V News24 Kannada

We the NEWS 24 Kannada is a news-based organization catering to the entire section of society with a social outlook and public interest. News24 is for a value system that includes truth, unbiased, impartiality, and reliability. News24 seeks to integrate quality resources with the latest technologies to put together and deliver a thought-provoking experience - simple, crisp, and bold.
#news #india #media #breakingnews #music#viral #trending #politics #noticias #fashion #tv #sports #business #currentaffairs #entertainment #info #live #kannada


V News24 Kannada

ನಂಜೇದೇವನಪುರ ಬಳಿ 10 ತಿಂಗಳ ಹೆಣ್ಣು ಹುಲಿ ಮರಿ ಸೆರೆ

ಚಾಮರಾಜನಗರ : ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ನಂಜೇದೇವನಪುರ ಸೇರಿದಂತೆ ಸುತ್ತ ಮುತ್ತಲಿನ ಗಾಮಗಳಲ್ಲಿ ಬೀಡು ಬಿಟ್ಟಿದ್ದ ತಾಯಿ ಹುಲಿ ಸೇರಿದಂತೆ ಐದು ಹುಲಿಗಳಲ್ಲಿ ಈಗಾಗಲೇ ಮೂರುಹುಲಿಗಳನ್ನು ಸೆರೆ ಹಿಡಿಯಲಾಗಿದ್ದು, ಮಂಗಳವಾರ ಮತ್ತೊಂದು 10 ತಿಂಗಳ ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ.

ಚಾಮರಾಜನಗರದ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವಿಭಾಗ ವ್ಯಾಪ್ತಿಯ ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ನಂಜೇದೇವನಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಒಂದು ತಾಯಿ ಹುಲಿ ಹಾಗೂ 04 ಹುಲಿ ಮರಿಗಳನ್ನು ಸೆರೆಹಿಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಅನುಮತಿಯನ್ನು ನೀಡಿದ್ದರು.
ಅದರಂತೆ, ಜನವರಿ 9 ರಂದು ಒಂದು ತಾಯಿ ಹುಲಿಯನ್ನು ಕಾರ್ಯಾಚರಣೆ ಮೂಲಕ ಸೆರೆಹಿಡಿಯಲಾಗಿದ್ದು, 04 ಹುಲಿ ಮರಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯು ಮುಂದುವರೆಸಲಾಗಿತ್ತು. ಜನವರಿ 15 ರ ರಾತ್ರಿ ಸದರಿ 04 ಹುಲಿ ಮರಿಗಳ ಪೈಕಿ ಅಂದಾಜು 10 ತಿಂಗಳ ಒಂದು ಹೆಣ್ಣು ಹುಲಿ ಮರಿಯನ್ನು ಜನವರಿ 17 ರ ರಾತ್ರಿ 10 ತಿಂಗಳ ಗಂಡು ಹುಲಿ ಮರಿಯನ್ನು ಸೆರೆಹಿಡಿಯಲಾಗಿತ್ತು ಉಳಿಕೆ 02 ಹುಲಿ ಮರಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯು ಮುಂದುವರೆಸಲಾಗಿತ್ತು.
ಮಂಗಳವಾರ ಉಳಿಕೆ 02 ಹುಲಿ ಮರಿಗಳ ಪೈಕಿ 10 ತಿಂಗಳ ಹೆಣ್ಣು ಹುಲಿ ಮರಿಯನ್ನು ಸೆರೆಹಿಡಿಯಲಾಗಿದ್ದು ಹುಲಿಯನ್ನು ಸುರಕ್ಷಿತವಾಗಿ ಇಡಲಾಗಿದೆ ಮತ್ತು ಅದರ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಲಾಗುತ್ತಿದೆ.
ಇನ್ನು 01 ಹುಲಿ ಮರಿ ಸೆರೆ ಕಾರ್ಯಾಚರಣೆ ಮುಂದುವರೆಸಲಾಗಿದೆ. ಕಾರ್ಯಾಚರಣೆಯಲ್ಲಿ ಇಬ್ಬರು ಇಲಾಖೆಯ ಪಶುವೈದ್ಯಾಧಿಕಾರಿಗಳು, ದುಬಾರೆ ಕ್ಯಾಂಪಿನ 04 ಸಾಕಾನೆ, ಇಲಾಖೆಯ ಡೋಣ್ ತಂಡಗಳು ಮತ್ತು ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ.

ನಂಜೇದೇವನಪುರ ಬಳಿ ಹುಲಿ ಮರಿ ಸೆರೆಯಿಂದಾಗಿ ಗ್ರಾಮಸ್ಥರಲ್ಲಿ ಸ್ವಲ್ಪಮಟ್ಟಿಗೆ ನೆಮ್ಮದಿ ಬಂದಂತಾಗಿದೆ. #Chamarajanagar,#TigerCub,#WildlifeRescue,#ForestDepartment,#BRTHills,#BiligiriRanganathaTigerReserve,#TigerConservation,#WildlifeOperation,#HumanWildlifeConflict,#ForestNews,#KarnatakaWildlife,#TigerCapture,#WildlifeSafety,#VillageRelief,#BreakingNews,#NatureProtection,#WildlifeUpdate,#ConservationEfforts,#IndiaWildlife

1 week ago | [YT] | 1

V News24 Kannada

ಕೆ.ಎಸ್.ಆರ್.ಟಿ.ಸಿ ಬಸ್ ಬೈಕ್ ನಡುವೆ ಅಪಘಾತ ಓರ್ವ ಸಾವು-ಓರ್ವ ಆಸ್ಪತ್ರಗೆ ದಾಖಲು

ಚಾಮರಾಜನಗರ : ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರರೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಸವಾರ ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ಮಲೆಯೂರು ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ಮಲೆಯೂರು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ರಸ್ತೆ ಅಪಘಾತವಾಗಿದ್ದು, ಬೈಕ್ ಸವಾರ ಶಿವಸ್ವಾಮಿ ಆಲಿಯಾಸ್ ಪುಟ್ಟ (30) ಎಂಬಾತನಿಗೆ ತೆಲೆಗೆ ತೀತ್ರವಾದ ಪೆಟ್ಟಾಗಿ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟನು. ಮತ್ತೊಬ್ಬ ಸವಾರನಿಗೆ ಪೆಟ್ಟಾಗಿದ್ದು, ಆಂಬುಲೆನ್ಸ್ ಮೂಲಕ ಸಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

ರಸ್ತೆ ಅಪಘಾತವು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿ ತನಿಖೆ ಕಾರ್ಯ ಕೈಗೊಂಡಿದ್ದಾರೆ. #Chamarajanagar,#KSRTC,#RoadAccident,#BikeAccident,#BusAccident,#FatalAccident,#BreakingNews,#LocalNews,#TrafficAccident,#RoadSafety,#OneDead,#Injured,#Hospitalized,#RuralNews,#KarnatakaNews,#PoliceInvestigation,#AccidentNews,#PublicSafety

1 week ago | [YT] | 0

V News24 Kannada

ಚಾಮರಾಜನಗರ : ರಸ್ತೆ ಅಭಿವೃದ್ದಿ ಕಾರ್ಯದಲ್ಲೂ ಇದೀಗ ರಾಜಕಾರಣ ಆರಂಬವಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ರೋಡ್ ವರ್ಕ್ ವಾರ್ ನಡೆಯುತ್ತಿದ್ದು, ಬಿಜೆಪಿ –ಜೆಡಿಎಸ್ ನಡುವೆ ರೋಡ್ ವರ್ಕ್ ವಾರ್ ನಡೆಯುತ್ತಿದೆ.

ವಾ.ಓ: ಚಾಮರಾಜನಗರ ಜಿಲ್ಲೆಯ ಹನೂರು ವಿಧಾನ ಸಭಾಕ್ಷೇತ್ರದಲ್ಲಿ 2023 ರ ವಿಧಾನ ಸಭಾ ಚುನಾವಣಾ ಪೂರ್ವ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹನೂರು ವಿಧಾನ ಸಭಾ ಕ್ಷೇತ್ರದ ಅಂಡೆ ಕುರುಬನ ದೊಡ್ಡಿ ಗ್ರಾಮದ ಡಾಂಬರು ರಸ್ತೆ ಅಭಿವೃದ್ಧಿಗೆ ಎರಡು ಕೋಟಿ ಅನುದಾನ ಮಂಜೂರಾಗಿತ್ತು. ಆದರೆ ಕಾಮಗಾರಿ ಚಾಲನೆ ನೀಡುವ ಸಮಯದಲ್ಲಿ ಚುನಾವಣೆ ಘೋಷಣೆಯಾಗಿತ್ತು.

ಪ್ರಸ್ತುತ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಜೆ.ಡಿ.ಎಸ್. ನಿಂದ ಎಂ.ಆರ್. ಮಂಜುನಾಥ್ ಶಾಸಕರಾಗಿದ್ದು, ಇತ್ತೀಚೆಗೆ ಅಂಡೆಕುರುಬನ ದೊಡ್ಡಿ ರಸ್ತೆಗೆ ಭೂಮಿ ಪೂಜೆ ಮಾಡಿದ್ದರು. ಆದರೆ ಮಾಧ್ಯಮಗಳಲ್ಲಿ ಡಾಂಬರ್ ರೋಡ್ ಮಾಡುವ ಬದಲು ಮೆಟ್ಲಿಂಗ್ ಮಾತ್ರ ಎಂದು ವರದಿಯಾಗಿದ್ದು, ಬಿಜೆಪಿ – ಜೆಡಿಎಸ್ ನಡುವೆ ರೋಡ್ ವರ್ಕ್ ವಾರ್ ಗೆ ಕಾರಣವಾಗಿದೆ.

ಡಾಂಬರು ರಸ್ತೆ ನಿರ್ಮಾಣ ಮಾಡಬೇಕು ಮೆಟ್ಲಿಂಗ್ ರಸ್ತೆ ನಿರ್ಮಾಣ ಬೇಡ ಎಂದು ಮುನಿಶೆಟ್ಟಿಗುಡಿ ದೊಡ್ಡಿ ಹಾಗೂ ಅಂಡೆ ಕುರುಬನ ದೊಡ್ಡಿ ಗ್ರಾಮಸ್ಥರು ಬಿಜೆಪಿ ಯುವ ಮುಖಂಡ ನಿಶಾಂತ್ ರವರ ನೇತೃತ್ವದಲ್ಲಿ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸುವ ಮೂಲಕ ಹೈ ಡ್ರಾಮ ನಡೆಯಿತು.

2 weeks ago | [YT] | 5

V News24 Kannada

ಆಕಸ್ಮಿಕ ಬೆಂಕಿಗೆ ಸುಟ್ಟ ಹೋದ ಪಶು ಆಸ್ಪತ್ರೆ

ಶಿರಹಟ್ಟಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿಕೊಂಡ ಪರಿಣಾಮ ಬೆಂಕಿಗೆ ಪಶು ಆಸ್ಪತ್ರೆಯ ಒಳಾಂಗಣದ ಮೇಲ್ಚಾವಣಿ ಹಾಗೂ ಪಶುಗಳಿಗೆ‌ ನೀಡಲು ಸರ್ಕಾರದಿಂದ ಬಂದ ಅಪಾರ ಪ್ರಮಾಣದ ಔಷಧಿಗಳು ಕೂಡಾ ಬೆಂಕಿಗೆ ಆಹುತಿಯಾಗಿವೆ.

ಹೌದು... ಪಟ್ಟಣದಲ್ಲಿ ಇರುವ ಪಶು ಆಸ್ಪತ್ರೆಯು ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿಕೊಂಡು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ.

ವರದಿ: ವೀರೇಶ್ ಗುಗ್ಗರಿ

2 weeks ago | [YT] | 9

V News24 Kannada

ಚಾಮರಾಜನಗರ : ಆಕಸ್ಮಿಕವಾಗಿ ಮನೆಯಲ್ಲಿ ಶಾಕ್ ಸರ್ಕ್ಯೂಟ್ ಆಗಿ ಮನೆಯಲ್ಲಿದ್ದ ವಸ್ತುಗಳು ಭಸ್ಮವಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಂಡಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಬಂಡಳ್ಳಿ ಗ್ರಾಮದ ಜಯಲಕ್ಷ್ಮಿ ರವರಿಗೆ ಸೇರಿದ ಮನೆಯಲ್ಲಿ ಶನಿವಾರ ಬೆಳಗ್ಗೆ ಶಾಕ್ ಸರ್ಕ್ಯೂಟ್ ಸಂಭವಿಸಿ, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಯಿತು.

ಅದೃಷ್ಟವಷಾತ್ ಮನೆಯಲ್ಲಿದ್ದ 8 ತಿಂಗಳ ಮಗು ಪಾರಾಗಿದೆ. ಜಯಲಕ್ಷ್ಮಿ ರವರು ಇದೀಗ ಮನೆಯನ್ನು ಕಳೆದುಕೊಂಡು ಗೋಳಾಡುತ್ತಿದ್ದಾರೆ.

ಮನೆಗೆ ಬೆಂಕಿ ಕಾಣಿಸಿಕೊಂಡ ಕೂಡಲೇ ನೆರೆ ಹೊರೆಯವರು ಬೆಂಕಿ ನಂದಿಸುವ ಕಾರ್ಯ ಮಾಡಿದರೂ ಮನೆ ಭಸ್ಮವಾಗಿದೆ.

2 weeks ago | [YT] | 0

V News24 Kannada

ಮುಂಬೈ ದಾಳಿಯ ನೆನಪಿಗಾಗಿ ಯಲಹಂಕ ರೋಟರಿ ಕ್ಲಬ್ ಆಯೋಜಿಸಿದ್ದ ಮೇಣದಬತ್ತಿ ಮೆರವಣಿಗೆ, ಯಲಹಂಕ ಹೊಸ ಪಟ್ಟಣದಲ್ಲಿ Rotaract club Yelahanka,CRPF, NCC, ಮತ್ತು BSF ಸೈನಿಕರು ಭಾಗವಹಿಸಿದ್ದರು.

2 months ago | [YT] | 3

V News24 Kannada

ಮುಂಬೈ ದಾಳಿಯ ನೆನಪಿಗಾಗಿ ಯಲಹಂಕ ರೋಟರಿ ಕ್ಲಬ್ ಆಯೋಜಿಸಿದ್ದ ಮೇಣದಬತ್ತಿ ಮೆರವಣಿಗೆ, ಯಲಹಂಕ ಹೊಸ ಪಟ್ಟಣದಲ್ಲಿ Rotaract club Yelahanka,CRPF, NCC, ಮತ್ತು BSF ಸೈನಿಕರು ಭಾಗವಹಿಸಿದ್ದರು.

2 months ago | [YT] | 3

V News24 Kannada

ಮುಂಬೈ ದಾಳಿಯ ನೆನಪಿಗಾಗಿ ಯಲಹಂಕ ರೋಟರಿ ಕ್ಲಬ್ ಆಯೋಜಿಸಿದ್ದ ಮೇಣದಬತ್ತಿ ಮೆರವಣಿಗೆ, ಯಲಹಂಕ ಹೊಸ ಪಟ್ಟಣದಲ್ಲಿ Rotaract club Yelahanka,CRPF, NCC, ಮತ್ತು BSF ಸೈನಿಕರು ಭಾಗವಹಿಸಿದ್ದರು.

2 months ago | [YT] | 1

V News24 Kannada

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಜಿನಕನಹಳ್ಳಿ ಗ್ರಾಮದಲ್ಲಿ ಮನೆಯೊಂದರ ಬಾಗಿಲನ್ನು ಜಖಂ ಮಾಡಿ ದುರ್ಷ್ಕಮಿಗಳು ಒಳನುಗ್ಗಿ 8 ಲಕ್ಷ ನಗದು, 118 ಗ್ರಾಮ್ ಚಿನ್ನಾಭರಣ ಹಾಗೂ 750 ಗ್ರಾಮ್ ಬೆಳ್ಳಿ ಪದಾರ್ಥಗಳನ್ನು ಕಳ್ಳತನ ಮಾಡಿರುವ ಘಟನೆ ನೆನ್ನೆ ರಾತ್ರಿ ಜರುಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ
ಜಿನಕನಹಳ್ಳಿ ಗ್ರಾಮದ ರಾಚೇಗೌಡ ರವರ ಮಗ ಗಾರೆಕೆಲಸ ಕಾರ್ಮಿಕ ಶಿವಣ್ಣ ಎನ್ನುವರ ಮನೆಯಲ್ಲಿ ಕಳ್ಳತನ ನಡೆದಿರುವುದು. ಈತ ಮನೆಯ ಬಾಗಿಲು ಹಾಕಿಕೊಂಡು ತನ್ನ ಹೆಂಡತಿ ರಾಜಮ್ಮ ಜೊತೆ ನ.22 ರಂದು ಬೆಂಗಳೂರಿನಲ್ಲಿದ್ದ ಶಬರಿಮಲೆ ದೇವಸ್ಥಾನಕ್ಕೆ ಹೋಗಲು ಮಗ ರಾಜೇಶ್ ಮನೆಗೆ ಹೋಗಿದ್ದಾಗ ಜಿನಕನಹಳ್ಳಿ ಮನೆಯಲ್ಲಿ ಯಾರು ಇಲ್ಲದಿರುವ ಗಮನಿಸಿದ್ದ ಯಾರೋ ಕಳ್ಳರು ಇವರ ಮನೆಯ ಬಾಗಿಲು ಮುರಿದು ರೋಮ್ ನಲ್ಲಿನಬೀರುನಲ್ಲಿಟ್ಟಿದ್ದ ಚಿನ್ನಾಭರಣ, ಬೆಳ್ಳಿ ಪದಾಧಿಕಾರಿಗಳು ಹಾಗೂ ನಗದನ್ನು ಕಳ್ಳತನ ಮಾಡಿ ಪರಾರಿಯಾಗಿರುತ್ತಾರೆ.

ಮಂಗಳವಾರ ಬೆಳಿಗ್ಗೆ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ್ದ ಅಕ್ಕಪಕ್ಕದ ಮನೆಯವರು 112 ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಚಲುವರಾಜು, ಹೆಡ್ ಕಾನ್ಸಟೇಬಲ್ ವಿನೋದ್, ಸೋಮಶೇಖರ್ ತೆರಳಿ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚುದಾರರನ್ನು ಕರೆಯಿಸಿ ಮಹಜರ್ ನಡೆಸಿದ್ದಾರೆ.

ಈ ಸಂಬಂಧ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕಳ್ಳರ ಪತ್ತೆಗೆ ಕ್ರಮಜರುಗಿಸಿದ್ದಾರೆ. #vnews24kannada

2 months ago | [YT] | 1

V News24 Kannada

ಬೀದಿ ನಾಯಿಗಳಿಗೆ ಆಹಾರವಾಗಬೇಕಿದ್ದ ಅಪರೂಪದ ಉಡ ರಕ್ಷಣೆ

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ಬೀದಿನಾಯಿಗಳಿಂದ ಉಡವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ಮೆಲ್ಲಹಳ್ಳಿ ಗ್ರಾಮದ ಮಲ್ಲು ಎಂಬುವವರ ಮನೆಯೊಳಗೆ ಬೀದಿ ನಾಯಿಗಳ ಉಪಟಳದಿಂದ ಪಾರಾಗಿ ಬಂದು ಸೇರಿಕೊಂಡಿದ್ದ ಉಡವನ್ನು ಸಂತೇಮರಹಳ್ಳಿ ಸ್ನೇಕ್‌ ಮಹೇಶ್‌ ರವರು ರಕ್ಷಣೆ ಮಾಡಿದರು.

ಮಲ್ಲಹಳ್ಳಿ ಗ್ರಾಮದ ಮಲ್ಲು ರವರ ಮನೆಯಯೊಳಗೆ ಉಡ ಬಂದಿರುವ ಸುದ್ದಿಯನ್ನು ಉರಗ ತಜ್ಞ ಮಹೇಶ್‌ ರವರಿಗೆ ದೂರವಾಣಿ ಮೂಲಕ ತಿಳಿಸಿದಾಗ, ಸ್ಥಳಕ್ಕೆ ಬಂದ ಸ್ನೇಕ್‌ , ಉಡವನ್ನು ಹಿಡಿದು, ಸುರಕ್ಷಿತವಾಗಿ ಕಾಡಿನೊಳಗೆ ಬಿಟ್ಟಿದ್ದಾರೆ.

2 months ago | [YT] | 3