❤️ ಕನ್ನಡಿಗರ ಸುದ್ದಿ
ತಾಜಾ ಹಾಗೂ ನಿಖರ ಸುದ್ದಿ
📢 ರಾಜ್ಯ • ದೇಶ • ವಿಶ್ವ
🗣️ ಕನ್ನಡದಲ್ಲೇ ಸುದ್ದಿ
ಕ್ಷಣಕ್ಷಣಕ್ಕೂ ಬ್ರೇಕಿಂಗ್ ನ್ಯೂಸ್
📰 ಸತ್ಯ ಮತ್ತು ವಿಶ್ವಾಸ
📰 Rahasya Maayloka
📢 ನಿಖರ ಮತ್ತು ವಿಶ್ವಾಸಾರ್ಹ ಸುದ್ದಿ
📍 ರಾಜ್ಯ • ದೇಶ • ವಿಶ್ವ
📱 ತಾಜಾ & ಟ್ರೆಂಡಿಂಗ್ ಸುದ್ದಿ
ಜಗತ್ತಿನ ಕಣ್ಣೋಟ, ಮಾಹಿತಿಗಳ ಹುಡುಕಾಟ
RAHASYA MAAYALOKA
📰 **ಬೈರತಿ ಬಾಸವರಾಜ್ ಮೇಲೆ ಅಪರಾಧ ಪ್ರಕರಣದಲ್ಲಿ ಹಂತದ ಬೆಳವಣಿಗೆ**
* ಬೆಂಗಳೂರಿನಲ್ಲಿ ನಡೆದ *ಬಿಕ್ಲು ಶಿವ ಹತ್ಯಾ ಪ್ರಕರಣ* ನಲ್ಲಿ ಬೊಮ್ಮಾಯಿ ಮೋದಿ ಶಾಸಕರೊಬ್ಬರು *ಪಂಚನೆಯ ಆರೋಪಿಯಾಗಿದ್ದಾರೆ* ಎಂಬ ಕೇಸ್ನಲ್ಲಿ **ಅಂಟಿಸಿಪೇಟರಿ ಬೇಲ್ ಅರ್ಜಿಯನ್ನು ಇಂದು ವಿಶೇಷ ನ್ಯಾಯಾಲಯದಿಂದ ತಿರಸ್ಕರಿಸಲಾಗಿದೆ**. ಇದರಿಂದ ಪೊಲೀಸರಿಗೆ ಅವರಿಗೆ *ಇದೀಗ ಬಂಧನದ ಅವಕಾಶ* ಸಿಗುತ್ತದೆ.
* ಈ ಪ್ರಕರಣವು ಜುಲೈ ತಿಂಗಳಲ್ಲಿ ನಡೆದ ಹತ್ಯೆಯ ಮೇಲೆ ನಡೆದಿದೆ.
* ಹತ್ಯೆ ಪ್ರಕರಣದ ತನಿಖೆಯನ್ನು ಈಗ *ಆರ್ಇನ್ಡಿ (CID)* ನಿಂದ ಮುಂದುವರೆಸಲಾಗುತ್ತಿದೆ ಮತ್ತು ಬೇಲ್ ತಿರಸ್ಕಾರದಿಂದ **ಬಾಸವರಾಜ್ ಅವರ ಬಂಧನ ಸಾಧ್ಯತೆ ಹೆಚ್ಚು** ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.
⚖️ **ಹೈಕೋರ್ಟ್ ಮತ್ತು ಮೊದಲಿನ ಬೆಳವಣಿಗೆಗಳು**
* ಹೈಕೋರ್ಟ್ ಕೂಡ ಕೆಲವು ದಿನಗಳ ಹಿಂದೆ ಅವರ anticipatory bail ಅನ್ನು ತಿರಸ್ಕರಿಸಿದ್ದು, ಕೋರ್ಟು **ಬೆಲೆಗಿಂತ ಹೆಚ್ಚಿನ ತನಿಖೆಗೆ ಅವಕಾಶ ನೀಡಬೇಕೆಂದು ಹೇಳಿರುವುದು** ಸಹವಾಸವಾಗಿದೆ.
ಈಗ **ಬೈರತಿ ಬಾಸವರಾಜ್ ವಿರುದ್ಧದ ತನಿಖೆ ಗಂಭೀರ ಹಂತದಲ್ಲಿದೆ** ಮತ್ತು ನ್ಯಾಯಾಂಗ ಕ್ರಮಗಳು (ಬೇಲ್ ತಿರಸ್ಕಾರ, ಬಂಧನ ಸಾಧ್ಯತೆ) ಮುಂದುವರಿದಿವೆ. ಅವರು *ವಿದ್ಯಮಾನದಲ್ಲಿ ಹಾಜರಾಗದಿದ್ದರೆ* ಪೊಲೀಸರಿಗೆ ಅವರ ಮೇಲೆ *ಹಿರಿಯಾತೀತ ಕ್ರಮ ಕೈಗೊಳ್ಳುವ ಅವಕಾಶ* ಇದೆ.
2 months ago | [YT] | 0
View 0 replies
RAHASYA MAAYALOKA
ಇತ್ತೀಚಿನ ದಿನಗಳಲ್ಲಿ “ಫ್ಯಾನ್ಸ್ ವಾರ್” ಎನ್ನುವುದು ಸಾಮಾನ್ಯ ವಿಚಾರವಾಗಿಬಿಟ್ಟಿದೆ. ತಮ್ಮ ಮೆಚ್ಚಿನ ನಟ, ನಟಿ ಅಥವಾ ಕ್ರೀಡಾಪಟುವಿನ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಅಭಿಮಾನಿಗಳು, ಆ ಪ್ರೀತಿಯನ್ನು ಕೆಲವೊಮ್ಮೆ ಅತಿರೇಕದ ರೂಪದಲ್ಲಿ ವ್ಯಕ್ತಪಡಿಸುತ್ತಾರೆ. ಇದೇ ಅತಿರೇಕವೇ ಫ್ಯಾನ್ಸ್ ವಾರ್ಗೆ ಕಾರಣವಾಗುತ್ತದೆ.
ಒಬ್ಬರ ಮೆಚ್ಚಿನ ವ್ಯಕ್ತಿಯನ್ನು ಮತ್ತೊಬ್ಬರು ಟೀಕಿಸಿದರೆ, ಅದನ್ನು ವೈಯಕ್ತಿಕ ಅವಮಾನವಾಗಿ ತೆಗೆದುಕೊಳ್ಳುವ ಮನಸ್ಥಿತಿ ಬೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಜಗಳ, ಅವಾಚ್ಯ ಪದಗಳ ಬಳಕೆ, ನಿಂದನೆಗಳು ಸಾಮಾನ್ಯವಾಗಿವೆ. ಕೆಲ ಸಂದರ್ಭಗಳಲ್ಲಿ ಇದು ವಾಸ್ತವ ಜೀವನದಲ್ಲಿಯೂ ಗಲಾಟೆ, ಹಿಂಸಾಚಾರಕ್ಕೆ ದಾರಿ ಮಾಡಿಕೊಡುತ್ತದೆ.
ಅಭಿಮಾನಿತ್ವ ಎಂದರೆ ಪ್ರೀತಿ ಮತ್ತು ಗೌರವ. ಆದರೆ ಅದು ದ್ವೇಷವಾಗಿ, ಅಹಂಕಾರವಾಗಿ ಬದಲಾಗಬಾರದು. ನಾವು ಮೆಚ್ಚುವವರು ನಮ್ಮಿಂದ ಶಾಂತಿ, ಸೌಹಾರ್ದ ಮತ್ತು ಸಕಾರಾತ್ಮಕತೆಯನ್ನು ಕಲಿಯಬೇಕು. ಫ್ಯಾನ್ಸ್ ವಾರ್ ಮೂಲಕ ಯಾರಿಗೂ ಗೌರವ ಸಿಗುವುದಿಲ್ಲ, ಬದಲಾಗಿ ಸಮಾಜದಲ್ಲಿ ಅಶಾಂತಿ ಮಾತ್ರ ಹೆಚ್ಚುತ್ತದೆ.
ಹೀಗಾಗಿ, ಅಭಿಮಾನಿಯಾಗಿರುವುದು ತಪ್ಪಲ್ಲ, ಆದರೆ ವಿವೇಕಪೂರ್ವಕವಾಗಿ ವರ್ತಿಸುವುದು ಅಗತ್ಯ. ಪರಸ್ಪರ ಅಭಿಪ್ರಾಯಗಳನ್ನು ಗೌರವಿಸಿ, ಕಲೆ, ಕ್ರೀಡೆ ಮತ್ತು ಪ್ರತಿಭೆಯನ್ನು ಆರೋಗ್ಯಕರ ಸ್ಪರ್ಧೆಯ ದೃಷ್ಟಿಯಿಂದ ನೋಡುವುದೇ ಉತ್ತಮ. ಅದುವೇ ನಿಜವಾದ ಅಭಿಮಾನಿತ್ವ.
2 months ago | [YT] | 0
View 0 replies
RAHASYA MAAYALOKA
ಸಮಸ್ತ ಕನ್ನಡ ನಾಡಿನ ಜನತೆಗೆ ಹಾಗೂ ನನ್ನ ಮುಖ ಪುಟದ #facebook #youtube ಮತ್ತು #Instagram ಅನುಯಾಯಿಗಳಿಗೆ Dinesh Media Kannada ವತಿಯಿಂದ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
#Dineshmediakannada#ನಿಮ್ಮ ಮುಂದೆ 2025 ರಲ್ಲಿ ಹೊಸರೂಪದಲ್ಲಿ ಹೊಸ ತಂಡವಾಗಿ ಬರಲಿದೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಸದಾ ಹೀಗೆ ಇರಲಿ.
ನಿಮಗೆ ನಮ್ಮ ತಂಡದಲ್ಲಿ ಕೆಲಸ ಮಾಡುವ ಆಸಕ್ತಿ ಇದ್ದರೆ ನಮಗೆ ತಿಳಿಸಿ.
ಧನ್ಯವಾದಗಳು
#Dinesh
#CEO
#DineshMediaKannada
1 year ago | [YT] | 0
View 0 replies
RAHASYA MAAYALOKA
ರಕ್ತ ತೆಗೆಯಲಾಯಿತು, ಕೂದಲು ಕತ್ತರಿಸಲಾಯಿತು, ರಾತ್ರಿ ಪೂರ್ತಿ ನಿದ್ರೆಯಿಲ್ಲದೆ ತರಬೇತಿ.... ಇವೆಲ್ಲ ಒಂದು ಪದಕಕ್ಕಾಗಿ, ನಾವು ಗೆದ್ದೆವು ಎಂಬ ಹೆಮ್ಮೆಗಾಗಿ ಕ್ರೀಡಾಪಟುಗಳು ಎದುರಿಸಬೇಕಿರುವ ಪರಿಸ್ಥಿತಿ. (ಚೀನಾ ದೇಶದಲ್ಲಿ ಮಕ್ಕಳಿರುವಾಗಲೇ ಅವರನ್ನು ಹಿಂಸೆ ಎನ್ನಬಹುದಾದ ಮಟ್ಟದಲ್ಲಿ ತಯಾರಿ ಕೊಟ್ಟು ಸಿದ್ಧಪಡಿಸಲಾಗುತ್ತದೆ ಎನ್ನುವ ಕುರಿತು ಚರ್ಚೆಗಳು ನಡೆದಿದ್ದವು. ಇಷ್ಟೆಲ್ಲ ಮಾನಸಿಕ ಮತ್ತು ದೈಹಿಕ ಆಘಾತಗಳಿಗೆ, ನೋವುಗಳಿಗೆ ಕಾರಣವಾಗುವ ಇಂತಹ ಕ್ರೀಡಾ ಸ್ಪರ್ಧೆಗಳಿಂದ ಏನು ಪ್ರಯೋಜನ ಎನ್ನುವುದು ಈಗ ನನ್ನನ್ನು ಕಾಡುವ ಮೂಲಭೂತ ಪ್ರಶ್ನೆ.
ಹೌದು ಆಟವೆನ್ನುವುದು ಪ್ರತಿಯೊಂದು ಪ್ರಾಣಿಗಳು ಸಹ ಆಡುತ್ತವೆ. ಅವು ತಮ್ಮ ಸಹಜೀವಿಗಳ ಜೊತೆ ಸಂತಸದ ಗಳಿಗೆಯನ್ನು ಹಂಚಿಕೊಳ್ಳಲು ಆಟವನ್ನು ಸಹ ಬಳಸಿಕೊಳ್ಳುತ್ತವೆ. ಆದರೆ ಮಾನವರು ಎನ್ನಿಸಿಕೊಂಡ ನಾವು ಮಾತ್ರ ಆಟವನ್ನು ನಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದೇವೆ
ಕ್ರೀಡೆಯೊಂದರಲ್ಲಿ ಸೋತಾಗ ಆಯಾ ದೇಶದ ಅಭಿಮಾನಿಗಳ ಅತಿರೇಕದ ವರ್ತನೆಗಳಲ್ಲಿ ಕ್ರೀಡಾಪಟುಗಳ ಮನೆಯ ಮೇಲೆ ದಾಳಿ, ಅವರ ವ್ಯಕ್ತಿತ್ವದ ಮೇಲೆ ದಾಳಿ, ಮತ್ತು ದೈಹಿಕ ದಾಳಿಯನ್ನು ಸಹ ಎಸಗುತ್ತಾರೆ.
ಕ್ರೀಡೆಯನ್ನು ಎಂಜಾಯ್ ಮಾಡುವುದು ನಮ್ಮಿಂದ ನಿಜಕ್ಕೂ ಇಂದು ಸಾಧ್ಯವಿದೆಯೇ? ಗೆದ್ದ ಪಂದ್ಯಗಳನ್ನು ಹೊರತುಪಡಿಸಿದರೆ ಉಳಿದ ಪಂದ್ಯಗಳನ್ನು ನೋಡಿ ಆನಂದಿಸುವುದಕ್ಕಿಂತಲೂ ಉದ್ವೇಗ ಅನುಭವಿಸುವುದೇ ಹೆಚ್ಚು.
ಆಟವನ್ನು ಅದನ್ನು ಆಡುವವರಿಗಿಂತಲೂ ಆಡಿಸುವವರು, ನೋಡಿಸುವವರು, ಮತ್ತೆ ನೋಡುವವರೇ ಹೆಚ್ಚು ನಿಯಂತ್ತಿಸುತ್ತಾರೆ ಎಂದಾದರೆ ಅಂತಹ ಆಟಕ್ಕೆ ಯಾವ ಅರ್ಥವಿದೆ?
~ Dinesh Media Kannada
ದಿನೇಶ್ ಮಾರನಾಯಕನಹಳ್ಳಿ
1 year ago | [YT] | 0
View 0 replies
RAHASYA MAAYALOKA
#ಕೇರಳಅಲ್ಲಕರಾಳ,
ದೇವರ ನಾಡಲ್ಲಿ ದೇವರೇ ಇಲ್ಲದಂತನದಾ,
ಮನುಷ್ಯನ ವಿರುದ್ಧ ಪ್ರಕೃತಿಯ ರೌದ್ರ ನರ್ತನ,
ಜಗತ್ತು ಅದೆಷ್ಟೋ ಮುಂದುವರೆದಿರಬಹುದು ಆದರೆ ಪ್ರಕೃತಿಯ ಮುಂದೆ ನಾವೆಲ್ಲಾ ಶೂನ್ಯ ಅನ್ನೋದನ್ನ ಇವತ್ತಿನ ಕೇರಳದ ಪ್ರಕೃತಿಯ ಮುನಿಸು ನಮಗೇ ತೋರಿಕೊಟ್ಟಿದೆ.
ದೇವರ ನಾಡೆಂದೆ ಕರೆಸಿಕೊಳ್ಳುವ ಕೇರಳದಲ್ಲಿ ಇವತ್ತು ದೇವರು ಮಲಗಿ ಆರಾಮಾಗಿ ಸುಖ ನಿದ್ರೆ ಮಾಡುತ್ತಿದ್ದಾನೆ ಅಂತ ಅನ್ನಿಸುತ್ತಿದೆ.
ಅದೆಷ್ಟೋ ಕುಟುಂಬಗಳ ಆಕ್ರಂದನ, ಮಕ್ಕಳ ಕಳೆದುಕೊಂಡಂತ ತಂದೆ ತಾಯಿಗಳ ರೋದನೆ,
ತಂದೆ ತಾಯಿ ಕಳೆದುಕೊಂಡಂತಹ ಮಕ್ಕಳ ರೋದನೆ,
ಕುಟುಂಬದ ಅಣ್ಣ, ತಮ್ಮ,ಅಕ್ಕ,ತಂಗಿ, ತಂದೆ, ತಾಯಿ, ಮಗ,ಸಂಬಂಧಿಕರ ಕಳೆದುಕೊಂಡಿರುವ ಅವರ ಅಳು ನೋಡಲಾಗದು,ಯಾರು ಯಾರು ಎಲ್ಲಿ ಕೊಚ್ಚಿ ಹೋಗಿದ್ದಾರೂ ಯಾರಿಗೂ ತಿಳಿಯದು,
ನಾವು #Dineshmediakannada ವತಿಯಿಂದ ಆ ಭಗವಂತನಲ್ಲಿ ಕೇಳಿಕೊಳ್ಳುವುದು ಇಷ್ಟೇ ಆದಷ್ಟು ಬೇಗ ನಿದ್ರೆಯಿಂದ ಎದ್ದು ಆ ಜನರನ್ನು ಕಾಪಾಡಿ.
#Dineshmediakannada ನಮ್ಮ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುವುದೇನೆಂದರೆ ಆದಷ್ಟು ಸಹಾಯ ಕೇರಳ ಸರ್ಕಾರಕ್ಕೆ ಮಾಡಿ ಇ ಕರಾಳ ದಿನದಲ್ಲಿ ಅವರ ಸಹಾಯಕ್ಕೆ ನಿಲ್ಲಬೇಕೆಂದು ಕಳಕಳಿಯ ಪ್ರಾರ್ಥನೆ.
#ದಿನೇಶ್ #ಮೀಡಿಯಾಕನ್ನಡ
#ಕೇರಳಅಲ್ಲಕರಾಳ.
1 year ago | [YT] | 2
View 0 replies