ಕನ್ನಡದ ಪ್ರಮುಖ ಸುದ್ದಿ ಕನ್ನಡ 9 ನ್ಯೂಸ್ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟನೆ.ನೈಜ.ನಿಖರ ಸುದ್ದಿಗಾಗಿ ಉತ್ತರ ಕರ್ನಾಟಕ ಧ್ವನಿ ಕನ್ನಡ 9ನ್ಯೂಸ್ ಅನ್ನು ಫಾಲೋ ಮಾಡಿ, ಸಬ್‌ಸ್ಟೈಬ್ ಮಾಡಿ..
====
Thank You For Watching! Do Not Forget To Like |

Comment | Share 🙏
Welcome to Kannada's leading news Kannada 9 News YouTube channel. It brings you a comprehensive news view of the state very quickly.
In addition, it provides the most important national and international news, explainer videos in Kannada, accurately and clearly.
Not only news but entertainment, sports news related videos are also available on our channel.
Follow Uttar Karnataka Voice Kannada 9News, Subscribe for clear.real.accurate news..


Kannada9News

ಮಹಿಳೆ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ತಿಂಗಳ ಬಳಿಕ ಕಬ್ಬಿನ ಗದ್ದೆಯಲ್ಲಿ ಕೊಳೆತ ಶವ ಪತ್ತೆ!

ಪ್ರೇಯಸಿಯನ್ನು ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಶವ ಎಸೆದಿದ್ದ ಆರೋಪ; ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕುಲಗೋಡ ಪೊಲೀಸರ ತನಿಖೆಯಲ್ಲಿ ಭೀಕರ ಕೃತ್ಯ ಬಯಲು: ಚಿನ್ನಾಭರಣಗಳಿಗಾಗಿ ಕೊಲೆ ಮಾಡಿರುವ ಶಂಕೆ

ಮೂಡಲಗಿ: ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಶವ ಕಬ್ಬಿನ ಗದ್ದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೂಡಲಗಿ ತಾಲ್ಲೂಕಿನ ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಕೌಜಲಗಿ ಗ್ರಾಮದ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅನ್ನಪೂರ್ಣಾ ಸಿದ್ದಪ್ಪ ಒಡಚನ್ನವರ(34) ಮೂಲತ ಮಹಿಳೆ ತಿಗಡಿ ಗ್ರಾಮದವಳಾಗಿದ್ದು ಕೌಜಲಗಿ ಗ್ರಾಮದಲ್ಲಿ ಉಳುಮೆ ಮಾಡಿಕೊಡಿದ್ದರು ಎನ್ನಲಾಗಿದೆ. ನಾಪತ್ತೆಯಾಗಿರುವ ಕುರಿತು ಸುಮಾರು ಒಂದು ತಿಂಗಳ ಹಿಂದೆ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು.

ತನಿಖೆ ವೇಳೆ ಮಹಿಳೆ ಹಾಗೂ ಗೋಕಾಕ ತಾಲೂಕಿನ ಸಿಂಗ್ಲಾಪೂರದ ದಿಲೀಪ್ ಗಡ್ಕರಿ(37) ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾದ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಪೊಲೀಸ್ ತನಿಖೆಯ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಆರೋಪಿ ತನ್ನ ಗ್ರಾಮದಿಂದ ಪರಾರಿಯಾಗಿದ್ದ ಎನ್ನಲಾಗಿದೆ.

ನಂತರ ತನಿಖೆ ಮುಂದುವರಿಸಿದ ಪೊಲೀಸರು ತಲೆಮರೆಸಿಕೊಂಡದ್ದ ಆರೋಪಯನ್ನ ಪತ್ತೆಹಚ್ಚಿ, ಅಲ್ಲಿಗೆ ತೆರಳಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಆರೋಪಿಯೂ ಅನ್ನಪೂರ್ಣನಳನ್ನ ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಶವವನ್ನು ಎಸೆದಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಅಲ್ಲದೆ, ಮಹಿಳೆಯ ಮೈಮೇಲಿದ್ದ ಚಿನ್ನಾಭರಣಗಳು ತೆಗೆದುಕೊಂಡು, ಅವುಗಳನ್ನು ತನ್ನ ಬೈಕದಲ್ಲಿ ಇಟ್ಟಿರುವುದಾಗಿ ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದ್ದು, ಆರೋಪಿಯ ಮಾಹಿತಿ ಆಧರಿಸಿ ಪೊಲೀಸರು ಕಬ್ಬಿನ ಗದ್ದೆಯಲ್ಲಿ ಶೋಧ ನಡೆಸಿದಾಗ ಮಹಿಳೆಯ ಶವ ಕೊಳೆತು ತೆಲೆ ಬುರುಡೆ, ಮೂಳೆಗಳು ಹಾಗೂ ಸೀರೆ, ಚಪಲಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಘಟನೆಯ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಕೊಲೆಗೆ ನಿಖರ ಕಾರಣವೇನು, ಚಿನ್ನಾಭರಣಗಳ ವಿಚಾರಕ್ಕೆ ಕೊಲೆ ನಡೆದಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

#Kannada9News #KannadaNews
#Mudalagi #Koujalagi
#MudalagiNews #CrimeNews
#BelagaviNews #BelagaviCrime
#KannadaCrimeNews #BreakingNews #KarnatakaNews
#PoliceNews #CrimeUpdate
#KoujalagiNews #kannada9

ಕುಲಗೋಡ ಪೊಲೀಸರ ಚುರುಕಿನ ತನಿಖೆಯಿಂದ ಒಂದು ತಿಂಗಳಿನಿಂದ ನಿಗೂಢವಾಗಿದ್ದ ಮಹಿಳೆ ನಾಪತ್ತೆ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ಬಯಲಾಗಿದೆ.

8 hours ago | [YT] | 2

Kannada9News

ಮೂಡಲಗಿ: ಕೌಜಲಗಿ ಗ್ರಾಮದಲ್ಲಿ ಬೆಚ್ಚಿಬೀಳಿಸಿದ ಘಟನೆ! ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಕೊಳೆತ ಶವ ಪತ್ತೆ | ಆರೋಪಿ ಬಂಧನ..


#Kannada9News
#KannadaNews
#Mudalagi
#Koujalagi
#MudalagiNews
#CrimeNews
#BelagaviNews
#BelagaviCrime
#KannadaCrimeNews
#BreakingNews
#KarnatakaNews
#PoliceNews
#CrimeUpdate
#KoujalagiNews
#Kannada9

10 hours ago | [YT] | 1

Kannada9News

ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. ಶ್ರೀ ಕೃಷ್ಣ ಪರಮಾತ್ಮನ ಆಶೀರ್ವಾದ ಎಲ್ಲರ ಮೇಲಿರಲಿ, ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಸಾರಿದ ಆದರ್ಶಗಳನ್ನು ಪಾಲಿಸುವ ಮೂಲಕ ಸತ್ಯ ಹಾಗೂ ಧರ್ಮದ ಹಾದಿಯಲ್ಲಿ ಸಾಗೋಣ.

#KrishnaJanmashtami #Kannada9news

3 days ago | [YT] | 34

Kannada9News

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಬೆಂಗಳೂರು: ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ಈ ವೇಳೆ ಇಬ್ಬರೂ ಪರಸ್ಪರ ಕುಶಲೋಪರಿ ವಿಚಾರಿಸಿ, ಕೆಲಕಾಲ ಮಾತುಕತೆ ನಡೆಸಿದರು. ಭೇಟಿಯ ಸಂದರ್ಭದಲ್ಲಿ ರಾಜ್ಯದ ಪ್ರಸಕ್ತ ಬೆಳವಣಿಗೆಗಳ ಕುರಿತು ಚರ್ಚೆ ನಡೆದಿರುವ ಸಾಧ್ಯತೆ ಇದೆ. #Rameshjarakiholi #cm #Kannada9news

1 week ago | [YT] | 140

Kannada9News

ನಾಗರ ಪಂಚಮಿ ಹಬ್ಬದ ನಿಮಿತ್ತ ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಅವರು ನಾಗದೇವರ ಮೂರ್ತಿಗೆ ಹಾಲು ಎರೆಯುವ ಮೂಲಕ ನಾಗರ ಪಂಚಮಿ ಹಬ್ಬ ಆಚರಣೆ ಮಾಡಿದರು.

3 weeks ago | [YT] | 23

Kannada9News

ಸಂಪುಟ ವಿಸ್ತರಣೆ: ದಿಲ್ಲಿಯಲ್ಲಿ ನಾಯಕರ ಸಭೆ ಆರಂಭ
ಲಿಂಕ್ ಕಮೆಂಟ್ ಬಾಕ್ಸ್​​​​ನಲ್ಲಿದೆ

1 month ago | [YT] | 9

Kannada9News

ದೇಶ ಸೇವೆಗೆ ಸಮರ್ಪಿತಗೊಂಡ ಯೋಧರ ಪಡೆಗಳಲ್ಲಿ ಅತಿ ದೊಡ್ಡ ಪಡೆಯಾದ ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಯೋಧರಿಗೆ ಸಿಆರ್‌ಪಿಎಫ್‌ ಸ್ಥಾಪನಾ ದಿನದ ಶುಭಾಶಯಗಳು.

#CRPF #CRPFFoundationDay

1 month ago | [YT] | 19

Kannada9News

ವಿಶ್ವ ಮೆಚ್ಚಿದ ಕ್ಷಿಪಣಿ ತಜ್ಞ, 'ಜನಸಾಮಾನ್ಯರ ರಾಷ್ಟ್ರಪತಿ' ಎಂದೇ ಖ್ಯಾತರಾದ ಭಾರತರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆಯಂದು ಶ್ರದ್ಧೆಯ ನಮನಗಳು.

ಭಾರತದ ಕ್ಷಿಪಣಿ ಹಾಗೂ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಹೊಸ ದಿಕ್ಕು ನೀಡಿದ ಅವರು, ದೇಶದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಮತ್ತು ಭಾರತವನ್ನು ಅಣುಶಕ್ತಿ ರಾಷ್ಟ್ರವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

ಅವರ ಉನ್ನತ ಚಿಂತನೆಗಳು, ಸರಳ ಜೀವನ ಹಾಗೂ ಪ್ರೇರಣಾದಾಯಕ ವ್ಯಕ್ತಿತ್ವ ಎಂದೆಂದಿಗೂ ಸ್ಮರಣೀಯ.
#APJAbdulKalam #MissileManOfIndia #kannada9news

1 month ago | [YT] | 18

Kannada9News

ಮೈನವಿರೇಳಿಸುವ ಚಳಿಯಲ್ಲೂ ಮಾತೃಭೂಮಿಯ ಗೌರವಕ್ಕಾಗಿ ಹೋರಾಡಿ ನಮಗೆ ವಿಜಯ ತಂದುಕೊಟ್ಟ ನಮ್ಮ ಧೀರ ಸೈನಿಕರ ಸಾಹಸ ಎಂದಿಗೂ ಅಮರ.

​ಕಾರ್ಗಿಲ್ ವಿಜಯ ದಿವಸದ ಈ ಸಂದರ್ಭದಲ್ಲಿ, ದೇಶದ ರಕ್ಷಣೆಗೆ ಸಮರ್ಪಿತರಾದ ಪ್ರತಿಯೊಬ್ಬ ವೀರಯೋಧನಿಗೂ ಸಾಷ್ಟಾಂಗ ನಮನಗಳು. ಈ ಹೆಮ್ಮೆಯ ದೇಶದ ಪ್ರಜೆಯಾಗಿ ನಾನು ನಮ್ಮ ಯೋಧರಿಗೆ ಚಿರಋಣಿ.

#KargilVijayDiwas #OperationVijay #LakhanJarkiholi #kannada9news

1 month ago | [YT] | 13

Kannada9News

ನಿರ್ಭೀತ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಚಂದ್ರಶೇಖರ್ ಆಜಾದ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.

ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ತೋರಿದ ಶೌರ್ಯ ಮತ್ತು ಸಮರ್ಪಣೆ ಎಲ್ಲರಿಗೂ ಸದಾ ಸ್ಫೂರ್ತಿ.
#chandrashekharazad #Kannada9news

1 month ago | [YT] | 27