ನಮ್ಮ ಚಾನೆಲ್ಗೆ ಹಾರ್ದಿಕ ಸ್ವಾಗತ!
ಈ ಚಾನೆಲ್ ಒಂದು ವಿಶಿಷ್ಟ ಪ್ರಯತ್ನ — ಇಲ್ಲಿ ಕೃಷಿಯ ವೈಜ್ಞಾನಿಕ ಮಾಹಿತಿ, ಸಸ್ಯಹಾರಿ ಆಹಾರ ಪದ್ಧತಿಗಳು, ಪ್ರಾಕೃತಿಕ ಆರೋಗ್ಯ ಸಲಹೆಗಳು ಮತ್ತು ನಮ್ಮ ಜನಪದ ಅಧ್ಯಾತ್ಮದ ಅನನ್ಯತೆಗಳ ಸಮಗ್ರ ಸಂಯೋಜನೆ ಸಿಕ್ಕುತ್ತದೆ.
ನಮ್ಮ ಹಳ್ಳಿಯ ಮಣ್ಣಿನಿಂದ ಹುಟ್ಟಿದ ಜ್ಞಾನವನ್ನು, ನಿತ್ಯ ಜೀವನದಲ್ಲಿ ಬಳಸಬಹುದಾದ ಟಿಪ್ಗಳು, ಔಷಧೀಯ ಸಸ್ಯಗಳ ಮಹತ್ವ, ಸಾಂಪ್ರದಾಯಿಕ ಆಹಾರ ಪದ್ಧತಿಗಳು, ಮತ್ತು ಆತ್ಮಸ್ಪರ್ಶಿ ಜಾನಪದ ಆಚಾರ-ವಿಶ್ವಾಸಗಳೊಂದಿಗೆ ಈ ಚಾನೆಲ್ ನಿಮ್ಮೆದುರು ಬರುವುದು.
ನಮ್ಮ ಜೊತೆಗೆ ಈ ಪ್ರಯಾಣದಲ್ಲಿ ಭಾಗವಹಿಸಿ, ಸಬ್ಸ್ಕ್ರೈಬ್ ಮಾಡಿ, ಮತ್ತು ಜ್ಞಾನವನ್ನು ವಿಶ್ವದೊಂದಿಗೆ ಹಂಚಿಕೊಳ್ಳಿ.
🙏 ಧನ್ಯವಾದಗಳು ಮತ್ತು ನಮಸ್ಕಾರ! 🙏

For Business enquiries:
Email: vishwa7media@gmail.com



VISHWA 2

#ಕನ್ಹೇರಿ_ಅದೃಶ್ಯ_ಕಾಡಸಿದ್ದೇಶ್ವರ ಸ್ವಾಮೀಜಿ ಯವರನ್ನ ಹತ್ತಿರದಿಂದ ಬಲ್ಲವನಾಗಿ ನಾನು ಈ ಮಾತುಗಳನ್ನು #ಪ್ರಜ್ಞಾಪೂರ್ವಕವಾಗಿ ಮಾತನಾಡುತ್ತಿದ್ದೇನೆ !!?*.
💧🌳💧
ಮಾನ್ಯರೆ
ನಾನು ಮೂಲತಃ ಒಬ್ಬ ವಿಜ್ಞಾನಿ ಮತ್ತು ರಸಾಯನಶಾಸ್ತ್ರ ವಿಭಾಗದ ಒಬ್ಬ ಪ್ರಾಧ್ಯಾಪಕನಾಗಿ ಮತ್ತು ಆ ವಿಭಾಗದ ಮುಖ್ಯಸ್ಥನಾಗಿ 40 ವರ್ಷಗಳ ಸೇವೆಯನ್ನು ಬೆಂಗಳೂರಿನ ಹೆಸರಾಂತ M S. Ramaiah Institute of Technology ಯಲ್ಲಿ ಮಾಡಿದವನು. ಮೂಲತಃ ನಾನು ಹಳ್ಳಿಯವನು ಮತ್ತು ಕೃಷಿಕನೂ ಆಗಿದ್ದರಿಂದ ಸಹಜವಾಗಿ ಕೃಷಿ ನನ್ನನ್ನು ಸೆಳೆಯಿತು. ನಾನು ಸೇವೆಯಲ್ಲಿರುವಾಗಲೇ 2014 ರಲ್ಲಿ ನನ್ನ ಸಂಶೋಧನೆಗಳ ಜೊತೆ ಜೊತೆಗೆ *Knowledge Sharing with Village and Farmers* ಎಂಬ ಅಭಿಯಾನದ ಮೂಲಕ ತಿಂಗಳ ಎರಡು ಭಾನುವಾರದಂದು ಹಳ್ಳಿಗಳನ್ನ & ಕೃಷಿಕರನ್ನ ಕಂಡು ಅವರಿಗೆ ಜ್ಞಾನ ಕೊಡುವ ಕೆಲಸವನ್ನ ಸಾಧಕ ರೈತರ ಮೂಲಕ ಮಾಡುತ್ತಾ ಬಂದವನು. ಆ ಹಾದಿ ಯಲ್ಲಿ ಸಿಕ್ಕವರು ನಾಡೋಜ ನಾರಾಯಣ ರೆಡ್ಡಿ, ಸುಭಾಷ್ ಪಾಳೇಕರ್ ಮುಂತಾದವರು.‌
2019 ರಲ್ಲಿ ನಾಡೋಜ ನಾರಾಯಣ ರೆಡ್ಡಿ ನಮ್ಮನ್ನು ಅಗಲಿದ ನಂತರ ನಮಗೆ ಜೊತೆಯಾದವರು ಕನ್ನೇರಿ ಶ್ರೀಗಳು, ಅಂದಿನಿಂದಲೂ ಪ್ರತಿವರ್ಷ ನೂರಾರು ರೈತರೊಂದಿಗೆ ನಾವು ಕನ್ನೇರಿಗೆ ಹೋಗಿ ಮೂರು ದಿವಸಗಳ ರೈತ ಸಮ್ಮೇಳನವನ್ನು ಹಮ್ಮಿಕೊಳ್ಳುತ್ತೇವೆ & ಆ ವೇಳೆಯಲ್ಲಿ ಶ್ರೀಗಳು ನೀಡುವ ಕೈಷಿ ಮಾರ್ಗದರ್ಶನ ನಮಗೆ ಸಾಕಷ್ಟು ಲಾಭ ನೀಡಿದೆ ಮತ್ತು ನಮ್ಮ ಸಂಕಲ್ಪಗಳ ಈಡೇರಿಕೆಗೆ ದಾರಿಯಾಗಿದೆ. ಅಷ್ಟೇ ಅಲ್ಲ ನೂರಾರು ಮಂದಿ ರೈತರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ ಶ್ರೀಗಳು.‌
ಅವರನ್ನು ಬಹಳ ಹತ್ತಿರದಿಂದ ಬಲ್ಲವನಾಗಿ ನಾನು ಹೇಳುವುದಿಷ್ಟೇ, ಅವರ ಕಣಕಣದಲ್ಲೂ ದೇಶಭಕ್ತಿ, ಹಳ್ಳಿ, ಪರಿಸರ, ಶಿಕ್ಷಣ, ಕೈಷಿ....‌ ಇತ್ಯಾದಿ ವಿಷಯಗಳ ಬಗ್ಗೆ ಮನಸ್ಸು ಸದಾ ತುಡಿಯುತ್ತಿರುತ್ತದೆ.
ಅವರಲ್ಲೊಬ್ಬ ವಿಜ್ಞಾನಿಯನ್ನು ಕಂಡಿದ್ದೇನೆ, ಪರಿಸರವಾದಿಯನ್ನ ವೀಕ್ಷಿಸಿದ್ದೇನೆ, ಅಪ್ಪಟ ದೇಶ ಭಕ್ತನನ್ನು ಗುರಿತಿಸಿದ್ದೇನೆ, ಬಸವಾದಿ ಶರಣರ ಕಟ್ಟಾ ಅನುಯಾಯಿಯನ್ನ ಗಮನಿಸಿದ್ದೇನೆ!!!! 😌😌
ಜೊತೆ ಜೊತೆಗೆ ಅತೀವ ಸರಳತೆ, ಮಾನವೀಯತೆ, ತಾಯ್ತನತೆ, ಶ್ರದ್ಧತಾ ನಡೆ, ಸಹೃದಯತೆ, ... ಎಲ್ಲವನ್ನೂ ನಾನು... ..‌ ಅವರಲ್ಲಿ ನೋಡಿ ಮಂತ್ರಮುಗ್ಧನಾಗಿದ್ದೇನೆ!!🫢
ಜಾತಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯದ ಬಗ್ಗೆ ಅವರಿಗೆ ಅಸಹನ ಇದೆ. ಇವರ ಮಠದಲ್ಲಿ ಎಲ್ಲಾ ಜಾತಿ ಧರ್ಮದವರಿಗೆ... ಕಲಿಯಲು ಮತ್ತು ಬೆರೆಯಲು ಅವಕಾಶ!!.‌
ಬೇಕಿರಲಿಲ್ಲ ಶ್ರೀಗಳಿಗೆ ಈ ವಿರೋಧದ... ಗಲಾಟೆಗಳು!! .... ಮತ್ತು ಆಧರ್ಮಿಗಳ... ಸಂಘರ್ಷಗಳು!!.. ...
"ಬೇಕಿತ್ತೇ ...... ಗುರುಗಳೇ...... ಈ ವಿರೋಧ!!!"
"ಕೆಲವೇ ಕೆಲವು.... ಜನರ ಷಡ್ಯಂತ್ರದಿಂದ ....‌ ಹಿಂದೂ ಧರ್ಮಕ್ಕೆ... ದೊಡ್ಡ ಪೆಟ್ಟು ಬೀಳುವ ಲಕ್ಷಣಗಳು... ದಟ್ಟವಾಗಿವೆ!??. ಧರ್ಮ ಧರ್ಮಗಳ ಮಧ್ಯೆ ಕಿಡಿ ಹಚ್ಚುವ ದುರುಳರು,....‌ ಇತ್ತೀಚೆಗೆ ಜಾಸ್ತಿ ಹುಟ್ಟಿಕೊಳ್ಳುತ್ತಿದ್ದಾರೆ. ಇವರ ವಿರೋಧವನ್ನು ಯಾರಾದರೂ..... ಒಬ್ಬರು ಮಾಡಲೇಬೇಕಿತ್ತು,; ತಲೆ ಕೊಡಬೇಕಿತ್ತು.... ... ಇದಕ್ಕೆ ನಾನು ಸಿದ್ದನಾದೆ. ಪ್ರಮಾಣಿಕನಾಗಿ ನಾನು ಬಾಳಿದ್ದೇನೆ ಅದನ್ನು ನನ್ನ ಜೀವನದುದ್ದಕ್ಕೂ ... ಸಾಧಿಸಿ ತೋರಿಸಿದ್ದೇನೆ ಕೂಡ. ಇಂತಿರುವಾಗ ಈ ಅರ್ಥ ಹೀನ ವಿರೋಧಗಳನ್ನು ನಾನು ಎಂದಿಗೂ ....‌ ಲೆಕ್ಕಿಸುವುದಿಲ್ಲ....!! " 😌😌
ನನಗೆ ಬಹಳಷ್ಟು ಬಾರಿ ಅಚ್ಚರಿ !! ಮತ್ತು ನೋವು ತರುವ ವಿಚಾರವೆಂದರೆ ಇವರ ಬಗ್ಗೆ ಏನೂ ಅರಿಯದ ಜನಸಾಮಾನ್ಯರೂ ... ಸಹ ನಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡುವುದು!?!! 😟😟
ಆ ಜನರನ್ನು ನಾನು ಕೇಳುತ್ತೇನೆ "ನೀವು ...‌ ಶ್ರೀಗಳನ್ನು ವಿರೋಧಿಸಿ... ಬೇಡ ಎನ್ನಲಾರೆ; ಅದು ನಿಮ್ಮ ಹಕ್ಕು ಕೂಡ, ಆದರೆ, ನೀವು ಕನ್ನೆರಿಯನ್ನ ....ನೋಡಿದ್ದೀರಾ. ...‌!!???
ಅವರು ಮೌನವಾಗುತ್ತಾರೆ!!
ಇವರನ್ನು ವಿರೋಧಿಸುವ ಯಾರು ಸಹ ಇದಕ್ಕೆ ಉತ್ತರ ಕೊಡುವುದಿಲ್ಲ, ಅವರ ಉತ್ತರ "ಇಲ್ಲ ...." ಎಂದೇ ಆಗಿರುತ್ತದೆ
ಸತ್ಯವೆಂದರೆ ಕೆಲವು ವಿರೋಧಿಸಿದವರು ಕನ್ನೇರಿಯನ್ನ ನೋಡಿ ...ದಂಗಾಗಿ .... 'ಒಬ್ಬ ಕಾವಿಧಾರಿ... ಸನ್ಯಾಸಿ ಇಷ್ಟೊಂದು ಸಾಧನೆ ಮಾಡಲು ಸಾಧ್ಯವೇ!!??' ಎಂಬ ಉದ್ಗಾರವನ್ನು ತೆಗೆಯುತ್ತಾರೆ!!!🙂🙂
2019, ಕನ್ನೆರಿಗೆ ನಾವು ಮೊದಲ ಬಾರಿ ನಾವು ಭೇಟಿ ಕೊಟ್ಟ ಸಮಯ, ಆಗ ನಡೆದ ಒಂದು ಘಟನೆಯ ಬಗ್ಗೆ ಇಲ್ಲಿ ಹೇಳಿಕೊಂಡಿದ್ದೇನೆ.
👇🏿👇🏿👇🏿👇🏿👇🏿👇🏿👇🏿👇🏿
ಗೆಳೆಯರೇ,
💧 ‘ಮಠದ ಪೀಠಾಧಿಪತಿಯಾಗಿ ಪೂಜೆ ಪುನಸ್ಕಾರ, ಆಶೀರ್ವಾದ ಪ್ರವಚನ­ಗಳಲ್ಲಿಯೇ ಕಳೆದು ಹೋದರೆ.... ತಮ್ಮ ಎಲ್ಲ ಸಮಾಜಮುಖಿ ಕಾರ್ಯಗಳು & ಕನಸುಗಳು ನನಸಾಗುವುದಿಲ್ಲ ಎಂಬ ಕಾರಣಕ್ಕಾಗಿಯೇ..... 2014 ರಲ್ಲಿ ಪೀಠತ್ಯಾಗದ ಮಾಡಿದವರು ಕನ್ನೇರಿ ಶ್ರೀಗಳು!!. ಆಗಲೇ... ಅವರು ಈ ಪ್ರಶಸ್ತಿ, ಹುದ್ದೆ & ಗೌರವಗಳಿಂದ ಬಲು ದೂರವೆಂದು ತಿಳಿಯುತ್ತದೆ!!!?
ಅಷ್ಟೇ ಏಕೆ, ಅವರ ಸರಳತೆ ಮತ್ತು ... ಯಾವುದೇ .....ಅಹಂ ಇಲ್ಲದ ಅವರ ನಡವಳಿಕೆ ಅಚ್ಚರಿಯನ್ನು ತರುತ್ತದೆ !!! .
🌹🌹 2019 ರಲ್ಲಿನ ಅವರೊಂದಿಗಿನ ನಮ್ಮ ಕನ್ನೇರಿ ಭೇಟಿಯ ಸಮಯದಲ್ಲಾದ ಒಂದು ಅನುಭವ ಇಂತಿದೆ
👇🏼👇🏼👇🏼
⚡ ದಿನಾಂಕ :- 04 - 01 - 2019,
⚡ ಸಮಯ:- *ರಾತ್ರಿ 10.30 !!*
⚡ ಸ್ಥಳ :- ಕನ್ನೇರಿಯ ಸಿದ್ದಗಿರಿಯ ಮಠ;
✍ ಅಲ್ಲೊಂದು ..... ಕೆಲಸಗಾರರ ಗುಂಪೊಂದು ಹಾಡು ಹೇಳುತ್ತಾ.... ಕುಂಡಗಳಲ್ಲಿ *ಗಿಡ ನೆಡುವ & ಅವುಗಳನ್ನ ಬೇರೆಡೆ ಸಾಗಿಸುವ ಕಾಯಕದಲ್ಲಿ ತೊಡಗಿದ್ದರು.*
👉🏾 ಆ ಕೆಲಸಗಾರರಲ್ಲಿ ಮುದುಕರು, ಹೆಂಗಸರು, ಯುವಕರು & ಮಕ್ಕಳೂ ಸೇರಿದ್ದರು; ಇದರಲ್ಲಿ ವಿಶೇಷತೆಯೇನು ಇಲ್ಲವೆನ್ನಿ.
👉🏾 ಆದರೆ, ಆ ಜನರ ಮಧ್ಯೆ ಮಣ್ಣಲ್ಲಿ ಕುಳಿತು ತಾವೂ...... ಗಿಡಗಳನ್ನ ಪಾಕೆಟ್ ಗಳಲ್ಲಿ ನೆಡುವ ಕಾಯಕದಲ್ಲಿ ತೊಡಗಿದ್ದರು ಒಬ್ಬರು - ಖಾವಿ ತೊಟ್ಟವರು..... ??! 🤔
ಕುತೂಹಲ ಹೆಚ್ಚಾಗಿ, ಹತ್ತಿರ ಹೋಗಿ ನೋಡಿದಾಗ ಮೈಯೆಲ್ಲಾ... ಮಣ್ಣು ಮಾಡಿಕೊಂಡು ಕೆಲಸ ಮಾಡುತ್ತಿದ್ದವರು ಸಿದ್ದಗಿರಿಯ ಅದೃಶ್ಯ ಕಾಡ ಸಿದ್ದೇಶ್ವರ ಸ್ವಾಮಿಗಳು!!!!???.😯
ಅದೇ.... ಸಂಜೆ ನಾವು ಅವರೊಂದಿಗೆ 2 ಗಂಟೆಗಳ ಕಾಲ ಸಂಭಾಷಣೆಯಲ್ಲಿ ತೊಡಗಿದಾಗ ತಿಳಿದದ್ದು ಅವರು ದೈಹಿಕವಾಗಿ ಅಸ್ವಸ್ಥತೆಯನ್ನು ಹೊಂದಿದ್ದರು. ಆದರೂ ... ಸಹ ಆ ತಡ ರಾತ್ರಿಯಲ್ಲಿ ಈ ಕಾಯಕದಲ್ಲಿ ತೊಡಗಿದ್ದು ನಮ್ಮನ್ನ ಮಂತ್ರ ಮುಗ್ಧರನ್ನಾಗಿಸಿತ್ತು!!!!
✍ ಯಾವುದೇ ಹಮ್ಮು- ಬಿಮ್ಮುಗಳಿಲ್ಲದೆ, ಸರಳವಾಗಿ ಮಠದ ತುಂಬೆಲ್ಲಾ ತಾವೊಬ್ಬರೆ ಅಡ್ಡಾಡಿಕೊಂಡು, ಜ್ಞಾನ ಹರಸಿ ಬಂದ ಭಕ್ತರಿಗೆ ಮಾರ್ಗದರ್ಶನ ಮಾಡುತ್ತಾ, ಮಠದಲ್ಕಿ ಹೊಸ ಹೊಸ ಅವಿಷ್ಕಾರಗಳ ಬಗ್ಗೆ ಯೋಚಿಸುತ್ತಾ...ಕಾಲ ಕಳೆವ ಈ ಯೋಗಿಯ ಈ ಡಾಕ್ಟರೇಟ್ ಪದವಿಯ ತಿರಸ್ಕಾರ ಯಾವ ಅಚ್ಚರಿಯನ್ನೇನೂ ಮೂಡಿಸದು!!
✍ ಗೆಳೆಯರೇ,
ಹಲವು ಮಠಾಧಿಪತಿಗಳನ್ನ ನಾವು ಎಲ್ಲೆಲ್ಲೂ .... ನೋಡಬಹುದು; ಅವರುಗಳದು VIP status!!. ಯಾವಾಗಲೂ... ಹೊರಗಡೆಯೇ ಕಾಲಕಳೆವ ಈ ಸ್ವಾಮಿಗಳು; ಮಠದಲ್ಲಿ ಭಕ್ತರ ದರ್ಶನಕ್ಕೆ ಸಿಗುವುದೇ ದುರ್ಲಭ; ಸಿಕ್ಕರೂ ಅದು ಅಚ್ಚರಿಯ ಸಂಗತಿ ಕೂಡ.
ಇವರಿಗೆ ಪಾದ ಪೂಜೆ & ಅಡ್ಡಪಲ್ಲಕ್ಕಿಗೇ..... ಇವರ.... ಎಲ್ಲಿಲ್ಲದ ಒಲವು & ಪ್ರೀತಿ. ತಮಾಷೆಯೆಂದರೆ..... ಈ ಕಾಯಕಕ್ಕೆ ಜನರನ್ನ ಒತ್ತಾಯಿಸಿ; ಇದುವೆ.... ಸಾರ್ಥಕತೆಯ ಪ್ರತೀಕವೆಂಬ ಹುಸಿ ನಂಬುಗೆಯನ್ನ ಮುಗ್ಧ ಜನರ ತಲೆಗೆ ತುಂಬುತ್ತಾರೆ!!?
🌷 *"ನಾವು ಮಠಾಧಿಪತಿಗಳು ರೈತ ಸಮುದಾಯದ ಸೇವೆಯಲ್ಲಿ ತೊಡ­ಗಬೇಕಿದೆ. ಗ್ರಾಮಗಳ ಸಮಗ್ರ ಅಭಿ-ವೃದ್ಧಿಗೆ ಕಂಕಣಬದ್ಧರಾಗಬೇಕಿದೆ. ಯುವಜನ ಸಂಘಟನೆ, ರೈತರ ತರಬೇತಿಯೇ ನಮ್ಮ ಗುರಿಯಾಗಬೇಕಿದೆ!!!"* ಎಂಬುದು ಅವರ ಕನ್ನೇರಿ ಶ್ರೀಗಳ ವಾದ!
🌳
ನಮ್ಮ Connect with Nature ರೈತರ ಗುಂಪಿಗೆ ಕನ್ನೇರಿ ಮಠಕ್ಕೂ ಅವಿನಾಭಾವ ಸಂಬಂಧ ಪ್ರತಿವರ್ಷವೂ ಸ್ನೇಹಿತರು & ರೈತರು ಸಮಾಜದ ಹಿತ ಕುರಿತು ಕೆಲವು ಸಂಕಲ್ಪಗಳನ್ನು ಮಾಡಿಕೊಂಡು ಕನ್ನೇರಿಗೆ ಹೋಗುತ್ತೆವೆ; ಆ ಧನಾತ್ಮಕ ಶಕ್ತಿಯುಳ್ಳ
(Positive energy) ಮಠದಲ್ಲಿ ಕುಳಿತು ಕೃಷಿ ಮತ್ತು ಹಳ್ಳಿಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಅದನ್ನು ಅಳವಡಿಸಿಕೊಳ್ಳುವ ಪ್ರಮಾಣಿಕ ಪ್ರಯತ್ನವನ್ನು ಮಾಡುತ್ತೇವೆ. ಆಶ್ಚರ್ಯವೆನಿಸುವ ಸಂಗತಿಯೆಂದರೆ ಅಲ್ಲಿಗೆ ಹೋಗಿ ಬಂದ ಪ್ರತಿಯೊಬ್ಬರೂ .... ಸಹ ತಮ್ಮಲ್ಲಿ ಬದಲಾವಣೆಗಳನ್ನ ತಂದುಕೊಂಡಿದ್ದಾರೆ!!!🤔 ಮತ್ತು ಅವರ ಸಂಕಲ್ಪಗಳು ಸಂಪೂರ್ಣ ಈಡೇರದೇ ಇರಬಹುದು ಆದರೆ ಅದರ ದಾರಿಯಲ್ಲಿ ಮಾತ್ರ ಉಳಿಯದೆ .... ಉಳಿದಿದ್ದಾರೆ !!!😌🤔!!!
☘ *ಇವರು ಬರೀ ಮಠಾಧೀಶರಾಗಿದ್ದರೆ... ವಿಶೇಷತೆಯೆನೂ...... ಅನ್ನಿಸುತ್ತಿರಲ್ಲಿಲ್ಲ; ಜೊತೆಗೆ ಇವರ ವಿರಕ್ತ ನಡೆ... ಮತ್ತಷ್ಟು ಸೆಳೆಯುತ್ತದೆ ಅಲ್ಲವೇ??!!* 🤔☘
👉🏽 *ಅಂದ ಹಾಗೆ ಮೊನ್ನೆ ಕಳೆದ ಏಪ್ರಿಲ್ ತಿಂಗಳಲ್ಲಿ ನಾವು ಕನ್ನೇರಿಗೆ ಭೇಟಿಕೊಟ್ಟ ಸಮಯದಲ್ಲಿ ಶ್ರೀಗಳು ಮಠದ ಆವರಣದಲ್ಲಿ ತಿರುಗಾಡುತಿದ್ದುದು ಒಂದು ಸೈಕಲ್ಲಿನಲ್ಲಿ !!!!!🤔*
*ಬನ್ನಿ, ವಿವೇಕ ಬಳಸಿಕೊಳ್ಳೋಣ ಯಾವುದು ಸತ್ಯ ಯಾವುದು ಅಸತ್ಯ; ಯಾರು ಧರ್ಮಿಗಳುಗಳು ಮತ್ತು ಯಾರು ಆಧಾರ್ಮಿಗಳು ಎಂಬುದನ್ನು ಗುರುತಿಸುವಷ್ಟು ನಾವು ಜ್ಞಾನವಂತರಾಗಿ ದೇಶ ಕಟ್ಟುವ ನಿಟ್ಟಿನಲ್ಲಿ ಒಂದಾಗಿ ಬಾಳೋಣ😌😌😌
🌹ಅಂದ ಹಾಗೆ, ಇದೇ ತಿಂಗಳ ಐದು ಮತ್ತು ಆರ ರಂದು ಕರ್ನಾಟಕದ 25 ಮಂದಿ ಯುವಕ ಯುವತಿಯರೊಂದಿಗೆ ಕನ್ನೇರಿ ಶ್ರೀಗಳೊಂದಿಗೆ ಕನ್ನೇರಿಯಲ್ಲಿ ಸಂವಾದವನ್ನು ಏರ್ಪಡಿಸಲಾಗಿತ್ತು... ಅಂದು ಬೆಳಗ್ಗೆ ಪಂಚವಟಿ ಸ್ಥಾಪಿಸಿದ ನಂತರ ಅಲ್ಲೇ ಜಮೀನಿನಲ್ಲಿದ್ದ ಮರದ ಅಡಿ ಅಡಿಯಲ್ಲಿ ಸಂವಾದ ಮಾಡೋಣ ಎಂದರು ಶ್ರೀಗಳು.
"ನಾವು ಬುದ್ಧಿ ಇಲ್ಲಿ ಬಹಳ ಧೂಳು... ಕಸವಿದೆ...‌!!?? .... ಅವರಿಗೆ ತೊಂದರೆಯಾಗಬಹುದೆಂಬ ದೃಷ್ಟಿಯಲ್ಲಿ
"ಅದಕ್ಕೇನಾಗುತ್ತೆ.... .. ಇಲ್ಲೇ....... ಕೂಡೋ....ನ್... ಬನ್ರೀ... ಗಾದಿ... ಇದ್ದಂಗೆ ... ಇರ್ತದ.. " ಎಂದು. ಅಲ್ಲೇ ಕುಳಿತು ಸರಿಸುಮಾರು.... 90 ನಿಮಿಷಗಳ ಕಾಲ.....=ನಮ್ಮೊಂದಿಗೆ ಸಂವಾದ ಮತ್ತು ಚರ್ಚೆ ಮಾಡಿದ್ದು..... ಅವರ ಸರಳತೆಗೆ ಒಂದು ಉದಾಹರಣೆ!!!?
ಧನ್ಯವಾದಗಳು 👏🏾👏🏾
✍🏽 ಡಾ. ಬಿ ಯಂ ನಾಗಭೂಷಣ ಭೀಮಸಮುದ್ರ

2 weeks ago (edited) | [YT] | 176

VISHWA 2

ಕನ್ನೇರಿ ಶ್ರೀಗಳ ಕಾರ್ಯಕ್ರದಲ್ಲಿ ಎಲ್ಲಿಯೂ ನಡೆಯದ ಗಲಭೆ ಬಸವಕಲ್ಯಾಣದಲ್ಲಿ ಜೂನ್ 28 ಕ್ಕೆ
ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ
ಯಾಕೆ ಗಲಭೆ ನಡಿಯುತ್ತೆ ಅನ್ನೋ ವದಂತಿ
ಕಾನೂನು ಸುವ್ಯವಸ್ಥೆ ಅನ್ನೋ ನೆಪ ಯಾಕೆ

2 weeks ago | [YT] | 111

VISHWA 2

3 weeks ago | [YT] | 91

VISHWA 2

ಬಿಜಾಪುರ ಜೆಲ್ಲೆಯ ಹೊನವಾಡ ಗ್ರಾಮದ ಶ್ರೀ ಬಸಂತ ರಾಯ ಮಸಲಿ ಅವರು ರಾಸಾಯನಿಕ ಮುಕ್ತವಾಗಿ ದ್ರಾಕ್ಷಿ (Thomson seedless ) ಬೆಳೆದಿರುವುದು ನಿಮಗೆ ತಿಳಿದಿದೆ. ಹಸಿ ದ್ರಾಕ್ಷಿಯನ್ನು ಈಗಾಗಲೇ ನೂರಾರು ಗ್ರಾಹಕರು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ “ಒಣ ದ್ರಾಕ್ಷಿ” ಮಾರಾಟಕ್ಕೆ ಸಿದ್ದವಾಗಿದ್ದು ಆಸಕ್ತರು ನೇರವಾಗಿ ರೈತ ಬಸಂತ ರಾಯರನ್ನು ಸಂಪರ್ಕಿಸಿ 8310179849 ಖರೀದಿಸಬಹುದು

1 month ago | [YT] | 11

VISHWA 2

M: 821 759 9916

1 month ago | [YT] | 18

VISHWA 2

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
99459 49957 | 81236 48522 | 99005 09387 | 89711 73241

3 months ago (edited) | [YT] | 157

VISHWA 2

ದೇವರ ಕೋಣೆಗಳು ಮ್ಯೂಸಿಯಂಗಳಾಗಿವೆ,
ಹಿಂದೂ ದೇವರುಗಳ ಬಗ್ಗೆ ಕೀಳಾಗಿ ಮಾತನಾಡುವುದು ,
ಗಣಪತಿಯ ಬಗ್ಗೆ ಮಾತನಾಡುವುದು,
ಇನ್ನು ಅನೇಕ ರೀತಿ ಮಾತನಾಡಿ ಸನಾತನ ಹಿಂದುತ್ವದ ಧರ್ಮವನ್ನು ಒಡೆಯುವುದು ಆದರೆ ತಮ್ಮದೇ ಮಲ್ಲಿಕಾರ್ಜುನ ಮಠದಲ್ಲಿ ದೇವರ ಕೋಣೆ ಹೇಗಿದೆ ನೋಡಿ , ಬಸವಣ್ಣನವರ ಭಾವಚಿತ್ರವನ್ನು ಯಾವ ಸ್ಥಾನದಲ್ಲಿ ಇಟ್ಟಿದ್ದಾರೆ ನೋಡಿ.

ಶ್ರೀ ಶಿವಾನಂದ ಸ್ವಾಮೀಜಿ
ಆಡಿ / ಹಂದಿಗುಂದ

3 months ago | [YT] | 36

VISHWA 2

4 months ago | [YT] | 273

VISHWA 2

4 months ago | [YT] | 133

VISHWA 2

6 months ago | [YT] | 261