Shivamogga Media 24x7

ಸುದ್ದಿ ಜಗತ್ತು, ನೇರ, ವಾಸ್ತವ ಜನ ಮನ ದ್ವನಿ...
YouTube Channel: @ShivamoggaMedia24x7

Welcome to Shivamogga Media 24x7 News, your trusted source for the latest updates, breaking news, and authentic stories. Bringing you truthful, live, and impactful journalism that resonates with the voice of the people. 🌍📰

Stay informed about current affairs, political insights, cultural stories, and much more with our engaging and factual reporting. We are dedicated to keeping you connected with the pulse of reality.

Subscribe to our channel and join us in exploring the world of news as it unfolds. Don’t forget to like, share, and comment to let your voice be heard!

📌 Slogan: ಸುದ್ದಿ ಜಗತ್ತು, ನೇರ, ವಾಸ್ತವ ಜನ ಮನ ದ್ವನಿ...

Stay updated. Stay aware. Stay with Shivamogga Media 24x7 News. 🎥✅


Shivamogga Media 24x7

*ವಿಶ್ವ ಸ್ಕೌಟ್ ಸ್ಕಾರ್ಫ್ ಡೇ. ವಿಶ್ವ ಸೂರ್ಯೋದಯ ದಿನ*
ದಿನಕ್ಕೊಂದು ಸತ್ಕಾರ್ಯ ಮಾಡಲು ಪ್ರೆರೇಪಿಸುವ ನಮ್ಮ ಕಂಠ ವಸ್ತ್ರ - ಶ್ರೀಮತಿ ಶಕುಂತಲಾ ಚಂದ್ರಶೇಖರ
ಮಾನವೀಯ ಮೌಲ್ಯಗಳನ್ನು ಹೊತ್ತು, ಅಪಘಾತ ನೈಸರ್ಗಿಕ ವಿಕೋಪ, ಯುದ್ಧ ಮುಂತಾದ ಅವಘಡಗಳು ಸಂಭವಿಸಿದಾಗ ಅತ್ಯಂತ ಪ್ರಾಮಾಣಿಕ ಮತ್ತು ಉತ್ಸಾಹಿ ಸೇವಾ ಕಾರ್ಯ ಮಾಡುವ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಇಂದಿಗೂ ಸಹ ಪ್ರಸ್ತುತ ಹಾಗೂ ಮಾದರಿಯಾಗಿವೆ ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಅವರು ಇಂದು ಬೆಳಿಗ್ಗೆ ನಗರದ ಬಿ. ಹೆಚ್. ರಸ್ತೆಯ ನಿಧಿಗೆಯಲ್ಲಿ ಇರುವ ಜೈನ್ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವ ಸ್ಕೌಟ್ಸ್ ಶಿರೋ ವಸ್ತ್ರ ದಿನ ಮತ್ತು ಸ್ಕೌಟ್ಸ್ ಸನ್ ರೈಸ್ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು. ಪ್ರತಿವರ್ಷ ಆಗಸ್ಟ್ ಒಂದರಂದು ಸ್ಕೌಟ್ ಸ್ಕಾರ್ಫ್ ಡೇ ಮತ್ತು ಸ್ಕೌಟಿಂಗ್ ಸನ್ರೈಸ್ ಡೇ ಆಚರಿಸಲಾಗುತ್ತದೆ. ಒಮ್ಮೆ ಸ್ಕೌಟ್ ಚಳುವಳಿಯಲ್ಲಿ ತೊಡಗಿಕೊಂಡರೆ ಅವರು ಯಾವಾಗಲೂ ಸ್ಕೌಟ್ ಆಗಿರುವವರು ಎಂದು ನುಡಿದರು. 1907ರಲ್ಲಿ ಬ್ರೌನ್ಸಿ ದೀಪದಲ್ಲಿ ನಡೆದ ಮೊದಲ ಸ್ಕೌಟ್ ಕ್ಯಾಂಪಿನಲ್ಲಿ ಕೇವಲ 20 ಮಕ್ಕಳೊಂದಿಗೆ ಪ್ರಾರಂಭವಾದ ಈ ಚಳುವಳಿ ಇಂದು ನೂರಾ ಅರವತ್ತಕ್ಕಿಂತ ಹೆಚ್ಚು ದೇಶದಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ ಎಂದು ನುಡಿದರು ಇದೇ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಸಹಜವಾಗಿ ಸ್ಕಾರ್ಫ್ ಕೇವಲ ಒಂದು ಸಂಕೇತವಾಗಿದೆ ಆದರೆ ಸ್ಕೌಟ್ಸ್ ಭರವಸೆ ಮತ್ತು ಜಗತ್ತನ್ನು ನಮಗಿಂತ ಸ್ವಲ್ಪ ಉತ್ತಮವಾದ ಸ್ಥಳವಾಗಿ ಬಿಡುವ ನಮ್ಮ ಧ್ಯೇಯಕ್ಕೆ ಬಲವಾದ ಸಂಕೇತವಾಗಿದೆ ಎಂದು ನುಡಿದರು. ಜೈನ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರದ ಶ್ರೀಮತಿ ದಿವ್ಯ ಶೆಟ್ಟಿ ಮಾತನಾಡಿ ನಮ್ಮ ಶಾಲೆಯಲ್ಲಿ ಸ್ಕೌಟ್ ಅಂಡ್ ಗೈಡ್ಸ್ ಇರುವುದ್ದರಿಂದ ಮಕ್ಕಳು ಶಿಸ್ತು ಮತ್ತು ಸಮಾಧಾನದ ವ್ಯಕ್ತಿತ್ವವನ್ನು, ಮಾನವೀಯ ಮೌಲ್ಯಗಳ ಹಾಗೂ ವ್ಯಕ್ತಿ ವಿಕಾಸನ ಹೊಂದುವಂತಹ ಕಾರ್ಯಕ್ರಮಗಳನ್ನು ರೂಪಿಸುವ ಒಂದು ಮಹತ್ವದ ಭರವಸೆ ಹೊಂದಿದ್ದಾರೆ ಮತ್ತು ಮಕ್ಕಳು ಹೊಸ ಹೊಸ ರುಪುರೇಷಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದರೆ ಎಂದು ನುಡಿದರು.
ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ರಾಜೇಶ್ ಅವಲಕ್ಕಿಯವರು ಸ್ಕೌಟ್ಸ್ ಅಂಡ್ ಗೈಡ್ಸ್ ನ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಹಾಗೆ ವಿಶ್ವದಾದ್ಯಂತ ಇಂದು ನಡೆಯುವ ಈ ಸ್ಕಾರ್ಫ್ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ಸ್ಕೌಟಿಗೆ ಹೆಚ್ಚು ಯುವಜನರನ್ನು ಪರಿಚಯಿಸಲು ಈ ದಿನವೂ ಉತ್ತಮ ಅವಕಾಶವಾಗಿದೆ. ಸ್ಕೌಟ್ಸ್ ಗಳ ಪೋಷಕರು ಸಹೋದರರು ಮತ್ತು ಸಹೋದರಿಯರನ್ನು ಚಟುವಟಿಕೆಗಳಲ್ಲಿ ಭಾಗವಹಿಸಲು ಯುವಜನರನ್ನು ಸ್ಕೌಟಿಂಗಿಗೆ ಸೇರಲು ಆಹ್ವಾನಿಸೋಣ ಹಾಗೆ ಸೂರ್ಯೋದಯ ದಿನವನ್ನು ಆಚರಿಸುವ ಮೂಲಕ ಸ್ವಾಸ್ಥ ಸಮಾಜ ಕಟ್ಟೋಣ ಎಂದು ನುಡಿದರು. ಕಾರ್ಯಕ್ರಮದಲ್ಲಿ ಆಯುಕ್ತರದ
ಎಸ್ ಜಿ ಆನಂದ್,
ಮಲ್ಲಿಕಾರ್ಜುನ್ ಕಾನೂರ್, ವೈ ಆರ್ ವೀರೇಶಪ್ಪ, ಕೃಷ್ಣಸ್ವಾಮಿ,
ಶಾಲೆಯ ಆಡಳಿತ ಅಧಿಕಾರಿ ವಿಜಯಕುಮಾರ್, ಸ್ಕೌಟ್ ಅಂಡ್ ಗೈಡ್
ಶಿಕ್ಷಕರಾದ ಅನಿತಾ
ಶಾಲಾ ಸ್ಕೌಟ್ - ಗೈಡ್ ಮಕ್ಕಳು ಹಾಗೂ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

1 day ago | [YT] | 0

Shivamogga Media 24x7

ಹಾಡುವ ಭಾವಗೀತೆಗಳನ್ನು ಹಾಡಿ ತೋರಿಸಬೇಕು

ಕಾ ವೆಂ ಶ್ರೀನಿವಾಸ ಮೂರ್ತಿ

ಶಿವಮೊಗ್ಗ ಸಾಂಸ್ಕೃತಿಕ ರಾಜಧಾನಿ ಎಂದು ಹೆಸರು ಗಳಿಸಿರುವುದಕ್ಕೆ ಇಲ್ಲಿನ ಸಹೃದಯರೇ ಕಾರಣ. ಮಹಾನ್ ಸಾಹಿತಿಗಳು ನಿಂತು ಮಾತನಾಡಿದ ಈ ವೇದಿಕೆಯಲ್ಲಿ ನನ್ನ ಗೀತೆಗಳನ್ನು ಹಾಡುತ್ತಿರುವುದು ನನ್ನ ಭಾಗ್ಯ ಎಂದವರು ತಿಳಿಸಿದರು. ಅವರು ಶಿವಮೊಗ್ಗ ಜಿಲ್ಲಾ ಸುಗಮ ಸಂಗೀತ ಪರಿಷತ್ತು ಮತ್ತು ಚಿರಂತನ ಯೋಗ ಮತ್ತು ಸಂಗೀತ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸಂಘದಲ್ಲಿ ನಡೆದ "ರಾಗ ರಿಂಗಣ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಶಿವಮೊಗ್ಗದ ಕಲಾವಿದರು ನಡೆಸಿಕೊಟ್ಟ ಕಾವೆಂ ಅವರ ಸುಮಧುರ ಗೀತೆಗಳು ಕಿಕ್ಕಿರಿದು ನೆರೆದಿದ್ದ ಸಾಹಿತ್ಯಪ್ರಿಯರಿಗೆ ಆಪ್ಯಾಯ ಮಾನವಾಗಿತ್ತು.

ವೇದಿಕೆಯಲ್ಲಿ ಆಸೀನರಾಗಿದ್ದ ಮೈಸೂರಿನ ನಾಗರಾಜ್, ಡಾ.ನಾಗಮಣಿ ಸಹ ಮಾತನಾಡಿದರು. ಶಾಂತ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಜಿ ವಿಜಯಕುಮಾರ್ ಮತ್ತು ಕಲಾವಿದ ಎರಿಸ್ವಾಮಿ ಅವರು ಇದ್ದರು.
ಇದೇ ಸಂದರ್ಭದಲ್ಲಿ ಡಾಕ್ಟರ್ ಕಾ ವೆಂ ಶ್ರೀನಿವಾಸ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.

1 day ago | [YT] | 5

Shivamogga Media 24x7

ಸುರಕ್ಷಿತ ಸ್ತನ್ಯಪಾನ ಸುಸ್ಥಿರ ಜೀವನದ ಮಾದಲ ಹೆಜ್ಜೆ
ಡಾ: ಕೌಸ್ತುಭ ಅರುಣ್

ಸ್ತನ್ಯಪಾನ ನಿಸರ್ಗನೀಡಿದ ವರದಾನ ಮಗುವಿಗೆ ಇದು ಅಮೃತ ಸಮಾನವಾದ ಪರಿಪೂರ್ಣ ಪೌಷ್ಟಿಕ ಆಹಾರ ,ತಾಯಿ ಮಗುವಿನ ಬಾಂಧವ್ಯವು ಅತ್ಯಂತ್ರ ಪವಿತ್ರ, ನಿಷ್ಕಲ್ಮಶ ಹಾಗೂ ಭಾವನಾತ್ಮಕವಾದುದು ಜೀವನದುದ್ದಕ್ಕೂ ಈ ಬಾಂಧವ್ಯ ಗಾಢವಾಗಲು ಜೈವಿಕ ಮಾನಸಿಕ ನಂಟು ಬಲಗೊಳ್ಳಲು ಸ್ತನ್ಯಪಾನವೇ ಅಡಿಪಾಯ ಮುಖ್ಯ ಎಂದು ಸಂಪನ್ಮೂಲ ವ್ಯಕ್ತಿ ಡಾ: ಕೌಸ್ತುಭ ಅರುಣ್ ಅವರು ಕರೆ ಕೊಟ್ಟರು

ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ತಾಯಿ ಮತ್ತು ಮಗುವಿನ ಆರೈಕೆ ಜುಲೈ ಮಾಸದ ಕಾರ್ಯಕ್ರಮದ ಅಡಿಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್, ಶಿವಮೊಗ್ಗ ವತಿಯಿಂದ ನಗರ ಅರೋಗ್ಯ ಕೇಂದ್ರ ,ಬಾಪೂಜಿ ನಗರ ಶಿವಮೊಗ್ಗ ಇವರ ಸಹಯೋಗದೊಂದಿಗೆ ನಗರ ಅರೋಗ್ಯ ಕೇಂದ್ರ ಬಾಪೂಜಿ ನಗರ ಶಿವಮೊಗ್ಗ ದಲ್ಲಿ ಮಾತೃತ್ವ- ತಾಯ್ತನ ಹೆರಿಗೆ ಮತ್ತು ಮಕ್ಕಳ ಆರೈಕೆಯ ಆರೋಗ್ಯ ಕುರಿತ ಶಿಬಿರದ ಸಮಾರಂಭ ಉದ್ಘಾಟಿಸಿ ಮಾತನಾಡಿದರು

ಅವರು ಮಾತನಾಡುತ್ತಾ ಗರ್ಭಾವಸ್ಥೆಯಲ್ಲಿ ನಿಯಮಿತ ಆರೋಗ್ಯ ತಪಾಸಣೆ, ಅಲ್ಟ್ರಾಸೌಂಡ್ಗಳು ಮತ್ತು ಪೌಷ್ಟಿಕಾಂಶ ಮಾರ್ಗದರ್ಶನ. ಪ್ರಸವಪೂರ್ವ ಆರೈಕೆ, ಪ್ರಸವಪೂರ್ವ ತರಗತಿಗಳು, ಹೆಚ್ಚಿನ ಅಪಾಯದ ಗರ್ಭಧಾರಣೆಯ ನಿರ್ವಹಣೆ ಮತ್ತು ಸುಧಾರಿತ ಹೆರಿಗೆ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಯೋಗ, ನಿಯಮಿತ ಆರೋಗ್ಯ ತಪಾಸಣೆಗಳು, ಪ್ರಸವಾನಂತರದ ಆರೈಕೆ: ಚೇತರಿಕೆ ಟ್ರ್ಯಾಕಿಂಗ್, ಮಾನಸಿಕ ಆರೋಗ್ಯ ತಪಾಸಣೆ ಮತ್ತು ಹೆರಿಗೆಯ ನಂತರ ತಾಯಿಗೆ ಬೆಂಬಲ ಸಮಯೋಚಿತ ಲಸಿಕಾಕರಣ ಯೋಜನದ ನವಜಾತ ಶಿಶುಗಳಿಗೆ ಹಾಲುಣಿಸುವುದು, ಮೊದಲ 6 ತಿಂಗಳವರೆಗೆ ಪ್ರತ್ಯೇಕವಾಗಿ ಎದೆಹಾಲುಣಿಸುವುದನ್ನು ಶಿಫಾರಸು ಮಾಡಲಾಗುತ್ತದೆ, ಶಿಶು ನಿದ್ರೆ ಮತ್ತು ಸುರಕ್ಷತೆ, ರೋಗನಿರೋಧಕ ಶಕ್ತಿ ಮತ್ತು ಮೇಲ್ವಿಚಾರಣೆ, ನಿಯಮಿತ ಮಕ್ಕಳ ತಪಾಸಣೆಗಳು ಬೆಳವಣಿಗೆಯ ಮೈಲಿಗಲ್ಲುಗಳು, ಲಸಿಕೆಗಳು ಮತ್ತು ಬೆಳವಣಿಗೆಯ ಪ್ರಗತಿಯ ಬಗ್ಗೆ ವಿವರಿಸುತ್ತಾ ಉಪಸ್ಥಿತರಿದ್ದ ಗರ್ಭಿಣಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು
ತಾಯಂದಿರು, ಶಿಶುಗಳು ಮತ್ತು ಮಕ್ಕಳ ಒಟ್ಟಾರೆ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಉತ್ತೇಜಿಸುವುದರ ಜೊತೆಗೆ ಅನಾರೋಗ್ಯವನ್ನು ಕಡಿಮೆ ಮಾಡುವುದು ಮಾತೃ ಮತ್ತು ಮಕ್ಕಳ ಆರೋಗ್ಯ ಸೇವೆಗಳ ಪ್ರಾಥಮಿಕ ಉದ್ದೇಶವಾಗಿದೆ ಎಂದು ಉಪಸ್ಥಿತರಿದ್ದ ನಗರ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಅಶ್ರಿಯ ಅಂಜುಮ್ ಅವರು ಅಭಿಮತ ವ್ಯಕ್ತಪಡಿಸಿದರು
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷರಾದ ಶೇಷಗಿರಿ ಡಿ ಕೆ
ಜುಲೈ ಮಾಸವನ್ನು ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯು ತಾಯಿ ಮತ್ತು ಮಗುವಿನ ಆರೈಕೆಗೆ ನಿಗದಿಪಡಿಸಿದ್ದು ಗರ್ಭಿಣಿಯರಿಗೆ ಪ್ರೋಟೀನ್ ಆಹಾರ ಕಿಟ್ ಮತ್ತು ಮಾರ್ಗದರ್ಶನ ಕೈಪಿಡಿಯನ್ನು ವಿತರಿಸಲಾಗುತ್ತಿದೆ ನೀವೆಲ್ಲರೂ ವೈದ್ಯಕೀಯ ಸಲಹೆಯನ್ನು ಪಾಲಿಸುವುದರ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೋರಿದರು
ನಿಯಮಿತ ರೋಗನಿರೋಧಕಗಳು, ಪೌಷ್ಠಿಕಾಂಶದ ಮೇಲ್ವಿಚಾರಣೆ ಮತ್ತು ಆರಂಭಿಕ ಅನಾರೋಗ್ಯದ ಚಿಕಿತ್ಸೆ ಸೇರಿದಂತೆ ಸಮಗ್ರ ಪ್ರಾಥಮಿಕ ಆರೈಕೆ ಮಧ್ಯಸ್ಥಿಕೆಗಳನ್ನು ಒದಗಿಸುವುದು.,ಕುಟುಂಬ ಯೋಜನೆ,ಅನಗತ್ಯ ಅಥವಾ ನಿಕಟ ಗರ್ಭಧಾರಣೆ ತಡೆ, ಸಂತಾನೋತ್ಪತ್ತಿ ,ಆರೋಗ್ಯ ಶಿಕ್ಷಣ ಮತ್ತು ಆಧುನಿಕ ಗರ್ಭನಿರೋಧಕಗಳ ವಿಷಯಗಳ ಬಗ್ಗೆ ತಿಳುವಳಿಕೆ ಮೂಡಿಸಲು ಮಾಜಿ ಸಹಾಯಕ ಗವರ್ನರ್ ಹಾಗೂ ಉಪಾಧ್ಯಕ್ಷರಾದ ರೊಟೇರಿಯನ್ ಜಿ ವಿಜಯ್ ಕುಮಾರ್ ಕರೆ ನೀಡಿದರು
ನಂತರ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಕಾರ್ಯದರ್ಶಿಯಾದ ಆರ್ ಮನೋಹರ ರವರು "ತಾಯಂದಿರ, ಪ್ರಸವಪೂರ್ವ, ಶಿಶು ಮತ್ತು ಬಾಲ್ಯದ ಮರಣ ಮತ್ತು ಅನಾರೋಗ್ಯವನ್ನು ಕಡಿಮೆ ಮಾಡುವುದು ,ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವುದು,ಹುಟ್ಟಿನಿಂದ ಹದಿಹರೆಯದವರೆಗಿನ ಮಕ್ಕಳಲ್ಲಿ ಅತ್ಯುತ್ತಮ ದೈಹಿಕ, ಅರಿವಿನ ಮತ್ತು ಮಾನಸಿಕ ಸಾಮಾಜಿಕ ಬೆಳವಣಿಗೆಯನ್ನು ಪೋಷಿಸುವುದು ಮುಖ್ಯ ಎಂದು ತಿಳಿಸಿದರು
ಈ ಸಂದಭದಲ್ಲಿ ರೋಟೆರಿಯನ್ ರಘುರಾಜ್ ಎಚ್ ಕೆ ರವರು ಮಾತೃತ್ವ ಮತ್ತು ಮಕ್ಕಳ ಆರೈಕೆಯು ಗರ್ಭಾವಸ್ಥೆಯಲ್ಲಿ ತಾಯಂದಿರಿಗೆ ಮತ್ತು ಹುಟ್ಟಿನಿಂದ ಅವರ ಆರಂಭಿಕ ವರ್ಷಗಳವರೆಗಿನ ಮಕ್ಕಳಿಗೆ ವೈದ್ಯಕೀಯ, ಪೌಷ್ಟಿಕಾಂಶ ಮತ್ತು ಬೆಳವಣಿಗೆಯ ಅಗತ್ಯತೆ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದರು
ಇದೆ ಸಂಧರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಕ್ಲಬ್ ನ ವತಿಯಿಂದ ಗರ್ಭಿಣಿ ತಾಯಿ ಮತ್ತು ಮಕ್ಕಳ ಆರೋಗ್ಯದ ಸುರಕ್ಷತೆಗಾಗಿ ಪೌಷ್ಟಿಕ ಆಹಾರ ಕಿಟ್ ಗಳನ್ನು ಗರ್ಭಿಣಿ ತಾಯಿಯವರುಗಳಿಗೆ ವಿತರಣೆ ಮಾಡಲಾಯಿತು
ಈ ಸಂದಭದಲ್ಲಿ ನಂದಿನಿ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿ ,ಸುನಿಲ್ ಕುಮಾರ್ ಅರೋಗ್ಯ ನಿರೀಕ್ಷಣಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಮತ್ತಿತರು ಉಪಸ್ಥಿತರಿದ್ದರು.

1 day ago | [YT] | 0

Shivamogga Media 24x7

*ನಿಕಟಪೂರ್ವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ -ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ - ಇಡುಗಾಯಿ ಸಮರ್ಪಣೆ*

*ಕರ್ನಾಟಕ ರಾಜ್ಯದ ಜನಪ್ರಿಯ ನಿಕಟಪೂರ್ವ ಮುಖ್ಯಮಂತ್ರಿಗಳು ಸರ್ವ ಜನಾಂಗದ ನಾಯಕ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಹುಟ್ಟು ಹಬ್ಬದ ಅಂಗವಾಗಿ ನಗರದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಶಿವಮೊಗ್ಗ ಜಿಲ್ಲೆ ಕರುನಾಡ ದೊರೆ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಮಹಾರುದ್ರಾಭಿಷೇಕ "ವಿಶೇಷ ಪೂಜೆ ಸಲ್ಲಿಸಿ- ಇಡುಗಾಯಿ ಸಮರ್ಪಣೆ ಮಾಡಿ ಆಚರಿಸಲಾಯಿತು*

*ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಕೆ ರಂಗನಾಥ್ ಅವರು, ಸಾಮಾಜಿಕ ನ್ಯಾಯವನ್ನೇ ಉಸಿರಾಗಿರಿಸಿಕೊಂಡಿರುವ ಸಮಾಜವಾದಿ ನೇತಾರ, ಭಾಗ್ಯಗಳ ಸರದಾರ, ಗ್ಯಾರಂಟಿ ಯೋಜನೆಗಳ ಮೂಲಕ ನಾಡಿನ ಜನರ ಬದುಕುಗಳಿಗೆ ಹೊಸ ಭರವಸೆ ತುಂಬಿದ ಕರುನಾಡ ಭಾಗ್ಯವಿಧಾತ, ನಮ್ಮೆಲ್ಲರ ಮಾರ್ಗದರ್ಶಿಗಳು, ನಾಡಿನ ಅತ್ಯಂತ ಶ್ರೇಷ್ಠ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಆಡಳಿತ ನೀಡಿದ ಶ್ರೀ ಸಿದ್ದರಾಮಯ್ಯ ಅವರಿಗೆ ನಾಡ ದೇವತೆ ತಾಯಿ ಚಾಮುಂಡೇಶ್ವರಿ ಹಾಗೂ ಕಾಶಿ ವಿಶ್ವನಾಥ ದೇವರ ಅನುಗ್ರಹ ಅವರ ಮೇಲೆ ಸದಾ ಇರಲಿ ಎಂದು ಹುಟ್ಟುಹಬ್ಬದ ಶುಭಾಶಯ ಕೋರಿದರು*

*ಈ ಸಂದರ್ಭದಲ್ಲಿ ಮಾಜಿ ಉಪ ಮಹಾಪೌರರಾದ ಎಚ್ ಪಾಲಾಕ್ಷಿ, ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಸೂಡ ಸದಸ್ಯರಾದ ಎಂ ಪ್ರವೀಣ್ ಕುಮಾರ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ ಜಿಲ್ಲಾ ಯುವ ಕಾಂಗ್ರೆಸ್ ನ ಮುಖಂಡ ಹೆಚ್‌.ಪಿ. ಗಿರೀಶ್, ಬಿ ಲೋಕೇಶ್, ಟಿವಿ ರಂಜಿತ್ ಪಂಚ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಸದಸ್ಯರಾದ ಎಮ್ ರಾಹುಲ್ ,ಎಸ್ ಕುಮಾರೇಶ್ ,ಬಸವರಾಜ್, ಮಹಿಳಾ ಬ್ಲಾಕ್ ಅಧ್ಯಕ್ಷರಾದ ಸುವರ್ಣ ನಾಗರಾಜ್ , ಸುಶೀಲ ಷಣ್ಮುಗಂ, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಎಂ ರಾಕೇಶ್, ಕೆ ಎಲ್ ಪವನ್ , ಪುಷ್ಪಕ್ ಕುಮಾರ್, ಟಿ ಗುರುಪ್ರಸಾದ್, ರಾಹುಲ್ ಸಿಗೆಹಟ್ಟಿ, ರಾಜೇಶ್ ಮಂದಾರ, ಚಂದ್ರು ಗೆಡ್ಡೆ, ಆರ್‌ ಎಂ ಓಂ, ಮಸ್ತಾನ್,ಕಲ್ಲೂರ್ ವೆಂಕಟೇಶ್ , ಶಮ್ಮು,ಸಂತೋಷ್ ಪುರಲೆ, ಗಿರೀಶ್ ಶಾಸ್ತ್ರಿ, ಕೇಬಲ್ ಲೋಕೇಶ್,ಸಂದೇಶ್ ,ಸಾವಂತ್, ಪುನೀಲ್, ಹಾಗೂ ಸಿದ್ದರಾಮಯ್ಯನ ಅಭಿಮಾನಿಗಳು ಉಪಸ್ಥಿತರಿದ್ದರು*

1 day ago | [YT] | 2

Shivamogga Media 24x7

ಜೆ.ಎನ್.ಎನ್.ಸಿ.ಇ: 'ಯುಗ್ಮಾ ಟೆಕ್‌ಫೆಸ್ಟ್-2.0' ಎಐ ಹ್ಯಾಕಥಾನ್ ಉದ್ಘಾಟನೆ

ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ಎಐ ಪರಿಹಾರಗಳನ್ನು ರೂಪಿಸಿ

ಶಿವಮೊಗ್ಗ: ಯುವ ತಂತ್ರಜ್ಞರು ಸಮಾಜದ ನೈಜ ಸಮಸ್ಯೆಗಳನ್ನು ಗುರುತಿಸಿ, ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಿಸುವಂತಹ ನಾವೀನ್ಯ ಎಐ ಆಧಾರಿತ ಪರಿಹಾರಗಳನ್ನು ರೂಪಿಸಿ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯರೂ ಆದ ಉದ್ಯಮಿ ಎಸ್. ರುದ್ರೇಗೌಡ ಕರೆ ನೀಡಿದರು‌‌

ನಗರದ ಜೆ.ಎನ್.ಎನ್ ಇಂಜಿನಿಯರಿಂಗ್‌ ಕಾಲೇಜಿನ ಇನ್ಫಾರ್ಮೇಷನ್ ಸೈನ್ಸ್ ವಿಭಾಗ ಹಾಗೂ ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ‘ಯುಗ್ಮಾ ಟೆಕ್‌ಫೆಸ್ಟ್-2.0 ಮೇದದೃಷ್ಟಿ’ ರಾಷ್ಟ್ರಮಟ್ಟದ ಎಐ ಹ್ಯಾಕಥಾನ್ ಉದ್ಘಾಟಿಸಿ ಮಾತನಾಡಿದರು.

ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭವಿಷ್ಯದ ನವೋದ್ಯಮಿಗಳಾಗಿ, ತಂತ್ರಜ್ಞಾನ ನಾಯಕರಾಗಿ ಬದಲಾಗಬೇಕು. ಅಂತಹ ಬದಲಾವಣೆಗೆ ಹ್ಯಾಕಥಾನ್ ಅದ್ಭುತ ವೇದಿಕೆ. ಭಾರತವು ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಅತ್ಯಂತ ಗಮನಾರ್ಹ ಸಾಧನೆಯನ್ನು ಮಾಡಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.

1970ರ ದಶಕದ ಮಧ್ಯಭಾಗದಲ್ಲಿ ಕಂಪ್ಯೂಟರ್‌ ತಂತ್ರಜ್ಞಾನ ಆರಂಭವಾದ ದಿನಗಳಿಂದ ಹಿಡಿದು ಇಂದಿನ ಕೃತಕ ಬುದ್ಧಿಮತ್ತೆ ಯುಗದವರೆಗೆ ನಮ್ಮ ದೇಶವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಇಂದು ಎಐ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದರೂ ಪ್ರತಿಭಾವಂತ ಸಾಫ್ಟ್‌ವೇರ್‌ ವೃತ್ತಿಪರರ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದ್ದು, ನಿಮ್ಮಂತಹ ಯುವ ನವೋದ್ಯಮಿಗಳಿಗೆ ಅಪಾರ ಅವಕಾಶಗಳು ತೆರೆದುಕೊಳ್ಳುತ್ತಿವೆ.

ಜಗತ್ತಿನ ಅತಿದೊಡ್ಡ ಗ್ರಾಹಕ ಮಾರುಕಟ್ಟೆಗಳಲ್ಲಿ ಭಾರತವೂ ಒಂದಾಗಿದೆ. ನಮ್ಮ ದೇಶದಲ್ಲಿಯೇ ಅಪಾರ ಅವಕಾಶಗಳಿವೆ. ಆದ್ದರಿಂದ ನಿಮ್ಮ ಜ್ಞಾನ, ಕೌಶಲ್ಯ ಮತ್ತು ಸೃಜನಶೀಲತೆಯನ್ನು ಭಾರತದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಳಸಿಕೊಳ್ಳಿ. ನಿಮ್ಮಲ್ಲಿ ಹಲವರಿಗೆ ವಿದೇಶಗಳಲ್ಲಿ ಕೆಲಸ ಮಾಡುವ ಅವಕಾಶಗಳು ದೊರೆಯಬಹುದು. ಆದರೆ ನಿಮ್ಮ ಪ್ರತಿಭೆಯಿಂದ ನಮ್ಮ ದೇಶದಲ್ಲಿಯೇ ಮಹತ್ತರ ಬದಲಾವಣೆಗಳನ್ನು ತರಲು ಸಾಧ್ಯ ಎಂಬುದನ್ನು ಎಂದಿಗೂ ಮರೆಯಬೇಡಿ ಎಂದು ಕಿವಿಮಾತು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಯುಗ್ಮಾ ಎಂಬ ಶೀರ್ಷಿಕೆಯು ಕೂಡುವಿಕೆಯ ಸಂಕೇತವಾಗಿದೆ. ಪ್ರಾಯೋಗಿಕ ಜ್ಞಾನ ನೀಡುವಂತಹ ಸಾಧಕರ ಒಡನಾಟದಿಂದ ನಮ್ಮಲ್ಲಿ ಮತ್ತಷ್ಟು ಜ್ಞಾನ ವಿಕಸನಗೊಳ್ಳಲಿದೆ. ಎಐ ಎಲ್ಲಾ ರಂಗದಲ್ಲಿ ಅಳವಡಿಸಿಕೊಳ್ಳಲಾಗಿದೆ ಮತ್ತು ಪರಿಣಾಮಕಾರಿ ಫಲಿತಾಂಶ ಪಡೆಯಲಾಗುತ್ತಿದೆ. ಅದರೇ ಎಐ ಮನುಷ್ಯನಿಗೆ ಭಸ್ಮಾಸುರನಂತೆ ಕಾಡದಿರಲಿ. ಆವಿಷ್ಕಾರಗಳು ಬದುಕಿಗೆ ಪೂರಕವಾಗಿರಬೇಕು.

ಈ ನೆಲದ ಋಣ ತೀರಿಸುವತ್ತ ಯುವಸಮೂಹ ಗಮನಹರಿಸಬೇಕಿದೆ. ಪರ ಊರುಗಳಿಗೆ ಅವಕಾಶಗಳಿಗಾಗಿ ಹಾರದೆ, ಸುತ್ತಲಿನ ವಾತಾವರಣ ಬಳಸಿಕೊಂಡು ನಮ್ಮ ಊರಿನಲ್ಲಿಯೇ ಆವಿಷ್ಕಾರಿ ಬದಲಾವಣೆಗಳನ್ನು ನಿರ್ಮಿಸುವ ಕಾರ್ಯವಾಗಬೇಕಿದೆ. ಈ ಹಿನ್ನಲೆಯಲ್ಲಿ ಎಐ ನಂತಹ ತಂತ್ರಜ್ಞಾನಗಳ ಮೂಲಕ ಮತ್ತಷ್ಟು ಯೋಜನೆಗಳು ಅರಳಲಿ ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಹ್ಯಾಕಥಾನ್ ಎನ್ನುವುದು ಕೇವಲ ಒಂದು ಸ್ಪರ್ಧೆಯಲ್ಲ. ಅದು ತರಗತಿಯಲ್ಲಿ ಕಲಿತ ಜ್ಞಾನವನ್ನು ನೈಜ ಜೀವನದ ಸಮಸ್ಯೆಗಳಿಗೆ ಅನ್ವಯಿಸುವ ಸೇತುವೆಯಾಗಿದೆ. ತರಗತಿ ನಿಮಗೆ ಏನು ತಿಳಿಯಬೇಕು ಎಂಬುದನ್ನು ಕಲಿಸಿದರೆ, ಹ್ಯಾಕಥಾನ್ ತಿಳಿದಿರುವ ಜ್ಞಾನವನ್ನು ಸಮಾಜದ ಒಳಿತಿಗಾಗಿ ಹೇಗೆ ಬಳಸಬೇಕು? ಎಂಬ ಮಹತ್ವದ ಪ್ರಶ್ನೆಗೆ ಉತ್ತರ ಹುಡುಕುವ ಅವಕಾಶವನ್ನು ನೀಡುತ್ತದೆ. ನಿಜವಾದ ಕಲಿಕೆ ಅಲ್ಲಿಂದಲೇ ಆರಂಭವಾಗುತ್ತದೆ.

ನೀವು ರೂಪಿಸುವ ಪ್ರತಿಯೊಂದು ಯೋಜನೆಯಲ್ಲಿಯೂ ವಿಸ್ತರಣಾ ಸಾಮರ್ಥ್ಯ, ಸಂಪನ್ಮೂಲ ಹಾಗೂ ಇಂಧನ ದಕ್ಷತೆ, ಸಾಮಾಜಿಕ ಪರಿಣಾಮ ಹೊಂದಿರಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದೆ. ಸುಸ್ಥಿರ ಅಭಿವೃದ್ಧಿ ಇಂದು ಜಗತ್ತಿನ ಪ್ರಮುಖ ಸವಾಲಾಗಿದೆ. ಎಐ ಅಪಾರ ಅವಕಾಶಗಳನ್ನು ನೀಡಿದರೂ, ಹೆಚ್ಚಿನ ಗಣಕ ಶಕ್ತಿ ಮತ್ತು ವಿದ್ಯುತ್ ಬಳಕೆಯಿಂದ ಕಾರ್ಬನ್ ಹೆಜ್ಜೆಗುರುತನ್ನೂ ಹೆಚ್ಚಿಸುತ್ತದೆ. ಆದ್ದರಿಂದ ಭವಿಷ್ಯದ ಎಂಜಿನಿಯರ್‌ಗಳಾದ ನೀವು ಬುದ್ಧಿವಂತಿಕೆಯ ಜೊತೆಗೆ ಪರಿಸರ ಸ್ನೇಹಿ ಹಾಗೂ ಸಾಮಾಜಿಕ ಜವಾಬ್ದಾರಿಯುತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಇನ್ಫಾರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ರಾಘವೇಂದ್ರ ಆರ್.ಜೆ, ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಸಂಯೋಜಕರಾದ ವಿರೇಶ್.ಎಚ್.ಟಿ ಉಪಸ್ಥಿತರಿದ್ದರು. ಸಂಘಟನಾ ಸಮಿತಿಯ ಸದಸ್ಯರಾದ ಡಾ. ಪವನ್ ಕುಮಾರ್ ಎಂ.ಪಿ ಸ್ವಾಗತಿಸಿದರು. ವಿವಿಧ ರಾಜ್ಯಗಳ 150 ಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದರು.

6 days ago | [YT] | 4

Shivamogga Media 24x7

**ಶಿವಮೊಗ್ಗ ಗ್ರಾಮಾಂತರದಲ್ಲಿ ಬರ ಪರಿಸ್ಥಿತಿ ಪರಿಶೀಲನೆಗೆ ಶಾಸಕಿ ಶಾರದಾ ಪೂರ್ಯನಾಯ್ಕ್ ಭೇಟಿ**
**ರೈತರ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ**

ಶಿವಮೊಗ್ಗ, ಜು. 30: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯ್ಕ್ ಅವರು ಬುಧವಾರ ಹಾರನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸ್ಥಳದಲ್ಲೇ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕುಂಚೇನಹಳ್ಳಿ, ಮಲ್ಲಾಪುರ, ರಾಮನಗರ, ಬಾಳೆಕೊಪ್ಪ, ಹಾರನಹಳ್ಳಿ, ಕೊನಗವಳ್ಳಿ, ತ್ಯಾಜವಳ್ಳಿ ಹಾಗೂ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಕೃಷಿ ಜಮೀನುಗಳು, ಬೆಳೆಗಳ ಸ್ಥಿತಿ ಹಾಗೂ ಕುಡಿಯುವ ನೀರಿನ ಲಭ್ಯತೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ರೈತರಿಂದ ನೇರವಾಗಿ ಮಾಹಿತಿ ಪಡೆದರು.

ರೈತರು ಮಳೆಯ ಅಭಾವದಿಂದ ಬೆಳೆಗಳು ಒಣಗುತ್ತಿರುವುದು, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಕೊರತೆ ಎದುರಾಗಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಸಮಸ್ಯೆಗಳನ್ನು ಆಲಿಸಿದ ಶಾಸಕರು, ರೈತರ ಸಮಸ್ಯೆಗಳ ಕುರಿತು ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿಗಳ ಗಮನಸೆಳೆಯುವ ಮೂಲಕ ತ್ವರಿತ ಪರಿಹಾರ ಕಂಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ವೇಳೆ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಗ್ರಾಮವಾರು ಸಮಗ್ರ ವರದಿ ಸಿದ್ಧಪಡಿಸಿ, ಬೆಳೆ ಹಾನಿಯ ನಿಖರ ಮೌಲ್ಯಮಾಪನ ನಡೆಸುವಂತೆ ಹಾಗೂ ಕುಡಿಯುವ ನೀರು, ಮೇವು, ನೀರಾವರಿ ಮತ್ತು ಇತರೆ ಅಗತ್ಯ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಕಲ್ಪಿಸುವಂತೆ ಸೂಚಿಸಿದರು. ಬರ ನಿರ್ವಹಣೆಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳು ಅರ್ಹ ರೈತರಿಗೆ ತಲುಪುವಂತೆ ಕ್ರಮವಹಿಸುವಂತೆ ನಿರ್ದೇಶನ ನೀಡಿದರು.

ಬರ ಪರಿಸ್ಥಿತಿಯನ್ನು ಕೇವಲ ಕಚೇರಿ ವರದಿಗಳ ಆಧಾರದ ಮೇಲೆ ಅಂದಾಜಿಸುವ ಬದಲು, ನೈಜ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಗ್ರಾಮಗಳಿಗೆ ಭೇಟಿ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು. ರೈತರ ಹಿತಾಸಕ್ತಿ ಸರ್ಕಾರದ ಮೊದಲ ಕರ್ತವ್ಯವಾಗಿದ್ದು, ಯಾವುದೇ ರೈತ ಸಂಕಷ್ಟಕ್ಕೆ ಸಿಲುಕದಂತೆ ಅಗತ್ಯ ನೆರವು ಒದಗಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.

ಬರ ವೀಕ್ಷಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ದಾದಾಪೀರ್, ಜಿಲ್ಲಾ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸತೀಶ್ ಕಸಟಿ, ಕಾರ್ಯಾಧ್ಯಕ್ಷ ಕಾಂತರಾಜ್ ಸೋಮಿಕೊಪ್ಪ, ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ದೀಪಕ್ ಪುರ್ಯಾನಾಯ್ಕ್, ಜಿಲ್ಲಾ ಮುಖಂಡ ಕುಮಾರ್ ನಾಯ್ಕ್, ಕಸಟಿ ರುದ್ರೇಶ್, ಗೀತಾ ಸತೀಶ್, ಬಸವರಾಜ್ ಮತ್ತು ಯೋಗೇಶ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಹಿರಿಯ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದು, ತಮ್ಮ ಗ್ರಾಮಗಳ ಸಮಸ್ಯೆಗಳನ್ನು ವಿವರಿಸಿ ತ್ವರಿತ ಪರಿಹಾರಕ್ಕೆ ಮನವಿ ಸಲ್ಲಿಸಿದರು.

ಬಾಕ್ಸ್:
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಅಡಿಕೆ ತೋಟಗಳಲ್ಲಿ ನೂರಾರು ಅಡಿಕೆ ಗಿಡಗಳು ನೆಲಕ್ಕುರುಳಿ ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್) ಮಾರ್ಗಸೂಚಿಗಳಡಿ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ದೊರಕುವಂತೆ ವಿಧಾನಸಭೆಯಲ್ಲಿ ಧ್ವನಿಯೆತ್ತಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಶಾಸಕಿ ಶಾರದಾ ಪೂರ್ಯನಾಯ್ಕ್ ಭರವಸೆ ನೀಡಿದರು.

6 days ago | [YT] | 9

Shivamogga Media 24x7

ಶಿವಮೊಗ್ಗ: ಮನುಷ್ಯನಿಗೆ ಒಳಿತು ಕೆಡುಕುಗಳ ಸೂಕ್ತ ಮಾರ್ಗದರ್ಶನ ನೀಡಿ ಬದುಕನ್ನು ರೂಪಿಸುವವನೇ ನಿಜವಾದ ಗುರು ಎಂದು ಶಿವಗಂಗಾ ಯೋಗ ಕೇಂದ್ರದ ಮಹಾ ಪೋಷಕರಾದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರ ವತಿಯಿಂದ
ಬುಧವಾರದಂದು ಗುರುಪೂರ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಆರೋಗ್ಯ ನೀಡುವ ವೈದ್ಯ ಸೇರಿದಂತೆ ಸಮಾಜ ಸೇವೆಯ ಪರೋಪಕಾರದಲ್ಲಿ ನಿರತರಾಗುವ ಎಲ್ಲರೂ ಗುರು ಸಮಾನರು. ಅವರ ಸೇವೆಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಇದು ಗುರುಪೂರ್ಣಿಮೆಯ ಉದ್ದೇಶವು ಹೌದು ಎಂದು ತಿಳಿಸಿದರು.
ಆಧುನಿಕ ಯುಗದಲ್ಲಿ ಇಂದು ಮನುಷ್ಯ ಹಲವು ದ್ವಂದ್ವಗಳಿಗೆ ಸಿಲುಕಿದ್ದಾನೆ. ಬದುಕು ಎಂಬುದು ಯಾಂತ್ರಿಕೃತವಾಗುತ್ತಿದೆ. ಪರಸ್ಪರ ಸ್ನೇಹ, ಸುಮಧುರ ಬಾಂಧವ್ಯಗಳು ಮರೆಯಾಗುತ್ತಿವೆ. ಗುರುಹಿರಿಯರಲ್ಲಿ ಗೌರವ ಭಾವನೆ ಕ್ರಮೇಣ ನಶಿಸುತ್ತಿವೆ. ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸಿ, ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ. ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ, ಸಂಶೋಧನೆಗಳು ಮಾನವನ ವಿಕಾಸಕ್ಕೆ ಪೂರಕವಾಗಬೇಕು. ಇದು ದುರ್ಬಳಕೆಯಾದಲ್ಲಿ ಬದುಕಿಗೆ ಮಾರಕವಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷ ರುದ್ರೇಗೌಡ ಮಾತನಾಡಿ, ಆರೋಗ್ಯವಂತರಾಗಿ ಬದುಕುವುದು ಪ್ರಸ್ತುತ ಎಲ್ಲರಿಗೂ ದೊಡ್ಡ ಸವಾಲಾಗಿದೆ. ಎಲ್ಲರಿಗೂ ಉಚಿತ ಯೋಗ ಶಿಕ್ಷಣ ನೀಡಿ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಸೇವಾ ನಿರತರಾಗಿರುವ ಶಿವಗಂಗಾ ಯೋಗ ಕೇಂದ್ರದ ಸೇವೆ ಶ್ಲಾಘನೀಯ. ಇಂತಹ ಸಂಸ್ಥೆಗಳು ಯಶಸ್ವಿಯಾಗಿ ಮುನ್ನಡೆಸಲು ನೆರವು ನೀಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು. ಯೋಗ ಕೇಂದ್ರದ ಎಲ್ಲಾ ಶಾಖೆಗಳಲ್ಲೂ ಯೋಗ ಶಿಕ್ಷಣವನ್ನು ನೀಡಿದ ಎಲ್ಲಾ ಯೋಗ ಗುರುಗಳಿಗೆ ಹಾಗೂ ಯೋಗ ಶಿಕ್ಷಕರಿಗೆ ಗುರುಗಳಿಗೆಎಲ್ಲಾ ಗುರುಗಳಿಗೆ ಗುರು ರಕ್ಷೆ ನೀಡಿ ಆಶೀರ್ವದಿಸಲಾಯಿತು.
ಕಾರ್ಯಾಧ್ಯಕ್ಷ ರುದ್ರಾರಾಧ್ಯರು ಮಾತನಾಡಿ, ಶಿವಗಂಗಾ ಯೋಗ ಕೇಂದ್ರದ ಕಾರ್ಯ ಚಟುವಟಿಕೆಗಳನ್ನು ಆನ್ಲೈನ್ ಮೂಲಕ ವಿದೇಶಗಳಲ್ಲೂ ಪಸರಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.. ಕಾರ್ಯಕ್ರಮದಲ್ಲಿ ಶಿವಗಂಗಾ ಯೋಗ ಟ್ರಸ್ಟಿನ ಪದಾಧಿಕಾರಿಗಳು ಪೋಷಕರು ಯೋಗ ಶಿಕ್ಷಕರು. ಹಾಗೂ ಸಾವಿರಕ್ಕೂ ಹೆಚ್ಚು ಶಿಬಿರಾರ್ಥಿಗಳು ಈ ಪವಿತ್ರವಾದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಗಳಿಂದ ಆಶೀರ್ವಾದ ಪಡೆದರು,.

1 week ago | [YT] | 2

Shivamogga Media 24x7

*ರೊಟೇರಿಯನ್ಸ್ ಗಳ ಸೇವೆ ಶ್ಲಾಘನೀಯ: ಎಸ್.ಎನ್.ಚನ್ನಬಸಪ್ಪ*


ಶಿವಮೊಗ್ಗ : ಆರೋಗ್ಯ ತಪಾಸಣೆ, ನೇತ್ರ ತಪಾಸಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಪೋಲಿಯೋ ಮುಕ್ತ ಪ್ರಪಂಚ, ಪರಿಸರ ಇತ್ಯಾದಿ ರೋಟರಿ ಸೇವೆಗಳನ್ನು ಮಾಡುತ್ತಿರುವ ರೊಟೇರಿಯನ್ಸ್ ಗಳ ಸೇವೆ ಭಗವಂತನ ಸೇವೆಗೆ ಸಮಾನವಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಶ್ಲಾಘಿಸಿದರು.

ನಗರದ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಏರ್ಪಡಿಸಿದ್ದ "ರೋಟರಿ ಸೇವೆಯಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ" ಕುರಿತ ವಾರದ ಸಭೆಯಲ್ಲಿ ಭಾಗವಹಿಸಿ, ರೋಟರಿ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರೋಟರಿ ಶಾಶ್ವತ ಯೋಜನೆಯಡಿಯ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ರಾಜೇಂದ್ರನಗದಲ್ಲಿರುವ ರೋಟರಿ ಪೂರ್ವ ಶಾಲೆ, ಮೂಲಭೂತ ಶಿಕ್ಷಣ ಮತ್ತು ಸಾಕ್ಷರತೆಗೆ ನಿರಂತರ ಬೆಂಬಲವನ್ನು ಒದಗಿಸುವುದು, ಅದರ ಕ್ಯಾಂಪಸ್ ನಲ್ಲಿ ಸಾಪ್ತಾಹಿಕ ಕ್ಲಬ್ ಸಭೆಗಳು ಮತ್ತು ನಿರಂತರ ಸಮುದಾಯ/ಯುವ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಇಂಟರ್ಯಾಕ್ಟ್ ಕ್ಲಬ್ ಸ್ಥಾಪನೆಗಳಂತಹ ಯುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಹೆಚ್ಚು ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ, ನಿಘಂಟುಗಳು ಮತ್ತು ಕಲಿಕಾ ಸಾಧನಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ರೋಟರಿ ಸೇವೆಯಾಗಿದೆ. ಶಿವಮೊಗ್ಗದ ವಿದ್ಯಾನಗರದಲ್ಲಿರುವ ರೋಟರಿ ಸ್ಮಶಾನವು ರೋಟರಿ ಶಾಶ್ವತ ಯೋಜನೆಯಡಿಯ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಬೆಂಬಲದೊಂದಿಗೆ ನಿರ್ವಹಿಸಲ್ಪಡುವ ಪ್ರಸಿದ್ಧ ಸಮುದಾಯ ಸೇವಾ ಯೋಜನೆಯಾಗಿದೆ. ಕ್ಲಬ್ ನ ಪ್ರಯತ್ನಗಳ ಮೂಲಕ ನಿರ್ವಹಣೆ ಮತ್ತು ಬೆಂಬಲ, ದೈನಂದಿನ ಕಾರ್ಯಾಚರಣೆಗಳು ಮತ್ತು ಕಾಳಜಿಯನ್ನು ಸ್ಥಳೀಯ ಸಿಬ್ಬಂದಿ ನಿರ್ವಹಿಸುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷರಾದ ಶೇಷಗಿರಿ, ಶಿವಮೊಗ್ಗ ವಿಧಾನಸಭಾ ಸದಸ್ಯ ಎಸ್.ಎನ್.ಚನ್ನಬಸಪ್ಪ ಸ್ಥಳೀಯ ರೋಟರಿ ಕ್ಲಬ್ ಗಳು ಆಯೋಜಿಸುವ ಸಮುದಾಯ ಮತ್ತು ಸಾಮಾಜಿಕ ಉಪಕ್ರಮಗಳಲ್ಲಿ ಆಗಾಗ್ಗೆ ಭಾಗವಹಿಸುತ್ತಾರೆ. ನಿಯಮಿತವಾಗಿ ಸೇವಾ ಗುಂಪುಗಳೊಂದಿಗೆ ತೊಡಗಿಸಿಕೊಳ್ಳುತ್ತಾರೆ ಎಂದ ಅವರು, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನಡೆಸಲು ಉದ್ದೇಶಿಸಿರುವ ಕೌಶಲ್ಯ ಕೇಂದ್ರ ಮತ್ತು ಕೆರೆ ಸಂರಕ್ಷಣೆ ಯೋಜನೆಗಳಿಗೆ ಮಾರ್ಗದರ್ಶನ ನೀಡುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಕಾರ್ಯದರ್ಶಿ ಆರ್.ಮನೋಹರ, ಪದಾಧಿಕಾರಿಗಳು, ಮಾಜಿ ಅಸಿಸ್ಟೆಂಟ್ ಅಂಡ್ ಝೋನಲ್ ಲೆಫ್ಟಿನೆಂಟ್ಸ್ ಗವರ್ನರ್ ಭಾರ್ಗವಿ ನಾಗರಾಜ್, ಚಂದ್ರಹಾಸ್ ಪಿ. ರಾಯ್ಕರ್, ಚಂದ್ರಶೇಖರಯ್ಯ ಎಂ., ರಘುರಾಜ್ ಹೆಚ್.ಕೆ., ನಾರ್ತ್ ಕ್ಲಬ್ ಅಧ್ಯಕ್ಷರಾದ ಶಿವಕುಮಾರ್, ಮಾಜಿ ಅಸಿಸ್ಟೆಂಟ್ ಗವರ್ನರ್ ಕೋಟೋಜಿ ರವಿ, ಡಿ.ಜಿ.ಬೆನಕಪ್ಪ ಮಾಜಿ ಅಧ್ಯಕ್ಷರಾದ ಆದಿಮೂರ್ತಿ ಹೆಚ್.ಬಿ., ಗಣೇಶ್.ಎಸ್, ಶ್ರೀಕಾಂತ್ ಎನ್.ಹೆಚ್, ಕೃಷ್ಣಮೂರ್ತಿ.ಆರ್, ನಾಗರಾಜ್ ಎಂ.ಪಿ., ಕಾಸಲ ವಿ. ಸುರೇಂದ್ರ, ಡಾ. ಗುಡುದಪ್ಪ ಕಸಬಿ, ನಿಕಟ ಪೂರ್ವ ಅಧ್ಯಕ್ಷರಾದ ಡಿ.ಕಿಶೋರ್ ಕುಮಾರ್, ಶಶಿಕಾಂತ್ ನಾಡಿಗ್, ಸುನಿಲ್ ಕುಮಾರ್ ಜಿ., ಡಾ. ರವಿಕಿರಣ್ ಹೆಚ್.ಕೆ., ರವಿಪ್ರಕಾಶ್ ಕಾಳಾಚಾರ್, ದಿಲೀಪ್ ಕುಮಾರ್ ಜೈನ್ ಆರ್., ಜಗದೀಶ್, ರವಿಶಂಕರ್.ಡಿ.ಎಸ್., ಸಾಧ್ವಿ ಸಿ. ಕಾಂತ್ , ಸಂಜೀವ್.ಎಸ್.ಎನ್., ಅಜಿತ್.ಹೆಚ್.ಎಸ್., ಪೃಥ್ವಿ ಪಿ. ಗೌಡ, ಹೇಮಂತ್ ಎಂ.ಸಿ., ಡಾ. ಮಹಾದೇವಸ್ವಾಮಿ ಕೆ.ಎನ್., ಜಿ. ವಿಜಯ್ ಕುಮಾರ್, ಬಿಂದು ವಿಜಯ್ ಕುಮಾರ್, ಹಾಗೂ ಹೆಚ್ಚಿನ ಸಂಖ್ಯೆಯ ಪದಾಧಿಕಾರಿಗಳು ಹಾಗೂ ಗೌರವಾನ್ವಿತ ಸದಸ್ಯರು ರೊಟೇರಿಯನ್ಸ್ ಉಪಸ್ಥಿತರಿದ್ದರು.

ಕೋಟ್ಸ್ :
ಮಾದಕ ದ್ರವ್ಯಗಳ ಸೇವನೆ ಮತ್ತು ಮಾರಾಟವನ್ನು ನಿಲ್ಲಿಸುವ ಮೂಲಕ ಆರೋಗ್ಯಕರ ಸಮಾಜವನ್ನು ಸೃಷ್ಟಿಸುವಲ್ಲಿ ರೋಟರಿಯೊಂದಿಗೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುವೆ.
- ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು
==============

1 week ago | [YT] | 4

Shivamogga Media 24x7

ಒಂದು ಮಗುವಿನ ಜೀವನದಲ್ಲಿ ಶಿಕ್ಷಣದ ಮೂಲಕ ಶಾಶ್ವತ ಬದಲಾವಣೆ ತರುವುದು ನಮ್ಮ ಉದ್ದೇಶವಾಗಿದೆ, ಸಮಾಜದ ಸಹಕಾರದೊಂದಿಗೆ ಇನ್ನಷ್ಟು ಸರ್ಕಾರಿ ಶಾಲೆಗಳಿಗೆ ತಲುಪುವ ಸಂಕಲ್ಪದೊಂದಿಗೆ ಯುವ ಬೆಂಗಳೂರು ಟ್ರಸ್ಟ .ಸಂಸ್ಥಾಪಕರು ಅಧ್ಯಕ್ಷರು -ಟ್ರಸ್ಟಿಗಳು ಆದ ಶ್ರೀಯುತ ಜಿ. ಕಿರಣ್ ಸಾಗರ್ ರವರ ಮನದಾಳದ ಆಶಯದಂತೆ 2008ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಶ್ವೇತ ಎಸ್ ರಾವ್ ಕಾರ್ಯದರ್ಶಿ ಟ್ರಸ್ಟಿ, ಪಿ ವಿ ಸುನಿಲ್ ಉಪಾಧ್ಯಕ್ಷರು ಟ್ರಸ್ಟಿ .ಇವರ ಒಳಗೊಂಡತಂಡ 356ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ನಿರಂತರವಾಗಿ ಶೈಕ್ಷಣಿಕ ಬೆಂಬಲ ನೀಡುತ್ತಿದೆ .ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿರುವ ಅಂತರ ಮತ್ತು ಅಸಮಾನತೆಯನ್ನು ಕಡಿಮೆ ಮಾಡುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾ ಸರ್ಕಾರಿ ಶಾಲಾ ಮಕ್ಕಳನ್ನು future ready ನಾಗರಿಕರನ್ನಾಗಿ ರೂಪಿಸುವ ದೇಹದೊಂದಿಗೆ ಹತ್ತು ಹಲವಾರು ಚಟುವಟಿಕೆ ಹಮ್ಮಿಕೊಂಡಿದೆ .ಶಿಕ್ಷಣ, ಆರೋಗ್ಯ, ಕೌಶಲ ಅಭಿವೃದ್ಧಿ, ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ . ಸರ್ಕಾರಿ ಶಾಲೆಗಳ ಶೈಕ್ಷಣಿಕ ಬಲವರ್ಧನೆಗಾಗಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಶಿವಮೊಗ್ಗ ಜಿಲ್ಲೆಯ 17 ಶಾಲೆಗಳಿಗೆ ಶಾಲಾ ಬ್ಯಾಗ್, ನೋಟ್ ಪುಸ್ತಕಗಳು, ಕಲಿಕಾ ಕಿಟ್, ಸ್ವೆಟರ್ಸ, ಟಿವಿ, ಸ್ಮಾರ್ಟ್ ಕ್ಲಾಸ್ ಗಳನ್ನು ನೀಡುತ್ತಾ ಬಂದಿದೆ. ದಿನಾಂಕ : 08 ಜುಲೈ
2026ರ ಬುಧವಾರದಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗುತ್ಯಪ್ಪ ಕಾಲೋನಿ ಶಿವಮೊಗ್ಗ ಇಲ್ಲಿ ಯುವ ಬೆಂಗಳೂರು ಟ್ರಸ್ಟ್ ನೀಡಿರುವ ಬ್ಯಾಗ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ತಾಲೂಕಿನ ಕ್ರಿಯಾಶೀಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ರಮೇಶ್ ರವರು ಬ್ಯಾಗ್, ನೋಟ್ ಪುಸ್ತಕ , ಕಲಿಕಾ ಕಿಟ್ ಮಕ್ಕಳಿಗೆ ವಿತರಿಸಿ ಅದರ ಸದುಪಯೋಗದ ಬಗ್ಗೆ ತಿಳಿಸಿದರು. ಯುವ ಬೆಂಗಳೂರು ಟ್ರಸ್ಟ್ ಹಾಗೂ ಕ್ರಿಯಾಶೀಲ ತಾರೆಯರು ಶಿವಮೊಗ್ಗ ತಂಡಕ್ಕೆ ಇಲಾಖೆ ಪರವಾಗಿ ಅಭಿನಂದನೆ ಸಲ್ಲಿಸಿದರು. ಶ್ರೀಯುತ ಡಾ. ತಾನಾಜಿ ಸಮಾಜಮುಖಿ ಚಿಂತನೆಗಳ ಬಗ್ಗೆ ಪೋಷಕರಿಗೆ ತಿಳಿಸಿದರು. ಗಾಡಿಕೊಪ್ಪ ಕ್ಲಸ್ಟರ್ ನ ಸಿ.ಆರ್‌.ಪಿ ಮಂಜುನಾಥ್ ಹಾಗೂ ನಿವೃತ್ತ ಪ್ರಾಂಶುಪಾಲರಾದ ಶ್ರೀಯುತಭುಜಂಗಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ರಿಯಾಶೀಲ ತಾರೆಯರು ಶಿವಮೊಗ್ಗ ಇದರ ಅಧ್ಯಕ್ಷರಾದ ಶ್ರೀಮತಿ ಫೌಜಿಯಾ ಸರವತ್, ಮುಖ್ಯ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಹಳ್ಳ ಇವರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿ ಮಾತನಾಡಿದರು. ಯುವ ಬೆಂಗಳೂರು ಟ್ರಸ್ಟ್ ಹಾಗೂ ಕ್ರಿಯಾಶೀಲ ತಾರೆಯರ ಸಹಯೋಗದೊಂದಿಗೆ ಕಳೆದ ನಾಲ್ಕು ವರ್ಷದ ಕಾರ್ಯ ಚಟುವಟಿಕೆ, ಅದರ ಔಚಿತ್ಯದ ಬಗ್ಗೆ ಮಾತನಾಡಿದರು. ಈ ಶೈಕ್ಷಣಿಕ ವರ್ಷದಲ್ಲೂ ಸಹ ಯುವ ಬೆಂಗಳೂರು ಟ್ರಸ್ಟ್ ಅವರು ನೀಡಿರುವಂತಹ ಪರಿಕರಗಳನ್ನು ವಿವರಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ರುಕ್ಮಿಣಿ ಮಕ್ಕಳ ಕಲಿಕೆಗೆ ವಿವಿಧ ಟ್ರಸ್ಟ್ ಗಳ ಸಹಕಾರ ಹಾಗೂ ಕ್ರಿಯಾಶೀಲ ತಾರೆಯರು ತಂಡದ ಕೆಲಸವನ್ನು ಶ್ಲಾಘಿಸಿದರು. ಕ್ರಿಯಾಶೀಲಾ ತಾರೆಯರು ಶಿವಮೊಗ್ಗ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಸಹ ಶಿಕ್ಷಕಿ ಶ್ರೀಮತಿ ಭಾಗಿರಥಿ ಕಾರ್ಯಕ್ರಮ ಆಯೋಜಿಸಿ ನಿರೂಪಿಸಿ, ವಂದಿಸಿದರು.

3 weeks ago | [YT] | 7

Shivamogga Media 24x7

ಶಿವಮೊಗ್ಗದಲ್ಲಿ ಕುಡಿಯುವ ನೀರಿನ ತುರ್ತು ಸರಬರಾಜಿಗೆ ಬಲ್ಕಿಶ್ ಬಾನು ಆಗ್ರಹಕ್ಕೆ ಸ್ಪಂದಿಸಿದ ಜಿಲ್ಲಾಡಳಿತ.....

ಶಿವಮೊಗ್ಗ : ಪಂಪ ಹೌಸ್ ನಲ್ಲಿನ ತಾಂತ್ರಿಕ ತೊಂದರೆಯಿಂದಾಗಿ ಶಿವಮೊಗ್ಗ ನಗರದಲ್ಲಿ ಅನೇಕ ವಾರ್ಡ್ ಗ ಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಕುಡಿಯುವ ನೀರಿಗಾಗಿ ಜನರು ಪರಿತಪಿಸುವ ಹಂತಕ್ಕೆ ತಲುಪಿದ್ದಾರೆ ಎಂದು ಶಿವಮೊಗ್ಗ ನಗರದ ಸಾರ್ವಜನಿಕರು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಇವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ
ಹಿನ್ನಲೆಯಲ್ಲಿ ವಿಧಾನ ಪರಿಷತ್ ಶಾಸಕರು ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕುಡಿಯುವ ನೀರಿನ ಸರಬರಾಜುಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಕುಡಿಯುವ ನೀರಿಗೆ ಸಮಸ್ಯೆ ಇರುವ ಕಡೆ, ಖಾಸಗಿ ಟ್ಯಾಂಕರ್ ಗಳ ಮೂಲಕ ಕೂಡಲೇ ನೀರಿನ ಸರಬರಾಜು ವ್ಯವಸ್ಥೆ ಮಾಡಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸ್ಐಆರ್ ಪ್ರಕ್ರಿಯೆ ಕುರಿತು ಬಿ ಎಲ್ ಒ ಗಳು ಮನೆ ಮನೆಗೆ ಭೇಟಿ ನೀಡಿ ಅನುಮಾನ ವಿತರಿಸಲು ಕಟ್ಟುನಿಟ್ಟಾಗಿ ಸೂಚಿಸಬೇಕೆಂಬ ವಿಧಾನ ಪರಿಷತ್ ಶಾಸಕರ ಒತ್ತಾಯಕ್ಕೆ ಉತ್ತರವಾಗಿ ಜಿಲ್ಲಾಧಿಕಾರಿಗಳು ಅದನ್ನು ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ತಿಳಿಸಿದರು.

3 weeks ago | [YT] | 2