@ಪ್ರವಾದಿ_ವಚನಗಳು

@ಪ್ರವಾದಿ_ವಚನಗಳು

♡ ㅤ ❍ㅤ ⎙ㅤ ⌲
ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ

• @ಪ್ರವಾದಿ_ವಚನಗಳು ಗ್ರೂಪಿನ ಫಾಲೋವರ್ ಆಗಿದ್ದರೆ ತಪ್ಪದ ನಮ್ಮ ಯುಟ್ಯೂಬ್ ಚಾನೆಲ್ ಅನ್ನು ತಪ್ಪದೆ ಸಬ್ಸ್ಕ್ರೈಬ್ ಮಾಡಿ ಹಾಗೂ ಪಕ್ಕದಲ್ಲಿರುವ ಬೆಲ್ ಐಕಾನ್ ಅನ್ನು ಒತ್ತಿ

👇👇👇👇👇👇👇👇👇👇
youtube.com/@pravadi_vachanagalu
youtube.com/@pravadi_vachanagalu
youtube.com/@pravadi_vachanagalu


@ಪ್ರವಾದಿ_ವಚನಗಳು

ಪಾವನ ವಸಂತ
1501 🥹💚

8 hours ago | [YT] | 9

@ಪ್ರವಾದಿ_ವಚನಗಳು

ಮದೀನಾದ ರಾಜುಕುಮಾರ ಪುಣ್ಯ ಹಬೀಬ್ ರವರ ಮೇಲಿರುವ ಪ್ರೇಮ ಏಳಲಾಗದಷ್ಟು ವಿಶಾಲತೆ ಉಳ್ಳದ್ದು...🥹💚

ಇದಕ್ಕೊಂದು ಮೆಚ್ಚುಗೆಯ ಲೈಕ್ ಇರಲಿ:
👍👍👍👍👍👍👍👍👍👍👍👍

#nabi #madeena

1 day ago | [YT] | 54

@ಪ್ರವಾದಿ_ವಚನಗಳು

📚 *ಒಡುಕ್ಕತ್ತೆ ಪೊದನಾಸೆ*

`ನಾಫಿಹ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ :-`

ನನ್ನಲ್ಲಿ ಇಬ್ನ್ ಉಮರ್ ರಳಿಯಲ್ಲಾಹು ಅನ್ಹು ಹೇಳಿದರು :-

*ಓ ನಾಫಿಹ್....*‼️

ನನ್ನ ರಕ್ತದಲ್ಲಿ ಏರು ಪೇರು ಸಂಭವಿಸಿದೆ.
ಆದುದರಿಂದ ವಯಸ್ಕರಲ್ಲದ ಹಾಗೂ ಪುಟ್ಟ ಹುಡುಗನೂ ಅಲ್ಲದ ಹಿಜಾಮಗಾರರೊಬ್ಬರನ್ನು ಕರೆದು ಕೊಂಡು ಬಾ.
ಹಿಜಾಮದಲ್ಲಿ ಬರಕತ್ ಇದೆಯೆಂದು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದಾರೆ.ಗುರುವಾರ, ಸೋಮವಾರ,ಮಂಗಳವಾರ ನೀವು ಹಿಜಾಮ ನಡೆಸಿರಿ.
ಆ ದಿನ ಅಯ್ಯೂಬ್ ನೆಬಿಯ ರೋಗ ಅಲ್ಲಾಹನು ವಾಸಿ ಮಾಡಿದ್ದಾನೆ.ನೀವು ಶುಕ್ರವಾರ,ಶನಿವಾರ,ಆದಿತ್ಯವಾರ,ಬುಧವಾರ ಹಿಜಾಮ ನಡೆಸಬೇಡಿ.
ಬುಧವಾರದ ದಿನ ಅಯ್ಯೂಬ್ ನೆಬಿಗೆ ಅಲ್ಲಾಹನು ರೋಗ ನೀಡಿದ್ದಾನೆ.ಕುಷ್ಟ ರೋಗ ಮತ್ತು ಪಾಂಡು ರೋಗವು ಬುಧವಾರ ಹಗಲು ಅಥವಾ ರಾತ್ರಿಯಲ್ಲಿ ಅಲ್ಲದೆ ಬಂದಿಲ್ಲ.

[ವರದಿ ಇಮಾಮ್ ಹಾಕಿಮ್ 7481]

*ಬುಧವಾರ ದಿನ ಹಿಜಾಮಕ್ಕೆ ಉತ್ತಮವಲ್ಲ ಎಂದು ಹದೀಸ್ ನಿಂದ ಸ್ಪಷ್ಟ.*
ದಿವಸಗಳೆಲ್ಲವೂ ಅಲ್ಲಾಹನ ಸೃಷ್ಟಿಯೇ ಆಗಿದೆ.
*ಆದರೆ ಆ ದಿನದಲ್ಲಿ ಅಲ್ಲಾಹನು ಹಿಜಾಮದಲ್ಲಿ ಬರಕತ್ ನೀಡಿಲ್ಲ.*

ನಹ್ಸ್ ಬಗ್ಗೆ ಇಸ್ಲಾಮಿನ ನಿಲುವೇನು...❓❓

ಕಂಡದ್ದೆಲ್ಲವನ್ನೂ ನಹ್ಸ್ ಮಾಡುವುದು ಸರಿಯಾದ ಕ್ರಮವಲ್ಲ.
ನಹ್ಸ್ ಎಂಬುವುದು ಇಲ್ಲವೆಂದು ನಿಷೇಧಿಸುವುದೂ ಕೂಡಾ ಸರಿಯಲ್ಲ.

ಕೆಲವೊಂದು ದಿನಗಳಲ್ಲಿ ಇಂತಿಂತಹಾ ಕರ್ಮಗಳನ್ನು ನಡೆಸಬಾರದೆಂದು ಹದೀಸ್ ಗಳಲ್ಲಿ ವರದಿಯಾಗಿದೆ.ಇನ್ನು ಕೆಲವು ಕಶ್ಫ್ ಮೂಲಕ ಅಲ್ಲಾಹನ ಮಹಾತ್ಮರು ಹೇಳಿ ಕೊಟ್ಟಿದ್ದಾರೆ.
ಕರಮಾತ್,ಕಶ್ಫ್ ಅಂಗೀಕರಿಸುವರಿಗೆ ಮಾತ್ರ ಇದರಲ್ಲಿ ವಿಶ್ವಾಸವಿಡಲು ಸಾಧ್ಯ.

*ಹದೀಸುಗಳಲ್ಲಿ ವರದಿಯಾದ ಕೆಲವೊಂದು ಘಟನೆಗಳನ್ನು ನೋಡಿರಿ,*

*ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಗುರುವಾರ ಅಲ್ಲದ ದಿನದಲ್ಲಿ ಯಾತ್ರೆ ಹೋಗುವುದು ಕಡಿಮೆಯಾಗಿತ್ತು.*

[ಬುಖಾರಿ 2949]

*ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಗುರುವಾರ ಯಾತ್ರೆ ಹೊರಡುವುದನ್ನು ಇಷ್ಟಪಡುತ್ತಿದ್ದರು.*

[ಬುಖಾರಿ2950]

*ವಾರದ ದಿನದಲ್ಲಿ ಯಾವ ದಿನ ಬೇಕಾದರೂ ಯಾತ್ರೆ ಹೋಗಬಹುದು.*
ಆದರೆ ಗುರುವಾರ ಯಾತ್ರೆ ಹೊರಟರೆ ಅದರಲ್ಲಿ ಸ್ವಲ್ಪ ಬರಕತ್ ಇದೆ.
*ಉಳಿದ ದಿನದಲ್ಲಿ ಯಾತ್ರೆಯ ಬರಕತ್ ಕಡಿಮೆ ಎಂದರ್ಥ.*

7 ದಿನಗಳನ್ನು ಸೃಷ್ಟಿಸಿದ ಅಲ್ಲಾಹನೇ ಗುರುವಾರವನ್ನು ಸೃಷ್ಟಿಸಿದ್ದಾನೆ.
ಆದರೆ ಗುರುವಾರದ ಯಾತ್ರೆಯಲ್ಲಿ ಬರಕತ್ ನೀಡಿದ್ದಾನೆ.
ಗುರುವಾರಕ್ಕೆ ಅಪೇಕ್ಷಿಸಿ ಉಳಿದ ದಿನಗಳ ಯಾತ್ರೆಗೆ ಬರಕತ್ ಕಡಿಮೆ.
ಅದಕ್ಕೆ ನಹ್ಸ್ ಎಂದು ಹೇಳುವುದು.

📚 ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಈ ರೀತಿ ಪ್ರಾರ್ಥಿಸಿದರು....
ಅಲ್ಲಾಹನೇ ಪ್ರಭಾತದ ವೇಳೆ ನನ್ನ ಉಮ್ಮತ್ ಗೆ ನೀನು ಬರಕತ್ ನೀಡು.ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಯುದ್ಧಕ್ಕೆ ಸೈನ್ಯವನ್ನು ಪ್ರಭಾತದ ವೇಳೆ ಕಳುಹಿಸುತ್ತಿದ್ದರು.
ಸಖ್ರ್ ಎಂಬ ಸ್ವಹಾಬಿ ವ್ಯಾಪಾರಿ ಆಗಿದ್ದರು.
ಅವರು ಬೆಳಗ್ಗಿನ ಸಮಯದಲ್ಲಿ ವ್ಯಾಪಾರಕ್ಕೆ ಜನರನ್ನು ಕಳುಹಿಸುತ್ತಿದ್ದರು.ಆ ವ್ಯಾಪಾರದಲ್ಲಿ ಅವರಿಗೆ ತುಂಬಾ ಲಾಭದಾಯಕ ವ್ಯಾಪಾರವಾಗುತ್ತಿತ್ತು.

[ಅಬೂದಾವೂದ್4754]

ವಿವಾಹಕ್ಕೆ ಶುಕ್ರವಾರ ಉತ್ತಮ ದಿನವೆಂದು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದಾರೆ.`

`ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಖದೀಜಾ ಬೀವಿಯನ್ನು ಮತ್ತು ಆಯಿಶಾ ಬೀವಿಯನ್ನು ವಿವಾಹವಾದ ದಿನ ಶುಕ್ರವಾರ ಆಗಿತ್ತು.`

[ರೂಹುಲ್ ಬಯಾನ್ 4/9]

7 ದಿನದ ಪೈಕಿ ಶುಕ್ರವಾರ ವಿವಾಹಕ್ಕೆ ಮಹತ್ವ ನೀಡಲ್ಪಡಲಾಗಿದೆ.ಆ ದಿನದಲ್ಲಿ ವಿವಾಹವಾದರೆ ಬರಕತ್ ಹೆಚ್ಚು.
`ಉಳಿದ ದಿನದಲ್ಲಿ ವಿವಾಹವಾಗುವುದು ತಪ್ಪು ಎಂದರ್ಥವಲ್ಲ.`

*ನಹ್ಸ್ ನ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದವರು ಏನೇನೋ ನಹ್ಸ್ ನ ಬಗ್ಗೆ ಅರ್ಥ ಮಾಡಿ ಕೊಂಡಿದ್ದಾರೆ*

ಯಾರಾದರೂ ತಿಂಗಳ 17,19,21 ರ ದಿನಗಳಲ್ಲಿ ಹಿಜಾಮ ನಡೆಸಿದರೆ ಆತನ ಎಲ್ಲಾ ರೋಗವು ವಾಸಿಯಾಗುತ್ತದೆ.`

[ವರದಿ ಅಬೂದಾವೂದ್, 3863]

ತಿಂಗಳ 30 ದಿನಗಳೂ ಅಲ್ಲಾಹನ ಸೃಷ್ಟಿಯಾಗಿದ್ದರೂ 27 ದಿನಕ್ಕೆ ಇಲ್ಲದ ಮಹತ್ವ 17,19,21 ರ ದಿನಕ್ಕೆ ಅಲ್ಲಾಹನು ನೀಡಿದ್ದಾನೆ ಎಂದು ಈ ಹದೀಸ್ ನಿಂದ ಬಹಳ ಸ್ಪಷ್ಟ.

ರಮಳಾನ್ ತಿಂಗಳಲ್ಲಿ ಇಬಾದತ್ ಗೆ ಅತೀ ಮಹತ್ವವಿದೆ ಎಂದು ಎಲ್ಲರಿಗೂ ತಿಳಿದ ವಿಚಾರ.
12 ತಿಂಗಳನ್ನೂ ಸೃಷ್ಟಿಸಿದವನು ಅಲ್ಲಾಹನೇ ಆಗಿದ್ದನೆ.
ಆದರೆ 11 ತಿಂಗಳಿಗೆ ಇಲ್ಲದ ಮಹತ್ವ ರಮಳಾನ್ ತಿಂಗಳಿಗೆ ಅಲ್ಲಾಹನು ನೀಡಿದ್ದಾನೆ.

*ಶುಕ್ರವಾರ ದಿನ 7 ದಿನಗಳ ಪೈಕಿ ಉತ್ತಮ ದಿನ.*
ಪ್ರಾರ್ಥನೆಗೆ ಉತ್ತರ ಲಭಿಸುವ ದಿನವೆದು ಹದೀಸಿನಲ್ಲಿ ವರದಿಯಾಗಿದೆ.

ಉಳಿದ ದಿನದಲ್ಲಿ ಪ್ರಾರ್ಥನೆ ನಡೆಸಬಾರದು ಎಂದು ಅದಕ್ಕೆ ಅರ್ಥವಿಲ್ಲ.

ಶುಕ್ರವಾರ ಪ್ರಾರ್ಥನೆ ನಡೆಸಿದರೆ ಫಲ ಹೆಚ್ಚು.
`ಉಳಿದ ದಿನದಲ್ಲಿ ಫಲ ಕಡಿಮೆ ಎಂಬ ಅರ್ಥದಲ್ಲಿ ಅದನ್ನು ನಹ್ಸ್ ಎಂದೂ ಹೇಳಬಹುದಾಗಿದೆ.`

🔴 *ಒಡ್ಕತ್ತೆ ಪೊದನಾಸೆ*

`ಎಲ್ಲಾ ಹಿಜರಿ ತಿಂಗಳ ಕೊನೇ ಬುಧಾವರಕ್ಕೆ ಒಡ್ಕತ್ತೆ ಪೊದನಾಸೆ ಎಂದು ಹೇಳುತ್ತೇವೆ.`

`ತಿಂಗಳ ಕೊನೆಯ ಬುಧವಾರ ನಹ್ಸ್ ನ ದಿನವಾಗಿದೆ.`

[ಫತ್ ಹುಲ್ ಖದೀರ್ 7/79]

ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಸಫರ್ ತಿಂಗಳ ಕೊನೆಯಲ್ಲಿ ಜ್ವರ ಬಂತು.
ಇಮಾಮ್ ಹಾಕಿಮ್ ಮತ್ತು ಅಬೂ ದಾವೂದ್ ರಳಿಯಲ್ಲಾಹು ಅನ್ಹು ಅದು ಬುಧವಾರದ ದಿನದಲ್ಲಾಗಿತ್ತು ಎಂದು ಹೇಳಿದ್ದನ್ನು ಇಮಾಮ್ ಅಸ್ಖಲಾನಿ ಫತ್ ಹುಲ್ ಬಾರಿಯಲ್ಲಿ ಹೇಳಿದ್ದಾರೆ.

ಎಲ್ಲಾ ತಿಂಗಳ ಬುಧವಾರ ನಹ್ಸ್ ನ ದಿನ ಎಂದು ಹದೀಸಲ್ಲಿ ವರದಿ ಇರುವಾಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಜ್ವರ ಬಂದ ದಿನ ನಹ್ಸ್ ನ ದಿನ ಎಂಬುವುದು ಎಂಬುವುದರಲ್ಲಿ ಸಂಶಯವೇ ಇಲ್ಲ ತಾನೇ...❓❓

ಆ ದಿನ ನಹ್ಸ್'ನ ದಿನವಾಗಿರುವುದರಿಂದ ರೋಗ,ಆಪತ್ತುಗಳಿಂದ ರಕ್ಷೆ ಹೊಂದಲು ಹಳೇ ಕಾಲದಿಂದಲೇ ಖುರ್ ಆನ್ ಬರೆದು ಅದರ ನೀರನ್ನು ಕುಡಿಯುವುದು ವಾಡಿಕೆ.

ಕಶ್ಫ್,ಕರಾಮತ್ ಮೂಲಕ ತಿಳಿದ ಇಮಾಮರುಗಳು ಇದನ್ನು ವಿವರಿಸಿದ್ದಾರೆ.

*ಕರಮಾತ್ ಗಳನ್ನು ನಿಷೇಧಿಸುವ ವಹ್ಹಾಬೀ ಪುರೋಹಿತರು ಇದರಲ್ಲಿ ವಿಶ್ವಾಸವಿಡಬೇಕೆಂದು ನಮಗೆ ಅಭಿಪ್ರಾಯವಿಲ್ಲ.*

🔴 ರಾಸಾಯನಿಕ ಶಾಯಿಯ ನೀರು

ಖುರ್'ಆನ್ ಆಯತ್
ಬಟ್ಟಲಿನಲ್ಲಿ ಬರೆದು ಕುಡಿಯುವ ಬಗ್ಗೆ ಇಂದು ನಿನ್ನೆ ಆರಂಭಿಸಿದ್ದಲ್ಲ.
*ಅದು ಸಮ್ಮತಾರ್ಹವೆಂದು ಇಮಾಮ್ ನವವೀ ಶರಹುಲ್ ಮುಹದಬ್ ನಲ್ಲಿ ವಿವರಿಸಿದ್ದಾರೆ.*
`ಖುರ್'ಆನ್ ಆಯತ್ ಬಟ್ಟಲಲ್ಲಿ ಬರೆಯುವಾಗ ಪೆನ್ನಿನ ಶಾಯಿ ಮೂಲಕ ಬರೆಯದೆ ಅರಬಿ ಮಶಿ ಮೂಲಕ ಬರೆಯಲಾಗುತ್ತದೆ.`
*ಅದು ಆರೋಗ್ಯಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ.*
ವಹ್ಹಾಬೀ ಪುರೋಹಿತರು ಹೇಳುವಂತೆ, ಖುರ್'ಆನ್ ಆಯತ್ ಬಟ್ಟಲಲ್ಲಿ ಬರೆದು ನೀರು ಕುಡಿದು ರಾಸಾಯನಿಕ ಹೊಟ್ಟೆಗೆ ಹೋಗಿ ಯಾರೂ ಮರಣ ಹೊಂದಿಲ್ಲ.
ಅರಬಿ ಮಷಿಯಲ್ಲಿ ರಾಸಾಯನಿಕ ಮಿಶ್ರಣವಿಲ್ಲ.

🌷

2 days ago | [YT] | 23

@ಪ್ರವಾದಿ_ವಚನಗಳು

الحمد لله
ಒಂದೇ ಕಾರ್ಯಕ್ರಮದಲ್ಲಿ ಒಟ್ಟಿಗೆ ಕೂತು ಊಟ ಮಾಡುವ ಸುಂದರ ದೃಶ್ಯ 🤍📚🤗

3 days ago (edited) | [YT] | 270

@ಪ್ರವಾದಿ_ವಚನಗಳು

📚 ಅಸೂಯೆ ಪಡುತ್ತಿದ್ದ ವ್ಯಕ್ತಿ
ಪ್ರವಾದಿಯವರ ಒಂದು ಸಂದೇಶದಿಂದ ಉತ್ತಮ ವ್ಯಕ್ತಿಯಾದ ಕಥೆ....‼️


ನಿಮ್ಮ ಮಕ್ಕಳಿಗೆ ಮಿಲಾದ್'ಗೆ ಉಪಯುಕ್ತ
ಎಲ್ಲರೂ ತಪ್ಪದೇ ಕೇಳಿರಿ;

👇👇👇👇👇👇👇👇👇 https://youtu.be/ccTat_cgbSA?si=WjG7M... https://youtu.be/ccTat_cgbSA?si=WjG7M...

ಎಲ್ಲರೂ ತಪ್ಪದೇ ಸಬ್ ಸ್ಕ್ರಬ್ ಮಾಡಿ ಸಪೋರ್ಟ್ ಮಾಡಿ

5 days ago | [YT] | 32

@ಪ್ರವಾದಿ_ವಚನಗಳು

ಸಯ್ಯಿದುಲ್ ಉಲಮಾ & ಶೈಖುಲ್ ಜಾಮಿಅಃ 🥺❤️

2 weeks ago | [YT] | 186