🌺🌸ಸ್ವಾಮಿಕೊರಗಜ್ಜ🌸🌺
Don't just be a viewer Be a supporter.
ನಲ್ಮೆಯ ಓದುಗರಿಗೆ ನನ್ನ ನಮಸ್ಕಾರ.ನಾನೊಬ್ಬಳು ಹವ್ಯಾಸ ಬರಹಗಾರ್ತಿ. ಪ್ರಸ್ತುತವಾಗಿ ಪ್ರತಿಲಿಪಿ ಅಪ್ಲಿಕೇಶನ್ನಲ್ಲಿ ಬರೆಯುತ್ತಿದ್ದೇನೆ. ಈ ಚಾನೆಲ್ ನಲ್ಲಿ ಪ್ರಕಟವಾಗುವ ಎಲ್ಲಾ ಬರಹಗಳು ನನ್ನ ಕಲ್ಪನೆಯಲ್ಲಿ ಮೂಡಿ ಬಂದ ಸ್ವಂತ ರಚನೆ.ವಾಸ್ತವದಲ್ಲಿ ಅಸಾಧ್ಯವಾದದನ್ನ ಕಲ್ಪನೆಯ ಲೋಕದಲ್ಲಿ ಪದಗಳಿಗೆ ಜೀವ ನೀಡಿ ಸಂಭ್ರಮಿಸುವವಳು ನಾನು. ಈ ಕಾಲಕ್ಕೆ ಅನುಗುಣವಾಗುವಂತೆ ಕಥೆಗಳನ್ನ ಹೆಣೆದು ನಿಮ್ಮ ಮುಂದೆ ಇಡುತ್ತಿದ್ದೇನೆ.ಕಥೆಯನ್ನ ಕಥೆಯಾಗೇ ಸ್ವೀಕರಿಸಿ.ನಿಜ ಜೀವನಕ್ಕೆ ಹೋಲಿಕೆ ಮಾಡಲು ಹೋಗಬೇಡಿ.ಕಥೆ ಇಷ್ಟವಾಗಿದ್ದಲಿ ಓದಿ ಪ್ರೋತ್ಸಾಹಿಸಿ ಹಾಗೂ ತಪ್ಪದೇ ಸಬ್ಸ್ಕ್ರೈಬ್🔔 ಮಾಡಿ 🤗.
SUSMITHA NAIK ANANTHADY
ತುಳುವೆದಿ ಫ್ರಮ್ ಕರ್ನಾಟಕ 💥
ಭಾನುವಾರ ಯಾವುದೇ ವಿಡಿಯೋಗಳು ಅಪ್ಲೋಡ್ ಆಗುವುದಿಲ್ಲ.
I started to upload video From = 28/10/2024💥
500 Subscribers =3/2/2025
1000 Subscribers =4/10/2025
ನನ್ನ ಪ್ರತಿಲಿಪಿ ಲಿಂಕ್ ಅಥವಾ ಇನ್ಸ್ಟಾಗ್ರಾಮ್ ಲಿಂಕ್ ಓಪನ್ ಆಗದೇ ಇದ್ದಲ್ಲಿ ಪ್ರತಿಲಿಪಿಯಲ್ಲಿ ನನ್ನ ಕಥೆಯ ಶೀರ್ಷಿಕೆಯನ್ನ ಹುಡುಕಿ ನನ್ನ ಅಕೌಂಟ್ ನ ಕಂಡು ಹಿಡಿಯಬಹುದು. ಅದು ಸಾಧ್ಯ ಆಗದೇ ಇದ್ದಲ್ಲಿ sushmitha kn ಅಂತ ಸರ್ಚ್ ಮಾಡಿ ಸಿಗುತ್ತದೆ. Smitha87158 ಇದು ಇನ್ಸ್ಟಾಗ್ರಾಮ್ ಖಾತೆಯ ಹೆಸರು.
ಕಥಾಕಣಜ ಸ್ಮಿತಾ
ಹಾಯ್ 🥰ಇವತ್ತಿನಿಂದ ನಿಮ್ಮೆಲ್ಲರ ಅಪೇಕ್ಷೆಯ ಮೇರೆಗೆ ಮತ್ತೇ ವಿಡಿಯೋ ಅಪ್ಲೋಡ್ ಮಾಡ್ತೀನಿ. ಒಲವೋ ಛಲವೋ ಕಥೆಯ 22 ನೇ ಎಪಿಸೋಡ್ ಇವತ್ತು ಅಪ್ಲೋಡ್ ಆಗುತ್ತೆ. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಖಂಡಿತ ಇರುತ್ತೆ ತಾನೇ. ಹಾಗೇ ಮಂಡ್ಯದ ಹುಡುಗ ಧೀರು ಜಂಭದ ಕೋಳಿ ದೀಪಳ ಕೊಬ್ಬು ಇಳಿಸೋಕೆ ಮತ್ತೇ ಬರ್ತಾ ಇದ್ದಾನೆ. ಅವರಿಗೆ ನಿಮ್ಮೆಲ್ಲರ ಪ್ರೀತಿ ಅಭಿಮಾನ ಬೇಕಾಗಿದೆ. 🤗
1 month ago | [YT] | 8
View 0 replies
ಕಥಾಕಣಜ ಸ್ಮಿತಾ
ಎಲ್ಲರಿಗೂ ನಮಸ್ಕಾರ ಹೇಗಿದ್ದೀರ ಎಲ್ಲಾ. ವಿಡಿಯೋ ಅಪ್ಲೋಡ್ ಮಾಡದೇ ಸುಮಾರು ಮೂರು ತಿಂಗಳೇ ಕಳೆಯಿತು. ಅಂದಹಾಗೆ ದೀಪು ಧೀರುನ ಮರೆತಿದ್ದೀರಾ ಹೇಗೆ? ನೀವು ಓಕೇ ಅಂದರೆ ನಾನು ಜುಲೈ ತಿಂಗಳಿಂದ ಮತ್ತೇ ಸ್ಟೋರಿ ವಿಡಿಯೋ ವಿತ್ ವಾಯ್ಸ್ ನಲ್ಲೆ ಅಪ್ಲೋಡ್ ಮಾಡೋದಕ್ಕೆ ಸ್ಟಾರ್ಟ್ ಮಾಡ್ತೀನಿ. ನಿಮ್ಮ ಪ್ರೋತ್ಸಾಹ ಖಂಡಿತ ಇರುತ್ತೆ ತಾನೇ?!ಏನೇ ಗೊಂದಲ ಪ್ರಶ್ನೆ ಇದ್ರು ಕಾಮೆಂಟ್ ಸೆಕ್ಷನ್ ನಲ್ಲಿ ತಿಳಿಸಿ ಹಾಗೇ ಅನಿಸಿಕೆ ಅಭಿಪ್ರಾಯ ನ poll ನಲ್ಲಿ ಹೇಳಿ.
1 month ago | [YT] | 9
View 1 reply
ಕಥಾಕಣಜ ಸ್ಮಿತಾ
ಮನಸ್ಸು ಅಕ್ಷರಗಳ ಲೋಕದಲ್ಲಿದ್ದರೆ, ಬದುಕು ಈಗ ಕೆಲಸದ ಕಡತಗಳ ನಡುವೆ ಇದೆ!!
ಪುಸ್ತಕ ಮಸ್ತಕ ಎರಡೂ ಸಧ್ಯದ ಪರಿಸ್ಥಿತಿಯಲ್ಲಿ ಮೌನವಾಗಿದೆ.!
ಬೆರಳುಗಳಿಗೆ ವಿರಾಮ ನೀಡಿರುವೆ ಹೊರತು ಕಲ್ಪನಾ ಲೋಕದಲ್ಲಿ ಹುಟ್ಟುವ ಸಾವಿರಾರು ಭಾವನೆಗಳಿಗೆ ವಿದಾಯ ನೀಡಿಲ್ಲ.!
ವೃತ್ತಿ ಪ್ರವೃತ್ತಿ ಎರಡನ್ನೂ ನಿಭಾಯಿಸಿಕೊಂಡು ಹೋಗುವುದು ಸ್ವಲ್ಪ ಕಷ್ಟವಾಗಿದೆ ಅಷ್ಟೇ!!!!
ಹಲವಾರು ಉತ್ತಮ ಕಥಾವಸ್ತು ಹಾಗೂ ಲೇಖನಗಳ ಜೊತೆಗೆ ಆದಷ್ಟು ಮರಳಿ ಬರುತ್ತೇನೆ!!
ಹೊಸ ಅನುಭವದ ಜೊತೆಗೆ.!!!!
ನನ್ನ ಮುಖ ಪರಿಚಯವಿಲ್ಲದಿದ್ದರೂ ನನ್ನ ದನಿಯ ಮೂಲಕ ನಿಮ್ಮ ಹೃದಯಕ್ಕೆ ಹತ್ತಿರವಾಗಿದ್ದೆ.!
ನನ್ನ ಕಾದಂಬರಿಯ ಪ್ರತಿ ಸಾಲುಗಳಿಗೂ ನನ್ನ ಉಸಿರನ್ನೇ ಧ್ವನಿಯಾಗಿಸಿ ನಿಮ್ಮ ಮುಂದೆ ತಂದಿದ್ದೆ.
ಈಗ ವೃತ್ತಿ ಬದುಕಿನ ಹೊಸ ಜವಾಬ್ದಾರಿಯಿಂದಾಗಿ ಆ ದನಿ ತುಸು ಮೌನವಾಗಿದೆ ಅಷ್ಟೇ. ನೆನಪಿರಲಿ, ಅಕ್ಷರಗಳು ಸಾಯುವುದಿಲ್ಲ!!
"I am taking a short break from my Writing and my YouTube channel."
4 months ago | [YT] | 13
View 0 replies
ಕಥಾಕಣಜ ಸ್ಮಿತಾ
ಒಲವೋ ಛಲವೋ ಕಥೆ ಇಂದಿನಿಂದ ಮತ್ತೇ ಪ್ರಾರಂಭವಾಗುತ್ತದೆ. ನಿಮ್ಮ ಪ್ರೋತ್ಸಾಹ ಹಾಗೇ ಇರಲಿ. ಅಂದಹಾಗೆ ಕಥೆ ಮರೆತಿಲ್ಲ ತಾನೇ? ❤️
4 months ago | [YT] | 6
View 0 replies
ಕಥಾಕಣಜ ಸ್ಮಿತಾ
ಒಲವೋ ಛಲವೋ ಕಥೆಯನ್ನ ಮಿಸ್ ಮಾಡಿಕೊಳ್ತಾ ಇದ್ದೀರಾ? ನಾನು ಸ್ವಲ್ಪ ಬ್ಯುಸಿ ಇದ್ದೇನೆ. ಇನ್ಮುಂದೆ ಕಥೆಗಳು ವಿತ್ ವಾಯ್ಸ್ನಲ್ಲಿ ಡೈಲಿ ಅಪ್ಲೋಡ್ ಆಗೋದು ಡೌಟ್. ನಿಮಗೆಲ್ಲ ಓಕೆ ಅಂದ್ರೆ ಸಮಯ ಸಿಕ್ಕಾಗ ವಿತ್ ವಾಯ್ಸ್ನಲ್ಲಿ. ಉಳಿದ ದಿನಗಳಲ್ಲಿ ವಿಥೌಟ್ ವಾಯ್ಸ್ ಡೈಲಿ ಅಪ್ಲೋಡ್ ಮಾಡೋಣ ಅಂತಿದ್ದೀನಿ. ನಿಮ್ಮನಿಸಿಕೆ?
4 months ago | [YT] | 8
View 0 replies
ಕಥಾಕಣಜ ಸ್ಮಿತಾ
ಹಾಯ್ ❤️. ನಿನ್ನೆ ರಾತ್ರಿ ಪೂರಾ ಭಯಂಕರ ಗುಡುಗು ಮಳೆ. ಹಾಗಾಗಿ ವಿಡಿಯೋ ಮಾಡೋಕೆ ಸಾಧ್ಯ ಆಗಲಿಲ್ಲ. ಸೋ ಇವತ್ತು ಒಲವೋ ಛಲವೋ ಕಥೆ ಬರಲ್ಲ. ನಾಳೆ ಅಪ್ಲೋಡ್ ಮಾಡ್ತೀನಿ. ಅಂದಹಾಗೆ ಕಥೆ ಹೇಗೆ ಬರ್ತಿದೆ.?
4 months ago | [YT] | 9
View 0 replies
ಕಥಾಕಣಜ ಸ್ಮಿತಾ
ಹಾಯ್ ❤️. ಒಲವೋ ಛಲವೋ ಕಥೆ ಹೇಗೆ ಬರುತ್ತಿದೆ? ನಿಮ್ಮ ಸಪೋರ್ಟ್ ಯಾರಿಗೆ ದೀಪಳಿಗಾ ಧೀರಜ್ಗ? ಹಾಗೇ ಇಷ್ಟು ಕಥೆಗಳಲ್ಲಿ ಯಾವ ಕಥಾನಾಯಕ ನಿಮ್ಮ ಫೆವರೇಟ್?
4 months ago | [YT] | 9
View 0 replies
ಕಥಾಕಣಜ ಸ್ಮಿತಾ
ಹೆಚ್ ಜಿ ರಾಧಾದೇವಿಯವರ ಅದ್ಭುತವಾದ ಕಾದಂಬರಿ 'ಚೈತ್ರ ಚಂಚಲ. ' ಇವರ ಎಲ್ಲಾ ಕಾದಂಬರಿಗಳ ಹಾಗೇ ಇದು ಕೂಡ ಸಾಮಾಜಿಕ ಕಾದಂಬರಿ. ಬರವಣಿಗೆ ಶೈಲಿ ಸರಳವಾಗಿದ್ದು ಓದುಗರ ಮನಸಿಗೆ ಬಹಳ ಬೇಗ ಮುಟ್ಟಿ ಬಿಡುತ್ತದೆ. ಶೀರ್ಷಿಕೆಯೇ ಸೂಚಿಸುವ ಹಾಗೇ ಎರಡು ತದ್ವಿರುದ್ಧ ಗುಣದ ಅಕ್ಕತಂಗಿಯರ ಅಪೂರ್ವವಾದ ಕಥೆ ಇದು. ಚೈತ್ರ ಸಾಧು ಸ್ವಭಾವದವಳಾಗಿದ್ದು ಸ್ವಾಭಿಮಾನದ ಜೀವನ ನಡೆಸುತ್ತ ಸಂಬಂಧಗಳನ್ನ ಗೌರವಿಸುವವಳು ಆದರೆ ಚಂಚಲ ಹೆಸರಿಗೆ ತಕ್ಕ ಹಾಗೇ ಚಂಚಲ ಸ್ವಭಾದವಳಾಗಿದ್ದು ಪುರುಷ ಸಮಾಜದ ಮೇಲೆ ಒಂದು ಬಗೆಯ ವ್ಯತಿರಿಕ್ತ ಯೋಚನೆ ಹೊಂದಿರುವ ಹೆಣ್ಣು. ಜೊತೆಗೆ ರೂಪದರ್ಶಿ.ಎಲ್ಲಾ ಗಂಡುಗಳು ಹೆಣ್ಣಿನ ಜೀವನದಲ್ಲಿ ಆಟವಾಡಿದರೆ ಚಂಚಲ ಅಂಥ ಗಂಡುಗಳ ಜೀವನದ ಜೊತೆಗೆ ಚೆಲ್ಲಾಟ ಆಡಿ ತನಗೆ ಬೇಕಾದದ್ದನ್ನ ಯಾವ ರೀತಿಯಿಂದಲೂ ಪಡೆದುಕೊಳ್ಳುವ ಜಾಣ್ಮೆ ಇರುವ ಹೆಣ್ಣು.ಕಥೆಯ ಕೊನೆಗೆ ಚಂಚಲಳ ಇದೆ ಬುದ್ಧಿಯಿಂದ ಮಾರಕ ಖಾಯಿಲೆ ಬಂದು ಮರಣವನ್ನಪ್ಪಿದರೆ ತಂಗಿಯ ಆಸೆಯ ಹಾಗೆಯೇ ಚೈತ್ರ 'ಚೈತ್ರ ಚಂಚಲ 'ಎಂಬ ನರ್ಸಿಂಗ್ ಹೋಮ್ ತೆರೆದು ಅದೆಷ್ಟೋ ಜನರ ಪಾಲಿಗೆ ಆಶಾ ಕಿರಣವಾಗುತ್ತಾಳೆ. ಜೊತೆಗೆ ಹೊಸ ಜೀವನವನ್ನು ಕಟ್ಟಿಕೊಳ್ಳುತ್ತಾಳೆ.ಬಹಳ ಅದ್ಭುತವಾದ ಕಾದಂಬರಿ. ನಡು ನಡುವೆ ಹಲವಾರು ರಹಸ್ಯಗಳ ತೆರೆಯುವಿಕೆ, ಸಂಘರ್ಷ ಎಲ್ಲವೂ ಇಲ್ಲಿದೆ. ಅವಕಾಶ ಸಿಕ್ಕಾಗ ಓದಿ ಬಿಡಿ.
4 months ago | [YT] | 12
View 0 replies
ಕಥಾಕಣಜ ಸ್ಮಿತಾ
ಫಾತಿಮಾ ರಲಿಯಾರವರ ಮತ್ತೊಂದು ಕಥಾ ಸಂಕಲನ 'ಒಡೆಯಲಾರದ ಒಡಪು '.ಈ ಕಥಾಸಂಕಲನದಲ್ಲಿ ಒಟ್ಟು ಹನ್ನೆರಡು ಸಣ್ಣಕಥೆಗಳಿದ್ದು ಎಲ್ಲವೂ ವಾಸ್ತವಿಕ ನೆಲೆಗಟ್ಟಿನ ವಿಷಯಗಳನ್ನೇ ಒಳಗೊಂಡಿದೆ. ಎಲ್ಲೂ ಅತಿಯಾದ ಎಳೆಯುವಿಕೆ ಇಲ್ಲ. ಚುಟುಕಾದ ಚೊಕ್ಕದಾದ ಸಂಭಾಷಣೆ. ಸರಳವಾದ ಕಥಾವಸ್ತುಗಳು. ಆದರೆ ಸಾರುವ ಸಂದೇಶ ಮಾತ್ರ ಅದ್ಭುತ. ಅದರಲ್ಲೂ ' ನವಿಲು ಬಣ್ಣದ ಸೀರೆ, ಸಂಕರನ ಹಸು ಕರು ಹಾಕಿತು, ಉಮ್ಮನ ಅಲಿಕತ್ತ್, ಖಬರ್ಸ್ತಾನ, ಆವರ್ತ 'ಬಹಳ ಅಮೋಘವಾದ ಕಥೆಗಳು. ಕಥೆ ಅನ್ನುವುದಕ್ಕಿಂತ ನಮ್ಮ ಸುತ್ತಮುತ್ತಲಿನಲ್ಲಿ ಘಟಿಸುವ ಘಟನಾವಳಿಗಳು. ಸ್ನೇಹಕ್ಕೆ ಧರ್ಮದ ಹಂಗಿಲ್ಲ ಎಂದು ಸಾರುವ 'ಖಬರ್ಸ್ತಾನ ' ಕಥೆಯ ಸ್ನೇಹಿತರು ಖಾಸಿಂ ಹಾಗೂ ಬಸಯ್ಯ. ಐಸಮ್ಮಳ ಉದಾರತೆ... ಒಂದೇ ಎರಡೇ. ಒಟ್ಟಿನಲ್ಲಿ ಉತ್ತಮವಾದ ಕಥಾ ಪುಸ್ತಕ. ಎಂದಾದರು ಕಣ್ಣಿಗೆ ಬಿದ್ದರೆ ಓದಿ ಬಿಡಿ.
4 months ago | [YT] | 4
View 0 replies
ಕಥಾಕಣಜ ಸ್ಮಿತಾ
ಫಾತಿಮಾ ರಲಿಯಾರವರ ಕವಿತೆಗಳ ಆಗರ "ಅವಳ ಕಾಲು ಸೋಲದಿರಲಿ ". ನನಗೆ ಅವರ ಕಡೆಯಿಂದ ಸಿಕ್ಕ ಪ್ರೀತಿಯ ಉಡುಗೊರೆ ಇದು.ಈ ಪುಸ್ತಕದೊಗೆ ಸುಮಾರು 30 ಕವಿತೆಗಳ ಹೂರಣ ಇದ್ದು ಎಲ್ಲವೂ ಒಂದಕ್ಕೊಂದು ಅದ್ಭುತವಾದ ಪ್ರಬುದ್ಧತೆಯಿಂದ ಕೂಡಿದ ಸಾಲುಗಳು.ಅದರಲ್ಲೂ 'ಹೇಳು ಶಕುಂತಲೇ 'ಕವಿತೆಯ ನಡುವಲ್ಲಿ ಬರೆದ 'ನೆನಪೇ ಇಲ್ಲವೆಂದಿದ್ದವನ ತೋಳ ತೆಕ್ಕೆಯಲ್ಲಿ ಕರಗಿಹೋಗಬೇಕಾಗಿ ಬಂದಾಗ ನಿನ್ನ ಸ್ವಾಭಿಮಾನ ಪ್ರತಿಭಟಸಲಿಲ್ಲವೇ?!' ಈ ಸಾಲುಗಳು ನನ್ನ ಮನಸಿಗೆ ನಾಟಿದ್ದು ಸುಳ್ಳಲ್ಲ. ಎಲ್ಲೂ ಕ್ಲೀಷೆ ಆಗದ ಹಾಗೇ ಯಾರ ಭಾವನೆಗೂ ಧಕ್ಕೆ ಬಾರದ ಹಾಗೇ ಪದಗಳ ಪೋಣಿಸಿ ಬರೆದ ಲೇಖಕಿಯವರ ಜಾಣ್ಮೆಯನ್ನ ಮೆಚ್ಚಲೇ ಬೇಕು. ಈ ಪುಸ್ತಕ ನನ್ನ ಮನಸಿಗೆ ಮುದ ನೀಡುವ ಜೊತೆಗೆ ಇನ್ನಷ್ಟು ಕನ್ನಡದ ಸುಂದರ ಪದಗಳ ಪರಿಚಯವನ್ನೂ ಮಾಡಿಸಿತು. ನಿಮ್ಮ ಸಂದರ್ಶನ ಮಾಡಲು ನನಗೆ ಅವಕಾಶ ದೊರೆತದ್ದು ನನ್ನ ಸೌಭಾಗ್ಯ.!!!
4 months ago | [YT] | 11
View 0 replies
Load more