VasanthaaHarish 🙏

Namaste 🙏 my hobbies 🙏 Jai Kashi 🙏 Bharatêya Sanathani Hindu. 🙏Spiritual seeker.🙏 Music 🎵 ,🙏 love football updates,🙏 Traveling,tips 🙏Exploring, healthy cooking ideas 🙏A bit of photography 🙏 positive #nature love 🙏

namaste friends 🙏 Don't forget to like, share, and subscribe for more spiritual and nature-filled videos!🙏🚩

"I'm beyond thankful for every single person that has Subscribed, Liked, Commented, and Shared! You are the reason this channel is what it is".❤️🙏


VasanthaaHarish 🙏

ಅಧಿಕಮಾಸದಲ್ಲಿ ಜಪಿಸುವ 33 ಮಂತ್ರಗಳು ಅಥವಾ 33 ದೇವರ ನಾಮ

೧. ಓಂ ನಮೋ ಭಗವತೇ ವಾಸುದೇವಾಯ
೨. ಓಂ ಶ್ರೀ ವಿಷ್ಣವೇ ನಮಃ
೩. ಓಂ ಶ್ರೀ ಕೃಷ್ಣಾಯ ನಮಃ
೪. ಓಂ ಶ್ರೀ ಮಾಧವಾಯ ನಮಃ
೫. ಓಂ ಶ್ರೀ ಗೋವಿಂದಾಯ ನಮಃ
೬. ಓಂ ಶ್ರೀ ಕೇಶವಾಯ ನಮಃ
೭. ಓಂ ಶ್ರೀ ತ್ರಿವಿಕ್ರಮಾಯ ನಮಃ
೮. ಓಂ ಶ್ರೀ ವಾಮನಾಯ ನಮಃ
೯. ಓಂ ಶ್ರೀ ಶ್ರೀಧರಾಯ ನಮಃ
೧೦. ಓಂ ಶ್ರೀ ಹೃಷಿಕೇಶಾಯ ನಮಃ
೧೧. ಓಂ ಶ್ರೀ ಪದ್ಮನಾಭಾಯ ನಮಃ
೧೨. ಓಂ ಶ್ರೀ ದಾಮೋದರಾಯ .

೧೩.ಓಂ ಶ್ರೀ ನಾರಾಯಣಾಯ ನಮಃ
೧೪. ಓಂ ಶ್ರೀ ಮಧುಸೂದನಾಯ ನಮಃ
೧೫. ಓಂ ಶ್ರೀ ಅನಿರುದ್ಧಾಯ ನಮಃ
೧೬. ಓಂ ಶ್ರೀ ಪ್ರದ್ಯುಮ್ನಾಯ ನಮಃ
೧೭. ಓಂ ಶ್ರೀ ಸಂಕರ್ಷಣಾಯ ನಮಃ
೧೮. ಓಂ ಶ್ರೀ ಪುರುಷೋತ್ತಮಾಯ ನಮಃ
೧೯. ಓಂ ಶ್ರೀ ಅಧೋಕ್ಷಜಾಯ ನಮಃ
೨୦. ಓಂ ಶ್ರೀ ನಾರಸಿಂಹಾಯ ನಮಃ
೨೧. ಓಂ ಶ್ರೀ ಜನಾರ್ದನಾಯ ನಮಃ
೨೨. ಓಂ ಶ್ರೀ ಉಪೇಂದ್ರಾಯ ನಮಃ
೨೩. ಓಂ ಶ್ರೀ ಹರಯೇ ನಮಃ
೨೪. ಓಂ ಶ್ರೀ ಕೃಷ್ಣಾಯ ನಮಃ
೨೫. ಓಂ ಶ್ರೀ ವರಾಹಾಯ ನಮಃ
೨۶. ಓಂ ಶ್ರೀ ಶ್ರೀಪತಯೇ ನಮಃ
೨೭. ಓಂ ಶ್ರೀ ಗದಾಧರಾಯ ನಮಃ
೨೮. ಓಂ ಶ್ರೀ ವಿಭವೇ ನಮಃ
೨೯. ಓಂ ಶ್ರೀ ಸರ್ವೇಶ್ವರಾಯ ನಮಃ
೩೦. ಓಂ ಶ್ರೀ ಸತ್ಯಾಯ ನಮಃ
೩೧. ಓಂ ಶ್ರೀ ಅಚ್ಯುತಾಯ ನಮಃ
೩೨. ಓಂ ಶ್ರೀ ಗೋಪಾಲಾಯ ನಮಃ
೩೩. ಓಂ ಶ್ರೀ ಭೂತಭಾವನಾಯ ನಮಃ

1 hour ago | [YT] | 0

VasanthaaHarish 🙏

ಸ್ನೇಹಿತರೇ, "ಇಂದು ಅಮಾವಾಸ್ಯೆ ! ವಿಶೇಷವಾಗಿ ಶ್ರೀ ಶನೈಶ್ಚರ ಜಯಂತಿ ! ನಾಳೆಯಿಂದ ಪ್ರಾರಂಭವಾಗುವ ಜೇಷ್ಠಮಾಸವು ಈ ಬಾರಿಯ "ಅಧಿಕಮಾಸವಾಗಿದೆ ' ! ಆದ್ದರಿಂದ ನಿಜ ಜೇಷ್ಠಮಾಸದಲ್ಲಿ ಅಂದರೇ ಮುಂದಿನ ಅಮಾವಾಸ್ಯೆ ಮಾರನೇ ದಿವಸದಿಂದ ಆ ಮಾಸದ ಹಬ್ಬಹರಿದಿನಗಳು ತಿಥಿಮತಿಗಳು ಶುರು !! "ಅಧಿಕ ಮಾಸ " ಇದು ಪ್ರತೀ 3 ವರ್ಷಕ್ಕೊಂದು ಬಾರಿ ಬರುವ ಅಧಿಕ ಮಾಸ ಇದು ಈ ಬಾರಿ ಜೇಷ್ಠ ಮಾಸದಲ್ಲಿ ಬಂದಿದೆ ! " ಯಾವ ಚಾಂದ್ರಮಾಸದಲ್ಲಿ ಸೂರ್ಯನ ಸಂಕ್ರಾಂತಿ ಸಂಭವಿಸುವುದಿಲ್ಲವೋ ಅದಕ್ಕೆ ಸಂಸರ್ಪಮಾಸ ಅಥವಾ"ಅಧಿಕಮಾಸ ಮಲಮಾಸ" ಎನ್ನುತ್ತಾರೆ ! ಎರಡುತಿಂಗಳಕಾಲ ಸೂರ್ಯಗ್ರಹವು ಒಂದೇ ರಾಶಿಯಲ್ಲಿ ಇರುತ್ತಾನೆ !! " ಮಲ ಎಂದರೆ ಪಾಪ " ! ನಾವುಮಾಡಿದ ಪಾಪಗಳನ್ನು ನಿವಾರಣೆ ಮಾಡಿಕೊಳ್ಳಬಹುದಾದ ಅಪೂರ್ವ ಅವಕಾಶ ಶಕ್ತಿ ಮಲಮಾಸದಲ್ಲಿ , ಅಧಿಕಮಾಸದಲ್ಲಿ ಅಡಗಿದೆ !! 33 ದೇವತೆಗಳನ್ನೂ ಒದೊಂದು ಮಾಸದ ಅಧಿದೇವತೆಗಳನ್ನಾಗಿ ಮಾಡಿದ ಪರಮಾತ್ಮ-- ಅಷ್ಟವಸುಗಳು 8 , ಏಕಾದಶ ರುದ್ರರು 11 , ದ್ವಾದಶ ಆದಿತ್ಯರು 12, ಪ್ರಜಾಪತಿ 1, ವಷಟ್ಕರ 1 ಒಟ್ಟು 33 . " ಅಧಿಕಮಾಸಕ್ಕೆ ತಾನೇ "ಪುರುಷೋತ್ತಮ ನಾಮದಿಂದ "ಅಧಿದೇವತೆಯಾಗಿರುವುರಿಂದ ಇದಕ್ಕೆ ಪುರುಷೋತ್ತಮಮಾಸವೆಂದೂ ಹೆಸರಿದೆ ! ಪ್ರತೀ ಮೂವತ್ಮೂರು ತಿಂಗಳಿಗೆ ಬರುವ ಈ ಅಧಿಕ ಮಾಸವು ಅನೇಕ ವೈಶಿಷ್ಟವನ್ನು ಹೊಂದಿದೆ , ಈ ಬಾರಿ ಅಧಿಕವು-- ಜೇಷ್ಠ ಮಾಸದಲ್ಲಿ ಬಂದಿದೆ --- ಈ ಮಾಸದಲ್ಲಿ ಏನು ಮಾಡಬೇಕು ಏನು ಮಾಡಬಾರದು ತಿಳಿಯೋಣ ಬನ್ನಿ --- ಅಧಿಕ ಮಾಸದಲ್ಲಿ ಶುಭಕಾರ್ಯಗಳು ಅಂದರೇ ಗೃಹಪ್ರವೇಶ , ಮದುವೆ , ಚೌಲ , ಉಪನಯನ ಇತ್ಯಾದಿ ಶುಭಗಳನ್ನು ಮಾಡಬಾರದು ! ಈ ಮಾಸದಲ್ಲಿ ಆಚರಿಸಬೇಕಾದ ಪುಣ್ಯಕೆಲಸಗಳು - ಪೂಜೆಪುನಸ್ಕಾರ ,ಹವನಹೋಮಾದಿಗಳು,ಪಾರಾಯಣ ಜಪತಪಾದಿಗಳು , ವ್ರತಾಚರಣೆಗಳಿಂದ "ಅಧಿಕಸ್ಯ ಅಧಿಕ ಫಲಂ" ದೊರೆಯುವುದಂತೆ !! ಇನ್ನು ದಾನ ಧರ್ಮದ ವಿಷಯಕ್ಕೆ ಬಂದರೆ ಈ ಮಾಸದಲ್ಲಿ ಮಾಡ ಬೇಕಾದ ಪ್ರಮುಖವಾದ ದಾನಗಳು, ಅದರಿಂದ ದೊರೆಯುವ ಫಲ --- 33 ಅಪೂಪ (ಅತಿರಸ ಅಥವಾ ಕಜ್ಜಾಯ ) ದಾನದಿಂದ ಸಕಲ ಇಷ್ಟಾರ್ಥಗಳ ಸಿದ್ದಿ -- ತಾಂಬೂಲ ದಾನದಿಂದ ಸೌಭಾಗ್ಯ ಪ್ರಾಪ್ತಿ 33 ಅಡಿಕೆ 33 ವೀಳೆಎಲೆ 33 ದಕ್ಷಿಣೆ ಸಮೇತ ದಾನವನ್ನು ಅಣ್ಣತಮ್ಮಂದಿರಿಗೆ , ಅಳಿಯನಿಗೆ , ಬ್ರಾಹ್ಮಣರಿಗೆ ಕೊಡಬೇಕು , ಕಂಚಿನಪಾತ್ರೆಯಲ್ಲಿ ಅಥವಾ ಹಿತ್ತಾಳೆಯ ಪರಾತ ತಟ್ಟೆಯಲ್ಲಿ ಅಪೂಪವನ್ನಿಡಬೇಕು ! ಇನ್ನು 33 ಬೇಸಿನ್ ಲಾಡು , 33 ಕಡುಬು , ಖರ್ಜೂರ , ಹಣ್ಣುಗಳು , ಚಕ್ಕುಲಿಗಳನ್ನೂ ಕೊಡಬಹುದೆಂದು ತಿಳಿಸಿದ್ದಾರೆ ! ೩೩ ಮುತ್ತೈದೆಯರಿಗೆ ಮೊರದ ಬಾಗಿನ ಮಂಗಳದ್ರವ್ಯಗಳ ಸಮೇತ ಕೊಡಬಹುದು !! ಒಂದು ತಿಂಗಳು ಪೂರ್ತೀ -- 33 ರ ಸಂಖ್ಯೆಯಲ್ಲಿಯೇ ಉತ್ತತ್ತಿ (ಖರ್ಜೂರ ) ದ್ರಾಕ್ಷಿಗೋಡಂಬಿ ಬಾದಾಮಿಯನ್ನು ಹಾಗೂ ಕಲ್ಲುಸಕ್ಕರೆಯನ್ನೂ ಬಟ್ಟಲುಗಳಲ್ಲಿಟ್ಟು ಕೊಡಬಹುದು , ಅಖಂಡ ದೀಪದಾನದಿಂದ ಲಕ್ಷ್ಮೀದೇವಿ ಪೂರ್ಣಕಟಾಕ್ಷ --- ಹೀಗೇ ಹಣ್ಣುಗಳು, ಏನೇ ದಾನಕೊಟ್ಟರೂ 33 ಇರಬೇಕು !!! ದಾನಗಳನ್ನು ಕೊಡುವಾಗ ಮಾಸನಿಯಾಮಕ ಶ್ರೀ ಪದ್ಮಿನೀಪುರುಷೋತ್ತಮ ಪ್ರೀತ್ಯರ್ಥಮ್ ಎಂದು ಹೇಳಿಕೊಂಡೇ ದಾನ ಕೊಡಬೇಕು . ಪ್ರತೀದಿನವೂ ದೇವರಿಗೆ ಒಂದು ತಿಂಗಳೂ 33 ಪ್ರದಕ್ಷಿಣೆ ನಮಸ್ಕಾರ , ಜಪತಪ , ವಿಷ್ಣುಸಹಸ್ರನಾಮ ಪಾರಾಯಣ , ಪ್ರತೀದಿನವೂ ೩೩ ದೇವರನಾಮ ಹೇಳುವುದು , ೩೩ ಪದ್ಮರಂಗೋಲಿ , ೩೩ ಗೆಜ್ಜೆವಸ್ತ್ರದಾನ
ಮಾಡಿದರೆ ಮಾಡಿದ ಪಾಪಗಳೆಲ್ಲವೂ ಸಂಪೂರ್ಣವಾಗಿ ಪರಿಹಾರವಾಗುವುದರಲ್ಲಿ ಸಂಶಯವೇ ಇಲ್ಲ ಎಂದು ತಿಳಿದು ಬಂದಿದೆ !!! ಪುರಾಣ ಪುಣ್ಯಕಥಾ ಪಠಣ , ಶ್ರವಣ, ಮನನಗಳನ್ನು ಮಾಡಿದಲ್ಲಿ ಅಧಿಕಸ್ಯ ಅಧಿಕ ಫಲ ಪ್ರಾಪ್ತಿ ಯಾಗುವುದು ಸತ್ಯ . ಸ್ನೇಹಿತರೇ , ನಾವೂ ಅಧಿಕಸ್ಯ ಅದಿಕಫಲ ಪ್ರಾಪ್ತಿಗಾಗಿ ನಾಳೆಯಿಂದಲೇ ಒಂದು ತಿಂಗಳು ಪೂರ್ತಿ ಅಧಿಕ ಅಧಿಕವಾಗಿ ನಮಸ್ಕಾರ ,ಪಾರಾಯಣ ಜಪತಪ ,ದಾನ ಧರ್ಮಗಳನ್ನು ಮಾಡೋಣ ಪುರುಷೋತ್ತಮನ ಕೃಪೆಗೆ ಪಾತ್ರರಾಗೋಣ .*ಅಧಿಕಮಾಸದಲ್ಲಿ ವಿಶೇಷವಾಗಿ ಪ್ರತಿನಿತ್ಯ ಹೇಳಬೇಕಾದ.ಮಂತ್ರ*

*ಗೋವರ್ಧನಧರಂ ವಂದೇ ಗೋಪಾಲಂ ಗೋಪರೂಪಿಣಂ |*
*ಗೋಕುಲೋತ್ಸವಮೀಶಾನಂ ಗೋವಿಂದಂ ಗೋಪಿಕಾಪ್ರಿಯಂ ||*

ಗೋವರ್ಧನವನ್ನು ಧರಿಸಿದ,ಗೋಪರೂಪದ,ಗೋಕುಲಕ್ಕೆ ಹಬ್ಬವೆನ್ನಿಸಿದ,ಗೋಪಿಯರಿಗೆ ಪ್ರೀಯನಾದ,ಸರ್ವೇಶನಾದ,ವೇದವೇದ್ಯನಾದ ಶ್ರೀಗೋಪಾಲಕೃಷ್ಣನಿಗೆ ನಮಸ್ಕರಿಸುವೆನು.

3 days ago | [YT] | 9

VasanthaaHarish 🙏

" *#ಅಧಿಕ ಮಾಸ* " ಮಹತ್ವ

#ಶ್ರೀ ಪರಾಭವ ಸಂವತ್ಸರದಲ್ಲಿ * ಜ್ಯೇಷ್ಠ ಮಾಸವು ಅಧಿಕಮಾಸವಾಗಿ ಬಂದಿದೆ
* ಮೇ 17 ಭಾನುವಾರದಿಂದ
ಜೂನ್ 15 ಸೋಮವಾರ ರ ತನಕ*
17-05-2026 ರಿಂದ 15-06-2026

ಜೂನ್ 16 ಮಂಗಳವಾರ ನಿಜ ಜೇಷ್ಠಮಾಸ ಆರಂಭ

ಯಾವ ಚಾಂದ್ರಮಾಸದಲ್ಲಿ ಸಂಕ್ರಮಣವೇ ಬರುವುದಿಲ್ಲವೋ ಅಂತಹ ಚಾಂದ್ರಮಾಸಕ್ಕೆ ಮಲಮಾಸ(ಅಧಿಕಮಾಸ) ಎಂದು ಹೆಸರು .
*ಯಸ್ಮಿನ್ ಮಾಸೇ ನ ಸಂಕ್ರಾಂತಿಃ ಸಂಕ್ರಾಂತಿ ದ್ವಯಮೇವ ವಾ |*
*ಮಲಮಾಸಕ್ಷಯೌ ಜ್ಞೇಯೌ ಸರ್ವಧರ್ಮ ವಿವರ್ಜಿತೌ ||*

ಎರಡು ಸೂರ್ಯ ಸಂಕ್ರಮಣಗಳು ಬಂದರೆ ಅದು
ಕ್ಷಯಮಾಸ .

ಸಾಧಾರಣವಾಗಿ ಒಂದು ಸಂವತ್ಸರಕ್ಕೆ ಹನ್ನೆರಡು ಮಾಸಗಳೇ ಇದ್ದರೂ ಅಧಿಕಮಾಸ ಬಂದಾಗ ವರ್ಷಕ್ಕೆ ಹದಿಮೂರು ಮಾಸಗಳಾಗುತ್ತವೆ. ಅಧಿಕಮಾಸವು ಹದಿಮೂರನೆಯ ಮಾಸ ಆಗುತ್ತದೆ .

ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯಲಾಗುವುದು. ಪ್ರತೀ 33ನೇ ಚಾಂದ್ರಮಾಸವು ಅಧಿಕ ಮಾಸವಾಗಿರುತ್ತದೆ. ವಸಿಷ್ಠ ಸಿದ್ದಾಂತ ಪ್ರಕಾರ ಅಧಿಕ ಮಾಸವು 32 ತಿಂಗಳು 16 ದಿವಸಗಳು, 3 ಗಂಟೆ 12 ನಿಮಿಷಕ್ಕೆ ಬರುತ್ತದೆ.
ಅಧಿಕಮಾಸವು ಸಹ ಖಗೋಳ ವಿಜ್ಞಾನ ಮತ್ತು ಗಣಿತ ಸೂತ್ರಗಳನ್ನು ಆಧರಿಸಿದ ಪರಸ್ಪರ ತುಲನೆಯ ಲೆಕ್ಕಾಚಾರವಾಗಿದೆ.

[ಭೂಮಿಯು ಸೂರ್ಯನ ಸುತ್ತ, ಒಂದು ಸುತ್ತು ಸುತ್ತಿ ಬರಲು (1 ಆವರ್ತ) 365.2422 ದಿವಸಗಳು ಬೇಕು. ಇದು ಸೌರಮಾನದ ವಾರ್ಷಿಕ ಚಲನೆಯಾಗಿದೆ.
ಚಂದ್ರನು ಭೂಮಿಯ ಸುತ್ತಲು ಚಲಿಸುತ್ತಿರುವಾಗ ಭೂಮಿಯೂ ಸಹಾ ಸೂರ್ಯನ ಸುತ್ತಲೂ ಚಲಿಸುತ್ತಿರುವುದರಿಂದ ಚಂದ್ರನು ಹುಣ್ಣಿಮೆಯಿಂದ ಮುಂದಿನ ಹುಣ್ಣಿಮೆಯವರೆಗೆ ಚಲಿಸಲು 29.531 ದಿವಸಗಳನ್ನು ತೆಗೆದುಕೊಳ್ಳುತ್ತದೆ.
ಸೌರಮಾನ ಮತ್ತು ಚಾಂದ್ರಮಾನದ ವಾರ್ಷಿಕ ವ್ಯತ್ಯಾಸ: 10.8702 ದಿವಸಗಳು

ಈ ವ್ಯತ್ಯಾಸ 3 ವರ್ಷಗಳಲ್ಲಿ 32.6106 ದಿವಸಗಳಾಗುತ್ತದೆ. ಈ ವ್ಯತ್ಯಾಸ ಸರಿತೂಗಿಸಲು 3ನೇ ವರ್ಷದಲ್ಲಿ ಅಧಿಕ ಮಾಸ ಬರುತ್ತದೆ.]
ಸೌರ ವರ್ಷವನ್ನು ಚಂದ್ರ ವರ್ಷದೊಂದಿಗೆ ಸಮನ್ವಯಗೊಳಿಸಲು, ಪ್ರತಿ ಮೂರನೇ ವರ್ಷಕ್ಕೆ,ಆ ವರ್ಷದ ಪಂಚಾಂಗಕ್ಕೆ ಒಂದು ಚಂದ್ರ ತಿಂಗಳನ್ನು ಸೇರಿಸಲಾಗುತ್ತದೆ.
ಇದನ್ನು ಅಧಿಕಮಾಸ ಎಂದು ಕರೆಯಲಾಗುತ್ತದೆ.

ಸೌರ ವರ್ಷವು 365 ದಿನಗಳು,15 ಘಟಿಗಳು, 22 ಪಲಗಳು ಮತ್ತು 57 ವಿಪಲಗಳು.

ಆದರೆ ಚಂದ್ರ ವರ್ಷವು 354 ದಿನಗಳು, 22 ಘಟಿಗಳು,1 ಪಲ ಮತ್ತು 23 ವಿಪಲಗಳು.

ಪ್ರತಿ ವರ್ಷ 10 ದಿನಗಳು 53 ಘಟಿಗಳು ಮತ್ತು 21 ಪಲಗಳ (ಸರಾಸರಿ 11 ದಿನಗಳ) ವ್ಯತ್ಯಾಸವಿದೆ.

ಈ ವ್ಯತ್ಯಾಸವನ್ನು ಸಮತೋಲನಗೊಳಿಸಲು,ಪ್ರತಿ ಮೂರು ವರ್ಷಕ್ಕೊಮ್ಮೆ ಚಂದ್ರ ವರ್ಷವು 12 ರ ಬದಲಿಗೆ 13 ತಿಂಗಳುಗಳನ್ನು ಹೊಂದಿರುತ್ತದೆ.

ವಾಸ್ತವವಾಗಿ, ಈ ಪರಿಸ್ಥಿತಿ ಸ್ವಾಭಾವಿಕವಾಗಿ ಉದ್ಭವಿಸುತ್ತದೆ.ಏಕೆಂದರೆ ಈ ಚಂದ್ರಮಾಸದಲ್ಲಿ ಸೂರ್ಯ ಸಂಕ್ರಾಂತಿ ಉಂಟಾಗುವುದಿಲ್ಲ.ಹಾಗಾಗಿ ಈ ಸೌರ ಅಯನ ಸಂಕ್ರಾಂತಿ ಸಂಭವಿಸದ ಚಂದ್ರ ಮಾಸವನ್ನು "ಅಧಿಕ ಮಾಸ " ಎಂದು ಕರೆಯಲಾಗುತ್ತದೆ.

ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಾಂತಿಯಿರುವುದಿಲ್ಲ.
ಪ್ರತಿ ಮಾಸದ ಎರಡೂ ಏಕಾದಶಿಗಳಿಗೆ ಪ್ರತ್ಯೇಕ ಪ್ರತ್ಯೇಕವಾದ ಪುರಾಣೋಕ್ತ ಹೆಸರುಗಳಿವೆ. (ಉದಾ: ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಗೆ "ಕಾಮದಾ ಏಕಾದಶಿ" ಎಂದು ಹೆಸರಿದ್ದರೆ, ಕೃಷ್ಣ ಪಕ್ಷದ ಏಕಾದಶಿಯು "ವರೂಥಿನಿ ಏಕಾದಶಿ" ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಅಧಿಕ ಮಾಸದಲ್ಲಿ ಬರುವ ಶುಕ್ಲ, ಕೃಷ್ಣ ಪಕ್ಷದ ಏಕಾದಶಿಗಳು "ಪದ್ಮಿನಿ, ಪರಮಾ ಏಕಾದಶಿಗಳೆಂದೇ ಪ್ರಸಿದ್ಧವಾಗಿವೆ. ಈ ಏಕಾದಶಿಗೆ ಪುರುಷೋತ್ತಮ ನಾಮಕ ಪರಮಾತ್ಮ ನಿಯಾಮಕನು. ಆದ್ದರಿಂದ ಅಧಿಕ ಮಾಸಕ್ಕೆ ಪುರುಷೋತ್ತಮ ಮಾಸವೆಂದೂ ಹೆಸರಿದೆ.

೧೨ಮಾಸಕ್ಕೂ ಭಗವಂತ ಒಂದೊಂದು ರೂಪಗಳಿಂದ ನಿಯಾಮಕನಾಗಿದ್ದು ಒಂದಕ್ಕಿಂತ ಒಂದು ಮಾಸಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ಮೂರು ವರ್ಷಕ್ಕೊಮ್ಮೆ ಬರುವ "ಅಧಿಕ ಮಾಸಕ್ಕೆ" ವಿಶೇಷ ಸ್ಥಾನ ನೀಡಲಾಗಿದೆ.

*ಅಧಿಕಮಾಸದ ಮಹತ್ವ*
-----------------------------------
ಸಕಲ ಮಲವನ್ನು ಕಳೆಯುವ ಮಾಸವಾದ್ದರಿಂದ ಅಧಿಕಮಾಸಕ್ಕೆ ಮಲಮಾಸ ಎಂದು ಹೆಸರು ಎಂಬುದಾಗಿ ಜ್ಞಾನಿಗಳು ನಿರ್ಣಯಿಸಿ ಹೇಳಿರುವರು.
ಈ ಮಾಸದಲ್ಲಿ ನಮ್ಮ ಎಲ್ಲಾ ಕಾರ್ಯಗಳು ದೇವರ ಮುಡಿಪಾಗಿ ಇಡಬೇಕು. ದೇವರ ನಾಮಸ್ಮರಣೆ ,ಪಾರಾಯಣ , ಸತ್ಸಂಗ, ಜಪ-ತಪ ಹೋಮ-ಹವನದಂತಹ ದೇವತಾ ಕಾರ್ಯಗಳು, ದಾನ ಧರ್ಮ ಇವೂಗಳನ್ನು
ಎಷ್ಟು ಶ್ರದ್ಧೆಯಿಂದ ಮಾಡುತ್ತೇವೊ ಅಷ್ಟು ಅಧಿಕ ಅಧಿಕ ಫಲವನ್ನು ಪಡೆಯುತ್ತೇವೆ.
ಮಲ ಎಂದರೆ ಪಾತಕ
ಸ್ನಾನ ದಾನ ,ದೀಪಗಳಿಂದ ಪುರುಷೋತ್ತಮನನ್ನು ಆರಾಧಿಸಿದರೆ ಎಲ್ಲ ಪಾತಕವೂ ಬೂದಿಯಾಗುವುದು .

ಶುಭಕಾರ್ಯಗಳಿಗೆ ನಿಷಿದ್ಧವಾದ ಕಾರಣದಿಂದಲೂ ಇದಕ್ಕೆ ಮಲಮಾಸ ಎಂದು ಹೆಸರು
ವಿವಾಹ ಉಪನಯನಾದಿ ಯಾವ ಮಂಗಳಕಾರ್ಯಗಳಿಗೂ ಇದು ಯೋಗ್ಯವಲ್ಲ.
ಅಧಿಕ ಮಾಸದಲ್ಲಿ ಯಾವುದೇ ಹಬ್ಬಗಳು ಬರುವುದಿಲ್ಲವಾದರೂ ದಾನ,ಕರ್ಮಾನುಷ್ಠಾನ ಸಾಧನೆಗೆ ಅಧಿಕಮಾಸದಲ್ಲಿ ವಿಶೇಷ ಫಲವಿದೆ. ಅದಕ್ಕಲ್ಲವೇ " *ಅಧಿಕಸ್ಯ ಅಧಿಕಫಲಂ*" ಎಂದು ಹೇಳಿರುವುದು.
ಈ ಮಾಸದಲ್ಲಿ ಪಾರಾಯಣ ಪ್ರವಚನ ಜಪ ತಪ ಅನುಷ್ಠಾನ ಗಳಿಗೆ ಅಧಿಕ ಫಲ ಇರುತ್ತದೆ
ಈ ಮಾಸದಲ್ಲಿ ಆರಾಧನೆ ಮಾಡುವ, 33 ಭಗವದ್ರೂಪಗಳು,

ಮೂವತ್ತುಮೂರು ತಿಂಗಳಿಗೊಮ್ಮೆ ಬರುವ
ಅಧಿಕಮಾಸದಲ್ಲಿ ಆರಾಧಿಸುವ
33 ದೇವತೆಗಳ ವಿವರಣೆ:
ಅಷ್ಟ (8) ವಸುಗಳು
ಏಕಾದಶ (11)ರುದ್ರರು
ದ್ವಾದಶ (12) ಆದಿತ್ಯರು.
(1) ಪ್ರಜಾಪತಿ
(1) ವಷಟ್ಕಾರ
ಒಟ್ಟು 33 ದೇವತೆಗಳು.

ಅಧಿಕ ಮಾಸದಲ್ಲಿ ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶಾದಿತ್ಯರು, ಪ್ರಜಾಪತಿ ಹಾಗೂ ಪರಮಾತ್ಮನಾದ ಶ್ರೀ ಹರಿಯ ಪುರುಷೋತ್ತಮ ರೂಪದ ಮೂವತ್ತಮೂರು ರೂಪಗಳನ್ನು ಚಿಂತಿಸುತ್ತ ಅವನ ಒಲುಮೆ ಪಡೆಯುವ ದಿವ್ಯ ಮಾಸವಿದು. ಅಧಿಕ ಮಾಸದಲ್ಲಿ ಯಾವುದೇ ಪದಾರ್ಥವನ್ನೂ 33 ಸಂಖ್ಯೆಯಲ್ಲಿ ದಾನ ಮಾಡುವ ಸಂಪ್ರದಾಯ ಬೆಳೆದು ಬಂದಿದೆ. 33ರ ಸಂಕೇತವೆಂದರೆ, 3+3=6, ಅರಿಷಡ್ವರ್ಗಗಳ ಮೇಲಿನ ಜಯ, 3X3=9 ನವವಿಧ ಭಕ್ತಿಯ ಸಂಕೇತ, 3/3=1 ಏಕೈಕನಾಥನಾದ ಪುರುಷೋತ್ತಮನನ್ನು ನೇರವಾಗಿ ಭಜಿಸುವ ತನ್ಮಯಚಿತ್ತ.
ಆಧ್ಯಾತ್ಮಿಕ ಲಾಭ ನೀಡುವ ಇಂತಹ ಪವಿತ್ರ ಪರ್ವಕಾಲದ ಸದುಪಯೋಗವನ್ನು ಪಡೆಯುವುದು ಎಲ್ಲ ಸಜ್ಜನರ ಕರ್ತವ್ಯವಾಗಿದೆ.
*ಅಧಿಕ ಮಾಸದಲ್ಲಿ ಅಪೂಪ (ಅತಿರಸ) ದಾನ*
ಅಧಿಕ ಮಾಸದಲ್ಲಿ ದಾನಕ್ಕೆ ಅದರಲ್ಲೂ 33 ಅಪೂಪ ದಾನಕ್ಕೆ ವಿಶೇಷ ಫಲವಿದೆ. ದಂಪತಿಪೂಜೆ, ದೀಪದಾನಗಳು ವಿಹಿತವಾಗಿವೆ. ಪಾರಾಯಣ ಪ್ರವಚನಗಳು ಮತ್ತು ಅಪೂಪದಾನದಿಂದ ಪೃಥ್ವೀದಾನದ ಫಲವನ್ನು ಕೊಡುತ್ತದೆ.

ಅಧಿಕಮಾಸದ ಪ್ರತಿದಿನವೂ ಆಗದಿದ್ದರೆ ದ್ವಾದಶಿ, ಹುಣ್ಣಿಮೆ ಮತ್ತಿತರೇ ದಿನಗಳಲ್ಲಿಯಾದರೂ ಕಂಚಿನಪಾತ್ರೆಯಲ್ಲಿಟ್ಟು ಅಪೂಪವನ್ನು ದಕ್ಷಿಣೆಯೊಂದಿಗೆ ದಾನ ಕೊಡಬೇಕು. ಕೊಡುವಾಗ ಅಪೂಪದಲ್ಲಿರುವ ೩೩ಭಗವದ್ರೂಪಗಳನ್ನು ಚಿಂತಿಸಿ ದಾನ ಮಾಡಬೇಕು. ಅಪೂಪದಾನ ಪ್ರಮಾಣ ಶ್ಲೋಕ :
ತ್ರಯಸ್ತ್ರಿಂಶದ ಪೂಪಾನ್ನಂ ಕಾಂಸ್ಯಪಾತ್ರೇ ನಿಧಾಯ ಚ|
ಸಘೃತಂ ಹಿರಣ್ಯಂಚ ಬ್ರಾಹ್ಮಣಾಯ ನಿವೇದಯೇತ್||

33 ಅಪೂಪಗಳನ್ನು ತುಂಬಿ ದೇವರ ಎದುರಿನಲ್ಲಿ ರಂಗೋಲಿಯಿಂದ ಮಂಡಲಮಾಡಿ ಮಣೆಯನ್ನಿಟ್ಟು ಅದರ ಮೇಲೆ ಅಪೂಪ ತುಂಬಿದ ಪಾತ್ರೆಯನ್ನಿಟ್ಟು ೩೩ದೇವತೆಗಳನ್ನು ಆವಾಹನ ಮಾಡಿ ದಾನ ಮಾಡಬೇಕು.

ಇಂತಹ ಪುರುಷೋತ್ತಮ ನಾಮಧೇಯ ಹೊಂದಿರುವ ಪರಮಾತ್ಮನನ್ನು ಅಧಿಕಮಾಸದ ಸಂದರ್ಭದಲ್ಲಿ ಆ ಮಹಾವಿಷ್ಣುವಿನ - ಶ್ರೀ ಹರಿಯ ಚಿಂತನೆ ಅನುನಿತ್ಯ ಮಾಡುವುದರಿಂದ ಸಕಲ ಸಂಕಷ್ಟಗಳಿಂದ ಪಾರಾಗಲು ಸಾದ್ಯ

ವರ್ಷಪೂರ್ತಿ ಮಾಡಬೇಕಾದ ವ್ರತಗಳನ್ನು ಕಾರಣಾಂತರಗಳಿಂದ ಮಾಡಲಾಗದವರು, ಈ ಒಂದು ತಿಂಗಳಲ್ಲಿ ಪಾಲಿಸಿದರೆ ಅದು ವರ್ಷವಿಡಿ ಪ್ರಥಮಾಡಿದ ಪುಣ್ಯ ಈ ಒಂದು ತಿಂಗಳಿನಲ್ಲಿಯೇ ಸಿಗುತ್ತದೆ,
ಯಾವುದೇ ಕಾಮನೆ ಇರಲಿ, ಇಲ್ಲದಿರಲಿ, ಅಧಿಕಮಾಸವನ್ನು ಆಚರಿಸುವುದು ಅತ್ಯಂತ ಉತ್ತಮ

✍️ ಸಂಗ್ರಹ 🙏

3 days ago | [YT] | 5

VasanthaaHarish 🙏

#ನಂಬಿಕೆ ಇಡುವ ಮೊದಲು #ವಿವೇಕ ಬೇಕು.....

ಮಾನವ ಜೀವನದಲ್ಲಿ #ಸಂಬಂಧಗಳು ಬಹಳ ಮುಖ್ಯ.
ಆದರೆ ಒಂದು ವಿಷಯ ನಾವು ಮರೆಯಬಾರದು.
ಎಲ್ಲರನ್ನು ನಂಬುವುದು ಜ್ಞಾನವಲ್ಲ,ಸರಿಯಾದವರನ್ನು ನಂಬುವುದು ಜ್ಞಾನ.ಜೀವನದಲ್ಲಿ ಎಲ್ಲರನ್ನೂ ಪ್ರೀತಿಯಿಂದ ನೋಡಬೇಕು, ಆದರೆ ವಿವೇಕದಿಂದ ನಂಬಿಕೆ ಇಡಬೇಕು.
ಇವತ್ತು ನಾವು ನಂಬಬಾರದ ಆರು ವಿಧದ ಜನರ ಬಗ್ಗೆ ಚಿಂತಿಸೋಣ.
ಮೊದಲನೆಯದು;-ಹಾಸ್ಯ ಎಂಬ ಹೆಸರಿನಲ್ಲಿ ಅವಹೇಳನ ಮಾಡುವವರು.ಇವರು ನಗಿಸುವಂತೆ ಕಾಣುತ್ತಾರೆ, ಆದರೆ ಒಳಗೆ ನೋವು ಕೊಡುತ್ತಾರೆ.ಅಂತಹ ಹಾಸ್ಯ ಸ್ನೇಹವಲ್ಲ, ಅದು ಮರೆಮಾಚಿದ ಅವಮಾನ.
ಎರಡನೆಯದು;-ತಮ್ಮ ತಪ್ಪನ್ನು ಒಪ್ಪಿಕೊಳ್ಳದವರು, ಆದರೆ ಇತರರ ತಪ್ಪನ್ನು ಎಲ್ಲರಿಗೂ ಹೇಳುವವರು.ಇವರಲ್ಲಿ ಪ್ರಾಮಾಣಿಕತೆ ಇಲ್ಲ.ತಪ್ಪು ಒಪ್ಪಿಕೊಳ್ಳದ ಮನಸ್ಸು ಬೆಳವಣಿಗೆ ಕಾಣುವುದಿಲ್ಲ.
ಮೂರನೆಯದು;-ನಿಮಗಾಗಿ ಒಳ್ಳೆಯದನ್ನೇ ಬಯಸುತ್ತೇನೆ” ಎಂದು ಹೇಳಿ, ಬೆನ್ನಿಗೆ ಚೂರಿ ಹಾಕುವವರು.ಇವರು ಮುಖದಲ್ಲಿ ಸ್ನೇಹ, ಹೃದಯದಲ್ಲಿ ದ್ರೋಹ, ಇಟ್ಟುಕೊಳ್ಳುತ್ತಾರೆ.
ನಾಲ್ಕನೆಯದು;-ಮಾತು ಮತ್ತು ನಡತೆಯ ನಡುವೆ ತಾರತಮ್ಯ ಇರುವವರು.ಇವರು ಹೇಳುವುದು ಒಂದೇ, ಮಾಡುವುದು ಇನ್ನೊಂದು.ಇವರ ಮೇಲೆ ನಂಬಿಕೆ ಇಟ್ಟರೆ ನಿರಾಶೆ ತಪ್ಪದು.
ಐದನೆಯದು;-ನಿಮ್ಮನ್ನು ನಂಬಿದಂತೆ ನಟಿಸಿ, ಒಳಗೆ ಅವಮಾನ ಮಾಡುವವರು.ಕಾಳಜಿ ಇರುವಂತೆ ತೋರಿ, ನಿಜವಾಗಿ ಕಾಳಜಿ ಇಲ್ಲದವರು.ಇದು ನಾಟಕ, ನಿಜವಾದ ಸ್ನೇಹವಲ್ಲ.
ಆರನೆಯದು;-ನಿಮ್ಮ ಒಳ್ಳೆಯ ಕೆಲಸದಲ್ಲಿ ಅಡ್ಡಿಪಡಿಸಿ, ನಿಮ್ಮ ಪ್ರಯತ್ನವನ್ನು ಕಠಿಣಗೊಳಿಸುವವರು.ಇವರು ನಿಮ್ಮ ಬೆಳವಣಿಗೆಯನ್ನು ಸಹಿಸಲಾರರು.ಈ ಆರು ವಿಧದ ಜನರನ್ನು ದ್ವೇಷಿಸಬೇಕೆಂದಲ್ಲ.ಆದರೆ ಇವರೊಂದಿಗೆ ದೂರವನ್ನು ಕಾಪಾಡುವುದು ಜ್ಞಾನ.ಎಲ್ಲರ ಜೊತೆ ಸೌಹಾರ್ದ ಇರಲಿ.ಆದರೆ ನಂಬಿಕೆ ಆಯ್ದವರಿಗೆ ಮಾತ್ರ ಇರಲಿ.ನಂಬಿಕೆ ಒಂದು ಅಮೂಲ್ಯವಾದ ಸಂಪತ್ತು.
ಅದನ್ನು ಯಾರಿಗಾದರೂ ಕೊಡುವುದಲ್ಲ,ಅದಕ್ಕೆ ಅರ್ಹರಾದವರಿಗೆ ಮಾತ್ರ ಕೊಡಿ.ಮನಸ್ಸು ಒಳ್ಳೆಯದಾಗಿರಲಿ,ಆದರೆ ವಿವೇಕ ಜಾಗೃತವಾಗಿರಲಿ.

2 weeks ago | [YT] | 5

VasanthaaHarish 🙏

ಸ್ನೇಹಿತರೇ , ಇಂದು "ಶ್ರೀ ಭಗವತ್ಪಾದ ಶಂಕರಾಚಾರ್ಯರ ಜಯಂತಿ " ಹಾಗೂ ಶ್ರೀ ರಾಮಾನುಜಾಚಾರ್ಯರ ಜಯಂತಿ * ನಮ್ಮ ಭಾರತೀಯ ಸನಾತನ ಧರ್ಮ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯ ತ್ರಯರಲ್ಲಿ ಶ್ರೀ ಭಗವತ್ಪಾದ ಶಂಕರರು ಮೊದಲಿಗರು ! ನಮ್ಮ ಭಾರತದಲ್ಲಿ ಹಿಂದೂ ಸಂಸ್ಕೃತಿ ನಶಿಸಿಹೋಗುತ್ತಿದ್ದ ಸಮಯದಲ್ಲಿ ಜನ್ಮತಾಳಿದವರು ಆಚಾರತ್ರಯರು ! ಶ್ರೀಶಂಕರಾಚಾರ್ಯರು , ಶ್ರೀ ರಾಮಾನುಜಾಚಾರ್ಯರು ಹಾಗೂ ಶ್ರೀ ಮಧ್ವಾಚಾರ್ಯರು !! ಇವರುಗಳು "ದ್ವೈತ " "ಅದ್ವೈತ" "ವಿಶಿಷ್ಟಾದ್ವೈತ " ತತ್ವವನ್ನು ಪ್ರತಿಪಾದಿಸುತ್ತಾ ಜಗತ್ತಿಗೆ ಸಾರುತ್ತಾ ಅನ್ಯಧರ್ಮಗಳ ದಾಳಿಗೊಳಗಾಗುತ್ತಿದ್ದ ನಮ್ಮ ಭಾರತೀಯ ಸನಾತನ ಹಿಂದೂಧರ್ಮವನ್ನು ಪುನರುತ್ಥಾನಗೊಳಿಸಿದವರು !
ಈ ವಿಶ್ವ ಬರಿಯ ಮಾಯೆ ಭಗವಂತನೊಬ್ಬನೇ ಸತ್ಯ ಎಂದರು ಶಂಕರರು , ವಿಶ್ವಾತ್ಮನಾದ ಭಗವಂತನಿಗೆ ಈವಿಶ್ವವೇ ಶರೀರವಿದ್ದಂತೆ ಇದು ಸತ್ಯ ಎಂದರು ಆಚಾರ್ಯ ರಾಮಾನುಜರು , ಈ ಜಗತ್ತು ಭಗವಂತನ ಲೀಲಾಸೃಷ್ಟಿ ಇದನ್ನು ಅಪಲಾಪಮಾಡಿ ಅವನ ಮಹಿಮೆಗೆ ಅಪಚಾರ ಮಾಡದಿರಿ ಎಂದರು ಮಧ್ವರು !!
ಹನ್ನೊಂದನೇ ಶತಮಾನದಲ್ಲಿಯೇ ಜಾತಿಭೇದಗಳನ್ನು ಹೋಗಲಾಡಿಸುವಲ್ಲಿ ರಾಮಾನುಜರು ಮಾಡಿದ ಕಾರ್ಯಗಳು ಮಹತ್ವಪೂರ್ಣವಾಗಿವೆ !! ಇಂದಿಗೂ ಮೇಲುಕೋಟೆಯಲ್ಲಿ ನೆಡೆಯುವ ಸುಪ್ರಸಿದ್ಧ ವೈರಮುಡಿ ಉತ್ಸವದಲ್ಲಿ ಜಾತಿಭೇದವಿಲ್ಲದೇ ಎಲ್ಲರೂ ಒಂದಾಗಿ ಪಾಲ್ಗೊಳ್ಳುತ್ತಾರೆ ! ಶ್ರೀ ರಾಮಾನುಜಾಚಾರ್ಯರು ೧೨೦ ವರ್ಷಗಳ ಸುಧೀರ್ಘ ಸಾರ್ಥಕ ಜೀವನ ನೆಡೆಸಿದ ಆಧ್ಯತ್ಮಿಕ ಶಕ್ತಿಯಾಗಿ ಮೆರೆದವರು !!
ಶ್ರೀ ಭಗವತ್ಪಾದ ಶ್ರೀ ಶಂಕರರು
ಕೇರಳದ ಕಾಲಟಿ ಎಂಬ ಗ್ರಾಮದಲ್ಲಿ ತಾಯಿ ಆರ್ಯ್ಯಾಂಬೆ ತಂದೆ ಶಿವಗುರುವಿಗೆ ಮಗನಾಗಿ ವೈಶಾಖ ಶುದ್ಧ ಪಂಚಮಿಯಂದು ಜನಿಸಿದರು , ಬೆಳೆವ ಕುಡಿ ಮೊಳಕೆಯಲ್ಲೇ ನೋಡೆಂಬಂತೆ -- ಬಾಲ್ಯದಿಂದಲೇ ಶಂಕರರ ಸಾಧನೆ ಅಪಾರ ! ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಂಸ್ಕೃತ ಪಾಂಡಿತ್ಯದಲ್ಲಿ ಪಾರಂಗತರಾಗಿದ್ದುದು ದೈವಕೃಪೆಯೇ ! ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡ ಅವರಿಗೆ ತಾಯಿ ಆರ್ಯಾಂಬೆ ೮ ನೇ ವಯಸ್ಸಿನಲ್ಲಿ ಉಪನಯನ ಮಾಡಿದರು - ತಾಯಿಯಮೇಲೆ ಅಪಾರ ಗೌರವ ಪ್ರೀತಿ ಶಂಕರರಿಗೆ - ಒಮ್ಮೆ ತಾಯಿ ನೀರು ತರಲು ದೂರದಲ್ಲಿರುವ ನದಿಗೆ ಹೋಗಿ ಕಷ್ಟಪಡುವುದನ್ನರಿತ ಶಂಕರರು ಮನಸ್ಸಿನಲ್ಲೇ ಗಂಗೆಯನ್ನು ಸ್ಮರಿಸಿ ನದಿಯನ್ನೇ ಮನೆಯ ಪಕ್ಕ ಹರಿಯುವಂತೆ ಮಾಡಿದ ಮಹಾನ್ ದೈವಾಂಶ ಸಂಭೂತರು ಶಂಕರರು !!! ಒಮ್ಮೆ ಬಾಲ ಶಂಕರರು ಭಿಕ್ಷೆಗೆ ಬಡ ಮಹಿಳೆಯೊಬ್ಬರ ಮನೆಗೆ ಹೋಗಿ ಬೇಡಿದಾಗ -- ಮನೆಯಲ್ಲಿ ಧಾನ್ಯವಿಲ್ಲದ ಅವಳು ಒಣಗಿದ ನೆಲ್ಲಕಾಯಿಯನ್ನೇ ಭಕ್ತಿಯಿಂದ ಶಂಕರರಿಗೆ ಅರ್ಪಿಸಿದಾಗ -- ಅವಳ ಬಡತನಕ್ಕೆ ಮರುಗಿದ ಅವರು ಮನಸ್ಸಿನಲ್ಲೇ ಭಕ್ತಿಯಿಂದ ಲಕ್ಷ್ಮೀ ದೇವಿಯನ್ನು ಸ್ತುತಿಮಾಡಿದಾಗ ಆ ಬಡವಳ ಮನೆಯಲ್ಲಿ ಚಿನ್ನದ ನೆಲ್ಲಿಕಾಯಿಯ ಮಳೆಯೇ ಸುರಿಯಿತಂತೆ ! ಅದು ಅಕ್ಷಯತೃತೀಯ ದಿವಸದಂದೇ ! ಅದು ಅವರ ಬಾಯಿಂದ ಬಂದ " ಕನಕಧಾರಾ ಸ್ತುತಿಯೇ ಆಗಿದೆ " - ಇಂದಿಗೂ ಅದಕ್ಕೆ ಸಾಕ್ಷಿಯಾಗಿ ಕೇರಳದಲ್ಲಿ " ಸ್ವರ್ಣತ್ತಿಲ್ಲಮ್ " ಎಂಬ ಕುಟೀರವಿದೆಯಂತೆ ! ಶಂಕರರು ಸನ್ಯಾಸ ಸ್ವೀಕರಿಸಿ ದೇಶಾಂತರಕ್ಕೆ ಹೊರಟು ನಿಂತಾಗ ಬೇಸರಗೊಂಡ ತಾಯಿಗೆ ಸಮಾಧಾನಿಸುತ್ತಾ ನೀನು ಕರೆದಾಗ ಕೂಡಲೇ ಬರುವುದಾಗಿ ಮಾತುಕೊಟ್ಟು ಹೊರಟರು --( ಅದರಂತೆಯೇ ಮುಂದೆ ಸನ್ಯಾಸಿಯಾಗಿದ್ದರೂ ತಾಯಿಯ ಕೊನೆಯ ಬಯಕೆಯಂತೆ ತಾವೇ ಬಂದು ಅಂತ್ಯಸಂಸ್ಕಾರ ಮಾಡಿದವರು ಶಂಕರರು!)
ಸುಮಾರು ಹನ್ನೆರಡು ಶತಮಾನಗಳ ಹಿಂದೆ ವಾಹನ ಸೌಕರ್ಯವೇ ಇಲ್ಲದ ಕಾಲದಲ್ಲಿ ಕೇರಳದಿಂದ ಕಾಶ್ಮೀರದ ವರೆಗೆ , ಹಿಮಾಲಯ ನೇಪಾಳದವರೆಗೆ ಇಡೀ ಭಾರತದೇಶವನ್ನು ಕಾಲ್ನಡಿಗೆಯಲ್ಲೇ ಸುತ್ತಿ ಧರ್ಮಪ್ರಚಾರ ಮಾಡಿದ ಮಹಾ ಮಹಿಮರು ಶಂಕರರು !! ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು , ವೇದಧರ್ಮವನ್ನು ಎತ್ತಿಹಿಡಿದರು , ಅದ್ವೈತ ಮತಪ್ರಚಾರ ಮಾಡಿದರು ! ಕಾಶ್ಮೀರದಲ್ಲಿ ಶಾರದೆ ದೇವಾಲಯವನ್ನು , ಪುರಿ ದ್ವಾರಕರ ಮತ್ತು ಬದರಿನಾಥದಲ್ಲಿ ಮಠಗಳನ್ನು ಸ್ಥಾಪಿಸಿದರು , ಬದುಕಿದ್ದು ಕೇವಲ ೩೨ ವರ್ಷಗಳಾದರೂ ಅಪಾರ ಸಾಧನೆಗೈದ ಅವರ ತತ್ವ ವಿಚಾರ ಅಪಾರ ಹಾಗೂ ಅಮರ ! ಅವು ನಿತ್ಯ ಜನರ ಬದುಕಿಗೆ ಬೆಳಕಾಗಿ ಇಂದಿಗೂ ಆಧ್ಯಾತ್ಮ ಚಿಂತನೆ ನೀಡುತ್ತಿವೆ -- ಅವರು ರಚಿಸಿದ ಅನೇಕ ಸ್ತೋತ್ರಗಳು ಇಂದಿಗೂ ನಮಗೆಲ್ಲಾ ಮಾರ್ಗದರ್ಶನ ನೀಡುತ್ತಿವೆ - ಶಂಕರ ಸ್ತುತಿ, ಶಾರದಾ ಸ್ತುತಿ , ಅನ್ನಪೂರ್ಣೇಶ್ವರಿ ಸ್ತುತಿ , ಸೌಂದರ್ಯ ಲಹರಿ , ಕನಕಧಾರಾಸ್ತೋತ್ರ ಹೀಗೇ ಅನೇಕ ಸುಂದರ ಸುಸಂಸ್ಕೃತ ಸ್ತೋತ್ರ ಸ್ತುತಿಗಳನ್ನು ನಮಗೆ ಕೊಟ್ಟಿದ್ದಾರೆ .
"ಸನಾತನ ಸಂಸ್ಕೃತಿಯ ತವರೂರು ನಮ್ಮ ಭಾರತ "
ಈ ಮೂರೂ ಹಿರಿಯ ಆಚಾರ ತ್ರಯರ ದಯೆಯಿಂದ ಸನಾತನ ಸಂಸ್ಕೃತಿ ಬೆಳಗಲಿ ಎಲ್ಲರಿಗೂ ಸದಾಕಾಲವೂ ಆಯುರಾರೋಗ್ಯ ಭಾಗ್ಯ ಸಿಗಲೆಂದು ಅವರು ರಚಿಸಿದ ಹಾಡು ಸ್ತೋತ್ರಗಳ ಪಠಣ ಮಾಡುತ್ತಾ ನಮಿಸೋಣ .

4 weeks ago | [YT] | 15

VasanthaaHarish 🙏

*#ಅಕ್ಷಯ ತದಿಗೆ* *ಅಕ್ಷಯ ಫಲ*

ಅಕ್ಷಯ ತೃತೀಯ ವೆಂದರೆ ಬಹಳಷ್ಟು ಜನರಿಗೆ ಅಂದು ಚಿನ್ನ ಖರೀದಿ ಸಬೇಕೆಂಬುದನ್ನು ಬಿಟ್ಟರೆ ಬೇರೇನೂ ತಿಳಿದಿರುವುದಿಲ್ಲ ಎಂದೇ ನನ್ನ ಅನಿಸಿಕೆ.
ಆದರೆ ಅಂದು ಏನೇನೆಲ್ಲಾ ವಿಶೇಷತೆಗಳು ಇವೆ ಎಂಬುದನ್ನು ನೋಡುವುದಾದರೆ,,,,,

🕉️ಅಕ್ಷಯ ತದಿಗೆಯ ದಿನದಂದೇ ಶ್ರೀ ಗಣೇಶನಿಂದ ವೇದವ್ಯಾಸರು ಮಹಾಭಾರತ ಕಾವ್ಯ ಬರೆಸಲು ಪ್ರಾರಂಭಿಸಿದರು.

🕉️ಈ ದಿನದಂದೇ ತ್ರೇತಾ ಯುಗದ ಆರಂಭವಾಗಿದ್ದು

🕉️ವಿಷ್ಣುವಿನ ಆರನೇ ಅವತಾರವಾದ ಪರಶುರಾಮ ಅವತರಿಸಿದ್ದು ಇದೇ ದಿನದಂದು

🕉️ತುಳಸಿದಾಸರು ರಾಮಚರಿತ ಮಾನಸ ಬರೆಯಲು ಈ ಶುಭದಿನದಂದೆ ಪ್ರಾರಂಭಿಸಿದರು

🕉️ಆದಿಶಂಕರಾಚಾರ್ಯರು ಕನಕಧಾರ ಸ್ತೋತ್ರವನ್ನು ರಚಿಸಿದ್ದು ಸಹ ಇಂದಿನ ಶುಭ ದಿನವೇ

🕉️ಪಾಂಡವರಿಗೆ ಅಕ್ಷಯಪಾತ್ರೆ ದೊರಕಿದ ದಿನವೂ ಸಹ ಇದೇ ಆಗಿದೆ

🕉️ಆ ಪವಿತ್ರ ಗಂಗೆ ಶಿವನ ಜಟೆಯಿಂದ ಭೂಮಿಗಿಳಿದು ಬಂದ ದಿನವೂ ಸಹ ಇದೆ

🕉️18 ದಿನಗಳು ನಡೆದ ಮಹಾಭಾರತದ ಯುದ್ಧವು ಈ ಪವಿತ್ರ ದಿನದಂದು ಕೊನೆಗೊಂಡಿತು

ಇನ್ನು ಈಗಿನ ಕಾಲದ ಘಟ್ಟದಲ್ಲಿ ನೋಡುವುದಾದರೆ ಈ ಅಕ್ಷಯ ತದಿಗೆಯ ದಿನದಂದೇ ಜಗತ್ಪ್ರಸಿದ್ಧ ರಥಯಾತ್ರೆಯ ಉತ್ಸವ ಗಳಿಗಾಗಿ ರಥಗಳ ನಿರ್ಮಾಣವು ಪ್ರಾರಂಭವಾಗುವುದು

ಈ ದಿನ ನಾವು ಮಾಡುವ ಯಾವುದೇ ಪುಣ್ಯಕಾರ್ಯವು ದುಪ್ಪಟ್ಟು ಫಲವನ್ನು ನೀಡುತ್ತದೆ ಅರ್ಥಾತ್ ಆ ಫಲ ನಿಜಾರ್ಥದಲ್ಲಿ ಅಕ್ಷಯವಾಗುವುದು.

ಬನ್ನಿ ಈ ಸಂದರ್ಭವನ್ನು ಉಪಯೋಗಿಸಿಕೊಂಡು ನಮ್ಮ ಕೈಲಾದಸ್ಟು ಸತ್ಕಾರ್ಯಗಳನ್ನು ಮಾಡೋಣ, ಅಕ್ಷಯ ಫಲ ಪಡೆಯೋಣ

ಸರ್ವರಿಗೂ "ಅಕ್ಷಯತದಿಗೆ" ಯ ಶುಭಾಶಯಗಳು

1 month ago | [YT] | 2

VasanthaaHarish 🙏

🪞💫🌹✨ಶ್ರೀ ಮಂಗಳಾದೇವಿಯಲ್ಲಿ ವಿಷುಕಣಿ ಪೂಜೆಯೊಂದಿಗೆ ಸಂಭ್ರಮದ ಸೌರಮಾನ ಯುಗಾದಿ, ನೂತನ ಶ್ರೀ ಪರಾಭವ ಸೌರ ಸಂವತ್ಸರಾರಂಭ.✨🌹💫🪞🥭

ಸೌರಮಾನ ಯುಗಾದಿಯ ವರ್ಷಾರಂಭದ ಮೊದಲ ದಿನದ ಬುಧವಾರದಂದು ಮೂಲ ಬಿಂಬದ ಲಿಂಗರೂಪದಲ್ಲಿ ನಮ್ಮೆಲ್ಲರಿಗೂ ಯುಗಾದಿಯಂದು ಸಂಪ್ರಾಪ್ತವಾದ ಶ್ರೀ ಮಂಗಳಾದೇವಿ ಅಮ್ಮನವರ ವಿಷುಕಣಿಯ ದರ್ಶನ🪞🥭😍

ಪ್ರಥಮವಾಗಿ ಶ್ರೀ ಮಂಗಳಾದೇವಿ ಅಮ್ಮನವರ ಚರಣಾರವಿಂದಗಳಲ್ಲಿ ನಮಸ್ಕರಿಸುತ್ತಾ ತಮಗೆಲ್ಲರಿಗೂ ಸೌರಮಾನ ಯುಗಾದಿಯ ಪ್ರೀತಿ ಪೂರ್ವಕ ಶುಭಾಶಯಗಳು.👏

ಶ್ರೀ ಸೂರ್ಯ ನಾರಾಯಣನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುವ 'ಮೇಷ ಸಂಕ್ರಮಣದ' ಮರುದಿನದ 'ಹೊಸ 'ವಿಕ್ರಮಶಕೆ'ಯ ಹೊಸವರ್ಷದ ಇಂದಿನ ಸೌರಮಾನ ಯುಗಾದಿಯನ್ನು ನವ ಚೈತನ್ಯದಿಂದ ಆಚರಿಸಿ ತನ್ನ ಸನ್ನಿಧಾನಕ್ಕೆ ವಿಷುಕಣಿಯ ದರ್ಶನಕ್ಕೆ ಪ್ರಾತಃಕಾಲ ಮಹಾತಾಯಿಯು ಅನುಗ್ರಹಿಸಿದ್ದಾಳೆ🌹

ವಿಷುಕಣಿಯ ದರ್ಶನವನ್ನು ಪಡೆದು ಹೊಸ ವರ್ಷದಲ್ಲಿ ಸಂಪದ್ಭರಿತ ಸುಖ ಶಾಂತಿ, ಸಮೃದ್ಧಿಯುತ ಜೀವನ ಪ್ರಾಪ್ತಿಗಾಗಿ ಮಹಾದೇವಿಯಲ್ಲಿ ಪ್ರಾರ್ಥಿಸುತ್ತಾ ಸಮಸ್ತ ನಾಡಿನ ಜನತೆಗೆ ಸೌರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ಹರ್ಷದಾಯಕವಾಗಿ' ಕ್ಷೇಮದಾಯಕವಾಗಿರಲಿ ಎಂಬ ಸಂಕಲ್ಪದಿಂದ ತಾಯಿಯಲ್ಲಿ ಆಶೀರ್ವಾದವನ್ನು ಕೋರುತ್ತಾ ತಮಗೆಲ್ಲರಿಗೂ ನೂತನ ಶ್ರೀ ಪರಾಭವ ನಾಮ ಸಂವತ್ಸರವು ನಿತ್ಯ ಶುಭ ಸನ್ಮಂಗಳ ಶ್ರೇಯಸ್ಸನ್ನುಂಟುಮಾಡಲಿ.👏

☀️ಶುಭ ಸುಪ್ರಭಾತ☀️
✨🌸ಸಮಸ್ತ ಲೋಕಾ ಸರ್ವೇ ಜನಾ ಸುಖಿನೋ ಭವಂತು🌸✨

1 month ago | [YT] | 18

VasanthaaHarish 🙏

#ಅಂತರಂಗದ ಅರಮನೆಗೆ #ಆತ್ಮವಿಶ್ವಾಸವೇ #ರಾಜಮಾರ್ಗ.
#ಶಿವ ಅಂದರೆ ಕೇವಲ ಕೈಲಾಸದಲ್ಲಿ ಕುಳಿತ ದೇವನಲ್ಲ. ಬದಲಿಗೆ ನಮ್ಮೊಳಗೆ ಸುಪ್ತವಾಗಿರುವ ಶಕ್ತಿ. ನಿಮ್ಮ ಆತ್ಮಿವಿಶ್ವಾಸವೇ #ತ್ರಿಶೂಲವಾದಾಗ, ನಿಮ್ಮ ಮೌನವೇ ಮಂತ್ರವಾದಾಗ ಮಾತ್ರ ನೀವು ನಿಜವಾದ 'ಶಿವತ್ವ'ವನ್ನು ಅನುಭವಿಸಲು ಸಾಧ್ಯ.ತ್ರಿಶೂಲದ ಮೂರು ಮೊನೆಗಳು #ಇಚ್ಛಾಶಕ್ತಿ, #ಜ್ಞಾನಶಕ್ತಿ ಮತ್ತು #ಕ್ರಿಯಾಶಕ್ತಿಯ ಸಂಕೇತ. ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದಾಗ ಈ ಮೂರು ಶಕ್ತಿಗಳು ಒಂದಾಗುತ್ತವೆ. #ಹೊರಗಿನ #ಶತ್ರುಗಳನ್ನು ಗೆಲ್ಲಲು ಆಯುಧ ಬೇಕು, ಆದರೆ #ಒಳಗಿನ ಭಯವನ್ನು ಗೆಲ್ಲಲು #ಆತ್ಮವಿಶ್ವಾಸ ಎಂಬ ತ್ರಿಶೂಲವೊಂದಿದ್ದರೆ ಸಾಕು.ಯಾರು ತನ್ನ ಆತ್ಮವನ್ನು ಗೆಲ್ಲುತ್ತಾನೋ, ಅವನು ಇಡೀ ಜಗತ್ತನ್ನೇ ಗೆಲ್ಲಬಲ್ಲ.ಶಿವನನ್ನು #'ದಕ್ಷಿಣಾಮೂರ್ತಿ' ಎನ್ನುತ್ತಾರೆ, ಅಂದರೆ ಮೌನದ ಮೂಲಕವೇ ಶಿಷ್ಯರಿಗೆ ಜ್ಞಾನ ಬೋಧಿಸಿದವನು.ಇಂದಿನ ಕಾಲದಲ್ಲಿ ಅಬ್ಬರಿಸುವವರೇ ಹೆಚ್ಚು, ಕೆಲಸ ಮಾಡುವವರು ಕಡಿಮೆ.ಆದರೆ ನೆನಪಿರಲಿ, ಮೋಡಗಳು ಅಬ್ಬರಿಸಿದರೆ ಮಳೆಯಾಗುವುದಿಲ್ಲ, ಸುಮ್ಮನೆ ಸುರಿದರೆ ಮಾತ್ರ ಕೆರೆ-ಕಟ್ಟೆ ತುಂಬುವುದು. ನಿಮ್ಮ ಸಾಧನೆ ಶಬ್ದ ಮಾಡಬೇಕೇ ಹೊರತು ನಿಮ್ಮ ನಾಲಿಗೆಯಲ್ಲ.ನಮ್ಮ ಮನಸ್ಸು ಹತ್ತು ದಿಕ್ಕಿಗೆ ಓಡುವ ಕಾಡಿನಂತೆ. ಅಲ್ಲಿ ಆಸೆಗಳೆಂಬ ಹುಲಿಗಳಿವೆ, ಕೋಪವೆಂಬ ಕಾಡುಕೋಣಗಳಿವೆ. ಈ ಕಾಡನ್ನು ಕಡಿದು ಮೈದಾನ ಮಾಡುವುದು ಕಷ್ಟ, ಆದರೆ ಅದೇ ಕಾಡಿನ ಮಧ್ಯೆ ಸ್ಥಿತಪ್ರಜ್ಞನಾಗಿ ಕುಳಿತುಕೊಳ್ಳುವುದೇ ಧ್ಯಾನ. ಆ ಧ್ಯಾನವೇ ನಿಮ್ಮನ್ನು 'ಕೈಲಾಸ'ಕ್ಕೆ ಕೊಂಡೊಯ್ಯುತ್ತದೆ.ಶಿವನ ಸಂಸಾರವೇ ಒಂದು ವಿಚಿತ್ರ.ಶಿವನ ಕೊರಳಲ್ಲಿ ಹಾವು ಇದೆ, ಮಗ ಗಣೇಶನ #ವಾಹನ ಇಲಿ! (ಹಾವಿಗೆ ಇಲಿ ಅಂದ್ರೆ ₹ಪಂಚಪ್ರಾಣ!)ಶಿವನ ವಾಹನ ಎತ್ತು, ಪಾರ್ವತಿಯ #ವಾಹನ ಸಿಂಹ! (ಎತ್ತನ್ನ ಕಂಡರೆ ಸಿಂಹಕ್ಕೆ ಹಬ್ಬ!)ಶಿವನ ಮಗ ಕುಮಾರಸ್ವಾಮಿಯ ವಾಹನ ನವಿಲು, ಹಾವಿಗೆ ನವಿಲು ಕಂಡರೆ ಆಗದು!ಇಷ್ಟೆಲ್ಲಾ ವಿರೋಧಾಭಾಸಗಳಿದ್ದರೂ ಶಿವನ ಸಂಸಾರ ಸುಖವಾಗಿದೆ ಅಂದರೆ ಅದಕ್ಕೆ ಕಾರಣ ಸಮತೋಲನ ನಾವೂ ಅಷ್ಟೇ, ಮನೆಯಲ್ಲಿ ಹೆಂಡತಿ '#ಸಿಂಹ'ದಂತೆ ಗರ್ಜಿಸಿದಾಗ ನಾವು ಶಿವನಂತೆ #'ಮೌನ'ಕ್ಕೆ ಶರಣಾದರೆ ಅದೇ ಕೈಲಾಸ.ಅದನ್ನೇ ಶಿವತತ್ವ ಎನ್ನಬಹುದು.
ಸಮುದ್ರ ಮಂಥನದ ವಿಷವನ್ನು ಶಿವ ಕುಡಿದು '#ನೀಲಕಂಠ'ನಾದ. ನಮ್ಮ ಜೀವನದಲ್ಲೂ ಪ್ರತಿದಿನ ಅವಮಾನ, ಸೋಲು, ಟೀಕೆ ಎಂಬ 'ವಿಷ'ಗಳು ಎದುರಾಗುತ್ತವೆ. ಅದನ್ನು ಹೊಟ್ಟೆಗೆ ಹಾಕಿಕೊಂಡರೆ ಆರೋಗ್ಯ ಕೆಡುತ್ತದೆ (ಕೋಪ ಬರುತ್ತದೆ), ಹೊರಗೆ ಉಗುಳಿದರೆ #ಸಂಬಂಧ ಹಾಳಾಗುತ್ತದೆ. ಹಾಗಾಗಿ ಆ ವಿಷವನ್ನು ಗಂಟಲಲ್ಲೇ ಇಟ್ಟುಕೊಂಡು ಪ್ರಪಂಚಕ್ಕೆ ಅಮೃತ ಪ್ರೀತಿ ನೀಡುವುದೇ ನಿಜವಾದ ಶಿವಗುಣ.ಬೂದಿ ಬಳಿದುಕೊಂಡ ಶಿವ ಹೇಳುವುದು ಇಷ್ಟೇ,"#ನೀನು ಎಷ್ಟೇ ಶ್ರೀಮಂತನಾದರೂ ಕೊನೆಗೆ ಮಣ್ಣಾಗುವುದು ಸತ್ಯ#, ಹಾಗಾಗಿ ಇರುವಾಗ #ಅಹಂಕಾರ ಬಿಟ್ಟು ಬದುಕು.ಸಾವು ನಿಶ್ಚಿತ ಎಂದ ಮೇಲೆ ಬದುಕಿನ ಸಣ್ಣಪುಟ್ಟ ಸೋಲುಗಳಿಗೆ ಹೆದರುವುದೇಕೆ?ಗಂಗೆಯನ್ನು ತಲೆಯಲ್ಲಿ ಧರಿಸಿದ ಶಿವ, ಎಷ್ಟೇ ಜ್ಞಾನವಿದ್ದರೂ ನಿನ್ನ ತಲೆ ತಣ್ಣಗಿರಲಿ.ನಿನ್ನೊಳಗಿನ ಅಂಧಕಾರವನ್ನು ನೀನು ಯಾವಾಗ ಸುಟ್ಟು ಬೂದಿ ಮಾಡುತ್ತೀಯೋ, ಅಂದೇ ನಿನ್ನೊಳಗೆ ಶಿವ ಜಾಗೃತ ವಾಗುತ್ತಾನೆ. ಮಾತು ಕಡಿಮೆ ಇರಲಿ, #ನಿನ್ನ ಕೆಲಸದ #ತ್ರಿಶೂಲ ಜಗತ್ತಿಗೆ ನಿನ್ನ ಶಕ್ತಿಯನ್ನು ತೋರಿಸಲಿ.
ಓಂ ನಮಃ ಶಿವಾಯ.🙏🔱🚩🪔

1 month ago | [YT] | 7

VasanthaaHarish 🙏

#ಅಕ್ಷಯ ಫಲ ನೀಡುವ " #ಅಕ್ಷಯ ತೃತೀಯ "
ಅಕ್ಷಯ ತೃತಿಯದ ವಿಶೇಷತೆ ತಿಳಿದುಕೊಳ್ಳೋಣ.
1. ಪಾಂಡವರು ಈ ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದ ದಿನ.
2. #ದುರ್ಯೋಧನನ ದುಷ್ಟ ಬೋಧನೆಗೆ ಒಳಗಾಗಿ ದೂರ್ವಾಸರು ತಮ್ಮ ಸಹಸ್ರಾರು ಶಿಷ್ಯರೊಂದಿಗೆ ವನವಾಸದಲ್ಲಿ ಇದ್ದ ಪಾಂಡವರಲ್ಲಿದ್ದ ಕಡೆಗೆ ಭೋಜನ ಮಾಡಲು ಅಕ್ಷಯಪಾತ್ರೆ ಸಮಯ ಮೀರಿದಮೇಲೆ ಬಂದರು. ಕೊನೆಗೆ ದ್ರೌಪತಿ ಕೊನೆಗೆ ಶ್ರೀಕೃಷ್ಣ ದೇವರನ್ನ ಪ್ರಾರ್ಥನೆಮಾಡಿದಳು. ದ್ರೌಪತಿ ಕರೆದರೇ ಬಾರನೆ ? ಬಂದವನೇ ತಕ್ಷಣ ತನಗೂ ಹಸಿವೆ ಆಗಿದೆ ಏನಾದರೂ ಕೊಡು ಎಂದು ಕೇಳಿದಾಗ, ಮುಗಿದು ಹೋಗಿದೆ ಎಂದು ಹೇಳಲು ಸಂಕೋಚ ಪಡುತ್ತಿದ್ದ ಅಂತಹ ದ್ರೌಪದಿಗೆ ಪಾತ್ರೆಯ ಕೊನೆಯ ಭಾಗದಲ್ಲಿ ಇರುವಂತಹ ಒಂದೇ ಒಂದು ಅಗುಳು ಅನ್ನವನ್ನೇ ಅಕ್ಷಯವನ್ನಾಗಿ ಮಾಡಿ ದಂತಹ ಅದೇ ದಿನವೇ ಅಕ್ಷಯ ತೃತೀಯ.
3. #ವಿಷ್ಣುವಿನ ಅವತಾರವಾದ ಪರಶುರಾಮರ ಅವತಾರ ಆದ ದಿನವೇ ಅಕ್ಷಯ ತೃತೀಯ.
4. ಶ್ರೀ ಕೃಷ್ಣ ಪರಮಾತ್ಮನ ಸ್ನೇಹಿತನಾದ ಕುಚೇಲನು ತನ್ನಲ್ಲಿರುವ ಸ್ವಲ್ಪವೇ ಅವಲಕ್ಕಿಯನ್ನು ತನ್ನ ಪ್ರೀತಿ ಪಾತ್ರ ಸ್ನೇಹಿತನಿಗಾಗಿ ತೆಗೆದುಕೊಂಡು ಹೋಗಿ ಸಮರ್ಪಿಸಿದ ದಿನ . ಅಂದು ಶ್ರೀಕೃಷ್ಣ ಪರಮಾತ್ಮ ಕುಚೇಲನು ನೀಡಿದ ಹಿಡಿ ಅವಲಕ್ಕಿಯನ್ನು ಸ್ವೀಕರಿಸಿ ಅವನಿಗೆ ಐಶ್ವರ್ಯಗಳು ಪ್ರಾಪ್ತಿಯಾಗಿ.. ಸುಧಾಮನಾದ.
5. ದ್ವಾಪರಯುಗದ ಸಂದರ್ಭದಲ್ಲಿ ನಮ್ಮ ಮಹಾಭಾರತ ಪುರಾಣವನ್ನು ವ್ಯಾಸರು ರಚಿಸಿದ ಸುಮುಹೂರ್ತವೇ ಅಕ್ಷಯ ತೃತೀಯ.

5. ಭಗೀರಥನ ಪ್ರಯತ್ನದಿಂದ ಈಶ್ವರನ ಜಟೆಯಲ್ಲಿ ಇದ್ದಂತಹ ಗಂಗೆಯು ಭೂಮಿಗೆ ಬಂದ ದಿನವೇ ಅಕ್ಷಯ ತೃತಿಯ . ಈ ದಿನವು ತ್ರೇತಯುಗದ ಆರಂಭವನ್ನು ಸೂಚಿಸುತ್ತದೆ.

ಮಹಾಲಕ್ಷ್ಮಿಯನ್ನು ಆರಾಧಿಸಿ ಕುಬೇರನು ಅಕ್ಷಯ ತೃತೀಯ ದಿನವೇ ಅಷ್ಟೈಶ್ವರ್ಯವ ಪಡೆದನು.

ಅಕ್ಷಯ ತೃತೀಯ ಅಂದರೆ ನಮ್ಮ ಮನಸ್ಸಿಗೆ ಬರುವುದು ಚಿನ್ನದ ಅಂಗಡಿಗಳಲ್ಲಿ ಕಂಡುಬರುವ ಆಭರಣಗಳ ಜಾಹೀರಾತುಗಳು. ಚಿನ್ನದ ಮೇಲಿನ ಕಡಿತಗಳು ಚಿನ್ನ ಬೆಳ್ಳಿಯನ್ನು ಕೊಂಡುಕೊಂಡರೆ, ವರ್ಷ ಪೂರ್ತಿ ನೀವು ಚಿನ್ನವನ್ನು ತೆಗೆದು ಕೊಳ್ಳುತ್ತೀರಿ! ಎನ್ನುವಂತಹ ಅವರ ಭಾಷಣಗಳು.ಇದರ ಉಲ್ಲೇಖ ಯಾವ ಪುರಾಣದಲ್ಲೂ ಕಂಡುಬರುವುದಿಲ್ಲ.

ಭವಿಷ್ಯತ್ ಪುರಾಣದಲ್ಲಿ ಶ್ರೀಕೃಷ್ಣಪರಮಾತ್ಮನೇ ಅಕ್ಷಯತೃತೀಯದ ಅಸಾಧಾರಣ ಮಹಿಮೆಯನ್ನು ವರ್ಣಿಸಿರುವುದಾಗಿ ಉಲ್ಲೇಖವಿದೆ. " ಬಹುನಾತ್ರ ಕಿಮುಕ್ತೇನ ಕಿಂ ಬಹ್ವಕ್ಷರಮಾಲಯಾ l ವೈಶಾಖಸ್ಯ ಸಿತಾಮೇಕಾಂ ತೃತೀಯಾಮಕ್ಷಯಾಂ ಶೃಣು ||
ಅರ್ಥ... ಗಂಗಾಸ್ನಾನಕ್ಕೆ ಮತ್ತು ಶ್ರೀಕೃಷ್ಣನನ್ನು ಧೂಪ, ದೀಪ, ಪುಷ್ಪ ಮತ್ತು ವಿಶೇಷವಾಗಿ ಚಂದನ ಲೇಪದಿಂದ ಅರ್ಚನೆ ಮಾಡಲು ಪ್ರಶಸ್ತವಾದ ದಿನ. " ಸ್ನಾತ್ವಾ ಹುತ್ವಾ ಚ ಜಪ್ತ್ವಾ ಚ ದತ್ತ್ವಾನಂತ ಫಲಂ ಲಭೇತ್ " ಈ ಹಬ್ಬ ದಲ್ಲಿ ಆಚರಿಸುವ ಸ್ನಾನ, ಜಪ, ತಪಸ್ಸು , ಅಧ್ಯಯನ, ತರ್ಪಣ, ದಾನಾದಿ ಗಳೆಲ್ಲವೂ ಅಕ್ಷಯವಾದ ಫಲವನ್ನು ನೀಡುವುದರಿಂದ ಇದನ್ನು ಅಕ್ಷಯ ತೃತೀಯ ಎಂದು ಕರೆಯಲಾಗಿದೆ ಎಂದು ವ್ರತರಾಜದಲ್ಲಿ ಉಲ್ಲೇಖಿಸಿದೆ. ಅಕ್ಷಯವಾದ ಮೋಕ್ಷಕ್ಕೆ ಕಾರಣವಾಗಿರುವುದರಿಂದಲೂ ಇದಕ್ಕೆ ಅಕ್ಷಯ ತೃತೀಯ ಎಂದು ಕರೆಯುತ್ತಾರೆ. ಗೃಹ ಪ್ರವೇಶ, ಮದುವೆ, ಹೊಸ ಉದ್ಯಮಗಳು, ಹೂಡಿಕೆ ಗಳನ್ನು ಪ್ರಾರಂಭಿಸಲು ಅಕ್ಷಯ ತೃತೀಯ ಅತ್ಯುತ್ತಮ ದಿನ.

ಅಕ್ಷಯತೃತೀಯಾ ದಿನ ಪಿತೃ ತರ್ಪಣ ಕೊಡಲೇ ಬೇಕು.
ದೇವತೆಗಳ ಪೂಜೆಗೆ ಮಾತ್ರವಲ್ಲದೆ ಪಿತೃಗಳ ಪೂಜೆಗೂ ಪ್ರಶಸ್ತವೆನಿಸಿರುವ ತಿಥಿ ಅಕ್ಷಯ ತೃತೀಯಾ. ಪಿತೃಗಳನ್ನು ಕುರಿತು ತರ್ಪಣ ಮಾಡಿ ಪಿಂಡಪ್ರದಾನ ವನ್ನು ಮಾಡ ಬಹುದು ಎಂದು ಧರ್ಮಸಿಂಧುವಿನಲ್ಲಿ ಉಲ್ಲೇಖಿಸಿದೆ.

ಮಣ್ಣಿನ ಮಡಕೆಯಲ್ಲಿ ಉದಕ ದಾನ, ಮಾಡಿದರೆ ಮೃತ್ಯು ಭಯದಿಂದ ದೂರ, ವಸ್ತ್ರ ದಾನ ಮಾಡಿದರೆ ರೋಗ ರುಜಿನಗಳು ದೂರ, ಹಣ್ಣು ಹಂಪಲುಗಳನ್ನು ದಾನ ಮಾಡಿದರೆ, ನಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತೇವೆ ಎನ್ನುವ ನಂಬಿಕೆ. ಅಕ್ಕಿ, ಬೇಳೆ, ಗೋದಿ, ಬೆಲ್ಲ ದಾನ ಮಾಡಿದರೆ ಅಕಾಲ ಮೃತ್ಯುವಿನ ಭಯದಿಂದ ಪಾರಾಗಬಹುದು.ಕೊನೆ ಪಕ್ಷ ಮಜ್ಜಿಗೆ ಮೊಸರು ದಾನ ಮಾಡಿದರೆ ಮಾಡಿದ ಪಾಪ ಕರ್ಮ ಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆ.
ಬೆಳಿಗ್ಗೆ ಗೋವುಗಳಿಗೆ ಪೂಜೆ ಪುನಸ್ಕಾರಗಳನ್ನು ಮಾಡಿದರೆ, ಗೋಧಿ ಬೆಲ್ಲ ಬಾಳೆಹಣ್ಣು ತಿನ್ನಿಸುವುದ ರಿಂದ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಪಾತ್ರವಾಗುತ್ತದೆ.

🙏🙏🙏🙏🙏

1 month ago | [YT] | 21

VasanthaaHarish 🙏

02-04-2026 ಗುರುವಾರ
#ಚೈತ್ರ ಹುಣ್ಣಿಮೆ ಹನುಮ ಜಯಂತಿ🚩🙏

ಬುಧ್ಧಿರ್ಬಲಂ ಯಶೋಧೈರ್ಯಂ
ನಿರ್ಭಯತ್ವಂ ಅರೋಗತ
ಅಜಾಡ್ಯಂ ವಾಕ್ಪಟುತ್ವಂಚ
ಹನುಮತ್ ಸ್ಮರಣಾತ್ ಭವೇತ್ ||

ಬುದ್ಧಿವಂತಿಕೆ, ದೇಹದಾರ್ಢ್ಯ, ಕೀರ್ತಿ, ಧೈರ್ಯ, ಅಂಜದಿರುವಿಕೆ, ಆರೋಗ್ಯ, ಉತ್ಸಾಹ, ಮಾತುಗಾರಿಕೆ ಈ ಎಲ್ಲವೂ ಹನುಮಂತನನ್ನು ಮನಃಪೂರ್ವಕವಾಗಿ ನೆನೆದರೆ ದೊರೆಯುತ್ತವೆ.
ರಾಮಾಯಣದ ಕಥಾಪ್ರಪಂಚದಲ್ಲಿ ರಾಮ ನಾಯಕನಾದರೆ, ಹನುಮಂತ ಉಪನಾಯಕ. ಸ್ವಾಮಿನಿಷ್ಠೆಗೆ, ಭಕ್ತಿಗೆ ಇನ್ನೊಂದು ಹೆಸರು ಹನುಮಂತ. ಅಂಜನಿಯ ಗರ್ಭದಲ್ಲಿ ಹುಟ್ಟಿ ಆಂಜನೇಯನೆನಿಸಿದ. ಹನೂಮಂತ, ವಾಯಪುತ್ರ, ಪವನಸಂಭವ, ಮಾರುತಿ ಹೀಗೆ ಅನೇಕ ಹೆಸರುಗಳಿಂದ ಪ್ರಸಿದ್ಧನಾದವನು. ವಾಯುವಿನ ಅಂಶದಿಂದ ಕೇಸರಿಯಲ್ಲಿ ವಾನರನಾಗಿ ಹುಟ್ಟಿ, ಸುಗ್ರೀವನ ಮಂತ್ರಿಯಾದನು. ಅವನ ಅಸಾಧಾರಣವಾದ ಬಲ, ಪರಾಕ್ರಮ, ಬುದ್ಧಿವಂತಿಕೆ ರಾಮಾಯಣದುದ್ದಕ್ಕೂ
ಹನುಮಂತನ ರೂಪ ನೆನೆಯುವುದಾದರೆ
ಹೊಳೆವ ಹೊನ್ನ ಮೈಬಣ್ಣ, ಸುರಳಿ ಸುರಳಿಯಾದ ಕೇಶ ರಾಶಿ,.ಕಿವಿಯಲ್ಲಿ ಕರ್ಣಕುಂಡಲ, ಸುಂದರ ವಸ್ತ್ರದ ಉಡುಗೆ ಧರಿಸಿದ ಈ ಬಲಶಾಲಿಯ ಒಂದು ಕೈಯಲ್ಲಿ ವಜ್ರಾಯುಧ ಮತ್ತೊಂದು ಕೈಯಲ್ಲಿ ವಿಜಯದ ಧ್ವಜ, ದಬ್ಬೆಯ ಒಂದು ಉಪವೀತನವನ್ನು ಭುಜದ ಮೇಲೆ ಧರಿಸಿರುವ ಈತನಿಗೆ ಇಡೀ ಭೂ ಮಂಡಲವೇ ತಲೆಬಾಗಿ ನಮಿಸುತ್ತದೆ.

ಇದು ಕಪಿಶ್ರೇಷ್ಠನ ಕಠಿಣತೆ, ದೃಡನಿರ್ಧಾರ ಮತ್ತು ಶ್ರೇಷ್ಠತೆಯನ್ನು ತೋರಿಸುತ್ತದೆ. ವಿದ್ಯಾವಂತ, ಗುಣವಂತ ಅತಿ ಚತುರ. ಶ್ರೀ ರಾಮನ ಸೇವಾ ಕೈಂಕರ್ಯಕ್ಕೆ ಕಾತುರನಾಗಿರುವ ಈತ ಸೂಕ್ಷ್ಮ ರೂಪ ಹೊಂದಿ ಸೀತಾಮಾತೆಯನ್ನು ಕಂಡ, ಹಾಗೂ ವಿಕಟ ರೂಪವನ್ನು ಹೊಂದಿ ಲಂಕೆಯನ್ನೇ ಸುಟ್ಟ. ಇದು ಪವನಸುತನ ಸಂದರ್ಭಕ್ಕೆ ಹೊಂದಿಕೊಳ್ಳುವ ಹಾಗೂ ತಕ್ಕನಾಗಿ ವರ್ತಿಸುವ ಅತಿಚತುರತೆಯ ವ್ಯಕ್ತಿತ್ವವನ್ನ ಬಿಂಬಿಸುತ್ತದೆ. ಸಂಜೀವಿನಿಯನ್ನು ತಂದು ಲಕ್ಷಮಣನನ್ನು ಬದುಕಿಸಿ, ಸುಗ್ರೀವನಿಗೆ ರಾಮನನ್ನು ಪರಿಚಯಿಸಿ, ಪುನಹ ರಾಜ ಪದವಿಯನ್ನು ಕೊಡಸಿದ. ಈ ಅಂಜನಸುತನನ್ನು ಸಾವಿರ ವಚನಗಳು ಈ ಯಶಸ್ಸಿನ ವೈಭವವನ್ನು ಹಾಡುತ್ತದೆ.ಆಂಜನೇಯನ ವೈಭವ ಸಪ್ತ ಸಾಗರಗಳಿಗೂ ಮಿಗಿಲಾದುದ್ದು. ಸಾಧು ಸಂತರು, ಮುನಿಗಳು, ನಾರದರು, ಶಾರದೆ, ಆಧಿಶೇಷ ಕುಬೇರ ಇವರುಗಳಿಗೆ ಸಹ ಪವನಸುತನ ವರ್ಣನೆ ಅಸಾಧ್ಯವಾದ ಮಾತು. ಆಂಜನೇಯನ ಬಲಕ್ಕೆ ಮೂರು ಲೋಕಗಳು ಹೆದರುತ್ತವೆ, ಹೆಸರು ಕೇಳಿದರೆ ಭೂತ ಪಿಸಾಚಿಗಳು ಹತ್ತಿರ ಸುಳಿಯುವುದಿಲ್ಲ. ಯಾರು ಅತಿ ಬಲವಂತನನ್ನು ಕಾಯಾ, ವಾಚ ಹಾಗೂ ಮನಸ್ಸಿನಿಂದ ಧ್ಯಾನಿಸುತ್ತಾರೋ ಅವರ ಸಂಕಷ್ಟಗಳು ದೂರವಾಗುತ್ತದೆ.

ಕಪಿಗಳು ಶ್ರೀರಾಮನ ಸೇವಾಕಾರ್ಯದಲ್ಲಿ ನಿರತವಾಗಿದ್ದವು. ಲಂಕೆಗೆ ಸೇತುನಿರ್ಮಾಣ ಕಾರ್ಯ ನಡೆಯುತ್ತಿತ್ತು. ಹನುಮಂತನೇ ಮೊದಲಾದ ಕಪಿಶ್ರೇಷ್ಠರು ಪರ್ವತ ಕಲ್ಲುಮಣ್ಣುಗಳನ್ನು ತಂದು ನೀರಿಗೆ ಹಾಕುತ್ತಿದ್ದರು. ಈ ಘನ ಪರಿಕರಗಳು
ಸಮುದ್ರದ ಆಳವನ್ನು ಸೇರದೆ ತೇಲಿ ನಿಂತು ಸೇತು ನಿರ್ಮಾಣ ಕಾರ್ಯವನ್ನು ಸುಲಭಗೊಳಿಸುತ್ತಿದ್ದವು. ಈ ನಡುವೆ ಶ್ರೀರಾಮ, "ನಿಮ್ಮೊಡನೆ ನನ್ನ ಪ್ರಯತ್ನವೂ ಇರಲಿ' ಎಂದು ಒಂದು ಕಲ್ಲನ್ನು ಸಮುದ್ರಕ್ಕೆ ಹಾಕಿದ. ಆದರೆ, ಅದು ಮುಳುಗಿಹೋಯಿತು. ಎಲ್ಲರಿಗೂ ಆಶ್ಚರ್ಯ. ಯಾಕೆ ಹೀಗಾಯಿತು ಎಂದು. ಅಲ್ಲಿಯವರೆಗೆ ಮೌನವಾಗಿದ್ದ ಹನುಮಂತ ತತ್ಕ್ಷಣ ಹೇಳಿದ, ""ದೇವರು ಕೈ ಬಿಟ್ಟರೆ ಕಲ್ಲೇನು, ಎಲ್ಲವೂ ಹೀಗೆಯೇ!

ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ

ಓಂ ಶ್ರೀ ಆಂಜನೇಯಾಯ ನಮಃ
ಓಂ ಮಹಾವೀರಾಯ ನಮಃ
ಓಂ ಹನುಮತೇ ನಮಃ
ಓಂ ಸೀತಾದೇವಿ ಮುದ್ರಾಪ್ರದಾಯಕಾಯ ನಮಃ
ಓಂ ಮಾರುತಾತ್ಮಜಾಯ ನಮಃ
ಓಂ ತತ್ತ್ವ ಜ್ಞಾನ ಪ್ರದಾನ ನಮಃ
ಓಂ ಅಶೊಕವನಿಕಾಚ್ಚೇತ್ರೇ ನಮಃ
ಓಂ ಸರ್ವಬಂಧ ವಿಮೋಕ್ತ್ರೇ ನಮಃ
ಓಂ ರಕ್ಷೋವಿಧ್ವಂಸಕಾರಕಾಯನಮಃ
ಓಂ ಪರವಿದ್ವಪ ನಮಃ
ಓಂ ಪರಶೌರ್ಯ ವಿನಾಶನಾಯ ನಮಃ
ಓಂ ಪರಮಂತ್ರ ನಿರಾಕರ್ತ್ರೇ ನಮಃ
ಓಂ ಪರಮಂತ್ರ ಪ್ರಭೇವಕಾಯ ನಮಃ
ಓಂ ಸರ್ವಗ್ರಹ ವಿನಾಶಿನೇ ನಮಃ
ಓಂ ಭೀಮಸೇನ ಸಹಾಯಕೃತೇ ನಮಃ
ಓಂ ಸರ್ವದುಃಖ ಹರಾಯ ನಮಃ
ಓಂ ಸರ್ವಲೋಕ ಚಾರಿಣೇ ನಮಃ
ಓಂ ಮನೋಜವಾಯ ನಮಃ
ಓಂ ಪಾರಿಜಾತ ಧೃಮಮೂಲಸ್ಧಾಯ ನಮಃ
ಓಂ ಸರ್ವಮಂತ್ರ ಸ್ವರೂಪವತೇ ನಮಃ
ಓಂ ಸರ್ವಯಂತ್ರಾತ್ಮಕಾಯ ನಮಃ
ಓಂ ಸರ್ವತಂತ್ರ ಸ್ವರೂಪಿಣೇ ನಮಃ
ಓಂ ಕಪೀಶ್ವರಾಯ ನಮಃ
ಓಂ ಮಹಾಕಾಯಾಯ ನಮಃ
ಓಂ ಸರ್ವರೋಗಹರಾಯ ನಮಃ
ಓಂ ಪ್ರಭವೇ ನಮಃ
ಓಂ ಬಲಸಿದ್ಧಿಕರಾಯ ನಮಃ
ಓಂ ಸರ್ವ ವಿದ್ಯಾಸಂಪತ್ರ್ಪ ವಾಯಕಾಯ ನಮಃ
ಓಂ ಕಪಿಸೇನಾ ನಾಯಕಾಯ ನಮಃ
ಓಂ ಭವಿಷ್ಯಚ್ಚತು ರಾನನಾಯ ನಮಃ
ಓಂ ಕೂಮಾರ ಬ್ರಹ್ಮಚಾರಿಣೇ ನಮಃ
ಓಂ ರತ್ನಕುಂಡಲ ದೀಪ್ತಿಮತೇ ನಮಃ
ಓಂ ಚಂಚಲ ದ್ವಾಲ ಸನ್ನದ್ಧಲಂಬಮಾನ ಶಿಖೋಜ್ವಲಾಯ ನಮಃ
ಓಂ ಗಂಧ್ರ್ವ ವಿದ್ಯಾತತ್ವಜ್ಞಾಯ ನಮಃ
ಓಂ ಮಹಾಬಲಪರಾಕ್ರಮಾಯ ನಮಃ
ಓಂ ಕಾರಾಗೃಹ ವಿಮೋಕ್ತ್ರೇ ನಮಃ
ಓಂ ಶೃಂಖಲ ಬಂಧ ವಿಮೋಚಕಾಯ ನಮಃ
ಓಂ ಸಾಗರೋತ್ತಾರಕಾಯ ನಮಃ
ಓಂ ಪ್ರಜ್ಞಾಯ ನಮಃ
ಓಂ ರಾಮದೂತಾಯ ನಮಃ
ಓಂ ಪ್ರತಾಪವತೇ ನಮಃ
ಓಂ ವಾನರಾಯ ನಮಃ
ಓಂ ಕೇಸರಿಸುತಾಯ ನಮಃ
ಓಂ ಸೀತಾಶೋಕ ನಿವಾರಣಾಯ ನಮಃ
ಓಂ ಅಂಜನಾ ಗರ್ಭಸಂಭುತಾಯ ನಮಃ
ಓಂ ಬಾಲರ್ಕ ಸದೃಶಾನನಾಯ ನಮಃ
ಓಂ ವಿಭೀಷಣ ಪ್ರಿಯಕರಾಯ ನಮಃ
ಓಂ ದಶಗ್ರೀವ ಕುಲಾಂತಕಾಯ ನಮಃ
ಓಂ ಲಕ್ಷ್ಮಣ ಪ್ರಾಣದಾತ್ರೇ ನಮಃ
ಓಂ ವಜ್ರಕಾಯಾಯ ನಮಃ
ಓಂ ಮಹಾದ್ಯುತಯೇ ನಮಃ
ಓಂ ಚಿರಂಜೀವಿನೇ ನಮಃ
ಓಂ ರಾಮಭಕ್ತಾಯ ನಮಃ
ಓಂ ದ್ತೆತ್ಯಕಾರ್ಯ ವಿಘಾತಕಾಯ ನಮಃ
ಓಂ ಅಕ್ಷಹಂತ್ರೇ ನಮಃ
ಓಂ ಕಾಂಚನಾಭಾಯ ನಮಃ
ಓಂ ಪಂಚವಕ್ತ್ರಾಯ ನಮಃ
ಓಂ ಮಹಾತಪಸೇ ನಮಃ
ಓಂ ಲಂಕಿಣೇಭಂಜನಾಯ ನಮಃ
ಓಂ ಗಂಧಮಾದನ ಶ್ತೆಲ ನಮಃ
ಓಂ ಲಂಕಾಪುರ ವಿದಾಹಕಾಯ ನಮಃ
ಓಂ ಸುಗ್ರೀವ ಸಚಿವಾಯ ನಮಃ
ಓಂ ಧೀರಾಯ ನಮಃ
ಓಂ ಶೂರಾಯ ನಮಃ
ಓಂ ದ್ತೆತ್ಯಕುಲಾಂತಕಾಯ ನಮಃ
ಓಂ ಸುರಾರ್ಚಿತಾಯ ನಮಃ
ಓಂ ಮಹಾತೇಜಸೇ ನಮಃ
ಓಂ ರಾಮ ಚೂಡಾಮಣಿ ಪ್ರದಾಯ ಕಾಮರೂಪಿವೇ ನಮಃ
ಓಂ ಶ್ರೀ ಪಿಂಗಳಾಕ್ಷಾಯ ನಮಃ
ಓಂ ನಾರ್ಧಿ ಂತೇ ನಾಕ ನಮಃ
ಓಂ ಕಬಲೀಕೃತ ಮಾರ್ತಾಂಡಮಂಡಲಾಯ ನಮಃ
ಓಂ ಕಬಲೀಕೃತ ಮಾರ್ತಾಂಡ ನಮಃ
ಓಂ ವಿಜಿತೇಂದ್ರಿಯಾಯ ನಮಃ
ಓಂ ರಾಮಸುಗ್ರೀವ ಸಂದಾತ್ರೇ ನಮಃ
ಓಂ ಮಹಾರಾವಣ ಮರ್ಧನಾಯ ನಮಃ
ಓಂ ಸ್ಪಟಿಕಾ ಭಾಯ ನಮಃ
ಓಂ ವಾಗ ಧೀಶಾಯ ನಮಃ
ಓಂ ನವ ವ್ಯಾಕೃತಿ ಪಂಡಿತಾಯ ನಮಃ
ಓಂ ಚತುರ್ಭಾಹವೇ ನಮಃ
ಓಂ ದೀನಬಂಧವೇ ನಮಃ
ಓಂ ಮಹತ್ಮನೇ ನಮಃ
ಓಂ ಭಕ್ತ ವತ್ಸಲಾಯ ನಮಃ
ಓಂ ಸಂಜೀವನ ನಗಾ ಹರ್ತ್ರೇ ನಮಃ
ಓಂ ಶುಚಯೇ ನಮಃ
ಓಂ ವಾಗ್ಮಿನೇ ನಮಃ
ಓಂ ದೃಢವ್ರತಾಯ ನಮಃ
ಓಂ ಕಾಲನೇಮಿ ಪ್ರಮಧನಾಯ ನಮಃ
ಓಂ ಹರಿಮರ್ಕಟ ಮರ್ಕಟಾಯನಮಃ
ಓಂ ದಾಂತಾಯ ನಮಃ
ಓಂ ಶಾಂತಾಯ ನಮಃ
ಓಂ ಪ್ರಸನ್ನಾತ್ಮನೇ ನಮಃ
ಓಂ ಶತಕಂಠ ಮದಾವಹೃತೇನಮಃ
ಓಂ ಯೋಗಿನೇ ನಮಃ
ಓಂ ರಾಮಕಧಾಲೋಲಾಯ ನಮಃ
ಓಂ ಸೀತಾನ್ವೇಷಣ ಪಂಡಿತಾಯ ನಮಃ
ಓಂ ವಜ್ರ ನಖಾಯ ನಮಃ
ಓಂ ರುದ್ರವೀರ್ಯ ಸಮುದ್ಭವಾಯ ನಮಃ
ಓಂ ಇಂದ್ರ ಜಿತ್ಪ್ರ್ರಹಿತಾ ಮೋಘಬ್ರಹ್ಮಸ್ತ್ರ ವಿನಿವಾರ ಕಾಯ ನಮಃ
ಓಂ ಪಾರ್ಧ ಧ್ವಜಾಗ್ರ ಸಂವಾಸಿನೇ ನಮಃ
ಓಂ ಶರಪಂಜರ ಭೇದಕಾಯ ನಮಃ
ಓಂ ದಶಬಾಹವೇ ನಮಃ
ಓಂ ಲೋಕಪೂಜ್ಯಾಯ ನಮಃ
ಓಂ ಜಾಂ ವತ್ಪ್ರ ತಿ ವರ್ಧನಾಯ ನಮಃ
ಓಂ ಸೀತ ಸಮೇತ ಶ್ರೀರಾಮಪಾದ ಸೇವಾ ದುರಂಧರಾಯ ನಮಃ

🚩🙏🪔🔱

1 month ago | [YT] | 7