providing latest kannada news,film, social news. CONTACT US : 9164003239


MCN MEDIA NEWS

ಬಳ್ಳಾರಿ ಚಲೋ ಪಾದಯಾತ್ರೆಯ ಆರನೇ ದಿನವಾದ ಇಂದು ಗಂಗಾವತಿ ತಾಲೂಕಿನ ಮರಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೈಕ್ ರ್ಯಾಲಿ ನಡೆಸಿದರು.

1 week ago | [YT] | 181

MCN MEDIA NEWS

ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಜನ ಜಾಗೃತಿ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಇದೇ ವೇಳೆ "ಸಮಾನತೆಯ ಸಂಕಲ್ಪ" ಹೆಸರಿನ‌ ಸ್ಮರಣ ಸಂಚಿಕೆಯನ್ನು ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ ಬೈರತಿ ಸುರೇಶ್, ಸಂತೋಷ್ ಲಾಡ್, ಡಾ.ಅಜಯಸಿಂಗ್, ಪುಟ್ಟರಂಗ ಶೆಟ್ಟಿ, ಮಧು ಬಂಗಾರಪ್ಪ, ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಮತ್ತಿತರ ಗಣ್ಯರು ವೇದಿಕೆಯಲ್ಲಿ ಹಾಜರಿದ್ದರು.

1 week ago | [YT] | 474

MCN MEDIA NEWS

2ನೇ ದಿನದ ಪಾದಯಾತ್ರೆ: ರೈತರ ನ್ಯಾಯಕ್ಕಾಗಿ ನಮ್ಮ ನಡಿಗೆ

ಐತಿಹಾಸಿಕ ‘ಬಳ್ಳಾರಿ ಚಲೋ’ ಪಾದಯಾತ್ರೆಯ 2ನೇ ದಿನದ ಜನಾಕ್ರೋಶದ ಪಾದಯಾತ್ರೆಯು ಸಂತೆಕಲ್ಲೂರದಿಂದ ಪ್ರಾರಂಭಗೊಂಡಿದ್ದು, ಮಸ್ಕಿ ತಾಲೂಕಿನ ಅಂಕುಶದೊಡ್ಡಿಯಲ್ಲಿ ರೈತರ ಹೊಲಕ್ಕೆ ಭೇಟಿ ನೀಡಿ, ಭೀಕರ ಬರದಿಂದಾದ ಬೆಳೆ ಹಾನಿಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ, ರೈತರ ನೋವನ್ನು ಆಲಿಸಲಾಯಿತು, ಅವರಿಗೆ ಧೈರ್ಯ ತುಂಬಲಾಯಿತು. ಅನ್ನದಾತ ರೈತನ ಬೆವರಿಗೆ ನ್ಯಾಯ ನೀಡುವುದು ಸರ್ಕಾರದ ಕರ್ತವ್ಯ!

ಈ ಆಗ್ರಹ ಅಧಿಕಾರಸ್ಥರ ಕಿವಿಗೆ ಕೇಳಿಸಲೆಂದೇ ಈ ಪಾದಯಾತ್ರೆಯ ಉದ್ಘೋಷ. ಹಾಗೆಯೇ, ಯಾತ್ರೆ ಸಂದರ್ಭದಲ್ಲಿ ಕುರುಬ ಸಮುದಾಯದ ಹಲವಾರು ಮುಖಂಡರೊಂದಿಗೆ ಮಾತುಕತೆ ನಡೆಸಿ, ಅವರ ಅಹವಾಲುಗಳನ್ನು ಸ್ವೀಕರಿಸಲಾಯಿತು. ಮಾಜಿ ಸಚಿವ ಶ್ರೀ B Sriramulu , ರಾಜ್ಯ ಉಪಾಧ್ಯಕ್ಷರಾದ ಶ್ರೀ ರಾಜು ಗೌಡ, ಮುಖ್ಯ ಸಚೇತಕರಾದ ಶ್ರೀ ದೊಡ್ಡನಗೌಡ ಪಾಟೀಲ್, ಶಾಸಕರಾದ ಶ್ರೀ ಮಾನಪ್ಪ ವಜ್ಜಲ್, ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ಪಾಟೀಲ್, ಶ್ರೀ ದೊಡ್ಡನಗೌಡ ಪಾಟೀಲ್ ರಾಜ್ಯ ಕಾರ್ಯದರ್ಶಿ ಶ್ರೀ ಶರಣು ತಳ್ಳಿಕೇರಿ ಹಾಗೂ ಹಲವಾರು ಪ್ರಮುಖರು, ಸಾವಿರಾರು ಕಾರ್ಯಕರ್ತರು ಜೊತೆಗಿದ್ದರು. ದಾರಿಯುದ್ದಕ್ಕೂ ಪ್ರೀತಿಯಿಂದ ಆಶೀರ್ವದಿಸಿದ ತಾಯಂದಿರ ಮತ್ತು ಜನತೆಯ ಪ್ರೀತಿ, ಆತ್ಮೀಯತೆ, ಹಾರೈಕೆಗಳೇ ನಮ್ಮ ಹೋರಾಟದ ಶಕ್ತಿಯಾಗಿದೆ. ರೈತರ ಕಣ್ಣೀರು ಮತ್ತು ಶೋಷಿತರ ಆಕ್ರೋಶವೇ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಲಿದೆ!

#BallariChalo #CongressFailsKarnataka # mcnmedianews

1 week ago | [YT] | 57

MCN MEDIA NEWS

ಮಹಾಲಕ್ಷ್ಮೀ ಲೇಔಟ್‌ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್‌ ವತಿಯಿಂದ ಆಯೋಜಿಸಲಾದ 2 ದಿನಗಳ ಜ್ಯೂನಿಯರ್ ಸಾಕರ್ ಕಪ್ ಫುಟ್‌ಬಾಲ್ ಪಂದ್ಯಾವಳಿಯನ್ನು ಶಾಸಕ ಕೆ. ಗೋಪಾಲಯ್ಯ ಉದ್ಘಾಟಿಸಿ ಶುಭ ಕೋರಿದರು. ನಂತರ ಮಾತನಾಡಿ ಕ್ರೀಡೆ ಕೇವಲ ಗೆಲುವು-ಸೋಲಿನ ಸ್ಪರ್ಧೆಯಲ್ಲ; ಅದು ಶಿಸ್ತು, ತಂಡದ ಮನೋಭಾವ, ಆತ್ಮವಿಶ್ವಾಸ ಮತ್ತು ನಾಯಕತ್ವದ ಪಾಠವನ್ನು ಕಲಿಸುತ್ತದೆ.ನಮ್ಮ ಯುವಕರು ಕ್ರೀಡೆ ಹಾಗೂ ಸಂಸ್ಕೃತಿಯೊಂದಿಗೆ ಬೆಳೆಯುವುದೇ ಬಲಿಷ್ಠ ಭಾರತದ ಅಡಿಪಾಯ.ಈ ಉತ್ತಮ ಆಯೋಜನೆಗಾಗಿ ಶ್ರೀ ಕೃಷ್ಣ ಹಾಗೂ ಶ್ರೀ ಅರುಣ್ ಕುಮಾರ್ ಮತ್ತು ಮಹಾಲಕ್ಷ್ಮೀ ಲೇಔಟ್ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್‌ನ ಎಲ್ಲ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಯುವ ಪ್ರತಿಭೆಗಳಿಗೆ ನನ್ನ ಸದಾ ಬೆಂಬಲ ಇರುತ್ತದೆ ಎಂದು ಗೋಪಾಲಯ್ಯ ತಿಳಿಸಿದರು.

1 week ago | [YT] | 72

MCN MEDIA NEWS

ಸಿಎಂ ಡಿ ಕೆ ಶಿವಕುಮಾರ್ ಅವರು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿರುವ ಮುಕ್ತಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ. ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಸಚಿವ ಎಸ್‌. ಎಸ್.‌ ಮಲ್ಲಿಕಾರ್ಜುನ್‌, ಮತ್ತಿತರರು ಉಪಸ್ಥಿತರಿದ್ದರು.

1 week ago | [YT] | 51

MCN MEDIA NEWS

ಸಿಎಂ ಡಿ ಕೆ ಶಿವಕುಮಾರ್ ಅವರು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿರುವ ಮುಕ್ತಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ. ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಸಚಿವ ಎಸ್‌. ಎಸ್.‌ ಮಲ್ಲಿಕಾರ್ಜುನ್‌, ಮತ್ತಿತರರು ಉಪಸ್ಥಿತರಿದ್ದರು.

1 week ago | [YT] | 30

MCN MEDIA NEWS

ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಳ್ಳಾರಿ ಚಲೊ ಪಾದಯಾತ್ರೆ. 01-09-2026ರಿಂದ ಆರಂಭವಾಗಲಿದೆ. ಬಳ್ಳಾರಿ ಚಲೋ ಪಾದಯಾತ್ರೆಯ ಪೂರ್ವಭಾವಿ ಸಭೆ ಬಳ್ಳಾರಿ ಬಿಜೆಪಿ ಕಚೇರಿಯಲ್ಲಿ ನಡಿಲಿಯಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಗಂಗಾವತಿ ಶಾಸಕರಾದ ಜಿ ಜನಾರ್ಧನ್ ರೆಡ್ಡಿಯವರು ,ಹಾಗೂ ಮಾಜಿ ಶಾಸಕರಾದ ಕುಡಚಿ ಪಿ ರಾಜು ಮತ್ತು ತಮ್ಮೇಶ್ ಗೌಡ ಮಾಜಿ ಸಂಸಾರದ ಸಣ್ಣ ಪಕೀರಪ್ಪ ಮಾಜಿ ಶಾಸಕರಾದ th ಸುರೇಶ್ ಬಾಬು ರಾಜ್ಯ ಎಸ್ ಟಿ ಮೋರ್ಚರದ ಉಪಾಧ್ಯಕ್ಷರಾದ ಓಬಳೇಶ್ ಮತ್ತು ks ದಿವಾಕರ್ ಮತ್ತು ಹನುಮಂತಪ್ಪ ಗುರುಲಿಂಗನಗೌಡ ಮತ್ತು ಮಹಿಳಾ ಮೋರ್ಚಾ ಮತ್ತು ಮಂಡಲ ಅಧ್ಯಕ್ಷರು ಪಕ್ಷದ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು. #mcnmedianews #bsriramulu #janardhanreddy #bjp

2 weeks ago | [YT] | 79

MCN MEDIA NEWS

ನೂತನ ವಿಧಾನ ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನ ಹೊಂದಿರುವ ಖ್ಯಾತ ಚಲನ ಚಿತ್ರ ನಟ ಹಾಗೂ ಸಮಾಜಸೇವೆ ಮಾಡುತ್ತಿರುವ ಶ್ರೀ ವಿ ರವಿಚಂದ್ರನ. ಪತ್ರಿಕೋದ್ಯಮದ ಮೂಲಕ ಸಮಾಜದಲ್ಲಿ ಸಂಘಟನಾತ್ಮಕವಾಗಿ ಸಮಾಜದಲ್ಲಿ ಬದಲಾವಣೆ ಮಾಡುತ್ತಿರುವ ಶ್ರೀ ಕೆ ವಿ ಪ್ರಭಾಕರ ಹಾಗೂ ಮಹಿಳಾ ಜನಜಾಗೃತಿ ಮಾಡುತ್ತಿರುವ ಸಹೋದರಿ ಶ್ರೀಮತಿ ಮಂಜುಳಾ ನಾಯ್ಡು ಅವರಿಗೆ ಅಭಿನಂದನೆಗಳು.
KV Prabhakar - Voice of People
Sipayi Ravichandran
R Manjula Naidu

2 weeks ago | [YT] | 65

MCN MEDIA NEWS

ಮೌಲ್ಯಾಧಾರಿತ ರಾಜಕಾರಣದ ಮೇರು ನಾಯಕ, ಆದರ್ಶ ಆಡಳಿತಗಾರ, ಮಾಜಿ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಆ ಹಿರಿಯ ಚೇತನಕ್ಕೆ ಶ್ರದ್ಧಾಪೂರ್ವಕ ಪ್ರಣಾಮಗಳು.

ವಿಕೇಂದ್ರೀಕರಣ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಅಧಿಕಾರವನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಿದ ಅವರ ಧೀಮಂತ ನಾಯಕತ್ವ ಹಾಗೂ ಮುತ್ಸದ್ಧಿತನ ಆದರ್ಶಪ್ರಾಯವಾಗಿದೆ. ತಮ್ಮ ಮೌಲ್ಯಯುತ ಸಾರ್ವಜನಿಕ ಜೀವನದಲ್ಲಿ ತಮ್ಮ ನಡೆ, ಸಂಘಟನೆ ಮತ್ತು ಸಾಧನೆಗಳ ಮೂಲಕ ನಾಡಿಗೆ ಅವರು ನೀಡಿದ ಕೊಡುಗೆ ಅಪಾರವಾದದ್ದು. #mcnmedianews #Ramakrishnahegde #Karnatakaexcm

2 weeks ago | [YT] | 83

MCN MEDIA NEWS

ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್‌ನ ಸದಸ್ಯರು, ಪರಿಷತ್ ಸದಸ್ಯ ಹಾಗೂ ಸಂಘದ ಅಧ್ಯಕ್ಷ ಟಿ. ಎ. ಶರವಣ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಜ್ಯುವೆಲ್ಲರಿ ಪಾರ್ಕ್ ಸ್ಥಾಪಿಸಲು ಜಮೀನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.

ಅವರ ಮನವಿಗೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು, ದಕ್ಷಿಣ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಜ್ಯುವೆಲ್ಲರಿ ಪಾರ್ಕ್ ಸ್ಥಾಪಿಸುವುದಾಗಿ ಭರವಸೆ ನೀಡಿದರು.

2 weeks ago | [YT] | 183