ಉತ್ತಮ ಸಮಾಜಕ್ಕಾಗಿ.........ನೇರ..ನಿರಂತರ


About DHRUTHI NEWS PVT LTD

"For a better society... Direct. Continuous."

DHRUTHI NEWS is a No.1Local News provider in Karnataka

that bring the latest news and information to viewers.

We understand that each event impacts world history and that the direction that society takes is influenced by the information.

that percolates down to people.

It is this thought that has shaped our direction and content - direct, incisive and factual -reflecting the human angle and the focus being

"For a better society... Direct. Continuous".


DHRUTHI NEWS

#ಶ್ರೀನಿವಾಸಪುರ ತಾಲೂಕು ಕಚೇರಿ #ಸಭಾಂಗಣದಲ್ಲಿ ಖಾಸಗಿ ಪಂಚಾಯತಿ: #ಮಾರಾಮಾರಿ, #ತಹಸೀಲ್ದಾರ್ #ನಿರ್ಲಕ್ಷ್ಯಕ್ಕೆ #ಸಾರ್ವಜನಿಕರ #ಆರೋಪ..!

ಶ್ರೀನಿವಾಸಪುರ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ತಾಲೂಕು ಆಡಳಿತದ ಕೇಂದ್ರ ಕಚೇರಿ ಇದೀಗ ‘ಖಾಸಗಿ ರಾಜಿ-ಸಂಧಾನ’ದ ಅಡ್ಡವಾಗಿ ಮಾರ್ಪಟ್ಟಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ತಾಲೂಕು ಕಚೇರಿಯ ಸಭಾಂಗಣವು ನಿಯಮ ಬಾಹಿರವಾಗಿ ಖಾಸಗಿ ವ್ಯವಹಾರಗಳ ವೇದಿಕೆಯಾಗುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ತಾಲೂಕು ಕಚೇರಿ ಸಭಾಂಗಣದಲ್ಲಿ ಖಾಸಗಿ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ಸಂಧಾನ ಸಭೆ ನಡೆಯುತ್ತಿತ್ತು. ಈ ವೇಳೆ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಮಾತಿನ ಚಕಮಕಿ ಆರಂಭವಾಗಿದೆ. ನೋಡನೋಡುತ್ತಿದ್ದಂತೆ ವಾಗ್ವಾದವು ವಿಕೋಪಕ್ಕೆ ತಿರುಗಿ, ಎರಡೂ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಇದರಿಂದ ಕಚೇರಿ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸನ್ನಿವೇಶವನ್ನು ನಿಯಂತ್ರಣಕ್ಕೆ ತಂದರು.

ಸಾರ್ವಜನಿಕರ ದೂರಿನ ಪ್ರಕಾರ, ಸರ್ಕಾರಿ ಕಚೇರಿಯಲ್ಲಿ ಇಂತಹ ಖಾಸಗಿ ಪಂಚಾಯತಿಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ತಹಸೀಲ್ದಾರ್ ಜಿ.ಎನ್. ಸುಧೀಂದ್ರ ಅವರ ನಿರ್ಲಕ್ಷ್ಯ ಹಾಗೂ ರಾಜಕೀಯ ಒತ್ತಡಗಳಿಗೆ ಮಣಿದು ಕಚೇರಿ ಸಭಾಂಗಣವನ್ನು ಖಾಸಗಿ ಉದ್ದೇಶಗಳಿಗೆ ಬಳಸಲು ಅವಕಾಶ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಸಾಮಾನ್ಯ ಜನರ ಕೆಲಸಗಳಿಗೆ ಸತಾಯಿಸುವ ಆಡಳಿತ ಮಂಡಳಿ, ಮಧ್ಯವರ್ತಿಗಳಿಗೆ ಮತ್ತು ಪ್ರಭಾವಿಗಳಿಗೆ ಮಣೆ ಹಾಕುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ತಾಲೂಕು ಕಚೇರಿ ಎಂದರೆ ಜನರ ಹಕ್ಕುಗಳ ರಕ್ಷಣೆಗಾಗಿ ಇರುವ ಪವಿತ್ರ ಸ್ಥಳ. ಆದರೆ ಅದು ಇಂದು ಮಧ್ಯವರ್ತಿಗಳ ಅಡ್ಡವಾಗಿ ಬದಲಾಗಿದೆ. ಸಾರ್ವಜನಿಕರ ಸೇವೆಗೆ ಮೀಸಲಾದ ಸಭಾಂಗಣವನ್ನು ಖಾಸಗಿ ವ್ಯವಹಾರಗಳಿಗೆ ಬಿಟ್ಟುಕೊಟ್ಟಿರುವುದು ಖಂಡನೀಯ," ಎಂದು ಸ್ಥಳೀಯ ನಾಗರಿಕರು ಅಸಮಾಧಾನ ಹೊರಹಾಕಿದ್ದಾರೆ.

ಸರ್ಕಾರಿ ಕಚೇರಿಯ ಘನತೆ ಮತ್ತು ಶಿಸ್ತನ್ನು ಗಾಳಿಗೆ ತೂರಿರುವ ಈ ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಗಮನಹರಿಸಬೇಕು. ಕೂಡಲೇ ತನಿಖೆ ನಡೆಸಿ ಕಚೇರಿ ದುರುಪಯೋಗಪಡಿಸಿಕೊಂಡವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮುಂದಿನ ದಿನಗಳಲ್ಲಾದರೂ ಜಿಲ್ಲಾ ಆಡಳಿತ ಇಂತಹ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವುದೇ ಎಂಬುದನ್ನು ಕಾದು ನೋಡಬೇಕಿದೆ.

6 months ago | [YT] | 11

DHRUTHI NEWS

Happy Birthday ಧೃತಿ
youtube.com/shorts/xslb59xWsn...

1 year ago | [YT] | 12

DHRUTHI NEWS

https://youtu.be/hdiYYwcRVfU?si=RBcco...
Please Subscribe 🙏 Subscribe Please

2 years ago | [YT] | 1

DHRUTHI NEWS

5 ಯೋಜನೆಗಳು 5 ವರ್ಷಗಳು ಪೂರ್ಣಗೊಳ್ಳತ್ತಾ?

3 years ago | [YT] | 1

DHRUTHI NEWS

Good Morning‪@dhruthinews‬
youtube.com/shorts/2e2TMK0u1t...
🙏 like, share, subscribe, comment, & select the bell icon, watch our videos

3 years ago | [YT] | 10