ಸುದ್ದಿ ಜಗತ್ತು, ನೇರ, ವಾಸ್ತವ ಜನ ಮನ ದ್ವನಿ...
YouTube Channel: @ShivamoggaMedia24x7
Welcome to Shivamogga Media 24x7 News, your trusted source for the latest updates, breaking news, and authentic stories. Bringing you truthful, live, and impactful journalism that resonates with the voice of the people. 🌍📰
Stay informed about current affairs, political insights, cultural stories, and much more with our engaging and factual reporting. We are dedicated to keeping you connected with the pulse of reality.
Subscribe to our channel and join us in exploring the world of news as it unfolds. Don’t forget to like, share, and comment to let your voice be heard!
📌 Slogan: ಸುದ್ದಿ ಜಗತ್ತು, ನೇರ, ವಾಸ್ತವ ಜನ ಮನ ದ್ವನಿ...
Stay updated. Stay aware. Stay with Shivamogga Media 24x7 News. 🎥✅
Shivamogga Media 24x7
ಇಂದು ಶಿವಮೊಗ್ಗ ಶಾಸಕರು ಮತ್ತು ನಾಗರೀಕ ಹಿತರಕ್ಷಣಾ ವೇದಿಕೆ ಗಳ ಒಕ್ಕೂಟದ ಪದಾಧಿಕಾರಿಗಳು ಜಂಟಿಯಾಗಿ ಶಿವಮೊಗದ ಕೃಷ್ಣ ರಾಜೇಂದ್ರ ನೀರು ಸರಬರಾಜು ಘಟಕಕ್ಕೆ ಭೇಟಿ ನೀಡಲಾಯಿತು. ಇಲ್ಲಿ ಇರುವ ದೋಷಗಳ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ. ಶಾಸಕರು ಇವುಗಳ ಬದಲಾವಣೆಗೆ ತಕ್ಷಣ ಕ್ರಮಕೈಗೊಳ್ಳಬೇಕು ಮತ್ತು ಶಿವಮೊಗ್ಗ ಜನತೆಗೆ ಶುದ್ಧ ನೀರು ನಿರಂತರವಾಗಿ ನೀಡಲು ಶ್ರಮಿಸಬೇಕು ಎಂದು ಆಗ್ರಹಿಸುತ್ತೇವೆ.
ವೇದಿಕೆಯ ಅಧ್ಯಕ್ಷರಾದ ಶ್ರೀ s.r. ಗೋಪಾಲ, ಪ್ರಧಾನ ಕಾರ್ಯದರ್ಶಿ ಕೆ. ವಿ. ವಸಂತ ಕುಮಾರ್, ಸಂಘಟನಾ ಕಾರ್ಯದರ್ಶಿ dr. ಸತೀಶ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ s.b. ಅಶೋಕ ಕುಮಾರ, ಕೇಶವ ಮೂರ್ತಿ, ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದರು
5 days ago | [YT] | 6
View 0 replies
Shivamogga Media 24x7
ನವುಲೆಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವತಿಯಿಂದ ಶಿವಮೊಗ್ಗ ವಲಯದ ಸಮ್ಮರ್ ಕ್ಯಾಂಪ್ಗೆ ಚಾಲನೆ ದೊರೆಯಿತು.
*ವಿಧಾನ ಪರಿಷತ್ ಶಾಸಕರು, ರಾಜ್ಯ ಬಿಜೆಪಿ ಕಾರ್ಯದರ್ಶಿಗಳು ಹಾಗೂ KSCA ನಿರ್ದೇಶಕರು ಶ್ರೀ ಡಿ. ಎಸ್. ಅರುಣ್* ಅವರು ಉದ್ಘಾಟಿಸಿ, ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಕ್ರೀಡೆ ಯುವಕರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಲು ಸಹಾಯ ಮಾಡುತ್ತದೆ. ಗೆಲುವು-ಸೋಲು ಎರಡನ್ನೂ ಸಮನಾಗಿ ಸ್ವೀಕರಿಸುವ ಮನೋಭಾವವನ್ನು ಕ್ರೀಡೆ ಕಲಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಬಿ. ನಿಖಿಲ್, KSCA ಮುಖ್ಯಸ್ಥರು ರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರಾದ ಅವಿನಾಶ್ ವೈದ್ಯ, ವಲಯ ಮಾಜಿ ಅಧ್ಯಕ್ಷರಾದ ಶ್ರೀ ಡಿ. ಆರ್. ನಾಗರಾಜ್, ಸದಾನಂದ ಹಾಗೂ KSCA ಸಿಬ್ಬಂದಿಗಳು ಉಪಸ್ಥಿತರಿದ್ದರು.
2 weeks ago | [YT] | 8
View 0 replies
Shivamogga Media 24x7
ಶಿವಮೊಗ್ಗ ನಗರದ ವಿನಾಯಕ ನಗರದಲ್ಲಿ ವಾಸವಿ ಸಂಘದ ವತಿಯಿಂದ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿರುವ **"ವಾಸವಿ ಕನ್ಯಾಕಾ ಭವನ"**ವನ್ನು ಇಂದು ಲೋಕಸಭಾ ಸದಸ್ಯ ಬಿವೈ ರಾಘವೇಂದ್ರ ಉದ್ಘಾಟಿಸಿದರು.. ಇದೇ ಸಂದರ್ಭದಲ್ಲಿ ಭವನದ ನಿರ್ಮಾಣಕ್ಕೆ ಉದಾರವಾಗಿ ಸಹಕರಿಸಿದ ದಾನಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು, ಎಲ್ಲರನ್ನೂ ಉದ್ದೇಶಿಸಿ ಮಾತನಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಶ್ರೀ ಡಿ.ಹೆಚ್. ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್. ಅರುಣ್, ಜಿ.ಪಂ. ಮಾಜಿ ಸದಸ್ಯರಾದ ಶ್ರೀ ಕೆ.ಈ. ಕಾಂತೇಶ್, ಪ್ರಮುಖರಾದ ಶ್ರೀ ಐಡಿಯಾಸ್ ಶ್ರೀಧರ್, ಶ್ರೀ ಅಶ್ವಥ್ ನಾರಾಯಣ ಶೆಟ್ಟಿ, ಶ್ರೀ ಮುರುಳಿ ಸೇರಿದಂತೆ ವಾಸವಿ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಹಿರಿಯರು ಉಪಸ್ಥಿತರಿದ್ದರು.
ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ವಾಸವಿ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಅಭಿನಂದನೆಗಳು.
2 weeks ago | [YT] | 19
View 0 replies
Shivamogga Media 24x7
ಕಿವಿ ಮಾತು...CM-PM
ಸಿಎಂ ಸಿದ್ದರಾಮಯ್ಯ ನವರ ಕಿವಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿರವರು ಏನು ಹೇಳುತ್ತಿರಬಹುದು ಎಂಬ ಚಿಂತನೆಯನ್ನು ಛಾಯಾಚಿತ್ರಗಳು ಕಥೆ ಹೇಳುವಂತಿದೆ ...
ಛಾಯಾಚಿತ್ರಗಳಲ್ಲಿ ಆತ್ಮೀಯ ನಗು ಮೊಗದ ಸ್ವಾಗತ ಕೋರಿ, ಕಿವಿಮಾತಿಗೆ ಕಿವಿಕೊಟ್ಟ ಸಿಎಂ- ಪಿ.ಎಂ. ಆತ್ಮೀಯತೆಯ ಸಂದರ್ಭದಲ್ಲಿ ಸಾಕ್ಷಿಯಾಗಿವೆ..
ಬೆಂಗಳೂರು, ಏಪ್ರಿಲ್ 15: ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ 15 /4/2026 ರಂದು ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದರು. ಈ ವೇಳೆ ಸಿಎಂ ಅವರು ಪ್ರಧಾನಿಗೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಅರ್ಪಿಸಿದರು.
#bengaluru #bangalore #PoliticalNews #NarendraModi #PrimeMinister #siddaramaiahcmofkarnataka #Siddaramaiah #karnataka
3 weeks ago | [YT] | 21
View 0 replies
Shivamogga Media 24x7
ಜಿಲ್ಲಾ ಹಾಪ್ಕಾಮ್ಸ್ನ ನೂತನ ನಿರ್ದೇಶಕರಾಗಿ ಅರುಣ್ ನಾಯ್ಡು ಆಯ್ಕೆ...
ಶಿವಮೊಗ್ಗ ಜಿಲ್ಲಾ ಹಾಪ್ಕಾಮ್ಸ್ನ ನೂತನ ನಿರ್ದೇಶಕರಾಗಿ ಆಯ್ಕೆಯಾದ ಅರುಣ್ ನಾಯ್ಡು ಅವರನ್ನು ಅಭಿನಂದಿಸಲಾಯಿತು. ಹಾಪ್ಕಾಮ್ಸ್ ಅಧ್ಯಕ್ಷರಾದ ಆರ್.ವಿಜಯಕುಮಾರ್(ದನಿ), ಜವಳಿ ನಿಗಮದ ಅಧ್ಯಕ್ಷರಾದ ಚೇತನ್ ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್ ಗೌಡ, ಡಾ.ಶರತ್ ಮರಿಯಪ್ಪ, ನಾಗೇಶ್ ನಾಯ್ಕ್, ಮಧುಸೂದನ್, ಅನಿಲ್ ಸಾಗರ್, ಅರ್ಜುನ್ ಸೇರಿದಂತೆ ಹಾಪ್ಕಾಮ್ಸ್ನ ಎಲ್ಲಾ ನಿರ್ದೇಶಕರು ಇದ್ದರು.
2 months ago (edited) | [YT] | 1
View 0 replies
Shivamogga Media 24x7
ಶಿವಮೊಗ್ಗ ಜಿಲ್ಲೆಗೆ ನೂತನವಾಗಿ ವರ್ಗಾವಣೆಯಾಗಿರುವ *ಶ್ರೀ ಬಿ. ನಿಖಿಲ್ ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರವರು ಈ ದಿನ ದಿನಾಂಕಃ 01-01-2026 ರಂದು ಸಂಜೆ ಶಿವಮೊಗ್ಗ ಜಿಲ್ಲೆಗೆ ಬಂದು ವರದಿ ಮಾಡಿಕೊಂಡಿದ್ದು, *ಶ್ರೀ ಎ ಜಿ ಕಾರ್ಯಪ್ಪ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು 1 ರವರಿಂದ *ಶಿವಮೊಗ್ಗ ಜಿಲ್ಲೆಯ ಪ್ರಭಾರವನ್ನು* ವಹಿಸಿಕೊಂಡಿರುತ್ತಾರೆ.
ಆ ನಂತರ ಶಿವಮೊಗ್ಗ ನಗರದ ಪಿಐ ದರ್ಜೆಯ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳಿಗೆ ಉತ್ತಮ ಕರ್ತವ್ಯ ನಿರ್ವಹಿಸುವ ಸಂಬಂಧ ಸೂಕ್ತ ಸೂಚನೆ ಮತ್ತು ಸಲಹೆಗಳನ್ನು ನೀಡಿರುತ್ತಾರೆ.
4 months ago | [YT] | 17
View 0 replies
Shivamogga Media 24x7
ಪೋಕ್ಸೋ ಕೇಸ್ ನಲ್ಲಿ ಚಿತ್ರದುರ್ಗದ ಕೋರ್ಟ್ ನಿಂದ ಮಹತ್ವದ ತೀರ್ಪು
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ನಿರ್ದೋಷಿ ಎಂದು
ಮೊದಲ ಕೇಸ್ ನಲ್ಲಿ ಕೋರ್ಟ್ ತೀರ್ಪು
5 months ago | [YT] | 0
View 0 replies
Shivamogga Media 24x7
*ಸಾಲುಮರದ ತಿಮ್ಮಕ್ಕ ನವರಿಗೆ ಶ್ರದ್ಧಾಂಜಲಿ*
*ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಪರಿಸರಾ ಸಕ್ತರು, ಶಿವಮೊಗ್ಗ ಇವರಿಂದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರ ಸೇವೆಯನ್ನು ಸ್ಮರಿಸಿ, ಮತ್ತೊಮ್ಮೆ ಹುಟ್ಟಿ ಬನ್ನಿ ಮಹಾತಾಯಿ, ನಿಮಗಿದು ಕೋಟಿ ಪ್ರಣಾಮಗಳು ಎಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಕೆ.ವಿ. ವಸಂತಕುಮಾರ್, ಡಾ. ಎ. ಸತೀಶ್ ಕುಮಾರ್ ಶೆಟ್ಟಿ, ಬಿ. ಗೋಪಿನಾಥ್, ಎಸ್. ಆರ್. ಗೋಪಾಲ್, ಸುರೇಶ್, ಜನಾರ್ಧನ್ ಪೈ, ಗಿರೀಶ್, ಸೀತಾರಾಂ, ವಿನೋದ್ ಪೈ, ಮಹಮ್ಮದ್ ಇಕ್ಬಾಲ್, ಆನಂದ್, ಸ್ವಾಮಿ ಹಾಗೂ ಇತರರು ಹಾಜರಿದ್ದರು.
5 months ago | [YT] | 0
View 0 replies
Shivamogga Media 24x7
ಎಸ್. ಕೆ. ಮರಿಯಪ್ಪ ನವರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರಧಾನ...
ಸಹಕಾರ ಕ್ಷೇತ್ರದ ಬೆಳವಣಿಗೆ ಮತ್ತು ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಸೇವೆ ಸಲ್ಲಿಸಿರುವುದನ್ನು ಗುರುತಿಸಿ "72ನೇ ಅಖಿಲ ಭಾರತ ಸಹಕಾರ ಸಪ್ತಾಹ" 2025 ಆಚರಣೆ ಸಂದರ್ಭದಲ್ಲಿ *ಸಹಕಾರ ರತ್ನ* ಪ್ರಶಸ್ತಿಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯವರಿಂದ ಸ್ವೀಕರಿಸಲಾಯಿತು.
5 months ago | [YT] | 1
View 0 replies
Shivamogga Media 24x7
ಮಕ್ಕಳಲ್ಲಿ ಶಿಸ್ತು ಬೆಳೆಸುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ*
ಶಿವಮೊಗ್ಗ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತಿನ ಸಂಸ್ಥೆಯಾಗಿದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಅಧ್ಯಕ್ಷರು ಗುರುದತ್ ಹೆಗಡೆ ಹೇಳಿದರು.
ಜಿಲ್ಲಾಧಿಕಾರಿಗಳ ಆವರಣದಲ್ಲಿ
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜ ಚೀಟಿ ಬಿಡುಗಡೆಗೊಳಿಸಿ ಮಾತನಾಡಿ, ಸಂಸ್ಥೆಯು ಅನೇಕ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎತ್ತರಕ್ಕೆ ಬೆಳೆಯುತ್ತಿದ್ದು, ಅದರ ಬೆಳವಣಿಗೆಗೆ ನಾವೆಲ್ಲರೂ ಕೈ ಜೋಡಿಸೋಣ, ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದು ತಿಳಿಸಿದರು. ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತರಾದ ಶಕುಂತಲಾ ಚಂದ್ರಶೇಖರ್ ಮಾತನಾಡುತ್ತಾ
ಸಂಸ್ಥಾಪನಾ ದಿನಾಚರಣೆ ಮಹತ್ವವನ್ನು ತಿಳಿಸುತ್ತ ಸ್ಕೌಟ್ಸ್ ಇತಿಹಾಸದ ಬಗ್ಗೆ ವಿವರಿಸಿದರು.
ಭಾರತದಲ್ಲಿ ಸ್ಕೌಟಿಂಗ್ ಗೈಡಿಂಗ್ ಬೆಳೆದು ಬಂದ ದಾರಿ ತಿಳಿಸಿ ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ನ್ಯಾಷನಲ್ ಸ್ಕೌಟ್ ಅಸೋಸಿಯೇಷನ್, ಹಿಂದೂಸ್ತಾನ ಸ್ಕೌಟ್ಸ್ ಅಸೋಸಿಯೇಷನ್, ಗರ್ಲ್ ಗೈಡ್ ಅಸೋಸಿಯೇಷನ್ ಹೀಗೆ ಅನೇಕ ಸಂಘಟನೆಗಳಿದ್ದು, ಇವೆಲ್ಲವನ್ನು ಒಂದುಗೂಡಿ ಒಂದೇ ಸಂಘಟನೆ ಆಗಬೇಕೆಂದು ನಿರ್ಧರಿಸಿ ಪ್ರತಿಫಲವಾಗಿ 1950 ನವೆಂಬರ್ 7 ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು ಎಂದು ತಿಳಿಸಿದರು.
ಮಾತನಾಡಿದರು. ಎ.ವಿ.ರಾಜೇಶ್ ಮಾತನಾಡಿದರು. ಜಿಲ್ಲಾ ಆಯುಕ್ತ(ಸ್ಕೌಟ್ಸ್) ಎಸ್.ಜಿ.ಆನಂದ್ ಮತ್ತು ಜಿಲ್ಲಾ ಕೇಂದ್ರ ಸ್ಥಾನಿಕಆಯುಕ್ತ , ಜಿ ವಿಜಯಕುಮಾರ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ಸಹ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಜಿಲ್ಲಾ ಸಹಾಯಕ ಆಯುಕ್ತರು ಮಲ್ಲಿಕಾರ್ಜುನ ಕಾನೂರು, ಕೃಷ್ಣಸ್ವಾಮಿ, ಶಿವಶಂಕರ್.. ಹೇಮಲತಾ ಗೈಡ್ ಆಯುಕ್ತರಾದ. ಲಕ್ಷ್ಮೀ ರವಿ. ಗುರುಮೂರ್ತಿ ಟಿಜಿ. ರುದ್ರಪ್ಪ ಚೀಲೂರು. ನ್ಯಾಷನಲ್ ಪಬ್ಲಿಕ್ ಶಾಲೆಯ ಶಿಕ್ಷಕ. ಸೋಮಣ್ಣ
ಸುನಂದಮ್ಮ ನಗರದ ವಿವಿಧ ಶಾಲೆಯ 200 ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಉಪಸ್ಥಿತರಿದ್ದರು.
5 months ago | [YT] | 0
View 0 replies
Load more