Its all about " KARUNAADU "
Welcome to Lofty Land, a space where the rich tapestry of history, literature, Janapada (folklore) stories, arts, and cinema come to life. Dive into captivating tales, explore the world of classical and contemporary arts, and uncover the stories that shaped cultures.
ಲಾಫ್ಟಿ ಲ್ಯಾಂಡ್ಗೆ ಸ್ವಾಗತ,
ಇತಿಹಾಸ, ಸಾಹಿತ್ಯ, ಜನಪದ ಕಥೆಗಳು, ಕಲೆಗಳು ಮತ್ತು ಜಗತ್ತನ್ನು ಅನ್ವೇಷಿಸಿ, ಸಂಸ್ಕೃತಿಗಳನ್ನು ರೂಪಿಸಿದ ಕತೆಗಳನ್ನು ಅನಾವರಣಗೊಳಿಸಿ.ಲಾಫ್ಟಿ ಲ್ಯಾಂಡ್ ಮಾನವ ಅಭಿವ್ಯಕ್ತಿಯ ಹೃದಯದಲ್ಲಿ ಮತ್ತು ಸೃಜನಾತ್ಮಕತೆಯಲ್ಲಿ ಒಂದು ಪ್ರಯಾಣವನ್ನು ಒದಗಿಸುತ್ತದೆ.
ಸಲಹೆ ಮತ್ತು ಸಹಕಾರಕ್ಕೆ - +91 6360 520 385
MCN Partner : Aiplex
LOFTY LAND
ಚಿಕ್ಕಬಳ್ಳಾಪುರ ತಾ. ದಿಬ್ಬೂರು. ನಾವು ಪರಂಪರೆ ಉಳಿಸಿ ಕಾರ್ಯಕ್ರಮಕ್ಕೆ ಹೋಗುವಾಗ ದಾರಿ ತಪ್ಪಿ ದಾರಿ ಮದ್ಯೆ ಸಿಕ್ಕ ವಿಶೇಷವಾದ ಮರ. ಆಲದ ಮರ ನೂರಾರು ವರ್ಷ ಹಳೇಯ ಮರ ಮೈಸೂರು ಮಹಾರಾಜರಿಂದ ಇಡಿದು ಇವತ್ತಿನ ನಮ್ಮನ್ನೂ ನೋಡೋತ್ತಿರುವ ಐತಿಹಾಸಿಕ ಮರ. ಇಲ್ಲಿ ಹಿಂದೂ - ಮುಸ್ಲಿಂ ಇಬ್ಬರು ಪೂಜೆ ಮಾಡುತ್ತಾರೆ ಇದು ಇಬ್ಬರಿಗೂ ದೇವರು ಅಥವಾ ದೇವಸ್ಥಾನ - ಇಸ್ಲಾಂ ನ ದೇವರು ಹಿಂದೂಗಳ ಅಮ್ಮ ಈ ಮರದಲ್ಲಿ ನೆಲೆಸಿದ್ದಾರೆ ಅನ್ನೋ ನಂಬಿಕೆ.
ಕಥೆ - ಇತಿಹಾಸ - ಪುರಾಣ - ನಂಬಿಕೆ - ಏನೇ ಇರಲಿ
ಆದ್ರೆ ನಮಗೆ ಅನಿಸಿದ್ದು - ಮರಕ್ಕೆ ಯಾವ ಧರ್ಮ,
ಅದೇ ಪ್ರಕೃತಿ ಧರ್ಮ.
ನೆರವಿಗಾಗಿ ಬಂದವರನ್ನು ಮರವು ಎಂದಿಗೂ - ಜಾತಿ ಧರ್ಮಗಳಿಂದ ಅಳೆಯುವುದಿಲ್ಲ. -
- Lofty Land
7 hours ago | [YT] | 15
View 2 replies
LOFTY LAND
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿದೆ 500 ವರ್ಷ ಹಳೇಯ ಮತ್ತು ವಿಶೇಷವಾದ “ ಅನ್ನಪೂರ್ಣೇಶ್ವರಿ ದೇವಾಲಯ ”. - 5ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಮಾಗಡಿ ರಸ್ತೆ ಕೆ ಪಿ ಅಗ್ರಹಾರ, ಭುವನೇಶ್ವರಿ ನಗರ. ಬೆಂಗಳೂರು -600023
- ತಮ್ಮ ಇಡೀ ಅಧ್ಯಯನವನ್ನು ದೇವರು ಮತ್ತು ದೇವಾಲಯಗಳ ಮೇಲೆ ಮಾಡಿರುವ ಕೆಂಗೇರಿ ಚಕ್ರಪಾಣಿ ಯವರು ವಿವರಿಸಿದ್ದಾರೆ. 🙏❤️
1 week ago | [YT] | 156
View 3 replies
LOFTY LAND
Welcoming the divine blessings of Goddess Varalakshmi into our hearts and homes. 🌺🙏
1 week ago | [YT] | 74
View 1 reply
LOFTY LAND
ನಮ್ಮ ಉದ್ದೇಶಗಳು ನಮ್ಮನ್ನು ಕಟ್ಟಿಕೊಡುತ್ತವೆ | ‘ಪರಂಪರೆ ಉಳಿಸಿ’ ಅಭಿಯಾನ
‘ಪರಂಪರೆ ಉಳಿಸಿ’ — **ಕರ್ನಾಟಕ ಇತಿಹಾಸ ಅಕಾಡೆಮಿ (ರಿ.)**ಯ ಮಹತ್ವದ ಕಾರ್ಯಕ್ರಮ. ವರ್ಷಪೂರ್ತಿ ನಡೆಯಲಿರುವ ಈ ಅಭಿಯಾನಕ್ಕೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಡಾ. ದೇವರಕೊಂಡ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಕೆ. ಎಲ್. ರಾಜಶೇಖರ್, ಕಾರ್ಯದರ್ಶಿಗಳಾದ ಕೆ. ಧನಪಾಲ್ ಹಾಗೂ ಶಿಡ್ಲಘಟ್ಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಖ್ಯಸ್ಥರು ಉಪಸ್ಥಿತರಿದ್ದರು.
ಸುಮಾರು 40 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕರ್ನಾಟಕ ಇತಿಹಾಸ ಅಕಾಡೆಮಿ (ರಿ.) ಯಾವುದೇ ಸರ್ಕಾರಿ ಅನುದಾನ ಅಥವಾ ನೆರವಿಲ್ಲದೆ, ಇತಿಹಾಸ ಮತ್ತು ಪರಂಪರೆಯ ಬಗ್ಗೆ ಕಾಳಜಿ ಹೊಂದಿರುವ ಶ್ರೇಷ್ಠ ಮನಸ್ಸುಗಳ ಸಹಕಾರದಿಂದ ತನ್ನ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.
ಇತಿಹಾಸಕ್ಕೆ ಸಂಬಂಧಿಸಿದ ಅಪಾರ ಪ್ರಮಾಣದ ದಾಖಲೆಗಳನ್ನು ಸಂಗ್ರಹಿಸಿ, ಅಧ್ಯಯನ ಮಾಡಿ, ದಾಖಲಿಸುತ್ತಿರುವ ಅಕಾಡೆಮಿ ಪ್ರತಿವರ್ಷವೂ 200ಕ್ಕೂ ಹೆಚ್ಚು ಐತಿಹಾಸಿಕ ದಾಖಲೆಗಳನ್ನು ಮಂಡಿಸುತ್ತಾ ಬಂದಿದೆ. ಇಂತಹ ನಿರಂತರವಾದ ಇತಿಹಾಸ ಸಂರಕ್ಷಣಾ ಪ್ರಯತ್ನ ದೇಶದಲ್ಲೇ ಅಪರೂಪ.
ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಐತಿಹಾಸಿಕ ಚಿತ್ರಪಟಗಳು, ಹಳೆಯ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನ ಆಯೋಜಿಸಲಾಗಿತ್ತು.
ನಂತರ ಸೊಣ್ಣೆನಹಳ್ಳಿಯಲ್ಲಿ ಐತಿಹಾಸಿಕ ಶಾಸನ ಫಲಕವನ್ನು ಸ್ಥಳೀಯ ಜನರಿಗೆ ಪರಿಚಯಿಸಿ, ಅದರ ಮಹತ್ವವನ್ನು ತಿಳಿಸಲಾಯಿತು. ಈ ಅಮೂಲ್ಯ ಐತಿಹಾಸಿಕ ಕುರುಹನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಲಾಯಿತು. ಸ್ಥಳೀಯರ ಸಹಕಾರದಿಂದ ಈ ಕಾರ್ಯ ಯಶಸ್ವಿಯಾಯಿತು.
ಈ ಮಹತ್ವದ ಕಾರ್ಯದಲ್ಲಿ ಲಾಫ್ಟಿ ಲ್ಯಾಂಡ್ ಕೂಡ ಭಾಗವಹಿಸಿರುವುದು ಸಂತಸದ ಸಂಗತಿ.
ಇತಿಹಾಸವೆಂದರೆ ಕೇವಲ ಪುಸ್ತಕಗಳಲ್ಲಿರುವ ಕಥೆಯಲ್ಲ.
ನಮ್ಮ ನೆಲದಲ್ಲಿರುವ ಶಾಸನ, ನಾಣ್ಯ, ಕಟ್ಟಡ, ದಾಖಲೆ ಮತ್ತು ನೆನಪುಗಳಲ್ಲೂ ಇತಿಹಾಸ ಜೀವಂತವಾಗಿದೆ.
ನಮ್ಮ ಉದ್ದೇಶಗಳು ನಮ್ಮನ್ನು ಕಟ್ಟಿಕೊಡುತ್ತವೆ.
ನಮ್ಮ ಪರಂಪರೆಯನ್ನು ಉಳಿಸುವ ಉದ್ದೇಶವೇ ನಮ್ಮ ಮುಂದಿನ ಪೀಳಿಗೆಯನ್ನು ಕಟ್ಟಿಕೊಡುತ್ತದೆ.
#ಕರ್ನಾಟಕಇತಿಹಾಸಅಕಾಡೆಮಿ #ಪರಂಪರೆಉಳಿಸಿ #ಇತಿಹಾಸ #ಕರ್ನಾಟಕಇತಿಹಾಸ #ಇತಿಹಾಸಸಂರಕ್ಷಣೆ #ಐತಿಹಾಸಿಕಪರಂಪರೆ #ಶಾಸನ #ಸೊಣ್ಣೆನಹಳ್ಳಿ #ಶಿಡ್ಲಘಟ್ಟ #ಕರ್ನಾಟಕ #Heritage #KarnatakaHistory #HistoryOfKarnataka #PreserveHeritage #LoftyLand
1 week ago | [YT] | 34
View 1 reply
LOFTY LAND
ಕುಮಾರ ಸ್ವಾಮಿ ಲೇಹೌಟ್ ನಲ್ಲಿ ಇರುವ ಖಾನೆ ಮುನೇಶ್ವರ ದೇವಸ್ಥಾನವು ಬೆಂಗಳೂರಿನ ಪುರಾತನ ದೇವಾಲಯವಾಗಿದ್ದು ಆದರ ಹೆಸರೇ ಹೇಳುವಂತೆ ಆ ಜಾಗದಲ್ಲಿ ಕಾಡು ಇತ್ತು ಎಂಬುದನ್ನು ಹೇಳುತ್ತಾ ಗಡಿದೇವತೆಯಾಗಿ ಕಾಣಸಿಗುತ್ತದೆ. ಇಲ್ಲಿ ನವಶಿಲಾಯುಗದ ಕಲ್ಲಿನ ಕೊಡಲಿಗಳು ದೇವಸ್ಥಾನದಲ್ಲಿ ರಕ್ಷಿಸಲ್ಪಟ್ಟಿದ್ದು ಇಂದಿಗೂ ಪೂಜಿಸಲ್ಪಡುತ್ತಿವೆ. ಈ ಜಾಗದ ಇತಿಹಾಸವನ್ನು
ನವಶಿಲಾಯುಗಕ್ಕೆ ಕೊಂಡೊಯುತ್ತದೆ.
1 week ago | [YT] | 140
View 5 replies
LOFTY LAND
ಈ ಮರದ ರೆಂಬೆಯನ್ನು ಕಡಿದರೆ - ತಾಯಿಗೆ ತಪ್ಪಿದ ಪಾಪಕ್ಕೆ ಗುರಿಯಗುತ್ತಾರೆ ( ಶಾಪಶಯ ) - ಗಾರ್ಡನ್ ಸಿಟಿ ಎನ್ನುವ ಪದ ಮತ್ತು ಭಾವನೆಯ ಸಾಕ್ಷಿ. ಅಪರೂಪ ಶಾಸನ
( ಎಲ್ಲಾ ಕಡೆ ಶಾಸನದಲ್ಲಿ ಶಾಪಶಯವಿರತ್ತೆ ಆದ್ರೆ ಇಲ್ಲಿ
ಶಾಪಶಯವೇ ಶಾಸನ ! )
ಬೆಂಗಳೂರ ಆಲದ ಮರ.
1 week ago | [YT] | 72
View 3 replies
LOFTY LAND
6 ತಿಂಗಳ ಹಿಂದೆ ದೃಢವಾಗಿ ಹೇಳಿದ್ದರು ಅಮ್ಮ ,ತನ್ನ ಮನೆಯನ್ನು
ಇತಿಹಾಸದ ಅಧ್ಯಯನಕ್ಕಾಗಿ ಅದರಲ್ಲೂ ಕರ್ನಾಟಕ ಸಾಮ್ರಾಜ್ಯದ ಬೆಳಕಿಗಾಗಿ ಮೀಸಲಿಡುತ್ತೇನೆ ಎಂದು, ನಂತರ ಈಗ Germany ಇಂದ ಬಂದು ತಮ್ಮ ಕನಸನ್ನು ನನಸಾಗಿಸಿದ ದಿಟ್ಟ ಮಹಿಳೆ 90 ರ
ವಸುಂಧರಾ ಕವಲಿ ಫಿಲಿಯೋಜರವರು ನಮ್ಮ ನಾಡಿನ ಹೆಮ್ಮೆ. ನೆನ್ನೆ ಈ
KAVALI - FILLIOZAT Institute of Indology ವಿದ್ಯಾರ್ಥಿಗಳಿಗಾಗಿ ಸಿದ್ದವಾದ ಅಧ್ಯಾಯ ಕೇಂದ್ರದ ಉದ್ಘಾಟನೆ ಆಯ್ತು . ಅಲ್ಲಿ ದೇಶದ ಒಂದು ಅತ್ಯುನ್ನತ ಗ್ರಂಥಾಲಯ ಮಾಡಬೇಕು ಎಂಬುದು ಅವರ ಆಶಯ. ಕೊನೆಗೂ ಅವರ ಇಬ್ಬರು ಮಕ್ಕಳು ಅಳಿಯಂದಿರು ಮೊಮ್ಮೊಕ್ಕಳು ಎಲ್ಲರೂ ಸಮನ್ವಯದ ಮನಸ್ಥಿತಿಯಿಂದ ಕೂಡಿದ್ದರು,
ಅಮ್ಮನ ಕನಸಿಗೆ ಜೊತೆಯಲ್ಲಿದ್ದರು .
ಅಭಿನಂದನೆಗಳನ್ನು ತಿಳಿಸಲು ಮೈಸೂರು ರಾಜರು ಯಧುವಿರರು ಬಂದರು ನಮ್ಮ ಸಂಪೂರ್ಣ ಸಹಕಾರ ಇರತ್ತೆ ಎಂದರು.
ಸಂಜೆ ಉದ್ದೇಶಗಳನ್ನು ಕುರಿತು ಒಂದು ಪುಟ್ಟ ಕಾರ್ಯಕ್ರಮ ಅದಕ್ಕೆ
ಮುಖ್ಯ ಅತಿಥಿಗಳಾಗಿ ಬಂದಿದ್ದವರು ಹಿರಿಯ ಇತಿಹಾಸಕಾರರು ಮತ್ತು ಪುರಾತತ್ವ ತಜ್ಞರು ಆದ ಡಾ ಎಂ ಎಸ್ ಕೃಷ್ಣ ಮೂರ್ತಿ ಯವರು ಅವ್ರು ಇಡೀ ಕಾರ್ಯಕ್ರಮದ ಕುರಿತ ಹಂಚಿಕೊಂಡು ಹರಸಿದರು. ನಂತರ ಸಂಗೀತ ವಾದ್ಯಗಳೊಂದಿಗೆ ಹಿಂಪಾಯಿತು.
1 week ago | [YT] | 80
View 6 replies
LOFTY LAND
ನಮ್ಮ ಪುಣ್ಯಕೋಟಿಯನ್ನು ನೋಡಿ ಮೆಚ್ಚಿಕೊಂಡು
ಮಕ್ಕಳು ಪುಟಗಳಲ್ಲಿ ಬರೆದು ಹಂಚಿಕೊಂಡರು, ಪೋಷಕರು
ಭಾವನಾತ್ಮಕವಾಗಿ ಬೆರೆತುಹೋದರು. ಇದು ಪೋಷಕರ ಕಥೆ ಅಂದರು. ತುಂಬಾ ಮಕ್ಕಳು ಮತ್ತು ಪೋಷಕರ ಕಣ್ಣಲ್ಲಿ ನೀರು ತುಂಬಿತ್ತು. ಧನ್ಯವಾಹಿತು ನಮ್ಮ ಕೆಲಸವು ❤️🙏ಶರಣು
ನೋಡದಿದ್ದವರು ತಪ್ಪದೇ ನೋಡಿ.
1 week ago | [YT] | 37
View 4 replies
LOFTY LAND
ಬದುಕು ಸವೆಯುವುದಲ್ಲ, ಸವಿಯುವುದು. ❤️🙏
“ ಪುಣ್ಯಕೋಟಿ ಶತಕರುಣಿ “
2 weeks ago | [YT] | 143
View 7 replies
LOFTY LAND
United by Freedom, Bound by Pride. #happyindependenceday
2 weeks ago | [YT] | 22
View 2 replies
Load more