providing latest kannada news,film, social news. CONTACT US : 9164003239


MCN MEDIA NEWS

ಸಾವಿರಾರು ಕನ್ನಡ ಗೀತೆಗಳಿಗೆ ಜೀವ ತುಂಬಿದ, ಗಾನ ಕೋಗಿಲೆ ಎಸ್. ಜಾನಕಿ ವಿಧಿವಶ.

ತಮ್ಮ ಅಮೋಘ ಕಂಠದಿಂದ ಮನೆಯ ಮಾತಾಗಿದ್ದ ತಾರೆ ನಮ್ಮನಗಲಿದ್ದಾರೆ - MCNMEDIA ಅಂತಿಮ ನಮನ ಸಲ್ಲಿಸುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ 🙏❤️

#mcnmedianews

6 days ago (edited) | [YT] | 216

MCN MEDIA NEWS

ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿಗಳಾದ ಶ್ರೀ ಚಂದ್ರಶೇಖರ್ ಅವರ 19ನೇ ಪುಣ್ಯಸ್ಮರಣೆ ನಿಮಿತ್ತ ನವದೆಹಲಿಯ ಜನನಾಯಕ್ ಸ್ಥಳಕ್ಕೆ ತೆರಳಿ ಆ ಚೇತನಕ್ಕೆ ನನ್ನ ಗೌರವಪೂರ್ವಕ ನಮನಗಳನ್ನು ಸಮರ್ಪಿಸಿದರು .

1 week ago | [YT] | 271

MCN MEDIA NEWS

ಬೆಂಗಳೂರು ಸಮೀಪ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಸಿಎಂ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಚಿವ ಎಂ ಬಿ ಪಾಟೀಲ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಿತೇಶ್ ಕುಮಾರ್ ಸಿಂಗ್, ಸಿಎಂ ಆರ್ಥಿಕ ಸಲಹೆಗಾರ ಎಲ್ ಕೆ ಅತೀಕ್ ಮತ್ತಿತರರು ಭಾಗವಹಿಸಿದ್ದರು.

1 week ago | [YT] | 199

MCN MEDIA NEWS

ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.

1 week ago | [YT] | 147

MCN MEDIA NEWS

ಮಾಜಿ ಸಚಿವ, ಶಾಸಕ, ನಟ, ನಿರ್ಮಾಪಕ ಸಿ ಪಿ ಯೋಗೀಶ್ವರ್ ತಮ್ಮ ಪುತ್ರ ಧ್ಯಾನ್ ಯೋಗೀಶ್ವರ್ ಅವರನ್ನು ನಾಯಕ ನಟನನ್ನಾಗಿ ಪರಿಚಯಿಸುತ್ತಿರುವ ಕನ್ನಡ ಸಿನಿಮಾ 'ಕರ್ಣಾಟ ಬಲಂ ಅಜೇಯಂ" ಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕ್ಲಾಪ್ ಮಾಡಿ, ಮಾತನಾಡಿದರು. ಕೇಂದ್ರ ಸಚಿವ ವಿ ಸೋಮಣ್ಣ, ಮಾಜಿ ಸಚಿವ, ಶಾಸಕರಾದ ಸುಧಾಕರ್, ಉದಯ್ ಕದಲೂರು, ಎಂಎಲ್ಸಿಗಳಾದ ಎಸ್ ರವಿ, ಮೋಹನ್, ನಟ ಜಗಪತಿ ಬಾಬು ಮತ್ತಿತರರು ಉಪಸ್ಥಿತರಿದ್ದರು.

1 week ago | [YT] | 41

MCN MEDIA NEWS

ಕೇಂದ್ರ ಸಚಿವರಾದ *ಶ್ರೀ ಹೆಚ್.ಡಿ. ಕುಮಾರಸ್ವಾಮಿ* ಅವರು ಬಿಡದಿಯ ತಮ್ಮ ತೋಟದ ಮನೆಯಲ್ಲಿ ಕುಟುಂಬದೊಂದಿಗೆ SIR ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ *ಶ್ರೀಮತಿ ಅನಿತಾ ಕುಮಾರಸ್ವಾಮಿ* ಅವರು, ಯುವ ಜನತಾದಳದ ರಾಜ್ಯಾಧ್ಯಕ್ಷರಾದ *ಶ್ರೀ ನಿಖಿಲ್ ಕುಮಾರಸ್ವಾಮಿ* ಅವರು ಹಾಗೂ ಶ್ರೀಮತಿ *ರೇವತಿ ನಿಖಿಲ್* ಅವರು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾಗಿಯಾದರು.

1 week ago | [YT] | 166

MCN MEDIA NEWS

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿಯವರ ಪತ್ನಿ ಶ್ರೀಮತಿ ಉಷಾ ಡಿ.ಕೆ. ಶಿವಕುಮಾರ್ ಹಾಗೂ ಸಹೋದರ ಡಿ.ಕೆ. ಸುರೇಶ್ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಉಪಾಹಾರದ ಜೊತೆಗೆ ಮಾತುಕತೆ ನಡೆಸಿದರು.

2 weeks ago | [YT] | 862

MCN MEDIA NEWS

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪತ್ನಿ ಉಷಾ ಹಾಗೂ ಸಹೋದರ, ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್ ಅವರ ಜತೆ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಸೌಜನ್ಯದ ಭೇಟಿ ಮಾಡಿದ್ದರು. ಉಪಾಹಾರದ ಜತೆ ಸಮಾಲೋಚನೆ ನಡೆಸಿದರು.

2 weeks ago | [YT] | 616

MCN MEDIA NEWS

ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಮಂಗಳವಾರ ಸಂಜೆ ಬಂದಿಳಿದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಸಿಎಂ ಡಿ ಕೆ ಶಿವಕುಮಾರ್ ಅವರು ಹೂಗುಚ್ಛ ನೀಡಿ, ಶಾಲು ಹೊದೆಸಿ ಆತ್ಮೀಯವಾಗಿ ಬರಮಾಡಿಕೊಂಡರು. ರಾಜ್ಯಪಾಲರಾದ ಥಾವರ್ ಚಂದ್ ಗೆಹಲೊಟ್ ಉಪಸ್ಥಿತರಿದ್ದರು.

2 weeks ago | [YT] | 203

MCN MEDIA NEWS

ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕರಾಗಿ ನೇಮಕಗೊಂಡಿರುವ ಬಿ.ವಿ.‌ ಶ್ರೀನಿವಾಸ್ ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಇದೇ ವೇಳೆ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.

2 weeks ago | [YT] | 560