VasanthaaHarish 🙏

Namaste 🙏 my hobbies 🙏 Jai Kashi 🙏 Bharatêya Sanathani Hindu. 🙏Spiritual seeker.🙏 Music 🎵 ,🙏 love football updates,🙏 Traveling,tips 🙏Exploring, healthy cooking ideas 🙏A bit of photography 🙏 positive #nature love 🙏

namaste friends 🙏 Don't forget to like, share, and subscribe for more spiritual and nature-filled videos!🙏🚩

"I'm beyond thankful for every single person that has Subscribed, Liked, Commented, and Shared! You are the reason this channel is what it is".❤️🙏


VasanthaaHarish 🙏

#ವಿಶ್ವ#ಮಹಿಳಾ#ದಿನ#ಶುಭಾಶಯಗಳು🙏❤️
#ಹಾಗೆ ನೋಡಿದರೆ #ಪ್ರತಿದಿನವೂ #ಮಹಿಳಾ ದಿನವೇ. ಮಹಿಳಾ ದಿನವನ್ನು #ಒಂದೇ ದಿನಕ್ಕೆ ಸೀಮಿತಗೊಳಿಸಲು ಖಂಡಿತಾ ಸಾಧ್ಯವಿಲ್ಲ. ಯಾಕೆಂದರೆ, #ಮನೆ, #ಕುಟುಂಬ, #ಕಚೇರಿ, #ಮಕ್ಕಳು, #ಕೆಲಸ ಹೀಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ #ಹೆಣ್ಣಿನ ಶಕ್ತಿಗೆ ಅದರದ್ದೇ ಆದ ಮಹತ್ವವಿದೆ. ಇದೇ ಕಾರಣಕ್ಕೆ ಹೆಣ್ಣಿಗೆ ಒಂದು ದಿನ ಮೀಸಲಿಟ್ಟು ಆಕೆಯ ಶ್ರಮ, ನಿಸ್ವಾರ್ಥ ಕೆಲಸವನ್ನು #ಗೌರವಿಸಲಾಗುತ್ತದೆ. ಇದು #ಪ್ರತಿಯೊಬ್ಬರ ಬದುಕಿನಲ್ಲೂ ಪ್ರಮುಖ ಪಾತ್ರ ವಹಿಸುವ ಹೆಣ್ಣಿಗೆ ಧನ್ಯವಾದ ಹೇಳಲು ಇರುವ ಅವಕಾಶವೂ ಹೌದು. ಇದೇ ಕಾರಣಕ್ಕೆ ನಮ್ಮ #ನಿಮ್ಮೆಲ್ಲದರ ಬದುಕಿನಲ್ಲಿ ಅಪೂರ್ವ ಪಾತ್ರ ವಹಿಸುತ್ತಿರುವ #ಹೆಣ್ಣಿಗೆ ಧನ್ಯವಾದ, 🙏

#ಹೆತ್ತು ಹೊತ್ತು ಸಾಕಿ ಸಲಹುವವಳು ಮಹಿಳೆ. ಅಕ್ಕ, ತಂಗಿ, ಪುತ್ರಿ, ಪತ್ನಿಯಾಗಿ ಜೀವನ ತುಂಬುವವಳೂ ಅವಳೇ. ಇಂತಹ ಮಹಿಳೆಗೆ ಜಗತ್ತಿನಲ್ಲಿ ಅಪೂರ್ವವಾದ ಸ್ಥಾನವಿದೆ. ಇದನ್ನು ನೆನೆಸಿಕೊಡುವಂತೆ ಇಂದು #ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ. ಎಲ್ಲ ಮಹಿಳೆಯರಿಗೂ ವಿಶ್ವ ಮಹಿಳಾ ದಿನದ ಶುಭಾಶಯಗಳು.

#ಹೆಣ್ಣು ಸಂಸ್ಕೃತಿಯ ಸಾಕ್ಷಾತ್ಕಾರದ ಕಣ್ಣು....

#ಮಹಿಳೆ ಎಂಬ ಪದಗಳಲ್ಲಿ #ಮಹಿ ಮತ್ತು #ಇಳೆ ಎಂಬ ಸಂಸ್ಕೃತದ ಎರಡೂ ಪದಗಳಿಗೆ
ಅರ್ಥ ‘#ಭೂಮಿ’ ಎಂಬುದು ವಿಶೇಷ. ಇದರ
ಅಂತರಾರ್ಥ ಭೂಮಿಯಂತಹ ಸಹನೆ, ಭೂಮಿಯಂತಹ ಹಿರಿದಾದ ಎಲ್ಲರನ್ನೂ ಆದರಿಸುವ ಮತ್ತು ತಪ್ಪೆಸಗಿದವರನ್ನೂ ಕ್ಷಮಿಸುವ ಮನೋಧರ್ಮ. ಈ ತೆರನ ಹಲವು ಗುಣಗಳನ್ನು ನಾವು ಗ್ರಹಿಸಬೇಕು.
ಶ್ರೇಷ್ಠತೆ ಹಾಗೂ ಸಂಪೂರ್ಣತೆ, ಕ್ಷಮಾಶೀಲತೆ ಈ ಗುಣವು ನಮ್ಮ ನಾಡಿನ ಸ್ತ್ರೀಯರ ಅಂತಃಸತ್ವದ ಗುಣ.

#ಆಕೆಯ ಗೌರವವನ್ನು ಇಮ್ಮಡಿಗೊಳಿಸಲೆಂದೇ ನಮ್ಮ ಋಷಿಗಳು ‘ಮಾತೃವತ್ಪರದಾರೇಷು..’ ಆಕೆಯನ್ನು ‘ತಾಯಿ’ಯಂತೆ ಕಂಡು ಆದರಿಸಿ ಎಂದು ಆದೇಶಿಸಿದರು.

#ಪರಮ ಗೌರವಾಸ್ಪದವಾದ ಹೆಣ್ಣಿನ ಸ್ವರೂಪ ಎಂದರೆ
#ಪತ್ನಿ’. ಈ ಶಬ್ದದ ಮೂಲ ಅರ್ಥ ಎಂದರೆ #ಪತಿಯ ಧಾರ್ಮಿಕ ಕಾರ್ಯಗಳಲ್ಲಿ
ಭಾಗವಹಿಸುವವಳು. ಜೀವನಧರ್ಮದ ಪ್ರೇರಣೆ ಮತ್ತು ಒತ್ತಾಸೆ ನೀಡುವವಳು. ಹಾಗೆಂದೇ ಪತ್ನಿಯನ್ನು
‘ಸಹಧರ್ಮಿಣಿ’ ಎಂದು ಕರೆದರು ನಮ್ಮ ಋಷಿಗಳು.

ಮನುವಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಒಬ್ಬ ಆಚಾರ್ಯ ಅಥವಾ ವೇದಪಂಡಿತ ಘನತೆಯಲ್ಲಿ ಹತ್ತು ಉಪಾಧ್ಯಾಯರನ್ನು (ಅಂದರೆ ಆಚಾರ್ಯರನ್ನು)
ಮೀರಿಸುತ್ತಾನೆ . #ತಂದೆಯು ಆ ತೆರನ ನೂರು ಆಚಾರ್ಯರಿಗಿಂತ ಮಿಗಿಲು. ಆದರೆ
ಒಬ್ಬ ಮಾತೆಯು ಆ ರೀತಿಯ ಸಹಸ್ರ ತಂದೆಯರನ್ನೂ ಮೀರಿಸುವವಳು’
ಎನ್ನುತ್ತಾನೆ.
#ಈ ಹೆಣ್ಣು ಖಂಡಿತಾ ಸಾಮಾನ್ಯಳಲ್ಲ. ಆಕೆಯು ಕೌಟುಂಬಿಕತೆ ಹಾಗೂ ಆಧ್ಯಾತ್ಮಿಕತೆ
ಇವೆರಡರ ಅನುರೂಪ ಸಾಮರಸ್ಯದ ಸಂಕೇತ. ಇವೆರಡು ಆದರ್ಶಗಳು ನಿತ್ಯ ನೂತನ
ಮಾತ್ರವಲ್ಲ ಚಿರಂತನ ಸಹ.

#ಸ್ತ್ರೀ ಹೇಗಿರಬೇಕೆನ್ನುವುದು ಮಾತ್ರವಲ್ಲ,
#ಪುರುಷರು ಹೇಗಿರಬೇಕು ಎನ್ನುವುದನ್ನೂ
#ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ.
ಓದಿ, ಅಳವಡಿಸಿಕೊಂಡರೆ, ಆಗ ಬದುಕು ಸರಾಗ

#ಕಾರ್ಯೇಷು ಯೋಗಿ: ಕರಣೇಷು
ದಕ್ಷ: ರುಪೇಚ ಕೃಷ್ಣ: ಕ್ಷಮಯಾತು
ರಾಮಃ: ಭೋಜ್ಯೇಷು ತೃಪ್ತಃ:
ಸುಖ ದುಃಖ ಮಿತ್ರಂ.

*1. #ಕಾರ್ಯೇಷು ಯೋಗಿ:*
ಕೆಲಸ ಮಾಡುವುದರಲ್ಲಿ ಒಬ್ಬ ಯೋಗಿಯಂತೆ ಪ್ರತಿಫಲವನ್ನಪೇಕ್ಷಿಸದೆ ಮಾಡಬೇಕು

*2.#ಕರಣೇಷು ದಕ್ಷ:*
ಕುಟುಂಬವನ್ನು ನಡೆಸುವುದರಲ್ಲಿ, ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ, ದಕ್ಷತೆಯಿಂದಲೂ, ಸಂಯಮದಿಂದಲೂ ವ್ಯವಹರಿಸಬೇಕು, ಸಮರ್ಥನಾಗಿರಬೇಕು.

*3. #ರುಪೇಚ ಕೃಷ್ಣ:*
ರೂಪದಲ್ಲಿ ಕೃಷ್ಣನಂತೆ ಇರಬೇಕು, ಅಂದ್ರೆ ಎಂದಿಗೂ ಉತ್ಸಾಹದಿಂದಲೂ, ಸಂತೋಷದಿಂದಲೂ ಇರಬೇಕು.

*4. #ಕ್ಷಮಯಾತು ರಾಮಃ*
ಸಂಯಮದಲ್ಲಿ ರಾಮನಂತೆಯೂ, ಏಕಪತ್ನಿವ್ರತಸ್ತನಾಗಿ, ಮರ್ಯಾದಾ ಪುರುಷೋತ್ತಮನಾಗಿ, ರಾಮನಂತೆ ಕ್ಷಮಿಸುವ ಗುಣ ಹೊಂದಿರುವವನು ಆಗಿರಬೇಕು.

*5. #ಭೋಜ್ಯೇಷು ತೃಪ್ತಃ:*
ಪತ್ನಿ/ ತಾಯಿ ಬಡಿಸಿದ ಊಟವನ್ನು ಸಂತೃಪ್ತಿಯಿಂದ (ಕೊಂಕು ನುಡಿಯದೆ)
ಉಣ್ಣುವವನಾಗಿರಬೇಕು.

*6. #ಸುಖ ದುಃಖ ಮಿತ್ರಂ*
ಪತ್ನಿಯ ಎಲ್ಲಾ ಸುಖ ದುಃಖಗಳಲ್ಲಿ, ಕುಟುಂಬದ ನೋವು ನಲಿವುಗಳಲ್ಲಿ, ಮಿತ್ರನಂತೆ ಜೊತೆಯಾಗಿರಬೇಕು. ಎಲ್ಲಾ ಸರಿ-ತಪ್ಪುಗಳನ್ನು ಹಂಚಿಕೊಳ್ಳುವಂತವನಾಗಿರ ಬೇಕು.

ಈ ಎಲ್ಲಾ ಗುಣಗಳುಳ್ಳವನು
ಆದರ್ಶ ಪುರುಷನಾಗುತ್ತಾನೆ
ಸುಖ ಸಂಸಾರದ ಸಂಗಾತಿಯಾಗುತ್ತಾನೆ.

"#ಕಾರ್ಯೇಷು ದಾಸೀ ಕರಣೇಷು ಮಂತ್ರೀ ರೂಪೇಷು ಲಕ್ಷ್ಮೀ ಕ್ಷಮಯಾ ಧರಿತ್ರೀ|
ಭೋಜ್ಯೇಷು ಮಾತಾ ಶಯನೇಷು ವೇಶ್ಯಾ ಷಟ್ಕರ್ಮ ಯುಕ್ತಾ ಕುಲಧರ್ಮಪತ್ನೀ||".

*:#ತಾತ್ಪರ್ಯ:*

ಪತ್ನಿ ಆದವಳು ಹೇಗಿರಬೇಕು ಎಂಬುದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ.
ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ದಾಸಿಯಂತೆ;
ಆಲೋಚನೆಗಳನ್ನು ಹೇಳುವುದರಲ್ಲಿ ಮಂತ್ರಿಯಂತೆ;
ರೂಪಿನಲ್ಲಿ ಲಕ್ಷ್ಮಿಯಂತೆ;
ಸಹನೆಯಲ್ಲಿ ಭೂದೇವಿಯಂತೆ;
ಊಟ ಬಡಿಸುವದರಲ್ಲಿ ತಾಯಿಯಂತೆ;
ಮಲಗುವಾಗ ವೇಶ್ಯೆಯಂತೆ ಇರಬೇಕು..
ಈ ಎಲ್ಲಾ ಗುಣವುಳ್ಳವಳು ಆದರ್ಶ ಸ್ತ್ರೀ ಯಾಗುತ್ತಾಳೆ.
ಸುಖಸಂಸಾರದ ಸಂಗತಿಯಾಗುತ್ತಾಳೆ.

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
ಧಮೋ೯ ರಕ್ಷತಿ ರಕ್ಷಿತ:*
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

ಈ ಸಂಸ್ಕೃತಿ ಹೆಣ್ಣನ್ನು ಸಂಸ್ಕೃತಿಯ ಸಾಕ್ಷಾತ್ಕಾರದ ಕಣ್ಣು ಎಂದದ್ದು ಯಥಾರ್ಥ.❤️🙏

1 week ago (edited) | [YT] | 2

VasanthaaHarish 🙏

#ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮಹಾಬಲಶಾಲಿಯಾದ #ಮಹಾಬಲೇಶ್ವರ ನೆಲೆಸಿರುವ ಸ್ಥಳವೇ #ಗೋಕರ್ಣ.

#ರಾವಣನ ತಾಯಿಯು ಮಹಾ ಶಿವಭಕ್ತೆಯಾಗಿದ್ದು ಪ್ರತಿ ಕ್ಷಣವೂ ಶಿವನ ಧ್ಯಾನದಲ್ಲೇ ತೊಡಗಿರುತ್ತಾಳೆ,
ಇದನ್ನು ಕಂಡ #ರಾವಣನಿಗೆ ಶಿವನ ಆತ್ಮಲಿಂಗವನ್ನೇ ತಂದು ತಾಯಿಗೆ ನೀಡುವ ಮನಸ್ಸಾಗುತ್ತದೆ,
ಅದರಂತೆ ತಾಯಿಗೆ #ಆತ್ಮಲಿಂಗ ತಂದು ನಿನಗೆ ನೀಡುತ್ತೇನೆ ಎಂದು ವಚನ ನೀಡಿ ಕೈಲಾಸಪರ್ವತದಲ್ಲಿ ಶಿವನನ್ನು ಕುರಿತು ಘೋರ ತಪಸ್ಸನ್ನು ಆಚರಿಸುತ್ತಾನೆ.

#ರಾವಣನ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ ನಿನಗೇನು ಬೇಕು ಎಂದು ಕೇಳಿದಾಗ, ರಾವಣನು #ಆತ್ಮಲಿಂಗವನ್ನೇ ಕೇಳುತ್ತಾನೆ.
ಸರಿ ಎಂದು ಒಪ್ಪಿದ ಶಿವನು ಒಂದು ಷರತ್ತನ್ನು ವಿಧಿಸುತ್ತಾನೆ, ಅದೇನೆಂದರೆ ನೀನು ಇದನ್ನು ಭೂಮಿಗೆ ತಾಕದಂತೆ ಕೊಂಡೊಯ್ಯಬೇಕು, ಮಧ್ಯೆ ಎಲ್ಲಿಯಾದರೂ ಭೂಮಿಯ ಮೇಲಿಟ್ಟರೆ ಆತ್ಮಲಿಂಗ ಅಲ್ಲಿಯೇ ಭೂಮಿಯಲ್ಲಿ ಹುದುಗಿಹೋಗುತ್ತದೆ ಎಂಬ ಷರತ್ತಿನೊಂದಿಗೆ ನೀಡುತ್ತಾನೆ.

ಹಾಗೇಯೇ ಆಗಲೆಂದು ತೆಗೆದುಕೊಂಡು ಹೋಗಬೇಕಾದರೆ ಸಂಜೆಯಾಗುತ್ತದೆ, ಸಂಜೆ ಸಂಧ್ಯಾವಂದನೆ ಮಾಡಬೇಕೆಂದು ಆತ್ಮಲಿಂಗ ಎಲ್ಲಿಡುವುದೆಂದು ಯೋಚಿಸುತ್ತಿರಬೇಕಾದರೆ ಗಣಪತಿಯು ಒಬ್ಬ ಬಾಲಕನ ರೂಪ ಧರಿಸಿ ಅಲ್ಲಿಗೆ ಆಗಮಿಸುತ್ತಾನೆ, ಆ ಬಾಲಕನನ್ನು ನೋಡಿದ ರಾವಣನು ಬಾಲಕನನ್ನು ಕರೆದು ತನ್ನ ಕೈಲಿರುವ ಆತ್ಮ ಲಿಂಗವನ್ನು ಸಂಧ್ಯಾವಂದನೆ ಮುಗಿಸಿ ಬರುವ ತನಕ ನಿನ್ನಲ್ಲೇ ಇಟ್ಟುಕೊಂಡಿರು ಯಾವುದೇ ಕಾರಣಕ್ಕೂ ಕೆಳಗಿಡಬೇಡ ಎಂದು ಹೇಳಿದಾಗ, ಬಾಲಕ ನಾನು ನಿಮ್ಮನ್ನು ಮೂರು ಬಾರಿ ಕರೆಯುತ್ತೇನೆ ನೀವು ಬರದಿದ್ದರೆ ಕೆಳಗಿಟ್ಟುಬಿಡುತ್ತೇನೆ ಎಂಬ ಷರತ್ತು ಹಾಕುತ್ತಾನೆ, ಷರತ್ತಿಗೆ ಒಪ್ಪಿ ರಾವಣನು ಸ್ನಾನಕ್ಕೆ ಹೋದ ತಕ್ಷಣ ಬಾಲಕ ಮೂರು ಬಾರಿ ರಾವಣನನ್ನು ಕರೆದು ಆತ್ಮ ಲಿಂಗವನ್ನು ಕೆಳಕ್ಕಿಟ್ಟುಬಿಡುತ್ತಾನೆ.

ಇದನ್ನು ನೋಡಿದ ರಾವಣ ಕೋಪದಿಂದ ಓಡಿಬಂದು ಭೂಮಿಯೊಳಗೆ ಹುದುಗಿಹೋಗುತ್ತಿದ್ದ ಆತ್ಮಲಿಂಗವನ್ನು ಕೀಳಲು ಪ್ರಯತ್ನಿಸುತ್ತಾನೆ, ಎಷ್ಟೇ ಬಲಪ್ರಯೋಗಿಸಿ ಕಿತ್ತರೂ ಆತ್ಮಲಿಂಗ ಮೇಲಕ್ಕೆ ಬರುವುದಿಲ್ಲ ಮೇಲಿನ ಭಾಗ ಮಾತ್ರ ನಾಲ್ಕು ಚೂರುಗಳಾಗಿ ಸಿಡಿದು #ಸಜ್ಜೇಶ್ವರ #ಧಾರಾನಾಥ #ಗುಣವಂತೇಶ್ವರ. #ಮುರುಡೇಶ್ವರ ಎಂಬಲ್ಲಿ ಬಿದ್ದು ಅಲ್ಲಿಯೂ ಆತ್ಮಲಿಂಗ ಲಿಂಗರೂಪಿಯಾಗಿ ಪ್ರಕಟ ವಾಗುತ್ತದೆ.
ಇಂತಹ ಪವಾಡ ನಡೆದ ಸ್ಥಳವೇ ಗೋಕರ್ಣ.
ಇಲ್ಲಿ ಶಿವನು ಮಹಾಬಲೇಶ್ವರನಾಗಿ ನಿಂತು ಬರುವ ಭಕ್ತರನ್ನು ಕೈ ಬಿಡದೆ ಸಲಹುತ್ತಿದ್ದಾನೆ.
ಇಂತಹ ಪವಿತ್ರ ಆತ್ಮಲಿಂಗದ ಮೂಲ ಸ್ಥಳವನ್ನೊಮ್ಮೆ ನೋಡಿ ಪುನೀತರಾಗೋಣ. ಸ್ಪರ್ಶ ದರ್ಶನಕ್ಕೆ ಅವಕಾಶವಿದ್ದು ವಸ್ತ್ರ ಸಂಹಿತೆ ಕಡ್ಡಾಯ, ಗೋಕರ್ಣಕ್ಕೆ ಭೇಟಿ ನೀಡಿದಾಗ ಅಲ್ಲಿನ ಗ್ರಾಮದೇವತೆ #ಭದ್ರಕಾಳಿ ಮತ್ತು #ಗಣಪತಿಯ ದರ್ಶನವನ್ನೂ ಮಾಡಿ ಬನ್ನಿ.

#ಗೋಕರ್ಣ ಕ್ಷೇತ್ರ #omnamahshivaya

1 week ago | [YT] | 6

VasanthaaHarish 🙏

#ಗ್ರಹಣ ಕಾಲದಲ್ಲಿ ಆಹಾರ ಏಕೆ ಸೇವಿಸಬಾರದು ಎಂಬ ವಿಷಯವನ್ನು ಆಧ್ಯಾತ್ಮಿಕ, ವೈದ್ಯಕೀಯ ಮತ್ತು ವೈಜ್ಞಾನಿಕ ದೃಷ್ಟಿಯಿಂದ ವಿವರವಾದ ಮಾಹಿತಿ ತಿಳಿದುಕೊಳ್ಳೋಣ.

#ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?

#ಗ್ರಹಣಕಾಲದಲ್ಲಿ ಆಹಾರ ಸೇವನೆಯನ್ನು ನಿಷೇಧಿಸುವುದರ ಹಿಂದೆ ಕೇವಲ ಭೌತಿಕ ಕಾರಣಗಳಷ್ಟೇ ಅಲ್ಲದೆ, ಅತ್ಯಂತ ಸೂಕ್ಷ್ಮವಾದ ಆಧ್ಯಾತ್ಮಿಕ ಕಾರಣಗಳೂ ಇವೆ:

೧. #ಆರೋಗ್ಯದ ದೃಷ್ಟಿಯಿಂದ : ಸೂರ್ಯ-ಚಂದ್ರರು ಅನ್ನರಸದ ಪೋಷಣೆಯನ್ನು ಮಾಡುವ ದೇವತೆಗಳಾಗಿದ್ದಾರೆ. ಗ್ರಹಣದ ಸಮಯದಲ್ಲಿ ಅವರ ಶಕ್ತಿಯು ಕಡಿಮೆಯಾಗಿರುವುದರಿಂದ ಆ ಸಮಯದಲ್ಲಿ ಭೋಜನವು ವರ್ಜ್ಯವಾಗಿದೆ (ನಿಷಿದ್ಧವಾಗಿದೆ).

೨. #ಅಧ್ಯಾತ್ಮದ ದೃಷ್ಟಿಯಿಂದ : ಆಧುನಿಕ ವಿಜ್ಞಾನವು ಗ್ರಹಣದ ವಿಚಾರವನ್ನು ಕೇವಲ ಸ್ಥೂಲ, ಅಂದರೆ ಭೌಗೋಳಿಕ ದೃಷ್ಟಿಯಿಂದ ನೋಡುತ್ತದೆ; ಆದರೆ ನಮ್ಮ ಋಷಿಮುನಿಗಳು ಗ್ರಹಣದ ಸೂಕ್ಷ್ಮಪರಿಣಾಮ, ಅಂದರೆ ಆಧ್ಯಾತ್ಮಿಕ ಸ್ತರದಲ್ಲಾಗುವ ದುಷ್ಪರಿಣಾಮಗಳ ವಿಚಾರವನ್ನೂ ಮಾಡಿದ್ದಾರೆ.

೨ ಅ. #ರಜ-ತಮಾತ್ಮಕ ಲಹರಿಗಳ ಪ್ರಭಾವ : ಗ್ರಹಣಕಾಲದಲ್ಲಿ ವಾಯುಮಂಡಲವು ರಜ-ತಮಾತ್ಮಕ (ತೊಂದರೆದಾಯಕ) ಲಹರಿಗಳಿಂದ ತುಂಬಿಕೊಂಡಿರುತ್ತದೆ. ಈ ಕಾರಣದಿಂದ ಈ ಕಾಲದಲ್ಲಿ ಆಹಾರವನ್ನು ಸೇವಿಸುವುದು ನಿಷಿದ್ಧವಾಗಿದೆ.

೨ ಆ. #ಅನ್ನ ಮತ್ತು ದೇಹದ ದೂಷಣೆ : ರಜ-ತಮಾತ್ಮಕ ಲಹರಿಗಳಿಂದ ಕೂಡಿದ ವಾಯುಮಂಡಲದಿಂದ ಅನ್ನವು ದೂಷಿತವಾಗಿರುತ್ತದೆ. ಇಂತಹ ಅನ್ನವನ್ನು ಸೇವಿಸುವುದರಿಂದ ದೇಹಮಂಡಲವೂ ಅಶುದ್ಧವಾಗುತ್ತದೆ. ಇಂತಹ ಅಶುದ್ಧ ದೇಹವು ಕಡಿಮೆ ಕಾಲಾವಧಿಯಲ್ಲಿಯೇ ಕೆಟ್ಟ ಶಕ್ತಿಗಳ ಅಧೀನವಾಗುವ ಸಾಧ್ಯತೆಯಿರುವುದರಿಂದ ಗ್ರಹಣಕಾಲದಲ್ಲಿ ಆಹಾರವನ್ನು ಸೇವಿಸಬಾರದು.

೨ ಇ. #ರೋಗಾಣು ಮತ್ತು ಕೆಟ್ಟ ಶಕ್ತಿಗಳ ಹೆಚ್ಚಳ : ಇಂತಹ ಸಮಯದಲ್ಲಿ ವಾಯುಮಂಡಲದಲ್ಲಿ ರೋಗಾಣುಗಳು ಮತ್ತು ಕೆಟ್ಟ ಶಕ್ತಿಗಳ ಪ್ರಭಾವವೂ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಊಟ ಮಾಡುವಂತಹ ಯಾವುದೇ ರಜ-ತಮಾತ್ಮಕ ಕೃತಿಗಳನ್ನು ಮಾಡಿದರೆ, ಅದರ ಮೂಲಕ ನಮಗೆ ಕೆಟ್ಟ ಶಕ್ತಿಗಳಿಂದ ತೊಂದರೆಯಾಗಬಹುದು.

೩. #ಧರ್ಮಶಾಸ್ತ್ರದ ಎಚ್ಚರಿಕೆ ಮತ್ತು ಪರಿಹಾರ

೩ ಅ. ಧರ್ಮಶಾಸ್ತ್ರದ ಎಚ್ಚರಿಕೆ : ‘ಗ್ರಹಣಕಾಲದಲ್ಲಿ ಊಟವನ್ನು ಮಾಡಿದರೆ ಪಿತ್ತದ ತೊಂದರೆಯಾಗುತ್ತದೆ’ ಎಂದು ಧರ್ಮಶಾಸ್ತ್ರವು ಸ್ಪಷ್ಟವಾಗಿ ಹೇಳುತ್ತದೆ.

೩ ಆ. #ಗ್ರಹಣಕಾಲದಲ್ಲಿ ಮಾಡಬೇಕಾದ ಕೃತಿ (ಸಾಧನೆ) : ಗ್ರಹಣ ಕಾಲದಲ್ಲಿ ಊಟ ಮಾಡುವುದಕ್ಕೆ ತದ್ವಿರುದ್ಧವಾಗಿ, ಆ ಸಮಯದಲ್ಲಿ ನಾಮಜಪ, ಸ್ತೋತ್ರಪಠಣ ಮುಂತಾದ ದೈವಿಕ ಕೃತಿಗಳನ್ನು ಅಂದರೆ ಸಾಧನೆಯನ್ನು ಮಾಡಿದರೆ, ನಮ್ಮ ಸುತ್ತಲೂ ಒಂದು ದೈವೀ ರಕ್ಷಣಾಕವಚ ನಿರ್ಮಾಣವಾಗುತ್ತದೆ. ಇದರಿಂದ ಗ್ರಹಣದ ಅನಿಷ್ಟ ಪ್ರಭಾವದಿಂದ ನಮ್ಮ ರಕ್ಷಣೆಯಾಗುತ್ತದೆ.

#ಚಂದ್ರಗ್ರಹಣ ಮತ್ತು ಆರೋಗ್ಯ: ಆಧುನಿಕ ವಿಜ್ಞಾನ ಹಾಗೂ ಆಯುರ್ವೇದದ ವಿಶ್ಲೇಷಣೆ

#ಸೂರ್ಯಗ್ರಹಣವು ನೇರವಾಗಿ ನಮ್ಮ ಜೀರ್ಣಾಂಗವ್ಯೂಹ (ಜಠರಾಗ್ನಿ) ಮತ್ತು ಭೌತಿಕ ದೇಹದ ಮೇಲೆ ಪ್ರಭಾವ ಬೀರಿದರೆ, ಚಂದ್ರಗ್ರಹಣವು ಪ್ರಧಾನವಾಗಿ ಮನುಷ್ಯನ ಮನಸ್ಸು, ಮೆದುಳು ಮತ್ತು ದೇಹದ ದ್ರವಗಳ ಮೇಲೆ ತೀವ್ರವಾದ ಪ್ರಭಾವವನ್ನು ಬೀರುತ್ತದೆ.

೧. #ಆಧುನಿಕ ವೈದ್ಯಕೀಯ ಮತ್ತು ವಿಜ್ಞಾನದ ದೃಷ್ಟಿಕೋನ

ಜಗತ್ತಿನ ಪ್ರಮುಖ ನರವಿಜ್ಞಾನಿಗಳು ಮತ್ತು ಮನೋವೈದ್ಯರು ಹುಣ್ಣಿಮೆ ಹಾಗೂ ಚಂದ್ರಗ್ರಹಣದ ಸಮಯದಲ್ಲಿ ಮನುಷ್ಯನ ದೇಹದಲ್ಲಾಗುವ ಜೈವಿಕ ಬದಲಾವಣೆಗಳನ್ನು ಗುರುತಿಸಿದ್ದಾರೆ:

೧ ಅ. #ನಿದ್ರಾಚಕ್ರ ಮತ್ತು ಮೆಲಟೋನಿನ್ ಹಾರ್ಮೋನ್ : ಚಂದ್ರಗ್ರಹಣವು ಯಾವಾಗಲೂ ಹುಣ್ಣಿಮೆಯ ದಿನವೇ ಸಂಭವಿಸುತ್ತದೆ. ಹುಣ್ಣಿಮೆಯ ಪ್ರಕಾಶಮಾನವಾದ ಬೆಳಕು ದಿಢೀರನೆ ಮರೆಯಾಗುವುದು ಮತ್ತು ವಾತಾವರಣದಲ್ಲಿನ ಬದಲಾವಣೆಗಳು ಮನುಷ್ಯನ ಮೆದುಳಿನಲ್ಲಿರುವ 'ಪಿನಿಯಲ್ ಗ್ರಂಥಿ'ಯ ಮೇಲೆ ಪ್ರಭಾವ ಬೀರುತ್ತವೆ. ಇದರಿಂದ ನಿದ್ರೆಯನ್ನು ನಿಯಂತ್ರಿಸುವ 'ಮೆಲಟೋನಿನ್' ಹಾರ್ಮೋನ್ ಉತ್ಪಾದನೆಯಲ್ಲಿ ಏರುಪೇರಾಗಿ, ನಿದ್ರಾಹೀನತೆ ಮತ್ತು ಆಯಾಸ ಉಂಟಾಗುತ್ತದೆ.

೧ ಆ. #ದೇಹದ ದ್ರವಗಳ ಮೇಲಿನ ಗುರುತ್ವಾಕರ್ಷಣೆ : ಚಂದ್ರನ ಗುರುತ್ವಾಕರ್ಷಣೆಯು ಸಮುದ್ರದ ಅಲೆಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದು ವೈಜ್ಞಾನಿಕ ಸತ್ಯ. ಮನುಷ್ಯನ ದೇಹವು ಶೇ. ೬೦ ರಿಂದ ೭೦ ರಷ್ಟು ನೀರಿನಿಂದ (ದ್ರವಗಳಿಂದ) ಕೂಡಿದೆ. ಚಂದ್ರಗ್ರಹಣದ ಸಮಯದಲ್ಲಿ ಉಂಟಾಗುವ ಗುರುತ್ವಾಕರ್ಷಣೆಯ ಸೂಕ್ಷ್ಮ ಬದಲಾವಣೆಗಳು ರಕ್ತದೊತ್ತಡ ಮತ್ತು ದೇಹದ ದ್ರವಗಳ ಚಲನೆಯ ಮೇಲೆ ಅಲ್ಪಾವಧಿಯ ಪ್ರಭಾವ ಬೀರುತ್ತವೆ ಎಂದು ಕೆಲವು ಜೈವಿಕ ಸಂಶೋಧನೆಗಳು ಅಭಿಪ್ರಾಯಪಡುತ್ತವೆ.

೧ ಇ. #ಮನೋವೈಜ್ಞಾನಿಕ ಪ್ರಭಾವ : ಗ್ರಹಣದ ಸಮಯದಲ್ಲಿ ವಾತಾವರಣದಲ್ಲಿನ ಅಯಾನುಗಳ (Ions) ಬದಲಾವಣೆಯಿಂದಾಗಿ ಸೂಕ್ಷ್ಮ ಮನಸ್ಸಿನ ಜನರಲ್ಲಿ ಆತಂಕ, ಖಿನ್ನತೆ ಮತ್ತು ಭಾವನಾತ್ಮಕ ಏರಿಳಿತಗಳು ಹೆಚ್ಚಾಗುವುದನ್ನು ಮನೋವಿಜ್ಞಾನಿಗಳು ಗುರ್ತಿಸಿದ್ದಾರೆ.

೨. #ಆಯುರ್ವೇದ ಶಾಸ್ತ್ರದ ಅತ್ಯುತ್ತಮ ವಿಶ್ಲೇಷಣೆ

ಆಯುರ್ವೇದದಲ್ಲಿ ಚಂದ್ರನನ್ನು 'ಸೋಮ' (ಶೀತಲತೆ ಮತ್ತು ಪೋಷಣೆಯ ಸಂಕೇತ) ಹಾಗೂ ಮನಸ್ಸಿನ ಅಧಿಪತಿ (ಚಂದ್ರಮಾ ಮನಸೋ ಜಾತಃ) ಎಂದು ಕರೆಯಲಾಗುತ್ತದೆ.

೨ ಅ. #ಮನಸ್ಸು ಮತ್ತು 'ರಸ' ಧಾತುವಿನ ಮೇಲೆ ಪ್ರಭಾವ : ಆಯುರ್ವೇದದ ಪ್ರಕಾರ, ಚಂದ್ರನ ಕಿರಣಗಳು ಭೂಮಿಯ ಮೇಲಿನ ಸಸ್ಯಗಳಿಗೆ ಮತ್ತು ಮನುಷ್ಯನಿಗೆ ಪೋಷಕಾಂಶಗಳನ್ನು ನೀಡುತ್ತವೆ. ಗ್ರಹಣದ ಸಮಯದಲ್ಲಿ ಈ '#ಸೋಮ' ಶಕ್ತಿಯು ಖಂಡಿತವಾಗುತ್ತದೆ. ಇದರಿಂದ ದೇಹದ ಪ್ರಥಮ ಧಾತುವಾದ 'ರಸ ಧಾತು' (Plasma/Lymph) ಮತ್ತು ಮನಸ್ಸಿನ ಮೇಲೆ ತಮೋಗುಣದ (ನಕಾರಾತ್ಮಕ) ಪ್ರಭಾವ ದಟ್ಟವಾಗುತ್ತದೆ.

೨ ಆ. #ಕಫ ದೋಷದ ಏರುಪೇರು ಮತ್ತು ಜೀರ್ಣಕ್ರಿಯೆ : ಚಂದ್ರನು 'ಕಫ' ದೋಷಕ್ಕೆ ಹತ್ತಿರವಾದ ಗ್ರಹ. ಗ್ರಹಣದ ಸಮಯದಲ್ಲಿ ವಾತಾವರಣದಲ್ಲಿ ಉಂಟಾಗುವ ಹಠಾತ್ ಬದಲಾವಣೆಗಳು ದೇಹದಲ್ಲಿನ ಜಲತತ್ತ್ವವನ್ನು ಅಸ್ತವ್ಯಸ್ತಗೊಳಿಸುತ್ತವೆ. ಮನಸ್ಸು ಮಂಕಾದಾಗ, ನರಮಂಡಲವು ಜೀರ್ಣಾಂಗವ್ಯೂಹಕ್ಕೆ ಸರಿಯಾದ ಸಂಕೇತಗಳನ್ನು ಕಳುಹಿಸುವುದಿಲ್ಲ. ಇದರಿಂದ ತಿಂದ ಆಹಾರವು ಸರಿಯಾಗಿ ಪಚನವಾಗದೇ, ಹೊಟ್ಟೆಯುಬ್ಬರ ಮತ್ತು ಆಲಸ್ಯ ಉಂಟಾಗುತ್ತದೆ.

೨ ಇ. #ಸೂಕ್ಷ್ಮಾಣುಜೀವಿಗಳ ವೃದ್ಧಿ : ಸೂರ್ಯಗ್ರಹಣದಂತೆಯೇ, ಚಂದ್ರಗ್ರಹಣದ ಸಮಯದಲ್ಲಿಯೂ ವಾತಾವರಣದಲ್ಲಿನ ರಜ-ತಮ ಲಹರಿಗಳಿಂದಾಗಿ, ಮೊದಲೇ ತಯಾರಿಸಿಟ್ಟ ಆಹಾರದಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ವೃದ್ಧಿಯಾಗುತ್ತವೆ. ಆದ್ದರಿಂದ ಆ ಸಮಯದಲ್ಲಿ ಊಟ ಮಾಡುವುದನ್ನು ಆಯುರ್ವೇದ ನಿಷೇಧಿಸುತ್ತದೆ.

೩. #ಆಯುರ್ವೇದವು ಸೂಚಿಸಿರುವ ವೈಜ್ಞಾನಿಕ ಪರಿಹಾರೋಪಾಯಗಳು

೩ ಅ. #ದೈಹಿಕ ಲಂಘನ (ಉಪವಾಸ) : ಚಂದ್ರಗ್ರಹಣದ ಸಮಯದಲ್ಲಿ ಜೀರ್ಣಕ್ರಿಯೆಯು ದುರ್ಬಲವಾಗಿರುವುದರಿಂದ ಮತ್ತು ಮನಸ್ಸು ಚಂಚಲವಾಗಿರುವುದರಿಂದ, ಘನ ಆಹಾರವನ್ನು ಸೇವಿಸದೇ ಉಪವಾಸ ಮಾಡುವುದು ಅತ್ಯುತ್ತಮ. ಇದು ದೇಹದಲ್ಲಿ ಸಂಗ್ರಹವಾಗಿರುವ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

೩ ಆ. #ಮಾನಸಿಕ ಉಪವಾಸ (ಧ್ಯಾನ ಮತ್ತು ಜಪ) : ಚಂದ್ರನು ಮನಸ್ಸಿನ ಕಾರಕನಾಗಿರುವುದರಿಂದ, ಚಂದ್ರಗ್ರಹಣವು ಮಾನಸಿಕ ಸಾಧನೆಗೆ ಅತ್ಯಂತ ಪ್ರಶಸ್ತವಾದ ಕಾಲ. ಈ ಸಮಯದಲ್ಲಿ ಮೌನವಾಗಿ ಕುಳಿತು ಧ್ಯಾನ, ಪ್ರಾಣಾಯಾಮ ಅಥವಾ ಮಂತ್ರ ಜಪಗಳನ್ನು ಮಾಡುವುದರಿಂದ ಮೆದುಳಿನ ನರಗಳು ಶಾಂತಗೊಂಡು, ಗ್ರಹಣದ ನಕಾರಾತ್ಮಕ ಶಕ್ತಿಗಳು ಮನಸ್ಸನ್ನು ಪ್ರವೇಶಿಸದಂತೆ ತಡೆಯುತ್ತವೆ.

೩ ಇ. #ದರ್ಭೆ ಮತ್ತು ತುಳಸಿಯ ಬಳಕೆ : ಸೂರ್ಯಗ್ರಹಣದಂತೆಯೇ, ಚಂದ್ರಗ್ರಹಣಕ್ಕೂ ಮುನ್ನ ಮನೆಯಲ್ಲಿರುವ ಕುಡಿಯುವ ನೀರು ಮತ್ತು ಹಾಲಿಗೆ ದರ್ಭೆ ಅಥವಾ ತುಳಸಿ ಎಲೆಗಳನ್ನು ಹಾಕಬೇಕು. ಇದು ವಿಕಿರಣಗಳನ್ನು ಹೀರಿಕೊಂಡು ನೀರನ್ನು ಶುದ್ಧವಾಗಿರಿಸುತ್ತದೆ.

1 week ago (edited) | [YT] | 5

VasanthaaHarish 🙏

ಒಂದೇ ದಿನದಲ್ಲಿ #ಐದು #ಆತ್ಮಲಿಂಗದ ದರ್ಶನ ಮಾಡಿದರೆ #ಮೋಕ್ಷ #ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.
#ರಾವಣನು ಶಿವನಿಂದ ಪಡೆದ ಆತ್ಮಲಿಂಗ ಲಂಕೆಗೆ ಕೊಂಡ್ಯೊಯುತ್ತಿದ್ದಾಗ #ಗಣಪತಿಯು #ತಂತ್ರದಿಂದ ಅದನ್ನು ಭೂಮಿಯ ಮೇಲೆ ಇಡುತ್ತಾನೆ, ಆಗ ಕೋಪಗೊಂಡ ರಾವಣನು ಅದನ್ನು ಭೂಮಿಯಿಂದ ಜೋರಾಗಿ ಕೀಳುವಾಗ ಅದು ಐದು ಭಾಗಗಳಾಗಿ #ಕಿತ್ತುಬಂದು ಅದನ್ನು ಬಿಸಾಡಿದಾಗ ಬಿದ್ದ ಸ್ಥಳಗಳು #ಆತ್ಮಲಿಂಗದ ಕ್ಷೇತ್ರಗಳಾಗುತ್ತದೆ .
ಅಂತಹುದೇ ಒಂದು ಕ್ಷೇತ್ರ #ಮುರುಡೇಶ್ವರ ಕ್ಷೇತ್ರ.

ಇದು #ಆತ್ಮಲಿಂಗದ ಮೇಲಿದ್ದ ಬಟ್ಟೆಯು ಬಿದ್ದ ಒಂದು ಸ್ಥಳ, ಆತ್ಮಲಿಂಗದ ಮೇಲಿನ ಭಾಗವನ್ನು ಕಿತ್ತೆಸೆದಾಗ ಅದು (ಕುಂದುಕಾ ಬೆಟ್ಟದ ಮೇಲೆ) ಈಗಿನ #ಮುರುಡೇಶ್ವರದಲ್ಲಿ ಬೀಳುತ್ತದೆ,
ಹಿಂದೆ ಈ ಪ್ರದೇಶವನ್ನು ಮೃಡೇಶ್ವರ ಎನ್ನುತ್ತಿದ್ದು ಈಗ ಅದು ಮುರುಡೇಶ್ವರ ಆಗಿದೆ.

ಮುರುಡೇಶ್ವರ #ಭಟ್ಕಳ ತಾಲೂಕಿನಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಒಂದು ಊರು, ಇಲ್ಲಿನ ಪ್ರಧಾನ ದೇವರು ಮೃಡೇಶ ಅಥವಾ ಶಿವ.
ಇಲ್ಲಿಗೆ ಬಂದು ಭಗವಂತನ ದರ್ಶನ ಮಾಡಿದರೆ ಬಡತನ ನಿವಾರಣೆ ಆಗುತ್ತದೆ, ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ, ಮನಸ್ಸಿಗೆ ಬರುವ ಕೆಟ್ಟ ಆಲೋಚನೆ ದೂರವಾಗಿ ಉತ್ತಮ ವ್ಯಕ್ತಿಗಳಾಗುತ್ತಾರೆ ಎನ್ನುವ ನಂಬಿಕೆ ಇದೆ.
ಇಂತಹ ಪರಮ ಪವಿತ್ರ ಶಿವನ ಸಾನಿಧ್ಯವನ್ನೊಮ್ಮೆ ದರ್ಶನ ಮಾಡಿ ಪುನೀತರಾಗೋಣ.. ನಾಳೆ ಮತ್ತೊಂದು ಆತ್ಮಲಿಂಗದ ದರ್ಶನ ಮಾಡೋಣ..
ಒಂದೇ ದಿನದಲ್ಲಿ ಐದು ಆತ್ಮಲಿಂಗದ ದರ್ಶನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.
#AtmaLinga #murdeshwar

1 week ago | [YT] | 3

VasanthaaHarish 🙏

#ಐದು ಪವಿತ್ರ ಕ್ಷೇತ್ರದಲ್ಲಿ ಇದು ಒಂದು.
ಸಾವಿರಾರು ವರ್ಷಗಳಷ್ಟು ಹಳೆಯದಾದ ಪುರಾಣ ಪ್ರಸಿದ್ಧ #ಸಜ್ಜೇಶ್ವರ.
#ಸಜ್ಜೇಶ್ವರ ದೇವಾಲಯ #ಉತ್ತರ ಕನ್ನಡ ಜಿಲ್ಲೆಯ #ಕಾರವಾರ ಸಮೀಪದ #ಶೇಜಾವಾಡದಲ್ಲಿದೆ.
ಇದು ಗೋಕರ್ಣ #ಮಹಾಬಲೇಶ್ವರ #ಆತ್ಮ ಲಿಂಗ ಕ್ಷೇತ್ರದ ಐದು ಪವಿತ್ರ ಕ್ಷೇತ್ರದಲ್ಲಿ ಇದು ಒಂದು.
ರಾವಣನು #ಆತ್ಮ ಲಿಂಗವನ್ನು ಶಿವನಿಂದ ಪಡೆದು ತೆಗೆದುಕೊಂಡು ಹೋಗಬೇಕಾದಾಗ ಗಣಪತಿಯು ತಂತ್ರದಿಂದ ಅದನ್ನು ಕೆಳಗಿಡುತ್ತಾನೆ,
ನಂತರ ರಾವಣನು ಕೋಪದಿಂದ ಅದನ್ನು ಕೀಳಲು ಪ್ರಯತ್ನಿಸಿದಾಗ ಆತ್ಮಲಿಂಗದ ಕವಚ ವಿವಿಧ ಸ್ಥಳಗಳಲ್ಲಿ ಬಿದ್ದು ಐದು ಲಿಂಗಗಳಾಗುತ್ತದೆ, ಅಂತಹ ಲಿಂಗಗಳಲ್ಲಿ ಇದು ಸಹ ಒಂದು.
#ಸಜ್ಜೇಶ್ವರ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಮಾತ್ರ ಎಲ್ಲರಿಗೂ ತಾವೇ ಅಭಿಷೇಕ ಮಾಡಿ ಲಿಂಗವನ್ನು #ಸ್ಪರ್ಶಿಸುವ ಅವಕಾಶ ಇರುತ್ತದೆ(ಶಿವರಾತ್ರಿಯಂದು ಮಾತ್ರ).
ಇಲ್ಲಿನ ದೇವಾಲಯದಲ್ಲಿ ಶಿವ ತುಂಬಾ ಕೋಪೋದ್ರಿಕನಾಗಿರುತ್ತಾನೆ ಅಲ್ಲಿನ ಸ್ವಾಮಿಗೆ ನಿಷ್ಠೆಯಿಂದ ನಡೆದುಕೊಳ್ಳಬೇಕು ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ.
ಇದು ಆತ್ಮಲಿಂಗದ ಚೂರು ಬಿದ್ದ ಮೊದಲನೆಯ ಸ್ಥಳ ಎಂದು ಕರೆಯಲ್ಪಡುತ್ತಾರೆ.
ಒಂದೇ ದಿನದಲ್ಲಿ ಐದು ಆತ್ಮಲಿಂಗದ ದರ್ಶನ ಮಾಡಿದರೆ ತುಂಬಾ ಒಳ್ಳೆಯದು ಎಂದು ಸಹ ಹೇಳುತ್ತಾರೆ ಇಂತಹ ಪುಣ್ಯಕ್ಷೇತ್ರ ದರ್ಶನ ಮಾಡಿ ಪುನೀತರಾಗೋಣ.
ನಾಳೆ ಮತ್ತೊಂದು ಆತ್ಮಲಿಂಗದ ಪರಿಚಯ ಮಾಡಿಕೊಳ್ಳೋಣ.
#temple #AtmaLinga

2 weeks ago | [YT] | 7

VasanthaaHarish 🙏

#ಐದು #ಆತ್ಮಲಿಂಗಗಳಲ್ಲಿ #ಧಾರಾನಾಥ ಅಥವಾ #ಧಾರೇಶ್ವರ ಎಂಬುದು ಒಂದು..

ಇಲ್ಲಿ #ಆತ್ಮಲಿಂಗದ ಒಂದು ತುಣುಕು ಬಿದ್ದು ಶಿವಲಿಂಗವಾಯಿತು ಎನ್ನುತ್ತಾರೆ.
ಈ ದೇವಾಲಯದ #ಗೋಪುರವು #ತಂತ್ರಗಳಲ್ಲಿ ವಿವರಿಸಲಾದ #ಮಂಡಲದ ರೂಪದಲ್ಲಿರುವುದು ಇಲ್ಲಿನ ಮತ್ತೊಂದು ವಿಶೇಷ.

ದೇವಾಲಯದ ಆವರಣದಲ್ಲಿ ಐದು ಪವಿತ್ರ ಕುಂಡಗಳಿದ್ದು, #ರುದ್ರ, #ಶಂಖ, #ಚಕ್ರ,#ವಸುಧಾ, #ನಾಗ ಎನ್ನುವ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ.
ಇಲ್ಲಿನ ಶಿವಲಿಂಗ ಬಣ್ಣ ಬದಲಾಯಿಸುತ್ತಿರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
ಈ ದೇವಾಲಯವನ್ನು ಹಿಂದೆ ದೋರಕ್ ಎಂದು ಕರೆಯಲಾಗುತ್ತಿದ್ದರಂತೆ, ದೋರಕ್ ಎಂದರೆ ಶಿವಲಿಂಗದ ಮೇಲಿನ ದಾರ ಎಂದು.
ಭೂಮಿಯಲ್ಲಿ ಹುದುಗಿಹೋಗುತ್ತಿರುವ ಶಿವಲಿಂಗವನ್ನು ರಾವಣನು ಕೀಳಲು ಪ್ರಯತ್ನಿಸುತ್ತಿರುವಾಗ ಶಿವಲಿಂಗದ ಮೇಲಿದ್ದ ದಾರ ಬಂದು ಬಿದ್ದ ಸ್ಥಳ ಎಂದು ಸಹ ಹೇಳಲಾಗುತ್ತದೆ.

ಏನೇ ಆದರೂ ತುಂಬಾ ಪವಿತ್ರ ಮತ್ತು ಶಕ್ತಿಯಿಂದ ಕೂಡಿದ ಧಾರಾನಾಥ ದೇವಾಲಯವು ಹೆಣ್ಣು ಮಕ್ಕಳಿಗೆ ಸೌಭಾಗ್ಯವನ್ನು ನೀಡುತ್ತಿದ್ದು, ಮದುವೆಯಾಗದವರಿಗೆ ಮದುವೆಯ ಭಾಗ್ಯ ಕರುಣಿಸುತ್ತಿದ್ದು, ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುತ್ತಿರುವ ಈ ಆತ್ಮಲಿಂಗದ ದೇವಾಲಯ ಕುಮಟಾದಿಂದ ಹೊನ್ನಾವರಕ್ಕೆ ಹೋಗುವ ಹೆದ್ದಾರಿಯಲ್ಲಿ ಸಿಗುತ್ತದೆ.

ಈ ಆತ್ಮಲಿಂಗದ ದರ್ಶನ ಪಡೆದು ಪುನೀತರಾಗೋಣ.

2 weeks ago | [YT] | 4

VasanthaaHarish 🙏

#ರಾವಣನು ಕೊಂಡುಹೋಗುತ್ತಿದ್ದ #ಶಿವನ #ಆತ್ಮಲಿಂಗ #ಗಣಪತಿಯ ತಂತ್ರದಿಂದ ಆತ್ಮಲಿಂಗ ಭೂಮಿಯೊಳಗೆ ಹುದುಗಿ ಹೋಗುತ್ತಿರಬೇಕಾದರೆ ಓಡಿ ಬಂದ ರಾವಣನು ಶಿವನ ಆತ್ಮಲಿಂಗವನ್ನು ಜೋರಾಗಿ ಕೀಳಲು ಪ್ರಯತ್ನಿಸುವಾಗ ಅದು ಐದು ಚೂರುಗಳಾಗುತ್ತದೆ, ಅದನ್ನು ಎಸೆದು ಬಿದ್ದ ಮತ್ತೊಂದು ಸ್ಥಳವೇ #ಗುಣವಂತೇಶ್ವರ..
ಇಲ್ಲಿ ಸ್ವಾಮಿಯು #ಶಂಭುಲಿಂಗೇಶ್ವರ ಸ್ವಾಮಿಯಾಗಿ ನೆಲೆಸಿದ್ದಾನೆ.
ಇವನು ಅಭಿಷೇಕ ಪ್ರಿಯ, ಇಲ್ಲಿನ #ಶಂಭುಲಿಂಗೇಶ್ವರ ಸ್ವಾಮಿಗೆ ಅಭಿಷೇಕ ಮಾಡಿಸಿ ಭಕ್ತಿಯಿಂದ ಬೇಡಿದ ವರವನ್ನು ಬಹುಬೇಗ ನೀಡುತ್ತಾನೆ ಎಂದು ಹೇಳಲಾಗುತ್ತದೆ.

ಈ ದೇವಾಲಯದ ಮುಂದೆ ಕೊಳವಿದ್ದು ಅಲ್ಲಿನ ಕೊಳದಲ್ಲಿ ಸ್ನಾನ ಮಾಡಿದರೆ #ಚರ್ಮ ಕಾಯಿಲೆಗಳು ಗುಣವಾಗುತ್ತದೆ ಎಂಬ ನಂಬಿಕೆ ಇದೆ.
ಇದು ಹೊನ್ನಾವರದ ಸಮೀಪದಲ್ಲೇ ಇರುವ ಗುಣವಂತೆ ಎನ್ನುವ ಗ್ರಾಮದಲ್ಲಿ ಇದೆ.
ಒಂದೇ ದಿನದಲ್ಲಿ ಐದು ಆತ್ಮ ಲಿಂಗಗಳ ದರ್ಶನ ಮಾಡಿದರೆ ಸಿದ್ದಿ ಲಭಿಸುತ್ತದೆ ಎನ್ನುವ ಪ್ರತೀತಿ ಇದೆ.
ತುಂಬಾ ಪರಮ ಪವಿತ್ರ ಆತ್ಮ ಲಿಂಗಗಳ ಕ್ಷೇತ್ರದಲ್ಲಿ ಒಂದಾದ ಈ #ಕ್ಷೇತ್ರವನ್ನೊಮ್ಮೆ ದರ್ಶನ ಮಾಡಿ ಪುನೀತರಾಗೋಣ..
#Gokarna#atma Linga temple

2 weeks ago | [YT] | 5

VasanthaaHarish 🙏

#ನನಗಾರು ಇಲ್ಲ ಎನ್ನುವ ಮನಸ್ಸು
ದೇವರಿರುವುದಾ ಮರೆತಂತೆ ಮನಸಿನ ನೋವು
ಸುಲಭವಾಗಿ ಮಡಚಿಡುವ ಕಾಗದ ಅಲ್ಲ
ಸೃಷ್ಟಿಸಿದ #ಭಗವಂತ ನಂಬಿಕೆ ಎನ್ನುವ ಪದಗಳಲ್ಲಿ
ಅಡಗಿರುವ ನಮ್ಮ ಕರ್ಮದ ಫಲವನ್ನು ಅನುಭವಿಸುವಾಗ ಅಮ್ಮ ಎಂದು ಒಮ್ಮೆ ಕೂಗಿದಾಗ
ಯಾವ ತಾಯಿ ಕೂಡ ಸುಮ್ಮನೆ ಇರಲು ಸಾಧ್ಯವಿಲ್ಲ
ಕಷ್ಟದ #ಕರ್ಮ ಫಲ ಕಡಿಮೆ ಮಾಡಿ ನಿನ್ನ ಕಷ್ಟದ ಹೊರೆ ಕಡಿಮೆ ಮಾಡುವಳು ಆ ಜಗಜ್ಜನನಿ ಅವಳಿಗೆ ಮಲಗುವ ಮೊದಲು ಮನಸಾರೆ ಮಾತಾಡಿಸಿ ಮಲಗಿ ಖಂಡಿತವಾಗಿ ನಿಮಗೆ ಆ ತಾಯಿಯ ಇರುವಿಕೆಯನ್ನು ಸೂಚಿಸುತ್ತದೆ

2 weeks ago | [YT] | 1

VasanthaaHarish 🙏

||#ಆಚಾರೇಣ ಪುಣ್ಯಂ ಹ್ಯೇಷಾಂ ಆಚಾರೋ ಧರ್ಮಮಾಪ್ನುಯಾತ್||.
#ಅರ್ಥ:-ಆಚಾರವೇ ಪುಣ್ಯವನ್ನು ತರುತ್ತದೆ.ಆಚಾರವೇ #ಧರ್ಮವನ್ನು ತಲುಪಿಸುತ್ತದೆ.ಈ ಸುಭಾಷಿತವು ನಮಗೆ ತಿಳಿಸುವುದೇನೆಂದರೆ,ನಮ್ಮ ನಡವಳಿಕೆ ಮತ್ತು ನಡತೆಯು ಒಳ್ಳೆಯದಾಗಿದ್ದಾಗ ಮಾತ್ರ ನಾವು ಪುಣ್ಯವನ್ನು ಪಡೆಯುತ್ತೇವೆ. ನಮ್ಮ ಆಚಾರವೇ ನಮ್ಮ ಧರ್ಮದ ಹಾದಿಯನ್ನು ತೋರಿಸಿಕೊಡುತ್ತದೆ. ಒಳ್ಳೆಯ ನಡತೆಯು ಮನುಷ್ಯನನ್ನು ಸರಿಯಾದ ಹಾದಿಯಲ್ಲಿ ನಡೆಸಿ, ಜೀವನದಲ್ಲಿ ಯಶಸ್ಸು ಮತ್ತು ಶಾಂತಿ ನೀಡುತ್ತದೆ.

2 weeks ago (edited) | [YT] | 0

VasanthaaHarish 🙏

# ದೇವರ ದರ್ಶನ...ಯಾತ್ರೆ

#ಯಾವುದಾದರೂ #ಯಾತ್ರೆ ಅಥವಾ #ದೇವಸ್ಥಾನಕ್ಕೆ ಹೋದಾಗ ನಾವು ದೇವರ ದರ್ಶನ ಹೇಗೆ ಪಡಿಬೇಕು ಅನ್ನುವದಕ್ಕೆ ನಮ್ಮ ಪೂರ್ವಜರು ಸರಿಯಾದ ಕ್ರಮವನ್ನು ತಿಳಿಸುತ್ತಾರೆ .ಅದರಂತೆ ನಡೆದರೆ ನಮಗೆ ಖಂಡಿತ ದರ್ಶನ ಫಲ ಸಿಗುತ್ತದೆ ...‌‌

ಯಾವದೇ #ಯಾತ್ರೆಗೆ ಹೋದಾಗ #ಯಾತ್ರಾರ್ಥಿಯು ದೇವರ ಪ್ರಥಮ ದರ್ಶನ ಸಮಯದಲ್ಲಿ ಮೊದಲು ದೇವಸ್ಥಾನದ ಗೋಡೆಗೆ ಒರಗಿ ನಿಂತು ಕೈಮುಗಿದು ಹೀಗೆ ಹೇಳಬೇಕು..

"#ನೂರು ಕೋಟಿ ತಿರ್ಥಗಳ ಸ್ನಾನ ಮಾಡಿಸು, ವಿರಜಾ ನದಿಯ ಸ್ನಾನ ಮಾಡಿಸು, #ತಾರಕ ಬ್ರಹ್ಮ ದೇವರಿಂದ ತತ್ವ ಉಪದೇಶ ಮಾಡಿಸು. #ವೈಕುಂಠಕ್ಕೆ ಕರೆದೊಯ್ದು ನಿನ್ನ ದರುಶನ ಮಾಡಿಸು " ಎಂದು ಪ್ರಾರ್ಥಿಸಿ
ನಂತರ ಹೊರಗಿನಿಂದಲೇ ದೇವರ ದರ್ಶನ ಮಾಡಬೇಕು..ಅದಕ್ಕೆ #ಧೂಳಿದರ್ಶನ ಅಂತಾರೆ. '#ಧೂಳಿ ದರ್ಶನಂ ಪಾಪ ನಾಶನಂ' ಧೂಳಿದರ್ಶನ ದಿಂದ ಪಾಪ ನಾಶವಾಗುತ್ತೆ .

ನಂತರ ತಲೆಯಲ್ಲಿರು ಚಿಂತಗಳನ್ನೇಲ್ಲ ಬಿಟ್ಟು #ಶಿಖರ ದರ್ಶನ ಮಾಡಿ. '#ಶಿಖರ ದರ್ಶನಂ ಚಿಂತಾನಾಶನಂ'
ನಂತರ ದೇವಸ್ಥಾನ ಒಳಗೆ ಹೋಗುವಾಗ ಕೈಕಾಲುಗಳನ್ನು ತೊಳೆದು ದೇವಸ್ಥಾನ ಒಳಗಡೆ ಪ್ರವೇಶಮಾಡಿ ತಕ್ಷಣ ದೇವರ ವಿಗ್ರಹವನ್ನು ನೋಡ ಬೇಡಿ ಅದಕ್ಕೂ ಒಂದು ಕ್ರಮವಿದೆ .

ಮೊದಲು ಪಾದ ದರ್ಶನ ಮಾಡಿ: '#ಪಾದ ದರ್ಶನಂ ಪಾಪನಾಶನಂ '...‌ನಂತರ

ಕಟಿ ದರ್ಶನ: '#ಕಟಿ ದರ್ಶನಂ ಕಾಮನಾಶನಂ' ... ನಂತರ
ನಾಭಿ ದರ್ಶನ: 'ನಾಭಿ ದರ್ಶನಂ ನರಕ ನಾಶನಂ' ... ನಂತರ

#ಕಂಠ ದರ್ಶನ: 'ಕಂಠ ದರ್ಶನಂ ವೈಕುಂಠ ಸಾಧನಂ' .. ನಂತರ

ಮುಖ ದರ್ಶನ: '#ಮುಖ ದರ್ಶನಂ ಮುಕ್ತಿ ಸಾಧನಂ' ... ನಂತರ

ಕಿರೀಟ ದರ್ಶನ: #'ಕೀರಿಟ ದರ್ಶನಂ ಪುನರ್ಜನ್ಮ ನಾಶನಂ' .. ನಂತರ

#ಸರ್ವ ದರ್ಶನ: '#ಸರ್ವಾಂಗ ದರ್ಶನಂ ಸರ್ವ ಪಾಪ ನಾಶನಂ' .‌‌‌ಸರ್ವಾಂಗ ದರ್ಶನ ಮಾಡಬೇಕು..ಇದು ಕ್ರಮ....

ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

3 weeks ago | [YT] | 9