ರಾಗ ತರಂಗ | Raaga Taranga

ಕನ್ನಡ ಚಿತ್ರರಂಗದಲ್ಲಿ ಹಲವು ಕ್ರಾಂತಿ ಮಾಡಿದ್ದ ಶಂಕರ್ ನಾಗ್ ಅವರಿಗೆ ಇಂದು (ನವೆಂಬರ್ 9) ಜನ್ಮದಿನ.

ಮೊದಲು ಸಿನಿಮಾಗಳ ಹಾಡಿನ ರೀರೆಕಾರ್ಡಿಂಗ್ ಕೆಲಸಗಳು ಮದ್ರಾಸ್​ ಅಂದರೆ ಈಗಿನ ಚೆನ್ನೈನಲ್ಲಿ ನಡೆಯುತ್ತಿತ್ತು. ಕನ್ನಡ ಸಿನಿಮಾದ ಶೂಟಿಂಗ್ ಎಲ್ಲೇ ಆದರೂ, ಅದರ ಹಾಡಿಸ ಕೆಲಸಗಳಿಗೆ ಚೆನ್ನೈ ಅಥವಾ ಮುಂಬೈಗೆ ತೆರಳಬೇಕಿತ್ತು. ಹೀಗಾಗಿ, ಸಿನಿಮಾ ಕೆಲಸಗಳ ಕೇಂದ್ರ ಬಿಂದುವು ಮದ್ರಾಸೇ ಆಗಿತ್ತು. ಈ ಬಗ್ಗೆ ಶಂಕರ್ ನಾಗ್​ಗೆ ಬೇಸರ ಇತ್ತು. ಸಿನಿಮಾ ನಿರ್ಮಾಣ ಮಾಡೋದು ಕನ್ನಡಿಗರು, ಸಿನಿಮಾ ನೋಡೋದು ಕನ್ನಡಿಗರು ಹೀಗಿರುವಾಗ ಅದರ ಕೆಲಸಗಳು ಏಕೆ ಚೆನ್ನೈನಲ್ಲಿ ನಡೆಯಬೇಕು ಎಂಬುದು ಅವರ ಪ್ರಶ್ನೆ ಆಗಿತ್ತು.

‘ಒಂದು ಮುತ್ತಿನ ಕಥೆ’ ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆದಿತ್ತು. ರಾಜ್​ಕುಮಾರ್ ನಟನೆಯ ಈ ಚಿತ್ರವನ್ನು, ಶಂಕರ್ ನಾಗ್ ನಿರ್ದೇಶನ ಮಾಡಿದ್ದರು. ಈ ಚಿತ್ರದ ಹಾಡಿನ ರೆಕಾರ್ಡ್ ಬೆಂಗಳೂರಿನಲ್ಲೇ ನಡೆದಿತ್ತು ಅನ್ನೋದು ವಿಶೇಷ. ‘ಮೊದಲು ಹಾಡುಗಳ ರೆಕಾರ್ಡಿಂಗ್ ಮಾಡಬೇಕು ಎಂದರೆ ಮದ್ರಾಸ್ ಅಥವಾ ಮುಂಬೈಗೆ ಹೋಗಬೇಕಿತ್ತು. ಆ ವ್ಯವಸ್ಥೆ ಕರ್ನಾಟಕದಲ್ಲಿ ಇರಲಿಲ್ಲ. ಪ್ರರಿ ಬಾರಿ ರೆಕಾರ್ಡಿಂಗ್ ಮಾಡಬೇಕಾದರೆ ತಿಂಗಳು ಗಟ್ಟಲೆ ನಿಂತು ಕಾಯಬೇಕಿತ್ತು’ ಎಂದಿದ್ದರು ಶಂಕರ್ ನಾಗ್.


‘ಸಿನಿಮಾ ನಿರ್ಮಾಪಕರ ಈ ಸ್ಥಿತಿ ಕಂಡು ಬೇಸರ ಆಗಿತ್ತು. ಹೀಗಾಗಿ ನಮ್ಮದೇ ಸ್ಟುಡಿಯೋ ಬೇಕು ಎನಿಸಿತು. ಅನಂತ್ ನಾಗ್​, ರಮೇಶ್ ಭಟ್, ಸೂರ್ಯ ರಾವ್ ಅವರಿಂದ ಆರ್ಥಿಕ ಸಹಾಯ ಪಡೆದು ರೀ-ರೆಕಾರ್ಡಿಂಗ್ ಸ್ಟುಡಿಯೋ ಮಾಡಿದೆವು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅದನ್ನು ಉದ್ಘಾಟನೆ ಮಾಡಿದರು. ನಮ್ಮಲ್ಲೂ ಎಲ್ಲಾ ಸೌಲಭ್ಯ ಇದೆ ಎಂಬುದರ ಸಂಕೇತವೇ ಈ ಸ್ಟುಡಿಯೋ’ ಎಂದಿದ್ದರು ಶಂಕರ್ ನಾಗ್.

1 year ago | [YT] | 15