸಲಾಯಿತು ಮತ್ತು ಮೈರಕ್ಕ ಅವರ ಕುಟುಂಬವು ದೇವಸ್ಥಾನಕ್ಕೆ ತೆಂಗಿನಕಾಯಿ, ಬಾಳೆ ಗಿಡಗಳು, ತೆಂಗಿನ ಎಲೆಗಳು ಇತ್ಯಾದಿಗಳನ್ನು ನೀಡಬೇಕಾಗಿತ್ತು. ಈ ಎಲ್ಲಾ ಸಾಮಗ್ರಿಗಳನ್ನು ಸಾಗಿಸಲು ಕನಿಷ್ಠ ಏಳು ಮಂದಿ ಸಾಮರ್ಥ್ಯವುಳ್ಳ ಪುರುಷರು ಬೇಕಾಗಿದ್ದರು. ಆ ಸಮಯದಲ್ಲಿ ಯಾರೂ ಲಭ್ಯವಿಲ್ಲದ ಕಾರಣ, ಮೈರಕ್ಕ ಇದು ದೇವಾಲಯಕ್ಕೆ ಸಂಬಂಧಿಸಿದ ಪ್ರಮುಖ ಕೆಲಸವಾದ್ದರಿಂದ ತನಿಯನಿಗೆ ಇದನ್ನು ದೇವಸ್ಥಾನಕ್ಕೆ ಸಾಗಿಸುವಂತೆ ಮನವಿ ಮಾಡಿದರು. ಏಳು ಜನರಿಗೆ ನೀಡುವ ಅಹಾರವನ್ನು ತನಗೆ ನೀಡಬೇಕು ಆಗ ಮಾತ್ರ ನಾನು ಈ ಹೊರೆಯನ್ನು ಹೊತ್ತು ಹೋಗುತ್ತೇನೆಂಬ ಷರತ್ತಿನ ಮೇಲೆ ತನಿಯನು ಎಲ್ಲಾ ಸಾಮಾಗ್ರಿಗಳನ್ನು ದೇವಸ್ಥಾನಕ್ಕೆ ಒಬ್ಬನೇ ತಲುಪಿಸಲು ಮುಂದಾಗುತ್ತಾನೆ.
ತನಿಯ ನೇಮಕ್ಕಾಗಿ ದೇವಾಲಯದ ಸಾಮಗ್ರಿಗಳನ್ನು ಒಯ್ಯುತ್ತಿದ್ದರೂ, ಅವನ ಕೆಳಜಾತಿಯ ಕಾರಣದಿಂದ ಮುಖ್ಯ ದೇವಾಲಯದ ಪ್ರದೇಶಕ್ಕೆ ಪ್ರವೇಶವನ್ನು ನಿರಾಕರಿಸಲಾಯಿತು. ಇದರಿಂದ ಕೋಪಗೊಂಡ ತನಿಯನು ನಿಮ್ಮ ದೇವರಿಗೆ ನಾವು ನೀಡುವ ವಸ್ತುಗಳು ಬೇಕು ಆದರೆ ನಾವು ಬೇಡ. ಇದ್ಯಾವ ನ್ಯಾಯವೆಂದು ಪ್ರಶ್ನಿಸಲು ಪ್ರಾರಂಭಿಸುತ್ತಾನೆ. ಆದರೆ, ತನಿಯನ ಮಾತಿಗೆ ಯಾರೂ ಹೂಂ, ಹಾಂ ಅನ್ನದೇ ಅವನ ಮಾತನ್ನು ಅಲ್ಲಗಳೆಯುತ್ತಾರೆ. ತನ್ನ ಪ್ರಶ್ನೆಗೆ ಉತ್ತರ ಸಿಗದೇ ಮೌನವಾಗಿ ದೇವಸ್ಥಾನದ ಮೆಟ್ಟಿಲುಗಳ ಬಳಿ ನಿಂತ ತನಿಯ ಕಣ್ಣು ಅಲ್ಲೇ ಪಕ್ಕದಲ್ಲಿದ್ದ ಉಪ್ಪಿನಕಾಯಿ ಮಾಡಲು ಬಳಸುವ ಒಂದು ಹಣ್ಣಿನ ಮರದ ಮೇಲೆ ಬಿದ್ದಿತು.
ಮೈರಕ್ಕೆ ಈ ಹಿಂದೆ ಉಪ್ಪಿನಕಾಯಿ ಖಾಲಿಯಾಗಿದೆ ಎಂದು ಹೇಳಿದ ಮಾತನ್ನು ನೆನಪಿಸಿಕೊಂಡು ತನಿಯನು ಆ ಹಣ್ಣುಗಳನ್ನು ಕೊಯ್ಯಲು ಮುಂದಾಗುತ್ತಾನೆ. ಹಣ್ಣುಗಳು ಅವನಿಗೆ ಎಟುಕಾದ ಕಾರಣ ತನ್ನ ಒಂದು ಕಾಲನ್ನು ದೇವಸ್ಥಾನದ ಮೆಟ್ಟಿಲುಗಳ ಮೇಲೆ ಇಡುತ್ತಾನೆ. ಆಗಲೂ ಅವನಿಗೆ ಮರದ ಕೊಂಬೆಗಳು ಎಟಕುವುದಿಲ್ಲ. ಆದ್ದರಿಂದ ತನ್ನ ಮತ್ಯೊಂದು ಕಾಲನ್ನು ದೇವಾಲಯದ ಕಲಶದ ಮೇಲೆ ಇಡುತ್ತಾನೆ. ದೇವಾಲಯದೊಳಗಿದ್ದ ದೈವವು ಕೋಪದಿಂದ ಮಾಯವಾಯಿತು. ಅಂದಿನಿಂದ ತನಿಯ ದೈವತ್ವವನ್ನು ಪಡೆದನು ಎಂದು ಕೆಲವು ಕಥೆಗಳು ಹೇಳಿದರೆ, ಇನ್ನು ಕೆಲವು ಕಥೆಗಳ ಪ್ರಕಾರ, ದೇವಸ್ಥಾನದ ಮೆಟ್ಟಿಲುಗಳ ಮೇಲೆ ತನಿಯನು ಕಾಲಿಟ್ಟ ಕಾರಣ ಕೋಪಗೊಂಡ ಕೆಲವು ಗ್ರಾಮಸ್ಥರು ಕೊಂದಿರಬಹುದೆಂದು ಹೇಳಲಾಗುತ್ತದೆ. ಆದರೆ, ಇಂದಿಗೂ ಕೊರಗಜ್ಜ ಎಂದು ಕರೆಯಲ್ಪಡುವ ಕೊರಗ ತನಿಯನ ಮರಣದ ಕುರಿತು ಯಾವುದೇ ಸ್ಪಷ್ಟವಾದ ಮಾಹಿತಿಯಿಲ್ಲ.
ಕೊರಗಜ್ಜನಿಗೆ ಮದ್ಯ ನೈವೇದ್ಯ ಏಕೆ..?
ಕೊರಗಜ್ಜ ಬೆಳೆದಿದ್ದು ಕಳ್ಳು ವ್ಯಾಪಾರ ಮಾಡುವ ಮೈರಕ್ಕನ ಕುಟುಂಬದಲ್ಲಿ. ಕಳ್ಳನ್ನು ಸೇವಿಸುವುದು ಆ ಕುಟುಂಬದ ಕಾರ್ಯಕ್ರಮದ ಭಾಗವಾಗಿತ್ತು ಮತ್ತು ಮೈರಕ್ಕ ಕಳ್ಳನ್ನು ತಯಾರಿಸುವಾಗ ಕೊರಗ ತನಿಯನಿಗೆ ಒಂದಿಷ್ಟು ಕುಡಿಯಲು ನೀಡುತ್ತಿದ್ದಳು ಈ ಕಾರಣದಿಂದ ತನಿಯನಿಗೆ ಮದ್ಯವನ್ನು ಅರ್ಪಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಕೊರಗ ತನಿಯನಿಗೆ ಸಾಂಪ್ರದಾಯಿಕ ಮದ್ಯವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತಿತ್ತು. ಆದರೆ, ಆಧುನಿಕ ಕಾಲದಲ್ಲಿ ಸಾಂಪ್ರದಾಯಿಕ ಮದ್ಯದ ಅನಾನುಕೂಲತೆಯಿಂದ ಪ್ಯಾಕ್ ಮಾಡಿದ ಮದ್ಯವನ್ನು, ಚಕ್ಕುಲಿಯನ್ನು, ಎಲೆ - ಅಡಿಕೆಯನ್ನು ಮತ್ತು ಬೀಡಿ ಪ್ಯಾಕೆಟ್ನ್ನು ಅರ್ಪಿಸಲಾಗುತ್ತದೆ.
ಕೊರಗಜ್ಜನ ದರ್ಶನ ಪಡೆಯುವುದಕ್ಕಾಗಿ ಇಂದಿಗೂ ಜನರು ದೂರದ ಊರುಗಳಿಂದ ಬರುತ್ತಾರೆ. ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೊರಗಜ್ಜನನ್ನು ಪ್ರಾರ್ಥಿಸಿ, ಹರಕೆಯನ್ನು ಕಟ್ಟಿಕೊಳ್ಳುವ ಸಂಪ್ರದಾಯವಿದೆ. ಕೊರಗಜ್ಜನ ಮಹಿಮೆ ಕೇವಲ ದಕ್ಷಿಣ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲೂ ಈತನನ್ನು ನಂಬುವವರಿದ್ದಾರೆ.
ಮಾಹಿತಿ : vijaykarnataka.com/religion/hinduism/know-the-mira…
1 year ago | [YT] | 40
View 2 replies
Mr.Manipal
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ರಲ್ಲಿ ಯಾವ ಪಕ್ಷಕ್ಕೆ ಬಹುಮತ ?
2 years ago | [YT] | 8
View 0 replies
Mr.Manipal
ಬದಲಾವಣೆ ಜಗದ ನಿಯಮ ❤
3 years ago | [YT] | 6
View 0 replies
Mr.Manipal
Pls subscribe and support
youtube.com/c/MrUdupi1
youtube.com/c/KarmbukallFilms
3 years ago (edited) | [YT] | 1
View 0 replies
Mr.Manipal
Thank you for your love and support 😍❤❤❤❤
youtube.com/MrManipal
Happy happy and happy thank you so much everyone.....
Mr. Manipal
3 years ago | [YT] | 3
View 2 replies
Mr.Manipal
incha malpade
3 years ago | [YT] | 1
View 0 replies
Load more