Life is achievement ❤️
Trekking vlogs, bike riding and travel vlogs places exploring celebrity interview.. community post.. informative videos food explore temple videos wildlife Safari videos...


RJ Suddhi

Miss call 9067777323

22 hours ago | [YT] | 3

RJ Suddhi

ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಇಂದು ವಾರದ ಕವಾಯತು ಜರುಗಿತು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿ ಅಪ್ರತಿಮ ದಕ್ಷತೆ ತೋರಿದ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು." ಮತ್ತು ಅಧಿಕಾರಿಗಳು & ಸಿಬ್ಬಂದಿಗಳ ಕುಂದು ಕೊರತೆಯನ್ನು ವಿಚಾರಿಸಲಾಯಿತು

3 months ago | [YT] | 3

RJ Suddhi

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS ಅವರ ಮಾರ್ಗದರ್ಶನದಲ್ಲಿ ವಿಶೇಷ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಅವಾಂಟ್ ಬಿ.ಕೆ.ಜಿ ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ನಗರದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉತ್ಸಾಹದಿಂದ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಯುಕ್ತರು ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಿ ಅಭಿನಂದಿಸಿದರು. ಈ ಶಿಬಿರದಲ್ಲಿ ಡಿಸಿಪಿಗಳು ಮತ್ತು ಎಸಿಪಿ ರವರುಗಳು ಭಾಗವಹಿಸಿ ರಕ್ತದಾನಿಗಳನ್ನು ಪ್ರೋತ್ಸಾಹಿಸಿದರು

3 months ago | [YT] | 3

RJ Suddhi

ದಿನಾಂಕ: 8.1.2026 ರಂದು ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS ರವರ ಅಧ್ಯಕ್ಷತೆಯಲ್ಲಿ ಅಪರಾಧ ವಿಮರ್ಶನಾ ಸಭೆ ಜರುಗಿತು. ಈ ಸಂದರ್ಭದಲ್ಲಿ ಡಿಸಿಪಿ (ಅಪರಾಧ ಮತ್ತು ಸಂಚಾರ) ಶ್ರೀ ಸುಂದರ್ ರಾಜ್ ಕೆ.ಎಸ್ ಸೇರಿದಂತೆ ನಗರದ ಎಲ್ಲಾ ಎಸಿಪಿಗಳು ಮತ್ತು ಪೊಲೀಸ್ ನಿರೀಕ್ಷಕರು ಉಪಸ್ಥಿತರಿದ್ದರು.

3 months ago | [YT] | 1

RJ Suddhi

ಇಂದು ವಿರಾಜಪೇಟೆ ನಗರ ಠಾಣೆ ಮತ್ತು ವಿರಾಜಪೇಟೆ ಗ್ರಾಮಾಂತರ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾನೂನು ಸುವ್ಯವಸ್ಥೆ, ಅಪರಾಧ ತಡೆಗಟ್ಟುವ ಬಗ್ಗೆ ಚರ್ಚಿಸಿ ಸೂಚನೆಗಳನ್ನು ನೀಡಲಾಯಿತು.

3 months ago | [YT] | 2

RJ Suddhi

ಮೈಸೂರು ನಗರದ ಪೊಲೀಸ್ ಸ್ಪಂದನ ಪತ್ತಿನ ಸಹಕಾರ ಸಂಘದ 2026ನೇ ಸಾಲಿನ ನೂತನ ಕ್ಯಾಲೆಂಡರನ್ನು ಸಂಘದ ಅಧ್ಯಕ್ಷರೂ ಹಾಗೂ ಮಾನ್ಯ ಪೊಲೀಸ್ ಆಯುಕ್ತರೂ ಆದ ಶ್ರೀಮತಿ ಸೀಮಾ ಲಾಟ್ಕರ್ IPS ರವರು ಇಂದು ಲೋಕಾರ್ಪಣೆಗೊಳಿಸಿದರು. ಈ ಶುಭ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎಸ್.ಎಲ್. ಉಮಾಮಹೇಶ್ವರ್, ಸಿಇಒ ಎನ್. ಮಹೇಶ್, ಸಲಹೆಗಾರರಾದ ಕೃಷ್ಣಪ್ರಸಾದ್ ಸೇರಿದಂತೆ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

3 months ago | [YT] | 1

RJ Suddhi

ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್ ರವರು, ಮಾನ್ಯ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ತಿಮ್ಮಯ್ಯ ಸಿ.ಈ ರವರು ಹಾಗೂ ಶ್ರೀ ಗಂಗಾಧರಸ್ವಾಮಿ ಎಸ್.ಈ ರವರು ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲಹಳ್ಳಿ ಗ್ರಾಮದ ಬಳಿ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೃತ್ಯದ ಬಗ್ಗೆ ಮಾಹಿತಿ ಪಡೆದು ತನಿಖಾಧಿಕಾರಿಗೆ ಪ್ರಕರಣದ ತನಿಖೆ ಮತ್ತು ಆರೋಪಿ ಪತ್ತೆ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿರುತ್ತಾರೆ."

3 months ago | [YT] | 1

RJ Suddhi

"ಮೈಸೂರು ನಗರಕ್ಕೆ ಪ್ರವಾಸಿಗರು ಹೆಚ್ಚಾಗಿ ಪ್ರವಾಸಿ ತಾಣಗಳಿಗೆ ಆಗಮಿಸುತ್ತಿದ್ದು ಮತ್ತು ಹೊಸ ವರ್ಷದ ಅಂಗವಾಗಿ ಪ್ರವಾಸಿಗರು & ನಗರದ ಸಾರ್ವಜನಿಕರ ಯೋಗ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು, ದಿ:28.12.2025ರ ಸಂಜೆ ಮೈಸೂರು ಅರಮನೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS ರವರು ಪರಿಶೀಲಿಸಿರುತ್ತಾರೆ. ಈ ಸಂದರ್ಭದಲ್ಲಿ ಡಿಸಿಪಿಗಳಾದ ಕುಮಾರಿ ಬಿಂದುಮನಿ RN IPS ಕಾನೂನು ಮತ್ತು ಸುವ್ಯವಸ್ಥೆ, ಶ್ರೀ ಸುಂದರ್ ರಾಜ್ KS ಅಪರಾಧ ಮತ್ತು ಸಂಚಾರ ರವರು ಉಪಸ್ಥಿತರಿದ್ದರು.

3 months ago | [YT] | 3

RJ Suddhi

ಲಷ್ಕರ್ ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂದಿರವರಿಂದ ದಿನಾಂಕ:22.12.2025ರಂದು ಸಂತ ಫಿಲೋಮಿನಾ ಹೈ ಸ್ಕೂಲ್ ಮಕ್ಕಳನ್ನು ತೆರೆದ ಮನೆ ಕಾರ್ಯಕ್ರಮದಡಿ ಠಾಣೆಗೆ ಕರೆಯಿಸಿ ಮಕ್ಕಳಿಗೆ ಠಾಣಾ ಚಟುವಟಿಕೆಗಳ ಬಗ್ಗೆ ಪರಿಚಯ ಮಾಡಿಕೊಡಲಾಯಿತು, ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮತ್ತು ಸೈಬರ್ ಅಪರಾಧ, ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಡಲಾಯಿತು

4 months ago | [YT] | 0

RJ Suddhi

ಇಂದು ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಕನ್ನಡ ಚಲನಚಿತ್ರರಂಗದ ಪ್ರಖ್ಯಾತ ನಟರುಗಳಾದ ಶ್ರೀ ವಿನಯ್ ರಾಜ್‌ಕುಮಾರ್ ಹಾಗೂ ಯುವ ರಾಜ್‌ಕುಮಾರ್ ಅವರೊಂದಿಗೆ ವಿಶೇಷ ಕುಶಲೋಪರಿ ನಡೆಸಲಾಯಿತು.

4 months ago | [YT] | 3