Southwood Talkies 

We are passionate about giving you nothing but the best in entertainment.
Do you feel the need to connect your brand to the vast digital audience without making them feel like it's an ad they just watched? SWT came into existence as an answer


Southwood Talkies

SHAKALAKA OUT NOW ✅
https://youtu.be/haHtTSex_yY?si=X2AeI...

@NiranjanSudhi @Rachana_Inder @StylishstarPrem @garimaavinash @mahantesh_handral @itsclapboard_pro

#SparkMovie #FirstSingle #ramithpro #itsclapboardpro#KannadaCinema #Spark #SachinBasrur

3 days ago | [YT] | 5

Southwood Talkies

SHAKALAKA OUT NOW ✅
https://youtu.be/haHtTSex_yY?si=X2AeI...

@NiranjanSudhi @Rachana_Inder @StylishstarPrem @garimaavinash @mahantesh_handral @itsclapboard_pro

#SparkMovie #FirstSingle #ramithpro #itsclapboardpro#KannadaCinema #Spark #SachinBasrur

3 days ago | [YT] | 5

Southwood Talkies

*"ಮಹಾನ್" ಚಿತ್ರದ ಪ್ರಮುಖಪಾತ್ರದಲ್ಲಿ ರಾಧಿಕಾ ನಾರಾಯಣ್ ಹಾಗೂ ಮಿತ್ರ. ಫಸ್ಟ್ ಲುಕ್ ಅನಾವರಣ ಮಾಡಿದ ಚಿತ್ರತಂಡ* .

ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ, ಆಕಾಶ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬೂದೂರು ಅವರು ನಿರ್ಮಿಸುತ್ತಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ "ಮಹಾನ್" ಚಿತ್ರದ ಪ್ರಮುಖಪಾತ್ರದಲ್ಲಿ "ರಂಗಿತರಂಗ" ಖ್ಯಾತಿಯ ರಾಧಿಕಾ ನಾರಾಯಣ್ ಹಾಗೂ ಖ್ಯಾತ ನಟ ಮಿತ್ರ ಅಭಿನಯಿಸಿದ್ದಾರೆ. ಇತ್ತೀಚೆಗೆ "ಮಹಾನ್" ಚಿತ್ರತಂಡ ರಾಧಿಕಾ ನಾರಾಯಣ್ ಹಾಗೂ ಮಿತ್ರ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.

"ಮಹಾನ್" ಚಿತ್ರದಲ್ಲಿ ನನ್ನದು ನರ್ಸ್ ಪಾತ್ರ. ಪಕ್ಕಾ ಗ್ರಾಮೀಣ ಹೆಣ್ಣು ಮಗಳ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದೇನೆ. ನಾನು ನಗರ ಪ್ರದೇಶದಲ್ಲಿ ಬೆಳೆದವಳು. ಹಳ್ಳಿ ಹುಡುಗಿ ಪಾತ್ರ ಮಾಡಿರುವುದು ಬಹಳ ಖುಷಿಯಾಗಿದೆ. ನಾಯಕನಿಗೆ ಬೆನ್ನೆಲುಬಾಗಿ ನಿಲ್ಲುವ ಪಾತ್ರವೂ ಹೌದು. ಇನ್ನೂ, ಪಿ.ಸಿ.ಶೇಖರ್ ನನ್ನ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಈ ಹಿಂದೆಯೇ ಅವರ ನಿರ್ದೇಶನದ ಚಿತ್ರದಲ್ಲಿ ನಾನು ನಟಿಸಬೇಕಿತ್ತು‌. ಈಗ ಕಾಲ ಕೂಡಿ ಬಂದಿದೆ. ನಿರ್ಮಾಪಕ ಪ್ರಕಾಶ್ ಬೂದೂರು ಅವರಂತೂ ಯಾವುದೇ ಕೊರತೆ ಬಾರದ ಹಾಗೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಶಿವರಾಜಕುಮಾರ್ ಅವರು ವಿಶೇಷಪಾತ್ರದಲ್ಲಿ ಅಭಿನಯಿಸಿರುವುದು ಈ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ವಿಜಯ ರಾಘವೇಂದ್ರ, ವರ್ಷ ಬೊಳ್ಳಮ್ಮ, ಮಿತ್ರ ಮುಂತಾದ ಕಲಾವಿದರ ಜೊತೆಗೆ ನಟಿಸಿರುವುದು ಹಾಗೂ ಚಿತ್ರೀಕರಣದ ಅನುಭವ ತುಂಬಾ ಸಂತೋಷ ತಂದಿದೆ. ನನ್ನ ಅಭಿಮಾನಿಗಳು ಅಭಿಮಾನ ಪಡುವ ಚಿತ್ರ "ಮಹಾನ್" ಆಗಲಿದೆ ಎಂದು ನಟಿ ರಾಧಿಕಾ ನಾರಾಯಣ್ ತಿಳಿಸಿದ್ದಾರೆ.
ನಾನು "ರಾಗ" ಚಿತ್ರದ ನಂತರ ನಿರ್ದೇಶಕ ಪಿ.ಸಿ.ಶೇಖರ್ ಅವರೊಟ್ಟಿಗೆ ಈ ಚಿತ್ರ ಮಾಡುತ್ತಿದ್ದೇನೆ. "ರಾಗ" ಚಿತ್ರದ ನನ್ನ ಪಾತ್ರಕ್ಕೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ "ಮಹಾನ್" ಚಿತ್ರದಲ್ಲೂ ಅಂತಹುದೇ ಒಂದು ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಾನು ನಾಯಕ ವಿಜಯ ರಾಘವೇಂದ್ರ ಅವರ ಸೋದರಮಾವನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಸದಾ ನಾಯಕನ ಜೊತೆಗೆ ಸಾಗುವ ಪಾತ್ರವಿದು. ನಾಯಕನದು ಸೌಮ್ಯ ಸ್ವಭಾವವಾದರೆ, ನನ್ನದು ಸ್ವಲ್ಪ ಮುಂಗೋಪಿಯ ಪಾತ್ರ. ಇದೊಂದು ರೈತರ ಕುರಿತಾದ ಚಿತ್ರ. ಇಂತಹ ಸಾಮಾಜಿಕ ಕಳಕಳಿಯುಳ್ಳ ಚಿತ್ರವನ್ನು ಪ್ರಕಾಶ್ ಬೂದೂರು ಅವರು ಬಹಳ ಮುತುವರ್ಜಿಯಿಂದ ನಿರ್ಮಾಣ ಮಾಡುತ್ತಿದ್ದಾರೆ. ಶಿವರಾಜಕುಮಾರ್ ಅವರು ಸಹ ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇಂತಹ ಅದ್ಭುತ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಟಿಸಿದ್ದು ನನಗೆ ಬಹಳ ಖುಷಿಯಾಗಿದೆ. ನನ್ನಷ್ಟೆ ನನ್ನ ಪಾತ್ರವನ್ನು ಪ್ರೇಕ್ಷಕರು ಸಹ ಇಷ್ಟ ಪಡುತ್ತಾರೆ ಎಂಬ ನಂಬಿಕೆ ಇದೆ ಎಂದು ನಟ ಮಿತ್ರ ತಿಳಿಸಿದ್ದಾರೆ.
ಈ ಹಿಂದೆ ಅವರು ಮಾಡಿರದ ಪಾತ್ರದಲ್ಲಿ ಅವರು "ಮಹಾನ್" ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ ರಾಘವೇಂದ್ರ ಅವರದು ಈ ಚಿತ್ರದಲ್ಲಿ ಸಾಮಾಜಿಕ ಕಾಳಜಿ ಇರುವ ರೈತನ ಪಾತ್ರ. ಅವರ ಜೀವನದಲ್ಲಿ ಸಾಕಷ್ಟು ಏರಿಳಿತಗಳಿರುತ್ತದೆ‌. ಅವರ ಕಷ್ಟದ ಸಮಯದಲ್ಲಿ ಧೈರ್ಯ ತುಂಬಿ ಅವರನ್ನು ಹುರಿದುಂಬಿಸುವ ಪಾತ್ರದಲ್ಲಿ ಮಹಿಳೆ ಇದ್ದರೆ ಉತ್ತಮ ಎಂಬುದು ನನ್ನ ಅನಿಸಿಕೆ ಆಗಿತ್ತು. ಈ ಪಾತ್ರದಲ್ಲಿ ರಾಧಿಕಾ ಅವರು ನಟಿಸಿದ್ದಾರೆ. ನರ್ಸ್ ಆಗಿಯೂ, ಸಾಮಾಜಿಕ ಕಾಳಜಿ ಇರುವ ಹೆಣ್ಣಾಗಿ ರಾಧಿಕಾ ನಾರಾಯಣ್ ಅವರು ಅಭಿನಯಿಸಿದ್ದು, ವಿಜಯ ರಾಘವೇಂದ್ರ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ನನ್ನ ಹಾಗೂ ಮಿತ್ರ ಅವರ ಕಾಂಬಿನೇಶನ್ ನಲ್ಲಿ ಬಂದ "ರಾಗ" ಚಿತ್ರ ಇಂದು ಕೂಡ ಜನಪ್ರಿಯ. ಈಗ "ಮಹಾನ್" ಚಿತ್ರದಲ್ಲಿ ನ್ಯಾಯದ ಪರ ಹೋರಾಡುವ ನಾಯಕ ವಿಜಯ ರಾಘವೇಂದ್ರ ಅವರಿಗೆ ಸದಾ ಬೆಂಗಾವಲಾಗಿ ಇರುವ, ನಾಯಕನ ಆಗುಹೋಗುಗಳಿಗೆ ಸ್ಪಂದಿಸುವ ಪಾತ್ರ ಮಿತ್ರ ಅವರದು. ಇಬ್ಬರ ನಡುವೆ ವಯಸ್ಸಿನ ಅಂತರ ಬಹಳ ಇದ್ದರೂ, ಈ ಸ್ನೇಹಿತರಂತೆ ಬಲವಾದ ನಂಟು ಇರುತ್ತದೆ. ಬಹಳ ಪ್ರಾಮುಖ್ಯತೆಯಿರುವ ಪಾತ್ರ‌. ಮಿತ್ರ ಅವರ ಪಾತ್ರ ಮತ್ತು ಅವರ ಅಭಿನಯ ಎಲ್ಲರ ಮನ ಮುಟ್ಟುತ್ತದೆ ಎಂದು ನಿರ್ದೇಶಕ ಪಿ‌‌.ಸಿ.ಶೇಖರ್ ತಿಳಿಸಿದ್ದಾರೆ. .

"ಮಹಾನ್" ನಮ್ಮ ಆಕಾಶ ಪಿಕ್ಚರ್ಸ್‌ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರ. ಪ್ರೇಕ್ಷಕರಿಗೆ ಸದಭಿರುಚಿಯ ಚಿತ್ರಗಳನ್ನು ನೀಡುವ ಹಂಬಲ ನಮ್ಮ ಸಂಸ್ಥೆಯದು. ಅದರ ಮೊದಲ ಪ್ರಯತ್ನವಾಗಿ ಪಿ.ಸಿ.ಶೇಖರ್ ಅವರ ನಿರ್ದೇಶನದಲ್ಲಿ "ಮಹಾನ್" ಚಿತ್ರ ನಿರ್ಮಾಣವಾಗುತ್ತಿದೆ. "ರಂಗಿತರಂಗ" ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಹಾಗೂ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ಮಿತ್ರ ಅವರಂತಹ ಅನುಭವಿ ನಟರು ಅಭಿನಯಿಸಿರುವುದು ಬಹಳ ಖುಷಿಯಾಗಿದೆ ಎನ್ನುತ್ತಾರೆ ನಿರ್ಮಾಪಕ ‌ಪ್ರಕಾಶ್ ಬೂದೂರು.

4 days ago | [YT] | 13

Southwood Talkies

ಅಮೆರಿಕಾ ಅಮೆರಿಕಾ 2ಕ್ಕೆ ಫ್ರೆಂಡ್‌ಶಿಪ್ ಡೇ ಉಡುಗೊರೆ

ಡಾ.ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಮನೋ ಮೂರ್ತಿ ಅವರ ಜೋಡಿ ಕನ್ನಡ ಸಿನಿಪ್ರೇಮಿಗಳ ಮನದಲ್ಲಿ ಸದಾ ವಿಶೇಷ ಸ್ಥಾನ ಪಡೆದಿದೆ. ಅಮೆರಿಕಾ ಅಮೆರಿಕಾ, ನನ್ನ ಪ್ರೀತಿಯ ಹುಡುಗಿ, ಅಮೃತಧಾರೆ ಮತ್ತು ಮಾತಾಡ್ ಮಾತಾಡ್ ಮಲ್ಲಿಗೆ ಸೇರಿದಂತೆ ಹಲವು ಚಿತ್ರಗಳ ಮೂಲಕ ಈ ಜೋಡಿ ನೆನಪಿನಲ್ಲಿ ಉಳಿಯುವ ಸಂಗೀತವನ್ನು ನೀಡಿದೆ.

ಈಗ ಆ ಪ್ರಿಯ ಜೋಡಿ ಮತ್ತೆ ಅಮೆರಿಕಾ ಅಮೆರಿಕಾ 2 ಮೂಲಕ ಒಂದಾಗುತ್ತಿದೆ. ‘ಫ್ರೆಂಡ್‌ಶಿಪ್ ಡೇ’ಯಾದ ಆಗಸ್ಟ್ 2ರಂದು ತಮ್ಮ ಸ್ನೇಹದ ನೆನಪನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲು ಅವರು ವಿಶೇಷ ಹೆಜ್ಜೆ ಇಟ್ಟಿದ್ದಾರೆ. ಅಮೆರಿಕಾ ಅಮೆರಿಕಾ 2 ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಮನೋ ಮೂರ್ತಿ ಮ್ಯೂಸಿಕ್ ಚಾನೆಲ್‌ನಲ್ಲಿ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಸ್ನೇಹ ಮತ್ತು ಸೃಜನಶೀಲ ಸಹಯೋಗಕ್ಕೆ ಗೌರವ ಸಲ್ಲಿಸುವಂತೆ ಈ ಪ್ರಕಟಣೆ ಹೊರಬಿದ್ದಿದೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ ಮತ್ತು ಪೃಥ್ವಿ ಅಂಬರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

4 days ago | [YT] | 11

Southwood Talkies

*ತನುಷ್ ಶಿವಣ್ಣ ಅಭಿನಯದ ‘ಬಾಸ್’ ಚಿತ್ರದ ಬಿಡುಗಡೆಗೆ ದರ್ಶನ್ ಅವರ ಒಪ್ಪಿಗೆ* .
*ಲವ ವಿ ನಿರ್ದೇಶನದ ಈ ಚಿತ್ರ ಆಗಸ್ಟ್ 7 ರಂದು ತೆರೆಗೆ* .

ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಹಾಗೂ ಲವ ವಿ ನಿರ್ದೇಶನದ 'ಬಾಸ್’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ ಚಿತ್ರಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗಿತ್ತು. ಈ ಚಿತ್ರದ ಬಿಡುಗಡೆಗೆ ತಡೆ ಕೋರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ದರ್ಶನ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು, ‘ಬಾಸ್’ ಚಲನಚಿತ್ರದ ಬಿಡುಗಡೆಗೆ ಅನುಮತಿ ನೀಡಿದೆ. ಅಲ್ಲದೆ, ದರ್ಶನ್ ಅವರು ಸಹ "ಬಾಸ್" ಚಿತ್ರ ಬಿಡುಗಡೆ ಮಾಡಿಕೊಳ್ಳಲಿ ಎಂದು ಅವರ ಪರ ವಕೀಲರ ಮುಂದೆ ಹೇಳಿದ್ದಾರೆ. ಆಗಸ್ಟ್ 7 ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಹೈಕೋರ್ಟ್ ನಲ್ಲಿ ನಮ್ಮ ಚಿತ್ರ ಬಿಡುಗಡೆಗೆ ಅವಕಾಶ ಸಿಕ್ಕ ನಂತರ ನಾನು ವಿಜಯಲಕ್ಷ್ಮಿ ದರ್ಶನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಅವರ ಪರ ವಕೀಲರಾದ ಪ್ರಥಮ್ ಅವರು ವಿಜಯಲಕ್ಷ್ಮಿ ಅವರ ಜೊತೆಗೆ ಮಾತನಾಡಿ, ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಿಕೊಟ್ಟರು. ನಾನು ವಿಜಯಲಕ್ಷ್ಮಿ ದರ್ಶನ್ ಅವರ ಜೊತೆಗೆ ಮಾತನಾಡಿದೆ. ಅವರು ಮೊದಲು ಕೇಳಿದ ಪ್ರಶ್ನೆ, ನಿಮ್ಮ ಸಿನಿಮಾದಲ್ಲಿ ನಮ್ಮ ಕುಟುಂಬದ ಕುರಿತಾದ ಯಾವುದೇ ಸನ್ನಿವೇಶಗಳು ಇಲ್ಲ ತಾನೆ ಎಂದರು. ನಾನು ಇಲ್ಲ ಅಂತ ಹೇಳಿದೆ. ನಮ್ಮ ವಕೀಲರು ನಿಮ್ಮ ಚಿತ್ರವನ್ನು ನೋಡಿ ನಮಗೆ ತಿಳಿಸುತ್ತಾರೆ. ಯಾವುದಾದರೂ ಕುಟುಂಬಕ್ಕೆ ಸಂಬಂಧಿಸಿದ ಸನ್ನಿವೇಶಗಳಿದ್ದರೆ ನೀವು ಅದನ್ನು ತೆಗೆಯಬೇಕಾಗುತ್ತದೆ ಎಂದರು. ನಾನು ಆಗಲಿ ಎಂದೆ. ವಕೀಲರಾದ ಪ್ರಥಮ್ ಅವರು ಚಿತ್ರ ನೋಡಿ,‌ ವಿಜಯಲಕ್ಷ್ಮೀ ದರ್ಶನ್ ಹಾಗೂ ದರ್ಶನ್ ಅವರಿಗೆ ವಿಷಯ ತಿಳಿಸಿದ್ದಾರೆ. ಮೊದಲಿನಿಂದಲೂ ಹೊಸಬರ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಹಾಗೂ ಒಂದು ಚಿತ್ರ ನಿರ್ಮಾಣದ ಹಿಂದೆ ಎಷ್ಟು ಕಷ್ಟಗಳಿದೆ ಎಂದು ಅರಿತಿರುವ ದರ್ಶನ್ ಅವರು ಸುಪ್ರೀಂ ಕೋರ್ಟ್ ಗೆ ಹೋಗುವುದು ಬೇಡ. ಅವರು ಚಿತ್ರ ಬಿಡುಗಡೆ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ. ವಿಜಯಲಕ್ಷ್ಮಿ ಅವರು ಸಹ ಫೋನ್ ನಲ್ಲಿ ಮಾತನಾಡಿ ಚಿತ್ರ ಬಿಡುಗಡೆ ಮಾಡಿ. ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಈ ಸಮಯದಲ್ಲಿ ದರ್ಶನ್ ದಂಪತಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಇಷ್ಟು ದಿನಗಳ ಅಡೆತಡೆಗಳೆಲ್ಲಾ ಮೀರಿ ನಮ್ಮ ಚಿತ್ರ ಇದೇ ಆಗಸ್ಟ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಲ್ಲರೂ ನೋಡಿ ಪ್ರೋತ್ಸಾಹ ನೀಡಿ ಎಂದು ಚಿತ್ರದ ನಾಯಕ ಹಾಗೂ ನಿರ್ಮಾಪಕ ತನುಷ್ ಶಿವಣ್ಣ ತಿಳಿಸಿದರು.

ನಿರ್ದೇಶಕ ಲವ ಅವರು ಸಹ ಚಿತ್ರದ ಬಿಡುಗಡೆ ಕುರಿತು ಮಾಹಿತಿ ನೀಡಿದರು. ನಾಯಕಿ ಪಾಯಲ್ ಚಂಗಪ್ಪ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಚಿತ್ರ ಹಾಗೂ ತಮ್ಮ ಪಾತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಶರತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

4 days ago | [YT] | 13

Southwood Talkies

*ಭಾರತೀಯ ಸಿನಿಮಾರಂಗದ ಇತಿಹಾಸದಲ್ಲಿಯೇ ದಾಖಲೆ ಬರೆದ ರಾಮಾಯಣ*

*ಕೇವಲ 4 ದಿನಗಳಲ್ಲಿ 800 ಮಿಲಿಯನ್‌ ಗೂ ಅಧಿಕ ವೀಕ್ಷಣೆ ಪಡೆದ ನಿತೀಶ್‌ ತಿವಾರಿ ನಿರ್ದೇಶನದ 'ರಾಮಾಯಣ' ಟ್ರೈಲರ್!*

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮಹತ್ವಾಕಾಂಕ್ಷೆಯ ಚಿತ್ರವೆನಿಸಿರುವ 'ರಾಮಾಯಣ' ತನ್ನ ಮೊದಲ ಅಧಿಕೃತ ಟ್ರೈಲರ್ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ವಿಶ್ವದಾದ್ಯಂತ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಚಿತ್ರದ ಟ್ರೈಲರ್, ಬಿಡುಗಡೆಯಾದ ಕೇವಲ 4 ದಿನಗಳಲ್ಲಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ 800 ಮಿಲಿಯನ್‌ ಗೂ ಅಧಿಕ ವೀಕ್ಷಣೆಗಳನ್ನು ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

ಹಾಲಿವುಡ್‌ನ ಹೆಮ್ಮೆಯ ಚಿತ್ರಗಳಾದ ಮಾರ್ವೆಲ್‌ನ 'ಅವೆಂಜರ್ಸ್: ಡೂಮ್ಸ್‌ಡೇ' (936 ಮಿಲಿಯನ್) ಮತ್ತು 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' (1.1 ಬಿಲಿಯನ್) ಚಿತ್ರಗಳ ಟ್ರೈಲರ್ ವೀಕ್ಷಣೆಗಳ ಸಾಲಿನಲ್ಲಿ 'ರಾಮಾಯಣ' ಚಿತ್ರವು ಹೆಮ್ಮೆಯಿಂದ ನಿಂತಿದ್ದು, ಭಾರತೀಯ ಸಿನಿಮಾದ ಶಕ್ತಿಯನ್ನು ವಿಶ್ವದ ಎತ್ತರಕ್ಕೆ ಕೊಂಡೊಯ್ದಿದೆ. ಈ ಜಾಗತಿಕ ಸಫಲತೆಯು ಭಾರತೀಯ ಸಿನಿಮಾದ ಸ್ಟ್ಯಾಂಡರ್ಡ್ ಅನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎನ್ನಬಹುದು.

ಈ ಮಹಾಕಾವ್ಯದಲ್ಲಿ ಬಾಲಿವುಡ್‌ನ ಜನಪ್ರಿಯ ನಟ ರಣಬೀರ್ ಕಪೂರ್ ಶ್ರೀರಾಮನಾಗಿ, ನಟಿ ಸಾಯಿ ಪಲ್ಲವಿ ಸೀತಾ ಮಾತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ, ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿದ್ದು, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು, ಪ್ರೈಮ್ ಫೋಕಸ್ ಸ್ಟುಡಿಯೋಸ್‌ನ ನಮಿತ್ ಮಲ್ಹೋತ್ರಾ ಹಾಗೂ ಎಂಟು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ DNEG ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸುತ್ತಿದ್ದಾರೆ.

ಕಟಿಂಗ್-ಎಡ್ಜ್ ವಿಷುಯಲ್ಸ್ ಮತ್ತು ವಿಶ್ವ ದರ್ಜೆಯ ಕಥೆಗಾರಿಕೆಯೊಂದಿಗೆ ಈ ಸಿನಿಮಾ ರೂಪುಗೊಳ್ಳುತ್ತಿದೆ.
ಈ ಎರಡು ಭಾಗಗಳ ಬ್ರಹ್ಮಾಂಡ ಮಹಾಕಾವ್ಯವು ಐಮ್ಯಾಕ್ಸ್ (IMAX) ತಂತ್ರಜ್ಞಾನದೊಂದಿಗೆ ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಇದರ ಮೊದಲ ಭಾಗವು 2026ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027ರ ದೀಪಾವಳಿಗೆ ಅದ್ದೂರಿಯಾಗಿ ತೆರೆಕಾಣಲಿದೆ. ಕೇವಲ ಭಾರತೀಯರಷ್ಟೇ ಅಲ್ಲದೆ, ಇಡೀ ವಿಶ್ವದ ಸಿನಿಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿರುವ 'ರಾಮಾಯಣ' ಚಿತ್ರವು ಅಂತರರಾಷ್ಟ್ರೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತವಾಗಿದೆ.

4 days ago | [YT] | 25

Southwood Talkies

City Lights September 18 entire Karnataka Grand Release by KVN Productions

ಸೆಪ್ಟೆಂಬರ್ 18 ರಂದು ವಿನಯ್ ರಾಜಕುಮಾರ್ ಅಭಿನಯದ, ದುನಿಯಾ ವಿಜಯ್ ನಿರ್ದೇಶನದ "ಸಿಟಿ ಲೈಟ್ಸ್"ರಾಜ್ಯಾಧ್ಯತ ತೆರೆಗೆ ಬರಲಿದೆ.
@vinayrajkumar @monishavijaykumarr
🎬 : @duniyavijayofficial
🎵 : @charanraj27185
💿 : @aanandaaudio

@punithkumar05 @raaikot_official @citylightsmovie
@itsclapboard_pro

4 days ago | [YT] | 11

Southwood Talkies

ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ನಿರ್ದೇಶನದ ವಿನಯ್ ರಾಜ್ ಕುಮಾರ್, ಮೋನಿಷಾ ವಿಜಯ್ ಕುಮಾರ್ ನಟನೆಯ `ಸಿಟಿ ಲೈಟ್ಸ್' ಸಿನಿಮಾದ ಹೊಸ ಹಾಡು `ಕೆಂಡದೋಕುಳಿ ಗಂಡಾನ' ಲಾಂಚ್. ದಿನಾಂಕ 6 ಆಗಸ್ಟ್

4 days ago | [YT] | 15

Southwood Talkies

#AarthySivakarthikeyan shared a beautiful candid moment with @sivakarthikeyan on Instagram. She captioned the post, “Love in its simplest form ❤️”. The heartwarming pictures have struck a chord with fans, who have been pouring in love for the couple.

4 days ago | [YT] | 63

Southwood Talkies

ಡಿಎಸ್ಪಿಗೆ ಬರ್ತ್‌ಡೇ ಬೆಸ್ಟ್ ಸರ್ಪ್ರೈಸ್ – ‘ಯಲ್ಲಮ್ಮ’ ಸಿನಿಮಾದಲ್ಲಿ ‘ಪಾರ್ಶಿ’ ಪಾತ್ರದ ಮೂಲಕ ನಟನಾಗಿ ದೇವಿ ಶ್ರೀ ಪ್ರಸಾದ್ #Yellamma... and in it a man called PARSHI
Presenting the ACTOR @ThisIsDSP in a role rooted in the soil with a name you will remember and a journey you will never forget
We always celebrate his music... Along with that, let's celebrate him on the silver screen too Happy Birthday Rockstar DSP. The world is not ready for what's coming 💥💥
#HBDDeviSriPrasad
#SVC61 @VenuYeldandi9 #DilRaju #Shirish #MuraliG #Ramanjaneyulu @madhu_sudhan @mamidala.thiru @harshithsri @hanshithareddy @srivenkateswaracreations @tseries.official @tseriessouthofficial @wallsandtrends

6 days ago | [YT] | 9