ಟ್ಯಾಲೆಂಟ್ ನಿಮ್ದು....ಅಡ್ಡ ನಮ್ದು....🤝


NKTV KANNADA

ನಿಮ್ಮ ಆಯ್ಕೆ ಯಾವುದು...?

2 years ago | [YT] | 1

NKTV KANNADA

ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ಲವಂಗದ ಎಲೆ ಕಷಾಯ, ಆರೋಗ್ಯಕ್ಕಿದೆ ಹತ್ತಾರು ಪ್ರಯೋಜನ......
ಪ್ರತಿ ಮನೆಯಲ್ಲೂ ಮಸಾಲೆಗಳನ್ನು ಬಳಸುತ್ತಾರೆ. ಆಹಾರದ ರುಚಿ ಹೆಚ್ಚಿಸುವುದೇ ಮಸಾಲೆಗಳು. ಆದರೆ ಇದೊಂದು ಮಸಾಲೆ ಪದಾರ್ಥ ಕೇವಲ ಅಡುಗೆಗೆ ಮಾತ್ರವಲ್ಲ ಆರೋಗ್ಯ ಮತ್ತು ತ್ವಚೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಲವಂಗದ ಎಲೆಯಲ್ಲಿ ಔಷಧಿಗಳ ನಿಧಿಯೇ ಇದೆ. ಲವಂಗದ ಎಲೆಗಳನ್ನು ನೀರಿನಲ್ಲಿ ಕುದಿಸಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅದ್ಭುತ ಪ್ರಯೋಜನಗಳು ಸಿಗುತ್ತವೆ.
ಲವಂಗದ ಎಲೆಗಳಲ್ಲಿ ಅನೇಕ ಅಗತ್ಯ ಪೋಷಕಾಂಶಗಳಿವೆ.
ವಿಟಮಿನ್‌ ಎ, ಬಿ, ಸಿ, ಇ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮುಂತಾದ ಹಲವು ಪೋಷಕಾಂಶಗಳನ್ನು ಹೊಂದಿರುವ ಲವಂಗದ ಎಲೆಗಳು ದೇಹದಲ್ಲಿನ ವಿಟಮಿನ್‌ ಕೊರತೆಯನ್ನು ನೀಗಿಸುತ್ತವೆ. ಲವಂಗದ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಚಯಾಪಚಯವನ್ನು ವೇಗಗೊಳಿಸುವ ಮೂಲಕ ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ತೂಕ ಕೂಡ ಇಳಿಯುತ್ತದೆ.
ಈ ನೀರನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಇದು ನಿಯಂತ್ರಿಸಬಲ್ಲದು. ಅಷ್ಟೇ ಅಲ್ಲ ಇದು ಮೂತ್ರಪಿಂಡದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಯಾಕಂದ್ರೆ ಲವಂಗದ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಮೂತ್ರಪಿಂಡವನ್ನು ಫಿಲ್ಟರ್ ಮಾಡಬಹುದು. ಕಿಡ್ನಿ ಚೆನ್ನಾಗಿ ಕಾರ್ಯನಿರ್ವಹಿಸಲು ಇದು ಸಹಾಯ ಮಾಡುತ್ತದೆ. ಈ ನೀರನ್ನು ಕುಡಿಯುವುದರಿಂದ ನಿದ್ರಾಹೀನತೆ, ರಾತ್ರಿಯಲ್ಲಿ ಆಗಾಗ್ಗೆ ಎಚ್ಚರಗೊಳ್ಳುವುದು ಮತ್ತು ಚಡಪಡಿಕೆ ಮುಂತಾದ ಸಮಸ್ಯೆಗಳು ದೂರವಾಗುತ್ತವೆ.
ಲವಂಗದ ಕಷಾಯ ತಯಾರಿಸುವುದು ಹೇಗೆ?
ಒಂದು ಪಾತ್ರೆಯಲ್ಲಿ ಒಂದೂವರೆ ಗ್ಲಾಸ್‌ ನೀರು ತೆಗೆದುಕೊಳ್ಳಿ. ಅದಕ್ಕೆ ಮೂರ್ನಾಲ್ಕು ಲವಂಗದ ಎಲೆಗಳನ್ನು ಹಾಕಿ ಕುದಿಸಿ. ಒಂದೂವರೆ ಲೋಟಗಳಷ್ಟಿದ್ದ ನೀರು ಮುಕ್ಕಾಲು ಲೋಟವಾಗುವಷ್ಟು ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಡಿ. ಅದು ಉಗುರು ಬೆಚ್ಚಗಾದಾಗ ಅದಕ್ಕೆ ಜೇನುತುಪ್ಪ ಮತ್ತು ನಿಂಬೆರಸ ಬೆರೆಸಿ ಕುಡಿಯಿರಿ. ಇದು ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.

3 years ago | [YT] | 4

NKTV KANNADA

ನನ್ನಿಂದಲೇ ಸಿದ್ದರಾಮಯ್ಯಗೆ 2 ಸಲ ಪುನರ್ಜನ್ಮ ಸಿಕ್ಕಿದೆ, ಇದೇ ನಾನು ಮಾಡಿದ ದೊಡ್ಡ ತಪ್ಪು - HDK
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ( Farmer CM Siddaramaiah ) ಅವರು ಕ್ಷೇತ್ರ ಹುಡುಕಾಟ ನಡೆಸುತ್ತಿರುವ ಬಗ್ಗೆ, ಅವರು ಕೋಲಾರಕ್ಕೆ ಹೋಗಿರುವ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Farmer Chief Minister HD Kumaraswamy ) ಅವರು ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಾತನಾಡಲ್ಲ. ಅವರು ಮಾಜಿ ಮುಖ್ಯಮಂತ್ರಿಗಳು,ಸಚಿವರಾಗಿದ್ದವರುಹಾಗೂಉಪಮುಖ್ಯಮಂತ್ರಿಯಾಗಿದ್ದವರು. ಅವರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಅವರಿಗೆ ಕ್ಷೇತ್ರವೇ ಇಲ್ಲ ಎಂಬ ಕ್ಷುಲ್ಲಕ ಮಾತುಗಳು ನಮಗೆ ಅವಶ್ಯಕತೆ ಇಲ್ಲ ಎಂದರು.ಬಹುತೇಕ ಎಲ್ಲ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆಯುತ್ತಿದೆ. ಸಿದ್ದರಾಮಯ್ಯ ಕೂಡ ಅದೇ ಲೆಕ್ಕದಲ್ಲಿ ಕೋಲಾರಕ್ಕೆ ಹೋಗಿರಬಹುದು. ಚಾಮುಂಡೇಶ್ವರಿ, ಬಾದಾಮಿಯಲ್ಲೂ ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆದಿದೆ. ಕಳೆದ ಚುನಾವಣೆಯಲ್ಲಿ ಕೊನೆ ಸಮಯದಲ್ಲಿ ನಾನು ಮೂರು ದಿನ ಬಾದಾಮಿಗೆ ಹೋಗದೆ ಇದ್ದಿದ್ದರೆ ಹತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ಸಿದ್ದರಾಮಯ್ಯ ಅವರು ಸೋಲುತ್ತಿದ್ದರು.
ಗುಳೆದಗುಡ್ಡ ಸೇರಿದಂತೆ ಹಲವೆಡೆ ನಾನು ಅಂತಿಮ ಕ್ಷಣದಲ್ಲಿ ಪ್ರಚಾರ ಮಾಡಿದ್ದೆ, ಜನರಿಂದ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಯಿತು. ನಮ್ಮ ಅಭ್ಯರ್ಥಿಗೆ 28 ಸಾವಿರ ಮತ ಪಡೆದರು. ಆಗ ಸಿದ್ದರಾಮಯ್ಯ ಚಿಕ್ಕ ಅಂತರದಲ್ಲಿ ಗೆದ್ದರು. ಇಲ್ಲವಾಗಿದ್ದರೆ ಹತ್ತು ಸಾವಿರ ಮತಗಳ ಅಂತರದಿಂದ ಸೋಲುತ್ತಿದ್ದರು. ಹಾಗೆ ನೋಡಿದರೆ ಅವರ ಗೆಲುವಿಗೆ ನಾನೇ ಕಾರಣ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ನನ್ನಿಂದ ರಾಜಕೀಯ ಮರುಜನ್ಮ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

3 years ago | [YT] | 5

NKTV KANNADA

Siddaramaiah In Kolar | ಕೋಲಾರದಿಂದ ಗೆದ್ದು ಯಾಕೆ CM ಆಗಬಾರದು?: ಮತ್ತೊಮ್ಮೆ ಮುಖ್ಯಮಂತ್ರಿ ಕನಸು ಬಿಚ್ಚಿಟ್ಟ ಸಿದ್ದರಾಮಯ್ಯ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಕುರಿತು ಮಾಜಿ ಸಿಎಂ ಘೋಷಣೆ ಮಾಡಿದ್ದಾರೆ. ಮತ್ತೆ ನಾಮಪತ್ರ ಸಲ್ಲಿಕೆ ಬರುತ್ತೇನೆ ಎಂದು ಹೇಳಿದ ನಂತರ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೋಲಾರದಿಂದ ಜಯಿಸಿ ಮತ್ತೊಮ್ಮೆ ಯಾಕೆ ಸಿಎಂ ಆಗಬಾರದು ಎಂಬ ಕನಸನ್ನೂ ಬಿಚ್ಚಿಟ್ಟಿದ್ದಾರೆ.

ಇಡೀ ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅನೇಕ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ಸಂಜೆ ವೇಳೆಗೆ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಕೃಷ್ಣ ಭೈರೇಗೌಡ, ಸಿದ್ದರಾಮಯ್ಯ ಅವರು ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು. ನಮ್ಮ ಒತ್ತಾಯಕ್ಕೆ ಸಿದ್ದರಾಮಯ್ಯ ಬಂದು ಜನರನ್ನು ಭೇಟಿ ಮಾಡಿದ್ದಾರೆ. ಅವರು ಆದಷ್ಟು ಬೇಗ ನಿರ್ಧಾರ ಮಾಡಬೇಕು, ವರಿಷ್ಠರು ಸಹ ತೀರ್ಮಾನ ಮಾಡಬೇಕು. ನಾವೆಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರೋಣ ಎಂದರು.

ದಿವಂಗತ ಭೈರೇಗೌಡರ ಸಮಾಧಿಗೆ ಪುಷ್ಪಾರ್ಚನೆ ನಂತರ ಮಾತನಾಡಿದ ಸಿದ್ದರಾಮಯ್ಯ, ದಿವಂಗತ ಭೈರೇಗೌಡರ ಒಡನಾಟ ಬಗ್ಗೆ ಮೆಲುಕು ಹಾಕಿದರು. ಕ್ಷೇತ್ರದ ಜನತೆ ಕಾರ್ಯಕರ್ತರು ಕೋಲಾರದಲ್ಲಿ ನಿಲ್ಲಬೇಕು ಒತ್ತಾಯ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲಿ ಬೇಕಾದರೂ ನಿಲ್ಲಬಹುದು. ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಕೆಲಸ ಶಾಸಕರ ಜವಾಬ್ದಾರಿ. ದೂರದ ಕ್ಷೇತ್ರಕ್ಕಿಂತ ಹತ್ತಿರದ ಕ್ಷೇತ್ರ ಬೇಕು ಎಂದು ಹೇಳಿದ್ದೆ. ಬಾದಾಮಿ, ವರುಣಾ, ಸೇರಿದಂತೆ ಎಲ್ಲ ಕಡೆ ಒತ್ತಾಯ ಕೇಳಿಬಂದಿದೆ.

ಕೋಲಾರದಲ್ಲಿ ಎಲ್ಲರೂ ಆತ್ಮೀಯರು. ಕೆ.ಹೆಚ್. ಮುನಿಯಪ್ಪ ಜತೆ ಮಾತನಾಡಿದೆ, ಅದಕ್ಕೆ ಬನ್ನಿ ನಿಂತುಕೊಳ್ಳಿ ಎಂದಿದ್ದಾರೆ. ನಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಇಲ್ಲ. ಹಾಲಿ ಶಾಸಕರುಗಳು ಸಹ ಸ್ವಾಗತ ಮಾಡುತಿದ್ದಾರೆ. ಎಲ್ಲರ ಒತ್ತಾಯ, ಆಸೆಗೆ ಇಲ್ಲ ಅನ್ನೊಕ್ಕಾಗಲ್ಲ. ಅದಕ್ಕೆ ಒಪ್ಪಿದೆ.

ರಾಜ್ಯದಲ್ಲಿ ಓಡಾಡಬೇಕು, ಬೇರೆ ಕಡೆ ಪಕ್ಷದ ಕಡೆ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಬೇಕು. ನಾವೆಲ್ಲರೂ ಸೇರಿ ಗೆಲ್ಲಿಸುತ್ರೇವೆ ಎಂದು ಎಲ್ಲರೂ ಹೇಳಿದ್ದಾರೆ. ನನಗೆ ಎಲೆಕ್ಷನ್ ನಿಲ್ಲಲು ಅಂಜಿಕೆ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲೆಕ್ಷನ್‌ಗೆ ನಿಲ್ಲಬೇಕು. ಬಾದಾಮಿ ಕ್ಷೇತ್ರದ ಜನ, ಅಲ್ಲಿಂದಲೇ ಸ್ಪರ್ಧೆ ಮಾಡಲು ಒತ್ತಾಯ ಮಾಡಿದ್ದಾರೆ. ಆದರೆ ನನಗೆ ಬಾದಾಮಿ ದೂರ ಆಗುತ್ತದೆ. ಶಾಸಕರಾದವರು ಕ್ಷೇತ್ರದಲ್ಲಿರಬೇಕು. ವಾರಕೊಮ್ಮೆ ಅಲ್ಲಿ ಹೋಗಲು ಆಗಲ್ಲ. ಆದ್ದರಿಂದ ಹತ್ತಿರದಲ್ಲ ಸ್ಪರ್ಧೆ ಮಾಡಬೇಕು ಎಂದು ಹೇಳಿದಾಗ ಬಹಳ ಜನ ಕರೆಯುತ್ತಾರೆ. ವರುಣಾದಿಂದ ಗೆದ್ದು ಸಿಎಂ ಆಗಿದ್ದೆ, ಬಾದಾಮಿಯಿಂದ ಸ್ಪರ್ಧಿಸಿ ಪ್ರತಿಪಕ್ಷ ನಾಯಕನಾದೆ (Leader of Opposition-LOP), ಕೋಲಾರದಿಂದ ಸ್ಪರ್ಧಿಸಿ ಗೆದ್ದು ಯಾಕೆ ಸಿಎಂ ಆಗಬಾರದು? ಎಂದು ತಮ್ಮ ಕನಸನ್ನು ಬಿಚ್ಚಿಟ್ಟ ಸಿದ್ದರಾಮಯ್ಯ, ಎಲ್ಲ ನಿರ್ಧಾರವನ್ನೂ ಹೈ ಕಮಾಂಡ್‌ಗೆ ಬಿಟ್ಟಿದ್ದೇನೆ. ಹೈಕಮಾಂಡ್ ಎಲ್ಲಿ ಹೇಳಿದರೂ ನಿಂತುಕೊಳ್ಳುತ್ತೇನೆ ಎಂದರು.

3 years ago | [YT] | 2

NKTV KANNADA

ಸಮಸ್ತ ನಾಡಿನ ಜನತೆ ಗೆ ಹಾಗೂ ಕೇಬಲ್ ಆಪರೇಟರ್ ಗಳಿಗೆ ಶ್ರೀ ಸ್ವರ್ಣ ಗೌರಿ ವ್ರತ ಹಾಗೂ ಶ್ರೀ ವಿನಾಯಕ ಚತುರ್ಥಿ ಹಬ್ಬದ ಹಾರ್ಧಿಕ ಶುಭಾಶಯಗಳು..ದೇವರು ನಿಮ್ಮ ಸಂಕಷ್ಟಗಳನ್ನು ದೂರ ಮಾಡಿ ಉತ್ತಮ ವ್ಯಾಪಾರ ವೃದ್ಧಿಸಿ, ತಮ್ಮ ಬಾಳಲ್ಲಿ ಸುಖ ಸಮೃದ್ಧಿ ದಯಪಾಲಿಸಲೇಂದು ಈ ಮೂಲಕ ಆಶಿಸುತ್ತೇವೆ.💐💐🙏🙏

3 years ago | [YT] | 2

NKTV KANNADA

75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

3 years ago | [YT] | 6

NKTV KANNADA

ಸಂಕ್ರಾಂತಿ ಹಬ್ಬದ ಶುಭಾಶಯಗಳು 💐💐💐

3 years ago | [YT] | 7