Namaste 🙏 my hobbies 🙏 Jai Kashi 🙏 Bharatêya Sanathani Hindu. 🙏Spiritual seeker.🙏 Music 🎵 ,🙏 love football updates,🙏 Traveling,tips 🙏Exploring, healthy cooking ideas 🙏A bit of photography 🙏 positive #nature love 🙏
namaste friends 🙏 Don't forget to like, share, and subscribe for more spiritual and nature-filled videos!🙏🚩
VasanthaaHarish 🙏
#ಜೈ #ಗುರುದೇವ 🙏 🚩
*#ಶಕ್ತಿಪಾತ*
ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿ ಗುರುವಿನ ಪಾತ್ರ ಕೇವಲ ಮಾರ್ಗದರ್ಶಕನದ್ದಲ್ಲ, ಅದಕ್ಕೂ ಮಿಗಿಲಾದದ್ದು. ಶಿಷ್ಯನ ಅಂತರಂಗದಲ್ಲಿ ಸುಪ್ತವಾಗಿರುವ ದಿವ್ಯ ಚೈತನ್ಯವನ್ನು ಗುರುವು ತನ್ನ ಸ್ವಂತ ಪ್ರಾಣಶಕ್ತಿಯಿಂದ ಬಡಿದು ಎಬ್ಬಿಸುವ ಪ್ರಕ್ರಿಯೆಯೇ *'ಶಕ್ತಿಪಾತ'* ಇದು ಮಾತುಗಳಿಗಿಂತ ಮಿಗಿಲಾದ, ಮೌನದಲ್ಲಿ ನಡೆಯುವ ಮಹಾಕ್ರಾಂತಿ.
ಬನ್ನಿ, ಈ ನಿಗೂಢ ಮತ್ತು ಪವಿತ್ರ ಪ್ರಕ್ರಿಯೆಯ ಆಳವನ್ನು ಅರಿಯೋಣ.
*✴️#ಶಕ್ತಿಪಾತ ಎಂದರೆ*
'ಶಕ್ತಿಪಾತ' ಎನ್ನುವ ಪದವು ಎರಡು ಸಂಸ್ಕೃತ ಶಬ್ದಗಳಾದ 'ಶಕ್ತಿ' (ಚೈತನ್ಯ/Energy) ಮತ್ತು 'ಪಾತ' (ಇಳಿಯುವುದು) ಎನ್ನುವುದರಿಂದ ಕೂಡಿದೆ.
ಒಣಗಿದ ಬತ್ತಿ ಮತ್ತು ಎಣ್ಣೆ ಇದ್ದರೂ ದೀಪ ತಾನೇ ಉರಿಯುವುದಿಲ್ಲ. ಅದಕ್ಕೆ ಉರಿಯುತ್ತಿರುವ ಮತ್ತೊಂದು ದೀಪದ ಸಂಪರ್ಕ ಬೇಕು. ಅಂತೆಯೇ, ಶಿಷ್ಯನಲ್ಲಿ ಎಲ್ಲ ಸಾಮರ್ಥ್ಯವಿದ್ದರೂ, ಗುರುವಿನ ಅನುಗ್ರಹವೆಂಬ ಬೆಂಕಿ ತಗುಲುವವರೆಗೂ ಅವನು ಜ್ಞಾನಿಯಾಗಲಾರ. ಗುರುವಿನ ಆತ್ಮಚೈತನ್ಯವು ಶಿಷ್ಯನ ಆತ್ಮವನ್ನು ಪ್ರವೇಶಿಸಿ, ಅಲ್ಲಿರುವ ಅಜ್ಞಾನದ ಕತ್ತಲೆಯನ್ನು ಸರಿಸಿ, ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುವುದೇ ಶಕ್ತಿಪಾತ.
*✴️#ಶಾಸ್ತ್ರ ಏನು ಹೇಳುತ್ತದೆ*
ಕುಲಾರ್ಣವ ತಂತ್ರದಲ್ಲಿ ಶಕ್ತಿಪಾತದ ಮಹಿಮೆಯನ್ನು ಅದ್ಭುತವಾಗಿ ವಿವರಿಸಲಾಗಿದೆ.
🕉️ *ದೀಪಾದ್ ದೀಪೋ ಯಥಾ ಪ್ರೋಕ್ತಃ ತದ್ವದ್ ಯೋಗೀಶ್ವರೋ ಗುರುಃ* | *ಶಕ್ತಿಪಾತೇನ ದೇವೇಶಿ ಶಿಷ್ಯೋಽಪಿ ಶಿವತಾಂ ವ್ರಜೇತ್* ||
#ಭಾವಾರ್ಥ:
"ಹೇ ದೇವಿಯೇ, ಹೇಗೆ ಒಂದು ಪ್ರಜ್ವಲಿಸುವ ದೀಪದಿಂದ ಆರಿಹೋದ ಮತ್ತೊಂದು ದೀಪವನ್ನು ಬೆಳಗಿಸಬಹುದೋ, ಹಾಗೆಯೇ ಯೋಗೀಶ್ವರನಾದ ಸದ್ಗುರುವು ತನ್ನ ತಪಃಶಕ್ತಿಯನ್ನು ಹರಿಸುವ (ಶಕ್ತಿಪಾತ) ಮೂಲಕ ಸಾಮಾನ್ಯ ಶಿಷ್ಯನನ್ನೂ 'ಶಿವ'ನನ್ನಾಗಿ (ದೈವ ಸ್ವರೂಪಿಯನ್ನಾಗಿ) ಪರಿವರ್ತಿಸುತ್ತಾನೆ."
ಗುರು ಗೀತೆಯಲ್ಲಿ
*🕉️ ಯಥಾ ಖನಿತ-ಲೋಹಂ ಸ್ಪರ್ಶಮಣಿನಾ ಸುವರ್ಣಂ ಭವತಿ* |
*ತಥಾ ಗುರು-ಕೃಪಯಾ ಶಿಷ್ಯಃ ಶಿವ-ಮಯೋ ಭವತಿ* ||
#ಭಾವಾರ್ಥ:
"ಕಬ್ಬಿಣದ ತುಂಡು ಎಷ್ಟೇ ತುಕ್ಕು ಹಿಡಿದಿದ್ದರೂ, ಸ್ಪರ್ಶಮಣಿಯ (Philosopher's Stone) ಸಂಪರ್ಕಕ್ಕೆ ಬಂದ ತಕ್ಷಣ ಅದು ಹೇಗೆ ಶುದ್ಧ ಬಂಗಾರವಾಗಿ ಬದಲಾಗುತ್ತದೆಯೋ, ಹಾಗೆಯೇ ಗುರುವಿನ ಕೃಪಾಕಟಾಕ್ಷ ಬಿದ್ದಾಗ ಪಾಪಿಷ್ಠನಾದ ಶಿಷ್ಯನೂ ಪವಿತ್ರನಾಗಿ ದೈವತ್ವವನ್ನು ಪಡೆಯುತ್ತಾನೆ."
*✴️#ಶಕ್ತಿಪಾತದ ವಿಧಗಳು*
ನಮ್ಮ ಶಾಸ್ತ್ರಗಳಲ್ಲಿ ಶಕ್ತಿಪಾತವನ್ನು ಮೂರು ಜೀವಿಗಳ ಉದಾಹರಣೆಯ ಮೂಲಕ ವಿವರಿಸಲಾಗಿದೆ. ಗುರುವು ಶಿಷ್ಯನ ಪಕ್ವತೆಯನ್ನು ನೋಡಿ ಈ ವಿಧಾನಗಳನ್ನು ಬಳಸುತ್ತಾನೆ:
*✴️#ಸ್ಪರ್ಶ ದೀಕ್ಷೆ*
(ಹಕ್ಕಿಯ ಮಾರ್ಗ): ಹಕ್ಕಿಯು ತನ್ನ ಮೊಟ್ಟೆಗಳಿಗೆ ನೇರವಾಗಿ ತನ್ನ ದೇಹದ ಶಾಖವನ್ನು ಕೊಟ್ಟು (ಕಾವು ಕೊಟ್ಟು) ಮರಿ ಮಾಡುತ್ತದೆ. ಅಂತೆಯೇ, ಗುರುವು ಶಿಷ್ಯನ ಆಜ್ಞಾ ಚಕ್ರವನ್ನೋ ಅಥವಾ ಬೆನ್ನನ್ನೋ ಸ್ಪರ್ಶಿಸುವ ಮೂಲಕ ಶಕ್ತಿಯನ್ನು ಹರಿಸುತ್ತಾನೆ. ಇದು ಅತ್ಯಂತ ಶಕ್ತಿಯುತ ವಿಧಾನ.
*✴️#ದೃಕ್ ದೀಕ್ಷೆ*
(ಮೀನಿನ ಮಾರ್ಗ): ಮೀನು ತನ್ನ ಮೊಟ್ಟೆಗಳಿಗೆ ಕಾವು ಕೊಡುವುದಿಲ್ಲ. ಅದು ನೀರಿನಲ್ಲಿ ದೂರವಿದ್ದರೂ ಪ್ರೀತಿಯಿಂದ ತನ್ನ ಮೊಟ್ಟೆಗಳನ್ನೇ ದಿಟ್ಟಿಸಿ ನೋಡುತ್ತಿರುತ್ತದೆ. ಆ ದೃಷ್ಟಿಯ ಶಕ್ತಿಯಿಂದಲೇ ಮೊಟ್ಟೆ ಒಡೆದು ಮರಿ ಹೊರಬರುತ್ತದೆ. ಅಂತೆಯೇ, ಜ್ಞಾನಿಯಾದ ಗುರುವು ಕೇವಲ ತನ್ನ ಕರುಣಾಪೂರ್ಣ ನೋಟದಿಂದಲೇ ಶಿಷ್ಯನ ಅಜ್ಞಾನವನ್ನು ಸುಡಬಲ್ಲನು. ರಮಣ ಮಹರ್ಷಿಗಳು ಈ ವಿಧಾನಕ್ಕೆ ಪ್ರಸಿದ್ಧರಾಗಿದ್ದರು.
*✳️#ಮಾನಸ ದೀಕ್ಷೆ*
(ಆಮೆಯ ಮಾರ್ಗ): ಆಮೆ ಮೊಟ್ಟೆಗಳನ್ನು ದಡದಲ್ಲಿಟ್ಟು ತಾನು ನೀರಿನಲ್ಲಿರುತ್ತದೆ. ಆದರೆ ಸದಾಕಾಲ ತನ್ನ ಮನಸ್ಸಿನಲ್ಲಿ ಮೊಟ್ಟೆಗಳ ಬಗ್ಗೆಯೇ ಧ್ಯಾನಿಸುತ್ತಿರುತ್ತದೆ. ಆ ಸಂಕಲ್ಪ ಶಕ್ತಿಯಿಂದಲೇ ಮರಿಗಳು ಹುಟ್ಟುತ್ತವೆ. ಗುರುವು ದೂರವಿದ್ದರೂ, ತನ್ನ ಸಂಕಲ್ಪ ಶಕ್ತಿಯಿಂದ ಶಿಷ್ಯನಿಗೆ ಅನುಗ್ರಹ ನೀಡಬಲ್ಲನು.
✴️*#ವಿವೇಕಾನಂದರ ಅನುಭವ*
ಶಕ್ತಿಪಾತದ ಪರಿಣಾಮ ಹೇಗಿರುತ್ತದೆ ಎಂಬುದಕ್ಕೆ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ನಡುವಿನ ಘಟನೆ ಅತ್ಯುತ್ತಮ ನಿದರ್ಶನ.
ಯುವಕ ನರೇಂದ್ರ (ವಿವೇಕಾನಂದ) ತರ್ಕ ಮಾಡುತ್ತಾ, "ದೇವರನ್ನು ತೋರಿಸಿ" ಎಂದು ಹಠ ಹಿಡಿದಾಗ, ರಾಮಕೃಷ್ಣರು ಮೌನವಾಗಿದ್ದರು. ಆದರೆ ಒಮ್ಮೆ ನರೇಂದ್ರರು ಧ್ಯಾನಕ್ಕೆ ಕುಳಿತಾಗ ಅಥವಾ ಹತ್ತಿರ ಬಂದಾಗ, ರಾಮಕೃಷ್ಣರು ತಮ್ಮ ಬಲಗಾಲನ್ನು ನರೇಂದ್ರರ ಎದೆಗೆ ಸೋಕಿಸಿದರು (ಸ್ಪರ್ಶ ದೀಕ್ಷೆ).
ಆ ಕ್ಷಣದಲ್ಲಿ ಏನಾಯಿತು ಎಂಬುದನ್ನು ವಿವೇಕಾನಂದರೇ ವಿವರಿಸಿದ್ದಾರೆ:
*🕉️"#ಗುರುಗಳ ಸ್ಪರ್ಶವಾಗುತ್ತಿದ್ದಂತೆ, ನನ್ನ ಕಣ್ಣೆದುರೇ ಗೋಡೆಗಳು, ಕೊಠಡಿ, ಅಷ್ಟೇ ಏಕೆ ಇಡೀ ಬ್ರಹ್ಮಾಂಡವೇ ಒಂದು ಶೂನ್ಯದಲ್ಲಿ ಲೀನವಾಗುತ್ತಿರುವಂತೆ ಭಾಸವಾಯಿತು. ನನ್ನ 'ನಾನು' ಎಂಬ ಅಹಂಕಾರ ಕರಗಿಹೋಯಿತು. ನಾನು ಪ್ರಜ್ಞೆ ತಪ್ಪಿ ಬೀಳುವ ಹಂತಕ್ಕೆ ತಲುಪಿದೆ."*
ಇದು ಶಕ್ತಿಪಾತದ ಪ್ರಭಾವ! ಒಂದು ಸ್ಪರ್ಶವು ಒಬ್ಬ ಸಾಮಾನ್ಯ ಯುವಕನನ್ನು ವಿಶ್ವವನ್ನೇ ಬೆಳಗುವ ವಿವೇಕಾನಂದನನ್ನಾಗಿ ರೂಪಿಸಿತು.
*✴️ #ಶಕ್ತಿಪಾತಕ್ಕೆ ಶಿಷ್ಯನ ಅರ್ಹತೆ ಬೇಕೇ*
ಖಂಡಿತವಾಗಿಯೂ ಹೌದು ಮಳೆ ಎಷ್ಟೇ ಸುರಿದರೂ, ಪಾತ್ರೆಯನ್ನು ಬೋರಲು ಹಾಕಿದ್ದರೆ ನೀರು ತುಂಬುವುದಿಲ್ಲ. ಪಾತ್ರೆ ನೇರವಾಗಿರಬೇಕು ಮತ್ತು ಶುದ್ಧವಾಗಿರಬೇಕು.
✳️*#ಶ್ರದ್ಧೆ*
ಶಿಷ್ಯನಲ್ಲಿ ಗುರುವಿನ ಮೇಲೆ ನೂರಕ್ಕೆ ನೂರು ವಿಶ್ವಾಸವಿರಬೇಕು.
✳️*#ಪೂರ್ಣ ಶರಣಾಗತಿ* "ನನ್ನದು ಏನೂ ಇಲ್ಲ, ಎಲ್ಲವೂ ನಿನ್ನದೇ" ಎಂಬ ಭಾವವಿದ್ದಾಗ ಮಾತ್ರ ಗುರುವಿನ ಶಕ್ತಿ ಶಿಷ್ಯನಲ್ಲಿ ಹರಿಯಲು ಸಾಧ್ಯ.
ಶಕ್ತಿಪಾತ ಎನ್ನುವುದು ಒಂದು ಪವಾಡವಲ್ಲ, ಇದೊಂದು ವಿಜ್ಞಾನ. ವಿದ್ಯುತ್ ತಂತಿಯಿಂದ ಬಲ್ಬ್ಗೆ ಸಂಪರ್ಕ ಕೊಟ್ಟಾಗ ಹೇಗೆ ಬೆಳಕು ಬರುತ್ತದೆಯೋ, ಹಾಗೆ ಜಾಗೃತ ಆತ್ಮದಿಂದ (ಗುರು) ಸುಪ್ತ ಆತ್ಮಕ್ಕೆ (ಶಿಷ್ಯ) ಚೈತನ್ಯ ಹರಿಯುವುದೇ ಶಕ್ತಿಪಾತ.
ಜೀವನದಲ್ಲಿ ಅಂತಹ ಸದ್ಗುರುವಿನ ಸಾಮೀಪ್ಯ ಮತ್ತು ಆ ಒಂದು ದಿವ್ಯ ಕ್ಷಣಕ್ಕಾಗಿ ಸಾಧಕನು ಕಾಯುತ್ತಿರಬೇಕು. ಗುರುವಿನ ಆಶೀರ್ವಾದ ಸಿಕ್ಕರೆ, ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ.
ಜೈ ಗುರುದೇವ 🙏🚩🔱
4 hours ago | [YT] | 0
View 2 replies
VasanthaaHarish 🙏
"#kashi ಕಾಶಿಯ #ಕ್ಷೇತ್ರಪಾಲಕಿ #ಶ್ರೀ ವರಾಹಿ ದೇವಿ ದೇವಾಲಯ"
#ಸತೀದೇವಿಯ ಕೆಳ ಬಿದ್ದು ಸ್ಥಳವೇ #ಪಂಚಸಾಗರ #ಶಕ್ತಿ ಪೀಠ ಎಂದು ಹೇಳುತ್ತೇವೆ. ಇಲ್ಲಿ ದೇವಿಯನ್ನು ಮಾ #ವರಾಹಿ ಎಂದು ಪೂಜಿಸಲಾಗುತ್ತದೆ. ಪಂಚಸಾಗರ ಶಕ್ತಿ ಪೀಠವು ಉತ್ತರಪ್ರದೇಶದ ವಾರಣಾಸಿ ಬಳಿ ಇದೆ.
#ಸಪ್ತಮಾತೃಕೆಯರಲ್ಲಿ ಮಾ ವರಾಹಿಯೂ ಒಬ್ಬಳು. ಹಂದಿಯ ತಲೆಯೊಂದಿಗೆ ಸ್ತ್ರೀ ರೂಪದ ಕುತ್ತಿಗೆಯನ್ನು ಹೊಂದಿರುವ ಮಾ ವರಾಹಿಯನ್ನು ವರಾಹದ ಸ್ತ್ರೀರೂಪಿ ಶಕ್ತಿ ಎಂದು ಪರಿಗಣಿಸಲಾಗಿದೆ. ಭಾರತದ ದಕ್ಷಿಣ ಮತ್ತು ಪೂರ್ವದಲ್ಲಿ ವರಾಹಿ ದೇವಿಗೆ ಅರ್ಪಿತವಾದ ಅನೇಕ ದೇವಾಲಯಗಳಿವೆ.
#ಕಾಶಿಯಲ್ಲಿರುವ ಮಾ ವರಾಹಿ ದೇವಿಯು ಕಾಶಿಯ #ಗ್ರಾಮದೇವತೆಯಾಗಿ, ಕಾಶಿಯ #ರಕ್ಷಕಳಾಗಿದ್ದಾಳೆ. ಅವಳು ನಗರವನ್ನು ದುಷ್ಟಶಕ್ತಿಗಳಿಂದ ರಕ್ಷಿಸುತ್ತಾಳೆ. ಮಾತೆಯಾದ ದುರ್ಗಾದೇವಿಯು ರಾಕ್ಷಸರೊಡನೆ ಹೋರಾಡುವಾಗ ಮಾ ವರಾಹಿಯು ಆಕೆಯ #ಸೇನಾಧಿಪತಿಯಾಗಿದ್ದಳು ಎನ್ನುವರು.
#ಕಾಶಿಯಲ್ಲಿ ಭೇಟಿ ನೀಡಲೇ ಬೇಕಾದ ದೇವಾಲಯ ಮಾ ವರಾಹಿಯದು. ಕಾಶಿ ವಿಶ್ವನಾಥನ ದೇಗುಲದಿಂದ ಕಾಲ್ನಡಿಗೆಯ ದೂರದಲ್ಲಿ #ಮನ್ಮಂದಿರ #ಘಾಟ್ ನಲ್ಲಿ ನೆಲೆಗೊಂಡಿರುವ ಮಾ ವರಾಹಿ ದೇಗುಲವನ್ನು #ತ್ರಿಪುರ #ಭೈರವಿ ಘಾಟ್ ಮತ್ತು #ದಶಾಶ್ವಮೇಧ ಘಾಟ್ ನಿಂದ ಪ್ರವೇಶಿಸಬಹುದು.
ಉಗ್ರಸ್ವರೂಪಿಯಾದ ಮಾ ವರಾಹಿ ದೇವಿಯ ಮುಖ್ಯ ವಿಗ್ರಹವು 'ಪಾತಾಳ ಲೋಕ' ಎಂದು ಪರಿಗಣಿಸುವ ಮಟ್ಟದಲ್ಲಿ ದೇವಾಲಯದ ನೆಲಮಾಳಿಗೆಯಲ್ಲಿ ನೆಲೆಗೊಂಡಿದೆ. ದೇವಿಯ ಶಕ್ತಿಯು ಅತ್ಯಂತ ಶಕ್ತಿಯುತವಾಗಿದೆ ಎಂದು ನಂಬಲಾಗಿದೆ. ಸಂಪ್ರದಾಯಗಳ ಪ್ರಕಾರ ಅರ್ಚಕರು ಮಾತ್ರ ನೆಲಮಾಳಿಗೆಯ ದೇವಾಲಯದಲ್ಲಿ ಇರಲು ಅನುಮತಿಸಲಾಗಿದೆ. ಮಾತೆಯ ದರ್ಶನಕ್ಕೆ ಕರೆದಾಗ, ನೆಲಮಾಳಿಗೆಯ ಮೇಲಿನ ಒಂದು ರಂಧ್ರದ ಮೂಲಕ ಅವಳ ಮುಖವನ್ನು ಮತ್ತು ಇನ್ನೊಂದು ರಂಧ್ರದ ಮೂಲಕ ಪಾದಗಳ ದರ್ಶನವನ್ನು ನಾವು ಪಡೆಯಬಹುದು. ನಾವು ಅವಳನ್ನು ನೋಡುವುದು ಕೇವಲ ಒಂದು ಕ್ಷಣವಾದರೂ, ಆಕೆಯ ಅಗಾಧ ಶಕ್ತಿಯ ಅರಿವನ್ನು ಅನುಭವಿಸುವೆವು.
ಮಾ ವರಾಹಿಯ ಕೈಯಲ್ಲಿ ಚಕ್ರ, ಶಂಖ, ಖಡ್ಗವಿದೆ. ಮಾ ವರಾಹಿಯನ್ನು ಶಿವಭಕ್ತರು, ವೈಷ್ಣವರು ಶಕ್ತಿ ಪೀಠವಾಗಿ ಪೂಜಿಸುತ್ತಾರೆ. ಭಕ್ತಾದಿಗಳಲ್ಲಿ ಕೆಲವರು ವಿವಿಧ ಹೂವುಗಳ ಮಾಲೆಗಳನ್ನು, ವಿಶೇಷವಾಗಿ ದಾಸವಾಳವನ್ನು ಅರ್ಪಿಸುತ್ತಾರೆ.
ಒಂದು ಉಲ್ಲೇಖದ ಪ್ರಕಾರ ವರಾಹಿ ದೇವಿಯು ರಾಕ್ಷಸನನ್ನು ಕೊಲ್ಲಲು ಭಗವಾನ್ ವಿಷ್ಣುವಿನ (ವರಾಹ-ಹಂದಿ ರೂಪ) ಅವತಾರದಿಂದ ಶಿವನಿಂದ ಸೃಷ್ಟಿಸಲ್ಪಟ್ಟಳು. ಕಾಶಿ ಖಂಡದ ಪ್ರಕಾರ, ಶಿವನು ಅರವತ್ನಾಲ್ಕು ಯೋಗಿಗಳನ್ನು ಕಾಶಿಗೆ ಕಳುಹಿಸಿ ರಾಜ ದಿವೋದಸ್ನ ಆಡಳಿತವನ್ನು ಅಡ್ಡಿಪಡಿಸಿದನು. ಆದರೆ ನಂತರ ಯೋಗಿನಿಯರು ಕಾಶಿಯ ಸೌಂದರ್ಯಕ್ಕೆ ಎಷ್ಟು ಪುಳಕಿತರಾದರು ಎಂದರೆ ಅವರು ಕಾಶಿಯಲ್ಲಿ ನೆಲೆಸಲು ನಿರ್ಧರಿಸಿದರು. ಅವರಲ್ಲಿ ವರಾಹಿಯೂ ಒಬ್ಬಳು.
ವರಾಹಿ ದೇವಿಯು ಕಾಶಿ ಕ್ಷೇತ್ರದಲ್ಲಿ ರಾತ್ರಿಯ ಸಮಯದಲ್ಲಿ ಸಂಚರಿಸುತ್ತಾಳೆ ಎಂದು ಹೇಳಲಾಗುತ್ತದೆ. ಅವಳು ಬೆಳಿಗ್ಗೆ ದೇವಾಲಯವನ್ನು ಪ್ರವೇಶಿಸುತ್ತಾಳೆ. ಮುಂಜಾನೆ ಅರ್ಚಕರು ಪೂಜೆಯನ್ನು ಪೂರ್ಣಗೊಳಿಸುತ್ತಾರೆ. ಬೆಳಗಿನ ಧಾರ್ಮಿಕ ಕ್ರಿಯೆಗಳ ನಂತರ, ಸೂರ್ಯ ಮುಳುಗುವವರೆಗೆ ದೇವಿಯು ವಿಶ್ರಾಂತಿ ಪಡೆಯುತ್ತಾಳೆ. ಆದುದರಿಂದ ಆಗ ಮಾ ವರಾಹಿ ದೇವಾಲಯದ ಮುಖ್ಯ ಬಾಗಿಲನ್ನು ಮುಚ್ಚಲಾಗುತ್ತದೆ.
ಹಗಲಿನಲ್ಲಿ ಕಾಶಿಗೆ ರಕ್ಷಣೆಯನ್ನು ಭಗವಾನ್ ಕಾಲಭೈರವನಿಗೆ (ಕ್ಷೇತ್ರ ಪಾಲಕ) ಮತ್ತು ರಾತ್ರಿಯಲ್ಲಿ ದೇವತೆ ವರಾಹಿ ದೇವಿಗೆ (ಕ್ಷೇತ್ರ ಪಾಲಿಕಾ) ನೀಡಲಾಗುತ್ತದೆ. ವರಾಹಿ ಮಾತೆಯು ರಾತ್ರಿಯ ಸಮಯದಲ್ಲಿ ಕಾಶಿಯನ್ನು ರಕ್ಷಿಸುತ್ತಾಳೆ.
ಸಮಯ :
ದೇವಾಲಯವು ಬೆಳಿಗ್ಗೆ 7
6.00 Amರಿಂದ 9.30 Amರವರೆಗೆ ಮಾತ್ರ ತೆರೆದಿರುತ್ತದೆ ಮತ್ತು ಇಡೀ ದಿನ ಮುಚ್ಚಿರುತ್ತದೆ.
ಮಾಹಿತಿ ಕೃಪೆ: ಶ್ರೀ ವಸಂತಹರೀಶ್ 🙏🚩🔱
2 days ago | [YT] | 7
View 4 replies
VasanthaaHarish 🙏
#ಶಿವ ‘ರಾತ್ರಿ’ ಯ #ಅಪರೂಪದ ಕಥೆ:-
#ಶಿವರಾತ್ರಿ ಹಬ್ಬದ ಬಗ್ಗೆ ಅನೇಕ ಕಥೆಗಳು ಪ್ರಸಿದ್ಧವಾಗಿವೆ. ಆದರೆ ಶಿವರಾತ್ರಿಯ ‘ರಾತ್ರಿ’ ಮಹತ್ವವನ್ನು ವಿವರಿಸುವ ಅಪರೂಪದ ಕಥೆಯೂ ಇದೆ. ಪ್ರತೀ ತಿಂಗಳು ಮಾಸ ಶಿವರಾತ್ರಿ ಬರುತ್ತದೆ. ಅದೇ ರೀತಿ ಪ್ರತಿ ವರ್ಷ ಮಾಘ ಮಾಸದಲ್ಲಿ ಬರುವ ಮಹಾ ಶಿವರಾತ್ರಿಯಂದು ಯಾಮ ಪೂಜೆ ಹಾಗೂ ಜಾಗರಣೆ ಮಾಡುವ ಸಂಪ್ರದಾಯಕ್ಕೆ ವಿಶೇಷವಾದ ಹಿನ್ನೆಲೆ ಇದೆ.
ಕೃತಯುಗದಲ್ಲಿ ಕಶ್ಯಪ ಮುನಿಗಳಿಗೆ ದಿತಿ- ಅದಿತಿ ಇಬ್ಬರು ಪತ್ನಿಯರು. ಇವರು ಗರ್ಭಿಣಿಯರಾಗಿ ಅದಿತಿ ದೇವಪುತ್ರರಿಗೆ, ದಿತಿಯು ರಾಕ್ಷಸರಿಗೆ ಜನ್ಮ ನೀಡಿದರು. ಆ ಸಮಯದಲ್ಲಿ ಹುಟ್ಟು- ಸಾವು ವಿಚಾರವಾಗಿ ಚರ್ಚೆ ಮಾಡುತ್ತಾ, ಏನು ಪರಿಹಾರ ಎಂದು ಚಿಂತೆ ಮಾಡುತ್ತಿದ್ದರು. ಈ ವಿಷಯ ಶ್ರೀಮನ್ನಾರಾಯಣನಿಗೆ ತಿಳಿಯಿತು. ಮಹಾವಿಷ್ಣು ಅದಿತಿಯ ದೇವಪುತ್ರರನ್ನು, ದಿತಿಯ ರಾಕ್ಷಸ ಪುತ್ರರನ್ನು ಕರೆಸಿದನು.
ಇದಕ್ಕೆ ಪರಿಹಾರವಾಗಿ ಹೇಳಿದನು. ಭೂಮಿಯಲ್ಲಿರುವ ಅತಿ ಎತ್ತರವಾದ ಮಂದರ ಪರ್ವತವನ್ನು ಕಿತ್ತು ಏಳು ಸಮುದ್ರಗಳಾಚೆ ಕೆಂಪು ಕಡಲಲ್ಲಿ ಮುಳುಗಿಸಿ ಕಡೆದರೆ
‘ಅಮೃತ’ ಸಿಗುತ್ತದೆ ಅಂತ ಅಮೃತ ಕುಡಿದರೆ ಹುಟ್ಟು ಸಾವುಗಳ ಸಮಸ್ಯೆಗಳಿಲ್ಲದೆ ನೆಮ್ಮದಿಯಿಂದ ಬಾಳಬಹುದು ಎಂದು ಸಲಹೆ ಕೊಟ್ಟನು. ಇದನ್ನು ಕೇಳಿ ಹರ್ಷ ಗೊಂಡ ದಿತಿಯ ದೇವ ಮಕ್ಕಳು, ಅದಿತಿಯ ರಾಕ್ಷಸ ಮಕ್ಕಳು, ಮಂದರ ಪರ್ವತವ ನ್ನು (ಕಡಗೋಲಿಗೆ) ಸಮುದ್ರದಲ್ಲಿ ಮುಳುಗಿಸಿ ದೈತ್ಯಾಕಾರದ ಸರ್ಪ ವಾಸುಕಿಯ ನ್ನು ಹಗ್ಗವನ್ನಾಗಿಸಿ ಹಾಲುಗಡಲನ್ನು ಕಡೆದರು.
ಸಮುದ್ರ ಕಡೆದಾಗ ಮೊದಲು ಬಂದಿದ್ದು ಹಾಲಾಹಲ ವಿಷ. ಇಂಥ ವಿಷ ಸೇವಿಸಿ ಬೇರೆ ಯಾರಿಗೂ ತೊಂದರೆ ಆಗಬಾರದೆಂದು ಲೋಕ ಕಲ್ಯಾಣಕ್ಕಾಗಿ ದಯಾ ಮಯನಾದ ಪರಮೇಶ್ವರನೇ ವಿಷವನ್ನು ಆಪೋಷನ ಮಾಡಿದನು. ಕುಡಿದ ವಿಷ ಗಂಟಲೊಳಗೆ ಇಳಿಯದಂತೆ, ಪಾರ್ವತಿ ಶಿವನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಶಿವನ ಕುತ್ತಿಗೆಯಲ್ಲಿ ನಿಂತು ನೀಲಿಯಾಯಿತು. ಶಿವನು ‘ನೀಲಕಂಠ’ ನಾದ. ನಂಜಿನಂತ ವಿಷ ಸೇವಿಸಿದ್ದರಿಂದ ‘ನಂಜುಂಡೇಶ್ವರ’ ನಾದನು. ಹಾಲಾಹಲವನ್ನ ‘ಶ್ರೀ’ ಎಂದು ಕರೆಯುತ್ತಾರೆ. ಆದ್ದರಿಂದ ‘ಶ್ರೀಕಂಠ’ ನಾದನು. ಆದರೆ ವಿಷವನ್ನು ಕುಡಿದ ಶಿವನ ಬಗ್ಗೆ ದೇವತೆಗಳು ಆತಂಕ ಗೊಂಡರು. ಪಾರ್ವತಿ ಗಂಟಲನ್ನು ಒತ್ತಿ ಹಿಡಿದಿದ್ದರೂ ಒಂದು ಹನಿ ವಿಷ ಶಿವನ ಹೊಟ್ಟೆ ಸೇರಿರಬಹುದು. ಇದರಿಂದ ಶಿವನ ಜೀವಕ್ಕೆ ಅಪಾಯವಿದೆ. ಆಗ ದೇವತೆಗಳಿನ್ನೂ ಅಮೃತ ಕುಡಿದಿರಲಿಲ್ಲ. ದೇವತೆ
ಗಳಿನ್ನೂ ಅಮರರಾಗಿರಲಿಲ್ಲ. ಈಗ ಶಿವನನ್ನು ಉಳಿಸಿಕೊಳ್ಳಬೇಕು ಎಂದರೆ ರಾತ್ರಿ ಹೊತ್ತು ಮೈಯ್ಗೆ ವಿಷ ಏರದಂತೆ ಶಿವ ನಿದ್ರಿಸುವುದನ್ನ ತಡೆಯಬೇಕು ಎಂದು ದೇವತೆಗಳೆಲ್ಲ ಸೇರಿ ಶಿವನು ಎಚ್ಚರನಾಗಿರಲೆಂದು ಶಿವನನ್ನು ‘ಪ್ರಶಂಸೆ’ ಮಾಡುವ ಭಜನೆ, ಸಂಗೀತ, ತಾಳ, ಮೃದಂಗ, ನೃತ್ಯ, ಹರಿಕಥೆ, ಪುರಾಣ ಕಥೆ, ಈ ಮೂಲಕ ಅಹೋ ರಾತ್ರಿ( ಇಡೀ ರಾತ್ರಿ) ದೇವತೆಗಳೆಲ್ಲ ಜಾಗರಣೆಮಾಡಿ ಶಿವ ಸಂತೋಷ ವಾಗಿರುವಂತೆ, ನಿದ್ರಿಸದಂತೆ ನೋಡಿಕೊಂಡು ಶಿವನನ್ನು ಉಳಿಸಿಕೊಂಡರು.
ಈ ಕಾರಣದಿಂದ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾತ್ರಿ ಜಾಗರಣೆ ಮಾಡಿ, ಆ ಸಮಯದಲ್ಲಿ ಭಜನೆ- ಸ್ತೋತ್ರ ಪಠಣ- ಪುರಾಣ ಕಥೆ- ಪ್ರವಚನ ರೂಡಿಗೆ ಬಂದಿತು. ಒಂದೊಂದು ಯಾಮಕ್ಕೂ ಶಿವನಿಗೆ ತಣ್ಣನೆ ಹಾಲು, ನೀರಿನ ಅಭಿಷೇಕ, ಕಬ್ಬಿನ ಹಾಲು, ಎಳನೀರು, ರುದ್ರಾಭಿಷೇಕ ಮಾಡುತ್ತಾರೆ. ನಾನಾ ಥರದ ಪುಷ್ಪ ಗಳಿಂದ ಅರ್ಚನೆ ಮಾಡುತ್ತಾರೆ. ಪುರೋಹಿತರು ಹಾಗೂ ಬ್ರಾಹ್ಮಣರು ಸೇರಿ ಶ್ರೀ ಶುಕ್ತ, ಪುರುಷ ಸೂಕ್ತ , ರುದ್ರ, ಚಮಕ, ರುದ್ರ ತ್ರಿಶತಿ, ಮಂತ್ರಗಳು ಘಂಟಾಘೋಷ ವಾಗಿ ಹೇಳುತ್ತಾರೆ. ವ್ಯಾಪ್ತಿ ಪ್ರದೇಶದಲ್ಲಿ ಇದರ ತರಂಗಗಳು ವ್ಯಾಪಿಸುತ್ತದೆ ಶಿವ ರಾತ್ರಿ ಜಾಗರಣೆ ಮಾಡಲು ಇದು ಒಂದು ಕಾರಣವಾಗಿದೆ. ಹಾಗೆ ವೈದ್ಯಕೀಯ ದಲ್ಲಿ ಹಾವು ಕಚ್ಚಿದ ವ್ಯಕ್ತಿ ನಿದ್ರೆ ಮಾಡದಂತೆ ನೋಡಿ ಕೊಳ್ಳಿ ಎಂದು ಹೇಳುತ್ತಾರೆ.
ಆತ್ಮೀಯ ಓದುಗ ಬಳಗದವರಿಗೆಲ್ಲಾ ‘ಮಹಾ ಶಿವರಾತ್ರಿ’ ಹಬ್ಬದ ಹಾರ್ದಿಕ ಶುಭಾಶಯಗಳು.
ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ ಲಘು ಸ್ತೋತ್ರಂ |
ಸೌರಾಷ್ಟ್ರ ಸೋಮನಾಥಂ ಚ
ಶ್ರೀಶೈಲೇ ಮಲ್ಲಿಕಾರ್ಜುನಂ |
ಉಜ್ಜಯಿನ್ಯಾಂ ಮಹಾಕಾಲಂ
ಓಂಕಾರಂ ಅಮಲೇಶ್ವರಂ ||೧||
ಪರಲ್ಯಾಂ ವೈದ್ಯನಾಥಂ ಚ
ಡಾಕಿನ್ಯಾಂ ಭೀಮಶಂಕರಂ |
ಸೇತುಬಂಧೇ ತು ರಾಮೇಶಂ
ನಾಗೇಶಂ ದಾರುಕಾವನೇ ||೨||
ವಾರಣಸ್ಯಾಂ ತು ವಿಶ್ವೇಶಂ
ತ್ರ್ಯಂಬಕಂ ಗೌತಮೀತಟೇ |
ಹಿಮಾಲಯೇ ತು ಕೇದಾರಂ
ಘೃಷ್ಣೇಶಂ ಶಿವಾಲಯೇ ॥೩॥
ಏತಾನಿ ಜ್ಯೋತಿರ್ಲಿಂಗಾನಿ
ಸಾಯಂ ಪ್ರಾತಃ ಪಠೇನ್ನರಃ |
ಸಪ್ತಜನ್ಮಕೃತಂ ಪಾಪಂ
ಸ್ಮರಣೇನ ವಿನಶ್ಯತಿ ||೪||
ವಂದನೆಗಳೊಂದಿಗೆ,🙏🔱🚩
3 days ago | [YT] | 7
View 2 replies
VasanthaaHarish 🙏
ಸ್ನೇಹಿತರೇ , " #ಮಹಾ ಶಿವರಾತ್ರಿ ಹಬ್ಬ" ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿ ಹಬ್ಬ ಆಚರಿಸಲಾತ್ತದೆ , ಒಂದುವೇಳೆ ಶಿವರಾತ್ರಿ ತ್ರಿಸ್ಪರ್ಶಾ ಅಂದರೇ ತ್ರಯೋದಶಿ , ಚತುರ್ದಶಿ ಹಾಗೂ ಅಮಾವಾಸ್ಯೆಯ ಸ್ಪರ್ಶಯುಕ್ತವಾದರೆ ಪರಮೋತ್ತಮ ಎಂದಿರುವುದರಿಂದ ಈ ಬಾರಿಯ ಶಿವರಾತ್ರಿ ಮಹಾ ಶುಭಸಂಯೋಗ ಹೊಂದಿರುವ ಮಹಾಶಿವರಾತ್ರಿ ಯೆಂದೂ ಐಶ್ವರ್ಯಯೋಗವೆಂದೂ ತಿಳಿಸಿದ್ದಾರೆ !! ಶಿವ+ ಸಿದ್ಧಿ ಜೊತೆಗೆ ಶ್ರೀವತ್ಸ್ + ಸೌಮ್ಯಯೋಗ ಕೂಡಾ ಇರುವುದರಿಂದ ಈ ಪರ್ವ ಸತ್ಯಹಾಗೂ ಶಕ್ತಿಯ ದ್ಯೋತಕ ಕೂಡಾ ಆಗಿದೆ !! ಸ್ನೇಹಿತರೇ ನಾವೆಲ್ಲಾ ಸರ್ವಸಂಕಷ್ಟಗಳಿಂದ ಈ ವೈರಸ್ ನಿಂದ ಮುಕ್ತರಾಗಲು , ಕೆಟ್ಟ ದುಷ್ಟಶಕ್ತಿಗಳಿಂದ ಮುಕ್ತರಾಗಿ ನೆಮ್ಮದಿ ಜೀವನ ನೆಡೆಸಲು ಶಿವರಾತ್ರಿಯಂದು ಮನೆಯಲ್ಲಿ ಪೂಜೆ ಅಭಿಷೇಕ ಶಿವನದರ್ಶನ + ಆರಾಧನೆ , ಉಪವಾಸ , ಜಾಗರಣೆ ಬಹಳ ಮುಖ್ಯ.!!
ಪರಶಿವನಿಗೆ ಅಭಿಷೇಕ , ಮಧುಅಭಿಷೇಕ , ಪಂಚಾಮೃತ ಅಭಿಷೇಕ ಅರ್ಚನೆ ಬಿಲ್ವಪತ್ರೆ ಅರ್ಪಿಸಿ , ಪುಷ್ಪಗಳಿಂದ ಅಲಂಕರಿಸ ಬೇಕು ! ಮಾಘಮಾಸದ ಕೃಷ್ಣಪಕ್ಷದ ಚತುರ್ಥಿಯಂದು ಆಚರಿಸುವ ಹಬ್ಬವೇ "ಮಹಾ ಶಿವರಾತ್ರಿ" ನಮ್ಮ ಭಾರತದೇಶಾದ್ಯಂತ ವಿದೇಶಗಳಲ್ಲೂ ಸಮಸ್ತಜನಾಂಗದವರೂ ಭೇದಭಾವವಿಲ್ಲದೇ ಆಚರಿಸುವ ಮಹಾ ಶಿವರಾತ್ರಿ ಹಬ್ಬವಿದು ! ಹಿಂದಿನ ಪುರಾಣಗಳಲ್ಲಿ ಮತ್ತು ಈ ಕಲಿಗಾಲದಲ್ಲೂ ಸುಲಭವಾಗಿ ಒಲಿಯುವವನು ನಮ್ಮ ಈಶ್ವರನು ಒಬ್ಬನೇ ! ಭಕ್ತರ ಕಷ್ಟಸಹಿಸದವನು ಶಿವ ಕರುಣಾಳು ಎಂದೇ ಹೆಸರು ಪಡೆದು ಅನೇಕಕಡೆ ಅನೇಕ ಹೆಸರುಗಳಿಂದ ನೆಲಸಿರುವನು ಆ ಉಮಾಪತಿ ! ಕಾಶೀವಿಶ್ವೇಶ್ವರ , ಧರ್ಮಸ್ಥಳದ ಮಂಜುನಾಥ , ಕಾಲಭೈರವ , ವಿರೂಪಾಕ್ಷ ,ಅಮೃತೇಶ್ವರ , ಚಂದ್ರಮೌಳೇಶ್ವರ, ನಂಜುಡೇಶ್ವರ , ಸೋಮೇಶ್ವರ ,ವಡಭಾಂಡೇಶ್ವರ ,ಕೇದಾರೇಶ್ವರ ,ಮುರುಡೇಶ್ವರ ,ಓಂಕಾರೇಶ್ವರ ,ಅಮೃತೇಶ್ವರ ,ಅಮರನಾಥ, ಬೋಲೇನಾಥ , ವಿಶ್ವನಾಥ , ವೈದ್ಯನಾಥ ,ಮಂಜುನಾಥ ,ಭೂತನಾಥ ಹೀಗೇ ಸಹಸ್ರಾರು ನಾಮಗಳನ್ನು ಹೊತ್ತರೂ ಅವನನ್ನು ಭಕ್ತಿಯಿಂದ " ಓಂ ನಮಃ ಶಿವಾಯ " ಎಂದು ನಂಬಿ ಕರೆದರೇ ಸಾಕು ಕ್ಷಣಮಾತ್ರದಲ್ಲಿ ಬಂದೊದಗುವನು ಆ ಪರಮೇಶ್ವರ ಪಾರ್ವತೀಪತಿ ದಯಾಮಯಿ ಈಶ್ವರ !!!
ವಿಷ್ಣು ಅಲಂಕಾರಪ್ರಿಯ - ಶಿವ ಅಭಿಷೇಕ ಪ್ರಿಯ ! ಇಂದು ಶಿವನನ್ನು ಒಲಿಸಿಕೊಳ್ಳಲು ಬೆಳಗಿನಿಂದ ಅದೆಷ್ಟು ಬಾರಿ ಶಿವನಿಗೆ ಅಭಿಷೇಕ ಮಾಡಿದರೂ ಸಾಲದು --
ಶಿವನಿಗೆ ಹಾಲಿನಿಂದ ಅಭಿಷೇಕ ಮಾಡಿದರೆ -- ವಿದ್ಯಾ ಪ್ರಾಪ್ತಿ ! ಜೇನುತುಪ್ಪದಿಂದ ಮಧು ಅಭಿಷೇಕ ಮಾಡಿದರೆ - ಸರ್ವಕಷ್ಟ ನಿವಾರಣೆ !
ಶಿವನಿಗೆ ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿದರೆ -- ಧನಪ್ರಾಪ್ತಿ !
ಶಿವನಿಗೆ ಶುಧ್ದೋದಕ ಅಂದರೆ ಜಲಾಭಿಷೇಕ ಮಾಡಿದರೆ - ಇಷ್ಢಾರ್ಥ ಪ್ರಾಪ್ತಿ ಸಿದ್ಧಿ !!
ಇನ್ನು ಬಿಲ್ವಾರ್ಚನೆಗಂತೂ ವಿಶೇಷವಾದ ಮಹತ್ವ ಶಿವನ ಪೂಜೆಯಲ್ಲಿ !
" ತ್ರಿದಲಮ್ ತ್ರಿಗುಣಾಕಾರಮ್ ತ್ರಿನೇತ್ರಂ ಚ ತ್ರಯಾಯುಧಮ್
ತ್ರಿಜನ್ಮ ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಮ್ ."
ಮೂರುಜನ್ಮಗಳ ಪಾಪವನ್ನು ಸಂಹಾರ ಮಾಡುವ ಅಗಾಧ ಶಕ್ತಿ ಒಂದು ತ್ರಿದಳ ಬಿಲ್ವಪತ್ರೆಯಲ್ಲಿದೆ ಎಂದಾಗ ಅದರಿಂದ ಅರ್ಚನೆ ಮಾಡಿ ಜನ್ಮಜನ್ಮಾಂತರದ ಪಾಪಗಳಿಂದ ವಿಮುಕ್ತರಾಗೋಣ ಅಲ್ಲವೇ !!?
ಸಾಮಾನ್ಯವಾಗಿ ಎಲ್ಲಾ ದೇವರಪೂಜೆ ಹಗಲಿನಲ್ಲಿ ನೆಡೆದರೆ - ಇಂದು ಶಿವರಾತ್ರಿಯಂದು ಈಶ್ವರನ ಪೂಜೆ ರಾತ್ರಿಯವೇಳೆ ನೆಡೆಯುತ್ತದೆ ! ಇಂದು ಬೆಳಗಿನಿಂದ ಶಿವನಿಗೆ ಅಭಿಷೇಕ ಪೂಜೆ ಬಿಲ್ವಾರ್ಚನೆ ಮಾಡುತ್ತಾ ಉಪವಾಸವಿದ್ದು ರಾತ್ರಿಯಲ್ಲಿ ಶಿವನಿಗೆ ಮತ್ತೆ ಮತ್ತೆ ಯಾಮಗಳಲ್ಲಿ ಅಭಿಷೇಕ ಬಿಲ್ವಾರ್ಚನೆ ಮಾಡುತ್ತಾ "ಜಾಗರಣೆ ಮಾಡುವುದೇ ಶಿವರಾತ್ರಿಯ ವಿಶೇಷವಾಗಿದೆ " ಶಿವನು ಪ್ರತಿ ಸಂವತ್ಸರದಲ್ಲಿ ಶಿಶಿರ ಋತುವಿನ ಮಾಘಮಾಸದ ಕೃಷ್ಣಪಕ್ಷದ ಚತುರ್ಥಿಯಂದು ರಾತ್ರಿ ಸಮಯದಲ್ಲಿ ಭೂಮಿಯಲ್ಲಿ ಸಂಚರಿಸುತ್ತಾ ಎಲ್ಲಾ ಸ್ಥಾವರಜಂಗಮ ಲಿಂಗಗಳಲ್ಲಿಯೂ ಸಂಕ್ರಮಣಗೊಳ್ಳುತ್ತೇನೆ ಎಂದಿದ್ದಾನೆ ! ಆದ್ದರಿಂದ ಶಿವರಾತ್ರಿಯಂದು ಪೂಜಿಸುವ ಭಕ್ತರ ಸಕಲ ಪಾಪಗಳೂ ನಿರ್ಮೂಲ ವಾಗುತ್ತದೆ ಎಂದೇ ಪ್ರತೀತಿಯಾಗಿದೆ ! ಆದುದರಿಂದಲೇ ಶಿವರಾತ್ರಿಯನ್ನು " "ಮಹಾ ಶಿವರಾತ್ರಿ" ಎಂದು ಕರೆದಿದ್ದಾರೆ .
ಸ್ನೇಹಿತರೇ ಬನ್ನಿ ಹಾಗಾದರೆ ಈ ಮಹಾ ಶಿವರಾತ್ರಿಯಂದು ವಿವಿಧ ದೇವಾಲಯಗಳಲ್ಲಿ ನಾನಾ ಹೆಸರಿನಿಂದ ಕರೆಯಲ್ಪಡುತ್ತಿರುವ ಶಿವನ ದರ್ಶನಮಾಡುತ್ತಾ - ರಾತ್ರಿ ಅಭಿಷೇಕ ಬಿಲ್ವಾರ್ಚನೆ ಮಾಡುತ್ತಾ ಜಾಗರಣೆಯಲ್ಲಿ ಶಿವನಾಮ ಸಂಕೀರ್ತನೆ ಶಿವಕತೆಪುರಾಣಗಳನ್ನು ಕೇಳುತ್ತಾ ಮಹಾಶಿವರಾತ್ರಿಯ ಹಬ್ಬಕ್ಕೆ ನಿಜವಾದ ಅರ್ಥವನ್ನು ಕೊಟ್ಟು ಆಚರಣೆಮಾಡೋಣ ಶಿವಕೃಪೆಗೆ ಪಾತ್ರರಾಗೋಣ ಏನಂತೀರಿ ? ಇಂದು ಎಲ್ಲರೂ ಶಿವ ಪಂಚಾಕ್ಷರೀ ಸ್ತೋತ್ರ ಪಠಿಸಿದರೆ , ಅಷ್ಠೋತ್ತರ , ಸಹಸ್ರನಾಮ ಪಠಿಸಿದರೆ ,ಅಭಿಷೇಕ ಅರ್ಚನೆ , ಜಾಗರಣೆ ಮಾಡಿದಲ್ಲಿ ಸಕಲ ಪಾಪಗಳಿಂದ ಮುಕ್ತರಾಗಿ ಇಷ್ಟಾರ್ಥ ಸಿದ್ಧಿಯಾಗುವುದರಲ್ಲಿ ಸಂಶಯವೇ ಇಲ್ಲವೆಂದು ಪುರಾಣಗಳು ತಿಳಿಸಿವೆ ! ದೇವಾಲಯಕ್ಕೆ ಹೋಗಿ ಶಿವನ ದರ್ಶನ ಮಾಡುವವರು ಮಾಸ್ಕ್ ಧರಿಸಲು ಮರೆಯದಿರಿ !
" ನಂಬಿ ಕರೆದರೇ ಓ ಎನ್ನನೇ ಶಿವನು - ನಂಬಿಕೆಯೇ ನಮ್ಮೀ ಪರಶಿವನು " ಓಂ ನಮಃ ಶಿವಾಯ , ಶಿವಾಯ ನಮಃ
3 days ago | [YT] | 5
View 0 replies
VasanthaaHarish 🙏
ಒಂದು ಉಪಯುಕ್ತ ಮಾಹಿತಿ
ಒಂದು ಪುರಾಣದ ಕಥೆ ಕೂಡ ಇದೆ ಆ ಕಥೆ ಏನೆಂದರೆ #ಲಕ್ಷ್ಮೀದೇವಿಯು ತಪಸ್ಸನ್ನು ಮಾಡಲು #ಬಿಲ್ವಪತ್ರೆ ಮರದ ಕೆಳಗೆ ಕುಳಿತಿರುತ್ತಾರೆ. ತಪ್ಪಸ್ಸುಮಾಡುತ್ತಾ ಮಾಡುತ್ತಾ ಬಹಳ ವರ್ಷಗಳ ಕಾಲ ಲಕ್ಷ್ಮೀದೇವಿಯ ಬಿಲ್ವಪತ್ರ ಮರದಲ್ಲಿ ಐಕ್ಯ ಆಗುತ್ತಾರೆ ಎನ್ನುವ ಕಥೆಯು ಪುರಾಣದಲ್ಲಿ ಉಲ್ಲೇಖವಾಗಿದೆ.
ಹಾಗಾಗಿ ಬಿಲ್ವಪತ್ರೆ ಮರವು ಲಕ್ಷ್ಮೀದೇವಿಗೆ ತುಂಬಾನೇ ಇಷ್ಟ ವಾದಂತಹ ಮರ ಅಂತನೇ ಹೇಳಬಹುದು. ಅದರಲ್ಲಿಯೂ ಮಹಾಶಿವನಿಗೆ ಕೂಡ ಈ ಬಿಲ್ವಪತ್ರೆಯ ಎಂದರೆ ತುಂಬಾನೇ ಇಷ್ಟ .
ಹೀಗಾಗಿ ನೀವು ಈ ಬಿಲ್ವಾಪತ್ರ ಮರವನ್ನು ಈ ರೀತಿಯಾಗಿ ಪೂಜೆ ಮಾಡಿದ್ದೆ ಆದಲ್ಲಿ ಮಹಾ ಶಿವನ ಅನುಗ್ರಹವು ಹಾಗೂ ಲಕ್ಷ್ಮಿ ಅನುಗ್ರಹವು ದೊರೆಯುತ್ತದೆ ಹೀಗಾಗಿ ನಿಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆಗಳು ಹಾಗೂ ನೀವು ಅಂದುಕೊಂಡ ಕೆಲಸಗಳು ಮತ್ತು ಮುಂತಾದ ಸಮಸ್ಯೆಗಳು ಏನಿದ್ದರೂ ಕೂಡ ಈ ರೀತಿಯಾಗಿ ಪೂಜೆಯನ್ನು ಮಾಡಿದರೆ ನಿಮ್ಮ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ
ಸಾಮಾನ್ಯವಾಗಿ ನೀವು ಬಿಲ್ವಪತ್ರೆ ಮರದ ಕೆಳಗೆ ಹೋಗಿ ಮೊದಲು ಮರಕ್ಕೆ ನೀರು ಹಾಕಬೇಕು ನಂತರ ಮರಕ್ಕೆ ವಿಭೂತಿ ಮತ್ತು ಗಂಧದ ಲೇಪನವನ್ನು ಮಾಡಬೇಕು ಮಾಡಬೇಕು.ದೇವಸ್ಥಾನದಲ್ಲಿ ಅಂದರೆ ದೇವಸ್ಥಾನದ ಆವರಣದಲ್ಲಿ ಒಂದು ಬಿಲ್ವಪತ್ರೆ ಮರ ಇದ್ದರೆ 11 ರೂಪಾಯಿ ನಾಣ್ಯಗಳನ್ನು ದೇವರ ಹುಂಡಿಗೆ ಹಾಕಿ ನಂತರ ಎಲ್ಲ ಮರದ ಕೆಳಗೆ ಪೂಜೆಯನ್ನು ಮಾಡಬೇಕು.
ಮರಕ್ಕೆ ಪೂಜೆಯನ್ನು ಮಾಡಿದ ನಂತರ ಈ ಮರಕ್ಕೆ ಒಂದು ತಾಂಬೂಲವನ್ನು ಅರ್ಪಿಸಬೇಕು ತಾಂಬೂಲ ಹೇಗಿರಬೇಕೆಂದರೆ ತಾಂಬೂಲದಲ್ಲಿ ಎಲೆ ಅಡಿಕೆ ಹಾಗೂ ಎರಡು ಬಾಳೆಹಣ್ಣುಗಳನ್ನು ಇಟ್ಟು ತಾಂಬೂಲವನ್ನು ಬಿಲ್ವಪತ್ರ ಮರಕ್ಕೆ ಸಮರ್ಪಿಸಬೇಕು.
ಹೀಗೆ ಸಮರ್ಪಿಸಿದ ನಂತರ ನಿಮ್ಮ ಕೋರಿಕೆಗಳನ್ನು ಕೇಳಿಕೊಳ್ಳಬೇಕು.ಹೀಗೆ ಕೋರಿಕೆಗಳನ್ನು ಕೇಳಿಕೊಳ್ಳುತ್ತಾ ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಏನು ಸಮಸ್ಯೆ ಇದ್ದರೂ ಕೂಡ ಆ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಹೇಳಲಾಗುತ್ತಿದೆ.
ಬಿಲ್ವಾಷ್ಟಕ ಸ್ತೋತ್ರ
ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ
ತ್ರಿಜನ್ಮ ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಂ
ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಚಿದ್ರೈಃ ಕೋಮಲೈಃ ಶುಭೈಃ
ತವಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಂ
ಕೋಟಿ ಕನ್ಯಾ ಮಹಾದಾನಂ ತಿಲಪರ್ವತ ಕೋಟಯಃ
ಕಾಂಚನಂ ಕ್ಷೀಲದಾನೇನ ಏಕಬಿಲ್ವಂ ಶಿವಾರ್ಪಣಂ
ಕಾಶೀಕ್ಷೇತ್ರ ನಿವಾಸಂ ಚ ಕಾಲಭೈರವ ದರ್ಶನಂ
ಪ್ರಯಾಗೇ ಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಂ
ಇಂದುವಾರೇ ವ್ರತಂ ಸ್ಥಿತ್ವಾ ನಿರಾಹಾರೋ ಮಹೇಶ್ವರಾಃ
ನಕ್ತಂ ಹೌಷ್ಯಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಂ
ರಾಮಲಿಂಗ ಪ್ರತಿಷ್ಠಾ ಚ ವೈವಾಹಿಕ ಕೃತಂ ತಧಾ
ತಟಾಕಾನಿಚ ಸಂಧಾನಮ್ ಏಕಬಿಲ್ವಂ ಶಿವಾರ್ಪಣಂ
ಅಖಂಡ ಬಿಲ್ವಪತ್ರಂ ಚ ಆಯುತಂ ಶಿವಪೂಜನಂ
ಕೃತಂ ನಾಮ ಸಹಸ್ರೇಣ ಏಕಬಿಲ್ವಂ ಶಿವಾರ್ಪಣಂ
ಉಮಯಾ ಸಹದೇವೇಶ ನಂದಿ ವಾಹನಮೇವ ಚ
ಭಸ್ಮಲೇಪನ ಸರ್ವಾಂಗಮ್ ಏಕಬಿಲ್ವಂ ಶಿವಾರ್ಪಣಂ
ಸಾಲಗ್ರಾಮೇಷು ವಿಪ್ರಾಣಾಂ ತಟಾಕಂ ದಶಕೂಪಯೋಃ
ಯಜ್ನಕೋಟಿ ಸಹಸ್ರಸ್ಚ ಏಕಬಿಲ್ವಂ ಶಿವಾರ್ಪಣಂ
ದಂತಿ ಕೋಟಿ ಸಹಸ್ರೇಷು ಅಶ್ವಮೇಧ ಶತಕ್ರತೌ
ಕೋಟಿಕನ್ಯಾ ಮಹಾದಾನಮ್ ಏಕಬಿಲ್ವಂ ಶಿವಾರ್ಪಣಂ
ಬಿಲ್ವಾಣಾಂ ದರ್ಶನಂ ಪುಣ್ಯಂ ಸ್ಪರ್ಶನಂ ಪಾಪನಾಶನಂ
ಅಘೋರ ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಂ
ಸಹಸ್ರವೇದ ಪಾಟೇಷು ಬ್ರಹ್ಮಸ್ತಾಪನ ಮುಚ್ಯತೇ
ಅನೇಕವ್ರತ ಕೋಟೀನಾಮ್ ಏಕಬಿಲ್ವಂ ಶಿವಾರ್ಪಣಂ
ಅನ್ನದಾನ ಸಹಸ್ರೇಷು ಸಹಸ್ರೋಪ ನಯನಂ ತಧಾ
ಅನೇಕ ಜನ್ಮಪಾಪಾನಿ ಏಕಬಿಲ್ವಂ ಶಿವಾರ್ಪಣಂ
ಬಿಲ್ವಸ್ತೋತ್ರಮಿದಂ ಪುಣ್ಯಂ ಯಃ ಪಠೇಶ್ಶಿವ ಸನ್ನಿಧೌ
ಶಿವಲೋಕಮವಾಪ್ನೋತಿ ಏಕಬಿಲ್ವಂ ಶಿವಾರ್ಪಣಂ
ಸಂಗ್ರಹಿಸಿದ ಮಾಹಿತಿ ಇದಕ್ಕೆ ಉಲ್ಲೇಖ ಏಲ್ಲಿದೆ ಎಂಬುದು ಗೊತ್ತಿಲ್ಲ
ಶಿವಾನುಗ್ರಹ ಪ್ರಾಪ್ತಿರಸ್ತು
3 days ago | [YT] | 6
View 1 reply
VasanthaaHarish 🙏
#ಕರುಣಿಸು#ಜಗದಂಬೇ#ಶ್ರೀ ಶಿರಸಿ#ಮಾರಿಕಾಂಬೆ🙏🚩
ಅಂದಿನ ವಿರಾಟ ನಗರವಾಗಿದ್ದ ಈಗಿನ #ಹಾನಗಲ್ಲಿನಲ್ಲಿ #ಧರ್ಮರಾಯನು ದೇವಿಯನ್ನು ಆರಧಿಸುತ್ತಿದ್ದನ್ನು ಎಂದು #ಮಹಾಭಾರತದಲ್ಲಿ ಹೇಳಲಾಗಿದೆ. #ಚಾಲುಕ್ಯರ ಕಾಲದ ಶಾಸನದಲ್ಲಿ ಕೂಡ ಇದರ ಉಲ್ಲೇಖವಿದೆ,ಹಾನಗಲ್ಲಿನಲ್ಲಿ ಜಾತ್ರೆ ಮುಗಿದ ನಂತರ ಆಭರಣಗಳ ಸಮೇತವಾಗಿ ದೇವಿಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಇಟ್ಟಿದ್ದರು. ಅದನ್ನು ಕೆಲವು ಕಳ್ಳರು ಅಪಹರಿಸಿ ಸಿರ್ಸಿಗೆ ತಂದರು. ಆಭರಣಗಳನ್ನು ಹಂಚಿಕೊಂಡ ನಂತರ ಆ ವಿಗ್ರಹವನ್ನು ಪೆಟ್ಟಿಗೆಯಲ್ಲಿಟ್ಟು ಕೆರೆಗೆ ಎಸೆದರು. ಆ ಕೆರೆಯು ಸಿರ್ಸಿಯ #ದೇವಿಕೆರೆ ಎಂದು ಹೆಸರಾಗಿದೆ.
ಭಕ್ತನೊಬ್ಬ ಪ್ರತಿ ವರ್ಷ ಚಂದ್ರಗುತ್ತಿಯ ಜಾತ್ರೆಗೆ ಹೋಗುತ್ತಿದ್ದ. ಆದರೆ ಒಂದು ಬಾರಿ ಅವನನ್ನು ಜನರು ತಡೆದು ಪೀಡಿಸಿದರು. ಅದರಿಂದ ಬೇಸರಗೊಂಡು ಅವನು ಮುಂದಿನ ವರ್ಷ ಜಾತ್ರೆಗೆ ಹೋಗದೆ ಸಿರ್ಸಿಯಲ್ಲಿಯೇ ದೇವಿಯ ಆರಾಧನೆ ಮಾಡಿದನು. ಒಂದು ರಾತ್ರಿ ದೇವಿ ಅವನಿಗೆ ನಾನು ದ್ಯಾಮವ್ವ. ನಾನು ನಿಮ್ಮ ಊರಿನ ಕೆರೆಯಲ್ಲಿದ್ದೇನೆ. ನನ್ನನ್ನು ಮೇಲೆತ್ತು ಎಂದು ಹೇಳಿದಂತೆ ಕನಸು ಬಿತ್ತು. ಅವನು ಅದನ್ನು ಆ ಊರಿನ ಪ್ರಮುಖರಿಗೆ ತಿಳಿಸಿದನು. ಅದರಂತೆ ಊರವರು ಕೆರೆಯ ಸುತ್ತ ಸೇರಲಾಗಿ ಭಕ್ತನು ಮೂರು ಸುತ್ತು ಕೆರೆಯನ್ನು ಸುತ್ತಿ ದೇವಿಯನ್ನು ಪ್ರಾರ್ಥಿಸಿದನು. ಕೆರೆಯ ಮೇಲೆ ತೇಲುತ್ತಿರುವ ಪೆಟ್ಟಿಗೆಯು ಕಂಡುಬಂದಿತು. ಅದರಲ್ಲಿನ ವಿಗ್ರಹದ ಭಾಗಗಳನ್ನು ಒಟ್ಟು ಸೇರಿಸಲಾಗಿ ದೇವಿಯ ವಿಗ್ರಹವು ಮೂಡಿಬಂದಿತು.
ಗ್ರಾಮಸ್ಥರು ದೇವಿಯ ವಿಗ್ರಹವನ್ನು ಸಿರ್ಸಿಯಲ್ಲಿ ಸ್ಥಾಪಿಸಲು ಅನುಮತಿ ಕೋರಿ ಸೋಂದಾ ಸಂಸ್ಥಾನದ ಮಹಾರಾಜರನ್ನು ಕೇಳಿದರು. ಅದರಂತೆ ಕ್ರಿ.ಶ. ೧೬೮೯ರಲ್ಲಿ, ಅಂದರೆ ಶಾಲಿವಾಹನ ಶಕೆ ೧೬೧೧ರ ಶುಕ್ಲ ಸಂವತ್ಸರದ ವೈಶಾಖ ಶುದ್ಧ ಅಷ್ಟಮಿಯಂದು, ಮಂಗಳವಾರ ದೇವಿಯನ್ನು ಈಗಿನ ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.🚩🙏🔱
#ಸುಂದರ ಬ್ರಾಹ್ಮಣ ಯುವತಿ..#ಶಿರಸಿಯ #ಮಾರಿಕಾಂಬೆಯಾಗಿ ಬದಲಾದ...ರೋಚಕ ಹಿನ್ನೆಲೆ...
ಶತಮಾನಗಳ ಹಿಂದೆ ಈ ಶಿರಸಿಯ ಪ್ರಾOತ್ಯದಲ್ಲಿ ಸಾತ್ವಿಕ..ಬ್ರಾಹ್ಮಣ ಕುಟುಂಬ ವಾಸವಾಗಿರ್ತಾರೆ...ಆ ದಂಪತಿಗಳಿಗೆ ಸುಂದರವಾದ ಮದುವೆ ವಯಸ್ಸಿಗೆ ಬಂದ ಮಗಳಿರ್ತಾಳೆ...ಅವಳಿಗೊಂದು..ಸೂಕ್ತ ವರನನ್ನು ನೋಡಿ ಮದುವೇ ಮಾಡುವ ವಿಚಾರದಲ್ಲಿ ಇರ್ತಾರೆ ತಂದೆ ತಾಯಿ...ಆ ಊರಿನ ಪ್ರತಿಯೊಬ್ಬ ಮದುವೆ ವಯಸ್ಸಿಗೆ ಬಂದ..ಗಂಡಸರು ಅವಳನ್ನು ವಿವಾಹವಾಗಲು ಬಯಸುತಿರುತ್ತಾರೇ..ಹೀಗೆ ಸಾಗ್ತಿರ್ಬೇಕಾದ್ರೆ...ಒಂದು ದಿನ ಒಬ್ಬ ಸುರದೃಪಿ ಯುವಕನೊಬ್ಬ...ಬಂದು..ತಾನು ಸಕಲ ವೇದ ಶಾಸ್ತ್ರ ಪಾರಂಗತ ಪಂಡಿತನೆಂದು ಪರಿಚಯಿಸಿಕೊಂಡು..ಆ ಯುವತಿಯನ್ನ ಕುಟುಂಬದವರನ್ನ ನಂಬಿಸಿ ಮರಳು ಮಾಡಿ...ವಿವಾಹ ಮಾಡಿಕೊಳ್ತಾನೆ...ಮದ್ವೆ ನಂತರ ಹೀಗೆ ದಿನಗಳು ಸಾಗ್ತಿರ್ಬೇಕಾದ್ರೆ..ಅವಳಿಗೆ ಕೆಲ ನಿಜಾOಶ ತಿಳಿಯಲು ಶುರುವಾಗತ್ತೆ..ಅಸಲಿಗೆ.. ಮದುವೆ ಮಾಡಿಕೊಂಡ ಆ ವ್ಯಕ್ತಿ.. ಮಾಂಸಹಾರಿಯಾಗಿರ್ತಾನೆ...ಒಬ್ಬ ಕೆಟ್ಟ ನಡತೆಯುಳ್ಳ..ಮಾಯಾವಿ ಮಾಂತ್ರಿಕನಾಗಿರ್ತಾನೆ...ತಾನು ಮೋಸ ಹೋಗಿದ್ದಕ್ಕೆ..ಮನನೊಂದು...ತಾನು ವಿಧವೆಯಾದರು ಸರಿ...ಮೋಸ ಮಾಡಿದ ಇವನನ್ನ ಸುಮ್ನೆ ಬಿಡಬಾರದೆಂದು ನಿರ್ಧರಿಸಿ ಉಗ್ರ ಕ್ರೋಧಿತಳಾಗಿ ಅವನನ್ನು ಕೊಲ್ಲಲು ಮುಂದಾಗ್ತಾಳೆ...ಮೊದಲೇ ಮಾಯಾವಿ ಮಾಂತ್ರಿಕನಾದ ಅವನು ಅವಳಿಂದ ತಪ್ಪುಸಿಕೊಳ್ಳಲು..ಕೋಳಿಯಲ್ಲಿ ಕುರಿಯಲ್ಲಿ.. ಪ್ರವೇಶಿಸುತ್ತಾನೆ...ಕೋಪದಲ್ಲಿ...ಅವನ್ನೆಲ್ಲ ಕೊಂದ ಅವಳು...ಕೊನೆಗೆ ಅವನು..ಒಂದು ಕೋಣದಲ್ಲಿ ಪ್ರವೇಶಿಸುತ್ತಾನೆ...ಮೊದಲೇ ಕೋಪದಲ್ಲಿ ಇದ್ದ ಅವಳು ಆ ಕೋಣದ ರುಂಡವನ್ನ ಕಡೆದು..ತನ್ನ ಮನೆಯಾಗಿದ್ದ ಗುಡಿಸಿಲಿಗೆ ಬೆಂಕಿ ಹಚ್ಚಿ ಬಿಡುತ್ತಾಳೆ...ಇದನ್ನೆಲ್ಲಾ ಕಣ್ಣಾರೆ..ಕಂಡ ಅಲ್ಲಿಯ ಜನರು ಇವಳು ಸಾಮಾನ್ಯ ಹೆಣ್ಣಲ್ಲ ಮಹಾ ಮಾರಿ...ದೈವಾOಶ ಸಂಭೋತೆ..ಅಂತ ಘೋಷಣೆ ಕೂಗಲು ಮುಂದಾಗ್ತಾರೆ...ಈ ಘಟನೆ ನಡೆದ ನಂತರ...ಅಲ್ಲಿಂದ ಅವಳು ಅದೃಶ್ಯಳಾಗ್ತಾಳೆ....ಇಂದಿಗೂ ಶಿರಸಿ ಮಾರಿಕಾಂಬೆಯ ಸನ್ನಿದಿಯಲ್ಲಿ... ಆ ಕೋಣವನ್ನ ಕಾಣಬಹುದು...ಪ್ರತಿ 2 ವರ್ಷಕ್ಕೆ ಅಲ್ಲಿ ವಿಜೃಂಭಣೆಯಿಂದ ಮಾರಿ ಜಾತ್ರೆ ಮಾಡಲಾಗತ್ತೆ..1930 ನಂತರ ಪ್ರಾಣಿ ಬಲಿ ನಿಷೇದವಾದ ಕಾರಣ..ಕೋಣವನ್ನ ಕಡೆಯಲು ನಿಲ್ಲಿಸಲಾಗಿದೆ...ಮಾರಿ ಜಾತ್ರೆಯ ಸಂಧರ್ಭದಲ್ಲಿ... ಕೋಣದ..ಮೈಯಿಂದ ಒಂದಿಷ್ಟು ರಕ್ತವನ್ನ ಎಳೆದುಕೊಂಡು..ದೇವಿಗೆ ರಕ್ತ ತರ್ಪಣ ನೀಡಲಾಗತ್ತೆ... ದೇವಿಯ ಗರ್ಭ ಗುಡಿಯ ವಿಗ್ರಹವೇ..(ಕಟ್ಟಿಗೆಯದ್ದು) ರಥೋತ್ಸವದಲ್ಲಿ ಪಾಲುಗೊಳ್ಳುವುದು ಇಲ್ಲಿನ ವಿಶೇಷ...ಭಾರತದ...51 ಶಕ್ತಿ ಪೀಠದಲ್ಲಿ ಶಿರಸಿಯ ಮಾರಿಕಾಂಬ ದೇವಿ ಒಬ್ಬಳು ಅಂತ ಹೇಳಲಾಗತ್ತೆ...ಇನ್ನೂ ಮೈಸೂರಿನ ಚಾಮುಂಡಿಗೆ.. ಹಾಗೂ.. ಕೊಲ್ಲುರಿನ ಮೂಕಾಂಬಿಕೆಗೆ...ಇವಳು ಹಿರಿ ಅಕ್ಕ ಅಂತ ಸಹ ಹೇಳಲಾಗತ್ತೆ...ಇನ್ನೂ ದ್ವಾಪರದ ಹಿನ್ನೆಲೆ ಕೂಡ ಈ ದೇವಿಗೆ ಇದೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ...ಯುಧಿಷ್ಟಿರ...ಈ ಮಾರಿಕಾಂಬೆಯ..ಮಹಿಮೆ ಅರಿತು ಒಂದು...ಶ್ಲೋಕವನ್ನು ಸಹ ರಚಿಸಿದ್ದಾನೆ... " ವಿರಾಟ ನಗರO ರಮ್ಯಮ್...ಗಚ್ಚಮಾನೋ ಯುದಿಷ್ಠಿರ: ಅಸ್ತುವನ್ಮಾನಸ ದೇವಿO ದುರ್ಗಾ ತ್ರಿಭುವನೇಶ್ವರಿO" ಎಂದು....ಪ್ರತಿ ಎರಡು ವರ್ಷಕೊಮ್ಮೆ ನಡೆಯುವ ಮಾರಿ ಜಾತ್ರೆ...ದಕ್ಷಿಣ ಭಾರತದ ಅತೀ ದೊಡ್ಡ ಜಾತ್ರೆ ಅಂತ ಹೇಳಲಾಗತ್ತೆ...ಇನ್ನೂ ಈ ದೇವಿಯ ಮಹಿಮೆ ಅಪಾರ..ಇಲ್ಲಿ ಬಂದು ಹರಕೆ ಕಟ್ಟಿಕೊಂಡು ಪ್ರಾರ್ಥಿಸಿದವರ ಸಕಲ ಇಷ್ಟಾರ್ಥ ನೆರವೇರಿದ್ದು ಸಾಕಷ್ಟು ಪ್ರತ್ಯಕ್ಷ ನಿದರ್ಶನಗಳಿವೇ🙏🙏ಕೊಂಕಣಿ ಶೈಲಿಯಲ್ಲಿ ಇರುವ ಈ ದೇವಾಲಯ...ನೋಡಲು ತುಂಬಾ ಸುಂದರ..ಮತ್ತು ಆಕರ್ಷಕ🙏
ಮಾಹಿತಿ ಸಂಗ್ರಹ 🙏
1 week ago | [YT] | 11
View 1 reply
VasanthaaHarish 🙏
#ಕರ್ಮ_ಸಿದ್ಧಾಂತ : ಕರ್ಮಸಿದ್ದಾಂತವನ್ನು ಸ್ವಲ್ಪನಾದ್ರೂ ಅರ್ಥ ಮಾಡ್ಕೊಂಡ ಮನುಷ್ಯ ಮಾತ್ರ ನೆಮ್ಮದಿಯಾಗಿರ್ತಾನೆ ಅಂತ ಹೇಳ್ಬಹುದು.
ಕರ್ಮಸಿದ್ದಾಂತ ಬಹಳ ಕಠಿಣ.ಅದು ಯಾರನ್ನು ಕೂಡ ಬಿಡದು.ಯಾರಿಗೂ ಅರ್ಥವಾಗದು. ಮಹಾಜ್ಞಾನಿಗಳನ್ನೂ ಬಿಡದು.ಅವರವರ ಕರ್ಮವನ್ನು ಅವರವರೇ ಅನುಭವಿಸಿಯೇ ತೀರ್ಬೇಕು.ಯಾರನ್ನು ನಿಂದಿಸಿದ್ರೂ, ಬೇಡಿದ್ರೂ ಕೂಡ ಪ್ರಯೋಜನವಿಲ್ಲ.
ರಮಣ ಮಹರ್ಷಿಯವರು ಸ್ನಾನಕ್ಕಾಗಿ ನದಿಗೆ ಹೋಗ್ತಿದ್ರು. ಅವರ ಜೊತೆಗೆ ಅವರ ಶಿಷ್ಯ ಶ್ರೀಕೃಷ್ಣ ಜೊತೆಗೆ ಇರ್ತಿದ್ದ.ಹಾಗೆಯೇ ನಡೆಯುತ್ತಾ ಮುಂದುವರೆದರು. ಅಷ್ಟ್ರಲ್ಲಿ ಒಂದು ಇಟ್ಟಿಗೆ ರಮಣರ ಕಾಲ ಹೆಬ್ಬೆರಳ ಮೇಲೆ ಬಿದ್ದು ರಕ್ತ ಸೋರಲು ಶುರುವಾಯ್ತು.ರಮಣರು ತಮ್ಮ ಪಂಚೆಯನ್ನು ಹರಿದು ರಕ್ತವನ್ನು ನಿಲ್ಲಿಸಲು ಹೇಳಿದ್ರು.ಇದು ಶ್ರೀಕೃಷ್ಣನಿಗೆ ಗೊತ್ತಿತ್ತು "ಹೀಗೆ ಸೋರುವ ಆ ರಕ್ತವನ್ನು ನಿಲ್ಲಿಸುವುದಕ್ಕಾ ಗಿಯೇ ಗುರುಗಳು ತಮ್ಮ ಪಂಚೆಯನ್ನು ಹರಿಯಲು" ತನಗೆ ಹೇಳಿದರೆಂದು.
ನಂತರ ರಮಣರು "ಕೃಷ್ಣ, ಇಟ್ಟಿಗೆ ತಗುಲಿ ರಕ್ತ ಸೋರುತಿದ್ದರೂ ಕೂಡ ನಾನು ಉಟ್ಟಿರುವ ಪಂಚೆಯನ್ನು ಯಾಕೆ ಹರಿಯಲಿಲ್ಲ? ರಕ್ತ ಸೋರಲು ಯಾಕೆ ಬಿಟ್ಟೆ? ಎಂದು ಕೇಳಿದರು.
ಅದಕ್ಕೆ ಕೃಷ್ಣ "ಹಾಗೆ ಹರಿಯಲು ನಂಗೆ ಸಾಧ್ಯವಿಲ್ಲ. ನಿಮ್ಮ "ಕರ್ಮದ ಪ್ರಕಾರ ಇಟ್ಟಿಗೆ ಬೀಳ್ಬೇಕಿತ್ತು ಬಿತ್ತು.ಆದ್ರೆ ನಿಮ್ಮ ರಕ್ತ ಸೋರಿಕೆ ಯನ್ನು ನಾನು ನಿಲ್ಲಿಸ್ಬೇಕು" ಅಂತ ನಿಮ್ಮ ಕರ್ಮದ ಪ್ರಕಾರ ಇರ್ಲಿಲ್ಲ ಅಂತ ಹೇಳಿದನು.
ಆದ್ದರಿಂದ "ನಮಗಿರುವ ಋಣವನ್ನು,ಸಾಲವನ್ನು, ಕೆಟ್ಟ ಕರ್ಮವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ತೀರಿಸಿಕೊಳ್ಳುವುದು ಒಳ್ಳೆಯದು" ಕರ್ಮ ಶೇಷವನ್ನು ಯಾರಾದ್ರೂ ಸರಿ ಅನುಭವಿಸ್ಲೇಬೇಕು.
ಅದೇ ರೀತಿಯಲ್ಲಿ ಒಳ್ಳೆ ಕರ್ಮಗಳಿಸಿಕೊಳ್ಳಲು ಕಷ್ಟಪಡ್ಬೇಕು..
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀ ಲಚ್ಚಣ್ಣನವರ ಸ್ಫೂರ್ತಿಯಿಂದ.....
2 weeks ago | [YT] | 7
View 2 replies
VasanthaaHarish 🙏
॥#ಶಿವರಾತ್ರಿಗಾಗಿ ಪೂಜೆ ವಿಧಾನ ॥
ಮೊದಲು ಗಣಪತಿಯ ಪೂಜೆ
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ।ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ॥
#ಸಂಕಲ್ಪ
: ಮಮೋಪಾತ್ತ ಸಮಸ್ತ ದುರಿತ ಕ್ಷಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂಶುಭೇ ಶೋಭನೇ ಮುಹೂರ್ತೇ ಆದ್ಯಬ್ರಹ್ಮಣಃ ದ್ವಿತೀಯಪರಾರ್ಧೇಶ್ವೇತ ವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇಪ್ರಥಮಪಾದೇ ಜಂಬೂ ದ್ವೀಪೇ ಭಾರತವರ್ಷೇ ಭರತಖಂಡೇಅಸ್ಮಿನ್ ವರ್ತಮಾನೇ ವ್ಯವಹಾರಿಕೇ - ನಾಮೇನ ಸಂವತ್ಸರೇಉತ್ತರಾಯಣೇ ಶಿಶಿರ ಋತೌ ಮಾಘ ಮಾಸೇಕೃಷ್ಣ ಪಕ್ಷೇ ಚತುರ್ಧಶ್ಯಾಂ ಶುಭತಿಥೌ - ವಾಸರ ಯುಕ್ತಾಯಾಂಶುಭನಕ್ಷತ್ರ ಶುಭಯೋಗ ಶುಭಕರಣ ಏವಂಗುಣ ವಿಶೇಷಣ ವಿಶಿಷ್ಟಾಯಾಂ- ಶುಭತಿಥೌ ಶಿವರಾತ್ರಿ ಪುಣ್ಯಕಾಲೇ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಮಮ ಕ್ಷೇಮಸ್ಥೈರ್ಯವಿಜಯಾಯುರಾರೋಗ್ಯೈಶ್ವರ್ಯಾಭಿ ವೃದ್ಧ್ಯರ್ಥಂ ಧರ್ಮಾರ್ಥಕಾಮಮೋಕ್ಷ ಚತುರ್ವಿಧ ಫಲಪುರುಷಾರ್ಥ ಸಿದ್ಧ್ಯರ್ಥಂಇಷ್ಟ ಕಾಮ್ಯಾರ್ಥ ಸಿದ್ಧ್ಯರ್ಥಂ ಮಮ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಮಂಗಳಾವಾಪ್ತ್ಯರ್ಥಂ ಶ್ರೀ ಸಾಂಬ ಸದಾಶಿವಪ್ರಸಾದೇನ ಸಕುಟುಂಬಸ್ಯ ಜ್ಞಾನ ವೈರಾಗ್ಯ ಮೋಕ್ಷ ಪ್ರಾಪ್ತ್ಯರ್ಥಂವರ್ಷೇ ವರ್ಷೇ ಪ್ರಯುಕ್ತ ಶಿವರಾತ್ರಿ ಪುಣ್ಯಕಾಲೇ ಸಾಂಬ ಪರಮೇಶ್ವರ ಪೂಜಾಂ ಕರಿಷ್ಯೇ ॥
ಕಳಸ ಪೂಜೆ
:ಚಂದ್ರ ಕೋಟಿ ಪ್ರತೀಕಾಶಂ ತ್ರಿನೇತ್ರಂ ಚಂದ್ರ ಭೂಷಣಂ ।ಆಪಿಂಗಳ ಜಟಾಜೂಟಂ ರತ್ನ ಮೌಳಿ ವಿರಾಜಿತಂ ॥ನೀಲಗ್ರೀವಂ ಉತಾರಾಂಗಂ ತಾರಹಾರೋಪ ಶೋಭಿತಂ ।ವರದಾಭಯ ಹಸ್ತಂಚ ಹರಿಣಂಚ ಪರಶ್ವತಂ ॥ತತಾನಂ ನಾಗ ವಲಯಂ ಕೇಯೂರಾಂಗತ ಮುದ್ರಕಂ ।ವ್ಯಾಘ್ರ ಚರ್ಮ ಪರೀತಾನಂ ರತ್ನ ಸಿಂಹಾಸನ ಸ್ಥಿತಂ ॥ಆಗಚ್ಚ ದೇವದೇವೇಶ ಮರ್ತ್ಯಲೋಕ ಹಿತೇಚ್ಚಯಾ ।ಪೂಜಯಾಮಿ ವಿದಾನೇನ ಪ್ರಸನ್ನಃ ಸುಮುಖೋ ಭವ ॥ಉಮಾ ಮಹೇಶ್ವರಂ ದ್ಯಾಯಾಮಿ ।
ಆವಾಹಯಾಮಿ ॥
ಪ್ರಾಣ ಪ್ರತಿಷ್ಠೆ
ಪಾದಾಸನಂ ಕುರು ಪ್ರಾಜ್ಞ ನಿರ್ಮಲಂ ಸ್ವರ್ಣ ನಿರ್ಮಿತಂ ।ಭೂಷಿತಂ ವಿವಿತೈಃ ರತ್ನೈಃ ಕುರು ತ್ವಂ ಪಾದುಕಾಸನಂ ॥ಉಮಾ ಮಹೇಶ್ವರಾಯ ನಮಃ । ರತ್ನಾಸನಂ ಸಮರ್ಪಯಾಮಿ ॥ಗಂಗಾದಿ ಸರ್ವ ತೀರ್ಥೇಭ್ಯಃ ಮಯಾ ಪ್ರಾರ್ತ್ತನಯಾಹೃತಂ ।ತೋಯಂ ಎತತ್ ಸುಕಸ್ಪರ್ಶಂ ಪಾದ್ಯಾರ್ಥಂ ಪ್ರದಿಗೃಹ್ಯತಾಂ ॥ಉಮಾ ಮಹೇಶ್ವರಾಯ ನಮಃ । ಪಾದ್ಯಂ ಸಮರ್ಪಯಾಮಿ ॥ಗಂಧೋದಕೇನ ಪುಷ್ಪೇಣ ಚಂದನೇನ ಸುಗಂಧಿನಾ ।ಅರ್ಘ್ಯಂ ಕೃಹಾಣ ದೇವೇಶ ಭಕ್ತಿಂ ಮೇ ಹ್ಯಚಲಾಂ ಕುರು ॥ಉಮಾ ಮಹೇಶ್ವರಾಯ ನಮಃ । ಅರ್ಘ್ಯಂ ಸಮರ್ಪಯಾಮಿ ॥ಕರ್ಪೂರೋಶೀರ ಸುರಭಿ ಶೀತಳಂ ವಿಮಲಂ ಜಲಂ ।ಗಂಗಾಯಾಸ್ತು ಸಮಾನೀತಂ ಗೃಹಾಣಾಚಮಣೀಯಕಂ ॥ಉಮಾ ಮಹೇಶ್ವರಾಯ ನಮಃ । ಆಚಮನೀಯಂ ಸಮರ್ಪಯಾಮಿ ॥ರಸೋಸಿ ರಸ್ಯ ವರ್ಗೇಷು ಸುಕ ರೂಪೋಸಿ ಶಂಕರ ।ಮಧುಪರ್ಕಂ ಜಗನ್ನಾಥ ದಾಸ್ಯೇ ತುಭ್ಯಂ ಮಹೇಶ್ವರ ॥ಉಮಾ ಮಹೇಶ್ವರಾಯ ನಮಃ । ಮಧುಪರ್ಕಂ ಸಮರ್ಪಯಾಮಿ ॥ಪಯೋದಧಿ ಕೃತಂಚೈವ ಮಧುಶರ್ಕರಯಾ ಸಮಂ ।ಪಂಚಾಮೃತೇನ ಸ್ನಪನಂ ಕಾರಯೇ ತ್ವಾಂ ಜಗತ್ಪತೇ ॥ಉಮಾ ಮಹೇಶ್ವರಾಯ ನಮಃ । ಪಂಚಾಮೃತ ಸ್ನಾನಂ ಸಮರ್ಪಯಾಮಿ ॥ಮಂಧಾಕಿನಿಯಾಃ ಸಮಾನೀತಂ ಹೇಮಾಂಬೋರುಹ ವಾಸಿತಂ ।ಸ್ನಾನಾಯ ತೇ ಮಯಾ ಭಕ್ತ್ಯಾ ನೀರಂ ಸ್ವೀಕೃಯತಾಂ ವಿಭೋ ॥ಉಮಾ ಮಹೇಶ್ವರಾಯ ನಮಃ । ಶುದ್ದೋದಕ ಸ್ನಾನಂ ಸಮರ್ಪಯಾಮಿ । ಸ್ನಾನಾನಂತರಂ ಆಚಮನೀಯಂ ಸಮರ್ಪಯಾಮಿ ॥ವಸ್ತ್ರಂ ಸೂಕ್ಷ್ಮಂ ತುಕೂಲೇಚ ದೇವಾನಾಮಪಿ ದುರ್ಲಭಂ ।ಗೃಹಾಣ ತ್ವಂ ಉಮಾಕಾಂತ ಪ್ರಸನ್ನೋ ಭವ ಸರ್ವತಾ ॥ಉಮಾ ಮಹೇಶ್ವರಾಯ ನಮಃ । ವಸ್ತ್ರಂ ಸಮರ್ಪಯಾಮಿ ॥ಯಜ್ಞೋಪವೀತಂ ಸಹಜಂ ಬ್ರಹ್ಮಣಾ ನಿರ್ಮಿತಂ ಪುರಾ ।ಆಯುಷ್ಯಂ ಭವ ವರ್ಚಸ್ಯಂ ಉಪವೀತಂ ಗೃಹಾಣ ಭೋ ॥ಉಮಾ ಮಹೇಶ್ವರಾಯ ನಮಃ । ಯಜ್ಞೋಪವೀತಂ ಸಮರ್ಪಯಾಮಿ ॥ಶ್ರೀಕಂಠಂ ಚಂದನಂ ದಿವ್ಯಂ ಗಂಧಾಢ್ಯಂ ಸುಮನೋಹರಂ ।ವಿಲೇಪನಂ ಸುರಶ್ರೇಷ್ಟ ಮತ್ದತ್ತಂ ಪ್ರತಿ ಗೃಹ್ಯತಾಂ ॥ಉಮಾ ಮಹೇಶ್ವರಾಯ ನಮಃ । ಗಂಧಂ ಸಮರ್ಪಯಾಮಿ ॥ಅಕ್ಷದಾನ್ ಚಂದ್ರ ವರ್ಣಾಪಾನ್ ಶಾಲೇಯಾನ್ ಸದಿಲಾನ್ ಶುಭಾನ್ ।ಅಲಞ್ಕಾರಾರ್ಥಮಾನೀದಾನ್ ಧಾರಯಸ್ಯ ಮಹಾಪ್ರಭೋ ॥ಉಮಾ ಮಹೇಶ್ವರಾಯ ನಮಃ । ಅಕ್ಷದಾನ್ ಸಮರ್ಪಯಾಮಿ ॥ಮಾಲ್ಯಾತೀನಿ ಸುಗಂಧೀನಿ ಮಲದ್ಯಾತೀನಿ ವೈ ಪ್ರಭೋ ।ಮಯಾಹೃದಾನಿ ಪುಷ್ಪಾಣಿ ಪೂಜಾರ್ಥಂ ತವ ಶಞ್ಕರ ॥ಉಮಾ ಮಹೇಶ್ವರಾಯ ನಮಃ । ಪುಷ್ಪಮಾಲಾಂ ಸಮರ್ಪಯಾಮಿ ॥॥ ಅಂಗ ಪೂಜಾ ॥ಶಿವಾಯ ನಮಃ । ಪಾದೌ ಪೂಜಯಾಮಿ ।ಶರ್ವಾಯ ನಮಃ । ಕುಲ್ಪೌ ಪೂಜಯಾಮಿ ।ರುದ್ರಾಯ ನಮಃ । ಜಾನುನೀ ಪೂಜಯಾಮಿ ।ಈಶಾನಾಯ ನಮಃ । ಜಂಘೇ ಪೂಜಯಾಮಿ ।ಪರಮಾತ್ಮನೇ ನಮಃ । ಊರೂ ಪೂಜಯಾಮಿ ।ಹರಾಯ ನಮಃ । ಜಘನಂ ಪೂಜಯಾಮಿ ।ಈಶ್ವರಾಯ ನಮಃ । ಗುಹ್ಯಂ ಪೂಜಯಾಮಿ ।ಸ್ವರ್ಣ ರೇತಸೇ ನಮಃ । ಕಟಿಂ ಪೂಜಯಾಮಿ ।ಮಹೇಶ್ವರಾಯ ನಮಃ । ನಾಭಿಂ ಪೂಜಯಾಮಿ ।ಪರಮೇಶ್ವರಾಯ ನಮಃ । ಉದರಂ ಪೂಜಯಾಮಿ ।ಸ್ಫಟಿಕಾಭರಣಾಯ ನಮಃ । ವಕ್ಷಸ್ಥಲಂ ಪೂಜಯಾಮಿ ।ತ್ರಿಪುರಹಂತ್ರೇ ನಮಃ । ಭಾಹೂನ್ ಪೂಜಯಾಮಿ ।ಸರ್ವಾಸ್ತ್ರ ಧಾರಿಣೇ ನಮಃ । ಹಸ್ತಾನ್ ಪೂಜಯಾಮಿ ।ನೀಲಕಂಠಾಯ ನಮಃ । ಕಂಠಂ ಪೂಜಯಾಮಿ ।ವಾಚಸ್ಪತಯೇ ನಮಃ । ಮುಖಂ ಪೂಜಯಾಮಿ ।ತ್ರ್ಯಂಬಕಾಯ ನಮಃ । ನೇತ್ರಾಣಿ ಪೂಜಯಾಮಿ ।ಫಾಲ ಚಂದ್ರಾಯ ನಮಃ । ಲಲಾಟಂ ಪೂಜಯಾಮಿ ।ಗಂಗಾಧರಾಯ ನಮಃ । ಜಟಾಮಂಡಲಂ ಪೂಜಯಾಮಿ ।ಸದಾಶಿವಾಯ ನಮಃ । ಶಿರಃ ಪೂಜಯಾಮಿ ।ಸರ್ವೇಶ್ವರಾಯ ನಮಃ । ಸರ್ವಾಣ್ಯಂಗಾನಿ ಪೂಜಯಾಮಿ ।
ಶಿವ ಅಷ್ಟೋತ್ತರ
.ಓಂ ಶಿವಾಯ ನಮಃಓಂ ಮಹೇಶ್ವರಾಯ ನಮಃಓಂ ಶಂಭವೇ ನಮಃಓಂ ಪಿನಾಕಿನೇ ನಮಃಓಂ ಶಶಿಶೇಖರಾಯ ನಮಃಓಂ ವಾಮದೇವಾಯ ನಮಃಓಂ ವಿರೂಪಾಕ್ಷಾಯ ನಮಃಓಂ ಕಪರ್ದಿನೇ ನಮಃಓಂ ನೀಲಲೋಹಿತಾಯ ನಮಃಓಂ ಶಂಕರಾಯ ನಮಃಓಂ ಶೂಲಪಾಣಯೇ ನಮಃಓಂ ಖಟ್ವಾಂಗಿನೇ ನಮಃಓಂ ವಿಷ್ಣುವಲ್ಲಭಾಯ ನಮಃಓಂ ಶಿಪಿವಿಷ್ಟಾಯ ನಮಃಓಂ ಅಂಬಿಕಾನಾಥಾಯ ನಮಃಓಂ ಶ್ರೀಕಂಠಾಯ ನಮಃಓಂ ಭಕ್ತವತ್ಸಲಾಯ ನಮಃಓಂ ಭವಾಯ ನಮಃಓಂ ಶರ್ವಾಯ ನಮಃಓಂ ತ್ರಿಲೋಕೇಶಾಯ ನಮಃಓಂ ಶಿತಿಕಂಠಾಯ ನಮಃಓಂ ಶಿವಾಪ್ರಿಯಾಯ ನಮಃಓಂ ಉಗ್ರಾಯ ನಮಃಓಂ ಕಪಾಲಿನೇ ನಮಃಓಂ ಕಾಮಾರಯೇ ನಮಃಓಂ ಅಂಧಕಾಸುರ ಸೂದನಾಯ ನಮಃಓಂ ಗಂಗಾಧರಾಯ ನಮಃಓಂ ಲಲಾಟಾಕ್ಷಾಯ ನಮಃಓಂ ಕಾಲಕಾಲಾಯ ನಮಃಓಂ ಕೃಪಾನಿಧಯೇ ನಮಃಓಂ ಭೀಮಾಯ ನಮಃಓಂ ಪರಶುಹಸ್ತಾಯ ನಮಃಓಂ ಮೃಗಪಾಣಯೇ ನಮಃಓಂ ಜಟಾಧರಾಯ ನಮಃಓಂ ಕೈಲಾಸವಾಸಿನೇ ನಮಃಓಂ ಕವಚಿನೇ ನಮಃಓಂ ಕಠೋರಾಯ ನಮಃಓಂ ತ್ರಿಪುರಾಂತಕಾಯ ನಮಃಓಂ ವೃಷಾಂಕಾಯ ನಮಃಓಂ ವೃಷಭಾರೂಢಾಯ ನಮಃಓಂ ಭಸ್ಮೋದ್ಧೂಲಿತ ವಿಗ್ರಹಾಯ ನಮಃಓಂ ಸಾಮಪ್ರಿಯಾಯ ನಮಃಓಂ ಸ್ವರಮಯಾಯ ನಮಃಓಂ ತ್ರಯೀಮೂರ್ತಯೇ ನಮಃಓಂ ಅನೀಶ್ವರಾಯ ನಮಃಓಂ ಸರ್ವಜ್ಞಾಯ ನಮಃಓಂ ಪರಮಾತ್ಮನೇ ನಮಃಓಂ ಸೋಮಸೂರ್ಯಾಗ್ನಿಲೋಚನಾಯ ನಮಃಓಂ ಹವಿಷೇ ನಮಃಓಂ ಯಜ್ಞಮಯಾಯ ನಮಃಓಂ ಸೋಮಾಯ ನಮಃಓಂ ಪಂಚವಕ್ತ್ರಾಯ ನಮಃಓಂ ಸದಾಶಿವಾಯ ನಮಃಓಂ ವಿಶ್ವೇಶ್ವರಾಯ ನಮಃಓಂ ವೀರಭದ್ರಾಯ ನಮಃಓಂ ಗಣನಾಥಾಯ ನಮಃಓಂ ಪ್ರಜಾಪತಯೇ ನಮಃಓಂ ಹಿರಣ್ಯರೇತಸೇ ನಮಃಓಂ ದುರ್ಧರ್ಷಾಯ ನಮಃಓಂ ಗಿರೀಶಾಯ ನಮಃಓಂ ಗಿರಿಶಾಯ ನಮಃಓಂ ಅನಘಾಯ ನಮಃಓಂ ಭುಜಂಗಭೂಷಣಾಯ ನಮಃಓಂ ಭರ್ಗಾಯ ನಮಃಓಂ ಗಿರಿಧನ್ವನೇ ನಮಃಓಂ ಗಿರಿಪ್ರಿಯಾಯ ನಮಃಓಂ ಕೃತ್ತಿವಾಸಸೇ ನಮಃಓಂ ಪುರಾರಾತಯೇ ನಮಃಓಂ ಭಗವತೇ ನಮಃಓಂ ಪ್ರಮಥಾಧಿಪಾಯ ನಮಃಓಂ ಮೃತ್ಯುಂಜಯಾಯ ನಮಃಓಂ ಸೂಕ್ಷ್ಮತನವೇ ನಮಃಓಂ ಜಗದ್ವ್ಯಾಪಿನೇ ನಮಃಓಂ ಜಗದ್ಗುರವೇ ನಮಃಓಂ ವ್ಯೋಮಕೇಶಾಯ ನಮಃಓಂ ಮಹಾಸೇನಜನಕಾಯ ನಮಃಓಂ ಚಾರುವಿಕ್ರಮಾಯ ನಮಃಓಂ ರುದ್ರಾಯ ನಮಃಓಂ ಭೂತಪತಯೇ ನಮಃಓಂ ಸ್ಥಾಣವೇ ನಮಃಓಂ ಅಹಿರ್ಬುಧ್ನ್ಯಾಯ ನಮಃಓಂ ದಿಗಂಬರಾಯ ನಮಃಓಂ ಅಷ್ಟಮೂರ್ತಯೇ ನಮಃಓಂ ಅನೇಕಾತ್ಮನೇ ನಮಃಓಂ ಸಾತ್ವಿಕಾಯ ನಮಃಓಂ ಶುದ್ದವಿಗ್ರಹಾಯ ನಮಃಓಂ ಶಾಶ್ವತಾಯ ನಮಃಓಂ ಖಂಡಪರಶವೇ ನಮಃಓಂ ಅಜಾಯ ನಮಃಓಂ ಪಾಶವಿಮೋಚಕಾಯ ನಮಃಓಂ ಮೃಡಾಯ ನಮಃಓಂ ಪಶುಪತಯೇ ನಮಃಓಂ ದೇವಾಯ ನಮಃಓಂ ಮಹಾದೇವಾಯ ನಮಃಓಂ ಅವ್ಯಯಾಯ ನಮಃಓಂ ಹರಯೇ ನಮಃಓಂ ಭಗನೇತ್ರಭಿದೇ ನಮಃಓಂ ಅವ್ಯಕ್ತಾಯ ನಮಃಓಂ ದಕ್ಷಾಧ್ವರಹರಾಯ ನಮಃಓಂ ಹರಾಯ ನಮಃಓಂ ಪೂಷದಂತಭಿದೇ ನಮಃಓಂ ಅವ್ಯಗ್ರಾಯ ನಮಃಓಂ ಸಹಸ್ರಾಕ್ಷಾಯ ನಮಃಓಂ ಸಹಸ್ರಪದೇ ನಮಃಓಂ ಅಪವರ್ಗಪ್ರದಾಯ ನಮಃಓಂ ಅನಂತಾಯ ನಮಃಓಂ ತಾರಕಾಯ ನಮಃಓಂ ಪರಮೇಶ್ವರಾಯ ನಮಃಸಾಂಬ ಪರಮೇಶ್ವರಾಯ ನಮಃ ।
ನಾನಾವಿತ ಪರಿಮಳಪತ್ರಪುಷ್ಪಾಣಿ ಸಮರ್ಪಯಾಮಿ ॥ವನಸ್ಪತಿರಸೋದ್ಭೂತಃ ಗಂಧಾಢ್ಯಶ್ಚ ಮನೋಹರಃ ।ಆಗ್ರೇಯಃ ಸರ್ವದೇವಾನಾಂ ಧೂಪೋಯಂ ಪ್ರತಿಗೃಹ್ಯತಾಂ ॥ಉಮಾ ಮಹೇಶ್ವರಾಯ ನಮಃ । ಧೂಪಂ ಆಗ್ರಾಪಯಾಮಿ ॥ಸಾಜ್ಯಂ ತ್ರಿವರ್ತ್ತಿ ಸಮ್ಯುಕ್ತಂ ವಹ್ನಿನಾ ಯೋಜಿತಂ ಮಯಾ ।ದೀಪಂ ಗೃಹಾಣ ದೇವೇಶ ತ್ರೈಲೋಕ್ಯ ತಿಮಿರಾಪಹಂ ॥ಉಮಾ ಮಹೇಶ್ವರಾಯ ನಮಃ । ದೀಪಂ ದರ್ಶಯಾಮಿ ॥ನೈವೇದ್ಯಂ ಗೃಹ್ಯತಾಂ ದೇವ ಭಕ್ತಿಂ ಮೇ ಹ್ಯಚಲಾಂ ಕುರು ।ಶಿವೇಪ್ಸಿತಂ ವರಂ ದೇಹಿ ಪರತ್ರ ಚ ಪರಾಂ ಗತಿಂ ॥ಉಮಾ ಮಹೇಶ್ವರಾಯ ನಮಃ । ಮಹಾನೈವೇದ್ಯಂ ಸಮರ್ಪಯಾಮಿ ॥
ಓಂ ಭೂರ್ಭುವಸ್ಸುವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ದಿಯೋ ಯೋ ನಃ ಪ್ರಚೋದಯಾತ್ ।ಓಂ ದೇವ ಸವಿತಃ ಪ್ರಸೂವ ಸತ್ಯಂ ತ್ವರ್ಥೇನ ಪರಿಶಿಂಚಾಮಿ ।ಅಮೃತೋಪಸ್ತರಣಮಸಿ । ಓಂ ಪ್ರಾಣಯಸ್ವಾಹಾ । ಓಂ ಅಪಾನಾಯಸ್ವಾಹಾ । ಓಂ ವ್ಯಾನಾಯ ಸ್ವಾಹಾ ।ಓಂ ಉದಾನಾಯ ಸ್ವಾಹಾ । ಓಂ ಸಮಾನಾಯ ಸ್ವಾಹಾ ।ಓಂ ಬ್ರಹ್ಮಣೇ ಸ್ವಾಹಾ । ಬ್ರಹ್ಮಣಿ ಮ ಆತ್ಮಾ ಅಮೃತತ್ವಾಯ । ಅಮೃತಾಭಿತಾನಮಸಿ ॥ನೈವೇದ್ಯಾನಂತರಂ ಆಚಮನೀಯಂ ಸಮರ್ಪಯಾಮಿ ।ಪೂಗೀಫಲ ಸಮಾಯುಕ್ತಂ ನಾಗವಲ್ಲೀ ದಳೈರ್ ಯುತಂ ।ಕರ್ಪೂರ ಚೂರ್ಣ ಸಂಯುಕ್ತಂ ತಾಂಬೂಲಂ ಪ್ರತಿಗೃಹ್ಯತಾಂ ॥ಉಮಾ ಮಹೇಶ್ವರಾಯ ನಮಃ । ಕರ್ಪೂರ ತಾಂಬೂಲಂ ಸಮರ್ಪಯಾಮಿ ॥ಚಕ್ಷುರ್ತಂ ಸರ್ವಲೋಕಾನಾಂ ತಿಮಿರಸ್ಯ ನಿವಾರಣಂ ।ಆರ್ದಿಗ್ಯಂ ಕಲ್ಪಿತಂ ಭಕ್ತ್ಯಾ ಗೃಹಾಣ ಪರಮೇಶ್ವರ ॥ಉಮಾ ಮಹೇಶ್ವರಾಯ ನಮಃ । ಕರ್ಪೂರ ನೀರಾಂಜನಂ ಸಮರ್ಪಯಾಮಿ । ಆಚಮನೀಯಂ ಸಮರ್ಪಯಾಮಿ ॥ಯಾನಿಕಾನಿಚ ಪಾಪಾನಿ ಜನ್ಮಾಂತರ ಕೃತಾನಿ ಚ ।ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪತೇ ಪತೇ ॥ಉಮಾ ಮಹೇಶ್ವರಾಯ ನಮಃ । ಪ್ರದಕ್ಷಿಣಂ ಸಮರ್ಪಯಾಮಿ ॥ಪುಷ್ಪಾಂಜಲಿಂ ಪ್ರದಾಸ್ಯಾಮಿ ಗೃಹಾಣ ಕರುಣಾನಿದೇ ।ನೀಲಕಂಠ ವಿರೂಪಾಕ್ಷ ವಾಮಾರ್ದ ಗಿರಿಜ ಪ್ರಭೋ ॥ಉಮಾ ಮಹೇಶ್ವರಾಯ ನಮಃ । ಪುಷ್ಪಾಂಜಲಿಂ ಸಮರ್ಪಯಾಮಿ । ಮಂತ್ರಪುಷ್ಪಂ ಸ್ವರ್ಣಪುಷ್ಪಂ ಸಮರ್ಪಯಾಮಿ ॥ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರ ।ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತತಸ್ತು ತೇ ॥
ವಂದೇ ಶಂಭುಮುಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ ವಂದೇ ಪನ್ನಗಭೂಷಣಂ ಮೃಗಧರಂ ವಂದೇ ಪಶೂಣಾಂ ಪತಿಂ ।ವಂದೇ ಸೂರ್ಯ ಶಶಾಂಕವಹ್ನಿ ನಯನಂ ವಂದೇ ಮುಕುಂದ ಪ್ರಿಯಂ ವಂದೇ ಭಕ್ತ ಜನಾಶ್ರಯಂಚ ವರದಂ ವಂದೇ ಶಿವಂ ಶಂಕರಂ ॥ನಮಃಶಿವಾಭ್ಯಾಂ ನವ ಯೌವನಾಭ್ಯಾಂ ಪರಸ್ಪರಾಶ್ಲಿಷ್ಟ ವಪುರ್ ಧರಾಭ್ಯಾಂ ।ನಗೇಂದ್ರ ಕನ್ಯಾ ವೃಷ ಕೇತನಾಭ್ಯಾಂನಮೋ ನಮಃಶಂಕರ ಪಾರ್ವತೀಭ್ಯಾಂ ॥
॥ ಅರ್ಘ್ಯಂ ॥ಶುಕ್ಲಾಂಬರಧರಂ ವಿಶ್ಃಣುಂ ಶಶಿವರ್ಣಂ ಚತುರ್ಭುಜಂ ।ಪ್ರಸನ್ನ ವದನಂ ದ್ಯಾಯೇತ್ ಸರ್ವವಿಗ್ನೋಪಶಾಂತಯೇ ॥ಮಮೋಪಾತ್ತ ಸಮಸ್ತ ದುರಿತ ಕ್ಷಯದ್ವಾರ ಶ್ರೀ ಪರಮೇಶ್ವರಪ್ರೀತ್ಯರ್ತ್ತಂ ।ಮಯಾಚರಿತ ಶಿವರಾತ್ರಿ ವ್ರದಪೂಜಾಂತೇ ಕ್ಷೀರಾರ್ಘ್ಯ ಪ್ರದಾನಂ ಉಪಾಯದಾನಂಚ ಕರಿಷ್ಯೇ ॥ನಮೋ ವಿಶ್ವಸ್ವರೂಪಾಯ ವಿಶ್ವಸೃಷ್ಟ್ಯಾದಿ ಕಾರಕ ।ಗಂಗಾಧರ ನಮಸ್ತುಭ್ಯಂ ಗೃಹಾಣಾರ್ಘ್ಯಂ ಮಯಾರ್ಪಿತಂ ॥ಉಮಾ ಮಹೇಶ್ವರಾಯ ನಮಃ । ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ॥ನಮಃಶಿವಾಯ ಶಾಂತಾಯ ಸರ್ವಪಾಪಹರಾಯಚ ।ಶಿವರಾತ್ರೌ ಮಯಾ ದತ್ತಂ ಗೃಹಾಣಾರ್ಘ್ಯಂ ಪ್ರಸೀತ ಮೇ ॥ಉಮಾ ಮಹೇಶ್ವರಾಯ ನಮಃ । ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ॥ದುಃಖ ದಾರಿದ್ರ್ಯ ಪಾಪೈಶ್ಚ ದಗ್ತೋಹಂ ಪಾರ್ವತೀಪತೇ ।ಮಾಂ ತ್ವಂ ಪಾಹಿ ,ಅಹಾಭಾಹೋ ಗೃಹಣಾರ್ಘ್ಯಂ ನಮೋಸ್ತು ತೇ ॥ಉಮಾ ಮಹೇಶ್ವರಾಯ ನಮಃ । ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ॥ಶಿವಾಯ ಶಿವರೂಪಾಯ ಭಕ್ತಾನಾಂ ಶಿವದಾಯಕ ।ಇದಮರ್ಘ್ಯಂ ಪ್ರದಾಸ್ಯಾಮಿ ಪ್ರಸನ್ನೋ ಭವ ಸರ್ವತಾ ॥ಉಮಾ ಮಹೇಶ್ವರಾಯ ನಮಃ । ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ॥ಅಂಬಿಕಾಯೈ ನಮಸ್ತುಭ್ಯಂ ನಮಸ್ತೇ ದೇವಿ ಪಾರ್ವತಿ ।ಅಂಬಿಕೇ ವರದೇ ದೇವಿ ಗೃಹ್ಣೀದಾರ್ಘ್ಯಂ ಪ್ರಸೀದ ಮೇ ॥ಪಾರ್ವತ್ಯೈ ನಮಃ । ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ॥ಸುಬ್ರಃಮಣ್ಯ ಮಹಾಭಗ ಕಾರ್ತಿಕೇಯ ಸುರೇಶ್ವರ ।ಇದಮರ್ಘ್ಯಂ ಪ್ರದಾಸ್ಯಾಮಿ ಸುಪ್ರೀತೋ ವರದೋ ಭವ ॥ಸುಬ್ರಹ್ಮಣ್ಯಾಯ ನಮಃ । ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ॥ಚಂಡಿಕೇಶಾಯ ನಮಃ । ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ॥ಅನೇನ ಅರ್ಘ್ಯ ಪ್ರದಾನೇನ ಭಗವಾನ್ ಸರ್ವದೇವಾತ್ಮಕಃ ಸಪರಿವಾರ ಸಾಂಬ ಪರಮೇಶ್ವರಃ ಪ್ರೀಯತಾಂ ॥॥ ಉಪಾಯನ ದಾನಂ ॥ಸಾಂಬಶಿವ ಸ್ವರೂಪಸ್ಯ ಬ್ರಾಹ್ಮಣಸ್ಯ ಇತಮಾಸನಂ । ಅಮೀತೇ ಗಂಧಾಃ
ತಾಂಬೂಲ ಮಂತ್ರ
ಹಿರಣ್ಯಗರ್ಭ ಗರ್ಭಸ್ತಂ ಹೇಮಬೀಜಂ ವಿಭಾವಸೋಃ ।ಅನಂತಪುಣ್ಯ ಫಲತಂ ಅತಃ ಶಾಂತಿಂ ಪ್ರಯಚ್ಚ ಮೇ ॥ಇದಮುಪಾಯನಂ ಸದಕ್ಷಿಣಾಕಂ ಸತಾಂಬೂಲಂ ಸಾಂಬಶಿವಪ್ರೀತಿಂ ಕಾಮಮಾನಃ ತುಭ್ಯಮಹಂ ಸಂಪ್ರತತೇ ನ ಮಮ ॥ಓಂ ಸಮಸ್ತ ಲೋಕಾಃ ಸುಖಿನೋ ಭವಂತು ॥
। ಓಂ ತತ್ಸತ್ ।।
ಶಿವಾರ್ಪಣಮಸ್ತು ಶುಭಮಸ್ತು 🙏🚩🔱
2 weeks ago (edited) | [YT] | 1
View 0 replies
VasanthaaHarish 🙏
21 #ಮಂಗಳವಾರ ಮಾಡುವ #ಗಣಪತಿ ಪೂಜೆ :-
ಗಣಪತಿ ಪೂಜೆಗೆ ಜೋಡಿಸುವ ಅನುಕೂಲಗಳು:-
ಅರಿಶಿನ- ಕುಂಕುಮ -ಅಕ್ಷತೆ ಗಂಧ- ಅಗರಬತ್ತಿ- ಹೂವು ಕೆಂಪು ದಾಸವಾಳ ಶ್ರೇಷ್ಠ.
ಹೂವಿನ ಮಾಲೆ, ಪೂಜೆಗೆ ಬಿಡಿ ಹೂವು. ಆರತಿ ತಟ್ಟೆ ಎರಡು ಸೊಡಲಿಗೆ ತುಪ್ಪದ ಬತ್ತಿ ಹಾಕಬೇಕು. ಬಾಳೆ ಹಣ್ಣು ವೀಳ್ಯದೆಲೆ ಅಡಿಕೆ. ನೀರು,( ಎಕ್ಕದ ಹೂವು ಸಿಕ್ಕರೆ ಹಾರವನ್ನು ಹಾಕಬಹುದು ಅಥವಾ ಬಿಡಿ ಹೂವು ಏರಿಸಬಹುದು. 108 ಹೂವು ಸಿಕ್ಕರೆ ಅರ್ಚನೆಯ ಹೊತ್ತಿಗೆ ಗಣಪತಿ ಒಂದೊಂದು ನಾಮಕ್ಕೂ ಹಾಕಬಹುದು) ದೂರ್ವೆ ( ಗರಿಕೆ) ನೈವೇದ್ಯಕ್ಕೆ ಗಣಪ ಸಿಹಿತಿನಿಸು ಪ್ರಿಯ. ಪಂಚಕಜ್ಜಾಯ- ಮೋದಕ, ಯಾವುದಾದರೂ ಸಿಹಿ ಉಂಡೆ. ಸ್ವಲ್ಪ ನೆನೆಸಿದ ಇಡೀ ಕಡಲೆ ಕಲ್ಲು ಸಕ್ಕರೆ ದ್ರಾಕ್ಷಿ ಗೋಡಂಬಿ- ಖರ್ಜೂರ ಇವನ್ನೆಲ್ಲ ಪುಟ್ಟ ಬಟ್ಟಲಲ್ಲಿ ಇಡಿ.
( ಯಾವುದೇ ಒಂದು ಇದ್ದರೂ ಸಾಕು)
ಮನದಿಷ್ಟಾರ್ಥಕ್ಕಾಗಿ ಮಾಡುವ ಪೂಜೆ. 21 ಮಂಗಳವಾರ ಅಥವಾ ಅಮಾವಾಸ್ಯೆ ನಂತರ ಬರುವ ಮಂಗಳವಾರದಿಂದ 21 ದಿನ ಮಾಡಬಹುದು. ನಿತ್ಯ ಪೂಜೆಯ ದೇವರ ಕೋಣೆಯಲ್ಲಿ ಅಥವಾ ದೇವರನ್ನು ಇಡುವ ಜಾಗದಲ್ಲೇ ಸ್ವಲ್ಪ ಜಾಗ ಮಾಡಿ ಪೂಜೆಗೆ ಅನುಕೂಲತೆ ಮಾಡಿಕೊಳ್ಳಿ. ಗಣಪತಿ ಫೋಟೋ ( ಚಿಕ್ಕದಾದರೂ ಸಾಕು) ಒಂದು ಸ್ಥಳವನ್ನು ಶುಚಿ ಮಾಡಿ ರಂಗೋಲಿ ಬರೆದು ಮೇಲೆ ಮಣೆ ಪುಟ್ಟ ಟೇಬಲ್ ಇಟ್ಟು, ಗಣಪತಿ ಫೋಟೋ ಒರಗಿಸಿ, ಮುಂಭಾಗದಲ್ಲಿ ಪುಟ್ಟ ತಟ್ಟೆಗೆ ಅಕ್ಕಿ ಹಾಕಿ ಅಕ್ಕಿಯ ಮೇಲೆ ‘ಓಂ’ (ॐ) ಅಂತ ಕುಂಕುಮದಲ್ಲಿ ಬರೆದು ಅಕ್ಷತೆ ಕಾಳು ಹಾಕಿ ಇದರ ಮೇಲೆ ಗಣಪತಿ ವಿಗ್ರಹವನ್ನು ಕೂರಿಸಿ. ವಿಗ್ರಹದ ಬದಲು ಗೋಟಡಿಕೆ ಇಟ್ಟು ಗಣಪತಿ ಪೂಜೆ ಮಾಡಬಹುದು ಗಂಗೆ ಪೂಜೆ ಮಾಡಬೇಕು. ( ಕೆಲವರು ಅರಿಶಿನಕ್ಕೆ ಹಾಲು ಹಾಕಿ ಹೆಬ್ಬೆರಳು ಗಾತ್ರ ಗೋಪುರ ಮಾಡಿ ಗಣಪತಿ ಎಂದು ಇಡುತ್ತಾರೆ. ಆದರೆ ನಮ್ಮಲ್ಲಿ ಅರಿಶಿನದ ಗೋಪುರ ಮಂಗಳ ಗೌರಿ, ಗೌರಿ- ವರಮಹಾಲಕ್ಷ್ಮಿ, ಹಬ್ಬಗಳಲ್ಲಿ ಮಾತ್ರ ಅರಿಶಿನ ಗೌರಿ ಶ್ರೇಷ್ಠ ಎಂದು ಮಾಡುತ್ತಾರೆ) ಗಂಗೆ ಥಾಲಿ ಸುತ್ತ ಸುಣ್ಣದ ಒಂದು ಬೊಟ್ಟು ಎಳೆದು ಮೇಲೆ ಅರಿಶಿನ ಕುಂಕುಮ ಹಚ್ಚಿ. ಗಿಂಡಿ ಒಳಗೆ ಒಂದು ಕಾಯಿನ್ ಎರಡು ಅಡಿಕೆ ಚೂರು ಹಾಕಿ ಪೂಜೆಗೆ ಕೂರುವ ಮುನ್ನ ನೀರು ಹಾಕಿ ಅರಿಶಿಣ ಕುಂಕುಮ ಅಕ್ಷತೆ ಹಾಕಿ ಎರಡು ವೀಳ್ಯದೆಲೆ ಇಟ್ಟು ಮಧ್ಯದಲ್ಲಿ ಹೂವು ಇಡಬೇಕು. ಇದು ಗಂಗೆ ಪೂಜೆ ತಯಾರಿ.
ಪೂಜೆಗೆ ಕೂರುವುದು:- ದೇವರಿಗೆ ದೀಪ ಹಚ್ಚಿ ನಮಸ್ಕಾರ ಮಾಡಿ. ಸಂಕಲ್ಪ ಮಂತ್ರ ಬಂದರೆ ಹೇಳಿ, ಬರದಿದ್ದರೆ ನಿಮ್ಮ ಮನದ ಇಷ್ಟಾರ್ಥಗಳನ್ನು ಗಟ್ಟಿಯಾಗಿ ಹೇಳಿಕೊಂಡು ಪ್ರಾರ್ಥಿಸಿ ಪೂಜೆ ಆರಂಭ ಮಾಡಬೇಕು. ಮೊದಲು ಗಂಗೆ ಪೂಜೆ.
ಗಂಗೆ ಚ ಯಮುನೇ ಚೈವ ಗೋದಾವರಿ ಸರಸ್ವತಿ!
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು!!
ಎಂದು ಹೇಳಿ ಸಕ್ಕರೆ ನೈವೇದ್ಯ ಮಾಡಿ ಊದಿನ ಕಡ್ಡಿ ಹಚ್ಚಿ
ಅಕ್ಷತೆ ಹಾಕಿ ಕೈಮುಗಿದರೆ ಗಂಗೆ ಪೂಜೆ.
ಗಣಪತಿ ಪೂಜೆ:- “ವಕ್ರತುಂಡ ಮಹಾಕಾಯ; ಸೂರ್ಯಕೋಟಿ ಸಮಪ್ರಭ:
ನಿರ್ವಿಘ್ನಂ ಕುರು ಮೇ ದೇವ; ಸರ್ವ ಕಾರ್ಯೇಷು ಸರ್ವದಾ!!”
ಈ ಶ್ಲೋಕವನ್ನು ಜಪಿಸುವ ಮೂಲಕ ಗಣೇಶನನ್ನು ಸ್ಮರಿಸುವ ಶ್ರೇಷ್ಠ ಕ್ರಮ ಆಗಿದೆ. ಹೊಸ ಕಾರ್ಯ ಆರಂಭಿಸುವ ಮೊದಲು ಹೇಳಬೇಕು. ಏಕೆಂದರೆ ಈ ಸ್ತೋತ್ರಕ್ಕೆ ವಿಘ್ನಗಳನ್ನು ನಿವಾರಿಸಿ, ಯಶಸ್ಸನ್ನು ತಂದು ಕೊಡುವ ಶಕ್ತಿ ಇದೆ ಎಂಬ ನಂಬಿಕೆ.
ಗಣಪತಿ ವಿಗ್ರಹವಾದರೆ ಅದನ್ನು ಪುಟ್ಟ ಬಟ್ಟಲಲ್ಲಿ ಇಟ್ಟುಕೊಂಡು ಪಂಚಾಮೃತ ಅಭಿಷೇಕ ಮಾಡಿ, ಒರೆಸಿ. ಪಂಚಾಮೃತಕ್ಕೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಸಕ್ಕರೆ, ಬಾಳೆಹಣ್ಣು, ಗಂಧ ಇಟ್ಟು ಕೊಳ್ಳಿ. ಎಲ್ಲವನ್ನು ಸೇರಿಸಿ ಪುಟ್ಟ ಬಟ್ಟಲಲ್ಲಿ ಇಟ್ಟುಕೊಂಡರೆ ಸಾಕು.
ಮಹಾ ಗಣಪತಿಯೇ ನಮಃ ಕ್ಷೀರ ಸ್ನಾನಂ ಸಮರ್ಪಯಾಮಿ, ಒಂದು ಉದ್ಧರಣೆ ಪಂಚಾಮೃತ ಹಾಕಿ ನಂತರ ಕ್ಷೀರ ಸ್ನಾನ ನಂತರ ಶುದ್ಧೋದಕ ಸ್ನಾನಂ ಸಮರ್ಪ ಯಾಮಿ. ಇದೇ ರೀತಿ ಮೊಸರು -ತುಪ್ಪ -ಜೇನುತುಪ್ಪ- ಸಕ್ಕರೆ ಹಾಕುವಾಗ ಇದೇ ರೀತಿ ಹೇಳಿ ನಂತರ ಫಲ ಸ್ನಾನಂ ಸಮರ್ಪಯಾಮಿ ನಂತರ ಶುದ್ಧೋದಕ. ಪರಿಮಳ ಗಂಧ ಸ್ನಾನಂ ಸಮರ್ಪಯಾಮಿ ಒಂದು ಉದ್ಧರಣೆ ನೀರು ಹಾಕಿ ಶುದ್ಧೋದಕ ನೀರು ಹಾಕಿ ವಿಗ್ರಹವನ್ನು ಒರೆಸಿ. ( ಒಂದು ಹೂವನ್ನು ಪಂಚಾ ಮೃತದಲ್ಲಿ ಅದ್ದಿ ಪ್ರೋಕ್ಷಣೆ ಮಾಡಿದರು ಸಾಕು.) ಬೆಟ್ಟಡಿಕೆ ಅಥವಾ ಗೊಟಡಿಕೆ ಇಟ್ಟುಕೊಂಡರೆ ಹೀಗೆ ಮಾಡಬೇಕು.
ನಂತರ ಗಣಪತಿ ಫೋಟೋ ಕೆಂಪು ದಾಸವಾಳ ಅಥವಾ ಗುಲಾಬಿ ಏರಿಸಿ.
ವಿಗ್ರಹಕ್ಕೆ ವಸ್ತ್ರಂ ಸಮರ್ಪಯಾಮಿ ಕೆಂಪು ಹಚ್ಚಿದ ಗೆಜ್ಜೆ ವಸ್ತ್ರ ಏರಿಸಿ. ಶ್ರೀ ಮಹಾಗಣಪತಿಯೇ ನಮಃ ಯಜ್ಞ್ಯೊಪವೀತಂ( ಜನಿವಾರ) ಸಮರ್ಪಯಾಮಿ ಹೇಳಿ ಅಕ್ಷತೆ ಹಾಕಿ. ಗಂಧಂ ಸಮರ್ಪಯಾಮಿ ಹಣೆಗೆ ಹಚ್ಚಿ. ಆಮೇಲೆ ಅರಿಶಿನ ಕುಂಕುಮ ಅಕ್ಷತೆ ಸಮರ್ಪಯಾಮಿ ಅಂತ ಹೇಳುತ್ತಾ ಸ್ವಲ್ಪ ಹಾಕಿ. ಇದಾದ ಮೇಲೆ ಪುಷ್ಪಂ ಸಮರ್ಪಯಾಮಿ ಹೂ ಏರಿಸಿ. ಪುಷ್ಪ ಮಾಲಾಂ ಸಮರ್ಪಯಾಮಿ ಪುಷ್ಪಮಾಲೆ ಹಾಕಿ. 11 ಗರಿಕೆ ತೆಗೆದುಕೊಂಡು ಓಂ ಗಂ ಗಣಪತಯೇ ನಮಃ
ಎಂದು ಒಂದೊಂದೇ ಗರಿಕೆಯನ್ನು ಏರಿಸಿ. ಉಳಿದ ಗರಿಕೆಗಳನ್ನು ಗಣಪತಿಯ ಅಕ್ಕಪಕ್ಕ ಹೇಳಿ. ನಂತರ ಎರಡು ಊದಿನ ಕಡ್ಡಿ ಹಚ್ಚಿ ಗಂಟೆ ಬಾರಿಸುತ್ತಾ
ದೇವರ ಮುಂದೆ ಸುತ್ತಿಸಿ. “ ಧೂಪಂ ದಶಾಂಗಂ ಗುಗ್ಗುಲಂ ಕಪಿಲಾಘೃತ
ಸಂಯುಕ್ತಂ- ಧೂಪೋಯಂ ಪ್ರತಿಗೃಹ್ಯತಾಮ್ ಧೂಪ ಮಾಘ್ರಾಪಯಾಮಿ.”
ನಾಮ ಪೂಜೆ ಮಾಡಬೇಕು:-
ಓಂ ಸುಮುಕಾಯ ನಮಃ
ಓಂ ಏಕದಂತಾಯ ನಮಃ
ಓಂ ಕಪಿಲಾಯ ನಮಃ
ಓಂ ಗಜಕರ್ಣಕಾಯ ನಮಃ
ಓಂ ಲಂಬೋದರಾಯ ನಮಃ
ಓಂ ವಿಕಟಾಯ ನಮಃ
ಓಂ ವಿಘ್ನನ ರಾಜಾಯನಮಃ
ಓಂ ಗಣಾಧಿಪಾಯ ನಮಃ
ಓಂ ಧೂಮಕೇತವೆ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ಈಶ ಪುತ್ರಾಯ ನಮಃ
ಓಂ ಪಾರ್ವತಿ ನಂದನಾಯ ನಮಃ
ಓಂ ಬಪಾಲಚಂದ್ರಾಯ ನಮಃ
ಓಂ ಗಜಾನನಾಯ ನಮಃ
ಓಂ ಮೂಷಕ ವಾಹನಾಯನಮಃ
ಓಂ ಕುಮಾರ ಗುರುವೇ ನಮಃ
ಓಂ ಸರ್ವಸಿದ್ಧಿ ಪ್ರಾಯ ಕಾಯ ನಮಃ
ಓಂ ಶ್ರೀ ಮಹಾಗಣಪತಯೇ ನಮಃ
ಪ್ರತಿಯೊಂದು ನಾಮಕ್ಕೂ ಅಕ್ಷತೆ ಕಾಳು ಅಕ್ಷತೆ ಹಾಕಬೇಕು.(ನಂತರ ಸಮಯವಿದ್ದರೆ ಅಷ್ಟೋತ್ತರ ಹೇಳಿ- ಓದಿ.)
ನೈವೇದ್ಯ ಮಾಡಿ ಕರ್ಪೂರ ಹಚ್ಚಿ, ಹಾಡು ಹೇಳಿಕೊಂಡು ಆರತಿ ಮಾಡಿ.
ಆರತಿ ದೇವರಿಗೆ ಸಮರ್ಪಿಸಿ ನೀವು ತೆಗೆದುಕೊಂಡು,
ನಂತರ ಕೈಯಲ್ಲಿ ಅಕ್ಷತೆ ಹೂವು ಹಿಡಿದು
ಮಂತ್ರ ಪುಷ್ಪಂ ಸಮರ್ಪಯಾಮಿ.
ಆತ್ಮಪ್ರದಕ್ಷಿಣೆ ನಮಸ್ಕಾರಂ ಸಮರ್ಪಯೋಮಿ
ಸರ್ವೋಪಚಾರ ಪೂಜಾಂ ಸಮರ್ಪಯಾಮಿ
ಎಂದು ಗಣಪತಿಗೆ ಸಮರ್ಪಿಸಿ
ಪ್ರದಕ್ಷಿಣೆ ನಮಸ್ಕಾರ ಮಾಡಬೇಕು.
5 ಅಥವಾ 11 ಅಥವಾ 21 ಗಣಪತಿಗೆ ನಮಸ್ಕಾರ ಮಾಡಿ.
ಮತ್ತೆ ಅಕ್ಷತೆ ಹಿಡಿದು:
ಗಣೇಶಾಯ ನಮಃ ಸ್ತುಭ್ಯಂ ಸರ್ವಕಾಮ ಫಲಪ್ರದ
ವಾಂಛಿತಂ ದೇಹಿ ಮೇ ನಿತ್ಯಂ ಗೃಹಾಣಾರ್ಘ್ಯಂ ನಮೋಸ್ತುತೇ!!
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಗಣಾಧಿಪ
ಯತ್ಪೋಜಿತಂ ಮಯಾದೇವ ಪರಿಪೂರ್ಣಂ ತಥಸ್ತುತೇ!
ಅನಯಾ ಶೋಡಶೋಪಚಾರ ಪೂಜಾಯಾ ಭಗವಾನ್ ಸರ್ವಾತ್ಮಕ:
ಶ್ರೀ ಮಹಾಗಣಾಧಿಪತಿ ಸುಪ್ರಸನ್ನೋ ವರದೋ ಭವಂತು
ಎಂದು ಹೇಳಿ ಹೂವು ಅಕ್ಷತ ತೆಗೆದುಕೊಂಡು ನೀರು ಹಾಕಿ ಬಿಡಬೇಕು.
ಕಾಯೇನ ವಾಚಾ ಮನಸೇಂದ್ರಿಯ್ಯೆರ್ವಾ
ಬುಧ್ಯಾತ್ಮನಾ ಪ್ರಕೃತೇ ಸ್ವಭಾವಾತ್!
ಕರೋಮಿ ಯದ್ಯತ್ ಸಕಲಂ ಪರಸ್ಮೈ
ನಾರಾಯಣಯೇತಿ ಸಮರ್ಪಯಾಮಿ!!
ಓಂ ತತ್ಸತ್ ಶ್ರೀ ಕೃಷ್ಣಾರ್ಪಣ ಮಸ್ತು!!
ಓಂ ಶಾಂತಿ ಶಾಂತಿ ಶಾಂತಿಃ
ಎಂದು ಕೈ ಮುಗಿಯಬೇಕು.
ನಂತರ ತೀರ್ಥ ಪ್ರಸಾದ ತೆಗೆದುಕೊಳ್ಳಬೇಕು.
ಅಮಾವಾಸ್ಯೆ ಕಳೆದ ಮಂಗಳವಾರದಿಂದ ನೀವು 21 ದಿನ ಪೂಜೆ ಮಾಡುವುದಾದರೆ ಜೋಡಿಸಿಟ್ಟುಕೊಂಡ ಪೂಜೆಗೆ ಇಟ್ಟುಕೊಂಡ ಗಣಪತಿ ಎಲ್ಲವೂ ಹಾಗೆ ಇರಲಿ 21ನೇ ದಿನ ಗಣಪತಿ ಬಲಭಾಗ ಸ್ವಲ್ಪ ಕದಲಿಸಿ.
21 ಮಂಗಳವಾರ ಮಾಡುವುದಾದರೆ ಪ್ರತಿ ಮಂಗಳವಾರ ಜೋಡಿಸಿಕೊಳ್ಳಿ. ಹಾಗೆ ಸಾಯಂಕಾಲ ದೀಪ ಹಚ್ಚಿ ಗಣಪತಿ ಸ್ತೋತ್ರ ಹೇಳಿ ಸಕ್ಕರೆ ಇಟ್ಟು ನಮಸ್ಕರಿಸಿ.
ಗಣಪತಿ ಪೂಜೆ ಸಂಪನ್ನವಾಗುತ್ತದೆ.
#ಗಣಪತಿಪೂಜೆ
2 weeks ago | [YT] | 6
View 0 replies
VasanthaaHarish 🙏
🙏#ಭೀಷ್ಮ ಅಷ್ಟಮಿ : #ಭೀಷ್ಮ #ಪಿತಾಮಹ ನೀಡಿದ ಪ್ರಮುಖವಾದ ಒಂಬತ್ತು ನೀತಿಬೋಧೆಗಳು 🌹🙏
ಸಾವಿರ ಹಸುಗಳಿದ್ದರೂ ಅವುಗಳ ನಡುವೆ ಕರು ತನ್ನ ತಾಯಿಯನ್ನು ಗುರುತಿಸುವಂತೆ ಅವರವರ ಕರ್ಮ ಅವರನ್ನು ಬೆಂಬಿಡದೆ ಹಿಡಿಯುತ್ತದೆ; ಬಟ್ಟೆ ಒಗೆದರೆ ಕೊಳೆ ಹೋಗುವಂತೆ, ಸತ್ಕರ್ಮಗಳಿಂದ ಪಾಪ ತೊಳೆದು ಇಷ್ಟಾರ್ಥಗಳು ಸಿದ್ಧಿಸುತ್ತವೆ.
1. ನಾವೆಲ್ಲರೂ ಎಲ್ಲಿಂದ ಬಂದೆವೋ ಅಲ್ಲಿಗೆ ಹಿಂತಿರುಗಿ ಹೋಗಬೇಕು. ಪ್ರತಿಯೊಬ್ಬರೂ ಅವರವರ ಕರ್ಮದ ಫಲವನ್ನು ಅನುಭವಿಸಬೇಕು. ಮಹಾಸಾಗರದಲ್ಲಿ ಎರಡು ಕಡ್ಡಿಗಳು ಬಂದು ಸೇರುವ ಹಾಗೆ; ನಾವು ಎಲ್ಲಿಂದಲೋ ಬಂದು ಈ ಲೋಕದಲ್ಲಿ ಸೇರುತ್ತೇವೆ, ಮತ್ತೆ ಬೇರ್ಪಟ್ಟು ಎಲ್ಲಿಗೋ ಹೋಗಿಬಿಡುತ್ತೇವೆ. ಹೀಗೆ ನಮ್ಮ ಬಂಧುಬಾಂಧವರ ವಿಯೋಗವು ಖಂಡಿತ ವಾಗಿರುವುದರಿಂದ ಸಂಬಂಧಗಳಿಗೆ ಅಂಟಿಕೊಳ್ಳಬಾರದು.
2. ಸುಖವಾದ ಮೇಲೆ ದುಃಖವೂ, ದುಃಖವಾದ ಮೇಲೆ ಸುಖವೂ ಚಕ್ರದಂತೆ ಸುತ್ತುತ್ತಿರುತ್ತವೆ. ಇಷ್ಟುದಿನವೂ ಸುಖವಿತ್ತು; ಈಗ ದುಃಖ ಬಂದಿದೆ, ಮುಂದೆ ಮತ್ತೆ ಸುಖ ಬರುತ್ತದೆ. ದುಃಖವೂ ನಿತ್ಯವಲ್ಲ, ಸುಖವೂ ನಿತ್ಯವಲ್ಲ.
3. ಸಂತೋಷಕ್ಕೆ ಸ್ನೇಹಿತರಾಗಲಿ, ದುಃಖಕ್ಕೆ ಶತ್ರುಗಳಾಗಲಿ, ಪ್ರಯೋಜನಗಳಿಗೆ ಬುದ್ಧಿಯಾಗಲಿ, ಸುಖಕ್ಕೆ ಹಣವಾಗಲಿ, ಹಣಕ್ಕೆ ಬುದ್ಧಿಯಾಗಲಿ ಕಾರಣವೆಂದೂ ಹೇಳುವಹಾಗಿಲ್ಲ. ಏಕೆಂದರೆ, ಜಾಣನಾಗಲಿ ದಡ್ಡನಾಗಲಿ, ಶೂರನಾಗಲಿ ಭೀರುವಾಗಲಿ,
ಮಂಕನಾಗಲಿ ಕವಿಯಾಗಲಿ, ಬಲಿಷ್ಠನಾಗಲಿ ಕೈಲಾಗದವನಾಗಲಿ, ಸುಖ ಬರುವವರಿಗೆ ಬಂದೇಬರುತ್ತದೆ.
4. ಪರಮ ಮೂಢನಿಗೆ, ಕಂಬಳಿ ಕವಚಿಕೊಂಡರೆ ಕಣ್ಣು ಕಾಣಿಸದಂತೆ, ಯಾವ ದುಃಖವೂ ಇಲ್ಲ; ಸುಖದುಃಖಗಳನ್ನು ಮೀರಿದ ಜ್ಞಾನಿಗಳಿಗೂ ದುಃಖವಿಲ್ಲ; ಜಂಜಡವೆಲ್ಲ ಇವೆರಡರ ನಡುವೆ ಇರುವವರಿಗೆ ಮಾತ್ರ.
5. ಸುಖವೋ ದುಃಖವೋ, ಇಷ್ಟವೋ ಅನಿಷ್ಟವೋ, ಬಂದಬಂದದ್ದನ್ನು ಎದೆಗುಂದದೆ ಅನುಭವಿಸಬೇಕು. ಆಮೆಯು ತನ್ನ ಅಂಗಗಳನ್ನೆಲ್ಲ ಒಳಗೆ ಎಳೆದುಕೊಳ್ಳುವಂತೆ ಕಾಮಕ್ರೋಧಗಳನ್ನು ಒಳಕ್ಕೆ ಅಡಗಿಸಿಕೊಂಡು ಶಾಂತನಾದರೆ ಆತ್ಮ ಸಂಪತ್ತು ದೊರೆಯುತ್ತದೆ, ಬೆಳಕು ಕಾಣುತ್ತದೆ. ಅದಕ್ಕೆ ಆಶೆಯನ್ನು ಬಿಡಬೇಕು; ಅದು ಮಂದಬುದ್ಧಿಗಳಿಗೆ ಸಾಧ್ಯವಿಲ್ಲ; ಆಶೆ ಎಂಬುದು ಮುಪ್ಪಿನಲ್ಲಿಯೂ ಮುದಿಯಾಗುವುದಿಲ್ಲ; ಬಂದರೆ ವಾಸಿಯಾಗದೆ ಪ್ರಾಣವನ್ನು ತೆಗೆಯುವ ರೋಗದಂತೆ, ಅದು ಕೊನೆಯವರೆಗೂ ಹೋಗುವುದಿಲ್ಲ.
6. ಒಳ್ಳೆಯದೆಂದು ತಿಳಿದಿರುವುದನ್ನು ಕೂಡಲೇ ಮಾಡಿಬಿಡಬೇಕು; ಇಲ್ಲದಿದ್ದರೆ ಮೃತ್ಯು ಅಡ್ಡ ಬಂದೀತು. ನಾಳೆ ಮಾಡುವುದನ್ನು ಇಂದೇ ಮಾಡಬೇಕು; ಮಧ್ಯಾಹ್ನ ಮಾಡುವುದನ್ನು ಬೆಳಗ್ಗೆಯೇ ಮಾಡಬೇಕು. ಇದನ್ನು ಮಾಡಿದನೇ ಬಿಟ್ಟನೇ ಎಂದು ಮೃತ್ಯುವು ನೋಡುವುದಿಲ್ಲ. ಅದಕ್ಕೆ ಅದು ಬೇಕಾಗಿಯೂ ಇರುವುದಿಲ್ಲ. ಆದ್ದರಿಂದ ಸದಾ ಧರ್ಮಶೀಲರಾಗಿರಬೇಕು.
7. ತ್ಯಾಗವಿಲ್ಲದೆ ಇಹಸುಖವಿಲ್ಲ, ತ್ಯಾಗವಿಲ್ಲದೆ ಪರವಿಲ್ಲ; ತ್ಯಾಗವಿಲ್ಲದೆ ನೆಮ್ಮದಿಯ ನಿದ್ರೆಯೂ ಬರುವುದಿಲ್ಲ; ಎಲ್ಲವನ್ನೂ ತ್ಯಜಿಸಿದವನಿಗೆ ಮಾತ್ರ ಸೌಖ್ಯ! ಭಾಗ್ಯವಂತನಿಗೆ ಮೃತ್ಯುವಿನ ಕೈಗೆ ಸಿಕ್ಕಿದವನ ಹಾಗೆ ಸದಾ ಕಳವಳವಿದ್ದೇ ಇರುತ್ತದೆ. ಹಣ ಕೈಗೆ ಸೇರಿತೆಂದರೆ ಕ್ರೋಧ ಲೋಭಗಳು ಅವನನ್ನು ಮೆಟ್ಟಿಕೊಳ್ಳ್ಳುತ್ತವೆ; ಬುದ್ಧಿ ಕೆಟ್ಟುಹೋಗುತ್ತದೆ; ಅಡ್ಡನೋಟ, ಸಿಡುಕುಮೋರೆ, ಹುಬ್ಬುಗಂಟು, ಕಚ್ಚುತುಟಿ, ಕಟು ಭಾಷಣಗಳು ಬರುತ್ತವೆ; ತಾನೇ ರೂಪವಂತ, ಧನವಂತ, ಕುಲವಂತ, ಸಿದ್ಧಪುರುಷ, ತಾನು ಮನುಷ್ಯಮಾತ್ರದವನಲ್ಲ ಎಂಬ ಮದವೇರುತ್ತದೆ. ವಿಷಯಸುಖಗಳಲ್ಲಿ ಹಣವೆಲ್ಲ ವೆಚ್ಚವಾಗಿ ಹೋದರೆ, ಮತ್ತೊಬ್ಬರ ಸ್ವತ್ತಿಗೆ ಕೈಹಾಕುತ್ತಾನೆ; ಶಿಕ್ಷೆಗೆ ಗುರಿಯಾಗುತ್ತಾನೆ.
8. ಒಂದು ವಿಧದಲ್ಲಿ ನೋಡಿದರೆ ಏನೂ ಇಲ್ಲದಿರುವುದು ರಾಜ್ಯ ಸಂಪತ್ತಿಗಿಂತ ಮೇಲು. ಈ ಸುಖದುಃಖಗಳನ್ನೂ ಗಮನಿಸುತ್ತ, ನಿತ್ಯಾನಿತ್ಯವಿಚಾರ ಮಾಡಬೇಕು. ಸುಖ ಬಂದರೆ ಹಿಗ್ಗಬಾರದು; ದುಃಖ ಬಂದರೆ ಕುಗ್ಗಬಾರದು.
9. ಕರ್ಮವು ಮನುಷ್ಯನನ್ನು ಅವನ ನೆರಳಿನಂತೆ ಎಡೆಬಿಡದೆ ಅನುಸರಿಸುತ್ತ, ಎದ್ದರೆ ಏಳುತ್ತ, ಕೂತರೆ ಕೂರುತ್ತ, ಓಡಿದರೆ ಓಡುತ್ತ, ಮಲಗಿದರೆ ಮಲಗುತ್ತ ಇರುತ್ತದೆ. ಅದರ ಕಾಲ ಬಂದಾಗ, ಯಾರ ಪ್ರೇರಣೆಯೂ ಇಲ್ಲದೆ, ಮರಗಳು ಹೂವು ಹಣ್ಣುಗಳನ್ನು ಬಿಡುವಂತೆ ಫಲ ಕೊಡುತ್ತದೆ.
||ಶ್ರೀಕೃಷ್ಣಾರ್ಪಣಮಸ್ತು||
(ಆಕರ: ವಚನ ಭಾರತ)
3 weeks ago | [YT] | 3
View 0 replies
Load more