ನಮಸ್ಕಾರ! Sangamesh The Explorer ಚಾನೆಲ್ಗೆ ಸ್ವಾಗತ.
ಹಿಂದೆ 'Historical Science Studios' ಹೆಸರಿನಿಂದ ಗುರುತಿಸಿಕೊಂಡಿದ್ದ ಈ ಚಾನೆಲ್, ಈಗ ಹೊಸ ರೂಪ ಮತ್ತು ಅದ್ಭುತ ವಿಷಯಗಳೊಂದಿಗೆ ನಿಮ್ಮ ಮುಂದಿದೆ. ಭೂಮಿಯ ಉಗಮದಿಂದ ಹಿಡಿದು, ವಿಜಯನಗರ ಸಾಮ್ರಾಜ್ಯದಂತಹ ಭವ್ಯ ಇತಿಹಾಸವುಳ್ಳ ಸಾಮ್ರಾಜ್ಯಗಳು, ಅನಂತ ಬಾಹ್ಯಾಕಾಶದ ವಿಸ್ಮಯಗಳವರೆಗೆ ಎಲ್ಲವನ್ನೂ ನಾವಿಲ್ಲಿ ಅನ್ವೇಷಿಸೋಣ.
ಈ ಚಾನೆಲ್ನಲ್ಲಿ ನೀವು ಏನೆಲ್ಲಾ ನಿರೀಕ್ಷಿಸಬಹುದು?
📜 ಮರೆಯಾದ ಇತಿಹಾಸ ಮತ್ತು ಪ್ರಾಚೀನ ಸಾಮ್ರಾಜ್ಯಗಳು
🌌 ಬಾಹ್ಯಾಕಾಶ ಮತ್ತು ಅದರ ವಿಸ್ಮಯಗಳು
🛸 ಅನ್ಯಗ್ರಹ ಜೀವಿಗಳ (Aliens) ರಹಸ್ಯ
🦕 ಡೈನೋಸಾರ್ಗಳ ರೋಚಕ ಪ್ರಪಂಚ
ಸುಧಾರಿತ AI ತಂತ್ರಜ್ಞಾನ ಮತ್ತು ಅದ್ಭುತ ದೃಶ್ಯಗಳ ಮೂಲಕ ಈ ಎಲ್ಲ ವಿಷಯಗಳನ್ನು ನಿಮ್ಮ ಮುಂದೆ ತರುವ ಪ್ರಯತ್ನ ನನ್ನದು. ಬನ್ನಿ, ಒಟ್ಟಾಗಿ Uncharted ಪ್ರಪಂಚವನ್ನು explore ಮಾಡೋಣ!
ಹೊಸ ವಿಡಿಯೋಗಳಿಗಾಗಿ ಈಗಲೇ Subscribe ಮಾಡಿ. 🗺️🧭
Sangamesh The Explorer
ಈ ಐದು ತಿಂಗಳುಗಳು ನನ್ನ ಜೀವನದ ಅತ್ಯಂತ ಅಮೂಲ್ಯವಾದ ಸಮಯವೆಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಈ ಐದು ತಿಂಗಳಿನ ಸತತ ಪರಿಶ್ರಮದಿಂದ ವಿಜಯನಗರ ಸಾಮ್ರಾಜ್ಯದ ಸಂಪೂರ್ಣ ಸೀರೀಸ್ ನಿಮಗಾಗಿ ನಿರ್ಮಿಸಿದ್ದೇನೆ. ಅದೆಷ್ಟೋ ದಿನಗಳ ಕಾಲ ನಿದ್ದೆ ಗೆಟ್ಟು ವಿಜಯನಗರದ ಸಂಪೂರ್ಣ ಸಿರೀಸ್ ನಿಮಗಾಗಿ ಮತ್ತು ನನಗಾಗಿ ತಯಾರಿಸಿದ್ದೇನೆ. ಏಕೆಂದರೆ ವಿಜಯನಗರ ಸಾಮ್ರಾಜ್ಯ ನನಗೆ ಅಷ್ಟೊಂದು ಪ್ರಭಾವ ಬೀರಿದೆ. ಸಾಮ್ರಾಜ್ಯದ ಕಥೆ ಬಹಳ ದೊಡ್ಡದು. ಅದನ್ನು ಕೇವಲ ಒಂದೇ ಭಾಗದಲ್ಲಿ ತೋರಿಸಲು ಅಸಾಧ್ಯ. ಮೂರು ಭಾಗಗಳು ಈಗ ಬಿಡುಗಡೆ ಯಾಗಿವೆ ಇನ್ನೂ ಯಾರು ವಿಡಿಯೋ ನೋಡಿಲ್ಲವೋ ದಯವಿಟ್ಟು ನೋಡಿ. ಏನಾದರು ಸಣ್ಣಪುಟ್ಟ ತಪ್ಪುಗಳಾಗಿದ್ದಾರೆ ಕ್ಷಮೆ ಇರಲಿ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಕೆಲ ಗ್ರಂಥಗಳಿಂದ, ಪುಸ್ತಕಗಳಿಂದ, ಇತಿಹಾಸಕಾರರಿಂದ ಹಾಗೂ ಅಂತರ್ಜಾಲದ ಮಾಹಿತಿಗಳನ್ನು ಒಟ್ಟು ಗೂಡಿಸಿ ನಿರ್ಮಿಸಿದ್ದೇನೆ. ಈಗ ಮುಂದೆ ಯಾವ ಸಾಮ್ರಾಜ್ಯದ ವಿಡಿಯೋ ಮಾಡಬೇಕು ಅಥವಾ ಯಾವ ಐತಿಹಾಸಿಕ ಸ್ಥಳದ ವಿಡಿಯೋ ಮಾಡಬೇಕು ಎಂದು ನೀವು ನನಗೆ ತಿಳಿಸಬೇಕು. ಅಥವಾ ಕೆಲಕಾಲ ಇತಿಹಾಸ ಅಮಲಿನಿಂದ ಹೊರ ಬಂದು ವಿಸ್ಮಯಕಾರಿ ವಿಜ್ಞಾನದ, ಬಾಹ್ಯಾಕಾಶ, ಟೈಮ್ ಟ್ರಾವೆಲ್ ಹೀಗೆ ರೋಮಾಂಚನಕಾರಿ ವಿಷಯಗಳ ಬಗ್ಗೆ ವಿಡಿಯೋ ಬೇಕಿದ್ದರೆ ಕಾಮೆಂಟ್ ಮಾಡಿ. ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ. ಮತ್ತೆ ಮುಂದಿನ ವಿಡಿಯೋದಲ್ಲಿ ಭೇಟಿಯಾಗೋಣ, ಧನ್ಯವಾದಗಳು 🙏💐
1 week ago | [YT] | 4
View 0 replies
Sangamesh The Explorer
ಕ್ರಿ.ಶ. ೧೫೬೫ರ ಜನವರಿ ೨೩ರಂದು ನಡೆದ 'ರಕ್ಕಸತಂಗಡಿ ಕದನ' (ತಾಳಿಕೋಟೆ ಯುದ್ಧ) ದಕ್ಷಿಣ ಭಾರತದ ಇತಿಹಾಸದ ದಿಕ್ಕನ್ನೇ ಬದಲಿಸಿದ ಅತ್ಯಂತ ಭೀಕರ ಮಹಾಯುದ್ಧ. ವಿಜಯನಗರ ಸಾಮ್ರಾಜ್ಯದ ಅಪಾರ ಶಕ್ತಿ ಮತ್ತು ಪ್ರಭಾವವನ್ನು ಹತ್ತಿಕ್ಕುವ ಏಕೈಕ ಉದ್ದೇಶದಿಂದ, ದಖನ್ (Deccan) ಪ್ರಾಂತ್ಯದ ಸುಲ್ತಾನರಾದ ಬಿಜಾಪುರದ 'ಆದಿಲ್ ಶಾಹಿ', ಅಹಮದ್ನಗರದ 'ನಿಜಾಮ್ ಶಾಹಿ', ಗೋಲ್ಕೊಂಡದ 'ಕುತುಬ್ ಶಾಹಿ' ಹಾಗೂ ಬೀದರ್ನ 'ಬರೀದ್ ಶಾಹಿ'ಗಳು ತಮ್ಮ ದಶಕಗಳ ಹಗೆತನವನ್ನು ಮರೆತು ಒಂದಾದರು. ಪರಸ್ಪರ ವೈವಾಹಿಕ ಸಂಬಂಧಗಳನ್ನು ಬೆಳೆಸುವ ಮೂಲಕ ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಿ, ವಿಜಯನಗರದ ವಿರುದ್ಧ ಬಲಿಷ್ಠ 'ಮಹಾಮೈತ್ರಿಕೂಟ'ವನ್ನು ರಚಿಸಿದರು. ಕೃಷ್ಣಾ ನದಿಯ ದಡದಲ್ಲಿರುವ ರಕ್ಕಸಗಿ ಮತ್ತು ತಂಗಡಗಿ ಎಂಬ ಎರಡು ಹಳ್ಳಿಗಳ ನಡುವಿನ ಬಯಲಿನಲ್ಲಿ ನಡೆದ ಈ ಐತಿಹಾಸಿಕ ಕಾಳಗವು ಕೇವಲ ಎರಡು ಸೈನ್ಯಗಳ ನಡುವಿನ ಸಂಘರ್ಷವಾಗಿರದೆ, ಒಂದು ಅತ್ಯುನ್ನತ ನಾಗರಿಕತೆ ಮತ್ತು ಸಂಸ್ಕೃತಿಯ ಅಳಿವು-ಉಳಿವಿನ ನಿರ್ಣಾಯಕ ಹೋರಾಟವಾಗಿತ್ತು.
ಎಂಭತ್ತರ ಇಳಿ ವಯಸ್ಸಿನಲ್ಲೂ ವಿಜಯನಗರದ ಬೃಹತ್ ಸೇನೆಯನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ ಅಳಿಯ ರಾಮರಾಯರ ಸಾಹಸ ಅಸಾಧಾರಣವಾದದ್ದು. ರಾಬರ್ಟ್ ಸೆವೆಲ್ ಅವರ 'A Forgotten Empire' ಕೃತಿಯ ಐತಿಹಾಸಿಕ ಪುಟಗಳನ್ನು ಅವಲೋಕಿಸಿದಾಗ, ಯುದ್ಧರಂಗದಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದ ವಿಜಯನಗರದ ಸೇನೆಯು ಅನಿರೀಕ್ಷಿತವಾಗಿ ನಡೆದ ಆಂತರಿಕ ವಿಶ್ವಾಸಘಾತುಕತನದಿಂದಾಗಿ ಸೋಲೊಪ್ಪಬೇಕಾಯಿತು ಎಂಬ ಕರಾಳ ಸತ್ಯ ತೆರೆದುಕೊಳ್ಳುತ್ತದೆ. ರಾಮರಾಯರ ಸೆರೆಯು ಇಡೀ ಯುದ್ಧದ ಗತಿಯನ್ನು ಬದಲಿಸಿ, ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ಸುಂದರ ನಗರವಾಗಿದ್ದ ಹಂಪಿಯ ಸಂಪೂರ್ಣ ವಿನಾಶಕ್ಕೆ ಮುನ್ನುಡಿ ಬರೆಯಿತು.
ಈ ಯುದ್ಧದ ಭೀಕರತೆ ಎಷ್ಟಿತ್ತೆಂದರೆ, ರಣರಂಗದಲ್ಲಿ ಹರಿದ ರಕ್ತದ ಕೋಡಿಯಿಂದಾಗಿ ಕೃಷ್ಣಾ ನದಿಯ ನೀರು ಸತತವಾಗಿ ಐದಾರು ತಿಂಗಳುಗಳ ಕಾಲ ಕೆಂಪಾಗಿಯೇ ಹರಿಯಿತೆಂದು ಐತಿಹಾಸಿಕ ಮೂಲಗಳು ಉಲ್ಲೇಖಿಸುತ್ತವೆ! ಲಕ್ಷಾಂತರ ಯೋಧರ ಕಳೆಬರಗಳಿಂದ ರಕ್ಕಸಗಿ-ತಂಗಡಗಿ ಬಯಲು ತುಂಬಿಹೋಗಿತ್ತು, ಸಾವು-ನೋವುಗಳ ಆಕ್ರಂದನ ಮುಗಿಲುಮುಟ್ಟಿತ್ತು. ಕೇವಲ ಕೆಲವೇ ಗಂಟೆಗಳಲ್ಲಿ ನಿರ್ಧಾರವಾದ ಈ ರಕ್ತಸಿಕ್ತ ಕದನವು, ಶತಮಾನಗಳ ಕಾಲ ಕಲೆ, ಸಾಹಿತ್ಯ, ಸಂಸ್ಕೃತಿಯ ಉತ್ತುಂಗದಲ್ಲಿದ್ದ ವಿಜಯನಗರ ಸಾಮ್ರಾಜ್ಯವನ್ನು ಮಣ್ಣುಪಾಲು ಮಾಡಿತು. ದಕ್ಷಿಣ ಭಾರತದ ಹೆಮ್ಮೆಯ ಸುವರ್ಣ ಯುಗವು ರಕ್ತದೋಕುಳಿಯಲ್ಲಿ ಅಂತ್ಯಗೊಂಡ ಈ ಕರಾಳ ಕಥೆ, ಕರುನಾಡಿನ ಇತಿಹಾಸದಲ್ಲಿ ಎಂದೆಂದಿಗೂ ಮಾಸದ ಗಾಯವಾಗಿ ಉಳಿದಿದೆ.
3 months ago | [YT] | 1
View 0 replies
Sangamesh The Explorer
ಹಿರಿಯ ಸಾಹಿತಿಗಳೊಂದಿಗೆ ಸಂದರ್ಶನ -
ಹುಣಸಗಿ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ವೀರೇಶ ಹಿರೇಮಠ ಹಳ್ಳೂರವರ ಸಂದರ್ಶನದ ವಿಡಿಯೋ. ಈ ವಿಡಿಯೋದಲ್ಲಿ ಅವರ ಆರಂಭಿಕ ಜೀವನ, ಕುಟುಂಬ, ಶಿಕ್ಷಣ, ಸಾಹಿತ್ಯ ಸೇವೆ, ಕೃತಿಗಳು ಹಾಗೂ ಅವರು ಪಡೆದ ಪ್ರಶಸ್ತಿ ಪುರಸ್ಕಾರಗಳನ್ನ ನನ್ನ ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಈ ವಿಡಿಯೋ ಇಷ್ಟವಾದ್ರೆ ಲೈಕ್ ಮಾಡಿ. ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ, ಹಾಗೂ ನನ್ನ Historical Science Studios ಯೂಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ. 🙏
8 months ago | [YT] | 3
View 1 reply
Sangamesh The Explorer
Hi everyone, welcome to my new YouTube Community! Now you can post on my channel, too. To get started, tell me in a post what you'd like to see next on my channel.
Visit my Community: youtube.com/@Historicalsciencestudios/community
8 months ago | [YT] | 0
View 0 replies
Sangamesh The Explorer
New Video uploading tomorrow evening at 7pm. Watch it & share your opinion in comments & enjoy the video
1 year ago | [YT] | 0
View 0 replies
Sangamesh The Explorer
New Video Uploaded today. Watch it now .
2 years ago | [YT] | 1
View 0 replies
Sangamesh The Explorer
೧೨ನೇ ಶತಮಾನದ ಚಂದ್ರಮೌಳೇಶ್ವರ ಐತಿಹಾಸಿಕ ದೇವಾಲಯದ ಮನಮೋಹಕ ಕೆತ್ತನೆಗಳು. ಈ ದೇವಾಲಯದ ಸಂಪೂರ್ಣ ವಿಡಿಯೋ ಆದಷ್ಟು ಬೇಗ ನಮ್ಮ Historical Science Studios ನಲ್ಲಿ ಬರಲಿದೆ. ನಿರೀಕ್ಷಿಸಿ ......
2 years ago | [YT] | 0
View 0 replies
Sangamesh The Explorer
NASA Mars Mission | ಮಂಗಳ ಗ್ರಹದ ಮೇಲೆ ಹೆಲಿಕ್ಯಾಪ್ಟರ್ ಹಾರಾಟ | Historical Science
2 years ago | [YT] | 0
View 0 replies
Sangamesh The Explorer
ಐತಿಹಾಸಿಕ ಸನ್ನತಿಯ ವಿಡಿಯೋವನ್ನ ಈಗಾಗಲೇ ನನ್ನ Historical Studios Youtube ಚಾನೆಲ್ ನಲ್ಲಿ upload ಮಾಡಿದ್ದೇನೆ. ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಪೂರ್ತಿಯಾಗಿ ವಿಡಿಯೋವನ್ನು ನೋಡಬಹುದು.
https://youtu.be/yCzZPLVRXf4?si=UIAGI...
2 years ago | [YT] | 2
View 0 replies
Sangamesh The Explorer
@SangameshtheExplorer ಇತಿಹಾಸ ಪ್ರಿಯರೇ ,
ಈ ವಿಡಿಯೋದಲ್ಲಿ ಸಾಮ್ರಾಟ ಅಶೋಕ ಚಕ್ರವರ್ತಿಯ ಶಿಲಾಶಾಸನ ಶೋಧನೆ ನಡೆದ ಸನ್ನತಿಯ ಇತಿಹಾಸವನ್ನು ತಿಳಿಯಬಹುದು. ಶಾಸನದ ಸಂಶೋಧನೆ ಯಾವ ರೀತಿ ನಡೆಯಿತು. ಸನ್ನತಿಯನ್ನೇ ಅಶೋಕ ಆಯ್ಕೆ ಮಾಡಲು ಕಾರಣವೇನು. ಇದರ ಹಿಂದಿನ ರಹಸ್ಯಮಯ ಘಟನೆಯನ್ನ ತಿಳಿಯೋಣ. ಜೊತೆಗೆ ಇಲ್ಲಿನ ಆದಿ ದೇವತೆ ದೇವಿ ಚಂದ್ರಲಾಂಬಾ/ಚಂದ್ರಲಾ ಪರಮೇಶ್ವರಿ ದೇವಾಲಯದ ಇತಿಹಾಸವನ್ನ ತಿಳಿಯಬಹುದು.
ಪೂರ್ತಿಯಾಗಿ ವಿಡಿಯೋ ನೋಡಿ , ವಿಡಿಯೋ ಇಷ್ಟವಾದರೆ like, Share, ಮಾಡಿ. ನಿಮ್ಮ ಅನಿಸಿಕೆಗಳನ್ನು comments ಮೂಲಕ ತಿಳಿಸಿ. ಇದೇರೀತಿ ಇತಿಹಾಸದ ರೋಮಾಂಚ ಘಟನೆಗಳನ್ನ ತಿಳಿಯಲು Historical Studios ಯೌಟ್ಯೂಬ್ ಚಾನೆಲ್ Subscribe ಮಾಡಿ.
2 years ago | [YT] | 0
View 0 replies
Load more