NEWSOFHASSAN ನ್ಯೂಸ್ ಆಫ್ ಹಾಸನ್

ಸತ್ಯ☀️ ನಿಖರತೆ☀️ ನಿಷ್ಪಕ್ಷಪಾತ☀️. ರಾಜ್ಯ,⭐ ರಾಷ್ಟ್ರ, ⭐ಕ್ರೀಡೆ, ⭐ಸಿನಿಮಾ ಮತ್ತು ⭐ಇತ್ತೀಚಿನ ಜ್ಞಾನದ ಪ್ರಸ್ತುತ ವಿದ್ಯಮಾನಗಳ ⭐ವೈರಲ್ ವಿಡಿಯೋ ಗಳ ಸತ್ಯ ⭐ನೈಜ ಮತ್ತು⭐ ವೇಗದ ಮಾಹಿತಿಗಾಗಿ ನಮ್ಮ ಚಾನಲ್ ಫಾಲೋ ಮಾಡಿ ☀️☀️☀️☀️☀️


NEWSOFHASSAN ನ್ಯೂಸ್ ಆಫ್ ಹಾಸನ್

News of Hassan ನ್ಯೂಸ್ ಆಫ್ ಹಾಸನ್ #ಆಲೂರು: ದೇವಾಲಯದ ಬಸವ ಅಗಲಿಕೆ: ಗ್ರಾಮಸ್ಥರ ಕಂಬನಿ. ತಾಲೂಕಿನ ಕುಂದೂರು ಹೋಬಳಿಯ ಗಂಜಿಗೆರೆ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಸೇರಿದ ದೇವರ ಬಸವ ಭಾನುವಾರ ಅನಾರೋಗ್ಯದಿಂದ ಇದೆ. ಕಳೆದ 16 ವರ್ಷಗಳಿಂದ ದೇವಸ್ಥಾನಕ್ಕೆ ಸೇವೆ ಸಲ್ಲಿಸುತ್ತಿದ್ದ ಬಸವವನ್ನು ಗ್ರಾಮಸ್ಥರು ಭಕ್ತಿಭಾವದಿಂದ ಪೋಷಿಸಿಕೊಂಡು ಬಂದಿದ್ದರು. ದೇವಾಲಯದ ನಿತ್ಯ ಪೂಜೆ ಹಾಗೂ ಗ್ರಾಮದ ಧಾರ್ಮಿಕ ಆಚರಣೆಗಳಲ್ಲಿ ಅವಿಭಾಜ್ಯ ಅಂಗವಾಗಿ ಬಸವನ ಅಗಲಿಕೆಯಿಂದ ಗ್ರಾಮದಲ್ಲಿ ಶೋಕ ಆವರಿಸಿದೆ. ಬಸವನ ಮರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ದೇವಸ್ಥಾನ ಸೇರಿರುವುದನ್ನು ವ್ಯಕ್ತಪಡಿಸಿದ್ದಾರೆ.

1 month ago (edited) | [YT] | 2

NEWSOFHASSAN ನ್ಯೂಸ್ ಆಫ್ ಹಾಸನ್

ಹಾಸನ: 18 ವರ್ಷದ ಕಾಲೇಜು ವಿದ್ಯಾರ್ಥಿನಿ ಕಾಣೆ – ಮಾಹಿತಿ ನೀಡಲು ವಿನಂತಿ

ಹಾಸನ ತಾಲೂಕಿನ ಅಣ್ಣಿಗನಹಳ್ಳಿ ಮೂಲದ 18 ವರ್ಷದ ಭೂಮಿಕಾ ಎ. ಸಿ. ಬಿನ್ ಚುಂಚನಗಿರಿಗೌಡ ಅವರು 28-11-2025 ರಂದು ಬೆಳಿಗ್ಗೆ 8.30ಕ್ಕೆ ಹಾಸನದ ಬಿ. ಕಾಟಿಹಳ್ಳಿಯ ಸಂತ ಫಿಲೋಮಿನಾ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಹೊರಟು ವಾಪಸ್ ಬಾರದೆ ಕಾಣೆಯಾಗಿದ್ದಾರೆ. ಎರಡನೇ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದ ಭೂಮಿಕಾ ಅವರ ಕುರಿತು ತಾಯಿ ಕೌಸಲ್ಯ ಅವರು ನೀಡಿದ ದೂರಿನನ್ವಯ ಹಾಸನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಸಿ.ಆರ್. 323/2025 ಪ್ರಕರಣ ದಾಖಲಿಸಲಾಗಿದೆ. ಯಾರಿಗಾದರೂ ಭೂಮಿಕಾ ಅವರ ಬಗ್ಗೆ ಮಾಹಿತಿ ಇದ್ದಲ್ಲಿ 08172-68630 / 9480804746 /9480804742 ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ

3 months ago | [YT] | 5