ಕನ್ನಡದ ಪ್ರಮುಖ ಸುದ್ದಿ ಕನ್ನಡ 9 ನ್ಯೂಸ್ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟನೆ.ನೈಜ.ನಿಖರ ಸುದ್ದಿಗಾಗಿ ಉತ್ತರ ಕರ್ನಾಟಕ ಧ್ವನಿ ಕನ್ನಡ 9ನ್ಯೂಸ್ ಅನ್ನು ಫಾಲೋ ಮಾಡಿ, ಸಬ್ಸ್ಟೈಬ್ ಮಾಡಿ..
====
Thank You For Watching! Do Not Forget To Like |
Comment | Share 🙏
Welcome to Kannada's leading news Kannada 9 News YouTube channel. It brings you a comprehensive news view of the state very quickly.
In addition, it provides the most important national and international news, explainer videos in Kannada, accurately and clearly.
Not only news but entertainment, sports news related videos are also available on our channel.
Follow Uttar Karnataka Voice Kannada 9News, Subscribe for clear.real.accurate news..
Kannada9News
👉 "ಅಥಣಿಯಲ್ಲಿ ದೊಡ್ಡ ಸ್ಫೋಟ! ರಮೇಶ್ ಜಾರಕಿಹೊಳಿ ದಿಡೀರ ನಿರ್ಧಾರ… ಪಕ್ಷ ಬದಲಾವಣೆ ಸತ್ಯವಾ?" 😳🔥
youtube.com/live/dNwphQfnHAE?si=qzvFN24Ls4blROUj
3 days ago | [YT] | 11
View 0 replies
Kannada9News
ಶೋಷಿತರ ಧ್ವನಿಯಾಗಿ, ಭಾರತದ ಹಸಿರು ಕ್ರಾಂತಿಯ ರೂವಾರಿಯಾಗಿ ದೇಶವನ್ನು ಮುನ್ನಡೆಸಿದ ಮಹಾನ್ ನಾಯಕ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮದಿನದಂದು ಗೌರವ ನಮನಗಳು. ಅವರ ಸಾಮಾಜಿಕ ನ್ಯಾಯದ ಚಿಂತನೆಗಳು ಇಂದಿನ ತಲೆಮಾರಿಗೆ ಅತ್ಯಂತ ಅವಶ್ಯಕ.
#BabuJagajeevanRam #kannada9news
6 days ago | [YT] | 42
View 1 reply
Kannada9News
ಯತ್ನಾಳ್ ವಾಪಸ್ ಬಿಜೆಪಿಗೆ ಹೋಗಲು ನಾಟಕ ಮಾಡುತ್ತಿದ್ದಾರೆ: ಎಂ.ಬಿ. ಪಾಟೀಲ್ ಆರೋಪ
#yatnal #bjpkarnataka #MBPatil #kannada9news
1 week ago | [YT] | 13
View 2 replies
Kannada9News
ಭಕ್ತಿ, ಶಕ್ತಿ ಮತ್ತು ಯುಕ್ತಿಯ ಸಂಗಮವಾದ ಸಂಕಟಮೋಚನ ಶ್ರೀ ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು.
ಶ್ರೀ ರಾಮದೇವರ ಪರಮ ಭಕ್ತನಾದ ಹನುಮಂತನ ಶ್ರದ್ಧೆ ಮತ್ತು ಪ್ರಾಮಾಣಿಕತೆ ಸರ್ವಕಾಲಕ್ಕೂ ಆದರ್ಶಪ್ರಾಯ. ಅಚಲ ನಂಬಿಕೆ, ನಿಸ್ವಾರ್ಥ ಸೇವೆ ಮತ್ತು ಸ್ವಾಮಿ ನಿಷ್ಠೆಯ ಮೂಲಕ ಸಾಮಾನ್ಯನೊಬ್ಬ ದೈವತ್ವಕ್ಕೇರಬಹುದು ಎಂಬುದನ್ನು ಹನುಮಂತನ ಜೀವನ ಸ್ಪಷ್ಟವಾಗಿ ಸಾರುತ್ತದೆ.
ಹನುಮದೇವರ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಆರೋಗ್ಯ, ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಹಾರೈಸುತ್ತೇನೆ.
#HanumanJayanti #ಹನುಮಜಯಂತಿ #kannada9news #Lakhanjarkiholi #Gokak
1 week ago | [YT] | 43
View 1 reply
Kannada9News
ಸೇವೆಯೇ ಸಾಧನೆ, ಕಾಯಕವೇ ಕೈಲಾಸ ಎಂದು ಬದುಕಿ ತೋರಿಸಿದ ಯುಗಪುರುಷ, 'ನಡೆದಾಡುವ ದೇವರು' ಕರ್ನಾಟಕ ರತ್ನ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 119ನೇ ಜನ್ಮದಿನದಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ವಿಶ್ವಗುರು ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳನ್ನು ಅನುಷ್ಠಾನಕ್ಕೆ ತಂದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ಮತ್ತು ಆಶ್ರಯ ನೀಡಿದರು. ಶ್ರೀಗಳವರ ಉದಾತ್ತ ಚಿಂತನೆ, ಮತ್ತು ಬೋಧನೆಗಳು ನಮ್ಮೆಲ್ಲರಿಗೂ ನಿರಂತರ ಪ್ರೇರಣೆಯಾಗಿದೆ.
#drshivakumaramahaswami #ಶಿವಕುಮಾರಮಹಾಸ್ವಾಮಿಗಳವರು #kannada9news
1 week ago | [YT] | 37
View 0 replies
Kannada9News
ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ
#KarnatakaGovernment #Congress #BasangoudaPatilYatnal #kannada9news
1 week ago | [YT] | 11
View 1 reply
Kannada9News
The greatest show on earth. ❤️🔥
"If you love sport and the atmosphere that it brings, you have to, once in your life, come to this venue and watch an IPL game. It doesn't get better anywhere in the world."
- Kevin Pietersen
IPL. Nothing else comes close. 🏟️✨
#IPL #KevinPietersen #IPL2026 #Cricket #IPLVibe @kannada9news
1 week ago | [YT] | 5
View 0 replies
Kannada9News
ನಾಡಿನ ಸಮಸ್ತ ಜನತೆಗೆ ಶ್ರೀರಾಮ ನವಮಿಯ ಹಾರ್ದಿಕ ಶುಭಾಶಯಗಳು. ಸತ್ಯ, ಧರ್ಮ ಹಾಗೂ ಮರ್ಯಾದಾ ಪುರುಷೋತ್ತಮನಾದ ಪ್ರಭು ಶ್ರೀರಾಮನ ಆದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿ.
ಪವಿತ್ರ ರಾಮ ನಾಮ ಸ್ಮರಣೆಯಿಂದ ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಭಾಗ್ಯ ಲಭಿಸಲಿ ಎಂದು ಹಾರೈಸುತ್ತೇನೆ.
#ರಾಮನವಮಿ | #RamNavami #Lakhanjarkiholi #kannada9news
2 weeks ago | [YT] | 45
View 0 replies
Kannada9News
Maharashtra Shock 😳 ಹುಣಸೆ ಬೀಜಕ್ಕೆ ಕೋಟಿ ಗೇಮ್! Ashok Kharat ಎಕ್ಸ್ಪೋಸ್ 🚨
#Maharashtra #Nashik #AshokKharat #SelfStyledGodman
#KannadaNews #Kannada9News #TrendingNews #ViralVideo
2 weeks ago | [YT] | 0
View 0 replies
Kannada9News
ತಳಕಟ್ನಾಳದಲ್ಲಿ 4 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಟ್ಟಡಗಳನ್ನು ಉದ್ಘಾಟಿಸಿದ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಗೋಕಾಕ- ಸಾಮಾಜಿಕ ನ್ಯಾಯದ ರೂವಾರಿ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಎಲ್ಲ ಸಮಾಜಗಳನ್ನು ಒಂದುಗೂಡಿಸಿಕೊಂಡು ಯಾವೊಂದು ಸಮಾಜಕ್ಕೆ ಅನ್ಯಾಯವಾಗದಂತೆ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡುತ್ತಿರುವುದಾಗಿ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಬುಧವಾರದಂದು ತಾಲ್ಲೂಕಿನ ತಳಕಟ್ನಾಳ ಗ್ರಾಮದಲ್ಲಿ ಸುಮಾರು 4 ಕೋಟಿ ರೂಪಾಯಿ ಮೊತ್ತದ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥಗಳ ಬೇಧ ಭಾವ ಮಾಡದೇ ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜನೋಪಯೋಗಿ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಅವರು ತಿಳಿಸಿದರು.
ತಳಕಟ್ನಾಳ ಗ್ರಾಮದಲ್ಲಿ ಅನೇಕ ಕಾಮಗಾರಿಗಳನ್ನು ನೆರವೇರಿಸಿರುವುದು ನನಗೆ ಅತ್ಯಂತ ಖುಷಿಯಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲೇಬೇಕೆಂದು ಗ್ರಾಮಸ್ಥರು ಹಠ ಹಿಡಿದಿದ್ದರು. ಹೀಗಾಗಿ ಬೆಂಗಳೂರು
ಕಾರ್ಯಕ್ರಮವನ್ನು ರದ್ದುಗೊಳಿಸಿ ತಳಕಟ್ನಾಳ ಗ್ರಾಮದಲ್ಲಿ ಪಾಲ್ಗೊಳ್ಳಬೇಕಾಯಿತು.ಗ್ರಾಮಸ್ಥರು ನೀಡುತ್ತಿರುವ ಕಾಳಜಿ, ಪ್ರೀತಿ ನೋಡಿ ಮಾತುಗಳೇ ಬರುತ್ತಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಈ ಭಾಗದವರು ತಮ್ಮನ್ನು ಆಶೀರ್ವದಿಸುತ್ತ ಬರುತ್ತಿದ್ದಾರೆ ಎಂದರು.
ಕ್ಷೇತ್ರದಲ್ಲಿ ಹದಿಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದೇನೆ. ಕೆಲವು ರಸ್ತೆಗಳಿಗೆ ಈಗಾಗಲೇ ಅನುದಾನ ಬಂದಿದೆ. ಉದಗಟ್ಟಿ- ತಳಕಟ್ನಾಳ- ಖಂಡ್ರಟ್ಟಿ ರಸ್ತೆ, ಹಡಗಿನಾಳ ಕ್ರಾಸ್ದಿಂದ ಹಡಗಿನಾಳತನಕ, ಬೀರನಗಡ್ಡಿ ರಸ್ತೆಗಳ ಸುಧಾರಣೆ ಕಾಮಗಾರಿಗಳು ಮಂಜೂರಾಗಿದೆ. ಜತೆಗೆ ರೈತರ ತೋಟಪಟ್ಟಿ ರಸ್ತೆಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ 56 ತೋಟದ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದು, ಇನ್ನೂ 50 ತೋಟದ ರಸ್ತೆಗಳನ್ನು ನಿರ್ಮಾಣ ಮಾಡಬೇಕಿದೆ. ನಮ್ಮ ತಾಲ್ಲೂಕಿನಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳಿರುವುದರಿಂದ ರಸ್ತೆಗಳ ಸುಧಾರಣೆ ಅವಶ್ಯವಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಹೆಚ್ಚಿನ ರಸ್ತೆಗಳನ್ನು ಸುಧಾರಣೆ ಮಾಡಲು ಕಾಮಗಾರಿಗಳಿಗೆ ಮಂಜೂರಾತಿ ನೀಡುವಂತೆ ಕೋರಿಕೊಂಡಿದ್ದೇನೆ ಎಂದು ತಿಳಿಸಿದರು.
ರೈತರಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗಬೇಕು. ಈ ದಿಸೆಯಲ್ಲಿ ಸತೀಶ್ ಜಾರಕಿಹೊಳಿಯವರು ನನಗಿಂತ ಮೊದಲು ಕಾಲುವೆಗಳಿಗೆ ಭೇಟಿ ನೀಡುತ್ತ ನಮ್ಮ ರೈತ ಬಾಂಧವರಿಗೆ ನೀರು ತಲುಪಿಸುತ್ತಿದ್ದರು. ಅವರ ನಂತರ ನಾನೂ ಸಹ ಸತೀಶ್ ಅವರ ಹಾದಿಯಲ್ಲಿ ನಡೆಯುತ್ತಿದ್ದೇನೆ. ಕಾಲುವೆ, ಹಳ್ಳಗಳಿಗೆ ನೀರು ಬಿಡಿಸುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದ್ದೇನೆ. ಇದೇ ಏಪ್ರಿಲ್ 1 ರಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಮತ್ತು ಸಿಬಿಸಿ ಕಿನಾಲ್ ಗಳಿಗೆ ನೀರನ್ನು ಬಿಡುಗಡೆ ಮಾಡುವಂತೆಯೂ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ದೇವರ ದಯೆಯಿಂದ ಮಳೆಯಾದರೆ ರೈತರು ಖುಷಿಯಾಗುತ್ತಾರೆ. ರೈತರು ಸುಖದಿಂದ ಇದ್ದರೆ ಇಡೀ ಜಗವು ಸಂತಸದಿಂದ ಇರುತ್ತದೆ ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಯನ್ನು ಉದ್ಘಾಟಿಸಿದರು.
ನಂತರ ತೆರೆದ ವಾಹನದಲ್ಲಿ ಭಾರೀ
ಮೆರವಣಿಗೆಯೊಂದಿಗೆ ವೇದಿಕೆಗೆ ಶಾಸಕರನ್ನು ಕರೆ ತರಲಾಯಿತು. ವಿವಿಧ ವಾದ್ಯ ವೃಂದಗಳು, ಆನೆ, ಡೋಲಕ, ಸುಮಂಗಲೆಯರಿಂದ ಕುಂಭ ಮೇಳವು ಆಕರ್ಷಿಯವಾಗಿತ್ತು. ಗ್ರಾಮದೇವತೆಯ ಜಾತ್ರೆಯು ಸಡಗರ ಸಂಭ್ರಮದಿಂದ ಜರುಗಿತು.
2.50 ಕೋಟಿ ರೂಪಾಯಿ ವೆಚ್ಚದ ಲಕ್ಷ್ಮೀದೇವಿ ನಗಾರೆಖಾನೆ, 60 ಲಕ್ಷ ರೂಪಾಯಿ ವೆಚ್ಚದ ಯಾತ್ರಾ ನಿವಾಸ, 10 ಲಕ್ಷ ರೂಪಾಯಿ ವೆಚ್ಚದ ದುರ್ಗಾದೇವಿ ಅಡಿಗೆ ಕೋಣೆ, 10 ಲಕ್ಷ ರೂಪಾಯಿ ವೆಚ್ಚದ ರೇವಣ ಸಿದ್ಧೇಶ್ವರ ಚಾಂದಣಿ, 10 ಲಕ್ಷ ರೂಪಾಯಿ ವೆಚ್ಚದ ಬಲಭೀಮ ದೇವರ ಚಾಂದಣಿ, 10 ಲಕ್ಷ ರೂಪಾಯಿ ವೆಚ್ಚದ ಬಸವೇಶ್ವರ ರಂಗ ಮಂದಿರದ ಕಟ್ಟಡವನ್ನು ಬಾಲಚಂದ್ರ ಜಾರಕಿಹೊಳಿಯವರು ಉದ್ಘಾಟಿಸಿದರು.
ಹುಲ್ಲಾರ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಒಟ್ಟು ನಾಲ್ಕು ಕೊಠಡಿಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಉದ್ಘಾಟಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕವಲಗುಡ್ಡದ ಅಮರೇಶ್ವರ ಮಹಾರಾಜರು, ತಳಕಟ್ನಾಳದ ಆತ್ಮಾನಂದ ಸ್ವಾಮಿಗಳು, ಕಪರಟ್ಟಿಯ ಬಸವರಾಜ ಸ್ವಾಮಿಗಳು ವಹಿಸಿದ್ದರು.ತಾ.ಪಂ.ಮಾಜಿ ಸದಸ್ಯ ಲಕ್ಷ್ಮಣ ಮಸಗುಪ್ಪಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು.
ವೇದಿಕೆಯಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಪ್ರಭಾ ಶುಗರ್ಸ್ ಅಧ್ಯಕ್ಷ ಶಿದ್ಲಿಂಗಪ್ಪ ಕಂಬಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಲಕ್ಕಪ್ಪ ಹುಲಕುಂದ, ಮಲ್ಲಿಕಾರ್ಜುನ ಕಬ್ಬೂರ, ಬಿಇಓ ಪ್ರಕಾಶ ಹಿರೇಮಠ, ವಿಠ್ಠಲ ಸವದತ್ತಿ, ಅಶೋಕ ನಾಯಿಕ, ನಿಂಗಪ್ಪ ದೊಡಮನಿ, ರವಿ ಪರುಶೆಟ್ಟಿ, ಹಣಮಂತ ನಾಯಿಕ, ವಿಠ್ಠಲ ಹುಲ್ಲಾರ, ವೀರುಪಾಕ್ಷಿ ಮುಂಗರವಾಡಿ, ವಿವಿಧ ಸಮಾಜಗಳ ಮುಖಂಡರು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
#BalachandraJarkiholi @kannada9news
2 weeks ago | [YT] | 28
View 0 replies
Load more