eedina

ಹಾವೇರಿ | ಶಿಥಿಲಗೊಂಡ 411 ಸರ್ಕಾರಿ ಶಾಲೆಗಳಿಗೆ ಅನುದಾನ ಮರೀಚಿಕೆ

"ಶಿಕ್ಷಣವೇ ಪ್ರಗತಿಯ ಮೂಲ" ಎಂಬ ಮಾತು ಎಷ್ಟು ಸತ್ಯವೋ, ಆ ಶಿಕ್ಷಣವನ್ನು ನೀಡುವ ಶಾಲಾ ಕಟ್ಟಡಗಳು ಸುರಕ್ಷಿತವಾಗಿರುವುದು ಅಷ್ಟೇ ಮುಖ್ಯವಾಗಿದೆ. ಆದರೆ, ಹಾವೇರಿ ಜಿಲ್ಲೆಯ ಸರ್ಕಾರಿ ಶಾಲೆಗಳ ಇಂದಿನ ಸ್ಥಿತಿಯನ್ನು ನೋಡಿದರೆ ಗ್ರಾಮೀಣ ಭಾಗದ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಮೂಡುವುದು ಸಹಜ. ಒಂದೆಡೆ ಸರ್ಕಾರಿ ಶಾಲೆಗಳ ಉಳಿವಿನ ಕೂಗು ಎಲ್ಲೆಡೆ ಧ್ವನಿಸುತ್ತಿದ್ದರೆ, ಇನ್ನೊಂದೆಡೆ ಬುನಾದಿಯೇ ಕುಸಿವ ಹಂತದಲ್ಲಿದೆ.


ವಿಶೇಷ ವರದಿ: ಶರಣಪ್ಪ ಎಚ್ ಸಂಗನಾಳ

ಮುಂದೆ ಓದಿ

#GovernmentSchools #SchoolInfrastructure #EducationCrisis #Haveri #KarnatakaEducation #RightToEducation

11 hours ago | [YT] | 50

eedina

ವಿದ್ಯುತ್‌ ಖಾಸಗೀಕರಣ: ಉಚಿತ ಯೋಜನೆಗಳ ಅಂತ್ಯಕ್ಕೆ ನಾಂದಿ

ಕರ್ನಾಟಕದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯು ರಾಜ್ಯದಲ್ಲಿ ಸದ್ಯ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಟಾಟಾ ಪವರ್ ಕಂಪನಿಯು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಮಾಡಲು ಅನುಮತಿ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ.

#ElectricityPrivatization #PowerSector #KarnatakaElectricity #TataPower #EnergyPolicy #PublicUtilities #PowerDistribution

12 hours ago | [YT] | 29

eedina

ಚನ್ನರಾಯಪಟ್ಟಣ ಚಳವಳಿಯಿಂದ ಬಿಡದಿ ರೈತರು ಕಲಿಯಬೇಕಾದ ಪಾಠಗಳೇನು?


ಸ್ವಪ್ರತಿಷ್ಠೆಯ ರಾಜಕಾರಣಿಗಳಿಂದ ಚಳವಳಿಗೆ ಅಪಾಯವಿರುತ್ತದೆ. ಹೀಗಾಗಿ ಚನ್ನರಾಯಪಟ್ಟಣ ಭೂ ಹೋರಾಟವು ರಾಜಕಾರಣಿಗಳನ್ನು ತಂತ್ರಗಾರಿಕೆಯ ಭಾಗವಾಗಿ ಬಳಸಿಕೊಂಡರೂ, ಅವರಿಂದ ಅಂತರ ಕಾಯ್ದುಕೊಂಡಿತು. ಹೋರಾಟ ಸಮಿತಿಯೇ ನಿಜವಾದ ಶಕ್ತಿಯಾಗಿತ್ತು. ಇದು ಬಿಡದಿ ರೈತರಿಗೆ ದೊಡ್ದ ಪಾಠ.


ಬರೆಹ: ಯತಿರಾಜ್‌ ಬ್ಯಾಲಹಳ್ಳಿ


#BidadiFarmers #FarmersMovement #LandRights #FarmerProtest #Channarayapatna #KarnatakaFarmers #AgrarianIssues

13 hours ago | [YT] | 21

eedina

BREAKING NEWS



ಪೋಕ್ಸೊ ಪ್ರಕರಣ: ವಚನಾನಂದ ಸ್ವಾಮೀಜಿಯ ನಿರೀಕ್ಷಣಾ ಜಾಮೀನು ರದ್ದುಪಡಿಸಿದ ಹೈಕೋರ್ಟ್

#BreakingNews #POCSO #VachanandaSwamiji #KarnatakaNews #HighCourt #LegalNews #CourtNews #ChildProtection #CrimeNews #LatestNews #IndiaNews #KannadaNews

13 hours ago | [YT] | 66

eedina

ರಾಮಮಂದಿರದಿಂದ ಉಜ್ಜಯಿನಿ ಮಾಸ್ಟರ್ ಪ್ಲಾನ್ವರೆಗೆ: ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯ ಲೂಟಿ

ಅಷ್ಟಕ್ಕೂ ಇಲ್ಲಿ ಮಹಮ್ಮದ್ ಘಜ್ನಿ ಏನಿಲ್ಲ. ಹಾಗಿರುವಾಗ ಹಿಂದೂ ದೇವಾಲಯಗಳನ್ನು ಯಾರು ಲೂಟಿ ಮಾಡುತ್ತಿರುವವರು? ಬಿಜೆಪಿ ಏಕೆ ಬಾಯಿ ಮುಚ್ಚಿಕೊಂಡು ಕುಳಿತಿದೆ? ದೇವಾಲಯದ ಎಲ್ಲ ನೌಕರರು ಬಿಜೆಪಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಅಲ್ಲವೇ? ಹಾಗಿರುವಾಗ ಈಗ ಕಳ್ಳರು ಯಾರು? ಹಿಂದುತ್ವದ ವ್ಯಾಪಾರ ಮಾಡುವ ಬಿಜೆಪಿಗರಿಗೆ ರಾಮ ಮಂದಿರದಿಂದ ಬರುವ ದೇಣಿಗೆಗಳು ಗಳಿಕೆಯ ಸಾಧನ ಎಂಬುದು ಸ್ಪಷ್ಟ ಎನ್ನುತ್ತದೆ ಶಿವಸೇನೆಯ ಅಧಿಕೃತ ಮುಖವಾಣಿ ಸಾಮ್ನಾ.

#RamMandir #Hindutva #BJP #TemplePolitics #ReligiousPolitics #Ujjain #UjjainMasterPlan #TempleEconomy #FaithAndPolitics #PoliticalAccountability #IndianPolitics #Democracy #PublicInterest #MediaWatch #TruthMatters #SocialJustice

14 hours ago | [YT] | 234

eedina

ಈ ದಿನ ಸಂಪಾದಕೀಯ | ಅಡಿಕೆಗೆ ಆದ್ಯತೆ, ಆಹಾರಬೆಳೆಗಳ ಕೊರತೆ ಮತ್ತು ಬೆಲೆ ಏರಿಕೆ

ಕರ್ನಾಟಕದಲ್ಲಿ ಅಡಿಕೆ ಬೆಳೆ ಆರ್ಥಿಕವಾಗಿ ಬಲಿಷ್ಠ ಸ್ಥಿತಿಯಲ್ಲಿರಬಹುದು. ಆದರೆ, ನೀರಿನ ಲಭ್ಯತೆ, ರೋಗಬಾಧೆ, ಬೆಲೆಗಳ ಅನಿಶ್ಚಿತತೆಯನ್ನು ಅಲಕ್ಷಿಸುವಂತಿಲ್ಲ. ಹಾಗೆಯೇ ಕೃಷಿಕರು ವಾಣಿಜ್ಯ ಬೆಳೆಗಳತ್ತ ಒಲವು ಹೊಂದುವುದು, ಆಹಾರ ಬೆಳೆಗಳ ಕುಸಿತದಂತಹ ದೀರ್ಘಕಾಲೀನ ಸವಾಲು ಎದುರಾಗುವುದನ್ನು ನಿರ್ಲಕ್ಷಿಸುವಂತಿಲ್ಲ. ಬೆಲೆ ಏರಿಕೆಯಿಂದ ಆಗುವ ಅನಾಹುತವನ್ನು, ಅಧ್ವಾನವನ್ನು ಅಂದಾಜು ಮಾಡಲಾಗುವುದಿಲ್ಲ.

#Editorial #Agriculture #ArecaNut #Farming #FoodCrops #FoodSecurity #PriceRise #Inflation #FarmersIssues #KarnatakaAgriculture #AgriculturalPolicy #RuralEconomy #SustainableFarming #CropDiversification #FoodCrisis #MarketTrends #EconomicAnalysis #IndiaAgriculture #FarmEconomy #NewsAnalysis

14 hours ago | [YT] | 17

eedina

ಬೆಚ್ಚಿಬೀಳಿಸುವ ರಾಜೇಶ್ ಎಕ್ಸ್‌ಪೋರ್ಟ್ಸ್ ಹಗರಣ: ಕಂಪನಿ ಆದಾಯ 7.7 ಲಕ್ಷ ಕೋಟಿ, ಎಂಡಿ ಸಂಬಳ ಕೇವಲ 17 ಸಾವಿರ!




ಸಂಸ್ಥೆಯು ಸುಮಾರು 7.7 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಆದಾಯವನ್ನು ವರದಿ ಮಾಡಿದ್ದರೂ, ಪ್ರಮುಖ ಅಧಿಕಾರಿಗಳ ವೇತನ ರಚನೆ ಅತ್ಯಂತ ಹಾಸ್ಯಾಸ್ಪದವಾಗಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಕೇವಲ 17,000 ರೂ. ಮಾಸಿಕ ವೇತನ ಪಡೆಯುತ್ತಿದ್ದರೆ, ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) 2020ರಿಂದ ಯಾವುದೇ ವೇತನವನ್ನೇ ಪಡೆದಿಲ್ಲ ಎಂಬ ಮಾಹಿತಿ ತನಿಖಾಧಿಕಾರಿಗಳನ್ನು ದಂಗುಬಡಿಸಿದೆ


#RajeshExports #CorporateScam #BusinessScandal #FinancialFraud #CorporateFraud #CompanyScam #IndiaNews

16 hours ago | [YT] | 30

eedina

ಗಂಗಾ ನದಿಯಲ್ಲಿ ಮಾಂಸದೂಟ: ಸಂಘಿಗಳಿಗೆ ತಕ್ಷಣ ಜಾಮೀನು, ಮುಸ್ಲಿಮರಿಗೆ ತಿಂಗಳ ಜೈಲುವಾಸ




ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕೋಮು ರಾಜಕಾರಣ ಹಾಗೂ ಮುಸ್ಲಿಮರ ಮೇಲಿನ ತಾರತಮ್ಯದ ನೀತಿಯು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಪವಿತ್ರ ಗಂಗಾ ನದಿಯ ವಿಹಾರ ದೋಣಿಯಲ್ಲಿ ಮಾಂಸ ಸೇವನೆ ಮಾಡಿದ ಒಂದೇ ಸ್ವರೂಪದ ಕೃತ್ಯಕ್ಕೆ ಆಡಳಿತ ವ್ಯವಸ್ಥೆ ಎರಡು ಭಿನ್ನ ನ್ಯಾಯ ಒದಗಿಸಿದೆ. ಅನ್ಯ ಕೋಮಿನ ಯುವಕರಿಗೆ ಕೇವಲ 24 ತಾಸುಗಳಲ್ಲಿ ಜಾಮೀನು ದೊರೆತಿದ್ದರೆ, ಇದೇ ಕೃತ್ಯವೆಸಗಿದ್ದ ಮುಸ್ಲಿಂ ಯುವಕರು ಬರೋಬ್ಬರಿ 59 ದಿನಗಳ ಕಾಲ ಜೈಲುವಾಸ ಅನುಭವಿಸುವ ಮೂಲಕ ತಾರತಮ್ಯದ ಸ್ಪಷ್ಟ ದರ್ಶನವಾಗಿದೆ.


#IndiaNews #UttarPradesh #CommunalPolitics #EqualJustice
#MinorityRights#RuleOfLaw

17 hours ago | [YT] | 78

eedina

ಮೈಂಡ್‌ ಬ್ಲೋಯಿಂಗ್‌! ಇಡೀ ಜಗತ್ತಿನ ಜನ 1 ವರ್ಷ ಮಾಡುವ ಲೆಕ್ಕ ಈ ʼಮಹಾಯಂತ್ರʼಕ್ಕೆ 1 ಸೆಕೆಂಡಿನ ಕೆಲಸ


ಚೀನಾದ ‘ಲೈನ್‌ಶೈನ್’ ಕಂಪ್ಯೂಟರ್ 2.198 ಎಕ್ಸಾಫ್ಲಾಪ್ಸ್ ವೇಗ ಹೊಂದಿದೆ. ಅಂದರೆ, ಅದು ಪ್ರತಿ ಸೆಕೆಂಡಿಗೆ ಸುಮಾರು 2.198 ಕ್ವಿಂಟಿಲಿಯನ್ ಲೆಕ್ಕಾಚಾರಗಳನ್ನು ಮಾಡಬಲ್ಲದು. ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ (ಸುಮಾರು 800 ಕೋಟಿ ಜನ) ಸೆಕೆಂಡಿಗೆ ಒಂದು ಲೆಕ್ಕಾಚಾರವನ್ನು ಮಾಡುವುದಾದರೆ, ಆ 800 ಕೋಟಿ ಜನರೂ ಸೇರಿ ಇಡೀ ವರ್ಷ ಮಾಡಬಹುದಾದ ಲೆಕ್ಕಾಚಾರವನ್ನು ‘ LineShine ‘ ಕೇವಲ 1 ಸೆಕೆಂಡಿನಲ್ಲಿ ಪೂರೈಸುತ್ತದೆ. ನಿಮ್ಮ ಮನೆಯಲ್ಲಿರುವ ಸಾಮಾನ್ಯ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಕಂಪ್ಯೂಟರ್‌ಗೆ ಇಂತಹ ಲೆಕ್ಕಾಚಾರಗಳನ್ನು ಮಾಡಲು ಹತ್ತಾರು ವರ್ಷಗಳೇ ಬೇಕಾಗಬಹುದು!


#LineShine #Supercomputer #AI #Technology #TechFacts #Innovation #KannadaTech #ವಿಜ್ಞಾನ #ತಂತ್ರಜ್ಞಾನ #Trending #Viral #MindBlowing #FutureTech #Exaflops #DigitalWorld

17 hours ago | [YT] | 11

eedina

ವೆನೆಜುವೆಲಾದಲ್ಲಿ ಅವಳಿ ಮಹಾಭೂಕಂಪ: ಮಣ್ಣುಪಾಲಾದ ಕ್ಯಾರಕಾಸ್, ಹತ್ತಾರು ಸಾವಿರ ಸಾವು ಶಂಕೆ?
ಈ ಪ್ರಾಕೃತಿಕ ಮಹಾವಿಕೋಪದಿಂದಾಗಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿರುವ ಶಂಕೆಯಿದೆ. ಯುಎಸ್ಜಿಎಸ್ ಸಂಸ್ಥೆಯು ಬಿಡುಗಡೆ ಮಾಡಿರುವ ಆತಂಕಕಾರಿ ಮುನ್ಸೂಚನೆಯ ಪ್ರಕಾರ, ಸಾವಿನ ಸಂಖ್ಯೆ 10,000 ದಿಂದ 100,000 ದಾಟುವ ಸಾಧ್ಯತೆಯಿದೆ ಎನ್ನಲಾಗಿದೆ. ಸರ್ಕಾರಿ ಮೂಲಗಳು ಇನ್ನೂ ನಿಖರವಾದ ಸಾವಿನ ಸಂಖ್ಯೆಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ, ಕಟ್ಟಡಗಳ ಅವಶೇಷಗಳಡಿ ಸಾವಿರಾರು ಮಂದಿ ಸಿಲುಕಿರುವ ಭೀತಿಯಿದೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಗಾಯಾಳುಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ.
#VenezuelaEarthquake #CaracasEarthquake #TwinEarthquakes #NaturalDisaster #EarthquakeNews #BreakingNews #WorldNews #RescueOperations #HumanitarianCrisis #EmergencyResponse #EarthquakeUpdate #DisasterManagement #USGS #GlobalNews #DisasterAlert

17 hours ago | [YT] | 24