VasanthaaHarish 🙏

Namaste 🙏 my hobbies 🙏 Jai Kashi 🙏 Bharatêya Sanathani Hindu. 🙏Spiritual seeker.🙏 Music 🎵 ,🙏 love football updates,🙏 Traveling,tips 🙏Exploring, healthy cooking ideas 🙏A bit of photography 🙏 positive #nature love 🙏

namaste friends 🙏 Don't forget to like, share, and subscribe for more spiritual and nature-filled videos!🙏🚩

"I'm beyond thankful for every single person that has Subscribed, Liked, Commented, and Shared! You are the reason this channel is what it is".❤️🙏


VasanthaaHarish 🙏

*#ಅಕ್ಷಯ ತದಿಗೆ* *ಅಕ್ಷಯ ಫಲ*

ಅಕ್ಷಯ ತೃತೀಯ ವೆಂದರೆ ಬಹಳಷ್ಟು ಜನರಿಗೆ ಅಂದು ಚಿನ್ನ ಖರೀದಿ ಸಬೇಕೆಂಬುದನ್ನು ಬಿಟ್ಟರೆ ಬೇರೇನೂ ತಿಳಿದಿರುವುದಿಲ್ಲ ಎಂದೇ ನನ್ನ ಅನಿಸಿಕೆ.
ಆದರೆ ಅಂದು ಏನೇನೆಲ್ಲಾ ವಿಶೇಷತೆಗಳು ಇವೆ ಎಂಬುದನ್ನು ನೋಡುವುದಾದರೆ,,,,,

🕉️ಅಕ್ಷಯ ತದಿಗೆಯ ದಿನದಂದೇ ಶ್ರೀ ಗಣೇಶನಿಂದ ವೇದವ್ಯಾಸರು ಮಹಾಭಾರತ ಕಾವ್ಯ ಬರೆಸಲು ಪ್ರಾರಂಭಿಸಿದರು.

🕉️ಈ ದಿನದಂದೇ ತ್ರೇತಾ ಯುಗದ ಆರಂಭವಾಗಿದ್ದು

🕉️ವಿಷ್ಣುವಿನ ಆರನೇ ಅವತಾರವಾದ ಪರಶುರಾಮ ಅವತರಿಸಿದ್ದು ಇದೇ ದಿನದಂದು

🕉️ತುಳಸಿದಾಸರು ರಾಮಚರಿತ ಮಾನಸ ಬರೆಯಲು ಈ ಶುಭದಿನದಂದೆ ಪ್ರಾರಂಭಿಸಿದರು

🕉️ಆದಿಶಂಕರಾಚಾರ್ಯರು ಕನಕಧಾರ ಸ್ತೋತ್ರವನ್ನು ರಚಿಸಿದ್ದು ಸಹ ಇಂದಿನ ಶುಭ ದಿನವೇ

🕉️ಪಾಂಡವರಿಗೆ ಅಕ್ಷಯಪಾತ್ರೆ ದೊರಕಿದ ದಿನವೂ ಸಹ ಇದೇ ಆಗಿದೆ

🕉️ಆ ಪವಿತ್ರ ಗಂಗೆ ಶಿವನ ಜಟೆಯಿಂದ ಭೂಮಿಗಿಳಿದು ಬಂದ ದಿನವೂ ಸಹ ಇದೆ

🕉️18 ದಿನಗಳು ನಡೆದ ಮಹಾಭಾರತದ ಯುದ್ಧವು ಈ ಪವಿತ್ರ ದಿನದಂದು ಕೊನೆಗೊಂಡಿತು

ಇನ್ನು ಈಗಿನ ಕಾಲದ ಘಟ್ಟದಲ್ಲಿ ನೋಡುವುದಾದರೆ ಈ ಅಕ್ಷಯ ತದಿಗೆಯ ದಿನದಂದೇ ಜಗತ್ಪ್ರಸಿದ್ಧ ರಥಯಾತ್ರೆಯ ಉತ್ಸವ ಗಳಿಗಾಗಿ ರಥಗಳ ನಿರ್ಮಾಣವು ಪ್ರಾರಂಭವಾಗುವುದು

ಈ ದಿನ ನಾವು ಮಾಡುವ ಯಾವುದೇ ಪುಣ್ಯಕಾರ್ಯವು ದುಪ್ಪಟ್ಟು ಫಲವನ್ನು ನೀಡುತ್ತದೆ ಅರ್ಥಾತ್ ಆ ಫಲ ನಿಜಾರ್ಥದಲ್ಲಿ ಅಕ್ಷಯವಾಗುವುದು.

ಬನ್ನಿ ಈ ಸಂದರ್ಭವನ್ನು ಉಪಯೋಗಿಸಿಕೊಂಡು ನಮ್ಮ ಕೈಲಾದಸ್ಟು ಸತ್ಕಾರ್ಯಗಳನ್ನು ಮಾಡೋಣ, ಅಕ್ಷಯ ಫಲ ಪಡೆಯೋಣ

ಸರ್ವರಿಗೂ "ಅಕ್ಷಯತದಿಗೆ" ಯ ಶುಭಾಶಯಗಳು

2 days ago | [YT] | 2

VasanthaaHarish 🙏

🪞💫🌹✨ಶ್ರೀ ಮಂಗಳಾದೇವಿಯಲ್ಲಿ ವಿಷುಕಣಿ ಪೂಜೆಯೊಂದಿಗೆ ಸಂಭ್ರಮದ ಸೌರಮಾನ ಯುಗಾದಿ, ನೂತನ ಶ್ರೀ ಪರಾಭವ ಸೌರ ಸಂವತ್ಸರಾರಂಭ.✨🌹💫🪞🥭

ಸೌರಮಾನ ಯುಗಾದಿಯ ವರ್ಷಾರಂಭದ ಮೊದಲ ದಿನದ ಬುಧವಾರದಂದು ಮೂಲ ಬಿಂಬದ ಲಿಂಗರೂಪದಲ್ಲಿ ನಮ್ಮೆಲ್ಲರಿಗೂ ಯುಗಾದಿಯಂದು ಸಂಪ್ರಾಪ್ತವಾದ ಶ್ರೀ ಮಂಗಳಾದೇವಿ ಅಮ್ಮನವರ ವಿಷುಕಣಿಯ ದರ್ಶನ🪞🥭😍

ಪ್ರಥಮವಾಗಿ ಶ್ರೀ ಮಂಗಳಾದೇವಿ ಅಮ್ಮನವರ ಚರಣಾರವಿಂದಗಳಲ್ಲಿ ನಮಸ್ಕರಿಸುತ್ತಾ ತಮಗೆಲ್ಲರಿಗೂ ಸೌರಮಾನ ಯುಗಾದಿಯ ಪ್ರೀತಿ ಪೂರ್ವಕ ಶುಭಾಶಯಗಳು.👏

ಶ್ರೀ ಸೂರ್ಯ ನಾರಾಯಣನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುವ 'ಮೇಷ ಸಂಕ್ರಮಣದ' ಮರುದಿನದ 'ಹೊಸ 'ವಿಕ್ರಮಶಕೆ'ಯ ಹೊಸವರ್ಷದ ಇಂದಿನ ಸೌರಮಾನ ಯುಗಾದಿಯನ್ನು ನವ ಚೈತನ್ಯದಿಂದ ಆಚರಿಸಿ ತನ್ನ ಸನ್ನಿಧಾನಕ್ಕೆ ವಿಷುಕಣಿಯ ದರ್ಶನಕ್ಕೆ ಪ್ರಾತಃಕಾಲ ಮಹಾತಾಯಿಯು ಅನುಗ್ರಹಿಸಿದ್ದಾಳೆ🌹

ವಿಷುಕಣಿಯ ದರ್ಶನವನ್ನು ಪಡೆದು ಹೊಸ ವರ್ಷದಲ್ಲಿ ಸಂಪದ್ಭರಿತ ಸುಖ ಶಾಂತಿ, ಸಮೃದ್ಧಿಯುತ ಜೀವನ ಪ್ರಾಪ್ತಿಗಾಗಿ ಮಹಾದೇವಿಯಲ್ಲಿ ಪ್ರಾರ್ಥಿಸುತ್ತಾ ಸಮಸ್ತ ನಾಡಿನ ಜನತೆಗೆ ಸೌರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ಹರ್ಷದಾಯಕವಾಗಿ' ಕ್ಷೇಮದಾಯಕವಾಗಿರಲಿ ಎಂಬ ಸಂಕಲ್ಪದಿಂದ ತಾಯಿಯಲ್ಲಿ ಆಶೀರ್ವಾದವನ್ನು ಕೋರುತ್ತಾ ತಮಗೆಲ್ಲರಿಗೂ ನೂತನ ಶ್ರೀ ಪರಾಭವ ನಾಮ ಸಂವತ್ಸರವು ನಿತ್ಯ ಶುಭ ಸನ್ಮಂಗಳ ಶ್ರೇಯಸ್ಸನ್ನುಂಟುಮಾಡಲಿ.👏

☀️ಶುಭ ಸುಪ್ರಭಾತ☀️
✨🌸ಸಮಸ್ತ ಲೋಕಾ ಸರ್ವೇ ಜನಾ ಸುಖಿನೋ ಭವಂತು🌸✨

5 days ago | [YT] | 18

VasanthaaHarish 🙏

#ಅಂತರಂಗದ ಅರಮನೆಗೆ #ಆತ್ಮವಿಶ್ವಾಸವೇ #ರಾಜಮಾರ್ಗ.
#ಶಿವ ಅಂದರೆ ಕೇವಲ ಕೈಲಾಸದಲ್ಲಿ ಕುಳಿತ ದೇವನಲ್ಲ. ಬದಲಿಗೆ ನಮ್ಮೊಳಗೆ ಸುಪ್ತವಾಗಿರುವ ಶಕ್ತಿ. ನಿಮ್ಮ ಆತ್ಮಿವಿಶ್ವಾಸವೇ #ತ್ರಿಶೂಲವಾದಾಗ, ನಿಮ್ಮ ಮೌನವೇ ಮಂತ್ರವಾದಾಗ ಮಾತ್ರ ನೀವು ನಿಜವಾದ 'ಶಿವತ್ವ'ವನ್ನು ಅನುಭವಿಸಲು ಸಾಧ್ಯ.ತ್ರಿಶೂಲದ ಮೂರು ಮೊನೆಗಳು #ಇಚ್ಛಾಶಕ್ತಿ, #ಜ್ಞಾನಶಕ್ತಿ ಮತ್ತು #ಕ್ರಿಯಾಶಕ್ತಿಯ ಸಂಕೇತ. ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದಾಗ ಈ ಮೂರು ಶಕ್ತಿಗಳು ಒಂದಾಗುತ್ತವೆ. #ಹೊರಗಿನ #ಶತ್ರುಗಳನ್ನು ಗೆಲ್ಲಲು ಆಯುಧ ಬೇಕು, ಆದರೆ #ಒಳಗಿನ ಭಯವನ್ನು ಗೆಲ್ಲಲು #ಆತ್ಮವಿಶ್ವಾಸ ಎಂಬ ತ್ರಿಶೂಲವೊಂದಿದ್ದರೆ ಸಾಕು.ಯಾರು ತನ್ನ ಆತ್ಮವನ್ನು ಗೆಲ್ಲುತ್ತಾನೋ, ಅವನು ಇಡೀ ಜಗತ್ತನ್ನೇ ಗೆಲ್ಲಬಲ್ಲ.ಶಿವನನ್ನು #'ದಕ್ಷಿಣಾಮೂರ್ತಿ' ಎನ್ನುತ್ತಾರೆ, ಅಂದರೆ ಮೌನದ ಮೂಲಕವೇ ಶಿಷ್ಯರಿಗೆ ಜ್ಞಾನ ಬೋಧಿಸಿದವನು.ಇಂದಿನ ಕಾಲದಲ್ಲಿ ಅಬ್ಬರಿಸುವವರೇ ಹೆಚ್ಚು, ಕೆಲಸ ಮಾಡುವವರು ಕಡಿಮೆ.ಆದರೆ ನೆನಪಿರಲಿ, ಮೋಡಗಳು ಅಬ್ಬರಿಸಿದರೆ ಮಳೆಯಾಗುವುದಿಲ್ಲ, ಸುಮ್ಮನೆ ಸುರಿದರೆ ಮಾತ್ರ ಕೆರೆ-ಕಟ್ಟೆ ತುಂಬುವುದು. ನಿಮ್ಮ ಸಾಧನೆ ಶಬ್ದ ಮಾಡಬೇಕೇ ಹೊರತು ನಿಮ್ಮ ನಾಲಿಗೆಯಲ್ಲ.ನಮ್ಮ ಮನಸ್ಸು ಹತ್ತು ದಿಕ್ಕಿಗೆ ಓಡುವ ಕಾಡಿನಂತೆ. ಅಲ್ಲಿ ಆಸೆಗಳೆಂಬ ಹುಲಿಗಳಿವೆ, ಕೋಪವೆಂಬ ಕಾಡುಕೋಣಗಳಿವೆ. ಈ ಕಾಡನ್ನು ಕಡಿದು ಮೈದಾನ ಮಾಡುವುದು ಕಷ್ಟ, ಆದರೆ ಅದೇ ಕಾಡಿನ ಮಧ್ಯೆ ಸ್ಥಿತಪ್ರಜ್ಞನಾಗಿ ಕುಳಿತುಕೊಳ್ಳುವುದೇ ಧ್ಯಾನ. ಆ ಧ್ಯಾನವೇ ನಿಮ್ಮನ್ನು 'ಕೈಲಾಸ'ಕ್ಕೆ ಕೊಂಡೊಯ್ಯುತ್ತದೆ.ಶಿವನ ಸಂಸಾರವೇ ಒಂದು ವಿಚಿತ್ರ.ಶಿವನ ಕೊರಳಲ್ಲಿ ಹಾವು ಇದೆ, ಮಗ ಗಣೇಶನ #ವಾಹನ ಇಲಿ! (ಹಾವಿಗೆ ಇಲಿ ಅಂದ್ರೆ ₹ಪಂಚಪ್ರಾಣ!)ಶಿವನ ವಾಹನ ಎತ್ತು, ಪಾರ್ವತಿಯ #ವಾಹನ ಸಿಂಹ! (ಎತ್ತನ್ನ ಕಂಡರೆ ಸಿಂಹಕ್ಕೆ ಹಬ್ಬ!)ಶಿವನ ಮಗ ಕುಮಾರಸ್ವಾಮಿಯ ವಾಹನ ನವಿಲು, ಹಾವಿಗೆ ನವಿಲು ಕಂಡರೆ ಆಗದು!ಇಷ್ಟೆಲ್ಲಾ ವಿರೋಧಾಭಾಸಗಳಿದ್ದರೂ ಶಿವನ ಸಂಸಾರ ಸುಖವಾಗಿದೆ ಅಂದರೆ ಅದಕ್ಕೆ ಕಾರಣ ಸಮತೋಲನ ನಾವೂ ಅಷ್ಟೇ, ಮನೆಯಲ್ಲಿ ಹೆಂಡತಿ '#ಸಿಂಹ'ದಂತೆ ಗರ್ಜಿಸಿದಾಗ ನಾವು ಶಿವನಂತೆ #'ಮೌನ'ಕ್ಕೆ ಶರಣಾದರೆ ಅದೇ ಕೈಲಾಸ.ಅದನ್ನೇ ಶಿವತತ್ವ ಎನ್ನಬಹುದು.
ಸಮುದ್ರ ಮಂಥನದ ವಿಷವನ್ನು ಶಿವ ಕುಡಿದು '#ನೀಲಕಂಠ'ನಾದ. ನಮ್ಮ ಜೀವನದಲ್ಲೂ ಪ್ರತಿದಿನ ಅವಮಾನ, ಸೋಲು, ಟೀಕೆ ಎಂಬ 'ವಿಷ'ಗಳು ಎದುರಾಗುತ್ತವೆ. ಅದನ್ನು ಹೊಟ್ಟೆಗೆ ಹಾಕಿಕೊಂಡರೆ ಆರೋಗ್ಯ ಕೆಡುತ್ತದೆ (ಕೋಪ ಬರುತ್ತದೆ), ಹೊರಗೆ ಉಗುಳಿದರೆ #ಸಂಬಂಧ ಹಾಳಾಗುತ್ತದೆ. ಹಾಗಾಗಿ ಆ ವಿಷವನ್ನು ಗಂಟಲಲ್ಲೇ ಇಟ್ಟುಕೊಂಡು ಪ್ರಪಂಚಕ್ಕೆ ಅಮೃತ ಪ್ರೀತಿ ನೀಡುವುದೇ ನಿಜವಾದ ಶಿವಗುಣ.ಬೂದಿ ಬಳಿದುಕೊಂಡ ಶಿವ ಹೇಳುವುದು ಇಷ್ಟೇ,"#ನೀನು ಎಷ್ಟೇ ಶ್ರೀಮಂತನಾದರೂ ಕೊನೆಗೆ ಮಣ್ಣಾಗುವುದು ಸತ್ಯ#, ಹಾಗಾಗಿ ಇರುವಾಗ #ಅಹಂಕಾರ ಬಿಟ್ಟು ಬದುಕು.ಸಾವು ನಿಶ್ಚಿತ ಎಂದ ಮೇಲೆ ಬದುಕಿನ ಸಣ್ಣಪುಟ್ಟ ಸೋಲುಗಳಿಗೆ ಹೆದರುವುದೇಕೆ?ಗಂಗೆಯನ್ನು ತಲೆಯಲ್ಲಿ ಧರಿಸಿದ ಶಿವ, ಎಷ್ಟೇ ಜ್ಞಾನವಿದ್ದರೂ ನಿನ್ನ ತಲೆ ತಣ್ಣಗಿರಲಿ.ನಿನ್ನೊಳಗಿನ ಅಂಧಕಾರವನ್ನು ನೀನು ಯಾವಾಗ ಸುಟ್ಟು ಬೂದಿ ಮಾಡುತ್ತೀಯೋ, ಅಂದೇ ನಿನ್ನೊಳಗೆ ಶಿವ ಜಾಗೃತ ವಾಗುತ್ತಾನೆ. ಮಾತು ಕಡಿಮೆ ಇರಲಿ, #ನಿನ್ನ ಕೆಲಸದ #ತ್ರಿಶೂಲ ಜಗತ್ತಿಗೆ ನಿನ್ನ ಶಕ್ತಿಯನ್ನು ತೋರಿಸಲಿ.
ಓಂ ನಮಃ ಶಿವಾಯ.🙏🔱🚩🪔

6 days ago | [YT] | 7

VasanthaaHarish 🙏

#ಅಕ್ಷಯ ಫಲ ನೀಡುವ " #ಅಕ್ಷಯ ತೃತೀಯ "
ಅಕ್ಷಯ ತೃತಿಯದ ವಿಶೇಷತೆ ತಿಳಿದುಕೊಳ್ಳೋಣ.
1. ಪಾಂಡವರು ಈ ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದ ದಿನ.
2. #ದುರ್ಯೋಧನನ ದುಷ್ಟ ಬೋಧನೆಗೆ ಒಳಗಾಗಿ ದೂರ್ವಾಸರು ತಮ್ಮ ಸಹಸ್ರಾರು ಶಿಷ್ಯರೊಂದಿಗೆ ವನವಾಸದಲ್ಲಿ ಇದ್ದ ಪಾಂಡವರಲ್ಲಿದ್ದ ಕಡೆಗೆ ಭೋಜನ ಮಾಡಲು ಅಕ್ಷಯಪಾತ್ರೆ ಸಮಯ ಮೀರಿದಮೇಲೆ ಬಂದರು. ಕೊನೆಗೆ ದ್ರೌಪತಿ ಕೊನೆಗೆ ಶ್ರೀಕೃಷ್ಣ ದೇವರನ್ನ ಪ್ರಾರ್ಥನೆಮಾಡಿದಳು. ದ್ರೌಪತಿ ಕರೆದರೇ ಬಾರನೆ ? ಬಂದವನೇ ತಕ್ಷಣ ತನಗೂ ಹಸಿವೆ ಆಗಿದೆ ಏನಾದರೂ ಕೊಡು ಎಂದು ಕೇಳಿದಾಗ, ಮುಗಿದು ಹೋಗಿದೆ ಎಂದು ಹೇಳಲು ಸಂಕೋಚ ಪಡುತ್ತಿದ್ದ ಅಂತಹ ದ್ರೌಪದಿಗೆ ಪಾತ್ರೆಯ ಕೊನೆಯ ಭಾಗದಲ್ಲಿ ಇರುವಂತಹ ಒಂದೇ ಒಂದು ಅಗುಳು ಅನ್ನವನ್ನೇ ಅಕ್ಷಯವನ್ನಾಗಿ ಮಾಡಿ ದಂತಹ ಅದೇ ದಿನವೇ ಅಕ್ಷಯ ತೃತೀಯ.
3. #ವಿಷ್ಣುವಿನ ಅವತಾರವಾದ ಪರಶುರಾಮರ ಅವತಾರ ಆದ ದಿನವೇ ಅಕ್ಷಯ ತೃತೀಯ.
4. ಶ್ರೀ ಕೃಷ್ಣ ಪರಮಾತ್ಮನ ಸ್ನೇಹಿತನಾದ ಕುಚೇಲನು ತನ್ನಲ್ಲಿರುವ ಸ್ವಲ್ಪವೇ ಅವಲಕ್ಕಿಯನ್ನು ತನ್ನ ಪ್ರೀತಿ ಪಾತ್ರ ಸ್ನೇಹಿತನಿಗಾಗಿ ತೆಗೆದುಕೊಂಡು ಹೋಗಿ ಸಮರ್ಪಿಸಿದ ದಿನ . ಅಂದು ಶ್ರೀಕೃಷ್ಣ ಪರಮಾತ್ಮ ಕುಚೇಲನು ನೀಡಿದ ಹಿಡಿ ಅವಲಕ್ಕಿಯನ್ನು ಸ್ವೀಕರಿಸಿ ಅವನಿಗೆ ಐಶ್ವರ್ಯಗಳು ಪ್ರಾಪ್ತಿಯಾಗಿ.. ಸುಧಾಮನಾದ.
5. ದ್ವಾಪರಯುಗದ ಸಂದರ್ಭದಲ್ಲಿ ನಮ್ಮ ಮಹಾಭಾರತ ಪುರಾಣವನ್ನು ವ್ಯಾಸರು ರಚಿಸಿದ ಸುಮುಹೂರ್ತವೇ ಅಕ್ಷಯ ತೃತೀಯ.

5. ಭಗೀರಥನ ಪ್ರಯತ್ನದಿಂದ ಈಶ್ವರನ ಜಟೆಯಲ್ಲಿ ಇದ್ದಂತಹ ಗಂಗೆಯು ಭೂಮಿಗೆ ಬಂದ ದಿನವೇ ಅಕ್ಷಯ ತೃತಿಯ . ಈ ದಿನವು ತ್ರೇತಯುಗದ ಆರಂಭವನ್ನು ಸೂಚಿಸುತ್ತದೆ.

ಮಹಾಲಕ್ಷ್ಮಿಯನ್ನು ಆರಾಧಿಸಿ ಕುಬೇರನು ಅಕ್ಷಯ ತೃತೀಯ ದಿನವೇ ಅಷ್ಟೈಶ್ವರ್ಯವ ಪಡೆದನು.

ಅಕ್ಷಯ ತೃತೀಯ ಅಂದರೆ ನಮ್ಮ ಮನಸ್ಸಿಗೆ ಬರುವುದು ಚಿನ್ನದ ಅಂಗಡಿಗಳಲ್ಲಿ ಕಂಡುಬರುವ ಆಭರಣಗಳ ಜಾಹೀರಾತುಗಳು. ಚಿನ್ನದ ಮೇಲಿನ ಕಡಿತಗಳು ಚಿನ್ನ ಬೆಳ್ಳಿಯನ್ನು ಕೊಂಡುಕೊಂಡರೆ, ವರ್ಷ ಪೂರ್ತಿ ನೀವು ಚಿನ್ನವನ್ನು ತೆಗೆದು ಕೊಳ್ಳುತ್ತೀರಿ! ಎನ್ನುವಂತಹ ಅವರ ಭಾಷಣಗಳು.ಇದರ ಉಲ್ಲೇಖ ಯಾವ ಪುರಾಣದಲ್ಲೂ ಕಂಡುಬರುವುದಿಲ್ಲ.

ಭವಿಷ್ಯತ್ ಪುರಾಣದಲ್ಲಿ ಶ್ರೀಕೃಷ್ಣಪರಮಾತ್ಮನೇ ಅಕ್ಷಯತೃತೀಯದ ಅಸಾಧಾರಣ ಮಹಿಮೆಯನ್ನು ವರ್ಣಿಸಿರುವುದಾಗಿ ಉಲ್ಲೇಖವಿದೆ. " ಬಹುನಾತ್ರ ಕಿಮುಕ್ತೇನ ಕಿಂ ಬಹ್ವಕ್ಷರಮಾಲಯಾ l ವೈಶಾಖಸ್ಯ ಸಿತಾಮೇಕಾಂ ತೃತೀಯಾಮಕ್ಷಯಾಂ ಶೃಣು ||
ಅರ್ಥ... ಗಂಗಾಸ್ನಾನಕ್ಕೆ ಮತ್ತು ಶ್ರೀಕೃಷ್ಣನನ್ನು ಧೂಪ, ದೀಪ, ಪುಷ್ಪ ಮತ್ತು ವಿಶೇಷವಾಗಿ ಚಂದನ ಲೇಪದಿಂದ ಅರ್ಚನೆ ಮಾಡಲು ಪ್ರಶಸ್ತವಾದ ದಿನ. " ಸ್ನಾತ್ವಾ ಹುತ್ವಾ ಚ ಜಪ್ತ್ವಾ ಚ ದತ್ತ್ವಾನಂತ ಫಲಂ ಲಭೇತ್ " ಈ ಹಬ್ಬ ದಲ್ಲಿ ಆಚರಿಸುವ ಸ್ನಾನ, ಜಪ, ತಪಸ್ಸು , ಅಧ್ಯಯನ, ತರ್ಪಣ, ದಾನಾದಿ ಗಳೆಲ್ಲವೂ ಅಕ್ಷಯವಾದ ಫಲವನ್ನು ನೀಡುವುದರಿಂದ ಇದನ್ನು ಅಕ್ಷಯ ತೃತೀಯ ಎಂದು ಕರೆಯಲಾಗಿದೆ ಎಂದು ವ್ರತರಾಜದಲ್ಲಿ ಉಲ್ಲೇಖಿಸಿದೆ. ಅಕ್ಷಯವಾದ ಮೋಕ್ಷಕ್ಕೆ ಕಾರಣವಾಗಿರುವುದರಿಂದಲೂ ಇದಕ್ಕೆ ಅಕ್ಷಯ ತೃತೀಯ ಎಂದು ಕರೆಯುತ್ತಾರೆ. ಗೃಹ ಪ್ರವೇಶ, ಮದುವೆ, ಹೊಸ ಉದ್ಯಮಗಳು, ಹೂಡಿಕೆ ಗಳನ್ನು ಪ್ರಾರಂಭಿಸಲು ಅಕ್ಷಯ ತೃತೀಯ ಅತ್ಯುತ್ತಮ ದಿನ.

ಅಕ್ಷಯತೃತೀಯಾ ದಿನ ಪಿತೃ ತರ್ಪಣ ಕೊಡಲೇ ಬೇಕು.
ದೇವತೆಗಳ ಪೂಜೆಗೆ ಮಾತ್ರವಲ್ಲದೆ ಪಿತೃಗಳ ಪೂಜೆಗೂ ಪ್ರಶಸ್ತವೆನಿಸಿರುವ ತಿಥಿ ಅಕ್ಷಯ ತೃತೀಯಾ. ಪಿತೃಗಳನ್ನು ಕುರಿತು ತರ್ಪಣ ಮಾಡಿ ಪಿಂಡಪ್ರದಾನ ವನ್ನು ಮಾಡ ಬಹುದು ಎಂದು ಧರ್ಮಸಿಂಧುವಿನಲ್ಲಿ ಉಲ್ಲೇಖಿಸಿದೆ.

ಮಣ್ಣಿನ ಮಡಕೆಯಲ್ಲಿ ಉದಕ ದಾನ, ಮಾಡಿದರೆ ಮೃತ್ಯು ಭಯದಿಂದ ದೂರ, ವಸ್ತ್ರ ದಾನ ಮಾಡಿದರೆ ರೋಗ ರುಜಿನಗಳು ದೂರ, ಹಣ್ಣು ಹಂಪಲುಗಳನ್ನು ದಾನ ಮಾಡಿದರೆ, ನಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತೇವೆ ಎನ್ನುವ ನಂಬಿಕೆ. ಅಕ್ಕಿ, ಬೇಳೆ, ಗೋದಿ, ಬೆಲ್ಲ ದಾನ ಮಾಡಿದರೆ ಅಕಾಲ ಮೃತ್ಯುವಿನ ಭಯದಿಂದ ಪಾರಾಗಬಹುದು.ಕೊನೆ ಪಕ್ಷ ಮಜ್ಜಿಗೆ ಮೊಸರು ದಾನ ಮಾಡಿದರೆ ಮಾಡಿದ ಪಾಪ ಕರ್ಮ ಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆ.
ಬೆಳಿಗ್ಗೆ ಗೋವುಗಳಿಗೆ ಪೂಜೆ ಪುನಸ್ಕಾರಗಳನ್ನು ಮಾಡಿದರೆ, ಗೋಧಿ ಬೆಲ್ಲ ಬಾಳೆಹಣ್ಣು ತಿನ್ನಿಸುವುದ ರಿಂದ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಪಾತ್ರವಾಗುತ್ತದೆ.

🙏🙏🙏🙏🙏

1 week ago | [YT] | 21

VasanthaaHarish 🙏

02-04-2026 ಗುರುವಾರ
#ಚೈತ್ರ ಹುಣ್ಣಿಮೆ ಹನುಮ ಜಯಂತಿ🚩🙏

ಬುಧ್ಧಿರ್ಬಲಂ ಯಶೋಧೈರ್ಯಂ
ನಿರ್ಭಯತ್ವಂ ಅರೋಗತ
ಅಜಾಡ್ಯಂ ವಾಕ್ಪಟುತ್ವಂಚ
ಹನುಮತ್ ಸ್ಮರಣಾತ್ ಭವೇತ್ ||

ಬುದ್ಧಿವಂತಿಕೆ, ದೇಹದಾರ್ಢ್ಯ, ಕೀರ್ತಿ, ಧೈರ್ಯ, ಅಂಜದಿರುವಿಕೆ, ಆರೋಗ್ಯ, ಉತ್ಸಾಹ, ಮಾತುಗಾರಿಕೆ ಈ ಎಲ್ಲವೂ ಹನುಮಂತನನ್ನು ಮನಃಪೂರ್ವಕವಾಗಿ ನೆನೆದರೆ ದೊರೆಯುತ್ತವೆ.
ರಾಮಾಯಣದ ಕಥಾಪ್ರಪಂಚದಲ್ಲಿ ರಾಮ ನಾಯಕನಾದರೆ, ಹನುಮಂತ ಉಪನಾಯಕ. ಸ್ವಾಮಿನಿಷ್ಠೆಗೆ, ಭಕ್ತಿಗೆ ಇನ್ನೊಂದು ಹೆಸರು ಹನುಮಂತ. ಅಂಜನಿಯ ಗರ್ಭದಲ್ಲಿ ಹುಟ್ಟಿ ಆಂಜನೇಯನೆನಿಸಿದ. ಹನೂಮಂತ, ವಾಯಪುತ್ರ, ಪವನಸಂಭವ, ಮಾರುತಿ ಹೀಗೆ ಅನೇಕ ಹೆಸರುಗಳಿಂದ ಪ್ರಸಿದ್ಧನಾದವನು. ವಾಯುವಿನ ಅಂಶದಿಂದ ಕೇಸರಿಯಲ್ಲಿ ವಾನರನಾಗಿ ಹುಟ್ಟಿ, ಸುಗ್ರೀವನ ಮಂತ್ರಿಯಾದನು. ಅವನ ಅಸಾಧಾರಣವಾದ ಬಲ, ಪರಾಕ್ರಮ, ಬುದ್ಧಿವಂತಿಕೆ ರಾಮಾಯಣದುದ್ದಕ್ಕೂ
ಹನುಮಂತನ ರೂಪ ನೆನೆಯುವುದಾದರೆ
ಹೊಳೆವ ಹೊನ್ನ ಮೈಬಣ್ಣ, ಸುರಳಿ ಸುರಳಿಯಾದ ಕೇಶ ರಾಶಿ,.ಕಿವಿಯಲ್ಲಿ ಕರ್ಣಕುಂಡಲ, ಸುಂದರ ವಸ್ತ್ರದ ಉಡುಗೆ ಧರಿಸಿದ ಈ ಬಲಶಾಲಿಯ ಒಂದು ಕೈಯಲ್ಲಿ ವಜ್ರಾಯುಧ ಮತ್ತೊಂದು ಕೈಯಲ್ಲಿ ವಿಜಯದ ಧ್ವಜ, ದಬ್ಬೆಯ ಒಂದು ಉಪವೀತನವನ್ನು ಭುಜದ ಮೇಲೆ ಧರಿಸಿರುವ ಈತನಿಗೆ ಇಡೀ ಭೂ ಮಂಡಲವೇ ತಲೆಬಾಗಿ ನಮಿಸುತ್ತದೆ.

ಇದು ಕಪಿಶ್ರೇಷ್ಠನ ಕಠಿಣತೆ, ದೃಡನಿರ್ಧಾರ ಮತ್ತು ಶ್ರೇಷ್ಠತೆಯನ್ನು ತೋರಿಸುತ್ತದೆ. ವಿದ್ಯಾವಂತ, ಗುಣವಂತ ಅತಿ ಚತುರ. ಶ್ರೀ ರಾಮನ ಸೇವಾ ಕೈಂಕರ್ಯಕ್ಕೆ ಕಾತುರನಾಗಿರುವ ಈತ ಸೂಕ್ಷ್ಮ ರೂಪ ಹೊಂದಿ ಸೀತಾಮಾತೆಯನ್ನು ಕಂಡ, ಹಾಗೂ ವಿಕಟ ರೂಪವನ್ನು ಹೊಂದಿ ಲಂಕೆಯನ್ನೇ ಸುಟ್ಟ. ಇದು ಪವನಸುತನ ಸಂದರ್ಭಕ್ಕೆ ಹೊಂದಿಕೊಳ್ಳುವ ಹಾಗೂ ತಕ್ಕನಾಗಿ ವರ್ತಿಸುವ ಅತಿಚತುರತೆಯ ವ್ಯಕ್ತಿತ್ವವನ್ನ ಬಿಂಬಿಸುತ್ತದೆ. ಸಂಜೀವಿನಿಯನ್ನು ತಂದು ಲಕ್ಷಮಣನನ್ನು ಬದುಕಿಸಿ, ಸುಗ್ರೀವನಿಗೆ ರಾಮನನ್ನು ಪರಿಚಯಿಸಿ, ಪುನಹ ರಾಜ ಪದವಿಯನ್ನು ಕೊಡಸಿದ. ಈ ಅಂಜನಸುತನನ್ನು ಸಾವಿರ ವಚನಗಳು ಈ ಯಶಸ್ಸಿನ ವೈಭವವನ್ನು ಹಾಡುತ್ತದೆ.ಆಂಜನೇಯನ ವೈಭವ ಸಪ್ತ ಸಾಗರಗಳಿಗೂ ಮಿಗಿಲಾದುದ್ದು. ಸಾಧು ಸಂತರು, ಮುನಿಗಳು, ನಾರದರು, ಶಾರದೆ, ಆಧಿಶೇಷ ಕುಬೇರ ಇವರುಗಳಿಗೆ ಸಹ ಪವನಸುತನ ವರ್ಣನೆ ಅಸಾಧ್ಯವಾದ ಮಾತು. ಆಂಜನೇಯನ ಬಲಕ್ಕೆ ಮೂರು ಲೋಕಗಳು ಹೆದರುತ್ತವೆ, ಹೆಸರು ಕೇಳಿದರೆ ಭೂತ ಪಿಸಾಚಿಗಳು ಹತ್ತಿರ ಸುಳಿಯುವುದಿಲ್ಲ. ಯಾರು ಅತಿ ಬಲವಂತನನ್ನು ಕಾಯಾ, ವಾಚ ಹಾಗೂ ಮನಸ್ಸಿನಿಂದ ಧ್ಯಾನಿಸುತ್ತಾರೋ ಅವರ ಸಂಕಷ್ಟಗಳು ದೂರವಾಗುತ್ತದೆ.

ಕಪಿಗಳು ಶ್ರೀರಾಮನ ಸೇವಾಕಾರ್ಯದಲ್ಲಿ ನಿರತವಾಗಿದ್ದವು. ಲಂಕೆಗೆ ಸೇತುನಿರ್ಮಾಣ ಕಾರ್ಯ ನಡೆಯುತ್ತಿತ್ತು. ಹನುಮಂತನೇ ಮೊದಲಾದ ಕಪಿಶ್ರೇಷ್ಠರು ಪರ್ವತ ಕಲ್ಲುಮಣ್ಣುಗಳನ್ನು ತಂದು ನೀರಿಗೆ ಹಾಕುತ್ತಿದ್ದರು. ಈ ಘನ ಪರಿಕರಗಳು
ಸಮುದ್ರದ ಆಳವನ್ನು ಸೇರದೆ ತೇಲಿ ನಿಂತು ಸೇತು ನಿರ್ಮಾಣ ಕಾರ್ಯವನ್ನು ಸುಲಭಗೊಳಿಸುತ್ತಿದ್ದವು. ಈ ನಡುವೆ ಶ್ರೀರಾಮ, "ನಿಮ್ಮೊಡನೆ ನನ್ನ ಪ್ರಯತ್ನವೂ ಇರಲಿ' ಎಂದು ಒಂದು ಕಲ್ಲನ್ನು ಸಮುದ್ರಕ್ಕೆ ಹಾಕಿದ. ಆದರೆ, ಅದು ಮುಳುಗಿಹೋಯಿತು. ಎಲ್ಲರಿಗೂ ಆಶ್ಚರ್ಯ. ಯಾಕೆ ಹೀಗಾಯಿತು ಎಂದು. ಅಲ್ಲಿಯವರೆಗೆ ಮೌನವಾಗಿದ್ದ ಹನುಮಂತ ತತ್ಕ್ಷಣ ಹೇಳಿದ, ""ದೇವರು ಕೈ ಬಿಟ್ಟರೆ ಕಲ್ಲೇನು, ಎಲ್ಲವೂ ಹೀಗೆಯೇ!

ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ

ಓಂ ಶ್ರೀ ಆಂಜನೇಯಾಯ ನಮಃ
ಓಂ ಮಹಾವೀರಾಯ ನಮಃ
ಓಂ ಹನುಮತೇ ನಮಃ
ಓಂ ಸೀತಾದೇವಿ ಮುದ್ರಾಪ್ರದಾಯಕಾಯ ನಮಃ
ಓಂ ಮಾರುತಾತ್ಮಜಾಯ ನಮಃ
ಓಂ ತತ್ತ್ವ ಜ್ಞಾನ ಪ್ರದಾನ ನಮಃ
ಓಂ ಅಶೊಕವನಿಕಾಚ್ಚೇತ್ರೇ ನಮಃ
ಓಂ ಸರ್ವಬಂಧ ವಿಮೋಕ್ತ್ರೇ ನಮಃ
ಓಂ ರಕ್ಷೋವಿಧ್ವಂಸಕಾರಕಾಯನಮಃ
ಓಂ ಪರವಿದ್ವಪ ನಮಃ
ಓಂ ಪರಶೌರ್ಯ ವಿನಾಶನಾಯ ನಮಃ
ಓಂ ಪರಮಂತ್ರ ನಿರಾಕರ್ತ್ರೇ ನಮಃ
ಓಂ ಪರಮಂತ್ರ ಪ್ರಭೇವಕಾಯ ನಮಃ
ಓಂ ಸರ್ವಗ್ರಹ ವಿನಾಶಿನೇ ನಮಃ
ಓಂ ಭೀಮಸೇನ ಸಹಾಯಕೃತೇ ನಮಃ
ಓಂ ಸರ್ವದುಃಖ ಹರಾಯ ನಮಃ
ಓಂ ಸರ್ವಲೋಕ ಚಾರಿಣೇ ನಮಃ
ಓಂ ಮನೋಜವಾಯ ನಮಃ
ಓಂ ಪಾರಿಜಾತ ಧೃಮಮೂಲಸ್ಧಾಯ ನಮಃ
ಓಂ ಸರ್ವಮಂತ್ರ ಸ್ವರೂಪವತೇ ನಮಃ
ಓಂ ಸರ್ವಯಂತ್ರಾತ್ಮಕಾಯ ನಮಃ
ಓಂ ಸರ್ವತಂತ್ರ ಸ್ವರೂಪಿಣೇ ನಮಃ
ಓಂ ಕಪೀಶ್ವರಾಯ ನಮಃ
ಓಂ ಮಹಾಕಾಯಾಯ ನಮಃ
ಓಂ ಸರ್ವರೋಗಹರಾಯ ನಮಃ
ಓಂ ಪ್ರಭವೇ ನಮಃ
ಓಂ ಬಲಸಿದ್ಧಿಕರಾಯ ನಮಃ
ಓಂ ಸರ್ವ ವಿದ್ಯಾಸಂಪತ್ರ್ಪ ವಾಯಕಾಯ ನಮಃ
ಓಂ ಕಪಿಸೇನಾ ನಾಯಕಾಯ ನಮಃ
ಓಂ ಭವಿಷ್ಯಚ್ಚತು ರಾನನಾಯ ನಮಃ
ಓಂ ಕೂಮಾರ ಬ್ರಹ್ಮಚಾರಿಣೇ ನಮಃ
ಓಂ ರತ್ನಕುಂಡಲ ದೀಪ್ತಿಮತೇ ನಮಃ
ಓಂ ಚಂಚಲ ದ್ವಾಲ ಸನ್ನದ್ಧಲಂಬಮಾನ ಶಿಖೋಜ್ವಲಾಯ ನಮಃ
ಓಂ ಗಂಧ್ರ್ವ ವಿದ್ಯಾತತ್ವಜ್ಞಾಯ ನಮಃ
ಓಂ ಮಹಾಬಲಪರಾಕ್ರಮಾಯ ನಮಃ
ಓಂ ಕಾರಾಗೃಹ ವಿಮೋಕ್ತ್ರೇ ನಮಃ
ಓಂ ಶೃಂಖಲ ಬಂಧ ವಿಮೋಚಕಾಯ ನಮಃ
ಓಂ ಸಾಗರೋತ್ತಾರಕಾಯ ನಮಃ
ಓಂ ಪ್ರಜ್ಞಾಯ ನಮಃ
ಓಂ ರಾಮದೂತಾಯ ನಮಃ
ಓಂ ಪ್ರತಾಪವತೇ ನಮಃ
ಓಂ ವಾನರಾಯ ನಮಃ
ಓಂ ಕೇಸರಿಸುತಾಯ ನಮಃ
ಓಂ ಸೀತಾಶೋಕ ನಿವಾರಣಾಯ ನಮಃ
ಓಂ ಅಂಜನಾ ಗರ್ಭಸಂಭುತಾಯ ನಮಃ
ಓಂ ಬಾಲರ್ಕ ಸದೃಶಾನನಾಯ ನಮಃ
ಓಂ ವಿಭೀಷಣ ಪ್ರಿಯಕರಾಯ ನಮಃ
ಓಂ ದಶಗ್ರೀವ ಕುಲಾಂತಕಾಯ ನಮಃ
ಓಂ ಲಕ್ಷ್ಮಣ ಪ್ರಾಣದಾತ್ರೇ ನಮಃ
ಓಂ ವಜ್ರಕಾಯಾಯ ನಮಃ
ಓಂ ಮಹಾದ್ಯುತಯೇ ನಮಃ
ಓಂ ಚಿರಂಜೀವಿನೇ ನಮಃ
ಓಂ ರಾಮಭಕ್ತಾಯ ನಮಃ
ಓಂ ದ್ತೆತ್ಯಕಾರ್ಯ ವಿಘಾತಕಾಯ ನಮಃ
ಓಂ ಅಕ್ಷಹಂತ್ರೇ ನಮಃ
ಓಂ ಕಾಂಚನಾಭಾಯ ನಮಃ
ಓಂ ಪಂಚವಕ್ತ್ರಾಯ ನಮಃ
ಓಂ ಮಹಾತಪಸೇ ನಮಃ
ಓಂ ಲಂಕಿಣೇಭಂಜನಾಯ ನಮಃ
ಓಂ ಗಂಧಮಾದನ ಶ್ತೆಲ ನಮಃ
ಓಂ ಲಂಕಾಪುರ ವಿದಾಹಕಾಯ ನಮಃ
ಓಂ ಸುಗ್ರೀವ ಸಚಿವಾಯ ನಮಃ
ಓಂ ಧೀರಾಯ ನಮಃ
ಓಂ ಶೂರಾಯ ನಮಃ
ಓಂ ದ್ತೆತ್ಯಕುಲಾಂತಕಾಯ ನಮಃ
ಓಂ ಸುರಾರ್ಚಿತಾಯ ನಮಃ
ಓಂ ಮಹಾತೇಜಸೇ ನಮಃ
ಓಂ ರಾಮ ಚೂಡಾಮಣಿ ಪ್ರದಾಯ ಕಾಮರೂಪಿವೇ ನಮಃ
ಓಂ ಶ್ರೀ ಪಿಂಗಳಾಕ್ಷಾಯ ನಮಃ
ಓಂ ನಾರ್ಧಿ ಂತೇ ನಾಕ ನಮಃ
ಓಂ ಕಬಲೀಕೃತ ಮಾರ್ತಾಂಡಮಂಡಲಾಯ ನಮಃ
ಓಂ ಕಬಲೀಕೃತ ಮಾರ್ತಾಂಡ ನಮಃ
ಓಂ ವಿಜಿತೇಂದ್ರಿಯಾಯ ನಮಃ
ಓಂ ರಾಮಸುಗ್ರೀವ ಸಂದಾತ್ರೇ ನಮಃ
ಓಂ ಮಹಾರಾವಣ ಮರ್ಧನಾಯ ನಮಃ
ಓಂ ಸ್ಪಟಿಕಾ ಭಾಯ ನಮಃ
ಓಂ ವಾಗ ಧೀಶಾಯ ನಮಃ
ಓಂ ನವ ವ್ಯಾಕೃತಿ ಪಂಡಿತಾಯ ನಮಃ
ಓಂ ಚತುರ್ಭಾಹವೇ ನಮಃ
ಓಂ ದೀನಬಂಧವೇ ನಮಃ
ಓಂ ಮಹತ್ಮನೇ ನಮಃ
ಓಂ ಭಕ್ತ ವತ್ಸಲಾಯ ನಮಃ
ಓಂ ಸಂಜೀವನ ನಗಾ ಹರ್ತ್ರೇ ನಮಃ
ಓಂ ಶುಚಯೇ ನಮಃ
ಓಂ ವಾಗ್ಮಿನೇ ನಮಃ
ಓಂ ದೃಢವ್ರತಾಯ ನಮಃ
ಓಂ ಕಾಲನೇಮಿ ಪ್ರಮಧನಾಯ ನಮಃ
ಓಂ ಹರಿಮರ್ಕಟ ಮರ್ಕಟಾಯನಮಃ
ಓಂ ದಾಂತಾಯ ನಮಃ
ಓಂ ಶಾಂತಾಯ ನಮಃ
ಓಂ ಪ್ರಸನ್ನಾತ್ಮನೇ ನಮಃ
ಓಂ ಶತಕಂಠ ಮದಾವಹೃತೇನಮಃ
ಓಂ ಯೋಗಿನೇ ನಮಃ
ಓಂ ರಾಮಕಧಾಲೋಲಾಯ ನಮಃ
ಓಂ ಸೀತಾನ್ವೇಷಣ ಪಂಡಿತಾಯ ನಮಃ
ಓಂ ವಜ್ರ ನಖಾಯ ನಮಃ
ಓಂ ರುದ್ರವೀರ್ಯ ಸಮುದ್ಭವಾಯ ನಮಃ
ಓಂ ಇಂದ್ರ ಜಿತ್ಪ್ರ್ರಹಿತಾ ಮೋಘಬ್ರಹ್ಮಸ್ತ್ರ ವಿನಿವಾರ ಕಾಯ ನಮಃ
ಓಂ ಪಾರ್ಧ ಧ್ವಜಾಗ್ರ ಸಂವಾಸಿನೇ ನಮಃ
ಓಂ ಶರಪಂಜರ ಭೇದಕಾಯ ನಮಃ
ಓಂ ದಶಬಾಹವೇ ನಮಃ
ಓಂ ಲೋಕಪೂಜ್ಯಾಯ ನಮಃ
ಓಂ ಜಾಂ ವತ್ಪ್ರ ತಿ ವರ್ಧನಾಯ ನಮಃ
ಓಂ ಸೀತ ಸಮೇತ ಶ್ರೀರಾಮಪಾದ ಸೇವಾ ದುರಂಧರಾಯ ನಮಃ

🚩🙏🪔🔱

2 weeks ago | [YT] | 7

VasanthaaHarish 🙏

ಸ್ನೇಹಿತರೇ , ನಾಳೆ #ದವನದ #ಹುಣ್ಣಿಮೆ ಸುಪ್ರಸಿದ್ಧ "#ಬೆಂಗಳೂರು #ಕರಗ " #ಹನುಮಜಯಂತಿ " ! ಚೈತ್ರಮಾಸದ " #ಚಿತ್ರಾಪೂರ್ಣಿಮೆ ಹಬ್ಬ! #ಚಿತ್ರಾಪೂರ್ಣಿಮೆಯಂದು ಕರಗಮಹೋತ್ಸವ ಮತ್ತು ದವನದ ಹುಣ್ಣಿಮೆಯಂದು #ಸವದತ್ತಿಯಲ್ಲಿ #ಎಲ್ಲಮ್ಮನ ತೇರುಜಾತ್ರೆ ವಿಶೇಷವಾಗಿ ನೆಡೆಯುತ್ತದೆ . ನಮ್ಮ ಬೆಂಗಳೂರಿನಲ್ಲಿ ಕರಗವು ಅತೀ ವಿಜೃಂಭಣೆಯಿಂದ ಅಂದಿನಿಂದಲೂ ನೆಡೆಯುತ್ತಾ ಬಂದಿದೆ - ಸಾವಿರಾರು ಸಂಖ್ಯೆಯಲ್ಲಿ ಸೇರುವ ಭಕ್ತಾದಿಗಳಿಂದ ಸಂಭ್ರಮದ ಕರಗದ ವೀಕ್ಷಣೆ ಆಗುತ್ತದೆ !
ಯಾವುದೇ ಹಬ್ಬಹರಿದಿನ ಜಾತ್ರೆ ತೇರುಗಳ ಬಗ್ಗೆ ತಿಳಿದಾಗಲೇ ಅದಕ್ಕೊಂದು ನಿಜವಾದ ಅರ್ಥ !!
#ಕರ್ನಾಟಕದಲ್ಲಿ ಕರಗ "ಪ್ರಸಿದ್ಧ ಜಾನಪದ ಆಚರಣೆಯಾಗಿದೆ " ಈ ಸಂದರ್ಭದಲ್ಲಿ ಆದಿಶಕ್ತಿ ಶ್ರೀ #ದ್ರೌಪದಿಯನ್ನು ವಹ್ನಿಕುಲ ಕ್ಷತ್ರಿಯ ( #ತಿಗಳ ಕ್ಷತ್ರಿಯ ) #ಜನಾಂಗದವರು ಕುಲದೇವತೆಯಾಗಿ ಆರಾಧಿಸುತ್ತಾರೆ .
ಶತಮಾನಗಳ ಇತಿಹಾಸ ಹೊಂದಿರುವ ವಿಶ್ವ ಪ್ರಸಿದ್ಧ ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯ ವಿದೆ ! ಕರಗ ಎಂದರೆ " #ಕುಂಭ " ಎಂದು ಅರ್ಥ ! ಕರಗದ ಒಂದೊಂದು ಅಕ್ಷರವೂ ಒದೊಂದು ಸಂಕೇತವನ್ನು ಹೊಂದಿದೆ -- ಕ -- ಕೈಯಿಂದ ಮುಟ್ಟದೆ , ರ- ರುಂಡದಮೇಲೆ ಧರಿಸಿ , ಗ- ಗತಿಸುವುದು ಅಂದರೆ ಗಿರಗಿರ ತಿರುಗುವುದು ಎಂಬ ಅರ್ಥವಿವರಣೆಯನ್ನು ಹೊಂದಿದೆ !! ಕರಗ ಹೊತ್ತವರು ಅನೇಕ ನಿಯಮಾಚರಣೆ ಮಾಡಿ ಭಕ್ತಿಯಿಂದ ಹೊತ್ತು ಗರಗರ ತಿರುಗುವ ಪರಿ ನಿಜವಾಗಲೂ ಅತ್ಯದ್ಭುತ ದೃಷ್ಯ !! ನಮ್ಮ ಬೆಂಗಳೂರು , #ಕೋಲಾರ ಜಿಲ್ಲೆಯಲ್ಲಿ ಈ ಕರಗ ವೈಭವದಿಂದ ನೆಡೆಯುತ್ತಾ ಬಂದಿದೆ .
ಇನ್ನು #ಚಿತ್ರಾಪೂರ್ಣಿಮೆಯ ವಿಶೇಷತೆ :- #ಇಂದು ಶ್ರೀ ಸತ್ಯನಾರಾಯಣ ಸ್ವಾಮಿಗೆ ಎಲ್ಲೆಡೆಯೂ ವಿಶೇಷವಾಗಿ ಪೂಜೆ ನೆಡೆಯುತ್ತದೆ ! ಇಂದು ದೇವರ ನೈವೇದ್ಯಕ್ಕೆ ಚಿತ್ರಾನ್ನ ಮೊಸರನ್ನ ಮಾಡಿ ಕೃಷ್ಣಾರ್ಪಣೆ ಮಾಡಿ ಬ್ರಾಹ್ಮಣರಿಗೆ ಸತ್ಯನಾರಾಯಣ ಪ್ರಸಾದದೊಡನೆ ದಕ್ಷಿಣೆ ತಾಂಬೂಲ ಸಮೇತ ಕೊಡುವ ಪದ್ಧತಿ ಕೆಲವರಲ್ಲಿ ಇದೆ ! ಇನ್ನು #ಹನುಮಜಯಂತಿ : --
ಚೈತ್ರ ಮಾಸದ #ಹುಣ್ಣಿಮೆಯಂದು #ಹನುಮಂತನು ಹುಟ್ಟಿದ ದಿವಸವೆಂದೇ ತಿಳಿಸಿದ್ದಾರೆ ! ಇದರ ಬಗ್ಗೆ ನಾನು ಹಿಂದೆಯೇ ಬರೆದಿದ್ದೆ -- #ಮಾರ್ಗಶೀರ ಮಾಸದಲ್ಲಿ ಬರುವುದು ಹನುಮದ್ ವ್ರತ , ಈ ಚೈತ್ರಮಾಸದಲ್ಲಿ ಬರುವುದು ಹನುಮಜಯಂತಿ ! ಚೈತ್ರ ಮಾಸದ ಹುಣ್ಣಿಮೆಯಂದು ಹನುಮಂತನ ದೇವಸ್ಥಾನಗಳಲ್ಲಿ ವಿಶೇಷ ಅಭಿಷೇಕ ಅಲಂಕಾರ ಪೂಜೆಪುನಸ್ಕಾರಗಳು ನೆಡೆಯುತ್ತದೆ , #ಒಟ್ಟಿನಲ್ಲಿ ಶ್ರೀ ರಾಮ ದೂತ ಭಕ್ತ ಶಿರೋಮಣಿ ಹನುಮನನ್ನು ಪೂಜಿಸಿ ಆರಾಧಿಸಿದರೆ ಆಯುರಾರೋಗ್ಯ , ವಿದ್ಯೆ , #ಶನಿದೋಷ ಪರಿಹಾರ , ಮನಃಶಾಂತಿ ಲಭಿಸುತ್ತದೆ ! ಇಂದು ಆಂಜನೇಯನ ದೇವಸ್ಥಾನಕ್ಕೆ ಹೋಗಿ ದರ್ಶನಪಡೆಯಲು ಆಗದಿದ್ದವರು ಮನೆಯಲ್ಲೇ ಶ್ರೀ ರಾಮನ ಜೊತೆ ಇರುವ ಹನುಮನ ಫೋಟೋ ಇಟ್ಟು ಪೂಜಿಸೋಣ , ಈ ಕಲಿಯುಗದಲ್ಲಿ ಸುಲಭವಾಗಿ ಒಲಿಯುವ ದೇವರೆಂದರೆ ಗಣಪತಿ ಮತ್ತು ಆಂಜನೇಯ ಎಂದೇ ಪ್ರತೀತಿ ಇದೆ !!
ಎಲ್ಲಿ ಹನುಮನೋ ಅಲ್ಲಿ ರಾಮನು , ಎಲ್ಲಿ ರಾಮನೋ ಅಲ್ಲಿ ಹನುಮನು ! ಹನುಮನ ಪ್ರಾಣವೇ ರಾಮ ! ಹನುಮನ ರೋಮ ರೋಮದಲ್ಲೂ ರಾಮನಾಮವೇ !!
ದೇವಾನು ದೇವತೆಗಳನ್ನೂ ಬಿಡದೆ ಕಾಡಿದ ಶನಿದೇವರಿಗೆ ಹನುಮನ ಹತ್ತಿರವೂ ಹೋಗಲಾಗಲಿಲ್ಲವಂತೆ !! ಅದಕ್ಕೇ #ಶನಿದೋಷವಿರುವವರು ನಿವಾರಣೆಗೆ ಆಂಜನೇಯನಿಗೆ ಪ್ರತೀಶನಿವಾರ ಎಳ್ಳಿನದೀಪ ಹಚ್ಚುವರು !
ಸ್ನೇಹಿತರೇ ಇಂತಹ ಅಪಾರ ಮಹಿಮಾವಂತ ಹನುಮನ ದೇವಸ್ಥಾನಕ್ಕೆ ಇಂದು ಹೋಗಿ ದರ್ಶನ ಪಡೆದು ಭಕ್ತಿಯಿಂದ ನಮನಸ್ಕರಿಸೋಣ , ಶ್ರೀರಾಮನ ಭಕ್ತ ಹನುಮನ ಕೃಪೆಗೆ ಪಾತ್ರರಾಗೋಣ ." ಜೈಮಾರುತಿ "
ಮಾವಿನಕಾಯಿ ಚಿತ್ರಾನ್ನ ಮೊಸರನ್ನ ಮಾಡಿ ಸತ್ಯನಾರಾಣ ಪ್ರಸಾದದೊಡನೆ ದೇವರಿಗೆ ನೈವೇದ್ಯ ಮಾಡಿ ಕೃತಾರ್ಥರಾಗೋಣ 🙏🪔🚩

2 weeks ago | [YT] | 14

VasanthaaHarish 🙏

#ತಾಳ್ಮೆ — ಜೀವನದ ಮಹಾಗುಣ....

ಜೀವನದಲ್ಲಿ ಯಶಸ್ಸು ಬೇಕು ಅಂದ್ರೆ ಅನೇಕ ಗುಣಗಳು ಬೇಕು ಎಂದು ನಾವು ಕೇಳುತ್ತೇವೆ.ಆದರೆ ಆ ಎಲ್ಲ ಗುಣಗಳಿಗೆ ಆಧಾರವಾಗಿರುವ ಒಂದು ಮಹತ್ವದ ಗುಣವೇ ತಾಳ್ಮೆ.ತಾಳ್ಮೆ ಅಂದ್ರೆ ಕೇವಲ ಮೌನವಾಗಿರುವುದಲ್ಲ…
ಅದು ಕಷ್ಟದ ಸಂದರ್ಭದಲ್ಲೂ ಮನಸ್ಸನ್ನು ಸಮತೋಲನ ದಲ್ಲಿಟ್ಟುಕೊಳ್ಳುವ ಶಕ್ತಿ.ಕೋಪ ಬರುವಾಗ ಅದನ್ನು ತಡೆದುಕೊಳ್ಳುವುದು,ಅಪಜಯ ಬಂದಾಗ ನಿಲ್ಲದೆ ಮುಂದುವರಿಯುವುದು,ಅವಮಾನ ಎದುರಾದರೂ ಮನಸ್ಸು ಕುಗ್ಗದಿರುವುದು.ಇವೇ ನಿಜವಾದ ತಾಳ್ಮೆಯ ಲಕ್ಷಣಗಳು.ತಾಳ್ಮೆ ಎಂದರೆ ಎಲ್ಲವನ್ನೂ ಸಹಿಸಬೇಕು ಅನ್ನುವುದಲ್ಲ.ಧರ್ಮಕ್ಕೆ ವಿರುದ್ಧವಾದದ್ದು,ಅನ್ಯಾಯ ವಾದದ್ದು ಆಗಿದ್ರೆ ಅಲ್ಲಿ ಮೌನ ತಾಳ್ಮೆ ಅಲ್ಲ, ಅದು ದುರ್ಬಲತೆ.ತಾಳ್ಮೆ ಧರ್ಮದೊಳಗೆ ಇರಬೇಕು,ಧರ್ಮಕ್ಕೆ ವಿರೋಧವಾದಾಗ ಧೈರ್ಯವಾಗಿ ನಿಲ್ಲಬೇಕು.
ಮನುಷ್ಯನಿಗೆ ಸಹಿಸುವ ಶಕ್ತಿ ಅಪಾರವಾಗಿದೆ.ಆದರೆ ಮನಸ್ಸು ಅಸ್ಥಿರವಾಗಿದ್ರೆ ಅದು ಕಡಿಮೆಯಾಗುತ್ತದೆ.
ಮನಸ್ಸು ಸ್ಥಿರವಾಗಿದ್ರೆ — ತಾಳ್ಮೆ ಹೆಚ್ಚುತ್ತದೆ.ಮನಸ್ಸು ಅಸ್ಥಿರವಾಗಿದ್ರೆ — ತಾಳ್ಮೆ ಕಡಿಮೆಯಾಗುತ್ತದೆ.ತಾಳ್ಮೆ ಹುಟ್ಟಿನಿಂದ ಬರುವುದಲ್ಲ,ಅದು ಅಭ್ಯಾಸದಿಂದ ಬೆಳೆಯುವ ಗುಣ.ಸಣ್ಣ ಸಣ್ಣ ಸಮಸ್ಯೆಗಳನ್ನು ಶಾಂತವಾಗಿ ಎದುರಿಸುವುದು.ನಾಮಸ್ಮರಣೆ ಮತ್ತು ಧ್ಯಾನ ಮಾಡುವುದು.ಆತುರವನ್ನು ಕಡಿಮೆ ಮಾಡುವುದು.ಪ್ರತಿ ದಿನ ಒಂದು ಸಣ್ಣ ಅಭ್ಯಾಸ ಮಾಡಿ:-ಕೋಪ ಬಂದಾಗ ತಕ್ಷಣ ಪ್ರತಿಕ್ರಿಯಿಸಬೇಡಿ.ಒಂದು ಕ್ಷಣ ತಡೆದು ಯೋಚಿಸಿ.
ನಂತರ ಮಾತಾಡಿ.ಈ ಸಣ್ಣ ವಿರಾಮವೇ ತಾಳ್ಮೆಯ ಆರಂಭ.ತಾಳ್ಮೆಯಿದ್ದವನಿಗೆ ಸಮಯವೇ ಸಹಾಯಕ
ವಾಗುತ್ತದೆ.ತಾಳ್ಮೆ ಎಂದರೆ ದುರ್ಬಲತೆ ಅಲ್ಲ.ತಾಳ್ಮೆ ಇರುವವನಿಗೆ ಸೋಲು ಇಲ್ಲ,ಯಾಕೆಂದರೆ ಅವನು ಸಮಯದೊಂದಿಗೆ ಗೆಲ್ಲುತ್ತಾನೆ.

3 weeks ago | [YT] | 3

VasanthaaHarish 🙏

ಅಯೋಧ್ಯ ಶ್ರೀ ರಾಮ್ ಮಂದಿರ #ಅಯೋಧ್ಯ #ayodhya #AyodhyaRamTemple #ayodyarammandir 🚩🚩🚩
ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ತೆರಳುವ ಸ್ನೇಹಿತರಿಗಾಗಿ, ಅಯೋಧ್ಯೆಯ ಕುರಿತು ಒಂದಿಷ್ಟು ಮಾಹಿತಿಗಳು...

ಮೊದಲಿಗೆ....ನೋಡುವ ಸ್ಥಳಗಳು :
#ಅಯೋಧ್ಯೆಯಲ್ಲಿ ಮೊದಲ ದರ್ಶನ ಹನುಮಂತನಿಗೇ ಅನ್ನೋ ನಂಬಿಕೆಯಿರೋ ಕಾರಣ, ಮೊದಲು...
1. #ಹನುಮಾನ್ ಗಢಿ ಮಂದಿರ ತಲುಪಿ ದರ್ಶನ ಮುಗಿಸಿ. ಇಲ್ಲಿಂದ ಹೊರ ಬಂದು ರಾಜಪಥ ಮಾರ್ಗದಲ್ಲಿ ಎಡಕ್ಕೆ ಚಲಿಸಿದಲ್ಲಿ ನೋಡಬೇಕಿರೋ ಅಷ್ಟೂ ಜಾಗಗಳೂ ಇದೇ ಹಾದಿಯಲ್ಲಿ ಸಿಗುತ್ತವೆ. ಹಾಗಾಗಿ ಗೈಡುಗಳ ಅವಶ್ಯಕತೆಯೂ ಇಲ್ಲ...
2. #ರಾಜದ್ವಾರ ಮಂದಿರ ( ಹನುಮಾನ್ ಮಂದಿರದ ಎದುರಲ್ಲೇ ಇದೆ)
3. #ಭರತ ಮಿಲಾಪ್ ಮಂದಿರ. ( 50mtr ಅಂತರ)
4. #ದಶರಥ ಮಹಲ್ ( 200mtr ಅಂತರ)
5. #ರಾಮಜನ್ಮಭೂಮಿ ಶ್ರೀರಾಮ ಮಂದಿರ ( 500mtr ದೂರದಲ್ಲಿದೆ)
6. #ಅರಬಿಂದೋ‌ ಆಶ್ರಮ. (ಶ್ರೀರಾಮಮಂದಿರದ Exit ಗೇಟ್ ಬಳಿ )
7. #ಸುಗ್ರೀವ ಕಿಲಾ ಮಂದಿರ. ( ಶ್ರೀರಾಮಮಂದಿರದ ಪ್ರವೇಶ ದ್ವಾರದಿಂದ 400mtr)
8. #ಕನಕಭವನ ( ಸೀತೆಗೆ ಕೈಕೇಯಿ ಉಡುಗೊರೆಯಾಗಿ ನೀಡಿದ ಮಹಲು. ದಶರಥ ಮಹಲಿನಿಂದ 200mtr ).
9. #ಚೋಟಿ‌ ದೇವ್‌ಕಾಲಿ ದೇವಸ್ಥಾನ.(900mtr from ಹನುಮಾನ್ ಗಢಿ)
10. #ರಾಮ್ ಕೀ ಪೈಡಿ, ಸರಯೂ ಘಾಟ್... (ಹನುಮಾನ್ ಮಂದಿರದಿಂದ 2km).
11. #ಗುಪ್ತಾರ್ ಘಾಟ್ (ಅಯೋಧ್ಯೆಯಿಂದ 10km ದೂರದಲ್ಲಿ ಸರಯೂ ನದಿ ದಂಡೆಯಲ್ಲಿರೋ ಈ ಘಾಟಿನಲ್ಲಿಯೇ ಜಲಸಮಾಧಿಯಾಗುವ ಮೂಲಕ ಶ್ರೀರಾಮ ತನ್ನ ಅವತಾರವನ್ನು ಮುಗಿಸಿದ್ದು ).
12. #ಬಡಿ‌ ದೇವ್‌ಕಾಲಿ ಮಂದಿರ, ಅಯೋಧ್ಯೆಯ ಕುಲದೇವತೆ. ( ಹನುಮಾನ್ ಗಢಿಯಿಂದ 5km )

ಕೆಲವೊಂದು ಗಮನಿಸಬೇಕಾದ ಅಂಶಗಳು...

ಬಹುತೇಕ ಜನರೆಲ್ಲಾ ಬೆಳಗ್ಗಿನ ಸಮಯದಲ್ಲಿ ದರ್ಶನ ಮುಗಿಸಿ ಊರುಗಳಿಗೆ ತೆರಳೋದ್ರಿಂದಾಗಿ, ಅಯೋಧ್ಯೆಯಲ್ಲಿಯೇ ತಂಗುವುದಾದಲ್ಲಿ ಸಂಜೆಯ ನಂತರದ ದರ್ಶನದ ಆಯ್ಕೆ ಮಾಡಿಕೊಳ್ಳೋದು ಉತ್ತಮ.
ಜನಸಂದಣಿ ಕಡಿಮೆಯಿರುತ್ತದೆ...

ಸಾಮಾನ್ಯವಾಗಿ #ಶ್ರೀರಾಮನ ದರ್ಶನಕ್ಕೆ ಕನಿಷ್ಟ ಎರಡು ಗಂಟೆಗಳು ತೆಗೆದುಕೊಳ್ಳುತ್ತದೆ.

ತುಂಬಾ ಬಿಗಿಬಧ್ರತೆಯಿರೋ ಕಾರಣ, ಮೊಬೈಲ್, ಇಯರ್ ಫೋನ್, #VIP Tickets ಬಿಡುತ್ತಾರೆ ಚಾರ್ಜರ್ ಕೇಬಲ್, ಸ್ಮಾರ್ಟ್ ವಾಚ್, ಪವರ್‌ಬ್ಯಾಂಕ್ ಇತ್ಯಾದಿ
ಎಲೆಕ್ಟ್ರಾನಿಕ್ ವಸ್ತುಗಳು, ಬ್ಯಾಗುಗಳು ಇತ್ಯಾದಿಗಳನ್ನು ಶ್ರೀರಾಮಮಂದಿರದೊಳಗೆ ಬಿಡುವುದಿಲ್ಲ. ಹಾಗಾಗಿ ಇವ್ಯಾವುದೂ ಜೊತೆಗೆ ಕೊಂಡೊಯ್ಯಬೇಡಿ. ಅಲ್ಲಿ #ಲಾಕರ್ ಗಳ ಸೌಲಭ್ಯವಿದ್ದರೂ ಇದಕ್ಕಾಗಿಯೇ ಗಂಟೆಗಟ್ಟಲೆ ಕಾಯಬೇಕಿಲ್ಲಿ.

ಪ್ರಸಾದಗಳು ನಮ್ಮಲ್ಲೆಲ್ಲಾ ಸಿಗುವಂತೆ ದೇವಸ್ಥಾನದ ಒಳಗೆಲ್ಲಾ ಕೌಂಟರ್‌ಗಳಲ್ಲಿ ಸಿಗೋದಿಲ್ಲ. ಹೊರಗಡೆಯಿರೋ ಅಂಗಡಿಗಳಲ್ಲಿ ಲಾಡು ಇತ್ಯಾದಿ ಖರೀದಿಸಿ ಕೊಂಡೊಯ್ದಲ್ಲಿ ಅದನ್ನು ದೇವರಿಗೆ ಸಮರ್ಪಿಸಿ ನಿಮಗೇ ವಾಪಸ್ ಕೊಡುತ್ತಾರೆ.
ಹೀಗೆ ಖರೀದಿಸುವಾಗ ಪಾದರಕ್ಷೆಗಳನ್ನೆಲ್ಲಾ ಆ ಅಂಗಡಿಗಳಲ್ಲೇ ಬಿಟ್ಟು, ಬರಿಗಾಲಲ್ಲೇ ಅಷ್ಟೂ ದರ್ಶನ ಮುಗಿಸಿ ಬಂದು ಧರಿಸೋದು ಉತ್ತಮ.

#ದಶರಥಮಹಲ್ ಹಾಗೂ ಕನಕಭವನ ಮಧ್ಯಾಹ್ನ 12ರಿಂದ 4pm ವರೆಗೂ ಮುಚ್ಚಿರುತ್ತವೆ.

ಸರಯೂ ಘಾಟಿನಲ್ಲಿ ಸಂಜೆ ಸೂರ್ಯಾಸ್ತದ ಸಮಯದಲ್ಲಿ ಸರಯೂ ಆರತಿ, ಇದು ಮುಗಿಯುತ್ತಿದ್ದಂತೆಯೇ ಎದುರಲ್ಲಿರೋ ರಾಮ್ ಕೀ ಪೈಡಿಯಲ್ಲಿ ಕಾರ್ಯಕ್ರಮಗಳಿರುತ್ತವೆ.
ಜೈ ಶ್ರೀ ಸೀತಾರಾಮ ಸಮೇತ ಎಲ್ಲರಿಗೂ ಆಶೀರ್ವಾದ ಅನುಗ್ರಹ ಇರಲಿ. ಮತ್ತೆ ಮತ್ತೆ ದರ್ಶನ್ ಭಾಗ್ಯ ನೀಡಲಿ ಎಲ್ಲರಿಗೂ ಜೈ ಶ್ರೀ ರಾಮ್ 🚩🚩🚩🚩🚩🚩🚩🚩🚩🚩🚩🚩🚩

3 weeks ago (edited) | [YT] | 8

VasanthaaHarish 🙏

#ಸ್ನೇಹಿತರೇ " #ಶ್ರೀ ರಾಮನವಮಿ ಹಬ್ಬ " #ಯುಗಾದಿ ಪಾಡ್ಯದಿಂದ #ನವಮಿಯವರೆಗೂ ಒಂಬತ್ತು ದಿವಸಗಳ ಕಾಲ ಎಲ್ಲಾ ರಾಮದೇವರ ದೇವಸ್ಥಾನಗಳಲ್ಲಿ ಪ್ರತೀದಿವಸವೂ ವಿಶೇಷ ಪೂಜೆ ಅಲಂಕಾರ ಮಾಡಿ ಸಿಂಗರಿಸಿ ಪ್ರತೀದಿನ ಸಂಜೆ ರಾಮೋತ್ಸವದ ಅಂಗವಾಗಿ ಅನೇಕ ಹಿರಿಯ ಕಿರಿಯ ಸಂಗೀತ ಕಲಾವಿದರುಗಳಿಂದ ಸಂಗೀತಕಛೇರಿಗಳನ್ನು ಏರ್ಪಡಿಸಿ ಉತ್ಸವಕ್ಕೆ ಹೆಚ್ಚಿನ ಮೆರುಗನ್ನು ನೀಡುತ್ತಾರೆ !!
ನಮ್ಮ #ಹಿಂದೂ #ಪಂಚಾಂಗ ಪ್ರಕಾರ ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದು ಪುನರ್ವಸು ನಕ್ಷತ್ರದಲ್ಲಿ ರಾಮಚಂದ್ರಪ್ರಭುವಿನ ಜನ್ಮವಾಯಿತು , " ರಾಮ " ಎಂಬ ಹೆಸರಿನಲ್ಲಿರುವ ಮಹತ್ವ :- ಓಂ ನಮೋ ನಾರಾಯಣ ಎಂಬ #ಅಷ್ಟಾಕ್ಷರೀ ಮಂತ್ರದಿಂದ - " ರಾ " ಎಂಬ ಅಕ್ಷರವನ್ನು ಮತ್ತು " ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರದಿಂದ " ಮ "ಎಂಬ ಅಕ್ಷರ ತೆಗೆದುಕೊಂಡು ವಷಿಷ್ಠರು " ರಾಮ " ಎಂಬ ಹೆಸರನ್ನಿಟ್ಟರಂತೆ! ರಾಮ ಎನ್ನುವುದು ಬರೀ ನಾಮವಲ್ಲ " ಮಹಾ ಮಂತ್ರ " ಎಂದೂ ಸಾರಿದರು --( ರಾಮ ಮಂತ್ರವ ಜಪಿಸೋ ಹೇ ಮನುಜಾ) -- ಕಲ್ಲಿನ ಬಂಡೆಗಳ ಮೇಲೆ ರಾಮ ರಾಮ ಎಂಬ ನಾಮ ಬರೆದು ಅದನ್ನು ಸಮುದ್ರಕ್ಕೆ ಎಸೆದು ಸೇತುವೆಯನ್ನೇ ಕಟ್ಟಿದವು ಕಪಿಗಳ ಹಿಂಡು ಎಂಬುದನ್ನು ಓದಿದ್ದೇವೆ !!! ಇನ್ನು ಸದಾ ರಾಮ ನಾಮ ಜಪಿಸುವ ಆಂಜನೇಯನೊಳಗೆ ಶನಿಮಹರಾಜನಿಗೆ ಪ್ರವೇಶವೇ ಇಲ್ಲವಂತೆ ಎಂದಿಗೂ !! ರೋಮ ರೋಮದಲ್ಲೂ ರಾಮ ನಾಮ ಜಪಿಸುವ ಮಹಾ ಭಕ್ತ ಹನುಮಂತ ! ಆದ್ದರಿಂದ ಶನಿದೋಷ ಪರಿಹಾರ ಬಯಸುವವರು - ಆಂಜನೇಯದೇವಸ್ಥಾದಲ್ಲಿ ಎಳ್ಳಿನ ಬತ್ತಿ ದೀಪಹಚ್ಚಿ ನಮಸ್ಕರಿಸಿ ಪರಿಹಾರ ಪಡೆಯ ಬೇಕು ಎನ್ನುವರು !!
ಇಂದು ದೇಶದೆಲ್ಲೆಡೆಯೂ ರಾಮನವಮಿ ಆಚರಿಸುತ್ತಾರೆ - ಹಬ್ಬವಾಗಿ ಆಚರಿಸದೇ -- ಇಂದು ಭಕ್ತರು ಉಪವಾಸದ ದಿವಸವಾಗಿ ಆಚರಿಸುತ್ತಾರೆ -- ಸುಡುಬೇಸಿಗೆಯಲ್ಲೂ ಎಲೆಲ್ಲೂ ಮಲ್ಲಿಗೆ ಸಂಪಿಗೆ ಘಮಘಮಿಸುವ ಹೂವಿನ ಪರಿಮಳ , ಮಾವು , ಬಾಳೆ , ಬನಾಸ್ಪತ್ರೆ , ಬೇಲದ ಹಣ್ಣುಗಳ ಸುವಾಸನೆ , -- ಮಾರ್ಕೆಟ್ ಎಲ್ಲಾ ಸುತ್ತಿ ಮಾವಿನ ಚಿಗುರಿನ ಎಲೆಗಳು ಬಾಳೆಕಂದು , ಬಗೆಬಗೆಯ ಹೂವು ಹಣ್ಣು ಗಳನ್ನು ತಂದು - ಬೆಳಗ್ಗೆ ಬೇಗ ಅಂಗಳ ಮುಂಬಾಗಿಲು ಸಾರಿಸಿ ಸುಂದರ ರಂಗವಲ್ಲಿ ಇರಿಸಿ ತೋರಣ ಕಟ್ಟಿ ಹೊಸಲಿಗೆ ಅರಿಶಿನಕುಂಕುಮವಿರಿಸಿ - ಶುದ್ಧರಾಗಿ - ಮಂಟಪ ಕಟ್ಟುವ ಜಾಗವನ್ನು ಶುದ್ಧಿಗೊಳಿಸಿ - ಮಣೆಹಾಕಿ ರಾಮದೇವರ ಪಟವನ್ನಿಟ್ಟು ಸುಂದರವಾಗಿ ಮಲ್ಲಿಗೆ ಹಾರದಿಂದ ಅಲಂಕರಿಸಿ ಭಕ್ತಿಯಿಂದ ಪೂಜೆಮಾಡಿ ನೈವೇದ್ಯ ಕ್ಕೆ ಪಾನಕ , ಬೇಲದ ಹಣ್ಣಿನ , ನಿಂಬೆಹಣ್ಣಿನ , ಕರಬೂಜ ಹಣ್ಣಿನ , ಪಾನಕ ಮಾಡಿಟ್ಟು + ನೀರು ಮಜ್ಜಿಗೆ + ಹೆಸರುಬೇಳೆ , ಕಡಲೆಬೇಳೆ ಕೋಸಂಬರಿ + ಹಣ್ಣಿನ ರಸಾಯನ + ಗೊಜ್ಜವಲಕ್ಕಿ + ಕೇಸರಿಬಾತ್ + ಗೋಧಿ ಹಿಟ್ಟಿನ ಉಂಡೆ ( ರಾಮನಿಗೆ ಬಹಳ ಪ್ರಿಯವಾದದ್ದು ಪಣ್ಯಗಾರದ ಉಂಡೆ ) ಮಾಡಿಟ್ಟು ಭಕ್ತಿಯಿಂದ ರಾಮನಿಗರ್ಪಿಸಿ , ರಾಮ ಮಂತ್ರದ ಅಷ್ಟೋತ್ತರ , ಸಹಸ್ರನಾಮ , ಓದಿ, ಶುದ್ಧ ಬ್ರಹ್ಮ ಪರಾತ್ಪರ ರಾಮ ಭಜನೆ ಮಾಡಿ , ಮಂಗಳಾರತಿ ಮಾಡಿ ಅಕ್ಕ ಪಕ್ಕದ ಮನೆಯವರನ್ನೆಲ್ಲಾ ಕರೆದು ತೀರ್ಥಪ್ರಸಾದ , ಪಾನಕ ಮಜ್ಜಿಗೆ , ಕೋಸಂಬರಿ ಎಲ್ಲವನ್ನೂ ಧಾರಾಳವಾಗಿ ಹಂಚಬೇಕು -- ಬಿಸಿಲಿಗೆ ದಣಿದವರ ದೇಹ ತಣ್ಣಗಾಗುವುದರ ಜೊತೆ + ರಾಮನಾಮದಿಂದ ಮನಸ್ಸೂ ಪ್ರಶಾಂತ ವಾಗುತ್ತದೆ .
ಇಂದು ಎಲ್ಲಾ ದೇವಸ್ಥಾನಗಳಲ್ಲಿ , ಮುಖ್ಯವಾಗಿ ಆಂಜನೇಯಸ್ವಾಮಿ , ರಾಮದೇವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ , ಪಲ್ಲಕ್ಕಿ ಉತ್ಸವ , ಭಜನೆ , ಮೆರವಣಿಗೆ ಎಲ್ಲಾ ಜೋರಾಗಿರುತ್ತದೆ -- ದಾರಿ ದಾರಿಯಲ್ಲೂ ತೋರಣಕಟ್ಟಿ ಶಾಮಿಯಾನ ಹಾಕಿ ಅಂಗಡಿಯವರು ಅನೇಕ ವ್ಯಾಪಾರಸ್ಥರು ದೊಡ್ಡ ದೊಡ್ಡ ಬ್ಯಾರೆಲ್ ಗಳಲ್ಲಿ ಪಾನಕ , ಹೆಸರಬೇಳೆ ಮಾಡಿ ಎಲ್ಲಾ ಜನರಿಗೂ ಸಂಭ್ರಮದಿಂದ ಹಂಚುತ್ತಾರೆ !!! ಜನರೆಲ್ಲಾ ದೊಡ್ಡ ದೊಡ್ಡ ಬಾಟೆಲ್ ಗಳಲ್ಲಿ ಪಾನಕ ಹೊಟ್ಟೆಗೆ ಸೇರಿಸಿ ರಾಮನಾಮ ಹಾಡುತ್ತಾ ಕುಣಿಯುತ್ತಾ ಉತ್ಸವದಲ್ಲಿ ಸಾಗುವ ದೃಶ್ಯ ನೋಡುವುದೇ ಚಂದ - ಅದರಲ್ಲೂ ಹಳ್ಳಿಯಲ್ಲಿ ಇನ್ನೂ ಜೋರು -!! ಈಚೀಚೆಗೆ ನಮ್ಮ ಬೆಂಗಳೂರಿನಲ್ಲೇನೂ ಕಡಿಮಯಿಲ್ಲ !! ಪಾನಕದ ಹೊಳೆಯನ್ನೇ ಎಲ್ಲಾ ದೇವಸ್ಥಾನಗಳಲ್ಲಿ ಹರಿಸುತ್ತಾರೆ, ಸಂತಸ ಸಂಭ್ರಮ ಪಡುತ್ತಾ ರಾಮನವಮಿ ಆಚರಿಸುತ್ತಾರೆ !!!
#ಸ್ನೇಹಿತರೇ ನಮ್ಮ ಭಾರತೀಯರಲ್ಲಿ" ರಾಮ ಕೃಷ್ಣರು ಆದರ್ಶ ಪುರುಷರು " - ಶ್ರೀ ರಾಮನು ನಡೆದಂತೆ ನಡೆ ಮತ್ತು ಶ್ರೀ ಕೃಷ್ಣ ನುಡಿದಂತೆ ನಡೆ " ಎಂದು ಹಿರಿಯರು ಹೇಳಿರುವುದು , ಧೈರ್ಯ , ಕರ್ತವ್ಯನಿಷ್ಢೆ , ಮಾತಾ ಪಿತೃವಾಕ್ಯ ಪರಿಪಾಲನೆ , ರಾಜ್ಯಾಡಳಿತ , ಪ್ರಜಾಪರಿಪಾಲನೆ , ಕರ್ತವ್ಯ ,ಗೌರವ , ಏಕಪತ್ನೀವ್ರತ , ಸೋದರಪ್ರೇಮ ಹೀಗೇ ಅನೇಕ ವಿಚಾರದಲ್ಲಿ ಸರ್ವಕಾಲಕ್ಕೂ ರಾಮಚರಿತೆ ಅತ್ಯಮೂಲ್ಯ ಕೊಡುಗೆಯಾಗಿದೆ !!! ಇಂತಹಾ ಆದರ್ಶ ಮರ್ಯಾದಾ ಪುರುಶೋತ್ತಮನಾದ ರಾಮನ ಜನ್ಮದಿನವನ್ನು ನಾವೂ ಸಂತೋಷವಾಗಿ ಭಕ್ತಿಯಿಂದ ಆಚರಿಸಿ ಅವನ ಕೃಪೆಗೆ ಪಾತ್ರರಾಗೋಣ ಇಂದು ಪ್ರತಿಯೊಬ್ಬರೂ ಕೊನೆಯ ಪಕ್ಷ ನೂರೊಂದು ಬಾರಿಯಾದರೂ ರಾಮ ನಾಮ ಬರೆಯಿರಿ ಅದರಲ್ಲಿ ಅಡಗಿರುವ ಶಕ್ತಿಯ ಅರಿವನ್ನು ಪಡೆಯಿರಿ ..,.ಎಲ್ಲರ ಮನೆಯಲ್ಲಿ ಗೊಜ್ಜವಲಕ್ಕಿ , ಪಾನಕ ,ಕೋಸಂಬರಿ ಸಮಾರಾಧನೆ ರಾಮಭಜನೆ ಯೊಂದಿಗೆ ಜೋರಾಗಿ ನೆಡೆಯಲಿ ಎಂದು ಹಾರೈಸುತ್ತೇನೆ. "ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ಬೆರೆಸಿ ವಿಠಲನಾಮ ತುಪ್ಪವ ಬೆರೆಸಿ ಬಾಯಿಚಪ್ಪರಿಸಿರಿ" !!!
" ಶ್ರೀ ರಾಮ ಜಯರಾಮ ಜಯ ಜಯ ರಾಮ "
🙏🚩🪔

3 weeks ago | [YT] | 6

VasanthaaHarish 🙏

#ಬ್ರಾಹ್ಮಣರಲ್ಲಿ ಊಟಕ್ಕೆ ಕುಳಿತಾಗ
#ಚಿತ್ರಾಹುತಿ ನೀಡುವ ಕ್ರಮ. ಒಂದಿಷ್ಟು ಚಿಂತನೆ.------
ಚಿತ್ರಾಹುತಿ ನೀಡುವ ಕಾರಣ-----

*#ಭೋಜನವೆಂಬುದು ಒಂದು ಯಜ್ಞರೂಪ*

#ಸನಾತನ ಕಾಲದಿಂದಲೂ #ಬ್ರಾಹ್ಮಣರು ಪಶು ಪಕ್ಷಿ ಗಳಂತೆ ಆಹಾರವನ್ನು ಎಲೆ ಅಥವ ತಟ್ಟೆಯಲ್ಲಿ ಹಾಕಿದೊಡನೇ ತಿನ್ನಲು ಪ್ರಾರಂಭಿಸುವುದಿಲ್ಲ ..ಅವರು ಊಟವನ್ನು ಒಂದು ಯಜ್ಞ ಎಂದು ಭಾವಿಸುತ್ತಾರೆ. ಪಂಡಿತರಿಂದ ಒಬ್ಬ ಸಾಮಾನ್ಯ ಬ್ರಾಹ್ಮಣ (ಗೃಹಸ್ತರಾದಿ)
ಮೊದಲಾಗಿ ಎಲ್ಲರೂ ಭೋಜನವನ್ನು ಯಜ್ಞದಂತೆ ಆಚರಿಸಿದರೆ ದೇಹದ ಮತ್ತು ಮನಸ್ಸಿನ ಆರೋಗ್ಯ ಭಾಗ್ಯ ರೂಪದಲ್ಲಿ ನಮ್ಮನ್ನು ರಕ್ಷಿಸುತ್ತದೆ

#ನಮ್ಮ ವೈದಿಕ ಚಿಂತನೆಯಲ್ಲಿ ಬ್ರಹ್ಮಾಂಡದಿಂದ ಪಿಂಡಾಂಡದವರೆಗೆ ಯಜನ ಕ್ರಿಯೆಯ ಪರಿಕಲ್ಪನೆಯಿದೆ. ಯಜ್ಞವೆಂಬುದು ಕೇವಲ ಅಗ್ನಿಕುಂಡದಲ್ಲಿ ಗೈಯ್ಯುವ ಹವಿರ್ಭರಣಕ್ಕೆ ಮಾತ್ರ ಸೀಮಿತವಲ್ಲ. #ನಮ್ಮ ದೇಹದಲ್ಲಿ ಅಂತರ್ಗತವಾಗಿರುವ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ ಪಂಚಪ್ರಾಣಗಳಿಗೆ ಶಕ್ತಿಯನ್ನು ತುಂಬಲು, ಯಾಗಕುಂಡದಲ್ಲಿ ಮಾಡುವ ಯಜ್ಞದಂತೆ ಭೋಜನವೂ ಒಂದು ಯಜ್ಞವಾಗಿದೆ.

ಈ ಕಾರಣದಿಂದಲೇ ಅದು '#ಪ್ರಾಣಾಗ್ನಿಹೋತ್ರ'ವೆಂದು ಕರೆಯಲ್ಪಡುತ್ತದೆ. ಈ ಪ್ರಾಣಾಗ್ನಿಹೋತ್ರವೆಂಬ ಯಜ್ಞಕ್ಕೆ ಜಠರವೇ ಅಗ್ನಿಕುಂಡ, ನಾವು ಸೇವಿಸುವ ಆಹಾರವೇ ಹವಿಸ್ಸು, ಆಹಾರವನ್ನು ಅರಗಿಸಿಕೊಳ್ಳುವ ಶಕ್ತಿಯೇ ಅಗ್ನಿ.
#ಅಗ್ನಿ ನಾವು ಸೇವಿಸುವ ಆಹಾರವನ್ನು ಪಚನಗೈದು ಶರೀರಕ್ಕೆ ಶಕ್ತಿಯನ್ನು, ತೇಜಸ್ಸನ್ನು ಒದಗಿಸುವುದರಿಂದ ಅದು 'ಪಾಚಕಾಗ್ನಿ' . ಈ ಪಾಚಕಾಗ್ನಿಯು ಜಠರಾಗ್ನಿ, ಉದರಾಗ್ನಿ, ಕೋಷ್ಠಾಗ್ನಿ ಮುಂತಾದ ಪ್ರಾಸಂಗಿಕ ನಾಮಧೇಯಗಳಿಂದ ಕರೆಯಲ್ಪಟ್ಟರೂ ಅದು ಗೀತೆಯಲ್ಲಿ ವಿವರಿಸಿದಂತೆ '#ಅಹಂ ವೈಶ್ವಾನರೊ ಭುಂಕ್ತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ' ಎನ್ನುವ ವೈಶ್ವಾನರನೆಂದು ಕರೆಯಲ್ಪಡುತ್ತದೆ.

ಭೋಜನಯಜ್ಞವೆಂಬ ಆತ್ಮಯಜ್ಞಕ್ಕೆ ಜೀವಾತ್ಮನೇ ಯಜ್ಞಪತಿ. ಯಜ್ಞಸಾಧನವಾದ ಆಹಾರರೂಪಿ ಹವಿಸ್ಸನ್ನು ನಿರ್ಮಿಸುವವನು, ಭುಂಜಿಸುವವನು ಪರಮಾತ್ಮನಾದುದರಿಂದ ಅವನೇ ಯಜ್ಞೀ, ಯಜ್ಞಪತಿ, ಯಜ್ಞಾಂಗ, ಯಜ್ಞವಾಹನ, ಯಜ್ಞಸಾಧನ. ಈ ಕಾರಣಕ್ಕಾಗಿಯೇ ಭೋಜನ ಪ್ರಾರಂಭದ ಮೊದಲು 'ಬ್ರಹ್ಮಾರ್ಪಣ'ವೆಂಬ ಪರಿಕಲ್ಪನೆ.

*#ಪಚಾಮ್ಯನ್ನಂ ಚತುರ್ವಿಧಮ್* : ನಾವು ಸೇವಿಸುವ ಆಹಾರವನ್ನು ಭಕ್ಷ (ಕರಿದ ಅಥವಾ ವಿಶೇಷವಾದ ತಿಂಡಿ ತಿನಸು), ಭೋಜ್ಯ (ಕೈತುತ್ತಿಗೊದಗುವ ಖಾದ್ಯ), ಲೇಹ್ಯ ( ನಾಲಿಗೆಯಲ್ಲಿ ನೆಕ್ಕಿ ಸವಿಯುವ ಪದಾರ್ಥ), ಚೋಷ್ಯ (ಒಳರಸವನ್ನು ಹೀರಿ ಸವಿಯುವ ಖಾದ್ಯ)ಗಳೆಂದು ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ. ಇದರೊಂದಿಗೆ ನಾವು ಸೇವಿಸುವ ದ್ರವರೂಪದ ಪಾನೀಯಗಳೂ ಸೇರಿದರೆ ಅದು #ಪಂಚಭಕ್ಷವಾಗುತ್ತದೆ. ಈ ಭೋಜನ ಸಾಮಗ್ರಿಗಳೇ ಪಾಚಕಾಗ್ನಿಗೆ ನೀಡುವ ಹವಿಸ್ಸುಗಳು ಮತ್ತು ಇವುಗಳ ಸೇವನೆಯ ವ್ಯವಸ್ಥಿತ ರೂಪವೇ ಭೋಜನ ವಿಧಿಯೆಂಬ ಯಜ್ಞ.

*#ಶುಚಿತ್ವ*
ಈ ಪ್ರಾಣಾಗ್ನಿಹೋತ್ರಕ್ಕೆ ಜಠರವೆಂಬ ಯಜ್ಞಕುಂಡದಲ್ಲಿ ಕಾಲಕಾಲಕ್ಕೆ ಪಾಚಕಾಗ್ನಿಯನ್ನು ಸ್ಥಾಪಿಸಿಕೊಳ್ಳುವ ನಮ್ಮ ದೇಹವೇ #ಯಜ್ಞಶಾಲೆ. ಸ್ನಾನಾದಿ ನಿತ್ಯಕರ್ಮಗಳ ಮೂಲಕ ದೇಹದ ಬಹಿರಂಗಶುದ್ಧಿ ಮತ್ತು ಭಗವನ್ನಾಮ ಸ್ಮರಣೆಯ ಮೂಲಕ ಅಂತರಂಗ ಶುದ್ಧಿ ಮತ್ತು ಪ್ರಸನ್ನವಾದ ಮನೋಸ್ಥಿತಿ, ಪ್ರಶಾಂತ ನಿರ್ಮಲ ಪರಿಸರ ಭೋಜನವಿಧಿಗೆ ಅವಶ್ಯ. ಶುದ್ಧವಾದ ಬಾಳೆಎಲೆಯಲ್ಲಿ ನೆಲದ ಮೇಲೆ ಕುಳಿತು ಮನೆಮಂದಿಯೊಂದಿಗೆ ಭೋಜನವೆಂಬ ಯಜ್ಞವನ್ನು ಕೈಗೊಳ್ಳಬೇಕು.

#ಭೋಜನ ಸ್ವೀಕಾರಕ್ಕೂ ಮೊದಲು

1. *#ಪರಿಷಿಂಚನೆ*
ಎಲ್ಲಾ ಪದಾರ್ಥ ವನ್ನು ಬಡಿಸಿದ ನಂತರ ಮೊದಲು ಕೈಯಲ್ಲಿ ನೀರು ತೆಗೆದುಕೊಂಡು ಗಾಯತ್ರಿ ಮಂತ್ರದಿಂದ ಪ್ರೋಕ್ಷಣೆ ಮಾಡುವುದು:
ಓಂ ಭೂರ್ಭುವಃ ಸ್ವಃ | ಸತ್ಯಂ ತ್ವರ್ತೇ ನ ಪರಿಷಿಂಚಾಮಿ || (ಹಗಲಿಗೆ)
ಋತಂ ತ್ವಾ ಸತ್ಯೇನ ಪರಿಷಿಂಚಾಮಿ ||(ರಾತ್ರಿಗೆ)
ವಿಷ್ಣೋರನ್ನಂ ರಕ್ಷಸ್ವ

#ಈ ಮಂತ್ರ ಹೇಳಿಕೊಂಡು ಪ್ರದಕ್ಷಿಣಾಕಾರವಾಗಿ ಬಾಳೆಎಲೆಯ ಸುತ್ತ ವೃತ್ತಾಕಾರದಲ್ಲಿ ನೀರು ಸುತ್ತುಗಟ್ಟುವದು.
ಇದುವೇ ಪರಿಷಿಂಚನೆ
ಪರಿಸಿಂಚನ ಎಂದರೆ
#ನಮ್ಮ ಆಡುನುಡಿಯಲ್ಲಿ ಬಹಳ ಸರಳವಾಗಿ ನಾವಿದನ್ನು ಸುತ್ತುಗಟ್ಟುವುದು ಎನ್ನುತ್ತೇವೆ. ಏನನ್ನು ಸುತ್ತುಗಟ್ಟುವುದು ಮತ್ತು ಯಾಕಾಗಿ ಸುತ್ತುಗಟ್ಟುವುದು ಎಂಬ ಅರಿವಿಲ್ಲದೆ ನಡೆಸುವ ಈ ಕ್ರಿಯೆ ಬ್ರಾಹ್ಮಣರು ಸುತ್ತುಗಟ್ಟದೆ ಉಣ್ಣುವುದಿಲ್ಲ ಎಂಬಷ್ಟರ ಮಟ್ಟಿಗೆ ಯಾಂತ್ರಿಕವಾಗಿಯೇ ಉಳಿದಿದೆ. ಸೇಚನ, ಸಿಂಚನ ಎಂಬ ಶಬ್ದಗಳು ನೀರನ್ನು ಚಿಮುಕಿಸುವ ಕ್ರಿಯೆಯನ್ನು ಸೂಚಿಸುವಂತಹವುಗಳು. ಈ ಮೊದಲೇ ಜಲಪ್ರೋಕ್ಷಣೆಗೊಂಡು ಶುದ್ಧೀಕರಿಸಿದ ಬಾಳೆಎಲೆಯ ಮೇಲೊ ಬಡಿಸಿದ ಅನ್ನದ ಸುತ್ತ ಎಡದಿಂದ ಬಲಕ್ಕೆ ಪ್ರದಕ್ಷಿಣಾಕಾರದಲ್ಲಿ #ಅಭಿಮಂತ್ರಿತ ಜಲವನ್ನು '#ಸತ್ಯಂತ್ವರ್ತೇನ ಪರಿಷಿಂಚಾಮಿ' ಎಂದು ಉಚ್ಚರಿಸುತ್ತ ಪರಿಸಿಂಚನ ಮಾಡಬೇಕು. ಇದರರ್ಥ 'ಸತ್ಯ' (ಭಗವಂತ) ಮತ್ತು 'ಋತ' (ಧರ್ಮ ಮತ್ತು ನ್ಯಾಯ)ವನ್ನು ಸ್ಮರಿಸಿ ಈ ಅನ್ನವನ್ನು ಪರಿಷೇಚನ ಮಾಡುತ್ತೇನೆ. ನಾನು ತಿನ್ನುವ ಈ ಅನ್ನಕ್ಕೆ ಪರಮಾತ್ಮನ ಮತ್ತು ಸತ್ಯಧರ್ಮಗಳ ರಕ್ಷೆಯಿದೆ. ಈ ಪರಿಸಿಂಚನವೆಂಬ ಕ್ರಿಯೆ ನಾನು ಈ ಅನ್ನವನ್ನು ಸತ್ಯ ಮತ್ತು ಧರ್ಮಗಳ ನೆಲೆಯಲ್ಲಿ ಭಗವಂತನ ಕೃಪೆಯಿಂದ ಗಳಿಸಿದ್ದೇನೆ ಎಂಬ ಘೋಷಣೆಯೂ ಹೌದು.

2) #*ಚಿತ್ರಾಹುತಿ* ಹವಿಸ್ಸು ಸಮರ್ಪಣೆ
ಬಾಳೆ ಎಲೆಯ ಬಲ ಭಾಗದಲ್ಲಿ ಪ್ರಾರಂಭ ಮಾಡಿ ಯಮಾದಿ ದೇವತೆಗಳಿಗೆ ಹವಿಸ್ಸು ಸಮರ್ಪಣೆ.
ಓಂ ಚಿತ್ರಾಯ ಸ್ವಾಹಾ |
ಓಂ ಚಿತ್ರಗುಪ್ತಾಯ ಸ್ವಾಹಾ |
ಓಂ ಯಮಾಯ ಸ್ವಾಹಾ |
ಓಂ ಯಮ ಧರ್ಮಾಯ ಸ್ವಾಹಾ |
ಈ ನಾಲ್ಕು ಮಂತ್ರದಿಂದ

#ಕೆಳಗಿನಿಂದ ಮೇಲಕ್ಕೆ ಉದ್ದ ನೆಟ್ಟಗೆ ಸಾಲಾಗಿ ನಾಲ್ಕು ಸಲ ಕಿಂಚಿತ್ ಅನ್ನ ಇಡುವುದು

ಚಿತ್ರಾಯ ನಮ:
ಚಿತ್ರಗುಪ್ತಾಯ ನಮ:
ಯಮಾಯ ನಮ:
ಯಮಧರ್ಮಾಯ ನಮ:

#ಈ ನಾಲ್ಕು ಮಂತ್ರದಿಂದ
ಕೆಳಗಿನಿಂದ ಮೇಲಕ್ಕೆ ಉದ್ದ ಸಾಲಾಗಿ ನಾಲ್ಕು ಕಡೆಗಳಲ್ಲಿಟ್ಟ ಅನ್ನದ ಮೇಲೆ ಕಿಂಚಿತ್ ನೀರು ಬಿಡುವುದು
#ಚಿತ್ರಾಹುತಿ ಎಂದರೆ
ಎಲೆಯ ಬಲತುದಿಯಲ್ಲಿ ನೀರಿನಿಂದ ಗೆರೆಯೆಳೆದು ನಾಲ್ಕು ಅನ್ನದ ಸಣ್ಣ ತುತ್ತುಗಳನ್ನಿರಿಸುವುದೇ ಚಿತ್ರಾಹುತಿ. ಈ ಚಿತ್ರಾಹುತಿಯನ್ನು ನೀಡುವಾಗ ಭೋಜನವೂ ಒಂದು ಯಜ್ಞವಿಧಿಯಂತೆ ಇದ್ದು, ಯಜ್ಞಕರ್ಮದಲ್ಲಿ ಪ್ರಧಾನಹೋಮ ಅಥವಾ ಪೂರ್ಣಾಹುತಿಗೆ ಮೊದಲು ಉಪದೇವತೆಗಳಿಗೆ ನೀಡುವ ಬಲಿಯ ಪ್ರತೀಕದಂತೆ ಈ ಚಿತ್ರಾಹುತಿ.

3)'#ಆಪೋಷನ'ವೆಂದರೆ ನೀರನ್ನು ಗುಟುಕಿಸುವುದು ಎಂದರ್ಥ. ನೀರು ನಮಗೆ ಬದುಕನ್ನು ನೀಡುವಂತಹದು. ಅದು ಅಮೃತ ಸಮಾನ. ಹಾಗಾಗಿ ನಾವು ತಿನ್ನುವ ಈ ಅನ್ನಕ್ಕೆ ಅಮೃತದ ಸವಿಯಿರಲಿ ಎಂಬ ಸಂಕಲ್ಪದೊಂದಿಗೆ ಅಮೃತೋಪರಣಮಸೀ ಸ್ವಾಹಾಃ' ಎಂದು ಆಪೋಷನಗೈಯ್ಯಬೇಕು.
4)#ಅಭಿಘಾರ :
ಅಭಿಘಾರವೆಂದರೆ ನೈವೇದ್ಯಕ್ಕಾಗಿ ಹಾಕುವ ತುಪ್ಪ. ಇದು ಆಹಾರವನ್ನು ಸ್ವಾದಿಷ್ಠವಾಗಿ ಮಾಡುತ್ತದೆ. ಯಜ್ಞದಲ್ಲಿ ಹವಿಸ್ಸಿನ ಮೇಲೆ ತುಪ್ಪವನ್ನು ಹನಿಸುವಂತೆ ಈ ಭೋಜನ ಯಜ್ಞದಲ್ಲಿ ಈ ಅಭಿಘಾರ.

5) *#ಪ್ರಾರ್ಥನೆ*
ಬಲ ಕೈಲಿ ನೀರು ಹಿಡಿದುಕೊಂಡು ಈ ಕೆಳಗಿನ ಮಂತ್ರ ಪ್ರಾರ್ಥನೆ(ಅಭಿಮಂತ್ರಣೆ) ಮಾಡಿ
ಆ ನೀರನ್ನು ಶಬ್ದ ಮಾಡದೆ ಕುಡಿಯಬೇಕು.

'#ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ '
ಉತ್ತಿಷ್ಠ, ಲೋಹಿತ, ಪಿಂಗಲಾಕ್ಷ ,ಅಜಪುರುಷ, ಅಮೃತಋಷೀ, ಸತ್ಯೋದೇವತಾ,ಗಾಯತ್ರೀ ಛಂಧಃ,
ಅಮೃತೋಪಸ್ತರಣಮಸಿ ಸ್ವಾಹಾ ||

6) *#ಅನ್ನಪ್ರಾಶನ* (ಸ್ವಾಹಾಕಾರ)

ಓಂ ಪ್ರಾಣಾಯ ಸ್ವಾಹಾ ||
ಓಂ ಅಪಾನಾಯ ಸ್ವಾಹಾ ||
ಓಂ ವ್ಯಾನಾಯ ಸ್ವಾಹಾ ||
ಓಂ ಉದಾನಾಯ ಸ್ವಾಹಾ ||
ಓಂ ಸಮಾನಾಯ ಸ್ವಾಹಾ ||
(ಅಗುಳು ನುಂಗುವುದು) ಈ ಮೇಲಿನ ಮಂತ್ರದಿಂದ
ಒಂದೊಂದು ಮಂತ್ರಕ್ಕೂ ಸ್ವಲ್ಪ ಸ್ವಲ್ಪ ಅನ್ನವನ್ನು ಭಕ್ಷಿಸುವುದು

ಸ್ವಾಹಾಕಾರ ಎಂದರೆ ಯಜ್ಞಯಾಗಾದಿಗಳಲ್ಲಿ ಪೂರ್ಣಾಹುತಿಗೆ ಮೊದಲು ಅಗ್ನಿಗೆ ಚರುವನ್ನು ಸಮರ್ಪಿಸಿದಂತೆ ಪ್ರಾಣ, ಅಪಾನ,ವ್ಯಾನ, ಉದಾನ, ಸಮಾನ ಮತ್ತು ಬ್ರಹ್ಮನಿಗೂ ಎಲೆಯಲ್ಲಿ ಬಡಿಸಿದ ಖಾರ, ಉಪ್ಪು, ಹುಳಿಗಳನ್ನು ಸೇರಿಸದ ಅನ್ನವನ್ನು (ಸಣ್ಣ ತುತ್ತು) ಸ್ವಾಹಾಕಾರಕ್ಕಾಗಿ ಭುಂಜಿಸಬೇಕು.ಈ ಸ್ವಾಹಾಕಾರವೆಂದರೆ ಜಗಿಯದೆ ನುಂಗುವ ಪ್ರಕ್ರಿಯೆ. ಈ ಪ್ರಾಣಾದಿ ಸ್ವಾಹಾಕಾರ ಪ್ರಕ್ರಿಯೆಯಲ್ಲಿ

*ಪ್ರಾಣಾಯ ಸ್ವಾಹಾಕ್ಕೆ ತೊರು ಬೆರಳು ಮತ್ತು ಮಧ್ಯದ ಬೆರಳು ಮತ್ತು ಹೆಬ್ಬೆರಳು,
*ಅಪಾನಾಯ ಸ್ವಾಹಾಗೆ ಮಧ್ಯದ ಬೆರಳು, ಉಂಗುರ ಬೆರಳು ಮತ್ತು ಹೆಬ್ಬೆರಳು,
*ವ್ಯಾನಾಯ ಸ್ವಾಹಾಗೆ ಉಂಗುರದ ಬೆರಳು, ಕಿರು ಬೆರಳು ಮತ್ತು ಹೆಬ್ಬೆರಳು,
*ಉದಾನಾಯ ಸ್ವಾಹಾಗೆ ಮಧ್ಯದ ಬೆರಳು, ಉಂಗುರದ ಬೆರಳು ಮತ್ತು ಹೆಬ್ಬೆರಳು,
*ಸಮಾನ ಕ್ಕೆ ಐದೂ ಬೆರಳುಗಳನ್ನು ಬಳಸಬೇಕೆಂಬ ನಿಯಮವಿದೆ.

ಈ ಎಲ್ಲ ಪೂರ್ವ ಪೀಠಿಕೆಯ ನಂತರ ಭೋಜನವನ್ನು ಆತುರ, ಅಸಹನೆ, ಸಿಟ್ಟು ಇಲ್ಲದೆ ಶಾಂತಮನಸ್ಸಿನಿಂದ ತನಗೆ ಬೇಕಾದಷ್ಟು ಸ್ವೀಕರಿಸಬೇಕು. ಅತಿ ಭುಂಜನವು ದೈಹಿಕ ಆರೋಗ್ಯದ ಮೇಲೆ ವಿಕೃತ ಪರಿಣಾಮವನ್ನು ಬಿರಬಲ್ಲದೆಂಬ ಎಚ್ಚರವಿರಬೇಕು. ಈ ರೀತಿಯ ಭೋಜನವೇ ಪ್ರಾಣಾಗ್ನಿಹೋತ್ರದ ಪೂರ್ಣಾಹುತಿ.

7). *#ಉತ್ತರ ಆಪೋಶನ* :
ಊಟ ಆದಮೇಲೆ ಆಪೋಶನ.
ಬಲ ಕೈಗೆ ನೀರು ಹಾಕಿಕೊಂಡು ಈ ಮಂತ್ರ ಹೇಳಿ ಕುಡಿಯುವುದು.
ಅಮೃತಾಪಿಧಾನಮಸಿ ಸ್ವಾಹಾ ||
ಉತ್ತರಾಪೋಶನ :
ಉತ್ತರಾಪೋಶನವೆಂದರೆ ಭೋಜನದ ಅಂತ್ಯದಲ್ಲಿ ನೀರು ಕುಡಿಯುವುದು. ಯಜ್ಞದಲ್ಲಿ ಪೂರ್ಣಾಹುತಿ ನಂತರ ವಸೋರ್ಧಾರ ಎಂಬ ಹೆಸರಿನಲ್ಲಿ ಹವಿಸ್ಸಿನ ಮೇಲೆ ಆವರಣವಾಗುವ ಹಾಗೆ ತುಪ್ಪದ ಧಾರೆಯನ್ನು ಹರಿಸುತ್ತಾರೆ. ಅದೇ ರೀತಿ ಈ ಭೋಜನ ಯಜ್ಞದ ನಂತರ ಈ ಉತ್ತರಾಪೋಶನವು ನಾವು ಭುಂಜಿಸಿದ ಭೋಜನವನ್ನು ಅಮೃತವನ್ನಾಗಿಸಲಿ ಎಂಬ ಆಶಯದೊಂದಿಗೆ 'ಅಮೃತಾ ಪಿಧಾನಮಸಿ ಸ್ವಾಹಾ' ಎನ್ನುತ್ತ ಆಪೋಷನವನ್ನು ಮಾಡಬೇಕು. ಪಿಧಾನವೆಂದರೆ ಮುಚ್ಚಳವೆಂತಲೂ ಅಮೃತ ಪಿಧಾನವೆಂದರೆ ಅಮೃತದ ಆವರಣವೆಂತಲೂ ಅರ್ಥ. ಈ ಆಪೋಶನದಲ್ಲಿ ಭೋಜನದ ಮೇಲೆ ಅಮೃತದ ಅವರಣವಾಗಲಿ ಎಂಬ ಆಶಯವಿದೆ. ಪೂರ್ವಾಪೋಶನವು ಭೋಜನಕ್ಕೆ ಅಮೃತದ ವೇದಿಕೆಯಾದರೆ ಉತ್ತರಾಪೋಶನವು ಭೋಜನಕ್ಕೆ ಇರಿಸುವ ಅಮೃತದ ಮುಚ್ಚಳವಾಗಿದೆ. ಹೀಗೆ ಪೂರ್ವಾಪೋಶನ ಮತ್ತು ಉತ್ತರಾಪೋಶನವೆಂಬ ಎರಡು ಅಮೃತಸ್ತರಗಳ ನಡುವೆ ನಾವು ಭುಂಜಿಸಿದ ಭೋಜನ ಅಮೃತಮಯವಾಗಲಿ ಎಂಬ ಹಾರೈಕೆ ಇಲ್ಲಿಯದು.
ವಸೋರ್ಧಾರೆಯು ಹವಿಸ್ಸನ್ನು ಪೂರ್ಣವಾಗಿ ಪಚನ ಮಾಡಲು ಯಜ್ಞಾಗ್ನಿಗೆ ಸಹಾಯಕವಾಗುವಂತೆ ಉತ್ತರಾಪೋಶನವು ನಾವು ಸೇವಿಸಿದ ಭೋಜನವನ್ನು ಪಚನ ಮಾಡಲು ಜಠರಾಗ್ನಿಗೆ ನೆರವಾಗುತ್ತದೆ

#ನಮ್ಮ ಹಿರಿಯರು ಭೋಜನ ವಿಧಿಯನ್ನೂ ಕೂಡ ಒಂದು ಯಜ್ಞವೆಂದು ಪರಿಗಣಿಸುವುದರ ಜತೆಗೆ ನಮ್ಮ ದೇಹಕ್ಕೆ ವೈಜ್ಞಾನಿಕ ಕ್ರಮದಲ್ಲಿ ಆಹಾರವನ್ನು ಪೂರಣಗೊಳಿಸಿ ಪಂಚಪ್ರಾಣಗಳ ಊರ್ಜೆಯನ್ನು ವೃದ್ಧಿಗೊಳಿಸಿ ತನ್ಮೂಲಕ ಆತ್ಮಶಕ್ತಿಯನ್ನು ಸದಾ ಜಾಗೃತಗೊಳಿಸುವ ಯಾಜ್ಞಿಕ ಪ್ರಕ್ರಿಯೆಯಾಗಿ ರೂಪಿಸಿದ್ದಾರೆ. ಭೋಜನವೆಂಬುದು ಹಸಿವಾದೊಡನೆ ಬರಿಯ ಉಣ್ಣುವ ಕ್ರಿಯೆಯಲ್ಲ. ಅದು ಯಾಜ್ಞಿಕ, ಯೋಗಿಕಗಳನ್ನೊಳಗೊಂಡ ಒಂದು ಸಂಸ್ಕಾರಯುತ ಪ್ರಕ್ರಿಯೆ. ನಮ್ಮ ದುಡಿಮೆಯ ಫಲವಾದ ಭೋಜನವನ್ನು ಯಜ್ಞಕರ್ಮಗಳಿಗೆ ಹೋಲಿಸಿ ಭೋಜನವಿಧಿಯನ್ನು ಇಷ್ಟೊಂದು ಕ್ಲಿಷ್ಠಗೋಸಬೇಕಿತ್ತೆ ಎಂಬ ಪ್ರಶ್ನೆಯೊಂದು ಉದ್ಭವಿಸುವುದು ಸಹಜವೆ. ನಮ್ಮ ಬದುಕಿನ ಎಲ್ಲ ಸಂಗತಿಗಳಲ್ಲೂ ನಮ್ಮ ಪೂರ್ವಜರು ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿದ್ದರು. ಹಾಗಾಗಿ ಜೀವಧಾರಣ, ಶರೀರದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳನ್ನು ಕಾಪಾಡುವಲ್ಲಿ ಅವರು ಭೋಜನ ವಿಧಿಗೂ ಒಂದು ವೈಜ್ಞಾನಿಕ ಸೂತ್ರವನ್ನು ಅಳವಡಿಸಿದರು.

ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ🙏🕉️🔱🚩

1 month ago | [YT] | 3