eedina

#ಈದಿನನಲ್ನುಡಿ

ಜನಕ್ಕೆ ಸತ್ಯ ಬೇಕಿಲ್ಲ. ಸತ್ಯದ ವೇಷಭೂಷಣ ಧರಿಸಿದ ಅನುಕೂಲ ಬೇಕು ಅವರಿಗೆ- ದೊಸ್ತೊಯೆವ್ಸ್ಕಿ

#ಈದಿನನಲ್ನುಡಿ #ನಲ್ನುಡಿ #eedinanalnudi #eedina #eedinatv #KannadaQuote #DinaNudi #ThoughtForTheDay #Dostoevsky #Truth #Reality #LifeLessons #KannadaThoughts #QuotesInKannada #InspirationalQuotes

3 hours ago | [YT] | 97

eedina

ʼಲಗಾನ್‌ʼಗೆ 25ರ ಸಂಭ್ರಮ: ಸಾರ್ವಕಾಲಿಕ ಶ್ರೇಷ್ಠ ʼಕ್ರಿಕೆಟ್ ಮಹಾಕಾವ್ಯʼದ ಬಿಹೈಂಡ್‌ ದ ಸೀನ್ಸ್ ಕಥೆಗಳಿವು…!

ಅಂದಿಗೆ ಬಾಲಿವುಡ್‌, “ಪೀರಿಯಾಡಿಕಲ್ ಸಿನಿಮಾಗಳು ಓಡುವುದಿಲ್ಲ, ಕ್ರೀಡಾ ಆಧಾರಿತ ಸಿನಿಮಾಗಳು ಫ್ಲಾಪ್ ಆಗುತ್ತವೆ ಮತ್ತು ಹಳ್ಳಿಗಾಡಿನ ಕಥೆಗಳಿಗೆ ಮಾರ್ಕೆಟ್ ಇಲ್ಲ ಎನ್ನುವ ಲಾಜಿಕ್‌ ಇಲ್ಲದ 3 ನಿಯಮಗಳನ್ನ ಪಾಲಿಸುತ್ತಿತ್ತು. ಇದೇ ಕಾರಣಕ್ಕೆ ಇಡೀ ಚಿತ್ರರಂಗದ ಯಾವೊಬ್ಬ ನಿರ್ಮಾಪಕನೂ ಈ ಚಿತ್ರಕ್ಕೆ ಹಣ ಹಾಕಲು ಮುಂದೆ ಬರಲಿಲ್ಲ. ಕೊನೆಗೆ, ಆಮಿರ್ ತಾವೇ ಒಂದು ಪ್ರೊಡಕ್ಷನ್ ಸಂಸ್ಥೆ ಕಟ್ಟಿ, ಅಂದಿನ ಕಾಲಕ್ಕೇ ₹25 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಮುಂದೆ ಬಂದರು.

#Lagaan #AamirKhan #Lagaan25Years #BollywoodClassic #CricketMovie #IndianCinema #AshutoshGowariker #MovieTrivia #BehindTheScenes #CinemaHistory

13 hours ago | [YT] | 68

eedina

ಕೃಷಿರಂಗ | ರಾಗಿ ತಂದೀರಾ… ಬಿತ್ತನೆ ರಾಗಿ ತಂದೀರಾ…

ರಾಗಿ ತಳಿಗಳು ಎಂದೊಡನೆ ರೈತರಿಗೆ ನೆನಪಾಗುವುದು ಜಗತ್ತಿನ ಮೊಟ್ಟಮೊದಲ ರಾಗಿ ಬ್ರೀಡರ್ ರಾಗಿಬ್ರಹ್ಮ ಲಕ್ಷ್ಮಣಯ್ಯ. ಅವರು ಸುಮಾರು 23 ಬಗೆಯ ಅಧಿಕ ಇಳುವರಿಯ ರಾಗಿ ತಳಿಗಳನ್ನು ಕೊಟ್ಟವರು. ಎಕರೆಗೆ ಐದಾರು ಕ್ವಿಂಟಾಲ್ ಇಳುವರಿಯಿಂದ ಎಕರೆಗೆ 15ರಿಂದ 20 ಕ್ವಿಂಟಾಲ್ ಇಳುವರಿ ಕೊಡುವ ರಾಗಿ ತಳಿಗಳನ್ನು ಮಂಡ್ಯದ ಕೃಷಿ ಕ್ಷೇತ್ರದ ತಮ್ಮ ಸಂಶೋಧನಾ ಟಂಕಸಾಲೆಯಿಂದ 1956ರಿಂದ 1984ರವರೆಗೆ ಬಿಡುಗಡೆಯಾಗುವಂತೆ ಮಾಡಿದರು.

- ಪ್ರೊ ಎಂ ನಾರಾಯಣ ಸ್ವಾಮಿ

#Ragi #Millets #Agriculture #Farmers #RagiBrahma #Laxmanayya #KarnatakaAgriculture #MilletFarming #SustainableFarming #AgriculturalInnovation

13 hours ago | [YT] | 22

eedina

ಸರ್ಕಾರಕ್ಕೆ 3 ವರ್ಷ | ಗ್ಯಾರಂಟಿ ಯೋಜನೆಗಳು ಮತ್ತು ಅದರಾಚೆಗೆ ಮಹಿಳಾ ಸಬಲೀಕರಣಕ್ಕೆ ಆಗಬೇಕಿರುವುದು ಏನು?

ಕರ್ನಾಟಕದ ಮಹಿಳೆಯರು ಇಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದರೆ, ಮುಂದಿನ ದಶಕದಲ್ಲಿ ಅವರು ರಾಜ್ಯದ ಆರ್ಥಿಕತೆ, ಜ್ಞಾನ ವ್ಯವಸ್ಥೆ ಮತ್ತು ಸಾರ್ವಜನಿಕ ನೀತಿ ರೂಪಿಸುವಿಕೆಯ ಸಕ್ರಿಯ ನಿರ್ಮಾಪಕರಾಗಬೇಕು. ಮಹಿಳೆಯರಿಗೆ ನೆರವು ನೀಡುವ ರಾಜ್ಯದಿಂದ, ಮಹಿಳೆಯರೊಂದಿಗೆ ಅಭಿವೃದ್ಧಿಯನ್ನು ನಿರ್ಮಿಸುವ ರಾಜ್ಯದತ್ತ ಕರ್ನಾಟಕ ಸಾಗಬೇಕಿದೆ. ಇದೇ UN Women ಸೂಚಿಸುವ ದಾರಿದ್ರ್ಯ ನಿವಾರಣೆಯ ನಿಜವಾದ ಪರಿವರ್ತನಾ ದಾರಿ.

ಸುಚಿತ್ರಾ ಎಸ್‌ ಎ

#KarnatakaGovernment #WomenEmpowerment #GuaranteeSchemes #GenderEquality #WomenLeadership #EconomicEmpowerment #UNWomen #KarnatakaDevelopment #WomenInPolicy #InclusiveGrowth

14 hours ago | [YT] | 10

eedina

ದೇಶದ ಕಾರಾಗೃಹಗಳಲ್ಲಿ ಮಿತಿಮೀರಿದ ದಟ್ಟಣೆ: ಕಂಬಿಗಳ ಹಿಂದೆ ವಿಚಾರಣಾಧೀನ ಕೈದಿಗಳದೇ ಸಿಂಹಪಾಲು


ಭಾರತದ ಜೈಲು ವ್ಯವಸ್ಥೆಯ ಅತಿ ದೊಡ್ಡ ದುರಂತವೆಂದರೆ, ಜೈಲಿನಲ್ಲಿರುವ ಒಟ್ಟು ಕೈದಿಗಳ ಪೈಕಿ ಶೇಕಡಾ 75 ರಿಂದ 77 ರಷ್ಟು ಮಂದಿ ವಿಚಾರಣಾಧೀನ ಕೈದಿಗಳೇ ಆಗಿದ್ದಾರೆ. ಇವರ ಮೇಲಿನ ಆರೋಪಗಳು ನ್ಯಾಯಾಲಯದಲ್ಲಿ ಇನ್ನೂ ಸಾಬೀತಾಗಿಲ್ಲ. ಅಂದರೆ, ಕಾನೂನಿನ ದೃಷ್ಟಿಯಲ್ಲಿ ಇವರು ಇನ್ನೂ ‘ನಿರಪರಾಧಿಗಳು’. ಕೇವಲ ಶೇ 23 ರಿಂದ 25 ರಷ್ಟು ಕೈದಿಗಳು ಮಾತ್ರ ಅಪರಾಧ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿರುವವರಾಗಿದ್ದಾರೆ

#PrisonReform #UndertrialPrisoners #IndianJudiciary #JusticeDelayed #HumanRights #LegalReforms #PrisonOvercrowding #AccessToJustice #CriminalJusticeSystem #IndiaNews

14 hours ago | [YT] | 25

eedina

ವೇಶ್ಯಾವೃತ್ತಿ ನಿಷೇಧಿತವಲ್ಲ, ಆದರೆ ವಾಣಿಜ್ಯೀಕರಣಕ್ಕೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್


“ಒಬ್ಬಂಟಿ ಮಹಿಳೆಯು ತನ್ನ ಸ್ವಂತ ಜೀವನೋಪಾಯಕ್ಕಾಗಿ, ಬೇರೆ ಯಾವುದೇ ಲೈಂಗಿಕ ಕಾರ್ಯಕರ್ತೆ ಅಥವಾ ಬೇರೆ ಯಾವುದೇ ವ್ಯಕ್ತಿಯ ಹಸ್ತಕ್ಷೇಪ ಹಾಗೂ ನಿರ್ವಹಣೆ ಇಲ್ಲದೆ ತನ್ನದೇ ಆದ ನಿವಾಸದಲ್ಲಿ ವೇಶ್ಯಾವೃತ್ತಿಯನ್ನು ನಡೆಸುತ್ತಿದ್ದರೆ, ಅಂತಹ ನಿವಾಸವನ್ನು ‘ವೇಶ್ಯಾಗೃಹ’ ಎಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ಪೀಠವು ಸ್ಪಷ್ಟವಾಗಿ ಉಲ್ಲೇಖಿಸಿದೆ

#SupremeCourt #SexWorkersRights #LegalAwareness #IndianJudiciary #HumanRights #WomenRights #LegalNews #ConstitutionalRights #JusticeSystem #IndiaLaw

15 hours ago | [YT] | 18

eedina

ಕಾಕ್ರೋಚ್ ಜನತಾ ಪಾರ್ಟಿಯ ಸ್ಥಾಪಕ ಅಭಿಜೀತ್ ದೀಪ್ಕೆ ಜೂನ್ 6 ರಂದು ಭಾರತಕ್ಕೆ- ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

#CockroachJanataParty #AbhijitDeepke #DharmendraPradhan #EducationMinister #ResignDharmendraPradhan #IndiaPolitics #StudentVoice #EducationReform #PoliticalDebate #TrendingIndia

16 hours ago | [YT] | 671

eedina

ಜೇಬುಗಳ್ಳರ ಬಗ್ಗೆ ಎಚ್ಚರವಿರಲಿ...ಇಂದಿನ ದಿನಗಳಲ್ಲಿ ಅವರು CBSE ಯಲ್ಲೇ ಕುಳಿತಿದ್ದಾರೆ- ರಾಹುಲ್ ಗಾಂಧಿ

#RahulGandhi #CBSE #EducationSystem #StudentIssues #EducationDebate #IndiaEducation #ExamReforms #PublicStatement #TrendingIndia #EducationNews

16 hours ago | [YT] | 930

eedina

"ಭಾರತೀಯರಿಗೆ ಗೋವಿನೊಂದಿಗೆ ಭಾವನಾತ್ಮಕ ಸಂಬಂಧ ಇರುವುದರಿಂದ ಕೇಂದ್ರ ಸರ್ಕಾರ ಭಾರತದಲ್ಲಿ ನಡೆಯುತ್ತಿರುವ ಯಾಂತ್ರೀಕೃತ ಗೋವಧೆಯನ್ನು ತಕ್ಷಣ ನಿಲ್ಲಿಸಬೇಕಿದೆ. ಗೋವಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿ ಭಾರತದ ವಿಭಿನ್ನ ತಳಿಯ ಗೋವುಗಳ ಸಂಪೂರ್ಣ ರಕ್ಷಣೆಗೆ ರಚನಾತ್ಮಕ ಕಾರ್ಯಯೋಜನೆ ರೂಪಿಸಬೇಕಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಲಿ"

ಕೆ. ಅಶ್ರಫ್
ದ.ಕ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ

#CowProtection #NationalAnimalStatus #IndigenousCattle #GauMata #CattleConservation #AnimalWelfare #IndianBreeds #KAshraf #DakshinaKannada #SaveNativeCattle

17 hours ago | [YT] | 127

eedina

ಸೇನೆಯ ಕನಸು ಮೀರಿದ ಕ್ರಿಕೆಟ್ ಪ್ರೇಮ: ಆರ್‌ಸಿಬಿಗೆ ಕಪ್‌ ಗೆದ್ದುಕೊಟ್ಟ ಕಾಶ್ಮೀರದ ಯುವಕ ರಸಿಕ್ ದರ್


ಆರ್‌ಸಿಬಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಹಾಗೂ ಬಹುಕಾಲದ ಪ್ರಶಸ್ತಿಯ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ರಸಿಕ್ ದರ್‌ನ ಈ ಮ್ಯಾಚ್ ವಿನ್ನಿಂಗ್ ಸ್ಪೆಲ್ ಪ್ರಮುಖ ಪಾತ್ರ ವಹಿಸಿತು. ಸೇನೆಗೆ ಸೇರೆಂದ ಅಪ್ಪನ ಆಸೆಯನ್ನು ಬದಿಗೊತ್ತಿ, ತಾನು ನಂಬಿದ ಕ್ರಿಕೆಟ್ ಹಾದಿಯಲ್ಲಿ ಕಠಿಣ ಶ್ರಮ ಹಾಕಿದ ಈ ಕಾಶ್ಮೀರಿ ಯುವಕ, ಇಂದು ಇಡೀ ದೇಶವೇ ಹೆಮ್ಮೆಪಡುವಂತೆ ಬೀಗುತ್ತಿದ್ದಾರೆ

#RasikhDar #RCB #IPLChampion #Kashmir #CricketJourney #RCBVictory #IndianCricket #InspiringStory #DreamBig #CricketPassion

18 hours ago | [YT] | 74